Friday, December 29, 2023

SUGAMA DECEMBER BHAJANE - 27

 Sunday, 24th December 2023

DECEMBER SUGAMA BHAJANE

ZOOM ONLINE:

HOST: PRATIMA RAVIRAJ TANTRY at Dubai


Sugama Bhajane of December 2023 was hosted by Pratima--Raviraj from Dubai.
The following participants were present at the Bhajane session.

ಕುಲ ಕುಲ ವೆಂದು ಹೊಡೆದಾಡದಿರಿ - ಜಯರಾಮ ಸೋಮಯಾಜಿ 

1. Sudhaker Rao Pejavar from Dubai,
2. Latha Sudhaker at Bengaluru
3. Pushpa Madhusudan at Bengaluru
4. Nalini Jayarama Somayaji at Bengaluru
5. Ramachandra, Purushothama Udupa at Mandarthi,
6. Ashok, Kalpana, Akshatha & Ananya at Sharjah
7. Anirudh, Supriya and Prashanth from Sharjah.
8. Host: Pratima, Raviraj Tantry from Dubai

ಹರಿ ಎನ್ನಿರೋ, ಗೋವಿಂದ ಎನ್ನಿರೋ.... ನಳಿನಿ ಸೋಮಯಾಜಿ 

After the rcitation of "VISHU SAHASRANAMA" by all Raviraj Pratima started the session with Shuklambharadaram Bhajan.
Others present continued with bhajane.

Ashok sang Aarthi sang , with Raviraj/Pratima performing Mangalarathi.

Then "Shankaraya " song by Jayarama,  Nalini & Somayaji.

Mangala songs were rendered by Anirudh at Sharjah and Ramachandra Udupa at Mandarthi.

Ashok congratulated to those having Birthdays and Wedding Anniversaries in the month of January 2024.

ಚಿಂತನೆ - ಸುಧಾಕರ್ ರಾವ್ ಪೇಜಾವರ್ 

Sudhaker Pejavar in his "Chintane", highlighted the new Year 2024 coming and the much awaited inauguration of  Ram Mandir at Ayodhya on 22nd January.

The session ended with wishing HAPPY NEW YEAR 2024 for each other.

SARVE JANAH SUKHINO BHAVANTU.

Posted 29/12/2023

Wednesday, December 27, 2023

ಸುಭಾಷಿತ ನುಡಿ ಮುತ್ತುಗಳು - 5

 ಸುಭಾಷಿತ ನುಡಿ ಮುತ್ತುಗಳು - 5 



1. ನಮ್ಮ ಸಂಸ್ಕಾರಗಳು ಒಳ್ಳೆಯದಾಗಿದ್ದರೆ ನಿಶ್ಚಿತವಾಗಿ ಸಫಲರಾಗುತ್ತೇವೆ. ಏಕೆಂದರೆ ಹಣವು ಕರೆದುಕೊಂಡು ಹೋಗದ ಶ್ರೇಷ್ಠ ಎತ್ತರದ ಜಾಗಕ್ಕೆ ಒಳ್ಳೆಯ ಸಂಸ್ಕಾರಗಳು ಮಾತ್ರ ಕರೆದುಕೊಂಡು ಹೋಗ ಬಲ್ಲವು. 

***********************************

2. ಆತ್ಮ ವಿಶ್ವಾಸ ಒಂದು ಮಹಾ ಆಯುಧ. ಅದು ಎಲ್ಲಾ ಸಂದರ್ಭದಲ್ಲಿ ಜಯ ತಂದು ಕೊಡದಿರಬಹುದು. ಆದರೆ ಯಾವುದೇ ಸವಾಲನ್ನು ಎದುರಿಸಲು ಧೈರ್ಯ ತುಂಬುತ್ತದೆ.

**********************************

3. ಈ ಸುಂದರವಾದ ಮುಂಜಾನೆಯಲ್ಲಿ ನಿಮ್ಮ ಸುಂದರವಾದ ಮುಖದಲ್ಲಿ ಇರಲಿ ಚಿಕ್ಕದೊಂದು ಮುಗುಳ್ನಗೆ ಇರಲಿ.

**********************************

4. ಈ ಜಗತ್ತು ದೇವರು ಸೃಷ್ಟಿಸಿದ ಆಟದ ಮೈದಾನ. ನಾವಿಲ್ಲಿ ಆಟಗಾರರಷ್ಟೇ. 

ನಿಯಮದಿಂದ ಆಟ ಆಡಿದರೆ ಗೆಲುವು ನಿಶ್ಚಿತ. ನಿಯಮ ಮೀರಿ ಆಟ ಆಡಿದರೆ ಸೋಲು ಖಚಿತ. 

********************************************

5. ಅಳುವಾಗ ಒಬ್ಬನೇ ಅಳಬೇಕು, ನಗುವಾಗ ಗುಂಪಿನಲ್ಲಿ ನಗಬೇಕು. 

ಗುಂಪಿನಲ್ಲಿ ಅತ್ತರೆ ನಾಟಕ ಅಂತಾರೆ. ಒಬ್ಬನೇ ನಕ್ಕರೆ ಹುಚ್ಚು ಎನ್ನುತ್ತಾರೆ.

****************************************

6. ವ್ಯಕ್ತಿಯನ್ನು ನೋಡಿ ಮಾಡುವ ಸ್ನೇಹ ಕ್ಕಿಂತ ವ್ಯಕ್ತಿತ್ವವನ್ನು ನೋಡಿ ಮಾಡುವ ಸ್ನೇಹ ಉತ್ತಮ. 

******************************************
7. ನಮ್ಮ ಸಂಸ್ಕಾರಗಳು ಒಳ್ಳೆಯದಾಗಿದ್ದರೆ ನಿಶ್ಚಿತವಾಗಿ ಸಫಲರಾಗುತ್ತೇವೆ. ಏಕೆಂದರೆ ಹಣವು ಕರೆದುಕೊಂಡು ಹೋಗದ ಶ್ರೇಷ್ಠ ಎತ್ತರದ ಜಾಗಕ್ಕೆ ಒಳ್ಳೆಯ ಸಂಸ್ಕಾರಗಳು ಮಾತ್ರ ಕರೆದುಕೊಂಡು ಹೋಗ ಬಲ್ಲವು. 
************************************
8. ನಮ್ಮನ್ನು ಇಷ್ಟ ಪಡುವವರು ನಮ್ಮ ಸಾವಿರ ತಪ್ಪು ಕಂಡರೂ ಕೈ ಹಿಡಿದು ತಿದ್ದಲು ಬಯಸುತ್ತಾರೆ... 
ಆದರೆ ನಮ್ಮನ್ನು ಇಷ್ಟಷಡದಿರುವವರು ನಮ್ಮ ಸಾವಿರ ಒಳ್ಳೆಯ ಗುಣ ಅಡಗಿ ದ್ದರೂ ಒಂದೇ ಒಂದು ತಪ್ಪು ಕಂಡು ಹಿಡಿದು ದೂರವಾಗುತ್ತಾರೆ... 
***********************************
9. ಸಮಯ ಒಳ್ಳೆಯದೇ ಆಗಲಿ, ಕೆಟ್ಟದೆ ಆಗಲಿ..., ಒಂದು ಪಾಠವನ್ನು ಕಲಿಸೇ ಕಲಿಸುತ್ತದೆ. ಒಳ್ಳೆಯ ಸಮಯದಲ್ಲಿ ಎಲ್ಲರೂ ನಮ್ಮವರಾಗಿದ್ದರೆ ಕೆಟ್ಟ ಸಮಯದಲ್ಲಿ ನಮ್ಮವರೇ ಬೇರೆಯವರಾಗಿ ಬದಲಾಗುತ್ತಾರೆ. 
ಸಮಯ.... ಮುಖವಾಡಗಳನ್ನು ಕಳಚೋದಂತೂ ಸತ್ಯ. 
***********************************
10. ಜೀವನದಲ್ಲಿ ಶಾಂತವಾಗಿರಲು ಎರಡು ಉಪಾಯಗಳು. ಮರೆಯಲಾಗದಂತಹ ವ್ಯಕ್ತಿಗಳನ್ನು ಕ್ಷಮಿಸಿ ಬಿಡಿ. ಕ್ಷಮಿಸಲಾಗದಂತಹ ವ್ಯಕ್ತಿಗಳನ್ನು ಮರೆತುಬಿಡಿ.
**********************************
11. ನಮ್ಮ ಸಂಸ್ಕಾರಗಳು ಒಳ್ಳೆಯದಾಗಿದ್ದರೆ ನಿಶ್ಚಿತವಾಗಿ ಸಫಲರಾಗುತ್ತೇವೆ. ಏಕೆಂದರೆ ಹಣವು ಕರೆದುಕೊಂಡು ಹೋಗದ ಶ್ರೇಷ್ಠ ಎತ್ತರದ ಜಾಗಕ್ಕೆ ಒಳ್ಳೆಯ ಸಂಸ್ಕಾರಗಳು ಮಾತ್ರ ಕರೆದುಕೊಂಡು ಹೋಗ ಬಲ್ಲವು. 
************************************
12. ದಾನ ಮಾಡಿದರೆ ಹಣ ಹೋಗುತ್ತದೆ, ಲಕ್ಷ್ಮಿ ಹೋಗುವುದಿಲ್ಲ. 
ಗಡಿಯಾರ ಕೆಟ್ಟರೆ ಗಡಿಯಾರ ನಿಲ್ಲುತ್ತದೆ. ಸಮಯ ನಿಲ್ಲುವುದಿಲ್ಲ. 
ತಪ್ಪನ್ನು ಮುಚ್ಚಿಟ್ಟು ಕೊಳ್ಳುವುದರಿಂದ ತಪ್ಪು ಮುಚ್ಚು ತ್ತದೆ. ಆದರೆ ನಿಜ ಮುಟ್ಟುವುದಿಲ್ಲ. 
************************************
13. ಮನುಷ್ಯ ಎರಡು ಜಾಗದಲ್ಲಿ ಬಾಯಿಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು... 
ಒಂದು ಊಟ ಮಾಡುವಾಗ,..... ಇನ್ನೊಂದು ಮಾತನಾಡುವಾಗ..... 
ಒಂದು ಆರೋಗ್ಯವನ್ನು ಕಾಪಾಡುತ್ತದೆ... ಇನ್ನೊಂದು ಸಂಬಂಧಗಳನ್ನು ಉಳಿಸುತ್ತದೆ... 
***************************************
14. ಕುಪಿತಗೊಂಡ ಮನಸ್ಸು ಯಾವಾಗಲೂ ಕಲ್ಮಶದ ಆಗರ
ಸಮಾಧಾನಗೊಂಡ ಮನಸ್ಸು ಸದಾ ಚೈತನ್ಯದ ಸಾಗರ.
*************************************
15. ನಗುತ ಬಾಳುವೆಯೊ ನಗಿಸುತ ಬಾಳುವೆಯೊ.ಈ ಎರಡು ಮುಖ್ಯವಲ್ಲ. ಯಾರನ್ನೂ ಅಳಿಸದೇ ಬಾಳುವುದೇ ಅತಿ ಮುಖ್ಯ. 
**************************************
16. ಕಲ್ಪನೆಗೆ ಹೂವಾದರೇನು.... ಮುಳ್ಳಾದರೇನು.. 
ಕಲ್ಪಿಸುವವರ ಹೃದಯ ಮೃದು ವಾಗಿದ್ದರೆ ಮುಳ್ಳು ಕೂಡಾ ಮೃದುವಾಗಿ ಹೂವಾಗುತ್ತೆ...! 
**************************************
17. ತುಂಬಾ ಮಾತನಾಡುತಿದ್ದೆ, ಜೀವನ ಮೌನವಾಗಿ ಇರೋದನ್ನ ಕಲಿಸಿದ! 
ಸದಾ ನಗುತ್ತಿದ್ದೆ, ಜೀವನ ಅಳುವುದನ್ನು ಕಲಿಸಿದ!! 
ಎಲ್ಲರ ಜೊತೆ ಬೆರೆತು ಖುಷಿಯಾಗಿದ್ದೆ, ಒಂಟಿಯಾಗಿರೋದನ್ನ ಕಲಿಸಿದ!!!
************************************
18. ನಾನೇನು ಮಾಡಬಲ್ಲೆ ಎಂದು ಎದೆಗುಂದದೆ, ನಾನು ಅದನ್ನು ಮಾಡಬಲ್ಲೆ ಎಂಬ ನಂಬಿಕೆ ಯಿಂದ ಪ್ರಯತ್ನಿಸಿದರೆ ನಾವು ಏನನ್ನೂ ಸಾಧಿಸಬಹು
************************************
19. ತುಂಬಾ ಮಾತನಾಡುತಿದ್ದೆ, ಜೀವನ ಮೌನವಾಗಿ ಇರೋದನ್ನ ಕಲಿಸಿದ! 
ಸದಾ ನಗುತ್ತಿದ್ದೆ, ಜೀವನ ಅಳುವುದನ್ನು ಕಲಿಸಿದ!! 
ಎಲ್ಲರ ಜೊತೆ ಬೆರೆತು ಖುಷಿಯಾಗಿದ್ದೆ, ಒಂಟಿಯಾಗಿರೋದನ್ನ ಕಲಿಸಿದ!!
**********************************
20. ಕಲ್ಪನೆಗೆ ಹೂವಾದರೇನು.... ಮುಳ್ಳಾದರೇನು.. 
ಕಲ್ಪಿಸುವವರ ಹೃದಯ ಮೃದು ವಾಗಿದ್ದರೆ ಮುಳ್ಳು ಕೂಡಾ ಮೃದುವಾಗಿ ಹೂವಾಗುತ್ತೆ...!
**********************************
21. ಇರುವುದೊಂದೇ ಜೀವನ.. ಸಿಗುವುದು ಕೆಲವೇ ದಿನ.. ತಿಳಿಯದೆ ಕಳೆದ ಬಾಲ್ಯ.. 
ಗೊತ್ತಿಲ್ಲದೆ ಜಾರುವ ಹರೆಯ.. ಕರೆಯದೆ ಬರುವ ಮುದಿತನ.. 
ಎಲ್ಲವುಗಳನ್ನು ಅನುಭವಿಸುತ್ತಾ, ಬಾಳುವುದೇ ಬದುಕು.. 
**********************************
22. ಒಬ್ಬರ ಸರಳ ಸ್ವಭಾವ ಅವರ ಬಲಹೀನತೆ ಅಲ್ಲ. ಪ್ರಪಂಚದಲ್ಲಿ ನೀರಿಗಿಂತ ಸರಳ ಯಾವುದು ಇಲ್ಲ. ಆದರೆ ಅದರ ರಭಸಕ್ಕೆ ಎಲ್ಲವನ್ನೂ ಸೋಲಿಸುವ ಸಾಮರ್ಥ್ಯವಿದೆ. 
**********************************
23. ಬದುಕಿನಲ್ಲಿ ಸ್ನೇಹ ಸಂಬಂಧ ಅಥವಾ ಒಡಹುಟ್ಟಿದವರ ಬಾಂಧವ್ಯ ಬಲವಾಗಿರಬೇಕೇ ಹೊರತು ಬಲವಂತವಾಗಿರಬಾರದು. 
**********************************
24. ಸಾಗರದಷ್ಟು ಸಂಕಷ್ಟಗಳ ನಡುವೆಯೂ ಸುಖವಾಗಿ ಬದುಕುವಂತೆ ಮಾಡುವುದು ನಂಬಿಕೆ ಮತ್ತು ನೆಮ್ಮದಿ.
***********************************
25. ಸೇವೆ ಎಂದಿಗೂ ಪ್ರದರ್ಶನ ವಾಗಬಾರದು.... ಅದೊಂದು ನಿದರ್ಶನವಾಗಬೇಕು. ಆದರ್ಶವಾಗಬೇಕು. 
**********************************
26. ಸಂತೋಷದಿಂದ ಇರುವವರ ಹತ್ತಿರ ಎಲ್ಲವೂ ಇರುತ್ತದೆ ಅಂತಲ್ಲ, ಇದ್ದುದರಲ್ಲಿ ತೃಪ್ತಿ ಕಾಣುವ ಗುಣವೇ ಅವರ ಸಂತೋಷಕ್ಕೆ ಕಾರಣ. 
********************************
27. ಸಂಬಂಧ... ಕಾರಣವಿಲ್ಲದೆ ಪರಿಚಯವಾಗಿ  ಕಾಳಜಿಯಿಂದ ಗಟ್ಟಿಯಾಗಿ ನಂಬಿಕೆಯಿಂದ ಮುಂದುವರೆದು ನಿಯತ್ತಿನಿಂದ ಜೊತೆಗಿದ್ದು ಯೋಗ್ಯತೆ ಯಿಂದ ಉಳಿಸಿಕೊಳ್ಳಬೇಕು.. 
********************************
28. ನಿತ್ಯದ ಬದುಕಿನಲ್ಲಿ ಸಣ್ಣ ಸಣ್ಣ ಸಂಗತಿಗಳು ಸಾಕಷ್ಟಿರುತ್ತವೆ. ಅವುಗಳನ್ನು ಗ್ರಹಿಸಿ ಖುಷಿ ಪಡುವುದನ್ನು ರೂಢಿಸಿಕೊಂಡವರಿಗೆ ಜಗತ್ತೇ ಸುಂದರವೆನ್ನಿಸುತ್ತದೆ. 
**********************************
29. ಸಮಾಜದಲ್ಲಿ ನಮ್ಮ ಸಂಬಂಧವನ್ನು ಉತ್ತಮಗೊಳಿಸಲು ಒಂದಕ್ಷರ ವ್ಯತ್ಯಾಸವಷ್ಟೇ ಇರುವುದು. 'ನಾನು' ಎನ್ನದೆ 'ನಾವು' ಎಂದರೆ ಸಾಕು. ಸಮಾಜ ಜಗತ್ತು ಎಲ್ಲವೂ ಸುಂದರವಾಗಿ ನಮ್ಮದಾಗು ತ್ತದೆ. 
**********************************
30. ನೀರು ಬೆಂಕಿಯಿಂದ ಬಿಸಿ ಯಾಗುತ್ತದೆ ನಿಜ.. ಆದರೂ ಕೂಡಾ ಬೆಂಕಿಯನ್ನು ಆರಿಸೊ ಗುಣವನ್ನು ಬಿಟ್ಟು ಕೊಡುವುದಿಲ್ಲ. ಹಾಗೆಯೇ ನಾವು ಕೂಡಾ ಎಂತವರ ಜೊತೆ ಸೇರಿದರು ಕೂಡಾ ನಮ್ಮತನವನ್ನು ಬಿಟ್ಟು ಕೊಡಬಾರದು. 
*************************************
31. ಸೇವೆ ಎಲ್ಲರಿಗೂ ಮಾಡು ಆದರೆ ಪ್ರತಿಫಲ ಯಾರಲ್ಲೂ ಬಯಸಬೇಡ ಏಕೆಂದರೆ ಸೇವೆಯ ಪ್ರತಿಫಲವನ್ನು ನೀಡುವುದು ಭಗವಂತನೇ ವಿನಃ ಮನುಷ್ಯನಲ್ಲ.. 
*************************************
32. ಹೊಗಳಿ ಅಟ್ಟಕ್ಕೇರಿಸುವ ಸಾವಿರ ಜನರಿಗಿಂತ, ಇದ್ದುದನ್ನು ಇದ್ದಂತೆ ಹೇಳುವ ಒಬ್ಬ ವ್ಯಕ್ತಿ ಮೇಲು.
************************************
33. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಗಿಡ ಮರವಾಗಿ ಬೆಳೆಯುವುದಿಲ್ಲ, ಹಳ್ಳ ಸಾಗರವಾಗುವುದಿಲ್ಲ. ಹಾಗಿದ್ದಾಗ ಎಲ್ಲಾ ಸಮಸ್ಯೆಗಳಿಗೆ ಕ್ಷಣ ಮಾತ್ರದಲ್ಲಿ ಪರಿಹಾರ ಸಿಗಬೇಕೆಂದು ಹೇಗೆ ಆಶಿಸಲು ಸಾಧ್ಯ? ಕಾಲ ಎಲ್ಲವನ್ನೂ ಸರಿ ಪಡಿಸುತ್ತದೆ. ತಾಳ್ಮೆಯೊಂದೇ ಮಾರ್ಗ.... 
***********************************
34. ಯಾವ ಸಂಬಂಧವಾದರೂ ಸರಿ ಅನಿವಾರ್ಯಕ್ಕೋ ಅಥವಾ ಒತ್ತಾಯಕ್ಕೋ Manufacturer ಪ್ರಯತ್ನಿಸಬಾರದು. ಅದು ಹೆಚ್ಚು ಸಮಯ ನಮ್ಮ ಜೊತೆ ಉಳಿಯಲಾರದು. 
**********************************
35. ನಮ್ಮನ್ನು ಯಾರೂ ಗೌರವಿಸುವುದಿಲ್ಲ ಅಂತ ಬೇಜಾರಾಗಬೇಡಿ. ಏಕೆಂದರೆ ಬಟ್ಟೆಯ ಅಂಗಡಿಯಲ್ಲಿ ಒಬ್ಬರಿಗೆ ಇಷ್ಟವಾಗಿದೆ ಬಿಟ್ಟು ಹೋದ ಬಟ್ಟೆಗಳು ಮತ್ತೊಬ್ಬರಿಗೆ ತುಂಬಾ ಇಷ್ಟವಾಗುತ್ತವೆ... 
ಜೀವನ ಕೂಡಾ ಅಷ್ಟೇ. 
**************************************
36. ಮನೆಯಿಂದ ಹೊರಗೆ ಹೋಗುವಾಗ 'ಬುದ್ದಿ' ಜೊತೆಯಲ್ಲಿರಬೇಕು, ಯಾಕಂದರೆ ಈ ಪ್ರಪಂಚವೇ ಒಂದು ಸಂತೆ...!!! ಆದರೆ ಮನೆಯ ಒಳಗೆ ಬರುವಾಗ 'ಹೃದಯ' ಜೊತೆಯಲ್ಲಿರಬೇಕು ಯಾಕೆಂದರೆ ಅಲ್ಲಿರುವದು ಒಂದು ಸುಂದರವಾದ 'ಕುಟುಂಬ'
**************************************
37. ನಾವು ಸಂಪಾದಿಸಿದ್ದು ಯಾವದೂ ನಮ್ಮದಲ್ಲ. ಆದರೆ ಒಳ್ಳೆಯ ಗುಣ ನಡತೆ ದಾನ ಧರ್ಮ ನಾವು ಮಾಡಿದ ಪುಣ್ಯ ಇಷ್ಟವಾದವರ ಹೃದಯದಲ್ಲಿ ಪ್ರೀತಿ ಇವುಗಳೇ ನಾವು ಸಂಪಾದಿಸೋ ಕೋಟಿ ಆಸ್ತಿ..!! 
***************************************
38. ನಮ್ಮ ಬಾಯಿಗೆ ಹೋಗುವ ಆಹಾರ ಎಷ್ಟು ಶುದ್ಧವಾಗಿರಬೇಕೋ ಹಾಗೆಯೇ ಬಾಯಿಂದ ಹೊರಬರುವ ಮಾತುಗಳೂ ಅಷ್ಟೇ ಶುದ್ಧವಾಗಿರಬೇಕು.
ಆಗ ಸಂಬಂಧಗಳು ಮತ್ತು ಸ್ನೇಹ ಎರಡೂ ಗಟ್ಟಿಯಾಗಿರುತ್ತದೆ ಹಾಗೂ ಬೆಳೆಯುತ್ತದೆ.
************************************
39. ಇಂದಿನ ಒಳ್ಳೆಯ ಹವ್ಯಾಸ ನಿಮ್ಮ ಮುಂದಿನ ಜೀವನವನ್ನು ಉತ್ತಮವಾಗಿರುತ್ತದೆ. ಉತ್ತಮ ಹವ್ಯಾಸಗಳನ್ನು ರೂಡಿಸಿ ಕೊಳ್ಳೋಣ
******************************************
40. ಪ್ರಾರ್ಥನೆ ಮತ್ತು ನಂಬಿಕೆ ಎರಡೂ ಕಣ್ಣಿಗೆ ಕಾಣದೆ ಇರಬಹುದು ಆದರೆ..
 ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಶಕ್ತಿ ಎರಡಕ್ಕೂ ಇದೆ. 
******************************************
41. ಕೇವಲ ಶಿಕ್ಷಣ ಪಡೆದ ಮಾತ್ರಕ್ಕೆ ಮನುಷ್ಯ ಸುಶಿಕ್ಷಿತನೆನಿಸಿಕೊಳ್ಳಲಾರ... 
ಸಂಸ್ಕಾರದೊಂದಿಗೆ ಮಾನವೀಯ ಮೌಲ್ಯಗಳ ಬೆಳೆಸಿಕೊಂಡರೇನೇ ಪಡೆದ ಶಿಕ್ಷಣ ಸಾರ್ಥಕವೆನಿಸುವುದು.
***************************************
42. ಸ್ವಾಭಿಮಾನ ಕಳೆದುಕೊಂಡು ಸಾವಿರ ಜನರ ಮಧ್ಯೆ ಇರುವುದಕ್ಕಿಂತ ಸ್ವಾಭಿಮಾನ ಉಳಿಸಿಕೊಂಡು ಒಬ್ಬರೇ ಇರುವುದು ಎಷ್ಟೋ ಮೇಲು
***************************************
43. ಪ್ರಾರ್ಥನೆ ಮತ್ತು ನಂಬಿಕೆ ಎರಡೂ ಕಣ್ಣಿಗೆ ಕಾಣದೆ ಇರಬಹುದು ಆದರೆ..
 ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಶಕ್ತಿ ಎರಡಕ್ಕೂ ಇದೆ. 
****************************************
44. ಧಾರಾಳವಾಗಿ ಕೊಟ್ಟರೂ ಎಳ್ಳಷ್ಟೂ ಕಡಿಮೆಯಾಗದ ಸಂಪತ್ತು ಅಂದರೆ ಒಳ್ಳೆಯ ಮಾತುಗಳು
************************************
45. ಖುಷಿಯ ಸಂದರ್ಭದಲ್ಲಿ ಕೈ ಕುಲಕುವುದರಿಂದ ಸಂಬಂಧಗಳು ಅರಳುವುದಿಲ್ಲ. ಕಷ್ಟ ಕಾಲದಲ್ಲಿ ಕೈ  ಹಿಡಿದಾಗ ಮಾತ್ರ ಅದು ಬೆಳಗುತ್ತದೆ. 
**************************************
46. ಜೀವನದಲ್ಲಿ.ಯಾವತ್ತೂ ಬೇರೆಯವರಿಗೆ ಬುದ್ದಿವಾದ ಹೇಳಬೇಡಿ.‌ ಏಕೆಂದರೆ ಎಷ್ಟೋ ಜನ ಅವರ ಜೀವನದಲ್ಲಿ ತಾವೇ ಬುದ್ದಿವಂತರೆಂದು ನಂಬಿರುತ್ತಾರೆ.‌ ಅಂತಹವರಿಗೆ ಬುದ್ದಿ ಹೇಳಿ ಪೆದ್ದರಾಗುವುದಕ್ಕಿಂತ ಸುಮ್ಮನಿದ್ದು ಬುದ್ದರಾಗುವುದೇ ಒಳ್ಳೆಯದು.
***************************************
47. ಬೆಳೆಸಿದವರೆದುರು ಬಾಗಿದರೆ ಬದುಕು. ಅರಿವಿನೆದುರು ಬಾಗಿದರೆ ಬೆಳಕು. ಪ್ರೀತಿ ವಿಧೇಯತೆಗಳಲ್ಲಿ ಬಾಗುವವರು ಎಲ್ಲರೆದೆಯ ಗೆಲ್ಲಬಲ್ಲರು. ದರ್ಪ ಅಹಂಕಾರಗಳಲ್ಲಿ ಬೀಗುವವರು ಕಾಲನೆದುರು ಉರಿದು ಬೂದಿಯಾಗುವರು. ಇದು ಜಗದ ಸತ್ಯ. ಯುಗ ಯುಗದ ಸತ್ಯ. 
**************************************
48. ಜೀವನದಲ್ಲಿ ಎಂದಿಗೂ ನಿರಾಶರಾಗಬೇಡಿ. ಸೂರ್ಯ ಅಸ್ತಂಗತವಾಗುತಿದ್ದಂತೆಯೇ, ಆಗಸದಲ್ಲಿ ನಕ್ಷತ್ರಗಳು ಮಿನುಗುತ್ತವೆ ಎಂಬುದು ನೆನಪಿರಲಿ. 
***************************************
49. ಕಷ್ಟವೋ ಸುಖವೇ ಎಲ್ಲವೂ ನಿನ್ನ ಪ್ರಕಾರವೇ. 
ನೀನು ಕೊಟ್ಟದ್ದನ್ನು ಅನುಭವಿಸುವುದಷ್ಟೇ ನನ್ನ ಕರ್ತವ್ಯ. 
ಮುಂದೆ ಆಗಬಹುದಾದುದೆಲ್ಲವೂ ನಿನ್ನ ಇಚ್ಛೆ. ಆ ಇಚ್ಛೆಗೆ ವಿರುದ್ಧವಾಗಿ ನಡೆಯುವ ಶಕ್ತಿ ನನಗಿಲ್ಲ. 
ಆದರೆ ಬಂದ ಕಷ್ಟಗಳನ್ನು ತಡೆದು ನಿಲ್ಲುವ ಶಕ್ತಿಯನ್ನು ಕೊಡು... ಭಗವಂತ. 
***************************************
50. ಹೂವು ಅರಳಿದಾಗ ನೋಡುವ ಜನರು ಬಹಳ. ಅದೆ ಹೂವು ಬಾಡಿದ ಮೇಲೆ ತುಳಿಯುವವರೂ ಬಹಳ ಜನ. ಅದೆ ರೀತಿ ಜೀವನ ನಗುವ ಮುಖಕ್ಕೆ ಇರುವ ಬೆಲೆ ಅಳುವ ಮುಖಕ್ಕೆ ಇರಲ್ಲ. ಇದನ್ನು ಅರಿತು ನಡೆದರೆ ಅದೆ ಸುಂದರ ಬದುಕು. 
***************************************


SURBAHAR SANGEET - SANGEETHA KATTI

 Sunday, 24th December 2023

Chitrakala Parishath, Kumarakrupa Road, Bengaluru.


It's a morning 7 am program at Chitrakala Parishath, organized by Singer Sangeetha Katti for celebrating Deepavali Prabhat and Surbahar Puraskar 2023




UDAYAVANI 23/12 2023

Program started at 7.30 am, when the students of Music School, rendered a song each.


At 9.30am, break was announced for breakfast, after which a VVIP (CM) was coming for puraskar function.



The security of the VVIP was ordering the cars to be removed from the parking area, and we left for home as I din't want to be anywhere near that useless VVIP. (Don't want to mention his name.

We had breakfast at Udupi Utsav and returned home.

Posted 27/12/2023

Tuesday, December 26, 2023

ODISSI DANCE - SHARMILA MUKHERJEE

 Tuesday, 26th December 2023

Shree Surabharathi Auditorium, HRBR Layout, Banasavadi, Bengaluru.





The evening was presentation of Odissi Dance by Sharmila Mukherjee and her students at the auditorium of Sri Surabharathi.




The striking performance was by Sharmila Muksherjee herself, composition of Kannada Song "VIDURANA BHAGYAVIDOO"..., Music composed by Praveen D



Ravi,Vidya and Urvi were there for the show.

After the program, there prasada with rice, sambaar, mosaranna, and a sweet.

Posted 27/12/2023

ಚಂದ್ರಾವಳಿ ವಿಲಾಸ - ಯಕ್ಷಗಾನ

 ಸೋಮವಾರ, 25 ಡಿಸೆಂಬರ್ 2023 

ಶ್ರೀ ಸುರಭಾರತಿ ಸಭಾಂಗಣ, ಎಚ್,ಅರ್.ಬಿ.ಅರ್. ಬಡಾವಣೆ, ಬೆಂಗಳೂರು.

ಯಕ್ಷಗಾನ - ಚಂದ್ರಾವಳಿ ವಿಲಾಸ 



ಸೊಕ್ಕಿನ ಚಂದ್ರಾವಳಿ, ಮೋಹಕ ಯಕ್ಷ ಕನ್ನಿಕೆ,  ಓರ್ವ ಅತ್ಯಂತ ಗರ್ವದ ಹೆಣ್ಣುಮಗಳು. ಅವಳು ಯಾರಿಗೂ ಹೆದರದ, ಬಗ್ಗದ ಮಹಿಳೆ.


ಅವಳ ಗರ್ವವನ್ನು ಮುರಿಯಲು ಲಾಲಿತ್ಯದ ಶ್ರೀ ಕೃಷ್ಣನು (ಶಿಥಿಲಾ ಶೆಟ್ಟಿ ಐರಬೈಲ್ರ್) ನಿರ್ಧರಿಸಿ  ಅವಳೊಡನೆ ಸರಸ ಸಲ್ಲಾಪ ಮಾಡುತ್ತಾ, ನಂತರ ಅವಳ ಅತ್ತೆ ಹಾಗೂ ಗಂಡ ಚಂದಗೋಪ  ಇರುವ ಸ್ಥಳಕ್ಕೆ ಮಾರುವೇಷದಲ್ಲಿ ತೆರಳುತ್ತಾನೆ.



ಇಲ್ಲಿ ಅಜ್ಜಿಯ ಪಾತ್ರದಲ್ಲಿ , ಹವ್ಯಾಸಿ ಯಕ್ಷರಂಗದ ಹಾಸ್ಯ ಕಲಾವಿದ, ಶ್ರೀ ಚಂದ್ರಶೇಖರ ಶೆಟ್ಟಿ ಕೊಡ್ಲಾಡಿ ಹಾಗೂ ಮಗ ಚಂದಗೊಪನ ಪಾತ್ರದಲ್ಲಿ  ಯಕ್ಷರಂಗದ ಚಾರ್ಲಿ ಚಾಪ್ಲಿನ್ ಶ್ರೀ ಸಿತಾರಮಕುಮಾರ್ ಕಟೀಲ್, ಅವರ ಸಂಭಾಷಣೆ, ಹಾಸ್ಯ ಎಲ್ಲರನ್ನು ನಗೆಗಡಲಲ್ಲಿ ತೆಲಿಸಿತ್ತು.


ಶ್ರೀಕೃಷ್ಣನು  ರಾಧೆಯೊಂದಿಗೆ ದರುಶನವನ್ನು ಮಾಡಿದಾಗ, ಚಂದಗೋಪ ಸಂತುಷ್ಟನಾಗಿ ತನ್ನ ನಮನವನ್ನು ಸಲ್ಲಿಸುವನು.




ವಿನೂತನ ಜಗದ್ಗುರು ಭಾರತೀತಿರ್ಥ ಸಭಾಭಾವನವು ಅತ್ಯಂತ ಸುಂದರವಾಗಿದೆ.
ಬರೆದಿರುವುದು 26/12/2023 




Sunday, December 24, 2023

ದೇಸಾಯಿ ವಾಡೆ ಮನೆ - ಕುಂದಗೋಳ

 ಬುಧವಾರ, 20 ಡಿಸೆಂಬರ್ 2023 

ದೇಸಾಯಿ ವಾಡೆ ಮನೆ - ಕುಂದಗೋಳ 

ಅಂದಿನ ಕಾಲದಲ್ಲಿ "ವಾಡೆ" ಅಂದರೆ ಊರಿನ ಮುಖ್ಯಸ್ಥರ , ಸಿರಿವಂತರ , ದೊಡ್ಡದಾದ ಮನೆ.


ನಾವು ಇಂದು ಕುಂದಗೊಳದಲ್ಲಿರುವ ದೇಸಾಯಿ ಅವರ ವಾಡೆಗೆ ಭೇಟಿ ಕೊಡುವ ಅವಕಾಶವಾಗಿತ್ತು.
ಸ್ನೇಹಿತರ ಕುಟುಂಬಸ್ತರು ವಾಡೆ ಯಲ್ಲಿದ್ದು, ಅದು ಸುಮಾರು 300 ವರ್ಷಗಳ ಹಳೆಯ ಮನೆಯಾಗಿದ್ದು, ಈಗ ಅವರ ಈಗಿನ ತಲೆಮಾರಿನ ಮಂದಿಯವರು ವಾಸವಾಗಿದ್ದಾರೆ.








ಸುಮಾರು ನಾಲ್ಕು ತಲೆಮಾರಿನ ಹಿಂದೆ ವೈಭವದಿಂದ ಇದ್ದ ದೇಸಾಯಿ ವಾಡೆಯಲ್ಲಿ 50 ಕ್ಕೂ ಹೆಚ್ಚು ಮಂದಿ ವಾಸವಾಗಿದ್ದರು.ಮೇಲಿನ ಹಳೆ ಫೋಟೋ ಒಂದರಲ್ಲಿ ಅವರ ಪೂರ್ವಜರನ್ನು ಕಾಣಬಹುದು.



ಈಗ ವಾಡೆಯ ಇರುವಿಕೆ, ಹಳೆಯ ಕಡತಗಳು, ವಕೀಲರ ಪುಸ್ತಕಗಳು, ದೂಳು ತುಂಬಿದ ಮನೆಯ ಸಾಮಾನುಗಳು, ನೋಡಿದರೆ ಗತಕಾಲದ ವೈಭವನನ್ನು ನೆನಪಿಸಿಕೊಳ್ಳಬೇಕು,

ಬರೆದಿರುವುದು 24/12/2023 

Saturday, December 23, 2023

ISKCON TEMPLE - DHARWAD/HUBLI

Tuesday, 19th December 2023

Hubli/Dharwad


We had a chance to visit ISKCON temple at Hubli/Dharwad.


This ISKCON temple has deity of Sri Krishna Balarama


International Society of Krishna Conciousness has Mandir all over the world and there are lots and lots of disciples.

HARE KRISHNA, HARE KRISHNA, HARE KRISHNA HARE RAMA.....

HARE RAMA, HARE RAMA, HARE RAMA, HARE KRISHNA.....


I have been Life member of ISKCON for last more than 40 years.

We were there at the Mandir with Raghavendra Upadhya, Veena and we.



That was a nice short visit to the ISKCON


Posted 23/12/2023



Friday, December 22, 2023

SHRI SHAMBHULINGESHWARA TEMPLE, KUNDGOL

 Wednesday, 20th December 2023

Kundgol, Dharwad Dist.

ನಾವು ಅಂದರೆ  ನಾಗರಾಜ, ಶಾಂತಲಾ, ರಾಘವೇಂದ್ರ ಉಪಾಧ್ಯ, ನಳಿನಿ ಮತ್ತು ನಾನು, ಆರು ಜನ, ಉಪಧ್ಯನ ಕಾರಿನಲ್ಲಿ ನಾನೇ ಡ್ರೈವ್ ಮಾಡುತ್ತಾ, ಹುಬ್ಬಳ್ಳಿ ಯಿಂದ 25 ಕಿ.ಮೀ. ದೂರದ ಕುಂದಗೋಳ ಕ್ಕೆ ಸುಮಾರು 11 ಗಂಟೆಗೆ ತಲುಪಿದೆವು.



ಶ್ರೀ ಶಂಭು ಲಿಂಗೇಶ್ವರ ದೇವಸ್ಥಾನದ ಪ್ರಾಕಾರದ ಒಳಗೇ ಕಾರು ನಿಲ್ಲಿಸಲು ಸಾಧ್ಯವಾಯಿತು.

ಕುಂದಗೋಳ ಪಾಶ್ಚಿಮಾತ್ಯ ಚಾಲುಕ್ಯ ಸಾಮ್ರಾಜ್ಯದ ಪ್ರಮುಖ ಪ್ರದೇಶದ ಒಳಭಾಗದಲ್ಲಿದೆ . 11 ನೇ ಶತಮಾನದ ಶ್ರೀ ಶಂಭುಲಿಂಗೇಶ್ವರ ದೇವಾಲಯದ ಅಸ್ತಿತ್ವವು ಈ ಸಮರ್ಥನೆಯನ್ನು ಬೆಂಬಲಿಸುತ್ತದೆ. 1948 ಕ್ಕೆ ಮುಂಚಿತವಾಗಿ, ಕುಂದಗೋಳ ಜಮಖಂಡಿ ರಾಜಮನೆತನದ ಒಂದು ಸಮೀಪದ ಭಾಗವಾಗಿತ್ತು.

ಈ ದೇವಾಲಯದ ಶಂಬುಲಿಂಗೇಶ್ವರ ಗುಡಿ 11 ನೇ ಶತಮಾನದ ದೇವಾಲಯವಾಗಿದ್ದು, ಕದಂಬರು ನಿರ್ಮಿಸಿದ ನಂತರ ಚಾಲುಕ್ಯರು ನವೀಕರಿಸಿದ್ದಾರೆ. ಇದು ಪಶ್ಚಿಮ ಚಾಲುಕ್ಯರು ನಿರ್ಮಿಸಿದ ದೊಡ್ಡ ಶಿವ ದೇವಾಲಯವಾಗಿದೆ. ಇದು ಹೆಚ್ಚು ನಯಗೊಳಿಸಿದ ಕಲ್ಲುಗಳಿಂದ ನಿರ್ಮಿಸಲ್ಪಟ್ಟಿರುತ್ತದೆ. ಸ್ತಂಭಗಳ ಮೇಲೆ ಕೆತ್ತನೆಗಳು ಮತ್ತು ಚಿತ್ರಗಳನ್ನು ಚೆನ್ನಾಗಿ ಕೆತ್ತಲಾಗಿದೆ. ಬ್ರಹ್ಮದೇವರ ಗುಡಿ, ದತ್ತಾತ್ರೇಯಗುಡಿ, ಶಂಕರಾಚಾರ್ಯರ ಗುಡಿ ಹಾಗೂ ಮಲ್ಲಕಾರ್ಜುನ ಗುಡಿಗಳು ಇಲ್ಲಿಯ ಇತರ ದೇವಾಲಯಗಳು. ಇಲ್ಲಿ ಹನ್ನೊಂದು ಶಿಲಾಶಾಸನಗಳಿವೆ.



ಈ ದೇವಸ್ಥಾನವು ಪೂರ್ವ, ದಕ್ಷಿಣ ಮತ್ತು ಉತ್ತರ ದಿಕ್ಕಿನಲ್ಲಿ 3 ದ್ವಾರಗಳನ್ನು ಹೊಂದಿದೆ. ದೇವಾಲಯದ ಬಾಗಿಲುಗಳ ಮೆಟ್ಟಿಲಿನ ಬದಿಯಲ್ಲಿ, ಸಿಂಹದ ಕೆತ್ತನೆಯನ್ನು ಕಾಣಬಹುದು. ಗರ್ಭಗುಡಿಯ ಒಳಭಾಗದಲ್ಲಿನ ಶಿವಲಿಂಗವು ದಟ್ಟವಾದ ಕಂದು ಬಣ್ಣದಲ್ಲಿದೆ . ಸಾಮಾನ್ಯವಾಗಿ ಶಿವಲಿಂಗಗಳು ಗಾಢ ಬೂದು ಬಣ್ಣದಲ್ಲಿ ಇಲ್ಲವೇ ಕಪ್ಪು ಬಣ್ಣದ್ದಾಗಿರುತ್ತದೆ. ಆದರೆ ಕಂದು ಬಣ್ಣದ ಶಿವಲಿಂಗವಿರುವುದು ಬಹಳ ಅಪರೂಪ. ಗರ್ಭಗುಡಿಯಲ್ಲಿ ಗಣಪತಿ ಮತ್ತು ಪಾರ್ವತಿಯ ಮೂರ್ತಿಗಳೂ ಇವೆ.



ಈ ದೇವಸ್ಥಾನವು ಶಿವ ಮತ್ತು ಶಿವ ಗೆ ಅರ್ಪಿತವಾಗಿದೆ. ಇದು ಬಂಕಾಪುರ ಕೋಟೆಯಲ್ಲಿರುವ 60 ಕಂಬಗಳ ದೇವಾಲಯದ ಮಾದರಿಯಲ್ಲಿದೆ.ಚಾಳುಕ್ಯಶೈಲಿಯಲ್ಲಿ ನಿರ್ಮಿತವಾದ ಈ ದೇವಾಲಯದ ಮೂಲ ಗುಡಿಯ ಸಭಾಮಂಟಪ ಮತ್ತು ಗರ್ಭಗುಡಿಗಳು ಮಾತ್ರ ಉಳಿದಿವೆ. ಸಭಾಮಂಟಪದ ವೃತ್ತದಲ್ಲಿ ಅಷ್ಟದಿಕ್ಪಾಲಕರನ್ನು ಕೆತ್ತಲಾಗಿದೆ. ಹೊರಬದಿಯಲ್ಲಿ ಕೀರ್ತಿ ಮುಖಗಳಿವೆ.



ಈ ದೇವಾಲಯವು ಕದಂಬ ಶೈಲಿಯ ನಿರ್ಮಾಣವಾಗಿದೆ. ಸ್ಥಳೀಯ ಜನಾಂಗದವರು ದೇವಾಲಯದ ನೆಲದ ಮೇಲೆ ತಮ್ಮ ಗುರುತುಗಳನ್ನು ಬಿಟ್ಟಿದ್ದಾರೆ. ಸುಮಾರು ನಾಲ್ಕು ಅಥವಾ ಐದು ಕಂಬಗಳು ಹಾನಿಗೊಳಗಾಗಿದೆ. ಹಲವು ವರ್ಷಗಳ ಹಿಂದೆ ಮಿಂಚು ಬಡಿದು ಈ ಸ್ತಂಭಗಳನ್ನು ಹಾನಿಗೊಳಗಾಗಿವೆ ಎಂದು ದೇವಾಲಯದ ಮೂಲಗಳು ತಿಳಿಸಿವೆ. ಹತ್ತಿರದಿಂದ ನೋಡಿದರೆ ಹಾನಿಗೊಳಗಾಗಿರುವುದನ್ನು ನೀವು ಗಮನಿಸಬಹುದು. ಅಂತಹ ದೇವಾಲಯಗಳನ್ನು ನೋಡುವ ಅವಕಾಶ ಸಿಕ್ಕರೆ ನಿಜಕ್ಕೂ ನೀವು ಅದೃಷ್ಟಶಾಲಿಯಾಗಿದ್ದೀರಿ. ಆ ದಿನಗಳ ನಿರ್ಮಾಣಕಾರರು ಅದ್ಭುತವಾಗಿ ಈ ದೇವಾಲಯವನ್ನು ವಿನ್ಯಾಸಗೊಳಿಸಿದ್ದಾರೆ.




ಕುಂದಗೋಳದ ಶಂಭು ಲಿಂಗೇಶ್ವರ ದೇವಾಲಯದ ಸುತ್ತಲೂ ಶಾಸಕರ ಹೈಯ್ಯರ್ ಪ್ರೈಮರಿ ಶಾಲೆಯಿದೆ.
ನಾವು 20-12-2023 ರಂದು ದೇವಾಲಯ ನೋಡಲು ಹೋದಾಗ ಮಕ್ಕಳಿಗೆ ಆಡಲು ಬಿಟ್ಟಿದ್ದರು. ದೇವಾಲಯದ ಒಳಗೂ ಹೊರಗೂ ಮಕ್ಕಳ ಕುಣಿದಾಡುತ್ತಿದ್ದರು. ಆಡಿಸುವವರಾಗಲಿ, ನೋಡಿಕೊಳ್ಳಲು ಆಗಲಿ ಯಾರೂ ಕಂಡುಬರಲಿಲ್ಲ. ತಾವಾಗಿ ಓಡಾಟ ಮಾಡುತ್ತಿದ್ದ ಮಕ್ಕಳನ್ನು ಒಟ್ಟು ಮಾಡಿ ಒಂದಿಷ್ಟು ಆಡಿಸಿದೆ.
ಮಕ್ಕಳೊಡನೆ ಮಕ್ಕಳಾಗಿ ಬೆರೆಯುವುದೇ ಒಂದು ಆನಂದ. - ನಳಿನಿ ಸೋಮಯಾಜಿ

ದೇವಸ್ಥಾನದ ಆವರಣದಲ್ಲಿ ಸರಕಾರದ ಹೈಯರ್ ಪ್ರೈಮರಿ ಶಾಲೆ ಇದ್ದು, ಮಧ್ಯಂತರದ ಸಮಯದಲ್ಲಿ ಮಕ್ಕಳಿಗೆ ಆಟದ ಸ್ಥಳವೂ ದೇವಸ್ಥಾನವಾಗಿದೆ.

ಬರೆದಿರುವುದು 23/12/2023 


Thursday, December 21, 2023

HOME VISIT - DR. SARVAMANGALA SHASTRY

 ಮಂಗಳವಾರ, 19 ಡಿಸೆಂಬರ್ 2023 

ಹುಬ್ಬಳ್ಳಿ 

ಡಾ. ಸರ್ವಮಂಗಳಾ ಶಾಸ್ತ್ರಿ :

ನಾವು ಹುಬ್ಬಳ್ಳಿಗೆ ಬರುತ್ತಿದ್ದೇವೆ ಸರ್ವಮಂಗಳಾ ನಿಮ್ಮನ್ನು ನೋಡಲು ಸಾಧ್ಯವೇ ಎನ್ನುವ ಪ್ರೀತಿಯ ಕೊರಳಿನಿಂದ ಕೇಳಿರುವ ನಳಿನಿ ಸೋಮಯಾಜಿ ದಂಪತಿಗಳ ಪ್ರೀತಿಯ ಆಗಮನ ಅವರ ಸ್ನೇಹದ ನಿರ್ವಾಜ್ಯ ಪ್ರೀತಿಯ ಬೆಳಕು ಎಂದು ಮರೆಯಲು ಸಾಧ್ಯವೇ ಇಲ್ಲ. ಅನೇಕ ವರ್ಷಗಳಿಂದ ನಾವು ಫೇಸ್ಬುಕ್ನಲ್ಲಿ ಆತ್ಮೀಯರು. ಅವರ ಅವರ ಕ್ರಿಯಾಶೀಲ ವ್ಯಕ್ತಿತ್ವ, ಆಪ್ತತೆ ನನ್ನ ಮನಸ್ಸಿನಲ್ಲಿ ಸದಾ ಅಚ್ಚುಒತ್ತಿತ್ತು.ಅವರು ಹೀಗೆ ಭೇಟಿಯಾಗುತ್ತಾರೆ ಎನ್ನುವುದು. ನಂಬಲು ಸಾಧ್ಯವಾಗಿಲ್ಲ.ಮೊದಲ ಸಲ ಭೇಟಿಯಾದ ಆ ಪ್ರೀತಿಯ ಸ್ನೇಹದ ಕ್ಷಣಗಳು ಇನ್ನಷ್ಟು ಬೇಕೆನಿಸುತ್ತಿತ್ತು. ತುಂಬಾ ಸಂತೋಷವಾಯಿತು. ಇವರೊಂದು ಬೇರೆಯವರು ಎಂದು ನನಗೆ ಅನಿಸಲೇ ಇಲ್ಲ ಎಲ್ಲಿಯೂ ನನ್ನ ರಕ್ತ ಸಂಬಂಧಿಗಳು ಇಂದು ನನ್ನ ಜೊತೆಗಿದ್ದಾರೆ ಅನ್ನುವಂತಹ ಭಾವ ಮೂಡಿಸಿತ್ತು. ಅನಿವಾರ್ಯವಾಗಿ ಬೀಳ್ಕೊಟ್ಟೆ. ಈ ರೀತಿಯ ಭಾಂದವ್ಯ ಯಾವ ಆಸ್ತಿ ಅಂತಸ್ತಿಗಿಂತಲೂ ಹೆಚ್ಚು ಅನಿಸಿದ ಹೊತ್ತು ಇದು. ಇನ್ನೆಷ್ಟು ಮಾತುಗಳು ಹೃದಯದಾಳದಲ್ಲಿ ಹಾಗೆಯೇ ಉಳಿದಿದೆ. ಮತ್ತೊಮ್ಮೆ ಸಂಧಿಸೋಣ.ನಿಮ್ಮ ಪ್ರೀತಿಯ ಆಗಮನಕ್ಕೆ ನಿಮ್ಮೊಡನೆ ಕಲೆತ ಆ ಕ್ಷಣ ಹೊತ್ತಿಗಾಗಿ ನನ್ನ ಧನ್ಯತೆಯ ಕುಸುಮಗಳು. ನಿಮ್ಮ ಸ್ನೇಹ ನಿಷ್ಕಲ್ಮಶ ಪ್ರೀತಿ ನಿರಂತರವಾಗಿರಲಿ..ನಳಿನಿ ಯವರೇ...


ನಳಿನಿ ಸೋಮಯಾಜಿ :
ಸರ್ವ ಮಂಗಳ ನಿಮ್ಮ ಪ್ರೀತಿ ತುಂಬಿದ ಆತಿಥ್ಯದ ಬಗ್ಗೆ ಎಷ್ಟು ಹೇಳಿದರೂ ಸಾಲದು.
ನಿಮ್ಮಿಂದ ತಿಳಿಯುವುದು, ಕಲಿಯುವುದು ಸಾಕಷ್ಟಿದೆ.
ಸ್ನೇಹ ಪ್ರೀತಿ ನನ್ನುಸಿರು ಎಂಬುದಕ್ಕೆ ಸಾಕ್ಷಿ ನೀವು. ಖಂಡಿತಾ ಸಿಗುತ್ತಿರುವ ಆಗಾಗ. ಮನಪೂರ್ಣ ಪ್ರೀತಿಯ ಧನ್ಯವಾದಗಳು

ಅಂದು ಸಂಜೆ, ನಾವು ರಾಘವೇಂದ್ರ ಉಪಾಧ್ಯಾಯ, ವೀಣಾ, ಮತ್ತು ನಾವು , ಸರ್ವಮಂಗಳಾ ಅವರ ಮನೆಗೆ ಭೇಟಿಗೆ ಹೋದೆವು.
ಅತ್ಯಂತ ಆತ್ಮೀಯವಾಗಿ ನಮ್ಮನು ಸ್ವಾಗತಿಸಿ, ರುಚಿ ರುಚಿಯಾದ ಗೋಲಿ ಬಜೆ ಮತ್ತು ಕಾಫಿ ನ್ನು ಧಿಡೀರ್ ಎಂದು ತಯಾರಿಸಿ, ತಮ್ಮ ಆದರಾತಿತ್ಯವನ್ನು ತೋರಿದರು.

ಡಾ ಸರ್ವಮಂಗಳಾ ಅವರು ಕನ್ನಡ ಉಪನ್ಯಾಸಕಿಯಾಗಿ
ಕೆಲಸ ಮಾಡುತ್ತಿರುವರು
"ಪಾ.ವೆಂ. ಆಚಾರ್ಯರ" ಬದುಕು, ಬರಹ - ಒಂದು ಅಧ್ಯಯನಕ್ಕಾಗಿ ಪಿಎಚ್,ಡಿ. ಪದವಿಯನ್ನು ಪಡೆದಿರುತ್ತಾರೆ.

ಅವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಾಹಿತ್ಯ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದ್ದಾರೆ.

ನೂರಾರು ಲೇಖನಗಲ್ಲು ಪ್ರಕಟಿಸಿ ಸಾಮಾಜಿಕ ಸಾಹಿತ್ಯ ಚಟುವಟಿಕೆ ಗಳಲ್ಲಿ ಸಕ್ರಿಯರಾಗಿದ್ದಾರೆ.
ಅದೊಂದು ಅವಿಸ್ಮರೀಯ ಮನೆ ಭೇಟಿಯಾಗಿತ್ತು.
ಬರೆದಿರುವುದು 22/12/2023