Friday, March 8, 2024

ವಿಂಶತಿ ಉತ್ಸವ - ಯು ಎ ಇ ಬ್ರಾಹ್ಮಣ ಸಮಾಜ

 ಶುಕ್ರವಾರ, ಮಾರ್ಚ್ 8, 2024 

ಶ್ರೀ ರಾಮ ಜನ್ಮ ಭೂಮಿ, ಅಯೋಧ್ಯೆ, ಉತ್ತರ ಪ್ರದೇಶ, ಭಾರತ.

ಅದೊಂದು ದುಬೈ ಬ್ರಾಹ್ಮಣ ಸಮಾಜದ ಅಭೂತಪೂರ್ವ ಕಾರ್ಯಕ್ರಮ. 



ಕಳೆದ ಒಂದು ವರ್ಷದಿಂದ 
ದುಬೈ ಬ್ರಾಹ್ಮಣ ಸಮಾಜದ 20 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಿ, ಎಪ್ರಿಲ್ 13 ರಂದು ದುಬೈ ಯಲ್ಲಿ ನಡೆಯಲಿರುವ  "ವಿಂಶತಿ ಉತ್ಸವದ" ಸಮಾರೋಪ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆಯೊಂದಿಗೆ,  ಸಮಾಜದ ರೂವಾರಿ, ಮುಖ್ಯಸ್ಥರು,  ಶ್ರೀಯುತ ಸುಧಾಕರ್ ರಾವ್ ಪೇಜಾವರ್ ಮತ್ತು ಮಡದಿ ಲತಾ ಅವರು,  ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆ ಗೆ ದುಬೈ ಯಿಂದ ಪಯಣಿಸಿ, ಪೇಜಾವರ ಶ್ರೀ ಗಳಿಂದ ಆಶೀರ್ವಚನ ಪಡೆದಿರುವುದು ಬಹಳ ವಿಶೇಷ.


ಸಮಾಜದ ಭಾಂದವರು ಶ್ರೀ ಸುಧಾಕರ್ ಪೇಜಾವರ್ ಅವರಿಗೆ ಕೋಟಿ ಕೋಟಿ ಪ್ರಣಾಮಗಳನ್ನು ಸಲ್ಲಿಸುತ್ತಾರೆ.


ಅಯೋಧ್ಯೆಯಲ್ಲಿ ಬಲರಾಮನ ಪ್ರಾಣ ಪ್ರತಿಸ್ತಾಪನೆ ದೇಶದ ಪ್ರಧಾನಿ ಶ್ರೀ ನರೇಂದ್ರ ಮೊದಿಯವರಿಂದ ಈ ವರ್ಷ ಜನವರಿ 22, 2024 ರಂದೇ ನಡೆದಿತ್ತು.


ಅಂದಿನಿಂದ ಲಕ್ಷಾಂತರ ಜನರು ಬಾಲಕರಾಮನ ದರ್ಶನಕ್ಕೆ ಜಗತ್ತಿನ ಎಲ್ಲಾ ಕಡೆಯಿಂದ  ಭಕ್ತರು ಆಗಮಿಸುತ್ತಿರುವರು.


ಆದರೂ ಸಹಾ ಪೇಜಾವರ ಶ್ರೀಗಳ ಸಮಯ ಕೇಳಿಕೊಂಡು, ಅವರ ಭೇಟಿಯಾಗಿ ಆಶೀರ್ವಚನ ಪಡೆದಿರುವುದು ದುಬೈ ಬ್ರಾಹ್ಮಣ ಸಮಾಜದ ಸೌಭಾಗ್ಯ.


ಶ್ರೀ ಸುಧಾಕರ್ ರಾವ್ ಪೇಜಾವರ್ ಅವರಿಂದಲೇ ಇದು ಸಾಧ್ಯ. ಅವರಿಗೆ  ಅನಂತಾನಂತ ಅಭಿನಂದನೆಗಳು.

ಎಪ್ರಿಲ್ 13 ನೇ ತಾರೀಕಿಗೆ ದುಬೈ ಯಲ್ಲಿ ನಡೆಯುವ "ವಿಂಶತಿ" ವೈಭವದ  ಸಮಾರೋಪ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸುತ್ತಾ,

ಸರ್ವೇ ಜನಃ ಸುಖಿನೋ ಭವಂತು.

ಬರೆದಿರುವುದು 9/3/2024 




No comments:

Post a Comment