ಭಾನುವಾರ, ಫೆಬ್ರುವರಿ 16 , 2025
ವಿನಾಯಕ ದೇವಸ್ಥಾನ ಸಭಾಂಗಣ, ಅರ,ಟಿ. ನಗರ, ಬೆಂಗಳೂರು.
ಪ್ರತಿ ವರ್ಷ ನಡೆಯುವಂತೆ, ಪಾ. ವೆಂ. ಟ್ರಸ್ಟ್ ನ ಸಹಯೋಗದಲ್ಲಿ ನಡೆಯುವ ಶಿವರಾಮ ಕಾರಂತ ವೇದಿಕೆಯ ಕಾರ್ಯಕ್ರಮವು ಶ್ರೀಯುತ ಪುರುಶೋತಮ ಬಿಳಿಮಲೆ ಹಾಗೂ ಬಿ.ಕೆ. ಸುಮತಿ ಅವರು ಅತಿಥಿಗಲಾಗಿದ್ದು , ಸಂಪನ್ನಗೊಂಡಿತು.
ಕಾರಂತ ವೇದಿಕೆಯ ಅಧ್ಯಕ್ಷೆ ಡಾ ದೀಪ ಫಡ್ಕೆ ಯವರು ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನೂ, ನೆರೆದ ಸಭಿಕರನ್ನೂ ಸ್ವಾಗತಿಸಿದರು.
![]() |
ಪುರುಷೋತ್ತಮ ಬಿಳಿಮಲೆ |
ಶ್ರೀ ಪೂರುಶೊತ್ತಮ ಬಿಳಿಮಲೆ, ಹಿರಿಯ ಸಾಹಿತಿ, ಅಧ್ಯಕ್ಷರು ಕನ್ನಡ ಅಭಿವ್ರದ್ಧಿ ಪ್ರಾಧಿಕಾರ, ತಮ್ಮ ಭಾಷಣದಲ್ಲಿ ಪಾ.ವೆಂ . ಅವರು ಶ್ರೇಷ್ಠ ಸಾಹಿತಿಯಾಗಿದ್ದು "ಪದಾರ್ಥ ಚಿಂತಾಮಣಿ" ಎಂಬ ಕೃತಿಯನ್ನು ರಚಿಸಿದ್ದು ಸಾಹಿತ್ಯ ಲೋಕಕ್ಕೆ ಅತ್ಯನ್ನುತ ಕೊಡುಗೆಯಾಗಿದೆ ಎಂದರು.
ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದ್ದು, ಶ್ರೀಮತಿ ಛಾಯ ಉಪಾಧ್ಯ ಧನ್ಯವಾದ ಸಮರ್ಪನೆ ಮಾಡಿದರು.
ಶಿವರಾಮ ಕಾರಂತ ವೇದಿಕೆಯ ಫೆಬ್ರವರಿ ತಿಂಗಳ ಕಾರ್ಯಕ್ರಮವು ಅರ್ಥವತ್ತಾಗಿ ಮೂಡಿಬಂತು.
ಕಾರ್ಯದರ್ಶಿಶ್ರೀಮತಿ ಮಂಜುಳಾ ಭಾರ್ಗವಿ ಅವರ ವರದಿ:
ನಮಸ್ತೆ ಎಲ್ಲರಿಗೂ.. ಫೆಬ್ರವರಿ ತಿಂಗಳಿನ ಪಾ. ವೆಂ. ಸ್ಮೃತಿ ಕಾರ್ಯಕ್ರಮ ತುಂಬಾ ಸೊಗಸಾಗಿ ಮೂಡಿ ಬಂತು..ಎಂದಿನಂತೆ ಪಾ. ವೆಂ ರವರ ಹಾಡನ್ನೇ ಪ್ರಾರ್ಥನೆಯಾಗಿ ಹಾಡಲಾಯಿತು. ನಂತರ ಕಾರಂತ ವೇದಿಕೆಯ ಅಧ್ಯಕ್ಷರಾದ ದೀಪಾ ಫಡ್ಕೆಯವರ ಪುಟ್ಟ ಸ್ವಾಗತ ಭಾಷಣ,ಪ್ರಾಸ್ತಾವಿಕ ನುಡಿ ಬೆರಗೊಂದರ ಅನಾವರಣದಂತೆ ಕಂಡಿತು.
ನಂತರ ಆಕಾಶವಾಣಿಯ ಹಿರಿಯ ಉದ್ಘೋಷಕಿ ಬಿ. ಕೆ ಸುಮತಿಯವರು ಪಾ. ವೆಂ. ರವರ ಮಾತಿನ ಶೈಲಿಯ ಕುರಿತು ಅತ್ಯಂತ ಸೊಗಸಾಗಿ ಮಾತನಾಡಿದರು.ನಂತರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಶ್ರೀ ಪುರುಷೋತ್ತಮ ಬಿಳಿಮಲೆ ಅವರ ಮಾತುಗಳಲ್ಲಿ ನಾವೆಲ್ಲ ಒಂದು ಬಗೆಯ ಆಯಸ್ಕಾಂತೀಯ ಆಕರ್ಷಣೆಗೆ ಒಳಗಾಗಿದ್ದೆವು.. ಅವರ ಭಾಷೆಯ ಸೊಗಡು ಸೊಗಸು ಎಲ್ಲವೂ ಕೇಳುಗರನ್ನು ಮೂಕ ವಿಸ್ಮೃತರನ್ನಾಗಿ ಮಾಡಿತ್ತು.ಇನ್ನೂ ಒಂದು ತಾಸು ಮಾತುಗಳನ್ನು ಮುಂದುವರಿಸಿದ್ದರೂ ಕೂಡ ಚೆನ್ನಾಗಿ ಇರುತ್ತಿತ್ತು ಎಂದೂ, ಎಲ್ಲರಿಗೂ ಅನಿಸಿದ್ದು ಸುಳ್ಳಲ್ಲ. ಒಟ್ಟಾರೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಸಾಗಿತು. ಕಾರ್ಯಕ್ರಮದ ಪೂರ್ಣ ಧ್ವನಿಸುರುಳಿ ತಮ್ಮ ಮುಂದಿಡಲಾಗಿದೆ, ದಯವಿಟ್ಟು ಎಲ್ಲರೂ ಕೇಳಿಸಿ ಕೊಳ್ಳಬೇಕಾಗಿ ವಿನಂತಿ.
ಬರೆದಿರುವುದು 20/2/2025
No comments:
Post a Comment