Monday, April 8, 2024

ಮೋದಿ ಮತ್ತೊಮ್ಮೆ -2

 2014ರಲ್ಲಿ.....


" ಬೀಜೇಪಿ
ಅಧಿಕಾರಕ್ಕೆ ಬಂದಮೇಲೆ ಮುಸ್ಲಿಮರ ಬದುಕು ದುಸ್ತರವಾಗಿದೆ.. ಅಲ್ಪಸಂಖ್ಯಾತರು ಭಯದಿಂದ ಜೀವಿಸುತ್ತಿದ್ದಾರೆ.... !ಭಾರತದಲ್ಲಿ ಅಸಹಿಷ್ಣುತೆ ಜಾಸ್ತಿಯಾಗಿದೆ....."...
ಹೀಗೆ ಗುಲ್ಲೆಬ್ಬಿಸಿ ಒಂದಷ್ಟು ಬುದ್ಧಿ ಜೀವಿಗಳು ...ತಮಗೆ ಸಿಕ್ಕ ಪ್ರಶಸ್ತಿಗಳನ್ನು ವಾಪಸ್ಸು ಮಾಡುವ ಅಭಿಯಾನ
ಶುರು ಮಾಡಿದರು...!ಸಾಹಿತ್ಯದ ಪ್ರಾಮಾಣಿಕ ಓದುಗರಿಗೆ..
" ಇದು ಹೌದಾ !!..."....ಎಂದು ಹುಬ್ಬೇರಿಸುವಷ್ಟು ಆಶ್ಚರ್ಯವಾಯಿತು....!
ಒಬ್ಬ ಸ್ಟಾರ್ ನಟನಂತೂ..."ತನ್ನ ಮಡದಿ ಭಾರತದಲ್ಲಿ ಬದುಕುವದಕ್ಕೆ ಹೆದರಿಕೆ "..ಅಂತ ಹೇಳಿದಳು..
ಅಂತ ಬೊಬ್ಬೆ ಹೊಡೆದ..ಬುದ್ಧೀ ಜೀವಿಗಳ ಸುದ್ಧಿ ಚಾನೆಲ್ಲುಗಳು ತಿಂಗಳು ಗಟ್ಟಲೆ ಅವನ ಸಂದರ್ಶನ ಪ್ರಸಾರ ಮಾಡಿದವು...
******************************************************
ಗೌರಿ ಲಂಕೇಶ ಹತ್ಯೆಯ ನೆನಪನ್ನು ಈಗ ಯಾವುದಾದರೂ ಬುದ್ದಿಜೀವಿ ಸಾಹಿತಿಗಳು ನೆನಪು ಮಾಡಿಕೊಳ್ಳುತ್ತಾರಾ ?..ಖಂಡಿತ ಇಲ್ಲ..ಯಾಕೆ ಗೊತ್ತಾ ?..ತಾವು ತಿನ್ನುವ ಎಂಜಲು ಪ್ರಸಾದದ ಋಣ ತೀರಿಸಬೇಕಲ್ಲ..
ಈಗಿರುವದು ಜಾತ್ಯಾತೀತರ ಸರಕಾರ...ಇವರಿಗೆ ಬೈಯ್ಯುವ ಹಾಗಿಲ್ಲ.....ಒಂದು ವೇಳೆಇದೇ ಸಂದರ್ಭದಲ್ಲಿ
ಯಡ್ಯೂರಪ್ಪನ, ಬೊಮ್ಮಾಯಿ ಸರ್ಕಾರ ಇದ್ದಿದ್ದರೆ ಟೌನ್ ಹಾಲಿನಲ್ಲಿ ಮೊಂಬತ್ತಿಗಳ ದೀಪಾವಳಿ ಆಗುತ್ತಿತ್ತು...
ಜೇ ಎನ್ ಯೂ ಪ್ರಾಡಕ್ಟುಗಳ ಅಸಹ್ಯ ಮುಖ ಇದು....
****************************************************
ಈಗ ಜಾತ್ಯಾತೀತ ಸರಕಾರವಿದೆ...ಗೌರಿ ಲಂಕೇಶರ ಹತ್ಯೆಯ ಪ್ರಕರಣ ಏನಾಯಿತು ?..ತನಿಖೆ ಏನಾಯಿತು ?...
ಉತ್ತರ ಕೇಳಬೇಡಿ...ಯಾಕೆಂದರೆ ....ಈಗ ಅದು ಓಟು ತರುವದಿಲ್ಲ.....!ಅದರಿಂದ ಮುಗ್ಧ ಜನರ ಮನಸ್ಸನ್ನು ಕೆಡಿಸಲು ಆಗುವದಿಲ್ಲ...ಅವರಲ್ಲಿ ಗೊಂದಲ ಸೃಷ್ಟಿಸಿ....ಜಾತ್ಯಾತಿತರಿಗೆ ಓಟ್ ಹಾಕಿ ಎಂದು ಹೇಳಲಾಗುವದಿಲ್ಲ...!
ತುಕುಡೇ ಗ್ಯಾಂಗಿನವರ ದೇಶ ದ್ರೋಹಿಗಳ ಮುಖ ಅಸಹ್ಯ....
*************************************************
ಇದೆಲ್ಲ ಇರಲಿ...ದುಬೈ ಸರಕಾರ ಪ್ರಧಾನಿ ಮೋದಿಯವರಿಗೆ ತನ್ನ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಘೋಷಣೆ ಮಾಡಿತು...ನೆನಪಿಡಿ..ದುಬೈ ಮುಸ್ಲಿಮ್ ರಾಷ್ಟ್ರ..ನಮ್ಮಮೋದಿ ಅಲ್ಪ ಸಂಖ್ಯಾತರ ಹಾಗುಮುಸ್ಲಿಮ್ಮರ ವಿರೋಧಿ. ....ಇದರ ಬಗೆಗೆ ಪತ್ರಿಕೆಗಳಲ್ಲಿ ಮೈಗೆ ಎಣ್ಣೆ ಹಚ್ಚಿಕೊಂಡು ಬರೆಯುವ ಜೆ ಎನ್ ಯೂ ಪ್ರಾಡಕ್ಟುಗಳು ತಮ್ಮ
ಅಭಿಪ್ರಾಯ ಬರೆಯುವದಿಲ್ಲ...ಯಾಕೆಂದರೆ ಬಹುಶಃ ಅವರಿಗೆ ಇದರ ಬಗೆಗೆ ಹಣ ಸಂದಾಯ ಆಗುವದಿಲ್ಲವೇನೋ....ತುಕುಡೆ ಗ್ಯಾಂಗ್ ಅಸಹ್ಯ ಕಣ್ರೀ....
********************************************
ಸೌದಿ ಅರೇಬಿಯಾ ಗೊತ್ತಲ್ಲ..ಮುಸ್ಲಿಮರ ಪವಿತ್ರ ಸ್ಥಳವಿರುವ ದೇಶ...ದೇಶ ಕೂಡ ಮೋದಿಯವರನ್ನು ಕರೆದು
ತಮ್ಮದೇಶದ ಅತ್ಯುನ್ನತ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿತು..ತನ್ನನ್ನುತಾನು ಧನ್ಯ ಎಂದು ಭಾವಿಸಿತು...
ಆದರೆ ನಮ್ಮಲ್ಲಿ ಇನ್ನೂಕೆಲವರಿಗೆ...ಮೋದಿ ಅಲ್ಪಸಂಖ್ಯಾತ ವಿರೋಧಿ...ಮುಸ್ಲಿಮ್ ವಿರೋಧಿ...
ವಿಚಿತ್ರ ಅಲ್ಲವಾ ?...
********************************************
ಮುಸ್ಲಿಮ್ ದೇಶಗಳ ಒಂದು ಒಕ್ಕೂಟವಿದೆ...ಅಲ್ಲಿ ಮುಸ್ಲಿಮ್ ದೇಶಗಳಿ ಮಾತ್ರ ಅವಕಾಶವಿರುತ್ತದೆ..ಹಿಂದೆ
ಸುಷ್ಮಾ ಸ್ವರಾಜ್ ಇದ್ದಾಗ....ವರ್ಷ ಆ ಒಕ್ಕೂಟ ಭಾರತವನ್ನು ಆಹ್ವಾನಿಸಿತ್ತು..."ಭಾರತವನ್ನು
ಆಹ್ವಾನಿಸಿದರೆ..ತಾನು ಭಾಗವಹಿಸುವದಿಲ್ಲ...":ಅಂತ ಭಿಕಾರಿ ಪಾಕಿಸ್ತಾನ ನಮ್ಮನ್ನು ವಿರೋಧಿಸಿತು...
ಮುಸ್ಲಿಮ್ ದೇಶಗಳು ಪಾಕಿಸ್ತಾನದ ಅರಚಾಟವನ್ನು ಯಾರೂ ಕೇಳಲೇ ಇಲ್ಲ...ಭಾರತದ ಉಕ್ಕಿನ ಮಹಿಳೆ
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಲ್ಲಿಗೆ ಹೋಗಿದ್ದರು...ಅಲ್ಲಿ ಸೊಗಸಾದ ಭಾಷಣ ಮಾಡಿದರು...
ವೇದ ಉಪನಿಷತ್ತು..ಭಗವದ್ಗೀತೆಗಳ ಒಳ್ಳೋಳ್ಳೆ ಮಾತುಗಳನ್ನು ಉದಹರಿಸಿ ...."ನಾವು ಧರ್ಮ ಸಹಿಷ್ಣು ದೇಶ..
ಇಲ್ಲಿ ನಾವು ಸಾವಿರಾರು ಮತದವರು ..ಶಾಂತಿಯಿಂದ ಬದುಕುತ್ತೇವೆ..ನಮ್ಮ ವಿರೋಧ ಮಾನವತಾ ವಿರೋಧಿ..
ಉಗ್ರವಾದದ ವಿರುದ್ಧ.."ಅಂತ ಘಂಟಾ ಘೋಷವಾಗಿ ಹೇಳಿ ಬಂದರು..ತನ್ನನ್ನು ತಾನು ಶ್ರೇಷ್ಠ ಮುಸಲ್ಮಾನ ದೇಶವೆಂದು ಕೂಗಿಕೊಳ್ಳುವ ಭಿಕಾರಿ ಪಾಕಿಸ್ತಾನ ಅಲ್ಲಿ ಭಾಗವಹಿಸಲಿಲ್ಲ...ಯಾಕೆ ಗೊತ್ತಾ ?..
ತನ್ನ ಮರ್ಯಾದೆ ಉಳಿಸಿಕೊಳ್ಳಲು..ಇನ್ನೂ ಒಂದು ವಿಷಯ ಗೊತ್ತಾ ?..ಹಿಂದೊಮ್ಮೆಇಂದಿರಾ ಗಂಢಿಯವರ
ಸರಕಾರ ...ಇದೇ ಮುಸ್ಲಿಮ್ ರಾಷ್ಟ್ರಗಳ ಒಕ್ಕೂಟದ ಸಮಾರಂಭಕ್ಕೆ ತನ್ನಪ್ರತಿನಿಧಿಯಾಗಿ ಫಕ್ರುದ್ದೀನ್ ಅಲಿ ಅಹಮದ್ ಅವರನ್ನು ಕಳಿಸಿತ್ತು..ಅವರು ಅಲ್ಲಿ ಹೋಗಿ ಹೊಟೆಲ್ಲಿನಲ್ಲಿ ತಂಗಿದ್ದರು..ಆದರೆ ಮುಖ ತಗ್ಗಿಸಿಕೊಂಡು ವಾಪಸ್ ಬಂದಿದ್ದರು..."ಇದು ಮುಸ್ಲಿಮ್ ದೇಶಗಳ ಒಕ್ಕೂಟ..ಹಾಗಾಗಿ ಭಾರತಕ್ಕೆ ಆಹ್ವಾನ ಇಲ್ಲ..."ಅಂತ ಹೇಳಿತ್ತು..ದೇಶದ ಮರ್ಯಾದೆ ಮೂರುಪಾಲಾಗಿತ್ತು....ಈಗ ದೇಶ ಹೆಮ್ಮೆಯಿಂದ ತಲೆ ಎತ್ತಿ ನಿಲ್ಲುವಂತೆ ಮಾಡಿದ
ಮೋದಿ ಸರಕಾರ ಕೆಲವರಿಗೆ...ಅಲ್ಪ ಸಂಖ್ಯಾತ ವಿರೋಧಿ... ವಿಚಿತ್ರ ...ಅಲ್ಲವಾ ?....!
****************************************************************
ಮೋದಿಸರಕಾರದ ಯಶಸ್ವಿವಿದೇಶಂಗ ನೀತಿ..ಯಾವತ್ತಿಗೂ ಭಾರತ ಶ್ರೇಷ್ಠ ಎನ್ನುವ ದೇಶಪ್ರೇಮಿಗಳ ಸರಕಾರದ
ಸಾಧನೆಯನ್ನುಯಾವ ಬುದ್ಧಿ ಜೀವಿಯೂ ಹೊಗಳುವದಿಲ್ಲ....ಯಾಕೆಂದರೆ ಅವರೆಲ್ಲ ಬುದ್ಧಿ ಜೀವಿಗಳು..... ಅಷ್ಟೆ....ದೇಶ ಭಕ್ತರಲ್ಲ...
*************************************************************
ಮೋದಿ ಅಲ್ಪ ಸಂಖ್ಯಾತ ವಿರೋಧಿ..ಮೋದಿ ಮುಸ್ಲಿಮ್ ವಿರೋಧಿ..ಎಂದು ಅರಚಾಡುವ ಜವಾಹರ ಲಾಲ್
ವಿಶ್ವ ವಿದ್ಯಾಲಯದ ಪ್ರಾಡಕ್ಟುಗಳು ...ಇದರ ಬಗೆಗೆ ಏನನ್ನುತ್ತಾರೆ ?...ಯಾಕೆ ಮುಸ್ಲಿಮ್ ದೇಶಗಳು
ಮೋದಿಯನ್ನು ಕರೆದು ಗೌರವಿಸುತ್ತವೆ ?...ಭಾರತದಲ್ಲಿ ಅಸಹಿಷ್ಣುತೆ ಜಾಸ್ತಿಯಾಗಿದ್ದಲ್ಲಿ....ತಮ್ಮಧರ್ಮೀಯರ ಬಗೆಗೆ ಅವರಿಗೆ ಕಾಳಜಿ ಇಲ್ಲವೆ ?...ಏನನ್ನುತ್ತಾರೆ? ಬುದ್ಧಿಜೀವಿಗಳು ?...
***************************************************
ಮೋದಿಯ ಜನಪ್ರಿಯ ಯೋಜನೆಗಳು...ಬಡವರಿಗೆ ಫ್ರೀ ಗ್ಯಾಸ್..ಉಚಿತ ಮನೆಗಳು..ಜನ ಧನ ಯೋಜನೆ..
ವಿದ್ಯುತ್ ಯೋಜನೆ...ಕಿಸಾನ್ ಸನ್ಮಾನ ಯೋಜನೆ...ಇನ್ನೂ ಅನೇಕ ಯೋಜನೆಗಳು ಇವೆಯಲ್ಲ....
ಯೋಜನೆಗಳು " ಮುಸ್ಲಿಮರಿಗೆ ಇಲ್ಲ.."ಅಂತ ನಿಯಮ ಇದೆಯಾ?ಇಲ್ಲವಲ್ಲ...!ಜಾತಿಗಳ ಮುಖ ನೋಡದೆ
ಬಡವರಿಗಾಗಿ ಆ ಯೋಜನೆಗಳು ಇವೆ...ಭಾರತೀಯರೆಲ್ಲರೂ ಒಂದು...ಮೋದಿ ನಮ್ಮ ದೇಶವನ್ನು ದೇಶ ಭಕ್ತಿಯ
ಮೂಲಕ ಒಂದು ಗೂಡಿಸುತ್ತಿದ್ದಾರೆ...ಯಾವ ಜಾತಿಯ ಹೆಸರು ಹೇಳುತ್ತಿಲ್ಲ...ಯಾವ ಮತದವರನ್ನೂ ದೂರ ಸರಿಸುತ್ತಿಲ್ಲ...ಸರ್ವ ಧರ್ಮ ಸಮಾನ.."ಸಬ್ ಕಾ ಸಾತ್.. ಸಬ್ ಕಾ ವಿಕಾಸ್..".. ! ...
ಎಲ್ಲರ ಜೊತೆಗೂಡಿ ಎಲ್ಲರ ಅಭಿವೃದ್ಧಿ..."..ಬಡವರಿಗೆ ಉಚಿತ ಗ್ಯಾಸ್ ಕೊಟ್ಟರೆ ಅಲ್ಲಿ ಜಾತಿ ಮತಗಳು ಮುಖ್ಯವಲ್ಲ...ಶೌಚಾಲಯ ಕಟ್ಟಿಸಿದರೆ ಅಲ್ಲಿ ಜಾತಿ ಮತಗಳ ಉಲ್ಲೇಖವಿಲ್ಲ.. ಕೇವಲ ಬಡವರಿಗಾಗಿ ಇದು...
ವಿದ್ಯುತ್ ಪ್ರತಿ ಹಳ್ಳಿ ಹಳ್ಳಿಗೂ ಮುಟ್ಟಿಸಿದರೆ ಅಲ್ಲಿ ಅಲ್ಪ ಸಂಖ್ಯಾತರಿಗೂ..ಎಲ್ಲ ಜಾತಿಯವರಿಗೂ ಸಿಗುತ್ತದೆ..
ಆದರೂ ಕಾಂಗ್ರೆಸ್ಸಿನವರು.ಜಾತ್ಯಾತೀತರು..ಎಡಬಿಡಂಗಿಗಳು ಮಾತ್ರ ಅರಚುತ್ತಾರೆ..
"ಮೋದಿ ಮುಸ್ಲಿಮ್ ವಿರೋಧಿ .. ಅಲ್ಪಸಂಖ್ಯಾತರ ವಿರೋಧಿ..."..ಬಹಳ ವಿಚಿತ್ರ ಕಣ್ರೀ.. ಇವರ ತರ್ಕ...!..
******************************************************
ಬಡವರಲ್ಲಿ ಜಾತಿ ನೋಡದ..ತನಗಾಗಿ ಏನನ್ನೂ ಬಯಸದ..ನಿಸ್ವಾರ್ಥಿ..ಪ್ರಾಮಾಣಿಕ...ಕುಟುಂಬ ರಾಜಕೀಯ ಮಾಡದ ಮೋದಿ ನಮ್ಮ ದೇಶದ ಹೆಮ್ಮೆ...!
ಮೋದಿ ಇನ್ನೊಮ್ಮೆ...
ಜಯ ಜಯ ಮೋದಿ...
ಮೋದಿ ಜಯ ಜಯ.. . ದೇಶ ಭಕ್ತಿಗೆ ಜೈ ಜೈ ಜೈ .......
********************************************************
( ಯಥಾ ಪ್ರಕಾರಇದು ಮೋದಿಯವರ ಬಗೆಗೆ ಬರೆದ ಲೇಖನ...ನಿಮಗೆಲ್ಲ ಇಷ್ಟ ಬಂದ ಹಾಗೆ ಹಂಚಿಕೊಳ್ಳಿ...
ನನ್ನ ಹೆಸರಿನ ಅಗತ್ಯವೂ ಇಲ್ಲ...ಕಾಪಿ ಪೇಸ್ಟ್ ಮಾಡಿಕೊಳ್ಳಿ...ಒಟ್ಟಿನಲ್ಲಿ...ಧರ್ಮ ಭಾರತದ ಭರವಸೆ....
ಮೋದಿ ಗೆಲ್ಲಬೇಕು... ಅಷ್ಟೇ..)

No comments:

Post a Comment