Friday, April 18, 2025

ಉಪನ್ಯಾಸ - ಲಕ್ಷ್ಮೀಶ ತೋಳ್ಪಾಡಿ

 ಶುಕ್ರವಾರ, 18 ಏಪ್ರಿಲ್ 2025

ಗಾಂಧಿ ಭವನ, ಕುಮಾರ ಕೃಪಾ ರಸ್ತೆ, ಬೆಂಗಳೂರು.

ಶಿವರಾಮ ಕಾರಂತ ವೇದಿಕೆ, ಅರ್. ಟಿ. ನಗರ, ಬೆಂಗಳೂರು, ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಎರಡು ದಿನಗಳ ಶ್ರೀ  ಲಕ್ಷ್ಮೀಶ ತೋಳ್ಪಾಡಿ ಯವರ ಉಪನ್ಯಾಸ "ಭಕ್ತಿ ಮತ್ತು ಸಾಹಿತ್ಯ". ಮೊದಲನೇ ದಿನವು ಸಂಪನ್ನಗೊಂಡಿತು.


ಪ್ರಥಮದಲ್ಲಿ ಕಾರಂತ ವೇದಿಕೆಯ ಅಧ್ಯಕ್ಷೆ ಡಾ. ದೀಪಾ ಫಡ್ಕೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನೂ, ಸಭಿಕರನ್ನು ಸ್ವಾಗತಿಸಿದರು.



ನಾಡಿನ ಪ್ರಸಿದ್ಧ ಸಾಹಿತಿ, ಚಿಂತಕ ಶ್ರೀ ಲಕ್ಷ್ಮೀಶ ತೋಳ್ಪಾಡಿ ಅವರು ತಮ್ಮ ಉಪನ್ಯಾಸದಲ್ಲಿ "ದೇವರು, ಭಕ್ತಿ, ಸಾಹಿತ್ಯ " ವಿಷಯವಾಗಿ ಸುಮಾರು 90 ನಿಮಿಷ ಗಳ ಕಾಲ ಮಾತನಾಡಿದರು.


ಮುಖ್ಯ ವಿಷಯಗಳು 

 ವಚನಕ್ಕೆ ನಾಚದ ಮನೆ, ಮನಕ್ಕೆ ನಾಚದ ವಚನ.

ಈ ಮಾತು ಭಕ್ತಿಗೂ, ಸಾಹಿತ್ಯಕ್ಕೂ ಒಗ್ಗುವ  ಯುಗ.

ವ್ಯಕ್ತಿತ್ವ ಭಾಷೆಯಲ್ಲಿ ಬಂದ ಮಾತು, ಸಹೃದಯ... ದೇವರು..

ಶಬ್ದಾರ್ಥ ಇಲ್ಲದೇ ಬೇರೇನೂ ಆತನಿಗೆ ಬೇಡ..ಆತನೇ ದೇವರು

ಇದು ಕಲಿಯುಗದ ವೈಶಿಷ್ಟ್ಯ, ನಿನ್ನ ಮಾತಿನ ಶೋತ್ರುವಾಗಿ ಬರುವವನು ದೇವರು

ಭಕ್ತಿ, ಭಕ್ತ, ಭಕ್ತೆ .. ಸಾಹಿತ್ಯಕ್ಕೆ ಇರುವ ಸಂಬಂಧ.

ಹತ್ತಿರದಲ್ಲೇ ಇರುವುದನ್ನು ಗುರುತಿಸುವುದು ದೇಸಿ ಗುಣ

ನಮ್ಮ ಇಂದ್ರೀಯಕ್ಕೆ ಬಂದಂತಹ ಅನುಭವ.

ಕಣ್ಣಿನ ಕಣ್ಣು.. ಕನ್ನಡಿಯಲ್ಲಿ ಕಂಡ ಕಣ್ಣು...ಪ್ರತೀಕ.....



ಸಾಹಿತ್ಯಾಭಿನಿಗಳೂ, ತೋಳ್ಪಾಡಿ ಅವರ ಅಭಿಮಾನಿಗಳೂ , ಹಲವಾರು ಮಂದಿ ಹಾಜರಿದ್ದರು.











ಬರೆದಿರುವುದು 19/4/2025

No comments:

Post a Comment