Monday, May 5, 2025

ಶ್ರೀ ಸತ್ಯನಾರಾಯಣ ಪೂಜೆ - ದುಬೈ ಬ್ರಾಹ್ಮಣ ಸಮಾಜ

 ಭಾನುವಾರ, ಮೇ 4, 2025

ಜಾಹಿಯ ಬಿಲ್ಡಿಂಗ್, ಅಲ್ ಮಂಕ್ಹೂಲ್, ಬರ್ ದುಬೈ.

ದುಬೈ ಬ್ರಾಹ್ಮಣ ಸಮಾಜದ, ವಿಶ್ವಾವಸು ನಾಮ ಸಂವತ್ಸರದ ಶ್ರೀ ಸತ್ಯನಾರಾಯಣ ಪೂಜೆಯು ಸಂಭ್ರಮದಿಂದ ಸಂಪನ್ನ ಗೊಂಡಿತು.



ಬೆಳಿಗ್ಗೆಯಿಂದ ಪ್ರಾರಂಭವಾದ ಪೂಜಾ ಕೈಂಕರ್ಯ, ವಿಷ್ಣು ಸಹಸ್ರನಾಮ, ಭಜನೆ, ಮಹಾ ಮಂಗಳಾರತಿ, ಇತ್ಯಾದಿ ಬಹು ಜನ ಬ್ರಾಹ್ಮಣ ಬಂಧುಗಳ ಸಂಮುಖದಲ್ಲಿ ನೆರವೇರಿತು.

ಪೂಜೆಯ ನಂತರ ಶ್ರೀ ವೆಂಕಟೇಶ ಶಾಸ್ತ್ರಿಯವರು ವಿಶ್ವಾವಸು ಸಂವತ್ಸರದ ಪಂಚಾಂಗ ಶ್ರವಣ ಮಾಡಿದರು.







ವಿಶೇಷ ಭೋಜನದ ವ್ಯವಸ್ಥೆ ಯನ್ನೂ ಮಾಡಲಾಗಿತ್ತು.

ಹಲವಾರು ವರುಷಗಳಿಂದ ನಿರಂತರವಾಗಿ ಸಮಾಜದ ಬಗ್ಗೆ ಶ್ರಮಿಸಿದ ಶ್ರೀ ಸುಧಾಕರ್ ರಾವ್ ಪೇಜಾವರ್ ಹಾಗೂ ಲತಾ ಸುಧಾಕರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಚಂದ ಗಾಣಿಸಿಕೊಟ್ಟ ಎಲ್ಲರಿಗೂ ವಂದನೆಗಳು.

ಸರ್ವೇ ಜನಃ ಸುಖಿನೋ ಭವಂತು.

Posted 5/5/2025


No comments:

Post a Comment