ಶುಕ್ರವಾರ, ಸೆಪ್ಟೆಂಬರ 19, 2025
ರವೀಂದ್ರ ಕಲಾಕ್ಷೇತ್ರ, ಬೆಂಗಳೂರು.
ಗೋಕುಲ ನಿರ್ಗಮನ - ದೃಶ್ಯ ನಾಟಕ
ಪು. ತಿ. ನರಸಿಂಹ ಆಚಾರ್ ವಿರಚಿತ, ಬಿ ವಿ ಕಾರಂತ್ ನಿರ್ದೇಶನದ, ಡಾ. ಟಿ ಎಸ್ ನಾಗಾಭರಣ ಮರು ನಿರ್ದೇಶಿಸಿದ ಮರುವಿನ್ಯಾಸದ ವಿನೂತನ ದೃಶ್ಯ ಕನ್ನಡ ನಾಟಕ "ಗೋಕುಲ ನಿರ್ಗಮನ".
ಸುಮಾರು 30 ಕಿಂತ ಹೆಚ್ಚಿನ ಯುವಕ, ಯುವತಿಯನ್ನು ಒಳಗೊಂಡಿದ್ದು , 90 ನಿಮಿಷಗಳ ಕಾಲದ ನಾಟಕ ನೃತ್ಯ, ಹಾಡುಗಳನ್ನು ಬಳಸಿಕೊಂಡು ಪ್ರದರ್ಶಿಸಿದ ಅದ್ಭುತವಾದ ನಾಟಕ.
50 ವರ್ಷಲಿಂದ ರಂಗಭೂಮಿಯಲ್ಲಿ ನಾಟಕಗಳನ್ನು ಪ್ರದರ್ಶನ ಮಾಡಿಕೊಂಡು ಬಂದ "ಬೆನಕ" ನಾಟಕ ತಂಡ, ಇನ್ನೂ 50 ವರ್ಷಗಳ ಕಾಲ ರಂಗಭೂಮಿಯನ್ನು ಜೀವಂತ ವಾಗಿರಿಸಿಲು ಯುವ ಪೀಳಿಗೆಯನ್ನು ತಾಲೀಮು ಮಾಡಿಸುವುದು, ಪ್ರೋತ್ಸಾಹಿಸುವುದು, ನಾಗಾಭರಣ ಅವರ ಬೆನಕ ತಂಡದ ಪ್ರಯತ್ನ ಶ್ಲಾಘನೀಯ.
ನಾಟಕದ ಯಶಸ್ಸಿಗೆ ತುಂಬಿದ ಕಲಾಕ್ಷೇತ್ರದ ಸಭಾಂಗಣದಲ್ಲಿ ನೆರೆದ ಜನರೇ ಸಾಕ್ಷಿ.
ಬೆನಕ ತಂಡದವರಿಗೆ ಹಾರ್ದಿಕ ಅಭಿನಂದನೆಗಳು.
Posted 20/9/2025
No comments:
Post a Comment