Sunday, June 15, 2025

ಎಸ್ ಎಲ್ ಭೈರಪ್ಪ ಪ್ರತಿಷ್ಠಾನ ಉದ್ಘಾಟನಾ ಸಮಾರಂಭ

 ಶನಿವಾರ, ಜೂನ್ 14, 2025

ಬಿ. ಎಂ. ಎಸ್. ಇಂಜಿನಿಯರಿಂಗ್ ಕಾಲೇಜ್ ಸಭಾಂಗಣ, ಬೆಂಗಳೂರು. 




ನಾವು ಸಹಾ ಕಾರ್ಯಕ್ರಮಕ್ಕೆ ಬರಲು ಮನೆಯಿಂದ ಹೊರಟು ಮಳೆಯಲ್ಲಿ, ಟ್ರಾಫಿಕ್ ನಲ್ಲಿ ಸಿಲುಕಿಕೊಂಡು ವಾಪಸ್ಸು ಮನೆಗೇ ಸುರಕ್ಷಿತವಾಗಿ ಬಂದು ಸೇರಿದೆವು.



ಲಲಿತ ಕಲ್ಯಾಣಪುರ .....

ಎಸ್ ಎಲ್ ಭೈರಪ್ಪ ಪ್ರತಿಷ್ಠಾನ ಉದ್ಘಾಟನಾ ಸಮಾರಂಭ - ಬಿ ಎಂ ಎಸ್ ಕಾಲೇಜು ಬಸವನಗುಡಿ- ಎಂದು ಹೋದೆವು. ಒಳಗೆ ಕಾಲಿಡಲೂ ಜಾಗವಿಲ್ಲ, ಆ ಪರಿ ಜನ ಸಂದಣಿ. ಭೈರಪ್ಪನವರು ಬರುವರೆಂದ ಮೇಲೆ‌ ಸುಮ್ಮನೆಯೇ? ಹೊರಗೆ ಸಿಕ್ಕ ಪರಿಚಯದವರಿಗೆ 'ಹಾಯ್' ದು ಮತ್ತೆ ಅಲ್ಲಿಂದ‌ ಸೀದಾ‌ ಎನ್ ಆರ್ ಕಾಲನಿಯ ಅಶ್ವತ್ಥ್ ಕಲಾ ಭವನ ಕ್ಕೆ ಬಂದು ರಾಜೇಂದ್ರ ಕಾರಂತರ 'ಬೀchi house' ನಾಟಕಕ್ಕೆ ಬಂದು ಕುಳಿತೆವು.
ಸಹನಾ ವಿಜಯಕುಮಾರ್....
ಎಲ್ಲರಿಗೂ ನಮಸ್ಕಾರ.
ನಿನ್ನೆ 'ಸಭಾಂಗಣ ಕಿಕ್ಕಿರಿದು ತುಂಬಿತ್ತು' ಎಂಬ ಪದಗುಚ್ಛ ಶ್ರೀ ಭೈರಪ್ಪನವರ ಬಗೆಗಿನ ವಾಚಕರ ಪ್ರೀತಿಯನ್ನು ಸಮರ್ಪಕವಾಗಿ ಬಿಂಬಿಸಲಾರದು. ವೇದಿಕೆಯನ್ನು ಹೊರತುಪಡಿಸಿ ಇನ್ನೆಲ್ಲೂ ಕಾಲಿಡಲೂ ಸ್ಥಳವಿರಲಿಲ್ಲ. ಅನೇಕರು ನಿಂತು ಸಂಪೂರ್ಣ ಕಾರ್ಯಕ್ರಮವನ್ನು ವೀಕ್ಷಿಸಿದರು. ಬಹಳಷ್ಟು ಮಂದಿ ಹಿಂತಿರುಗಿದರು. ವೇದಿಕೆಯ ಮುಂಭಾಗ ಚಕ್ಕಳಮಟ್ಟೆ ಹಾಕಿ ಕೂತು ಆನಂದಿಸಿದವರೂ ದೊಡ್ಡ ಸಂಖ್ಯೆಯಲ್ಲಿದ್ದರು. ಈ ಮಟ್ಟಿಗಿನ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಮುಂದಿನ ಕಾರ್ಯಕ್ರಮಗಳನ್ನು ದೊಡ್ಡ ಸಭಾಂಗಣದಲ್ಲಿ ಆಯೋಜಿಸುತ್ತೇವೆ. ಈ ಬಾರಿಯ ಅನನುಕೂಲಕ್ಕೆ ಕ್ಷಮೆಯಿರಲಿ.
ಟ್ರಸ್ಟಿನ ಕೆಲವು ಕಾರ್ಯಗಳನ್ನು ಸದ್ಯದಲ್ಲೇ ಆರಂಭಿಸಲಿದ್ದೇವೆ. ಕನ್ನಡ ಭಾಷೆ ಹಾಗೂ ಸಾಹಿತ್ಯಗಳ ಉಳಿವಿಗಾಗಿ ಭೈರಪ್ಪನವರ ದೃಷ್ಟಿಯನ್ನರಿತು ನಡೆಯುವ ಉತ್ಸಾಹಿ ಕಾರ್ಯಕರ್ತರು ಬೇಕಾಗಿದ್ದಾರೆ ಎಂದು ನಿನ್ನೆ ಪ್ರಸ್ತಾವನೆಯಲ್ಲಿ ಹೇಳಿದೆ. ದೊರೆತ ಸ್ಪಂದನೆ ಆಶ್ಚರ್ಯಕರವಾಗಿತ್ತು. ಕಾರ್ಯಕ್ರಮದ ನಂತರ ಅನೇಕರು ಸಂಪರ್ಕಿಸಿ ತಾವು ಎಲ್ಲ ವಿಧಗಳಲ್ಲೂ ತೊಡಗುವುದಾಗಿ ಹೇಳಿದ್ದಾರೆ. ಕೆಲವರು ತಮ್ಮಲ್ಲಿದ್ದ ಹಣವನ್ನು ನಮ್ಮ ಕೈಗೆ ತುರುಕಿ ಪ್ರತಿಷ್ಠಾನದ ಲೆಕ್ಕಕ್ಕೆ ಸೇರಿಸಿಕೊಳ್ಳಿ ಎಂದಿದ್ದಾರೆ. ಮಹನೀಯರೊಬ್ಬರು ಅಲ್ಲೇ ಚೆಕ್ ನೀಡಿದ್ದಾರೆ. ೮೦-ಜಿ ಸಿಕ್ಕಮೇಲೆ ಸಂಪರ್ಕಿಸುತ್ತೇವೆ, ಆ ತನಕ ತಾಳ್ಮೆವಹಿಸಿ ಎಂದು ಮನವಿ ಮಾಡಬೇಕಾಯಿತು.
ತಾತ್ಪರ್ಯವಿಷ್ಟೇ - ಭೈರಪ್ಪನವರು ಕನ್ನಡವನ್ನು ಪ್ರೀತಿಸುವಷ್ಟೇ ಕನ್ನಡಿಗರು ಅವರನ್ನು ಪ್ರೀತಿಸುತ್ತಾರೆ. ಆರಾಧಿಸುತ್ತಾರೆ. ತಮ್ಮ ಉದ್ದೇಶ ಈಡೇರಿದ್ದನ್ನು ಕಂಡು ನಿನ್ನೆ ಭೈರಪ್ಪನವರು ಭಾವುಕರಾಗಿದ್ದರು. ಅವರ ಜೀವನದ ಸಂಧ್ಯಾಕಾಲದಲ್ಲಿ ನಾವು ಅವರಿಗೆ ನೀಡಬಹುದಾದದ್ದು ಇಷ್ಟೇ. ಇದನ್ನು ನಿಸ್ಪೃಹವಾಗಿ ನೀಡೋಣ. ನೀವೆಲ್ಲರೂ ಕೈಜೋಡಿಸಿ ಎಂಬ ವಿನಂತಿ.

Posted 16/6/2025

RAAM NAAM MANTRA (ರಾಮ ನಾಮ ಮಂತ್ರ)

 Sunday, June 15, 2025

WhatsApp Forwarded.

A nice story about Guru Vashista coming to Ram's Durbar and Hanuman didn't recognoze and honour him.



Vashista gets angry and ordered Raam to give Hanuman "Mrutya Dand" (death sentence)


Ram accepts Gurudev's orders and decides to give death sentence with his Amogh Baana next day on the banks of Sarayu river,  to Hanuman.



Hanuman's mother Anjali, tells him to say 'RAAM NAAM", which is more powerful than Ram, heance Ram could not kill Hanuman with his Baan.

Moral of the story- "RAAM NAAM IS MORE PRECIOUS THAN RAAM"

ರಾಮ ಮಂತ್ರವ ಜಾಪಿಸೋ ಹೇ ಮನುಜಾ...... ಪುರಂದರದಾಸರ ಹಾಡು....


Posted 15/6/2025



Thursday, June 12, 2025

BHAJANE/SATSANG AT SUNANDI -19

 Thursday, 12th June 2025

Sunandi Oldage Home (Vraddhashrama), KodigeHalli, Bengaluru.

Yet another session of Bhajane / Satsang completed at Sunandi Vraddhashrama.



BHAJANE

The inmates of the Oldage Home, eagerly waiting for Thursday, as the can hear some good thoughts and HariNama Smarane.


UPANYASA(GOOD THOUGHTS)

Good thoughts are part of Upanayasa by Ramakrishna Bhat.


MANGALA.... SHANKARAYA....

It was a good session with residents joining in the bhajan session.

MANGALARATHI

As usual, the session ended with Mangalarathi, Vibhoothi, and Prasada for all.

Lokaa Samasthaa Sukhino Bhavanthu....

God Bless,

Posted 13/6/2025








Monday, June 9, 2025

ಬೆಳ್ಳಿ & ಚುಕ್ಕಿ - ಎರಡು ಬೆಕ್ಕುಗಳು

 9 June 2025

Shobha Article:

ನಮ್ಮ ಮನೆಯಲ್ಲಿರುವ ಎರಡು ಬೆಕ್ಕುಗಳು - ಬೆಳ್ಳಿ & ಚುಕ್ಕಿ. ಬೆಂಗಳೂರಿನ ಐ ಐ ಎಸ್ ಈ ಕ್ಯಾಂಪಸ್ ನಲ್ಲಿರುವ ನನ್ನ ತಂಗಿಯ ಮನೆಯಿಂದ ತಂದ ಬೆಕ್ಕುಗಳವು. ಅವಳ ಚಿಕ್ಕ ಮಗಳು ಅದಿತಿ ಎರಡು ತಿಂಗಳು ಅವುಗಳನ್ನು ಸಾಕಿ ‘ಉತ್ತಮ’ವಾಗಿ ಟ್ರೇನ್ ಮಾಡಿ ನಾಮಕರಣ ಕೂಡಾ ಮಾಡಿ ನಮ್ಮ ಮಡಿಲಿಗೆ ಹಾಕಿದ ಬೆಕ್ಕುಗಳವು. ಕ್ಯಾಟ್ ಫುಡ್ ಹಾಕಿ ಬೆಳೆಸಿದ ಬೆಕ್ಕುಗಳಾದ ಕಾರಣ ನಾವೂ ಅನಿವಾರ್ಯವಾಗಿ ಅದನ್ನೇ ಹಾಕಿ ಸಾಕಬೇಕಾಗಿದೆ. ಸ್ವಲ್ಪ ಪರ್ಷಿಯನ್ ಕ್ಯಾಟ್ ನ ಅಂಶಗಳು ಬೆರೆತಿರುವ ಕಾರಣ ಆಕಾರದಲ್ಲಿ ಊರ ಬೆಕ್ಕುಗಳಿಗಿಂತ ಸ್ವಲ್ಪ ದೊಡ್ಡದಾಗಿರುವ ಬೆಕ್ಕುಗಳವು.

ಬೆಳ್ಳಿ ಗಂಡು ಬೆಕ್ಕು. ಬೆಳ್ಳಗಿನ ಮೈಮೆಲೆ ಬೂದು ಬಣ್ಣದ ಪ್ಯಾಚ್ ಗಳಿರುವ ಬೆಕ್ಕದು. ಚುಕ್ಕಿ ಮೈ ತುಂಬಾ ರೋಮವಿರುವ ಹೆಣ್ಣು ಬೆಕ್ಕು. ಚುಕ್ಕಿಗೆ ಒಮ್ಮೆ ಹೊಟ್ಟೆಗೆ ಹಾಕಿದರೆ ಹೊಟ್ಟೆ ತುಂಬಿಸಿಕೊಂಡು ಶಿಸ್ತಿನಲ್ಲಿ ಒಂದು ಕಡೆ ಮಲಗುತ್ತಾಳೆ; ಇಲ್ಲವೇ ಹೊರಗೆ ಬೇಟೆಯಾಡಲು ಹೋಗುತ್ತಾಳೆ. ಬಹಳ ಸ್ವಾಭಿಮಾನಿ ಹಾಗೂ ಮರ್ಯಾದಾ ಪುರುಷೋತ್ತಮೆ! ಆದರೆ ಬೆಳ್ಳಿ ಹಾಗಲ್ಲ. ಮರ್ಯಾದೆಯ ಗಂಧಗಾಳಿಯೂ ಇಲ್ಲದವನು! ಅವನು ಬಕಾಸುರನ ವಂಶಸ್ಥ. ಅವನಿಗೆ ಎಷ್ಟು ಹೊಟ್ಟೆಗೆ ಹಾಕಿದರೂ ಹೊಟ್ಟೆ ತುಂಬುವುದೇ ಇಲ್ಲ. ಒಂದು ರೀತಿಯ ದುರಾಸೆಯವನು! ತಿನ್ನಲು ಹಾಕಿದಷ್ಟೂ ಇನ್ನೂ ಮತ್ತಷ್ಟೂ ಬೇಕೆಂಬ ಹಂಬಲ ಅವನಿಗೆ. ತಣಿಯದ ತಿನ್ನುವಾಸೆ ಅವನಿಗೆ. ಮುಚ್ಚಿದ ಹಾಲಿನ ಪಾತ್ರೆಯನ್ನು ತೆಗೆದು ಲೀಟರ್ ಗಟ್ಟಲೆ ಹಾಲನ್ನು ಕುಡಿಯುವ ಬೆಳ್ಳಿಯ ತಾಕತ್ತನ್ನು ಮೆಚ್ಚಲೇ ಬೇಕು. ಅದಷ್ಟೇ ಆಗಿದ್ದರೆ ಪರವಾಗಿಲ್ಲ. ತಿಂದದ್ದು ಹೊರಹಾಕಲು ಅವನಿಗೆ ಮನೆಯಲ್ಲಿ ಇರುವ ಹಾಸಿಗೆ, ದಿಂಬುಗಳು ಬಲು ಪ್ರಶಸ್ತವೆನಿಸುವ ವಸ್ತುಗಳು! ಉಚ್ಚೆ ಹಾರಿಸಲು ಮನೆಯ ಬಾಗಿಲುಗಳು, ಫ್ರಿಜ್ಜಿನ ಬಾಗಿಲು…ಎಲ್ಲವೂ ಅವನಿಗೆ ಆಕರ್ಷಣೀಯವಾಗಿ ತೋರುತ್ತವೆ. ಅವನ ಪ್ರಸಾದ ಸಿಂಚಿತವಾದ ನಮ್ಮ ಮನೆ ಆಗಾಗ ಘಮಗುಡುತ್ತಿರುತ್ತದೆ😀 ಹೀಗಾಗಿ ನಮ್ಮ ಮನೆಯ ಕೋಣೆಗಳ ಬಾಗಿಲುಗಳನ್ನು ನಾವು ಚಿಲಕ ಹಾಕಿಯೇ ಇಟ್ಟಿರುತ್ತೇವೆ. ಮನೆಗೆ ಬಂದ ನೆಂಟರಿಗೂ ಯಾವ ಕಾರಣಕ್ಕೂ ಬಾಗಿಲು ತೆಗೆದಿಡಬೇಡಿ ಎಂದು ಹೇಳುತ್ತೇವೆ. ಬೆಳ್ಳಿಯಂತಹ ಕೊಳಕು ಬೆಕ್ಕನ್ನು ನಾನು ಈವರೆಗೆ ನೋಡಿಲ್ಲ ಎಂದರೆ ತಪ್ಪಾಗಲಾರದು.

ನಾನೊಮ್ಮೆ ಅವನ ಇಂತಹ ಘನಂದಾರಿ ಕೆಲಸಕ್ಕೆ ಸಿಟ್ಟು ಮಾಡಿಕೊಂಡು ಅವನಿಗೆ ಒದ್ದಿದ್ದೆ. ಅವನು ಪ್ರತಿಕಾರವಾಗಿ ನನ್ನ ಒಗೆದು ಒಣಗಿಸಿದ ಸೀರೆಯನ್ನು ಕೆಳಗೆಳೆದು ಅದರ ಮೇಲೆ ಉಚ್ಚೆ ಹೊಯ್ದಿದ್ದ. ಅಂತಹ ಬೆಳ್ಳಿಗೆ ನಾನೇನು ಮಾಡಬೇಕು ಅಂತ ನೀವೇ ಹೇಳಿ. ಹೇಳುತ್ತಾ ಹೋದರೆ ಅವನ ಪ್ರವರಗಳು ಬಹಳಷ್ಟಿವೆ. ಅವನೊಬ್ಬ ಯಾವುದೇ ರೀತಿಯಲ್ಲಿ ತಿದ್ದಲ್ಪಡದ ಪ್ರಾಣಿ! ಆದರೂ ಅವನ ಮೇಲೆ ಎಷ್ಟೇ ಸಿಟ್ಟು ಬಂದರೂ ಅವನು ಹಸಿದು ಆಹಾರ ಕೇಳುವಾಗ ಕೊಡದೇ ಇರಲು ಮನಸ್ಸು ಬರುವುದೇ ಇಲ್ಲ! ಇದು ನಮ್ಮೊಡನಿರುವ ಜೀವದೊಂದಿಗೆ ಪ್ರತಿಯೊಬ್ಬರೂ ಪ್ರತಿಕ್ರಿಯಿಸುವ ರೀತಿ ತಾನೆ?


Posted 10/6/2025

ಎಚ್. ಎಸ್.ವಿ. ನಮನ

ಭಾನುವಾರ,  ಜೂನ್ 8, 2025

ಪಾಂಚಜನ್ಯ ಸಭಾಂಗಣ, ವಿನಾಯಕ ದೇವಸ್ಥಾನ, ಅರ್. ಟಿ. ನಗರ, ಬೆಂಗಳೂರು.

ಶಿವರಾಮ ಕಾರಂತ ವೇದಿಕೆ, ಅರ್.ಟಿ.ನಗರ, ಬೆಂಗಳೂರು ಇವರು ಹಮ್ಮಿಕೊಂಡ,  ಇತ್ತೀಚಿಗೆ ನಿಧನರಾದ ಪ್ರಸಿದ್ಧ ಕವಿ ಶ್ರೀ ಎಚ್.ಎಸ್. ವೆಂಕಟೇಶ ಮೂರ್ತಿ ಅವರ ನುಡಿ ನಮನ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.



ಹಿರಿಯ ವಿಮರ್ಶಕ ಶ್ರೀ ಎಸ್.ಅರ್. ವಿಜಯಶಂಕರ ಮತ್ತು ಸಂಪಾದಕರು, ಅಭಿನವ ಚತುರ್ಮಾಸಿಕ ಪತ್ರಿಕೆ ನ. ರವಿಕುಮಾರ, ಅವರುಗಳು ಎಚ್.ಎಸ್.ವಿ. ಅವರಿಗೆ ನುಡಿ ನಮನವನ್ನು ಸಲ್ಲಿಸಿದರು.



ಹಲವಾರು ಎಚ್.ಎಸ್. ವಿ. ಅವರ ಅಭಿಮಾನಿಗಳು ಉಪಸ್ತಿತರಿದ್ದು ಕಾರ್ಯಕ್ರಮವು ಯಸಸ್ವಿಯಾಗಿ ನೆರವೇರಿತು.

ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರ ವರದಿ:

ಕಣ್ಣೊಂದಿದ್ದರೆ ಸಾಕೆ, ಬ್ಯಾಡವೆ ಮಂದೆ? ಕಣ್ಣಿನ ಮುಂದೆ ನಿಮಗೆ ಕಾಣೋಕೆ 
ಕೊರಳೊಂದಿದ್ದರೆ ಸಾಕೆ, ಬ್ಯಾಡವೆ ಹಾಡು? ಎಲ್ಲರ ಜೋಡಿ ಕೂಡಿ ಹಾಡೋಕೆ...... 

ಎಲ್ಲರಿಗೂ ನಮಸ್ಕಾರ.

ಶಿವರಾಮ ಕಾರಂತ ವೇದಿಕೆಯ ಜೂನ್ ತಿಂಗಳ 8ನೇ ತಾರೀಕು, ಭಾನುವಾರದ 'ಎಚ್. ಎಸ್. ವಿ ನಮನ' ಕಾರ್ಯಕ್ರಮದಲ್ಲಿ ಹಲವಾರು ಸದಸ್ಯರು ಭಾಗವಹಿಸಿದ್ದು ಸಂತಸದ ಸುದ್ದಿ. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದದ್ದು ಮತ್ತಷ್ಟು ಸಂತೋಷದ ಸುದ್ದಿ..

ಭೌತಿಕವಾಗಿ ನಮ್ಮನ್ನೆಲ್ಲ ಅಗಲಿದರು, ಶಾಶ್ವತವಾಗಿ ತಮ್ಮ ಬರಹದ ಮೂಲಕ, ಮತ್ತು ಅತ್ಯಂತ ಮಧುರವಾದ ಭಾವಗೀತೆಗಳ ಮೂಲಕ, ನಮ್ಮೊಡನೆ ಸದಾ ಕಾಲವೂ ಇರುವ, ಎಚ್. ಎಸ್. ವೆಂಕಟೇಶ್ ಮೂರ್ತಿ ಅವರಿಗೆ  ಶ್ರದ್ಧಾಂಜಲಿಯನ್ನು ಸಲ್ಲಿಸುವ ಸಲುವಾಗಿ ಆಯೋಜಿಸಲಾಗಿದ್ದ, ಈ ಕಾರ್ಯಕ್ರಮದಲ್ಲಿ ಮೊದಲಿಗೆ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಲಾಯಿತು. ನಂತರ ಎಚ್ಛೆಸ್ವಿ ಅವರದೇ ಆದ  ಭಾವಗೀತೆಯೊಂದನ್ನು ಅತ್ಯಂತ ಸುಮಧುರವಾದ  ಕಂಠದಲ್ಲಿ, ಕುಮಾರಿ ರಮ್ಯಾ ಶ್ರೀ ಎನ್ನುವ ಮೌoಟ್ ಕಾರ್ಮಲ್ ಕಾಲೇಜಿನ ವಿದ್ಯಾರ್ಥಿನಿ ಹಾಡಿದರು.  
ನಂತರ ಎಚ್. ಎಸ್. ವಿ ಅವರ ಭಾವಚಿತ್ರಕ್ಕೆ ಪುಷ್ಪನಮನ  ಸಲ್ಲಿಸಲಾಯಿತು. ನಮ್ಮ ವೇದಿಕೆಯ ಅಧ್ಯಕ್ಷರು ಡಾ. ದೀಪ ಫಡ್ಕೆ ಅವರು ಅಗಲಿದ ಎಚ್. ಎಸ್. ವಿ ಅವರ ಸಾಹಿತ್ಯ ಕ್ಷೇತ್ರದ ನೆನಪುಗಳನ್ನೂ ಹಾಗೂ ಭಾವಗೀತೆಗಳ ಕಡಲಿನಲ್ಲಿ ನಿರಂತರ ಅಲೆಗಳ ಮೊರೆತವನ್ನು ಹುಟ್ಟಿಸುವಂತ, ಭಾವಗೀತೆ ರಚನೆಕಾರರಿಗೆ ತಮ್ಮ ಪ್ರಾಸ್ತಾವಿಕ ನುಡಿಗಳ ಮೂಲಕ  ನುಡಿಯಾರ್ಚನೆಗೈಯುತ್ತಾ, ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ವಾಗತ ಕೋರಿದರು.ಅವರು ಎಚ್. ಎಸ್. ವಿ ಅವರ ಬಗ್ಗೆ ಆಡಿದ ಒಂದೊಂದು ಮಾತುಗಳೂ ಕೂಡ, ಅತ್ಯಂತ ಮೌಲ್ಯಬರಿತ, ಸಮಂಜಸ ನುಡಿಗಳಾಗಿದ್ದವು. 

ನಂತರ ನ. ರವಿಕುಮಾರ್, ಸಂಪಾದಕರು, ಅಭಿನವ ಚಾತುರ್ಮಾಸಿಕ, ಅವರು ಎಚ್. ಎಸ್. ವಿ. ಅವರ ಬಗ್ಗೆ ಮಾತನಾಡುತ್ತಾ, ಅವರ ಜೊತೆಗಿದ್ದ ತಮ್ಮ ನಿಕಟ ಸಂಪರ್ಕದ ಕುರಿತು,ಸಾಹಿತ್ಯ ಲೋಕದಲ್ಲಿಯೂ ಕೂಡ ಎಚ್. ಎಸ್. ವಿ. ಅವರು ಮಾಡಿದ ಸಾಧನೆಗಳನ್ನು, ಮನಸ್ಫೂರ್ವಕವಾಗಿ  ಹಾಡಿ ಹೊಗಳುತ್ತಾ  ತಮ್ಮ ಮಾತು -ಕತೆಯನ್ನು ಮುಂದು ವರಿಸಿದರು. ನಿಜಕ್ಕೂ ರವಿಕುಮಾರ್ ರವರು ತುಂಬಾ ಸಂಭಾವಿತರೆoಬುವುದಕ್ಕೆ ಸಾಕ್ಷಿಯಾಗಿ ನಮ್ಮ ಶಿವರಾಮ ಕಾರoತ ವೇದಿಕೆಯ ವಾಸ್ತವಾoಶಗಳನ್ನು ಅರಿತವರಂತೆ, ವೇದಿಕೆಯ ನಡೆಯನ್ನು ಪ್ರಶಂಸಿಸಿ ತಮ್ಮ ತನು ಮನ ಧನಗಳಿಂದಲೂ ನಮ್ಮೆಲ್ಲರನ್ನೂ ಪ್ರೋತ್ಸಾಹ ಪಡಿಸಿದ್ದು ನಿಜಕ್ಕೂ ತುಂಬಾ ಆದರಣೀಯವೆನಿಸಿತು. ಅಷ್ಟೇ ಅಲ್ಲದೆ, ಎಚ್. ಎಸ್. ವಿ ಅವರ ಸರಳತೆಯ ವ್ಯಕ್ತಿತ್ವನ್ನು ಮೆಲುಕು ಹಾಕುತ್ತಾ, ತಮ್ಮ ಜೀವನದಲ್ಲಿ ಎಚ್. ಎಸ್. ವಿ ಅವರಂತ ವ್ಯಕ್ತಿಯ ಅಗಲಿಕೆ ತುಂಬಲಾರದ ನಷ್ಟ ಎಂದು ಪರಿತಪಿಸಿದರು. ತಮ್ಮ ಮಾತುಗಳ ಮೂಲಕ ಎಲ್ಲರನ್ನೂ ಸೆಳೆದರು.

ನಂತರ ಮತ್ತೊಂದು ಸುಮಧುರವಾದ ಭಾವಗೀತೆಯನ್ನು ಹಾಡಲಾಯಿತು.
ನಂತರ ನಮ್ಮ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದ ನಮ್ಮ ವೇದಿಕೆಯ ಗೌರವಾಧ್ಯಕ್ಷರು ಹಾಗೂ ಖ್ಯಾತ ವಿಮರ್ಶಕರಾದ ಶ್ರೀ ಎಸ್. ಆರ್. ವಿಜಯ ಶಂಕರ ರವರು ಎಚ್. ಎಸ್. ವಿ ಅವರನ್ನು ಕುರಿತು ಮಾತನಾಡಿದರು.
ನಿಜಕ್ಕೂ ಇವರ ಮಾತುಗಳನ್ನು ಕೇಳುತ್ತಾ ಕುಳಿತವರಿಗೆ ಮತ್ತಷ್ಟು ಸಮಯ ಇದ್ದಿದ್ದರೆ ಬಹುಶ:  ಎಚ್. ಎಸ್. ವಿ. ಅವರ ಬಗ್ಗೆ ಇನ್ನಷ್ಟು ಹೊಸ ವಿಷಯಗಳು, ಚಿಂತನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರೇನೋ ಅನಿಸಿತು..ನಿಜಕ್ಕೂ ಎಚ್. ಎಸ್. ವಿ ಅವರಂತ ಹಿರಿಯ ಜೀವದೊಂದಿಗೆ ತಮಗಿದ್ದ ಭಾವ ಬೆಸುಗೆಯ ಬಗ್ಗೆ ತಿಳಿದು ನಾವೆಲ್ಲಾ ಮೂಕವಿಸ್ಮಿತರಾದೆವು. ಅಲ್ಲಿ ಮಾತಿಗಿಂತ ಮೌನವೆ ಎಲ್ಲದಕ್ಕೂ ಉತ್ತರವಾಗಿತ್ತು. ನಮ್ಮ ಸಾಹಿತ್ಯ ಲೋಕ ಇದುವರೆಗೂ ಅನೇಕ ದಿಗ್ಗಜರನ್ನು ಕಳೆದು ಕೊoಡಿದೆ. ಉದಾಹರಣೆಗೆ, ಕುವೆಂಪು, ಕಾರಂತರು, ಬೇಂದ್ರೆ, ಅಡಿಗರು, ಪು. ತಿ. ನ ಹೀಗೆ ಅನೇಕರು ಆಗಸದ ನಕ್ಷತ್ರಗಳಾಗಿದ್ದಾರೆ. ಆದರೆ ಎಚ್. ಎಸ್. ವಿ ಅವರ ಅಗಲಿಕೆಯು ಮನೆಯ ಹಿರಿಯ ಅಣ್ಣನನ್ನು  ಕಳೆದುಕೊಂಡoತಾಗಿದೆ ಎಂದು ಬಹಳ ವ್ಯಥೆ ಪಟ್ಟರು.  ಕ್ಷಣ ಕಾಲ ತಮ್ಮ ಮಾತುಗಳಲ್ಲಿ ಗದ್ಗದಿತರಾಗಿದ್ದು ತುಂಬಾ ಭಾರವಾದ ಹೃದಯವನೊತ್ತು ಬಂದದ್ದಕ್ಕೆ ಸಾಕ್ಷಿಯಾಗಿತ್ತು. ಎಚ್. ಎಸ್. ವಿ. ಅವರ ಸಾಂಗತ್ಯದಲ್ಲಿ ಸಾಥಿತ್ಯವನ್ನು ಕಂಡ ವಿಮರ್ಶಕರ ಮನದಲ್ಲಿದ್ದ ನೋವು,ಕೆಲವರ ಕಣ್ಣು ತೇವವಾಗುವಂತೆ ಮಾಡಿದ್ದು ಸುಳ್ಳಲ್ಲ..
ಇನ್ನೂ ತಮ್ಮ ಸಾಹಿತ್ಯದ ಪಯಣದಲ್ಲಿ ಎಚ್. ಎಸ್. ವಿ ಯವರ ಪಾತ್ರ ಎಂತಹ ಅನನ್ಯತೆಯ ಭಾವ ಮೂಡಿಸಿತ್ತೆoದರೆ, ಎಚ್. ಎಸ್. ವಿ. ಅವರ ಸಮಗ್ರ ಕಾವ್ಯಕ್ಕೆಒಂದು ಸುದೀರ್ಘ ಮುನ್ನುಡಿಯನ್ನೂ ಕೂಡ ನಮ್ಮ ವಿಮರ್ಶಕರು  ಬರೆಯುತ್ತಾರೆ. ಇದರಿಂದ, ಎಚ್. ಎಸ್. ವಿ ಯವರಸರಳ ಸಜ್ಜನಿಕೆಯ ಗುಣ, ಹಿರಿಯ, ಹಾಗೂ ಕಿರಿಯ ತಲೆಮಾರುಗಳಲ್ಲಿಯೂ ತಳವೂರಿ ನಿಲ್ಲಿವಂತ ಗಟ್ಟಿತನ ನಮಗೆಲ್ಲ ಆದರ್ಶವಾಗುವುದನ್ನು ನಾವು ಕಾಣಬಹುದು. ಮತ್ತು ಕಾಲಕ್ಕೆ ತಕ್ಕಂತೆ ಬದಲಾದ ಲಾಲಿತ್ಯ ಎಚ್. ಎಸ್. ವಿ ಯವರ ಭಾಷಾ ಸಾಹಿತ್ಯ ಎಂದು ವ್ಯಾಕ್ಯನಿಸುತ್ತಾ, ಹಳೆಗನ್ನಡದ ಸಾಹಿತ್ಯ, ಭಾಷಾ ಪಾರಂಪರ್ಯ, ನಡೆದು ಬಂದ ಹಾದಿಯಿಂದಲೂ, ಈಗಿನ ನವ್ಯ ಸಾಹಿತ್ಯದ ಕಾಲಕ್ಕೂ, ಸರ್ವಕಾಲಕ್ಕೂ ಸಲ್ಲುವಂತ ಎಚ್. ಎಸ್. ವಿ.ಯವರ ಓದು ಹಾಗೂ ಬರಹ, ಸಾಹಿತ್ಯ ಕ್ಷೇತ್ರದ ಒಂದು ಸುದೀರ್ಘ ಅಚ್ಛಾದಿತಾ ಹೆಜ್ಜೆ ಎಂಬಂತೆ ಹೇಳಿದರು.. ಹೀಗೆ ಮಾತನಾಡುತ್ತಾ ನಮ್ಮನ್ನೆಲ್ಲಾ ಎಚ್. ಎಸ್. ವಿ ಯವರ ಬರಹದ ಲೋಕಕ್ಕೆ ಕೊಂಡೊಯ್ದಿದ್ದರು.. ಎಚ್. ಎಸ್. ವಿ. ಯವರು ಕೇವಲ ಭಾವಗೀತೆಗಳನ್ನಷ್ಟೇ ರಚಿಸ ಬಲ್ಲರೇನೋ ಎನ್ನುವ, ಈಗಿನ ಕಾಲ ಘಟ್ಟದವರಿಗೆ ಬಹುಶ: ನಮ್ಮ ವೇದಿಕೆಯ ಹೆಮ್ಮೆಯ ವಿಮರ್ಶಕರಾದ ಶ್ರೀ ಎಸ್. ಆರ್. ವಿಜಯ ಶಂಕರರ ಮಾತುಗಳನ್ನು ಆಲಿಸಿದ್ದಿದ್ದರೆ ತುಂಬಾ ಸೂಕ್ತವಾದ ಮಾಹಿತಿಗಳು ದೊರಕುತ್ತಿತ್ತೇನೋ ಎನಿಸಿತು.  ಹೀಗೆ ಎಚ್. ಎಸ್. ವಿ. ಯವರ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡ ವಿಮರ್ಶಕರು, ಹಲವಾರು ನೆನಪುಗಳನ್ನು ತಮ್ಮ ನೆನಪಿನ ಬುತ್ತಿಯಿಂದ ನಮ್ಮೆದುರಿಗೆ ಬಿಚ್ಚಿಟ್ಟರು.

ಇದಾದ ನಂತರ ನಮಗೆಲ್ಲಾ ಅತ್ಯಂತ ಚಿರಪರಿಚಿತರಾದ, ಚಿದಂಬರ ಕೋಟೆ ಯವರು, ತಮ್ಮ ಇಂಪಾದ ದ್ವನಿಯಿಂದ ಎಚ್. ಎಸ್. ವಿ. ಯವರ ಸಾಹಿತ್ಯದಲ್ಲಿ ಅರಳಿದ ಮುಕ್ತ ಮುಕ್ತ ಮುಕ್ತಾ, ಎನ್ನುವ ಶೀರ್ಷಿಕೆಯ ಹಾಡೊoದನ್ನು ಪ್ರಸ್ತುತ ಪಡಿಸಿದರು..ಇದಕ್ಕೂ ಮುನ್ನ ಸಭಿಕರೆಲ್ಲ ಎದ್ದು ನಿಂತು ಒಂದು ನಿಮಿಷದ ಮೌನಾಚರಣೆಯನ್ನು ಮಾಡಿ ಅಗಲಿದ ಚೇತನಕ್ಕೆ ಶ್ರದ್ಧಾಂಜಲಿಯನ್ನು ಸಲ್ಲಿಸಿದೆವು.ಮತ್ತೊಂದು ಹಾಡನ್ನು ರಮ್ಯಶ್ರೀ ಹಾಡಿದರು.

ನಮ್ಮ ಸಮಿತಿಯ ಸದಸ್ಯರಾದ ಶ್ರೀ ಸುಧೀoದ್ರರವರೂ ಕೂಡ ಎಚ್. ಎಸ್. ವಿ. ಯವರ ಜೊತೆಗಿನ ಕೆಲವು ಅಮೂಲ್ಯ ಘಟನೆಗಳನ್ನು  ಸಭೆಯೊಂದಿಗೆ ಸ್ಮರಿಸಿದರು.
ಧನ್ಯವಾದ ಸಮರ್ಪಣೆ ಮಧುರವಾದ ಪ್ರಾರ್ಥನೆಯನ್ನು ಸೊಗಸಾಗಿ ಹಾಡಿದ ಕುಮಾರಿ ರಮ್ಯಶ್ರೀಯವರಿಗೆ ಧನ್ಯವಾದಗಳನ್ನು ಅರ್ಪಿಸಲಾಯಿತು. 
ನಂತರ ಎಲ್ಲರನ್ನೂ ಸ್ವಾಗತಿಸಿದ ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷರಿಗೂ, ಕಾರ್ಯಕ್ರಮಕ್ಕೆ
ಅತ್ಯಂತ ಸೊಗಸಾದ ನಿರೂಪಣೆಯನ್ನು ಮಾಡಿದ ಶ್ರೀಮತಿ ಚೇತನಾ ಹೆಗಡೆ ಅವರಿಗೂ ಈ ಸಭಾಂಗಣವನ್ನು ಒದಗಿಸಿ ಕೊಟ್ಟ ಶ್ರೀ ವಿನಾಯಕ ದೇವಸ್ಥಾನದ ಬಳಗಕ್ಕೂ, ಕಡೆಯದಾಗಿ ಶಿವರಾಮ ಕಾರಂತ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರಿಗೂ  ಬಹಳ ಮುಖ್ಯವಾಗಿ  ನಮ್ಮ ವೇದಿಕೆಯ ಯಶಸ್ಸಿಗೆ ಕಾರಣರಾದ  ನಿಮ್ಮೆಲ್ಲರಿಗೂ ನಾನು ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ.
ಧನ್ಯವಾದಗಳೊಂದಿಗೆ
ಕಾರ್ಯದರ್ಶಿ: ಮಂಜುಳಾ ಭಾರ್ಗವಿ

Posted 11/6/2025




Sunday, June 8, 2025

LALITHA KALOTSAVA, YAKSHAGANA

 Sunday, June 8, 2025

Parampara Auditprium, Bengaluru.





It was a  whole program organised by "Saligrama Makkala Mela", celebrating 50 years, since started, in association with "Karnataka Yakshadhama", Mangaluru,  "Padma Kamala Samsthe" and "Kalkura Prathistaana", Bengaluru.



There was vareity entertainment program, with songs, dance, and "Harikathe", by the talented members, (KALA KUSUMAGALU)  in the morning after the stage program.





A 9- year old Nidhi, very talented, presented beautiful "HariKatha", with songs and discourse from the story of Bhagavatha.



There was also dance numbers, BharathaNatya and 








There  was "Yakshagana", "SriDevi Mahatme" after Lunch and another stage program, honouring "SADHAKARU"(Achievers).






We did not stay for Yakshagana, as we had to come back home.


It was well organized program, all credits goes to 

Sri Janardhana Hande and Sujayeendra Hande.

Posted 9/6/2025








Saturday, June 7, 2025

TRAGEDY AT CHINNASWAMY STADIUM - SHRADDHANJALI

 Wednesday, 4th June 2025

Chinnaswamy Cricket Stadium,  Bengaluru

It's very very sad that eleven yougsters lost theri lives at stampede occured at the stadium entrace for the Cricket Fans to see the IPL- RCB heroes, who were the Champions on the Final Match on the previous day.


Government organized the Victory Celebrations for the RCB heroes and fans in the Stadium, without proper preparations.

Police could not manage huge crowd surged, and open invitation by the CM. 

The result was stampede happened at the entrance, 11 yougsters lost their lives.


Whatever said and done, lost lives cannot come back, and people responsible for the event must be punished.

May God Rest the young souls in perfect peace.


Posted 7/6/2025 

Friday, June 6, 2025

BHAJANE/SATSANG AT SUNANDI - 18

 Thursday, 5th June 2025

Sunandi Oldage Home, Bengaluru.



Another session of Bhajane / Satsang for elderly people at Sunandi Vraddhashrama completed. 


We could clearly see, elderly residents of the Oladage Home, eagerly waiting for Thursday evening, and we sure that a short time we spend gives them divine peace of Mind.




The session continues with Upanyasa by Ramakrishna Bhat


Mangalarathi and Vibhoothi and Prasada distribution.


Lokaa Samasthaa Sukhino Bhavanthu..... Om Shanthi.... Shanthi.... Shanthi.....

God Bless All.

Posted 6/6/2025


Thursday, June 5, 2025

WEDDING SAMBHRAMA - SAMARTH/APOORVA

 Thursday, 5th June 2025

Aditya Kalyana Mantapa, Ittumadu, Bengaluru.

That was garnad celebration of Wedding of Samarth with Apoorva.







Samarth is S/O Ramesh Kedlaya, who is S/o Govind Kedlaya, my mother's brother.



with Bhagya Hegde and Family


with Dr Srinivas, Jyothi and Srinivas Joisa




Large number of relatives and well wishers attended the wedding, young and old, some have oldage health issues, next generation children and it was good meeting ocassion.


With Subramanya Kedlaya with Family

Muhurtha for the wedding was early and the venue is about 25 km from home and we reached by 11 am and could meet all the relatives, chat and wish.


with Anusooya, Samarth's mother

Grand lunch followed, with Pheni, Badam Burfi, Pulav served in earthern pot etc.



Goruguntepalya Junction, waiting at the Traffic signal..

Wishing the newly married couple Samarth-Apoorva, Long and Happy married Life.

God Bless,

Posted 6/6/2025