Sunday, June 15, 2025

ಎಸ್ ಎಲ್ ಭೈರಪ್ಪ ಪ್ರತಿಷ್ಠಾನ ಉದ್ಘಾಟನಾ ಸಮಾರಂಭ

 ಶನಿವಾರ, ಜೂನ್ 14, 2025

ಬಿ. ಎಂ. ಎಸ್. ಇಂಜಿನಿಯರಿಂಗ್ ಕಾಲೇಜ್ ಸಭಾಂಗಣ, ಬೆಂಗಳೂರು. 




ನಾವು ಸಹಾ ಕಾರ್ಯಕ್ರಮಕ್ಕೆ ಬರಲು ಮನೆಯಿಂದ ಹೊರಟು ಮಳೆಯಲ್ಲಿ, ಟ್ರಾಫಿಕ್ ನಲ್ಲಿ ಸಿಲುಕಿಕೊಂಡು ವಾಪಸ್ಸು ಮನೆಗೇ ಸುರಕ್ಷಿತವಾಗಿ ಬಂದು ಸೇರಿದೆವು.



ಲಲಿತ ಕಲ್ಯಾಣಪುರ .....

ಎಸ್ ಎಲ್ ಭೈರಪ್ಪ ಪ್ರತಿಷ್ಠಾನ ಉದ್ಘಾಟನಾ ಸಮಾರಂಭ - ಬಿ ಎಂ ಎಸ್ ಕಾಲೇಜು ಬಸವನಗುಡಿ- ಎಂದು ಹೋದೆವು. ಒಳಗೆ ಕಾಲಿಡಲೂ ಜಾಗವಿಲ್ಲ, ಆ ಪರಿ ಜನ ಸಂದಣಿ. ಭೈರಪ್ಪನವರು ಬರುವರೆಂದ ಮೇಲೆ‌ ಸುಮ್ಮನೆಯೇ? ಹೊರಗೆ ಸಿಕ್ಕ ಪರಿಚಯದವರಿಗೆ 'ಹಾಯ್' ದು ಮತ್ತೆ ಅಲ್ಲಿಂದ‌ ಸೀದಾ‌ ಎನ್ ಆರ್ ಕಾಲನಿಯ ಅಶ್ವತ್ಥ್ ಕಲಾ ಭವನ ಕ್ಕೆ ಬಂದು ರಾಜೇಂದ್ರ ಕಾರಂತರ 'ಬೀchi house' ನಾಟಕಕ್ಕೆ ಬಂದು ಕುಳಿತೆವು.
ಸಹನಾ ವಿಜಯಕುಮಾರ್....
ಎಲ್ಲರಿಗೂ ನಮಸ್ಕಾರ.
ನಿನ್ನೆ 'ಸಭಾಂಗಣ ಕಿಕ್ಕಿರಿದು ತುಂಬಿತ್ತು' ಎಂಬ ಪದಗುಚ್ಛ ಶ್ರೀ ಭೈರಪ್ಪನವರ ಬಗೆಗಿನ ವಾಚಕರ ಪ್ರೀತಿಯನ್ನು ಸಮರ್ಪಕವಾಗಿ ಬಿಂಬಿಸಲಾರದು. ವೇದಿಕೆಯನ್ನು ಹೊರತುಪಡಿಸಿ ಇನ್ನೆಲ್ಲೂ ಕಾಲಿಡಲೂ ಸ್ಥಳವಿರಲಿಲ್ಲ. ಅನೇಕರು ನಿಂತು ಸಂಪೂರ್ಣ ಕಾರ್ಯಕ್ರಮವನ್ನು ವೀಕ್ಷಿಸಿದರು. ಬಹಳಷ್ಟು ಮಂದಿ ಹಿಂತಿರುಗಿದರು. ವೇದಿಕೆಯ ಮುಂಭಾಗ ಚಕ್ಕಳಮಟ್ಟೆ ಹಾಕಿ ಕೂತು ಆನಂದಿಸಿದವರೂ ದೊಡ್ಡ ಸಂಖ್ಯೆಯಲ್ಲಿದ್ದರು. ಈ ಮಟ್ಟಿಗಿನ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಮುಂದಿನ ಕಾರ್ಯಕ್ರಮಗಳನ್ನು ದೊಡ್ಡ ಸಭಾಂಗಣದಲ್ಲಿ ಆಯೋಜಿಸುತ್ತೇವೆ. ಈ ಬಾರಿಯ ಅನನುಕೂಲಕ್ಕೆ ಕ್ಷಮೆಯಿರಲಿ.
ಟ್ರಸ್ಟಿನ ಕೆಲವು ಕಾರ್ಯಗಳನ್ನು ಸದ್ಯದಲ್ಲೇ ಆರಂಭಿಸಲಿದ್ದೇವೆ. ಕನ್ನಡ ಭಾಷೆ ಹಾಗೂ ಸಾಹಿತ್ಯಗಳ ಉಳಿವಿಗಾಗಿ ಭೈರಪ್ಪನವರ ದೃಷ್ಟಿಯನ್ನರಿತು ನಡೆಯುವ ಉತ್ಸಾಹಿ ಕಾರ್ಯಕರ್ತರು ಬೇಕಾಗಿದ್ದಾರೆ ಎಂದು ನಿನ್ನೆ ಪ್ರಸ್ತಾವನೆಯಲ್ಲಿ ಹೇಳಿದೆ. ದೊರೆತ ಸ್ಪಂದನೆ ಆಶ್ಚರ್ಯಕರವಾಗಿತ್ತು. ಕಾರ್ಯಕ್ರಮದ ನಂತರ ಅನೇಕರು ಸಂಪರ್ಕಿಸಿ ತಾವು ಎಲ್ಲ ವಿಧಗಳಲ್ಲೂ ತೊಡಗುವುದಾಗಿ ಹೇಳಿದ್ದಾರೆ. ಕೆಲವರು ತಮ್ಮಲ್ಲಿದ್ದ ಹಣವನ್ನು ನಮ್ಮ ಕೈಗೆ ತುರುಕಿ ಪ್ರತಿಷ್ಠಾನದ ಲೆಕ್ಕಕ್ಕೆ ಸೇರಿಸಿಕೊಳ್ಳಿ ಎಂದಿದ್ದಾರೆ. ಮಹನೀಯರೊಬ್ಬರು ಅಲ್ಲೇ ಚೆಕ್ ನೀಡಿದ್ದಾರೆ. ೮೦-ಜಿ ಸಿಕ್ಕಮೇಲೆ ಸಂಪರ್ಕಿಸುತ್ತೇವೆ, ಆ ತನಕ ತಾಳ್ಮೆವಹಿಸಿ ಎಂದು ಮನವಿ ಮಾಡಬೇಕಾಯಿತು.
ತಾತ್ಪರ್ಯವಿಷ್ಟೇ - ಭೈರಪ್ಪನವರು ಕನ್ನಡವನ್ನು ಪ್ರೀತಿಸುವಷ್ಟೇ ಕನ್ನಡಿಗರು ಅವರನ್ನು ಪ್ರೀತಿಸುತ್ತಾರೆ. ಆರಾಧಿಸುತ್ತಾರೆ. ತಮ್ಮ ಉದ್ದೇಶ ಈಡೇರಿದ್ದನ್ನು ಕಂಡು ನಿನ್ನೆ ಭೈರಪ್ಪನವರು ಭಾವುಕರಾಗಿದ್ದರು. ಅವರ ಜೀವನದ ಸಂಧ್ಯಾಕಾಲದಲ್ಲಿ ನಾವು ಅವರಿಗೆ ನೀಡಬಹುದಾದದ್ದು ಇಷ್ಟೇ. ಇದನ್ನು ನಿಸ್ಪೃಹವಾಗಿ ನೀಡೋಣ. ನೀವೆಲ್ಲರೂ ಕೈಜೋಡಿಸಿ ಎಂಬ ವಿನಂತಿ.

Posted 16/6/2025

No comments:

Post a Comment