Monday, June 9, 2025

ಎಚ್. ಎಸ್.ವಿ. ನಮನ

ಭಾನುವಾರ,  ಜೂನ್ 8, 2025

ಪಾಂಚಜನ್ಯ ಸಭಾಂಗಣ, ವಿನಾಯಕ ದೇವಸ್ಥಾನ, ಅರ್. ಟಿ. ನಗರ, ಬೆಂಗಳೂರು.

ಶಿವರಾಮ ಕಾರಂತ ವೇದಿಕೆ, ಅರ್.ಟಿ.ನಗರ, ಬೆಂಗಳೂರು ಇವರು ಹಮ್ಮಿಕೊಂಡ,  ಇತ್ತೀಚಿಗೆ ನಿಧನರಾದ ಪ್ರಸಿದ್ಧ ಕವಿ ಶ್ರೀ ಎಚ್.ಎಸ್. ವೆಂಕಟೇಶ ಮೂರ್ತಿ ಅವರ ನುಡಿ ನಮನ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.



ಹಿರಿಯ ವಿಮರ್ಶಕ ಶ್ರೀ ಎಸ್.ಅರ್. ವಿಜಯಶಂಕರ ಮತ್ತು ಸಂಪಾದಕರು, ಅಭಿನವ ಚತುರ್ಮಾಸಿಕ ಪತ್ರಿಕೆ ನ. ರವಿಕುಮಾರ, ಅವರುಗಳು ಎಚ್.ಎಸ್.ವಿ. ಅವರಿಗೆ ನುಡಿ ನಮನವನ್ನು ಸಲ್ಲಿಸಿದರು.



ಹಲವಾರು ಎಚ್.ಎಸ್. ವಿ. ಅವರ ಅಭಿಮಾನಿಗಳು ಉಪಸ್ತಿತರಿದ್ದು ಕಾರ್ಯಕ್ರಮವು ಯಸಸ್ವಿಯಾಗಿ ನೆರವೇರಿತು.

ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರ ವರದಿ:

ಕಣ್ಣೊಂದಿದ್ದರೆ ಸಾಕೆ, ಬ್ಯಾಡವೆ ಮಂದೆ? ಕಣ್ಣಿನ ಮುಂದೆ ನಿಮಗೆ ಕಾಣೋಕೆ 
ಕೊರಳೊಂದಿದ್ದರೆ ಸಾಕೆ, ಬ್ಯಾಡವೆ ಹಾಡು? ಎಲ್ಲರ ಜೋಡಿ ಕೂಡಿ ಹಾಡೋಕೆ...... 

ಎಲ್ಲರಿಗೂ ನಮಸ್ಕಾರ.

ಶಿವರಾಮ ಕಾರಂತ ವೇದಿಕೆಯ ಜೂನ್ ತಿಂಗಳ 8ನೇ ತಾರೀಕು, ಭಾನುವಾರದ 'ಎಚ್. ಎಸ್. ವಿ ನಮನ' ಕಾರ್ಯಕ್ರಮದಲ್ಲಿ ಹಲವಾರು ಸದಸ್ಯರು ಭಾಗವಹಿಸಿದ್ದು ಸಂತಸದ ಸುದ್ದಿ. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದದ್ದು ಮತ್ತಷ್ಟು ಸಂತೋಷದ ಸುದ್ದಿ..

ಭೌತಿಕವಾಗಿ ನಮ್ಮನ್ನೆಲ್ಲ ಅಗಲಿದರು, ಶಾಶ್ವತವಾಗಿ ತಮ್ಮ ಬರಹದ ಮೂಲಕ, ಮತ್ತು ಅತ್ಯಂತ ಮಧುರವಾದ ಭಾವಗೀತೆಗಳ ಮೂಲಕ, ನಮ್ಮೊಡನೆ ಸದಾ ಕಾಲವೂ ಇರುವ, ಎಚ್. ಎಸ್. ವೆಂಕಟೇಶ್ ಮೂರ್ತಿ ಅವರಿಗೆ  ಶ್ರದ್ಧಾಂಜಲಿಯನ್ನು ಸಲ್ಲಿಸುವ ಸಲುವಾಗಿ ಆಯೋಜಿಸಲಾಗಿದ್ದ, ಈ ಕಾರ್ಯಕ್ರಮದಲ್ಲಿ ಮೊದಲಿಗೆ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಲಾಯಿತು. ನಂತರ ಎಚ್ಛೆಸ್ವಿ ಅವರದೇ ಆದ  ಭಾವಗೀತೆಯೊಂದನ್ನು ಅತ್ಯಂತ ಸುಮಧುರವಾದ  ಕಂಠದಲ್ಲಿ, ಕುಮಾರಿ ರಮ್ಯಾ ಶ್ರೀ ಎನ್ನುವ ಮೌoಟ್ ಕಾರ್ಮಲ್ ಕಾಲೇಜಿನ ವಿದ್ಯಾರ್ಥಿನಿ ಹಾಡಿದರು.  
ನಂತರ ಎಚ್. ಎಸ್. ವಿ ಅವರ ಭಾವಚಿತ್ರಕ್ಕೆ ಪುಷ್ಪನಮನ  ಸಲ್ಲಿಸಲಾಯಿತು. ನಮ್ಮ ವೇದಿಕೆಯ ಅಧ್ಯಕ್ಷರು ಡಾ. ದೀಪ ಫಡ್ಕೆ ಅವರು ಅಗಲಿದ ಎಚ್. ಎಸ್. ವಿ ಅವರ ಸಾಹಿತ್ಯ ಕ್ಷೇತ್ರದ ನೆನಪುಗಳನ್ನೂ ಹಾಗೂ ಭಾವಗೀತೆಗಳ ಕಡಲಿನಲ್ಲಿ ನಿರಂತರ ಅಲೆಗಳ ಮೊರೆತವನ್ನು ಹುಟ್ಟಿಸುವಂತ, ಭಾವಗೀತೆ ರಚನೆಕಾರರಿಗೆ ತಮ್ಮ ಪ್ರಾಸ್ತಾವಿಕ ನುಡಿಗಳ ಮೂಲಕ  ನುಡಿಯಾರ್ಚನೆಗೈಯುತ್ತಾ, ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ವಾಗತ ಕೋರಿದರು.ಅವರು ಎಚ್. ಎಸ್. ವಿ ಅವರ ಬಗ್ಗೆ ಆಡಿದ ಒಂದೊಂದು ಮಾತುಗಳೂ ಕೂಡ, ಅತ್ಯಂತ ಮೌಲ್ಯಬರಿತ, ಸಮಂಜಸ ನುಡಿಗಳಾಗಿದ್ದವು. 

ನಂತರ ನ. ರವಿಕುಮಾರ್, ಸಂಪಾದಕರು, ಅಭಿನವ ಚಾತುರ್ಮಾಸಿಕ, ಅವರು ಎಚ್. ಎಸ್. ವಿ. ಅವರ ಬಗ್ಗೆ ಮಾತನಾಡುತ್ತಾ, ಅವರ ಜೊತೆಗಿದ್ದ ತಮ್ಮ ನಿಕಟ ಸಂಪರ್ಕದ ಕುರಿತು,ಸಾಹಿತ್ಯ ಲೋಕದಲ್ಲಿಯೂ ಕೂಡ ಎಚ್. ಎಸ್. ವಿ. ಅವರು ಮಾಡಿದ ಸಾಧನೆಗಳನ್ನು, ಮನಸ್ಫೂರ್ವಕವಾಗಿ  ಹಾಡಿ ಹೊಗಳುತ್ತಾ  ತಮ್ಮ ಮಾತು -ಕತೆಯನ್ನು ಮುಂದು ವರಿಸಿದರು. ನಿಜಕ್ಕೂ ರವಿಕುಮಾರ್ ರವರು ತುಂಬಾ ಸಂಭಾವಿತರೆoಬುವುದಕ್ಕೆ ಸಾಕ್ಷಿಯಾಗಿ ನಮ್ಮ ಶಿವರಾಮ ಕಾರoತ ವೇದಿಕೆಯ ವಾಸ್ತವಾoಶಗಳನ್ನು ಅರಿತವರಂತೆ, ವೇದಿಕೆಯ ನಡೆಯನ್ನು ಪ್ರಶಂಸಿಸಿ ತಮ್ಮ ತನು ಮನ ಧನಗಳಿಂದಲೂ ನಮ್ಮೆಲ್ಲರನ್ನೂ ಪ್ರೋತ್ಸಾಹ ಪಡಿಸಿದ್ದು ನಿಜಕ್ಕೂ ತುಂಬಾ ಆದರಣೀಯವೆನಿಸಿತು. ಅಷ್ಟೇ ಅಲ್ಲದೆ, ಎಚ್. ಎಸ್. ವಿ ಅವರ ಸರಳತೆಯ ವ್ಯಕ್ತಿತ್ವನ್ನು ಮೆಲುಕು ಹಾಕುತ್ತಾ, ತಮ್ಮ ಜೀವನದಲ್ಲಿ ಎಚ್. ಎಸ್. ವಿ ಅವರಂತ ವ್ಯಕ್ತಿಯ ಅಗಲಿಕೆ ತುಂಬಲಾರದ ನಷ್ಟ ಎಂದು ಪರಿತಪಿಸಿದರು. ತಮ್ಮ ಮಾತುಗಳ ಮೂಲಕ ಎಲ್ಲರನ್ನೂ ಸೆಳೆದರು.

ನಂತರ ಮತ್ತೊಂದು ಸುಮಧುರವಾದ ಭಾವಗೀತೆಯನ್ನು ಹಾಡಲಾಯಿತು.
ನಂತರ ನಮ್ಮ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದ ನಮ್ಮ ವೇದಿಕೆಯ ಗೌರವಾಧ್ಯಕ್ಷರು ಹಾಗೂ ಖ್ಯಾತ ವಿಮರ್ಶಕರಾದ ಶ್ರೀ ಎಸ್. ಆರ್. ವಿಜಯ ಶಂಕರ ರವರು ಎಚ್. ಎಸ್. ವಿ ಅವರನ್ನು ಕುರಿತು ಮಾತನಾಡಿದರು.
ನಿಜಕ್ಕೂ ಇವರ ಮಾತುಗಳನ್ನು ಕೇಳುತ್ತಾ ಕುಳಿತವರಿಗೆ ಮತ್ತಷ್ಟು ಸಮಯ ಇದ್ದಿದ್ದರೆ ಬಹುಶ:  ಎಚ್. ಎಸ್. ವಿ. ಅವರ ಬಗ್ಗೆ ಇನ್ನಷ್ಟು ಹೊಸ ವಿಷಯಗಳು, ಚಿಂತನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರೇನೋ ಅನಿಸಿತು..ನಿಜಕ್ಕೂ ಎಚ್. ಎಸ್. ವಿ ಅವರಂತ ಹಿರಿಯ ಜೀವದೊಂದಿಗೆ ತಮಗಿದ್ದ ಭಾವ ಬೆಸುಗೆಯ ಬಗ್ಗೆ ತಿಳಿದು ನಾವೆಲ್ಲಾ ಮೂಕವಿಸ್ಮಿತರಾದೆವು. ಅಲ್ಲಿ ಮಾತಿಗಿಂತ ಮೌನವೆ ಎಲ್ಲದಕ್ಕೂ ಉತ್ತರವಾಗಿತ್ತು. ನಮ್ಮ ಸಾಹಿತ್ಯ ಲೋಕ ಇದುವರೆಗೂ ಅನೇಕ ದಿಗ್ಗಜರನ್ನು ಕಳೆದು ಕೊoಡಿದೆ. ಉದಾಹರಣೆಗೆ, ಕುವೆಂಪು, ಕಾರಂತರು, ಬೇಂದ್ರೆ, ಅಡಿಗರು, ಪು. ತಿ. ನ ಹೀಗೆ ಅನೇಕರು ಆಗಸದ ನಕ್ಷತ್ರಗಳಾಗಿದ್ದಾರೆ. ಆದರೆ ಎಚ್. ಎಸ್. ವಿ ಅವರ ಅಗಲಿಕೆಯು ಮನೆಯ ಹಿರಿಯ ಅಣ್ಣನನ್ನು  ಕಳೆದುಕೊಂಡoತಾಗಿದೆ ಎಂದು ಬಹಳ ವ್ಯಥೆ ಪಟ್ಟರು.  ಕ್ಷಣ ಕಾಲ ತಮ್ಮ ಮಾತುಗಳಲ್ಲಿ ಗದ್ಗದಿತರಾಗಿದ್ದು ತುಂಬಾ ಭಾರವಾದ ಹೃದಯವನೊತ್ತು ಬಂದದ್ದಕ್ಕೆ ಸಾಕ್ಷಿಯಾಗಿತ್ತು. ಎಚ್. ಎಸ್. ವಿ. ಅವರ ಸಾಂಗತ್ಯದಲ್ಲಿ ಸಾಥಿತ್ಯವನ್ನು ಕಂಡ ವಿಮರ್ಶಕರ ಮನದಲ್ಲಿದ್ದ ನೋವು,ಕೆಲವರ ಕಣ್ಣು ತೇವವಾಗುವಂತೆ ಮಾಡಿದ್ದು ಸುಳ್ಳಲ್ಲ..
ಇನ್ನೂ ತಮ್ಮ ಸಾಹಿತ್ಯದ ಪಯಣದಲ್ಲಿ ಎಚ್. ಎಸ್. ವಿ ಯವರ ಪಾತ್ರ ಎಂತಹ ಅನನ್ಯತೆಯ ಭಾವ ಮೂಡಿಸಿತ್ತೆoದರೆ, ಎಚ್. ಎಸ್. ವಿ. ಅವರ ಸಮಗ್ರ ಕಾವ್ಯಕ್ಕೆಒಂದು ಸುದೀರ್ಘ ಮುನ್ನುಡಿಯನ್ನೂ ಕೂಡ ನಮ್ಮ ವಿಮರ್ಶಕರು  ಬರೆಯುತ್ತಾರೆ. ಇದರಿಂದ, ಎಚ್. ಎಸ್. ವಿ ಯವರಸರಳ ಸಜ್ಜನಿಕೆಯ ಗುಣ, ಹಿರಿಯ, ಹಾಗೂ ಕಿರಿಯ ತಲೆಮಾರುಗಳಲ್ಲಿಯೂ ತಳವೂರಿ ನಿಲ್ಲಿವಂತ ಗಟ್ಟಿತನ ನಮಗೆಲ್ಲ ಆದರ್ಶವಾಗುವುದನ್ನು ನಾವು ಕಾಣಬಹುದು. ಮತ್ತು ಕಾಲಕ್ಕೆ ತಕ್ಕಂತೆ ಬದಲಾದ ಲಾಲಿತ್ಯ ಎಚ್. ಎಸ್. ವಿ ಯವರ ಭಾಷಾ ಸಾಹಿತ್ಯ ಎಂದು ವ್ಯಾಕ್ಯನಿಸುತ್ತಾ, ಹಳೆಗನ್ನಡದ ಸಾಹಿತ್ಯ, ಭಾಷಾ ಪಾರಂಪರ್ಯ, ನಡೆದು ಬಂದ ಹಾದಿಯಿಂದಲೂ, ಈಗಿನ ನವ್ಯ ಸಾಹಿತ್ಯದ ಕಾಲಕ್ಕೂ, ಸರ್ವಕಾಲಕ್ಕೂ ಸಲ್ಲುವಂತ ಎಚ್. ಎಸ್. ವಿ.ಯವರ ಓದು ಹಾಗೂ ಬರಹ, ಸಾಹಿತ್ಯ ಕ್ಷೇತ್ರದ ಒಂದು ಸುದೀರ್ಘ ಅಚ್ಛಾದಿತಾ ಹೆಜ್ಜೆ ಎಂಬಂತೆ ಹೇಳಿದರು.. ಹೀಗೆ ಮಾತನಾಡುತ್ತಾ ನಮ್ಮನ್ನೆಲ್ಲಾ ಎಚ್. ಎಸ್. ವಿ ಯವರ ಬರಹದ ಲೋಕಕ್ಕೆ ಕೊಂಡೊಯ್ದಿದ್ದರು.. ಎಚ್. ಎಸ್. ವಿ. ಯವರು ಕೇವಲ ಭಾವಗೀತೆಗಳನ್ನಷ್ಟೇ ರಚಿಸ ಬಲ್ಲರೇನೋ ಎನ್ನುವ, ಈಗಿನ ಕಾಲ ಘಟ್ಟದವರಿಗೆ ಬಹುಶ: ನಮ್ಮ ವೇದಿಕೆಯ ಹೆಮ್ಮೆಯ ವಿಮರ್ಶಕರಾದ ಶ್ರೀ ಎಸ್. ಆರ್. ವಿಜಯ ಶಂಕರರ ಮಾತುಗಳನ್ನು ಆಲಿಸಿದ್ದಿದ್ದರೆ ತುಂಬಾ ಸೂಕ್ತವಾದ ಮಾಹಿತಿಗಳು ದೊರಕುತ್ತಿತ್ತೇನೋ ಎನಿಸಿತು.  ಹೀಗೆ ಎಚ್. ಎಸ್. ವಿ. ಯವರ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡ ವಿಮರ್ಶಕರು, ಹಲವಾರು ನೆನಪುಗಳನ್ನು ತಮ್ಮ ನೆನಪಿನ ಬುತ್ತಿಯಿಂದ ನಮ್ಮೆದುರಿಗೆ ಬಿಚ್ಚಿಟ್ಟರು.

ಇದಾದ ನಂತರ ನಮಗೆಲ್ಲಾ ಅತ್ಯಂತ ಚಿರಪರಿಚಿತರಾದ, ಚಿದಂಬರ ಕೋಟೆ ಯವರು, ತಮ್ಮ ಇಂಪಾದ ದ್ವನಿಯಿಂದ ಎಚ್. ಎಸ್. ವಿ. ಯವರ ಸಾಹಿತ್ಯದಲ್ಲಿ ಅರಳಿದ ಮುಕ್ತ ಮುಕ್ತ ಮುಕ್ತಾ, ಎನ್ನುವ ಶೀರ್ಷಿಕೆಯ ಹಾಡೊoದನ್ನು ಪ್ರಸ್ತುತ ಪಡಿಸಿದರು..ಇದಕ್ಕೂ ಮುನ್ನ ಸಭಿಕರೆಲ್ಲ ಎದ್ದು ನಿಂತು ಒಂದು ನಿಮಿಷದ ಮೌನಾಚರಣೆಯನ್ನು ಮಾಡಿ ಅಗಲಿದ ಚೇತನಕ್ಕೆ ಶ್ರದ್ಧಾಂಜಲಿಯನ್ನು ಸಲ್ಲಿಸಿದೆವು.ಮತ್ತೊಂದು ಹಾಡನ್ನು ರಮ್ಯಶ್ರೀ ಹಾಡಿದರು.

ನಮ್ಮ ಸಮಿತಿಯ ಸದಸ್ಯರಾದ ಶ್ರೀ ಸುಧೀoದ್ರರವರೂ ಕೂಡ ಎಚ್. ಎಸ್. ವಿ. ಯವರ ಜೊತೆಗಿನ ಕೆಲವು ಅಮೂಲ್ಯ ಘಟನೆಗಳನ್ನು  ಸಭೆಯೊಂದಿಗೆ ಸ್ಮರಿಸಿದರು.
ಧನ್ಯವಾದ ಸಮರ್ಪಣೆ ಮಧುರವಾದ ಪ್ರಾರ್ಥನೆಯನ್ನು ಸೊಗಸಾಗಿ ಹಾಡಿದ ಕುಮಾರಿ ರಮ್ಯಶ್ರೀಯವರಿಗೆ ಧನ್ಯವಾದಗಳನ್ನು ಅರ್ಪಿಸಲಾಯಿತು. 
ನಂತರ ಎಲ್ಲರನ್ನೂ ಸ್ವಾಗತಿಸಿದ ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷರಿಗೂ, ಕಾರ್ಯಕ್ರಮಕ್ಕೆ
ಅತ್ಯಂತ ಸೊಗಸಾದ ನಿರೂಪಣೆಯನ್ನು ಮಾಡಿದ ಶ್ರೀಮತಿ ಚೇತನಾ ಹೆಗಡೆ ಅವರಿಗೂ ಈ ಸಭಾಂಗಣವನ್ನು ಒದಗಿಸಿ ಕೊಟ್ಟ ಶ್ರೀ ವಿನಾಯಕ ದೇವಸ್ಥಾನದ ಬಳಗಕ್ಕೂ, ಕಡೆಯದಾಗಿ ಶಿವರಾಮ ಕಾರಂತ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರಿಗೂ  ಬಹಳ ಮುಖ್ಯವಾಗಿ  ನಮ್ಮ ವೇದಿಕೆಯ ಯಶಸ್ಸಿಗೆ ಕಾರಣರಾದ  ನಿಮ್ಮೆಲ್ಲರಿಗೂ ನಾನು ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ.
ಧನ್ಯವಾದಗಳೊಂದಿಗೆ
ಕಾರ್ಯದರ್ಶಿ: ಮಂಜುಳಾ ಭಾರ್ಗವಿ

Posted 11/6/2025




No comments:

Post a Comment