Thursday, July 24, 2025

BHAJANE AT SUNANDI OLDAGE HOME - 24

 Thursday, 24th July 2025

Sunandi Oldage Care Home, KodigeHalli, Bengaluru.

Another divine session of Bhajane/Satsang completed for senior residents of Sunandi Vraddhashrama along with Ramakrishna Bhat (Parabrahma VittalaDasa)




Some of the residents also join in singing bhajans and actively participate.




After Shankaraya, Mangala Song, Upanyasa about Bhagavanthana Nama Sankeerthane and the Mangalarathi.


That was a small service for people who are away from home and who are in pain due to physical ailments.

Lokaa Samasthaa Sukhino Bhavanthu.....

May God Bless All.


Posted 25/7/2025


Wednesday, July 23, 2025

GARDEN BY SU - RESTAURANT

 Saturday, 19th July 2025

Garden By Su, Jayanagara, Bengaluru

That was Family together for celebrating "LAHARI" s  Happy Birthday.

Lahari, Shubha's daughter turning 19 on 20th July.




The restaurant had Asian, Japanese, Italian, Thai, Salad and Fast Food, Deserts and Beverages.






We were 9 + 2 kids

Me and Mom, Raghu Shubha and Lahari,

Ravi, Vidya and Urvi, Rishi, Kavitha and Atharv




Food was Tasty.....

FAMILY

HAPPY BIRTHDAY LAHARI...... 


GOD BLESS ALL....


Posted 23/7/2025


Tuesday, July 22, 2025

‘ವೃಕ್ಷ ಮೋಹ’ - ಶೋಭಾ ಸೋಮಯಾಜಿ

 July 21, 2025

ನಮ್ಮ ಕಾಲೇಜಿನ ಗ್ರೌಂಡ್ ನ ಮಧ್ಯದಲ್ಲೊಂದು ಪುಟ್ಟದೊಂದು ಮಾವಿನಮರವಿದೆ. ಅದನ್ನು ಯಾವುದೋ ಒಂದು ಸಂದರ್ಭದಲ್ಲಿ ನಮ್ಮ ಯಾವುದೋ ಮಗು ನೆಟ್ಟಿದ್ದಿರಬಹುದು. ಯಾಕೆಂದರೆ ನಮಗೊಂದಿಷ್ಟು ಜನಕ್ಕೆ ‘ವೃಕ್ಷ ಮೋಹ’ ಇರುವ ಕಾರಣ ಸೂಕ್ತ ಜಾಗ ಕಂಡಲ್ಲೆಲ್ಲ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ನಮ್ಮಲ್ಲಿ ಆಗುತ್ತಿರುತ್ತದೆ. ಆ ಗಿಡ ನೆಟ್ಟ ಘಳಿಗೆಯೇ ಸರಿ ಇಲ್ಲವೇನೋ? ಅದು ಚಿಗುರಿ ಒಂದೆರಡಡಿ ಬೆಳೆದಾಗ ಹಲವಾರು ಸಲ ಕಟ್ಟಡ ನಿರ್ಮಾಣದ ಸಾಮಾನು ಸರಂಜಾಮುಗಳನ್ನು ತರುವ ವಾಹನಗಳು ಅದರ ಮೇಲೇ ಸವಾರಿ ಮಾಡಿ ಅದನ್ನು ನೆಲಸಮ ಮಾಡಿದ್ದವು. ಛೇ! ಆ ಗಿಡ ಹಾಳಾಯಿತಲ್ಲಾ ಎಂದು ನಾವು ಚಿಂತಿಸುತ್ತಿರುವಾಗಲೇ ಅದು ಪುನಃ ಚಿಗುರ ತೊಡಗುತ್ತಿತ್ತು. ನಾವು ಗ್ರೌಂಡಿನ ಮಧ್ಯೆ ನಡಿಗೆಗೆ ಪೇವರ್ಸ್ ಹಾಕಿದ ಮೇಲೆ ಅಲ್ಲಿ ವಾಹನ ಸಂಚಾರ ಆಗದೇ ಇದ್ದ ಕಾರಣ ಕಳೆದ ಒಂದೆರಡು ವರ್ಷಗಳಲ್ಲಿ ಅದು ಚೆನ್ನಾಗಿ ಬೆಳೆದು ಸುಮಾರು ಆರಡಿಗೂ ಮೀರಿದ ಎತ್ತರ ಹಾಗೂ ಮೂರ್ನಾಲ್ಕಡಿಗೂ ಮೀರಿದ ಅಗಲಕ್ಕೆ ವಿಸ್ತರಿಸಿ ಎಲ್ಲರ ಕಣ್ಮನ ಸೆಳೆಯುವಂತೆ ಹುಲುಸಾಗಿ ಬೆಳೆದು ಮನಸ್ಸಿಗೆ ಹರುಷ ತಂದಿತ್ತು. ಇನ್ನಾದರೂ ಅದು ನಿರುಮ್ಮಳವಾಗಿ ಬೆಳೆಯುವ ಸಾಧ್ಯತೆ ಇದೆಯಲ್ಲ ಎಂದು ಯೋಚಿಸಿ ಖುಷಿಯಾಯಿತು. 


ಅಯ್ಯೋ! ಅದರ ದುರಂತದ ಬದುಕು ಮರುಕಳಿಸಿತು! ಈಗ್ಯೆ ಒಂದೂವರೆ ತಿಂಗಳ ಹಿಂದೆ ಬಿರುಮಳೆಯಲ್ಲಿ, ಬೀಸುಗಾಳಿಯ ಮಧ್ಯೆ ಸಿಡಿಲಿನ ಹೊಡೆತಕ್ಕೆ ಅದರ ರೆಂಬೆ ಕೊಂಬೆಗಳು ಛಿದ್ರಗೊಂಡು ಮರದಿಂದ ಬೇರ್ಪಟ್ಟು ಪುನಃ ಆ ಮರದ ಮೂರಡಿ ಕಾಂಡ ಮಾತ್ರ ಬೋಳು ಬೋಳಾಗಿ ಉಳಿಯಿತು. ಇನ್ನು ಆ ಮರದ ಕಥೆ ಮುಗಿದೇ ಹೋಯಿತು ಎಂದು ನಾವೆಲ್ಲ ತೀರ್ಮಾನಿಸಿದೆವು. ಶೋಕಾಚರಣೆಯೂ ನಡೆಯಿತು! ಆಶ್ಚರ್ಯಕರವಾಗಿ ಹದಿನೈದು ದಿನಗಳಲ್ಲಿ ಅದು ಚಿಗುರೊಡೆಯತೊಡಗಿತು. ಆ ಕಾಂಡದ ಆಚೀಚೆ ಕಂದು-ಕೆಂಪು ಬಣ್ಣದ ಎಳೆಯ ಎಲೆಗಳು ಕಾಣಿಸಿದಾಗ ಆ ಮರದ “ಧೀ ಶಕ್ತಿ”ಯ ಬಗ್ಗೆ ಹೆಮ್ಮೆ ಎನಿಸಿತು. ಆ ಮರ “ಎಂತಹ ಕಷ್ಟಗಳು ಬಂದರೂ ನಾನು ಅದನ್ನು ಎದುರಿಸಿ ಬದುಕಿಯೇ ಬದುಕುತ್ತೇನೆ” ಎಂಬ ಮನಸ್ಥಿತಿ ಹೊಂದಿ ಹೋರಾಡಿ ಪುನಃ ಬದುಕಿನತ್ತ ಕೈ ಚಾಚುತ್ತಿರುವುದನ್ನು ಕಂಡು ಅದಕ್ಕೆ ತಲೆಬಾಗಿ ನಮಿಸುವಂತಹ ಭಕ್ತಿಪೂರ್ವಕ ಗೌರವ ಹುಟ್ಟಿದ್ದಂತೂ ನಿಜ!

ನಾವು ನಿಸರ್ಗವನ್ನು ಗಮನಿಸುತ್ತಿದ್ದರೆ ಇಂತಹ ಎಷ್ಟೋ ಸಂಗತಿಗಳು ನಮಗೆ ಬದುಕಿನ ದೊಡ್ಡ ಪಾಠಗಳನ್ನು ಅರುಹುವುದನ್ನು ಕಾಣಬಹುದಲ್ವೆ? “ಬರೀ ಮನುಷ್ಯ ಮಾತ್ರ ಹೋರಾಟಗಾರನಲ್ಲ; ಕ್ರಿಯಾಶೀಲನಲ್ಲ. ಅದಕ್ಕೂ ಮೀರಿದ ಶಕ್ತಿ ತನ್ನಲ್ಲೂ ಇದೆ” ಎನ್ನುವ ಸಂದೇಶವನ್ನು ಕೊಡುತ್ತಿರುವ ನಮ್ಮ ಮಾವಿನ ಮರದ ಬಗ್ಗೆ ಹೆಚ್ಚಿಗೆ ಹೇಳಲು ನನ್ನಲ್ಲಿ ಪದಗಳಿಲ್ಲ. ಇನ್ನಾದರೂ ಆ ಮರ ಸಮೃದ್ಧವಾಗಿ ಬೆಳೆಯಲಿ. ಯಾವುದೇ ತೊಂದರೆಗಳು ಅದನ್ನು ಬಾಧಿಸದಿರಲಿ ಎಂದು ನಾನು ಹೃನ್ಮನದಿಂದ ಪ್ರಾರ್ಥಿಸುತ್ತೇನೆ. ನೀವೂ ನನ್ನ ಜೊತೆಗೆ ದನಿಗೂಡಿಸುತ್ತೀರಲ್ಲವೆ?


Posted 23/7/2025

BNNSS ANNUAL DAY

 Sunday, July 20, 2025

SRI CONVENTION HALL, BUVANESHWARINAGARA, BENGALURU.

BUVANESHWARINAGARA NAGARIKARA SEVA SAMITHI (BNNSS)

The General Body Meeting, Grand lunch and cultural program of the above Samithi took place at the Sri Convention Hall BhuvaneshwariNagara, Dasarahalli Main road, above Reliance Super market.




President of BNNSS, Sri Renuka Hegde, presented the annual report and the treasurer, Narendra Babu preseted the accounts for the year 2024 - 25.

RENUKA HEGDE






Sri Ramakrishna T N and Srimathi Poornima Kulkarni were felicitated for their achievement in their field.


Grand Lunch was provided with Holige, Akkirotti and other usual items served with buffette system.


Post Lunch session was Cultural program, dance, songs, skit, mimicri etc and entertained the audience.




As we were to attend Shivarama Karanth Vedike Program at R T Nagara, we left the place by 3 pm.


Posted 22/7/2025








Monday, July 21, 2025

"ಸುಧಿ" - ಕೃತಿ ಬಿಡುಗಡೆ - ಶಿವರಾಮ ಕಾರಂತ ವೇದಿಕೆ

 ಭಾನುವಾರ, ಜುಲೈ 20, 2025

ತರಳಬಾಳು ಕೇಂದ್ರ ಮಿನಿ ಹಾಲ್, ಆರ್. ಟಿ. ನಗರ, ಬೆಂಗಳೂರು.

ಶಿವರಾಮ ಕಾರಂತ ವೇದಿಕೆಯ ಜುಲೈ ತಿಂಗಳ ಕಾರ್ಯಕ್ರಮವು, ಜಿ. ವಿ. ರೇಣುಕಾ  ಅವರ "ಸುಧಿ" ವೈಚಾರಿಕ ಕೃತಿ ಲೋಕಾರ್ಪಣೆಯೊಂದಿಗೆ ಸಂಪನ್ನಗೊಂಡಿತು.




ಸಂಜೆ 4 ಗಂಟೆಗೆ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ನಂತರ, ವೇದಿಕೆಯ ಅಧ್ಯಕ್ಷೆ  ದೀಪಾ ಫಡ್ಕೆ ಅವರು ಪ್ರಾಸ್ತಾವಿಕ ನುಡಿ ಹಾಗೂ ಸ್ವಾಗತವನ್ನು ಕೋರಿದರು.


ಶ್ರೀಮತಿ ಚೇತನಾ ಹೆಗಡೆ ಯವರಿಂದ ಕೃತಿ ಪರಿಚಯವಾದ ನಂತರ, ಮುಖ್ಯ ಅತಿಥಿ ಅನ್ನದಾನೇಶ್ ಹರೀಶ್ ಅವರು ಕೃತಿಯ ಬಗ್ಗೆ ಮಾತನಾಡಿದರು.
ಡಾ ಅನ್ನದಾನೇಶ್ 

ಚೇತನಾ ಹೆಗಡೆ 

ಲೇಖಕಿ ಜಿ. ವಿ. ರೇಣುಕ ಅವರು ಜೀವನದ ತಮ್ಮ ಅನುಭವವನ್ನು ಅನುಸಂಧಾನದ ರೂಪದಲ್ಲಿ ಕೃತಿಯನ್ನು  ಹಾಗೂ ಅವರ ಸುಮಾರು 4000 ದಷ್ಟು ವಚನಗಳನ್ನು ಬರೆದಿರುವುದು ಎಂದು ತಿಳಿಸಿದರು.
ಜಿ. ವಿ. ರೇಣುಕಾ
ವೇದಿಕೆಯ ಕೋಶಾಧಿಕಾರಿ ಜಯರಾಮ ಸೋಮಯಾಜಿ ಅವರು ಡಾ ಅನ್ನದಾನೇಶ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.


ಹಲವಾರು ದಿನಪತ್ರಿಕೆಗಳಲ್ಲಿ ಕಾರ್ಯಕ್ರಮದ ಸುದ್ದಿಯನ್ನು ಪ್ರಕಟಿಸಲಾಯಿತು.




ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

ಶ್ರೀ ಸುಧೀಂದ್ರ ಅವರ ವಂದನಾರ್ಪಣೆ ಯೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.

ವರದಿ: ಮಂಜುಳಾ ಭಾರ್ಗವಿ,  ಕಾರ್ಯದರ್ಶಿ , ಶಿವರಾಮ ಕಾರಂತ ವೇದಿಕೆ.
ಎಲ್ಲರಿಗೂ ನಮಸ್ಕಾರ.
ಶಿವರಾಮ ಕಾರಂತ ವೇದಿಕೆಯ ಜುಲೈ ತಿಂಗಳ 20 ನೇ ತಾರೀಕು, ಭಾನುವಾರದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ವಚನಕಾರ್ತಿಯವರಾದ ಶ್ರೀಮತಿ ಜಿ. ವಿ. ರೇಣುಕಾ ರವರ " ಸುಧಿ "ಎಂಬ ಪುಸ್ತಕ ಬಿಡುಗಡೆಯನ್ನು ಮಾಡುವ ಮೂಲಕ ನೆರವೇರಿಸಲಾಯಿತು. 
ಇದಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದವರು, ಡಾ. ಅನ್ನದಾನೇಶ್. ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕರು.   ಕಾರ್ಯಕ್ರಮದಲ್ಲಿ ಹಲವಾರು ಸದಸ್ಯರು ಭಾಗವಹಿಸಿದ್ದು ಬಹಳ ಹೆಮ್ಮೆಯ ಸುದ್ದಿ. ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮೊದಲಿಗೆ  ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಲಾಯಿತು. ಮತ್ತು  ಇದಾದ ಬಳಿಕ ನಮ್ಮ ಕಾರಂತ ವೇದಿಕೆಯ ಅಧ್ಯಕ್ಷರು ಡಾ. ದೀಪ ಫಡ್ಕೆ ಅವರು ಪುಸ್ತದ ಬಗ್ಗೆ ಒಂದೆರಡು ಮಾತುಗಳನ್ನು ಆಡುತ್ತಾ, ಅತ್ಯಂತ ಅಚ್ಚುಕಟ್ಟಾಗಿ ವೇದಿಕೆಗೆ ಶುಭ ಕೋರಿದರು.ತಮ್ಮ ಪ್ರಾಸ್ತಾವಿಕ ನುಡಿಗಳ ಮೂಲಕ  ಎಲ್ಲರನ್ನುದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ವಾಗತ ಕೋರಿದರು.
ನಂತರ.  ' ಸುಧಿ ' ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.  ನಂತರ ಮೌoಟ್ ಕಾರ್ಮಲ್ ಕಾಲೇಜಿನ ಸಹ ಪ್ರಾಧ್ಯಪಕರಾದ ಶ್ರೀಮತಿ ಚೇತನಾ ಹೆಗಡೆ ಅವರು ಸುಧಿ ಕೃತಿಯ ಪರಿಚಯವನ್ನು ಬಹಳ ಚಂದದ ರೀತಿಯಲ್ಲಿ ಮಾಡಿದರು. 
ನಂತರ ಜಿ. ವಿ ರೇಣುಕಾರವರನ್ನು ಪುಸ್ತಕದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವoತೆ, ಕೇಳಿಕೊಳ್ಳಲಾಯಿತು. ಹಾಗೆಯೇ ಜಿ. ವಿ ರೇಣುಕಾರವರು, ತಮ್ಮ ಜೀವನದಲ್ಲಿ ಸಾಹಿತ್ಯದ ಹಾದಿಯ ಬಗ್ಗೆ, ಕೆಲವು ಅದ್ಭುತವಾದ ಅನುಭವವನ್ನು ವೇದಿಕೆಯೊಂದಿಗೆ ಹಂಚಿಕೊಳ್ಳಲಾಯಿತು. ಇದಾದ ನಂತರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಬಂದಿದ್ದ ಡಾ. ಅನ್ನದಾನೇಶ್ ರವರು ಸುಧಿ ಪುಸ್ತಕದ ಲೇಖಕಿಗೆ ಶುಭ ಕೋರುತ್ತಾ, ನಮ್ಮ ವೇದಿಕೆಯ ಬಗ್ಗೆ ಹೆಮ್ಮೆಯ ನುಡಿಗಳನ್ನಾಡುತ್ತಾ, ತಮ್ಮ ಮಾತುಗಳನ್ನು  ಪ್ರಾರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ, ವೈಚಾರಿಕತೆ, ಮಹಿಳೆಯರು ಬೆಳೆದು ಬಂದ ಹಾದಿ, ಆಧುನಿಕ ಸಮಾಜದಲ್ಲಿ ಮಹಿಳಾ ಸಾಹಿತ್ಯದ ಕುರಿತು, ಹಾಗೂ ವಚನ ಸಾಹಿತ್ಯದಲ್ಲಿ ಮಹಿಳೆಯರ ಸಾಧನೆಗಳು ಹೀಗೆ ಹಲವಾರು ವಿಷಯದ ಬಗ್ಗೆ ಒಂದು ಒಳ ನೋಟವನ್ನು ಬೀರುತ್ತಾ, ಸಾಹಿತ್ಯ ವಲಯದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ ಅಕ್ಕಮಹಾದೇವಿ, ಸಂಚಿ ಹೊನ್ನಮ್ಮನoತವರ ಹಿರಿಯರನ್ನು ಉದಾಹರಣೆಯಾಗಿ ನೀಡಿ, ತಮ್ಮ ಅಮೂಲ್ಯವಾದ ಅವರ ಸಮಯವನ್ನು ನಮ್ಮ ವೇದಿಕೆ, ಸ್ಮರಿಸುವಂತೆ ಮಾತನಾಡಿದರು.ನಂತರ  ಸಾಹಿತಿಗಳಾದ ಜಿ. ವಿ. ರೇಣುಕಾ ಹಾಗೂ ಡಾ. ಅನ್ನದಾನೇಶ್ ರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. 
ನಂತರ ನಮ್ಮ ವೇದಿಕೆಯ ಹಿರಿಯ ಸದಸ್ಯರಾದ ಶ್ರೀ ಸುಧೀoದ್ರ ಅವರು  ಧನ್ಯವಾದ ಸಮರ್ಪಣೆ ಮಾಡಿ,ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷರಿಗೂ, ಕಾರ್ಯಕ್ರಮಕ್ಕೆ  ನಿರೂಪಣೆಯನ್ನು ಮಾಡಿದ,  ಶಿವರಾಮ ಕಾರಂತ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರಿಗೂ ಈ ಸಭಾಂಗಣವನ್ನು ಒದಗಿಸಿ ಕೊಟ್ಟ ತರಳಬಾಳು ಸಂಸ್ಥೆಯವರಿಗೂ, ಕಡೆಯದಾಗಿ ಶಿವರಾಮ ಕಾರಂತ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರಿಗೂ  ಬಹಳ ಮುಖ್ಯವಾಗಿ  ನಮ್ಮ ವೇದಿಕೆಯ ಯಶಸ್ಸಿಗೆ ಕಾರಣರಾದ  ನಿಮ್ಮೆಲ್ಲರಿಗೂ ಅವರು ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿದರು.

ಧನ್ಯವಾದಗಳು.
ಕಾರ್ಯದರ್ಶಿ:               ಮಂಜುಳಾ ಭಾರ್ಗವಿ.

Posted 22/7/2025















SHANTHALA SOUNDS - FILMY MUSIC (DAY 3)

 Sunday, July 20, 2025

Chowdaih Memorial Hall, Bengaluru.

NIKHIL, CHANDRIKA

BIG NAMES IN THE INDUSTRY


Shanthala Sounds Golden Jubilee Celebrations continued on the third day with Filmy Music, with famous singers on stage with beautiful orchestra.



Number of professional singers like Mohan Jimpets, Nikhil, Chandrika Gururaj, Sinchana Dikshith, Anuradha Bhat, Samanvitha Sharma, shrathi Bhide, Manjula Gururaj.... presented their songs with orchestra background.

MANJULA GURURAJ

SHRATHI BHIDE

Top singers in the Industry Rajesh Krishnan, Vijaya Prakash rendered beautiful melodious songs to the much liking of the audience.

RAJESH KRISHNAN


VIJAY PRAKASH


Viji and Giri, Top men of SHANTHALA SOUNDS, is doing wonderful jobs running music industry at the same time encouraging upcoming singers and musicians.

After completing 50 years and presenting 3- day fantastic Music program, FREE, at the Prestigious Chowdiah Memorial Hall is great job.

Wishing the very best abd God's Blessing in the future for their magnificient work.

Posted 21/7/2025