Showing posts with label SHIVARAMA KARANTHA VEDIKE. Show all posts
Showing posts with label SHIVARAMA KARANTHA VEDIKE. Show all posts

Monday, April 20, 2026

ಗೆದ್ದ ದೊಡ್ಡಸ್ತಿಕೆ - ಕಾದಂಬರಿ ಪರಿಚಯ

 ಶನಿವಾರ, ಏಪ್ರಿಲ್ 18, 2026 

ಶಿವರಾಮ ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆ. 

ಶಿವರಾಮ ಕಾರಂತ ವೇದಿಕೆ ಹಮ್ಮಿಕೊಂಡ ಶಿವರಾಮ ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆ ಯಲ್ಲಿ ನನ್ನದೊಂದು ಸಣ್ಣ ಪ್ರಯತ್ನ. 



ಬೆಂಗಳೂರಿನ ಆರ್. ಟಿ. ನಗರದ ಶಿವರಾಮ ಕಾರಂತ ವೇದಿಕೆ, ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆಯನ್ನು ಆರಂಭಿಸಿದೆ. ಈ ಮಾಲಿಕೆಯಲ್ಲಿ ಜಯರಾಮ ಸೋಮಯಾಜಿ ಅವರು ಕಾರಂತರ "ಗೆದ್ದ ದೊಡ್ಡಸ್ತಿಕೆ " ಕಾದಂಬರಿಯ ಅವಲೋಕವನ್ನು ಮಾಡಿದ್ದಾರೆ.


ಉಡುಪಿಯ ಬಿರ್ತಿ, ಸಾಲಿಕೇರಿ ಮೂಲದ ಜಯರಾಮ ಸೋಮಯಾಜಿಯವರು ಎಮ್ ಎಸ್ಸಿ ಪದವೀಧರರು. ಅಧ್ಯಾಪನವನ್ನು ಅತ್ಯಂತ ಪ್ರೀತಿಯಿಂದ ಅನೇಕ ದಶಕಗಳ ಕಾಲ ಪೂರೈಸಿದ ಇವರು ಶಿಕ್ಷಕರಾಗಿ 15 ವರ್ಷ, ನೈಜೀರಿಯಾ, ಆಫ್ರಿಕಾದಲ್ಲಿ ಮತ್ತು 24 ವರ್ಷಗಳ ಕಾಲ ದುಬೈನಲ್ಲಿ ಕಾರ್ಯ ನಿರ್ವಹಿಸಿದವರು. ಪ್ರಸ್ತುತ ಬೆಂಗಳೂರಿನ ಶಿವರಾಮ ಕಾರಂತ ವೇದಿಕೆಯ ಕೋಶಾಧಿಕಾರಿಯಾಗಿರುವ ಜಯರಾಮ ಸೋಮಯಾಜಿ ಅವರ ಆಸಕ್ತಿಗಳಲ್ಲಿ ಕನ್ನಡ ಸಾಹಿತ್ಯದ ಓದೂ ಒಂದಾಗಿದೆ


ಶಿವರಾಮ ಕಾರಂತರು, ಭಾರತೀಯ ಕಾದಂಬರಿ ಲೋಕದ ಅತ್ಯಂತ ಮಹತ್ವದ ಹೆಸರು. ಅವರ ಹೆಸರಿನಲ್ಲಿ ಆರಂಭವಾದ ಸಂಸ್ಥೆ ಬೆಂಗಳೂರಿನ ಆರ್. ಟಿ. ನಗರದ 'ಶಿವರಾಮ ಕಾರಂತ ವೇದಿಕೆ', ಕಳೆದ ಮೂವತ್ತೆರಡು ವರ್ಷಗಳಿಂದ ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳನ್ನು ಸದ್ದಿಲ್ಲದೇ ಮಾಡಿಕೊಂಡು ಬಂದಿರುವ ಸಂಸ್ಥೆ. ಬೆಂಗಳೂರಿನ ತರಳಬಾಳು ಜಗದ್ಗುರು ಶ್ರೀ ಶಿವಾಚಾರ್ಯ ಮಹಾಸ್ವಾಮಿಗಳ ಶುಭಾಶೀರ್ವಾದಗಳೊಂದಿಗೆ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರಿಂದ 1993 ರಲ್ಲಿ ಉದ್ಘಾಟನೆಗೊಂಡಿತ್ತು. ನಾಡಿನ ಪ್ರಮುಖ ಸಾಹಿತಿಗಳಾದ, ಎಸ್ ಎಲ್ ಶೇಷಗಿರಿರಾವ್, ವೆಂಕಟಸುಬ್ಬಯ್ಯ, ಯು. ಆರ್. ಅನಂತಮೂರ್ತಿ, ಹಾ. ಮಾ. ನಾಯಕ್, ನಿಸಾರ್ ಅಹಮದ್ ಕೆ ಸತ್ಯನಾರಾಯಣ, ಜಯಂತ ಕಾಯ್ಕಿಣಿ, ಎಸ್. ಆರ್. ವಿಜಯಶಂಕರ, ಎಂ. ಎಸ್ ಆಶಾದೇವಿ, ಲಲಿತಾ ಸಿದ್ಧಬಸವಯ್ಯ ಹೀಗೆ ಸಾಹಿತ್ಯ ಲೋಕದ ಬಹುತೇಕ ಎಲ್ಲಾ ಸಾಹಿತಿಗಳು ಶಿವರಾಮ ಕಾರಂತ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸಗಳನ್ನು ನೀಡಿದ್ದಾರೆ. ಈ ಬಾರಿ ಕಾರಂತ ವೇದಿಕೆ, ಕಾರಂತರ ಕಾದಂಬರಿಗಳ ಅವಲೋಕನವನ್ನು ಕೈಗೆತ್ತಿಕೊಂಡಿದೆ. ನಾಡಿನ ಹಿರಿಯ, ಕಿರಿಯ ವಿಮರ್ಶಕರು, ಕವಿಗಳು, ಕತೆಗಾರರು ಕಾರಂತರ ಒಂದೊಂದು ಕಾದಂಬರಿಯನ್ನು ಪರಿಚಯಿಸಲಿದ್ದಾರೆ, ಆ ಮೂಲಕ ವಿದ್ಯಾರ್ಥಿಗಳು, ಹೊಸ ಓದುಗರಿಗೆ ಕಾರಂತರ ಸಾಹಿತ್ಯ ಮತ್ತೆ ತಲುಪಲಿ ಎನ್ನುವ ಮಹದಾಸೆ ಶಿವರಾಮ ಕಾರಂತ ವೇದಿಕೆಯದು.

ಈ ಒಂದು ಅವಕಾಶಕ್ಕೆ ಶಿವರಾಮ ಕಾರಂತ ವೇದಿಕೆ, ಆರ್. ಟಿ. ನಗರ, ಬೆಂಗಳೂರು ಇವರಿಗೆ ಧನ್ಯವಾದಗಳು.


Posted 21/4/2026

Sunday, March 22, 2026

ಶಿವರಾಮ ಕಾರಂತ ವೇದಿಕೆ - ಮುದ್ದಣನ ಮನೋರಮೆ

 ಭಾನುವಾರ, ಮಾರ್ಚ್ 22, 2026 

ತರಳಬಾಳು ಕೇಂದ್ರ ಮಿನಿ ಹಾಲ್, ಆರ್. ಟಿ. ನಗರ, ಬೆಂಗಳೂರು 

ಸ್ತ್ರೀ ಧ್ವನಿ - ಮುದ್ದಣನ ಮನೋರಮೆ 






ಪ್ರಾರ್ಥನೆ - ರಮ್ಯಾಶ್ರೀ 

ಶಿವರಾಮ ಕಾರಂತ ವೇದಿಕೆ ಇವರ ಮಾರ್ಚ್ ತಿಂಗಳ ವಿಶೇಷ ಕಾರ್ಯಕ್ರಮ " ಸ್ತ್ರೀ ಧ್ವನಿ- ಮುದ್ದಣನ ಮನೋರಮೆ" ಸಂಪನ್ನ ಗೊಂಡಿತು. 



ಡಾ. ನಾ ದಾಮೋದರ ಶೆಟ್ಟಿ 


ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಡಾ ನಾ ದಾಮೋದರ ಶೆಟ್ಟಿ ಮತ್ತು ಪ್ರೊ. ಆರ್ ಸುನಂದಮ್ಮ ಮುಖ್ಯ ಅತಿಥಿಗಳಾಗಿ "ಮುದ್ದಣನ ಮನೋರಮೆಯವರ  ಸ್ವಾರಸ್ಯಕರ ಪ್ರಸಂಗಗಳನ್ನು ವಿವರಿಸಿದರು. 

ಪ್ರೊ. ಬಿ. ಸುನಂದಮ್ಮ 









ಕುಮಾರಿ ರಮ್ಯಾ ಶ್ರೀ ಅವರಿಂದ ಪ್ರಾರ್ಥನೆ ಯಾದ ನಂತರ ವೇದಿಕೆಯ ಅಧ್ಯಕ್ಷೆ ಡಾ ದೀಪಾ ಫಡ್ಕೆ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿ ಎಲ್ಲರನ್ನೂ ಸ್ವಾಗತಿಸಿದರು. 






ಸೂರ್ಯನಗೂ, ಚಂದ್ರನಗೂ .. ಹಾಡು 

ಉದಯವಾಣಿ  23/3/2026 


ಶ್ರೀಮತಿ ಚೇತನ ಹೆಗಡೆ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಶ್ರೀಮತಿ ಸಂಧ್ಯಾ ಅವರು ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. 

Posted  23/3/2026 






 

Sunday, November 16, 2025

ಕನ್ನಡ ರಾಜ್ಯೋತ್ಸವ 2025 - ಶಿವರಾಮ ಕಾರಂತ ವೇದಿಕೆ

 ಭಾನುವಾರ, ನವಂಬರ್ 16, 2025 

ತರಳಬಾಳು ಕೇಂದ್ರ, ಮಿನಿ ಹಾಲ್, ಆರ್. ಟಿ. ನಗರ, ಬೆಂಗಳೂರು. 

ಶಿವರಾಮ ಕಾರಂತ ವೇದಿಕೆಯ ರಾಜ್ಯೋತ್ಸವ ಕಾರ್ಯಕ್ರಮ ಅತಿಥಿ ಗಳಿಂದ ಕನ್ನಡದ ಬಗ್ಗೆ ಭಾಷಣ, ನೃತ್ಯ, ಹಾಡುಗಳಿಂದ ಸಂಪನ್ನ ಗೊಂಡಿತು. 



ನಮಸ್ಕಾರ, 

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಒಂದಷ್ಟು ಕನ್ನಡದ ಬಗ್ಗೆ ಮಾತುಕತೆ.
 ಕನ್ನಡ ಕಲಿಕೆಯ ಸವಾಲುಗಳು ಇದರ ಬಗ್ಗೆ ಮತ್ತು ಕನ್ನಡ ಪ್ರೀತಿಯ ಕುರಿತು ಅತಿಥಿಗಳು ಮಾತಾಡುತ್ತಾರೆ. ಬನ್ನಿ



ಕಾರ್ಯಕ್ರಮವು ನಾಡಗೀತೆಯೊಂದಿಗೆ ಪ್ರಾರಂಭವಾಗಿ, ಕಾರ್ಯದರ್ಶಿ ಮಂಜುಳ ಭಾರ್ಗವಿ ಅವರು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು . ವೇದಿಕೆಯ ಉಪಾಧ್ಯಕ್ಷ ವೀರಶೇಖರ ಸ್ವಾಮಿಯವರು ಅತಿಥಿಗಳನ್ನು, ಸಾಭಿಕರನ್ನು ಸ್ವಾಗತಿಸಿದರು. 


ವೇದಿಕೆಯ ಅಧ್ಯಕ್ಷೆ ಡಾ. ದೀಪಾ ಫಡ್ಕೆ ಅವರು ಕನ್ನಡ  ಭಾಷೆ, ಕಲಿಕೆ, ಬಳಕೆಯ  ಬಗ್ಗೆ  ಪ್ರಾಸ್ತಾವಿಕ ನುಡಿಗಳನ್ನು ಆಡಿದರು. 


ಕುಮಾರಿ ಅನ್ವಿತ ಅವಳಿಂದ ಒಂದು ಕನ್ನಡ ಹಾಡಿಗೆ ಸುಂದರವಾದ ನೃತ್ಯ ಪ್ರದರ್ಶನವನ್ನು ಮಾಡಿದಳು. 


ಶ್ರೀಮತಿ ಸಂಧ್ಯಾ ಹೆಗಡೆ ದೊಡ್ಡಹೊಂಡ 

ಶ್ರೀ  ಡುಂಡಿ ರಾಜ್ 

ಶ್ರೀ ಚಿದಂಬರ ಕೋಟೆ ಅವರು ಎರಡು ಕನ್ನಡ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. 



ಸಂಧ್ಯಾ ಹೆಗಡೆ ಅವರು ಕನ್ನಡ ಭಾಷೆ, ಕಲಿಕೆ, ಸವಾಲುಗಳು  ಬಗ್ಗೆ ದೀರ್ಘವಾಗಿ ಭಾಷಣ ಮಾಡಿದರು. 
ಹಾಸ್ಯ ಕವಿ, ನಾಟಕ ಗಾರ ಡುಂಡಿ ರಾಜ್ ಅವರು ತಮ್ಮ ಹನಿ ಕವನಗಳು , ಚುಟುಕುಗಳ ಮೂಲಕ ಸಾಭಿಕರನ್ನು ನಗೆ ಗಡಲಲ್ಲಿ ತೇಲಿಸಿದರು. 




ಶ್ರೀಮತಿ ಚೇತನ ಹೆಗಡೆ ಅವರು ಧನ್ಯವಾದ ಸಮರ್ಪಿಸಿದರು. 
ಕಾರ್ಯದರ್ಶಿ ಶ್ರೀಮತಿ ಮಂಜುಳ ಭಾರ್ಗವಿ ಅವರು ಕಾರ್ಯಕ್ರಮವನ್ನು ಅಚ್ಚ ಕಟ್ಟಾಗಿ ನಿರೂಪಣೆ ಮಾಡಿದರು. 




ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರಿಂದ ವರದಿ:

ನಮಸ್ಕಾರ, ಎಲ್ಲರಿಗೂ. 🙏
ಈ ತಿಂಗಳ ಅಂದರೆ ನವೆಂಬರ್  16 ಭಾನುವಾರ. ಸಂಜೆ ನಾಲ್ಕಕ್ಕೆ ನಮ್ಮ ವೇದಿಕೆಯ ವತಿಯಿಂದ, ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಬಹಳ ಚಂದವಾಗಿ ನೆರವೇರಿತು. ಅದರ  ಕುರಿತು ಒಂದು ವರದಿ.

ಸಂಜೆ ನಾಲ್ಕು ಗಂಟೆ ಹದಿನೈದು ನಿಮಿಷಕ್ಕೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭವಾಯಿತು. 

ನಮ್ಮ ಕಸ್ತೂರಿ ಕನ್ನಡದ ಕಂಪು ಮತ್ತು ಶಿವರಾಮ ಕಾರಂತ ವೇದಿಕೆಯ ಕಾರ್ಯ ವೈಖರಿಗಳನ್ನು  ಕಲೆ ಹಾಕುತ್ತ ಮಾತಿಗೆ ತೊಡಗಿದೆ. ಮೊದಲಿಗೆ ಕಾರ್ಯಕ್ರಮವನ್ನು ನಾಡಗೀತೆಯ ಮೂಲಕ ಶುಭಾರಂಭ ಮಾಡಿದೆವು. ನಾಡಗೀತೆಯ ಧ್ವನಿಮುದ್ರಣ ದ ಜೊತೆಗೆ ನಾವೆಲ್ಲರೂ ಹಾಡುತ್ತಾ ತಾಯಿ ಭುವನೇಶ್ವರಿ ಗೆ ನಮನಗಳನ್ನು ಸಲ್ಲಿಸಿದೆವು.
ನಂತರ, ಕನ್ನಡದ ಕವಿಗಳು ತಾಯಿ ಭುವನೇಶ್ವರಿ ಯ ಕೀರ್ತಿಯನ್ನು ನೂರಾರು ಹಾಡುಗಳನ್ನು ರಚಿಸುವ ಮೂಲಕ ಅವಳನ್ನು ಸ್ತುತಿಸಿದ್ದಾರೆ. ಅಂತಹ ಒಂದು ಹಾಡಿಗೆ ಮೌಂಟ್ ಕಾರ್ಮೆಲ್ ವಿದ್ಯಾರ್ಥಿನಿ ಕುಮಾರಿ ಅನ್ವಿತಾಳಿಂದ ಕನ್ನಡಾಂಬೆಗೆ ನೃತ್ಯ ನಮನವನ್ನು ಸಲ್ಲಿಸಲಾಯಿತು.

ಸಭಾ ಕಾರ್ಯಕ್ರಮವನ್ನು ಆರಂಭಿಸುತ್ತಾ,ಶಿವರಾಮ ಕಾರಂತ ವೇದಿಕೆ ಮೂರು ದಶಕಗಳಿಂದ  ಕನ್ನಡದ ಕಾರ್ಯಕ್ರಮ ಗಳನ್ನು ಮಾಡುತ್ತಾ ಕನ್ನಡದ ಹಣತೆ ಹಚ್ಚಿಕೊಂಡು ಬಂದಿದೆ. ಇಂದಿನ ಕಾರ್ಯಕ್ರಮ ಕೂಡ ಮತ್ತೊಂದು ಹಣತೆಯೇ ಎಂದು ಹೇಳುತ್ತಾ

ವೇದಿಕೆಗೆ  ಮುಖ್ಯ ಅತಿಥಿಗಳು ಶ್ರೀ ಡುಂಡಿರಾಜ್ ಸರ್ ಅವರು , ಕನ್ನಡ ಕಲಿಕೆಯ ಸವಾಲು ಇದರ ಬಗ್ಗೆ ಉಪನ್ಯಾಸ ನೀಡಲಿರುವ ಸಂಧ್ಯಾ ಹೆಗಡೆ ದೊಡ್ಡ ಹೊಂಡ ಮತ್ತು ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷರಾದ ದೀಪಾ ಫಡ್ಕೆಯವರು ವೇದಿಕೆಯನ್ನು ಅಲಂಕರಿಸ ಬೇಕಾಗಿ ಕೋರಿಕೊಳ್ಳಲಾಯಿತು.

ಕಾರ್ಯಕ್ರಮ ದ ಮೊದಲ ಭಾಗವಾದ ಸ್ವಾಗತ ಕೋರುವಿಕೆಯು ನಮ್ಮ ಶಿವರಾಮ ಕಾರಂತ ವೇದಿಕೆಯ ಉಪಾಧ್ಯಕ್ಷರಾದ, ಶ್ರೀ ವೀರಶೇಖರ ಸ್ವಾಮಿ ಸರ್ ರವರಿಂದ ಬಹಳ ಅಚ್ಚುಕಟ್ಟಾಗಿ ಮಾಡಲಾಯಿತು. ಹಾಗೆ ಪ್ರಾಸ್ತಾವಿಕ ನುಡಿಗಳನ್ನಾಡುವುದಕ್ಕೆ, ನಮ್ಮ ವೇದಿಕೆಯ ಅಧ್ಯಕ್ಷರಾದ  ಡಾ.ದೀಪಾ ಫಡ್ಕೆ ಅವರನ್ನು ಕೇಳಿಕೊಳ್ಳಲಾಯಿತು.   ದೀಪಾ ಫಡ್ಕೆ ಅವರು ಕನ್ನಡ ದ ಪ್ರಸ್ತುತ ಪರಿಸ್ಥಿತಿಗಳ ಬಗ್ಗೆ ಮಾತನಾಡಿ ಇಂದಿನ ಪೀಳಿಗೆ ಕನ್ನಡ ಮಾತನಾಡುವ, ಬರೆಯುವ ಓದುವ ಪ್ರಕ್ರಿಯೆ ಯಲಿ ಕಂಡು ಬರುವ ಸವಾಲುಗಳನ್ನು ಕುರಿತು ಮಾತನಾಡಿ ಇದರ ಬಗ್ಗೆ ಉಪನ್ಯಾಸ ಏರ್ಪಡಿಸಿ ಅದರ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎನ್ನುತ್ತಾ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಬಹಳ ಚಂದದ ಪ್ರಾಸ್ತವಿಕ ಮತ್ತು ಸ್ವಾಗತವನ್ನಾಲಿಸಿದ ನಾವುಗಳು, ಅತಿಥಿಗಳ ಭಾಷಣ ಆಲಿಸಲು ಸಿದ್ದರಾದೆವು. 

ಭಾಷೆಯ ವಿಷಯ ಪ್ರಸ್ತಾಪ ಆದಾಗ ಎಲ್ಲಾ ಕನ್ನಡ ಭಾಷೆಯ ವಿದ್ವಾಂಸರ ಅತಿ ದೊಡ್ಡ ಆತಂಕ ಕನ್ನಡ ಭಾಷೆಗಿರುವ ಅಳಿವು ಉಳಿವಿನ ಬಗ್ಗೆ. ಇದರಲ್ಲಿ ಮಕ್ಕಳ ಕಲಿಕೆಯ ಸವಾಲೂ ತುಂಬಾ ದೊಡ್ಡದೇ. ಇದರ ಕುರಿತು ಮಾತಾಡುತ್ತಾರೆ ಡಾ.ಸಂಧ್ಯಾ ಹೆಗಡೆ ದೊಡ್ಡ ಹೊಂಡ. ಸಂಧ್ಯಾ ಅವರ ಸಣ್ಣ ಪರಿಚಯ ಮಾಡುವುದಾದರೆ 

 ಸಂಧ್ಯಾರವರು ಏನ್. ಎಂ. ಕೆ. ಆರ್. ವಿ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು
ಸಂಧ್ಯಾ ಹೆಗಡೆ ದೊಡ್ಡಹೊಂಡ ರವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ದೊಡ್ಡಹೊಂಡದವರು. ಸಂತೆಗುಳಿ.ಅರೆ ಅಂಗಡಿಯಲ್ಲಿ ಪ್ರಾಥಮಿಕ ಶಿಕ್ಷಣದ ನಂತರ, ಹೊನ್ನವರ ಧಾರವಾಡಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದ್ದು, ಶಂಕರ ಮೊಕಾಶಿ ಪುಣೆಕರ್ ರವರ, ಗಂಗವ್ವ ಗಂಗಾಮಯಿ ಕೃತಿಯ ಮೇಲೆ, ಸಂಪ್ರಬಂಧ ರಚಿಸಿದ್ದಾರೆ. " ಆಧುನಿಕ ಕನ್ನಡ ಸಾಹಿತ್ಯ ಮೀಮಾಂಸೆ. ಕಾವ್ಯ "ಸಂಶೋಧನಾ ಮಹಾಪ್ರಬಂಧವನ್ನು ಕರ್ನಾಟಕ ವಿಶ್ವ ವಿದ್ಯಾಲಯಕ್ಕೆಸಲ್ಲಿಸಿ ಪಿ. ಎಚ್. ಡಿ. ಪಡೆದಿದ್ದಾರೆ.

ಕಥೆ, ಕವನ, ವಿಮರ್ಶೆ, ಸಂಶೋಧನ ಲೇಖನಗಳನ್ನು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ನಾವು ಕಾಣಬಹುದು.' ಪೂರ್ಣದೆಡೆಗೆ, ಅರಿವಿನೆಡೆಗೆ, ಕನಸು, ಸಂಪಾದಿತ ಕೃತಿಗಳು.' ಗುಲಾಬಿ ಕಚ್ಚಿನ ಬಳೆಗಳು' ಕಥಾ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಲೇಖಕ ಚೊಚ್ಚಲ ಕೃತಿ ಸಹಾಯ ಧನ, ಕನ್ನಡ ಸಾಹಿತ್ಯ ಪರಿಷತ್ತು ನೀಡುವ, ಮಲ್ಲಿಕಾ ದತ್ತಿ ಪ್ರಶಸ್ತಿ, ಕೆ. ಎಸ್. ನ. ಟ್ರಸ್ಟ್ ನ ಅಧ್ಯಯನ ಪುರಸ್ಕಾರ ಸಂಧಿವೆ. ಸದ್ಯ ಏನ್. ಎಂ. ಕೆ. ಆರ್. ವಿ ಮಹಿಳಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಓದು, ಚೆಸ್, ಸಂಗೀತ, ಇವು ಸಂಧ್ಯಾ ಹೆಗಡೆ ಅವರ ನೆಚ್ಚಿನ ಹವ್ಯಾಸಗಳಾಗಿವೆ. 

ಸಂಧ್ಯಾ ರವರು ಕನ್ನಡ ಭಾಷಾಭಿಮಾನದ  ಬಗ್ಗೆ,  ಕನ್ನಡ ಭಾಷೆಯ ಅಳಿವು ಉಳಿವುಗಳ ಬಗ್ಗೆ ನಾಗರಿಕರಾಗಿ ನಾವು ಕೈಗೊಳ್ಳಬಹುದಾದ ಕ್ರಮಗಳು, ಮಕ್ಕಳ ಮನಸ್ಥಿತಿಯಲ್ಲಿ ಒಂದು ಭಾಷೆ ಹೇಗೆ ಸ್ಥಾನ ಗಳಿಸಬಲ್ಲದು,? ಮತ್ತು ತಂದೆ ತಾಯಿಗಳಾಗಿ ಮಕ್ಕಳಿಗೆ ಭಾಷೆಗಳ ವಿಷಯದಲ್ಲಿ ಹೇಗೆ ಸಹಾಯಕರಾಗಿ ನಿಲ್ಲಬಹುದು, ಶಿಕ್ಷಕರಾಗಿ ಮಕ್ಕಳಲ್ಲಿ ಹೇಗೆ ಕನ್ನಡ ಭಾಷೆಯ ಸಸಿಯನ್ನು ನೆಟ್ಟು, ಅದನ್ನು ಪೋಷಿಸಿ ಸಮಾಜಕ್ಕೆ ಒಳ್ಳೆಯ ಫಲಗಳನ್ನು ಕೊಡುವಂತ ಹೆಮ್ಮರಗಳನ್ನಾಗಿಸುವುದು, ಈ ಎಲ್ಲಾ ವಿಷಯಗಳ ಬಗ್ಗೆ ಬಹಳ ಚಂದದ,ತಾರ್ಕಿಕ,  ವಿಷಯಗಳನ್ನು ಚರ್ಚೆ ಮಾಡುತ್ತಾ, ಇಂದಿನ ಕನ್ನಡ ಕಲಿಕೆಯಲ್ಲಿ ತಲೆದೋರಿರುವ ಬಿಕ್ಕಟ್ಟುಗಳ ಬಗ್ಗೆ ವಿವರಿಸುತ್ತಾ ಅತ್ಯಂತ ಗಂಭೀರವಾಗಿ ಎಳೆ ಎಳೆಯಾಗಿ ಸಭೆಯ ಮುoದಿಟ್ಟರು. ನಿಜಕ್ಕೂ ಮತ್ತೊಂದು ಸಭೆಯಲ್ಲಿ ಈ ವಿಷಯದ ಬಗ್ಗೆ ಮತ್ತಷ್ಟು ಚರ್ಚೆಗಳಾಗಲಿ ಎನ್ನುವ ಬಯಕೆಯನ್ನು ಹೊತ್ತು, ಅತ್ಯಂತ ಗಹನ ವಿಚಾರಗಳನ್ನು ಹಂಚಿದ ಸoಧ್ಯಾ ಮೇಡಂ ರವರಿಗೆ ಹೃದಯದ ಅಂತರಾಳದಿಂದ  ಧನ್ಯವಾದಗಳು.

ನಂತರ ಶ್ರೀ ಚಿದಂಬರ ಕೋಟೆಯವರ ಕಂಠಸಿರಿಯಲ್ಲಿ ಕಾವೇರಿಗೆ ಕಾಲುಂಗುರ ತೊಡಿಸಿ ಮತ್ತು ಕನ್ನಡ ನಾಡಿನ ಜೀವನದಿ ಈ ಕಾವೇರಿ ಎಂಬ ಹಾಡುಗಳನ್ನು ಕೇಳಿ ಬಹಳ ಆನಂದ ತುಂದಿಲರಾದೆವು. ನಿಜಕ್ಕೂ ಅವರ ಸಂಗೀತದ ಪಯಣ ಬಹಳ ಹೆಮ್ಮೆಯಿಂದ ಸಾಗುವ ದೋಣಿಯoತಾಗಲಿ. ಎಂದು ಸಭೆಯ ಪರವಾಗಿ ಹಾರೈಕೆಗಳು.
ಮುಂದೆ ಮಾತನಾಡಿದ ಕವಿ ನಾಟಕಕಾರ ಶ್ರೀ ಡುಂಡಿರಾಜ್ ಅವರು  ಹಾಸ್ಯ ದ ಮೂಲಕ ಕನ್ನಡ ಪ್ರೀತಿಯನ್ನು ಉಳಿಸುವ ಬೆಳೆಸುವ ಬಗ್ಗೆ ತಮ್ಮ ಎಂದಿನ ಶೈಲಿಯಲ್ಲಿ ಮಾತಾಡಿದರು.....
. ದುಂಡಿರಾಜ್ ರವರ ಮಾತುಗಳೆಂದರೆ ಕೇಳಬೇಕೇ? ನಗೆಗಡಲಲ್ಲಿ ತೇಲುತ್ತಾ ಸಾಗಿದ ಸಭೆಗೆ ಸಮಯ ಹೋಗಿದ್ದೆ ತಿಳಿಯಲಿಲ್ಲ. ಹೊಟ್ಟೆಯ ಹಸಿವಿಗೆ ಊಟವಿದೆ, ಸಾಹಿತ್ಯದ ಹಸಿವಿಗೆ ನಮ್ಮ ಶಿವರಾಮ ಕಾರಂತರ ವೇದಿಕೆಯಿದೆ ಎನ್ನುವ ಮಾತು ನೆನಪಾಗದೆ ಇರಲಿಲ್ಲ. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರ ಮುಖದಲ್ಲಿ ಅತ್ಯಂತ ಸೊಗಸಾದ ಮಂದಹಾಸದ ನವಿರು ಎದ್ದು ಕಾಣುತಿತ್ತು.   ಕೊನೆಯದಾಗಿ ಚೇತನಾ ಹೆಗಡೆಯವರು ಭಾವ ತುಂಬಿದ ಪದಗಳಿಂದ ಕೂಡಿದ ಧನ್ಯವಾದ ಸಮರ್ಪಣೆಯೊಂದಿಗೆ, ಅತಿಥಿಗಳನ್ನು ಸನ್ಮಾನಿಸಲಾಯಿತು.ಒಂದು ಅತ್ಯಂತ ತಣ್ಣನೆಯ ಸವಿ ಸಂಜೆಗೆ ಕಾರಣರಾದ ಎಲ್ಲರಿಗೂ ವಂದಿಸುತ್ತಾ..


ಬರೆದಿರುವುದು 17/11/2025 

























Sunday, September 21, 2025

ದಾದಾಭಾಯಿ ನವರೋಜಿ - ದ್ವಿ ಶತಮಾನೋತ್ಸವ

 ಭಾನುವಾರ,  ಸಪ್ಟೆಂಬರ್ 21, 2025 

ತರಳಬಾಳು ಕೇಂದ್ರ ಮಿನಿ ಹಾಲ್, ಆರ್. ಟಿ. ನಗರ, ಬೆಂಗಳೂರು. 






ಭಾರತದ ರಾಸ್ತ್ರೀಯತೆಯ  ಹರಿಕಾರ "ದಾದಾಭಾಯಿ ನವರೋಜಿ" ( 3/9/1825 - 30/6/1917) ಅವರ ದ್ವಿಶತಮಾನೋತ್ಸವದ ಸ್ಮರಣೆಯು ಶಿವರಾಮ ಕಾರಂತ ವೇದಿಕೆಯಲ್ಲಿ ಸಂಪನ್ನಗೊಂಡಿತು. 



ನಮ್ಮೊಂದಿಗೆ ಇದ್ದ ಅತಿಥಿಗಳು ನವರೋಜಿಯವರ ಜೀವನ, ಸಾಧನೆಗಳ ಕುರಿತು ವಿಸ್ತಾರವಾಗಿ ಮಾತನಾಡಿದರು.   ರಮ್ಯಾ ಶ್ರೀ ಅವರಿಂದ ಪ್ರಾರ್ಥನೆಯಾದ ನಂತರ ವೇದಿಕೆಯ ಅಧ್ಯಕ್ಷೆ ಡಾ ದೀಪಾ ಫಡ್ಕೆ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿ ಎಲ್ಲರನ್ನೂ ಸ್ವಾಗತಿಸಿದರು. 
ರಮ್ಯಾಶ್ರೀ - ಪ್ರಾರ್ಥನೆ 


ಪ್ರಾಸ್ತಾವಿಕ ನುಡಿ, ಸ್ವಾಗತ -ದೀಪಾ ಫಡ್ಕೆ 

ಶ್ರೀ ರಮೇಶ್ ಗೋಟ, ಲೇಖಕರು, ಶಿವರಾಮ ಕಾರಂತ ವೇದಿಕೆಯ ಸದಸ್ಯರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದವರು, ಅಲ್ಪ ಕಾಲದ ಅನಾರೋಗ್ಯದಿಂದ ಬಳಲಿ ಸೆಪ್ಟೆಂಬರ್ 15 ಸೋಮವಾರ
ನಮ್ಮನ್ನಗಲಿದ್ದಾರೆ. 
ಶ್ರೀ ರಮೇಶ್ ಗೋಟ 
ಶ್ರದ್ಧಾಂಜಲಿ 

ಕನ್ನಡ ಸಾಹಿತ್ಯದ ಒಳ್ಳೆಯ ಓದುಗರಾಗಿದ್ದ ಶ್ರೀ ರಮೇಶ್ ಗೋಟ ಅವರು ಲೇಖಕರೂ ಆಗಿದ್ದರು. ಅವರ ಕಾದಂಬರಿ ಒಂದು ಕರ್ಮವೀರ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು. ನಮ್ಮ ವೇದಿಕೆಯ ಎಲ್ಲಾ ಕಾರ್ಯಕ್ರಮಗಳಿಗೆ ತಪ್ಪದೆ ಭಾಗವಹಿಸುತ್ತಿದ್ದ ರಮೇಶ್ ಗೋಟ ಅವರು ಮೃದು ಮಾತಿನ ಸಜ್ಜನ ವ್ಯಕ್ತಿಯಾಗಿದ್ದರು. ವೇದಿಕೆ ಅವರಿಗೆ ಗೌರವಪೂರ್ವಕವಾಗಿ ಶ್ರದ್ಧಾಂಜಲಿ ಸಲ್ಲಿಸುತ್ತಿದೆ.

ನುಡಿ ನಮನ - ಚಂದ್ರಶೇಖರ ಚಡಗ 

ವೇದಿಕೆಯ ಸಂಸ್ಥಾಪಕರಾದ ಶ್ರೀ ಚಂದ್ರಶೇಖರ ಚಡಗ ಅವರು ನಮ್ಮನ್ನು ಆಗಲಿದ ರಮೇಶ್ ಗೋಟ ಅವರಿಗೆ ನುಡಿ ನಮನವನ್ನು ಸಲ್ಲಿಸಿದರು



ವೇದಿಕೆಯ ಖಜಾಂಚಿ ಶ್ರೀ ಜಯರಾಮ ಸೋಮಾಯಾಜಿಯವರು ಅತಿಥಿಗಳಿಗೆ ಗೌರವ ಸಮಾರ್ಪಣೆಯನ್ನು ಮಾಡಿದರು. 
ಶ್ರೀಮತಿ ಸಂಧ್ಯಾ ಮಂಜುನಾಥ್  ಅವರು ಕಾರ್ಯಕ್ರಮದ ನಿರ್ವಾಹಣೆಯನ್ನು ಅಚ್ಚುಕಟ್ಟಾಗಿ ಮಾಡಿದರು. 

Girija Shastry (ಗಿರಿಜಾ ಶಾಸ್ತಿ)  - Report

ದಾದಾಭಾಯಿ ನವರೋಜಿ: ದ್ವಿಶತಮಾನೋತ್ಸವ .
ಕೆ.ಸತ್ಯನಾರಾಯಣರ ಬರಲಿರುವ 'ದಾದಾಭಾಯಿ ನವರೋಜಿ ( ಜೀವನ ಚರಿತ್ರೆ- ಸಂದರ್ಭ )' ಪುಸ್ತಕದ ಬಗೆಗೆ ಶಿವರಾಮ ಕಾರಂತ ವೇದಿಕೆಯ ಮೂಲಕ ಒಂದು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅದರ ಅಧ್ಯಕ್ಷರಾದ ದೀಪಾ ಫಡ್ಕೆ ನನಗೆ ಫೋನ್ ಮತ್ತು ಫೇಸ್ ಬುಕ್ ಮುಖಾಂತರ ಪರಿಚಯವಿದ್ದರು. ನಿನ್ನೆ ಪ್ರತ್ಯಕ್ಷ ಭೇಟಿಯಾದರು. ಖುಷಿಯ ಕ್ಷಣಗಳು! ಅವರ ಅಡ್ಡಹೆಸರಿಗೆ ಮರಾಠಿಯ 'ವಾಸನೆ' ಬೇರೇ ಅಂಟಿಕೊಂಡಿದೆ. ಹಿಂದೊಮ್ಮೆ ಫೋನ್ ಮೂಲಕ ಮಾತನಾಡುವಾಗ 'ಚಿತ್ಪಾವನ' ಮೂಲದ ಪಂಡಿತಾ ರಮಾಬಾಯಿ ನಿಮಗೇನಾದರೂ ನೆಂಟರೆ?ಎಂದು ಕೇಳಿದ್ದೆ. ಸರಿ , ನಮ್ಮ ಮುಂಬಯಿ ಹಳಹಳಿಕೆಗೆ ಇನ್ನೇನು ಬೇಕು? ಹೀಗಾಗಿ ಅವರನ್ನು ಪ್ರತ್ಯಕ್ಷ ಕಂಡ ಸಂದರ್ಭಕ್ಕೆ ಒಂದು ಹೊಸ ಉಮೇದಿತ್ತು. ಶಿವರಾಮ ಕಾರಂತ ವೇದಿಕೆಯನ್ನು ಕಟ್ಟಿಕೊಂಡು ಬಹಳ ಕ್ರಿಯಾಶೀಲ ಚಟುವಟಿಕೆಗಳಲ್ಲಿ ದೀಪಾ ತೊಡಗಿಕೊಂಡಿದ್ದಾರೆ. ಅಲ್ಲದೇ ಅನೇಕ ಸಾಮಾಜಿಕ ಅಭಿವೃದ್ಧಿ ಕಾರ್ಯಗಳಲ್ಲೂ ನಿರತರಾಗಿದ್ದಾರೆ.
ಈ ಕಾರ್ಯಕ್ರಮಕ್ಕೆ ಲೇಖಕರಾದ ಕೆ. ಸತ್ಯನಾರಾಯಣ, ಕೆ. ರಘುನಾಥ್ ಮತ್ತು ಸುಧೀಂದ್ರ ಬುದ್ಯ ಅವರು ಭಾಷಣಕಾರರಾಗಿ ಆಗಮಿಸಿದ್ದರು.
ದಾದಾಭಾಯಿ ನವರೋಜಿಯವರ ದ್ವಿಶತಮಾನೋತ್ಸವ ಸಂದರ್ಭವಿದು. ಅವರು ಹುಟ್ಟಿದ್ದು ೪/೯/೧೮೨೫ ರಂದು. ಆದರೆ ನಮಗೆ ಅದರ ನೆನಪೇ ಇಲ್ಲ. ಅವರ ಬಗ್ಗೆ ಇರುವ ನಮ್ಮ ಈ ಅವಜ್ಞೆ ವಿಷಾದಕರ.
'ರಿಲೇ ರೇಸ್ ' ಪರಿಕಲ್ಪನೆಯಲ್ಲಿ ದಾದಾಭಾಯಿ ನವರೋಜಿಯವರ ರಾಷ್ಟ್ರೀಯ ಆಂದೋಳನದ ಕಾರ್ಯಸ್ವರೂಪವನ್ನು ಸುಧೀಂದ್ರ ಅವರು ವಿವರಿಸುತ್ತಾ ರಿಲೇ ರೇಸ್ ನಲ್ಲಿ ಒಂದು ಕೈಯಿಂದ ಇನ್ನೊಂದು ಕೈಯಿಗೆ ಬ್ಯಾಟ್ ದಾಟುವಾಗ, ಸಹಜವಾಗಿಯೇ ದಾಟಿಸುವವನು ದಣಿದಿರುತ್ತಾನೆ, ಹೊಸದಾಗಿ ಓಟ ಶುರುಮಾಡುವವನಿಗೆ ಹೆಚ್ಚಿನ ಕಸುವು ಇರುತ್ತದೆ. ಹೀಗೆ ಗುರಿ ಮುಟ್ಟುವಾಗ ಓಡಿದವರು ಮಾತ್ರ ಕಣ್ಣಿಗೆ ಕಾಣುತ್ತಾರೆ. ಚರಿತ್ರೆಯಲ್ಲಿ ದಾಖಲಾಗುತ್ತಾರೆ. ಅದರ ಹಿಂದೆ ಓಡಿ ದಣಿದವರು ಕಾಣುವುದಿಲ್ಲ. ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುವುದಿಲ್ಲ. ಸ್ವಾತಂತ್ರ್ಯ ಚಳವಳಿಗೆ ಬುನಾದಿಯನ್ನು ಹಾಕಿದವರೇ ದಾದಾಭಾಯಿ ನವರೋಜಿಯವರು. ಗಾಂಧೀಜಿಯ ಗುರುಗಳಾದ ಗೋಖಲೆಯವರಿಗೂ ಅವರು ಗುರುಗಳು. ಆದರೆ ಅವರನ್ನು ನಾವು ಮರೆತಿದ್ದೇವೆ. ಎಂದು ಅಭಿಪ್ರಾಯ ಪಟ್ಟರು.
ರಘುನಾಥ್ ಅವರು ಕೆ.ಸತ್ಯನಾರಾಯಣ ಅವರ ಒಟ್ಟು ಸಾಹಿತ್ಯದ ಅನನ್ಯತೆಯನ್ನು ಹಂಚಿಕೊಂಡರು. ಜೊತೆಗೆ ಅವರ ಬರಲಿರುವ 'ದಾದಾಭಾಯಿ ನವರೋಜಿ'ಕೃತಿಯ ವೈಶಿಷ್ಟ್ಯಗಳನ್ನು ಹೇಳುತ್ತಾ, ನವರೋಜಿಯವರು ವಸಾಹತುಷಾಹಿ ಆಡಳಿತದ ಕರಾಳ ಪ್ರಭಾವವನ್ನು ಗುರುತಿಸಿದವರಲ್ಲಿ ಮೊದಲಿಗರು. ಭಾರತದ ಬಡತನಕ್ಕೆ ಬ್ರಿಟಿಷರೇ ಕಾರಣರು ಎಂದ ನವರೋಜಿಯವರು ಸ್ಥಳೀಯ ಆಡಳಿತದ ಬಗೆಗೆ ಒತ್ತುಕೊಟ್ಟುದನ್ನು ಹಾಗೂ ಅವರ ಪಾನ ನಿರೋಧ ಚಡವಟಿಕೆಗಳ ಕಾರ್ಯ ರೂಪಗಳನ್ನೂ ವಿವರಿಸಿದರು.
ಆನಂತರ ಕೆ. ಸತ್ಯನಾರಾಯಣ ಅವರು ತಮ್ಮ ಕೃತಿಯ ಉದ್ದೇಶವನ್ನು ಹೇಳುತ್ತಾ, ನಮ್ಮ ದೇಶದ ಸಂಪನ್ಮೂಲಗಳು ಹೊರಗೆ ಹೋಗುವುದರ ಬಗ್ಗೆ ಅವರಿಗೆ ಇದ್ದ ವಿರೋಧವನ್ನು ತಿಳಿಸಿದುದೇ ಅಲ್ಲದೇ, ಸ್ತ್ರೀ ಶಿಕ್ಷಣದ ಬಗ್ಗೆ ಇದ್ದ ಅವರ ಒಲವು, ಬಂಗಾಳ ವಿಭಜನೆಯ ಅವರ ವಿರೋಧ, ಅವರ ಜಾತ್ಯತೀತ ದೃಷ್ಟಿ ಇವುಗಳನ್ನು ವಿವರಿಸಿದರು.
ಅವರು ಅಲ್ಪಸಂಖ್ಯಾತ ಪಾರ್ಸಿ ಜನಾಂಗಕ್ಕೆ ಸೇರಿದ್ದುದೂ ಅವರ ಬಗೆಗಿನ ನಮ್ಮ ಈ ಅವಜ್ಞೆಗೆ ಕಾರಣವಿರಬಹುದು. ಎಂದೂ ಅಭಿಪ್ರಾಯ ಪಟ್ಟರು.
ಆನಂತರ ನಡೆದ ಸಂವಾದದಲ್ಲಿ ಕೆಲ ಸಭಿಕರು ಭಾಗಿಯಾದರು.
ಮುಂಬಯಿಯಲ್ಲಿ ಎಲ್ಫಿನ್ ಸ್ಟನ್ ಕಾಲೇಜಿನ ಮುಂದೆ ನೂರಾರು ಬಾರಿ ನಾನು ಸುಳಿದಾಡಿದ್ದರೂ ದಾದಾಭಾಯಿ ನವರೋಜಿಯವರಿಗೆ ಆ ಕಾಲೇಜಿನೊಡನೆ ಇದ್ದ ಸಂಬಂಧಗಳೇ ಆಗಲಿ, ಸ್ವಾತಂತ್ರ್ಯ ಚಳವಳಿಯಲ್ಲಿನ ಅವರ ಪಾತ್ರವೇ ಆಗಲಿ ಇಷ್ಟು ವಿಷದವಾಗಿ ನನಗೆ ತಿಳಿದಿರಲಿಲ್ಲ. ಮುಂಬಯಿ ಹೃದಯ ಭಾಗದಲ್ಲಿರುವ ವಿ.ಟಿ. ಸ್ಟೇಷನ್ ಮುಂದಿರುವ ದೊಡ್ಡ ರಸ್ತೆಗೆ D.N. Road ಎಂದೇ ಹೆಸರು. ಇದರ ಮಹತ್ವ ಆಗ ತಲೆಗೆ ಹತ್ತಿರಲಿಲ್ಲ.
ಈ ಕಾರ್ಯಕ್ರಮ ಕೆ. ಸತ್ಯನಾರಾಯಣ ಅವರ ಪುಸ್ತಕದ ಮೂಲಕ ಇಂತಹ ಒಂದು ಸಂವಾದ ಏರ್ಪಡಿಸಿ ದಾದಾಭಾಯಿ ನವರೋಜಿಯವರ ವ್ಯಕ್ತಿತ್ವದ ಮೇಲೆ ಹೊಸಬೆಳಕನ್ನು ಚೆಲ್ಲಿದ, ದೀಪಾಫಡ್ಕೆಯವರ ಈ ಕಾರ್ಯ ಶ್ಲಾಘನೀಯ.
ಕಾರ್ಯಕ್ರಮದ ಪ್ರಾರಂಭಕ್ಕೆ ದೀಪಾ ಫಡ್ಕೆಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿ ಕೊನೆಗೆ ಧನ್ಯವಾದ ಅರ್ಪಿಸಿದರು.
ನಿರೂಪಣೆಯನ್ನು ಸಂಧ್ಯಾ ಮಂಜುನಾಥ್ ಅವರು ಸೊಗಸಾಗಿ ಮಾಡಿದರು
ಈ ಸಂದರ್ಭಕ್ಕೆ ತಕ್ಕುದಾದ ನಾಡಗೀತೆಯನ್ನು ರಮ್ಯಶ್ರಿ ಹಾಡಿದರು.
ಕಾರಂತವೇದಿಕೆಯ ಪದಾಧಿಕಾರಿಗಳೂ ಹಾಗೂ ಸ್ನೇಹಿತರಾದ ಗಿರಿಧರ ಕಾರ್ಕಳ ಅವರೂ ಉಪಸ್ಥಿತರಿದ್ದರು
ಸಂಜೆ ಸಮಯ


ಉದಯ ಕಾಲ



ಧನ್ಯವಾದಗಳು.....

Posted  22/9/2025 











 


Monday, July 21, 2025

"ಸುಧಿ" - ಕೃತಿ ಬಿಡುಗಡೆ - ಶಿವರಾಮ ಕಾರಂತ ವೇದಿಕೆ

 ಭಾನುವಾರ, ಜುಲೈ 20, 2025

ತರಳಬಾಳು ಕೇಂದ್ರ ಮಿನಿ ಹಾಲ್, ಆರ್. ಟಿ. ನಗರ, ಬೆಂಗಳೂರು.

ಶಿವರಾಮ ಕಾರಂತ ವೇದಿಕೆಯ ಜುಲೈ ತಿಂಗಳ ಕಾರ್ಯಕ್ರಮವು, ಜಿ. ವಿ. ರೇಣುಕಾ  ಅವರ "ಸುಧಿ" ವೈಚಾರಿಕ ಕೃತಿ ಲೋಕಾರ್ಪಣೆಯೊಂದಿಗೆ ಸಂಪನ್ನಗೊಂಡಿತು.




ಸಂಜೆ 4 ಗಂಟೆಗೆ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ನಂತರ, ವೇದಿಕೆಯ ಅಧ್ಯಕ್ಷೆ  ದೀಪಾ ಫಡ್ಕೆ ಅವರು ಪ್ರಾಸ್ತಾವಿಕ ನುಡಿ ಹಾಗೂ ಸ್ವಾಗತವನ್ನು ಕೋರಿದರು.


ಶ್ರೀಮತಿ ಚೇತನಾ ಹೆಗಡೆ ಯವರಿಂದ ಕೃತಿ ಪರಿಚಯವಾದ ನಂತರ, ಮುಖ್ಯ ಅತಿಥಿ ಅನ್ನದಾನೇಶ್ ಹರೀಶ್ ಅವರು ಕೃತಿಯ ಬಗ್ಗೆ ಮಾತನಾಡಿದರು.
ಡಾ ಅನ್ನದಾನೇಶ್ 

ಚೇತನಾ ಹೆಗಡೆ 

ಲೇಖಕಿ ಜಿ. ವಿ. ರೇಣುಕ ಅವರು ಜೀವನದ ತಮ್ಮ ಅನುಭವವನ್ನು ಅನುಸಂಧಾನದ ರೂಪದಲ್ಲಿ ಕೃತಿಯನ್ನು  ಹಾಗೂ ಅವರ ಸುಮಾರು 4000 ದಷ್ಟು ವಚನಗಳನ್ನು ಬರೆದಿರುವುದು ಎಂದು ತಿಳಿಸಿದರು.
ಜಿ. ವಿ. ರೇಣುಕಾ
ವೇದಿಕೆಯ ಕೋಶಾಧಿಕಾರಿ ಜಯರಾಮ ಸೋಮಯಾಜಿ ಅವರು ಡಾ ಅನ್ನದಾನೇಶ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.


ಹಲವಾರು ದಿನಪತ್ರಿಕೆಗಳಲ್ಲಿ ಕಾರ್ಯಕ್ರಮದ ಸುದ್ದಿಯನ್ನು ಪ್ರಕಟಿಸಲಾಯಿತು.




ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

ಶ್ರೀ ಸುಧೀಂದ್ರ ಅವರ ವಂದನಾರ್ಪಣೆ ಯೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.

ವರದಿ: ಮಂಜುಳಾ ಭಾರ್ಗವಿ,  ಕಾರ್ಯದರ್ಶಿ , ಶಿವರಾಮ ಕಾರಂತ ವೇದಿಕೆ.
ಎಲ್ಲರಿಗೂ ನಮಸ್ಕಾರ.
ಶಿವರಾಮ ಕಾರಂತ ವೇದಿಕೆಯ ಜುಲೈ ತಿಂಗಳ 20 ನೇ ತಾರೀಕು, ಭಾನುವಾರದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ವಚನಕಾರ್ತಿಯವರಾದ ಶ್ರೀಮತಿ ಜಿ. ವಿ. ರೇಣುಕಾ ರವರ " ಸುಧಿ "ಎಂಬ ಪುಸ್ತಕ ಬಿಡುಗಡೆಯನ್ನು ಮಾಡುವ ಮೂಲಕ ನೆರವೇರಿಸಲಾಯಿತು. 
ಇದಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದವರು, ಡಾ. ಅನ್ನದಾನೇಶ್. ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕರು.   ಕಾರ್ಯಕ್ರಮದಲ್ಲಿ ಹಲವಾರು ಸದಸ್ಯರು ಭಾಗವಹಿಸಿದ್ದು ಬಹಳ ಹೆಮ್ಮೆಯ ಸುದ್ದಿ. ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮೊದಲಿಗೆ  ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಲಾಯಿತು. ಮತ್ತು  ಇದಾದ ಬಳಿಕ ನಮ್ಮ ಕಾರಂತ ವೇದಿಕೆಯ ಅಧ್ಯಕ್ಷರು ಡಾ. ದೀಪ ಫಡ್ಕೆ ಅವರು ಪುಸ್ತದ ಬಗ್ಗೆ ಒಂದೆರಡು ಮಾತುಗಳನ್ನು ಆಡುತ್ತಾ, ಅತ್ಯಂತ ಅಚ್ಚುಕಟ್ಟಾಗಿ ವೇದಿಕೆಗೆ ಶುಭ ಕೋರಿದರು.ತಮ್ಮ ಪ್ರಾಸ್ತಾವಿಕ ನುಡಿಗಳ ಮೂಲಕ  ಎಲ್ಲರನ್ನುದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ವಾಗತ ಕೋರಿದರು.
ನಂತರ.  ' ಸುಧಿ ' ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.  ನಂತರ ಮೌoಟ್ ಕಾರ್ಮಲ್ ಕಾಲೇಜಿನ ಸಹ ಪ್ರಾಧ್ಯಪಕರಾದ ಶ್ರೀಮತಿ ಚೇತನಾ ಹೆಗಡೆ ಅವರು ಸುಧಿ ಕೃತಿಯ ಪರಿಚಯವನ್ನು ಬಹಳ ಚಂದದ ರೀತಿಯಲ್ಲಿ ಮಾಡಿದರು. 
ನಂತರ ಜಿ. ವಿ ರೇಣುಕಾರವರನ್ನು ಪುಸ್ತಕದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವoತೆ, ಕೇಳಿಕೊಳ್ಳಲಾಯಿತು. ಹಾಗೆಯೇ ಜಿ. ವಿ ರೇಣುಕಾರವರು, ತಮ್ಮ ಜೀವನದಲ್ಲಿ ಸಾಹಿತ್ಯದ ಹಾದಿಯ ಬಗ್ಗೆ, ಕೆಲವು ಅದ್ಭುತವಾದ ಅನುಭವವನ್ನು ವೇದಿಕೆಯೊಂದಿಗೆ ಹಂಚಿಕೊಳ್ಳಲಾಯಿತು. ಇದಾದ ನಂತರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಬಂದಿದ್ದ ಡಾ. ಅನ್ನದಾನೇಶ್ ರವರು ಸುಧಿ ಪುಸ್ತಕದ ಲೇಖಕಿಗೆ ಶುಭ ಕೋರುತ್ತಾ, ನಮ್ಮ ವೇದಿಕೆಯ ಬಗ್ಗೆ ಹೆಮ್ಮೆಯ ನುಡಿಗಳನ್ನಾಡುತ್ತಾ, ತಮ್ಮ ಮಾತುಗಳನ್ನು  ಪ್ರಾರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ, ವೈಚಾರಿಕತೆ, ಮಹಿಳೆಯರು ಬೆಳೆದು ಬಂದ ಹಾದಿ, ಆಧುನಿಕ ಸಮಾಜದಲ್ಲಿ ಮಹಿಳಾ ಸಾಹಿತ್ಯದ ಕುರಿತು, ಹಾಗೂ ವಚನ ಸಾಹಿತ್ಯದಲ್ಲಿ ಮಹಿಳೆಯರ ಸಾಧನೆಗಳು ಹೀಗೆ ಹಲವಾರು ವಿಷಯದ ಬಗ್ಗೆ ಒಂದು ಒಳ ನೋಟವನ್ನು ಬೀರುತ್ತಾ, ಸಾಹಿತ್ಯ ವಲಯದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ ಅಕ್ಕಮಹಾದೇವಿ, ಸಂಚಿ ಹೊನ್ನಮ್ಮನoತವರ ಹಿರಿಯರನ್ನು ಉದಾಹರಣೆಯಾಗಿ ನೀಡಿ, ತಮ್ಮ ಅಮೂಲ್ಯವಾದ ಅವರ ಸಮಯವನ್ನು ನಮ್ಮ ವೇದಿಕೆ, ಸ್ಮರಿಸುವಂತೆ ಮಾತನಾಡಿದರು.ನಂತರ  ಸಾಹಿತಿಗಳಾದ ಜಿ. ವಿ. ರೇಣುಕಾ ಹಾಗೂ ಡಾ. ಅನ್ನದಾನೇಶ್ ರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. 
ನಂತರ ನಮ್ಮ ವೇದಿಕೆಯ ಹಿರಿಯ ಸದಸ್ಯರಾದ ಶ್ರೀ ಸುಧೀoದ್ರ ಅವರು  ಧನ್ಯವಾದ ಸಮರ್ಪಣೆ ಮಾಡಿ,ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷರಿಗೂ, ಕಾರ್ಯಕ್ರಮಕ್ಕೆ  ನಿರೂಪಣೆಯನ್ನು ಮಾಡಿದ,  ಶಿವರಾಮ ಕಾರಂತ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರಿಗೂ ಈ ಸಭಾಂಗಣವನ್ನು ಒದಗಿಸಿ ಕೊಟ್ಟ ತರಳಬಾಳು ಸಂಸ್ಥೆಯವರಿಗೂ, ಕಡೆಯದಾಗಿ ಶಿವರಾಮ ಕಾರಂತ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರಿಗೂ  ಬಹಳ ಮುಖ್ಯವಾಗಿ  ನಮ್ಮ ವೇದಿಕೆಯ ಯಶಸ್ಸಿಗೆ ಕಾರಣರಾದ  ನಿಮ್ಮೆಲ್ಲರಿಗೂ ಅವರು ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿದರು.

ಧನ್ಯವಾದಗಳು.
ಕಾರ್ಯದರ್ಶಿ:               ಮಂಜುಳಾ ಭಾರ್ಗವಿ.

Posted 22/7/2025