Showing posts with label SHIVARAMA KARANTHA VEDIKE. Show all posts
Showing posts with label SHIVARAMA KARANTHA VEDIKE. Show all posts

Monday, July 21, 2025

"ಸುಧಿ" - ಕೃತಿ ಬಿಡುಗಡೆ - ಶಿವರಾಮ ಕಾರಂತ ವೇದಿಕೆ

 ಭಾನುವಾರ, ಜುಲೈ 20, 2025

ತರಳಬಾಳು ಕೇಂದ್ರ ಮಿನಿ ಹಾಲ್, ಆರ್. ಟಿ. ನಗರ, ಬೆಂಗಳೂರು.

ಶಿವರಾಮ ಕಾರಂತ ವೇದಿಕೆಯ ಜುಲೈ ತಿಂಗಳ ಕಾರ್ಯಕ್ರಮವು, ಜಿ. ವಿ. ರೇಣುಕಾ  ಅವರ "ಸುಧಿ" ವೈಚಾರಿಕ ಕೃತಿ ಲೋಕಾರ್ಪಣೆಯೊಂದಿಗೆ ಸಂಪನ್ನಗೊಂಡಿತು.




ಸಂಜೆ 4 ಗಂಟೆಗೆ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ನಂತರ, ವೇದಿಕೆಯ ಅಧ್ಯಕ್ಷೆ  ದೀಪಾ ಫಡ್ಕೆ ಅವರು ಪ್ರಾಸ್ತಾವಿಕ ನುಡಿ ಹಾಗೂ ಸ್ವಾಗತವನ್ನು ಕೋರಿದರು.


ಶ್ರೀಮತಿ ಚೇತನಾ ಹೆಗಡೆ ಯವರಿಂದ ಕೃತಿ ಪರಿಚಯವಾದ ನಂತರ, ಮುಖ್ಯ ಅತಿಥಿ ಅನ್ನದಾನೇಶ್ ಹರೀಶ್ ಅವರು ಕೃತಿಯ ಬಗ್ಗೆ ಮಾತನಾಡಿದರು.
ಡಾ ಅನ್ನದಾನೇಶ್ 

ಚೇತನಾ ಹೆಗಡೆ 

ಲೇಖಕಿ ಜಿ. ವಿ. ರೇಣುಕ ಅವರು ಜೀವನದ ತಮ್ಮ ಅನುಭವವನ್ನು ಅನುಸಂಧಾನದ ರೂಪದಲ್ಲಿ ಕೃತಿಯನ್ನು  ಹಾಗೂ ಅವರ ಸುಮಾರು 4000 ದಷ್ಟು ವಚನಗಳನ್ನು ಬರೆದಿರುವುದು ಎಂದು ತಿಳಿಸಿದರು.
ಜಿ. ವಿ. ರೇಣುಕಾ
ವೇದಿಕೆಯ ಕೋಶಾಧಿಕಾರಿ ಜಯರಾಮ ಸೋಮಯಾಜಿ ಅವರು ಡಾ ಅನ್ನದಾನೇಶ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.


ಹಲವಾರು ದಿನಪತ್ರಿಕೆಗಳಲ್ಲಿ ಕಾರ್ಯಕ್ರಮದ ಸುದ್ದಿಯನ್ನು ಪ್ರಕಟಿಸಲಾಯಿತು.




ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

ಶ್ರೀ ಸುಧೀಂದ್ರ ಅವರ ವಂದನಾರ್ಪಣೆ ಯೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.

ವರದಿ: ಮಂಜುಳಾ ಭಾರ್ಗವಿ,  ಕಾರ್ಯದರ್ಶಿ , ಶಿವರಾಮ ಕಾರಂತ ವೇದಿಕೆ.
ಎಲ್ಲರಿಗೂ ನಮಸ್ಕಾರ.
ಶಿವರಾಮ ಕಾರಂತ ವೇದಿಕೆಯ ಜುಲೈ ತಿಂಗಳ 20 ನೇ ತಾರೀಕು, ಭಾನುವಾರದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ವಚನಕಾರ್ತಿಯವರಾದ ಶ್ರೀಮತಿ ಜಿ. ವಿ. ರೇಣುಕಾ ರವರ " ಸುಧಿ "ಎಂಬ ಪುಸ್ತಕ ಬಿಡುಗಡೆಯನ್ನು ಮಾಡುವ ಮೂಲಕ ನೆರವೇರಿಸಲಾಯಿತು. 
ಇದಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದವರು, ಡಾ. ಅನ್ನದಾನೇಶ್. ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕರು.   ಕಾರ್ಯಕ್ರಮದಲ್ಲಿ ಹಲವಾರು ಸದಸ್ಯರು ಭಾಗವಹಿಸಿದ್ದು ಬಹಳ ಹೆಮ್ಮೆಯ ಸುದ್ದಿ. ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮೊದಲಿಗೆ  ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಲಾಯಿತು. ಮತ್ತು  ಇದಾದ ಬಳಿಕ ನಮ್ಮ ಕಾರಂತ ವೇದಿಕೆಯ ಅಧ್ಯಕ್ಷರು ಡಾ. ದೀಪ ಫಡ್ಕೆ ಅವರು ಪುಸ್ತದ ಬಗ್ಗೆ ಒಂದೆರಡು ಮಾತುಗಳನ್ನು ಆಡುತ್ತಾ, ಅತ್ಯಂತ ಅಚ್ಚುಕಟ್ಟಾಗಿ ವೇದಿಕೆಗೆ ಶುಭ ಕೋರಿದರು.ತಮ್ಮ ಪ್ರಾಸ್ತಾವಿಕ ನುಡಿಗಳ ಮೂಲಕ  ಎಲ್ಲರನ್ನುದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ವಾಗತ ಕೋರಿದರು.
ನಂತರ.  ' ಸುಧಿ ' ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.  ನಂತರ ಮೌoಟ್ ಕಾರ್ಮಲ್ ಕಾಲೇಜಿನ ಸಹ ಪ್ರಾಧ್ಯಪಕರಾದ ಶ್ರೀಮತಿ ಚೇತನಾ ಹೆಗಡೆ ಅವರು ಸುಧಿ ಕೃತಿಯ ಪರಿಚಯವನ್ನು ಬಹಳ ಚಂದದ ರೀತಿಯಲ್ಲಿ ಮಾಡಿದರು. 
ನಂತರ ಜಿ. ವಿ ರೇಣುಕಾರವರನ್ನು ಪುಸ್ತಕದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವoತೆ, ಕೇಳಿಕೊಳ್ಳಲಾಯಿತು. ಹಾಗೆಯೇ ಜಿ. ವಿ ರೇಣುಕಾರವರು, ತಮ್ಮ ಜೀವನದಲ್ಲಿ ಸಾಹಿತ್ಯದ ಹಾದಿಯ ಬಗ್ಗೆ, ಕೆಲವು ಅದ್ಭುತವಾದ ಅನುಭವವನ್ನು ವೇದಿಕೆಯೊಂದಿಗೆ ಹಂಚಿಕೊಳ್ಳಲಾಯಿತು. ಇದಾದ ನಂತರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಬಂದಿದ್ದ ಡಾ. ಅನ್ನದಾನೇಶ್ ರವರು ಸುಧಿ ಪುಸ್ತಕದ ಲೇಖಕಿಗೆ ಶುಭ ಕೋರುತ್ತಾ, ನಮ್ಮ ವೇದಿಕೆಯ ಬಗ್ಗೆ ಹೆಮ್ಮೆಯ ನುಡಿಗಳನ್ನಾಡುತ್ತಾ, ತಮ್ಮ ಮಾತುಗಳನ್ನು  ಪ್ರಾರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ, ವೈಚಾರಿಕತೆ, ಮಹಿಳೆಯರು ಬೆಳೆದು ಬಂದ ಹಾದಿ, ಆಧುನಿಕ ಸಮಾಜದಲ್ಲಿ ಮಹಿಳಾ ಸಾಹಿತ್ಯದ ಕುರಿತು, ಹಾಗೂ ವಚನ ಸಾಹಿತ್ಯದಲ್ಲಿ ಮಹಿಳೆಯರ ಸಾಧನೆಗಳು ಹೀಗೆ ಹಲವಾರು ವಿಷಯದ ಬಗ್ಗೆ ಒಂದು ಒಳ ನೋಟವನ್ನು ಬೀರುತ್ತಾ, ಸಾಹಿತ್ಯ ವಲಯದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ ಅಕ್ಕಮಹಾದೇವಿ, ಸಂಚಿ ಹೊನ್ನಮ್ಮನoತವರ ಹಿರಿಯರನ್ನು ಉದಾಹರಣೆಯಾಗಿ ನೀಡಿ, ತಮ್ಮ ಅಮೂಲ್ಯವಾದ ಅವರ ಸಮಯವನ್ನು ನಮ್ಮ ವೇದಿಕೆ, ಸ್ಮರಿಸುವಂತೆ ಮಾತನಾಡಿದರು.ನಂತರ  ಸಾಹಿತಿಗಳಾದ ಜಿ. ವಿ. ರೇಣುಕಾ ಹಾಗೂ ಡಾ. ಅನ್ನದಾನೇಶ್ ರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. 
ನಂತರ ನಮ್ಮ ವೇದಿಕೆಯ ಹಿರಿಯ ಸದಸ್ಯರಾದ ಶ್ರೀ ಸುಧೀoದ್ರ ಅವರು  ಧನ್ಯವಾದ ಸಮರ್ಪಣೆ ಮಾಡಿ,ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷರಿಗೂ, ಕಾರ್ಯಕ್ರಮಕ್ಕೆ  ನಿರೂಪಣೆಯನ್ನು ಮಾಡಿದ,  ಶಿವರಾಮ ಕಾರಂತ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರಿಗೂ ಈ ಸಭಾಂಗಣವನ್ನು ಒದಗಿಸಿ ಕೊಟ್ಟ ತರಳಬಾಳು ಸಂಸ್ಥೆಯವರಿಗೂ, ಕಡೆಯದಾಗಿ ಶಿವರಾಮ ಕಾರಂತ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರಿಗೂ  ಬಹಳ ಮುಖ್ಯವಾಗಿ  ನಮ್ಮ ವೇದಿಕೆಯ ಯಶಸ್ಸಿಗೆ ಕಾರಣರಾದ  ನಿಮ್ಮೆಲ್ಲರಿಗೂ ಅವರು ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿದರು.

ಧನ್ಯವಾದಗಳು.
ಕಾರ್ಯದರ್ಶಿ:               ಮಂಜುಳಾ ಭಾರ್ಗವಿ.

Posted 22/7/2025















Monday, June 23, 2025

ಪಂಜೆ ಮಂಗೇಶರಾಯರ ಸ್ಮರಣೆ - ಶಿವರಾಮ ಕಾರಂತ ವೇದಿಕೆ

 ಭಾನುವಾರ, 22 ಜೂನ್, 2025

ತರಳಬಾಳು ಕೇಂದ್ರ, ಮಿನಿ ಹಾಲ್, ಅರ್. ಟಿ. ನಗರ, ಬೆಂಗಳೂರು.

ಪಂಜೆ ಮಂಗೇಶರಾಯರ ಸಾಹಿತ್ಯ -  ಸ್ಮರಣೆ 

ಶಿವರಾಮ ಕಾರಂತ ವೇದಿಕೆಯ ಜೂನ್ ತಿಂಗಳ ಕಾರ್ಯಕ್ರಮದಲ್ಲಿ " ಶ್ರೀ ಪಂಜೆ ಮಂಗೇಶರಾಯರ ಸಾಹಿತ್ಯ " ಈ ವಿಚಾರ ಶ್ರೀ ಮಾಲಿಂಗೆಶ್ವರ ಭಟ್ ಹಾಗೂ ಶ್ರೀ ಎಸ್. ಅರ್. ವಿಜಯಶಂಕರ್ ಅವರ ಉಪನ್ಯಾಸದೊಂದಿಗೆ ಸಂಪನ್ನ ಗೊಂಡಿತು.



 ಪ್ರಾರ್ಥನೆ ಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ, ವೇದಿಕೆಯ ಅಧ್ಯಕ್ಷೆ ಡಾ. ದೀಪಾ ಫಡ್ಕೆ ಅವರ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಯೊಂದಿಗೆ ಮುಂದುವರಿಯಿತು.

ಡಾ. ದೀಪಾ ಫಡ್ಕೆ 

ಡಾ. ಮಹಾಲಿಂಗೇಶ್ವರ ಭಟ್ 


ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರು ಅತಿಥಿಗಳ ಪರಿಚಯವನ್ನು ಮಾಡಿದರು.

ಶ್ರೀ ಎಸ್ ಅರ್ ವಿಜಯಶಂಕರ್ 

ವೇದಿಕೆಯ ಗೌರವ ಅಧ್ಯಕ್ಷ ಶ್ರೀ ಎಸ್.ಅರ್. ವಿಜಯಶಂಕರ್ ಅವರು ಮಾತನಾಡಿ, ಪಂಜೆ ಅವರ ಸಾಧನೆ, ಬದುಕು ವಿಚಾರವಾಗಿ ಮಾತನಾಡಿದರು.




ಅತಿಥಿ ಉಪನ್ಯಾಸಕ ಡಾ. ಮಹಾಲಿಂಗೇಶ್ವರ ಭಟ್ ಅವರು ಪಂಜೆ ಅವರ ಸಾಹಿತ್ಯದ ಬಗ್ಗೆ ವಿವರವಾಗಿ ಮಾತನಾಡಿದರು.


ಪ್ರೊಫೆಸರ್ ಭೋಜಪ್ಪ 


ವೇದಿಕೆಯ ಅತ್ಯಂತ ಹಿರಿಯ ಸದಸ್ಯ, 95 ವರ್ಷದ ಮುತ್ಸದ್ದಿ , ಪ್ರೊಫೆಸರ್ ಭೋಜಪ್ಪ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಶ್ರೀಮತಿ ಸಂಧ್ಯಾ 

ಶ್ರೀಮತಿ ಚೇತನಾ ಹೆಗಡೆ 

ಶ್ರೀಮತಿ ಚೇತನಾ ಹೆಗಡೆ ಧನ್ಯವಾದ ಸಮರ್ಪಣೆ ಮಾಡಿದರು.. ಶ್ರೀಮರಿ ಸಂಧ್ಯಾ ಅವರು ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ಮಾಡಿದರು.

ವರದಿ : ಮಂಜುಳಾ ಭಾರ್ಗವಿ. ಕಾರ್ಯದರ್ಶಿ 

ಎಲ್ಲರಿಗೂ ನಮಸ್ಕಾರ.
ಶಿವರಾಮ ಕಾರಂತ ವೇದಿಕೆಯ ಜೂನ್ ತಿಂಗಳ 22ನೇ ತಾರೀಕು, ಭಾನುವಾರ, ಪಂಜೆ ಮಂಗೇಶರಾಯರ ಸಾಹಿತ್ಯ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಹಲವಾರು ಸದಸ್ಯರು ಭಾಗವಹಿಸಿದ್ದು ಬಹಳ ಹೆಮ್ಮೆಯ ಸುದ್ದಿ. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದದ್ದು ಮತ್ತಷ್ಟು ಸಂತೋಷದ ಸುದ್ದಿ..

 ಈ ಕಾರ್ಯಕ್ರಮದಲ್ಲಿ ಮೊದಲಿಗೆ ವಿಶೇಷ ಅತಿಥಿಗಳಾಗಿ ಶಿವರಾಮ ಕಾರಂತ ವೇದಿಕೆಗೆ ಬಂದಿದ್ದ, ಡಾ. ಎಸ್. ಪಿ ಮಹಾಲಿಂಗೇಶ್ವರ ಭಟ್. (ಲೇಖಕರು ನಿವೃತ್ತ ಉಪಕಾರ್ಯದರ್ಶಿ ಕೇಂದ್ರ ಸಾಹಿತ್ಯ ಅಕಾಡೆಮಿ)  ಮತ್ತು ನಮ್ಮ ವೇದಿಕೆಯ ಅಧ್ಯಕ್ಷರನ್ನು  ಆಹ್ವಾನಿಸಲಾಯಿತು. ನಂತರ ಮಂಗೇಶರಾಯರ   ಗೀತೆಯೊಂದನ್ನು ಅತ್ಯಂತ ಸುಮಧುರವಾಗಿ ಹಾಡಲಾಯಿತು.  ನಂತರ ವೇದಿಕೆಯ ಕಾರ್ಯದರ್ಶಿ ಅವರಿಂದ ಸ್ವಾಗತ ಭಾಷಣ ಮಾಡಿ, ಬಂದ ಅತಿಥಿಗಳಿಗೆ ಹಾಗೂ ಎಲ್ಲಾ ಗಣ್ಯರಿಗೆ ಸ್ವಾಗತ ಕೋರುತ್ತಾ ಪಂಜೆ ಮoಗೇಶರಾಯರ ಮೇರು ಸಾಹಿತ್ಯವನ್ನು ನೆನೆಯುತ್ತ ಅವರಿಗೆ ಭಾವ ತುಂಬಿದ ಗೌರವ ಸಲ್ಲಿಸಲಾಯಿತು. ತದ ನಂತರ ನಮ್ಮ ವೇದಿಕೆಯ  ಗೌರವಧ್ಯಕ್ಷರಾದ ಖ್ಯಾತ ವಿಮರ್ಶಕರು, ಎಸ್. ಆರ್ ವಿಜಯ ಶಂಕರ ಅವರು ಮಾತನಾಡಿ, ಪಂಜೆಯವರ ಬಗ್ಗೆ ಅತ್ಯಂತ ಸೂಕ್ಷ್ಮ ವಿಚಾರಗಳನ್ನು ತಮ್ಮ ನೆನಪಿನ ಬುತ್ತಿಯಿಂದ ತೆಗೆದು ನಮಗೆ ಹಂಚಿದರು. ಇದಾದ ಬಳಿಕ ನಮ್ಮ ಕಾರಂತ ವೇದಿಕೆಯ ಅಧ್ಯಕ್ಷರು ಡಾ. ದೀಪ ಫಡ್ಕೆ ಅವರು ಮಂಗೇಶರಾಯರ  ಸಾಹಿತ್ಯ ಕ್ಷೇತ್ರದ ಸಾಧನೆಗಳನ್ನು ನೆನೆದು, ಅತ್ಯಂತ ಅಚ್ಚುಕಟ್ಟಾದ ತಮ್ಮ ಮಾತುಗಳಿಂದ ವೇದಿಕೆಗೆ ಶುಭ ಕೋರಿದರು. ತಮ್ಮ ಪ್ರಾಸ್ತಾವಿಕ ನುಡಿಗಳ ಮೂಲಕ  ಎಲ್ಲರನ್ನುದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ವಾಗತ ಕೋರಿದರು.

ನಂತರ. ನಾವೆಲ್ಲರೂ ಕಾಯುತ್ತಿದ್ದ, ಉಪನ್ಯಾಸಕರ ಮಾತು, ಪಂಜೆ ಮಂಗೇಶರಾಯರ ಸಾಹಿತ್ಯ, ಬಾಲ್ಯ, ಓದು, ಸಾಧನೆ, ಇವುಗಳ ಕುರಿತು ಒಂದೊಂದಾಗಿ ತಮ್ಮ ಅಮೂಲ್ಯವಾದ ಮಾತುಗಳ ಮೂಲಕ ಎಲ್ಲರನ್ನೂ ಸೆಳೆದರು. ಪಂಜೆಯವರ ಮನೆತನ, ಸ್ಥಳ, ಕಾಲ ಘಟ್ಟದ ಒಂದೊಂದು ವಿವರಗಳನ್ನು ಹೇಳುತ್ತಾ ಸಾಗಿದರು. ಮತ್ತು ಪಂಜೆಯವರ ಅಪಾರ  ಸಾಹಿತ್ಯ ಜ್ಞಾನವನ್ನು ಕುರಿತು ಪಂಜೆಯವರ ಪುಸ್ತಕಗಳನ್ನು ಉಲ್ಲೆಖಿಸುತ್ತಾ, ಮಾತಿನುದ್ದಕ್ಕೂ ಪಂಜೆ ಮoಗೇಶರಾಯರ ಸಾಹಿತ್ಯ ಕೊಡುಗೆಯನ್ನೂ, ನೆನೆಯುತ್ತ ಕನ್ನಡ ಸಾರಸ್ವತ ಲೋಕಕ್ಕೆ ಪಂಜೆಯವರ ಕೊಡುಗೆ ಆಪಾರವಾಗಿದ್ದದ್ದನ್ನು ನಾವು ಕೇಳಿಸಿಕೊಂಡೆವು

ನಂತರ ಹಿರಿಯ ಸಾಹಿತಿಗಳಾದ ಮಹಾಲಿಂಗೇಶ್ವರ ಭಟ್ ರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಹಾಗೆ ಹಿರಿಯರಾದ ಭೋಜಪ್ಪನವರನ್ನು  ವೇದಿಕೆಯ ಪರವಾಗಿ ಸನ್ಮಾನಿಸಲಾಯಿತು.
ನಂತರ ನಮ್ಮ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀಮತಿ ಚೇತನಾ ಹೆಗಡೆ ಅವರು  ಧನ್ಯವಾದ ಸಮರ್ಪಣೆ ಮಾಡಿ,ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷರಿಗೂ, ಕಾರ್ಯಕ್ರಮಕ್ಕೆ ಅತ್ಯಂತ ಸೊಗಸಾದ ನಿರೂಪಣೆಯನ್ನು ಮಾಡಿದ ಶ್ರೀಮತಿ ಸಂಧ್ಯಾ ಮಂಜುನಾಥ್ ಅವರಿಗೂ ಈ ಸಭಾಂಗಣವನ್ನು ಒದಗಿಸಿ ಕೊಟ್ಟ ತರಳಬಾಳು ಸಂಸ್ಥೆಯವರಿಗೂ,ಶ್ರೀ ವಿನಾಯಕ ದೇವಸ್ಥಾನದ ಬಳಗಕ್ಕೂ, ಕಡೆಯದಾಗಿ ಶಿವರಾಮ ಕಾರಂತ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರಿಗೂ  ಬಹಳ ಮುಖ್ಯವಾಗಿ  ನಮ್ಮ ವೇದಿಕೆಯ ಯಶಸ್ಸಿಗೆ ಕಾರಣರಾದ  ನಿಮ್ಮೆಲ್ಲರಿಗೂ ನಾನು ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿದರು.

.ಧನ್ಯವಾದಗಳು.
ಕಾರ್ಯದರ್ಶಿ:               ಮಂಜುಳಾ ಭಾರ್ಗವಿ

Posted 24/6/2025



ANNUAL GENERAL BODY MEETING

 Sunday, June 22, 2025

TaralaBalu Kendra Mini Hall, R.T. Nagara, Bengaluru.

Annual General Body Meeting of Shivarama Karantha Vedike for the year 2024 - 2025 was held at 3 pm, 

 at the above venue, with few members present.


-
Notice was sent to all members through WhatsApp and the member turnout was not very encouraging.

President  of Shivarama Karanth Vedike, Dr Deepa Phadke, welcomed the members and spoke about the achievements and future plans.


Secretary, Mrs Manjula Bhargavi, read the report about the activities of the Vedike and the new members inducted into the committe. Also she highlighted about the new initiative taken about "ಕಾರಂತ ಕಾದಂಬರಿಗಳ ಪರಿಚಯ"  on YouTube Channel.

ಶಿವರಾಮ ಕಾರಂತ ವೇದಿಕೆಯ 2024-25 ರ ವಾರ್ಷಿಕ ವರದಿ.
ಸನ್ಮಾನ್ಯ ಅಧ್ಯಕ್ಷರೇ,
ವೇದಿಕೆಯ ಗೌರವಾನ್ವಿತ ಪದಾಧಿಕಾರಿಗಳೆ , ನೆರೆದಿರುವ ಸಕಲ ಸದಸ್ಯರೇ,  ಸನ್ಮಿತ್ರರೇ,
ಮೂವತ್ತು ವರ್ಷಗಳ ಇತಿಹಾಸವಿರುವ ನಮ್ಮ ಶಿವರಾಮ ಕಾರಂತ ವೇದಿಕೆ(ರಿ) , ಕನ್ನಡ ಸಾಹಿತ್ಯಿಕ ಕಾರ್ಯಕ್ರಮಗಳ ಜೊತೆ ಜೊತೆಗೆ ಕಲೆ ,ಸಂಸ್ಕೃತಿಗಳ ವರ್ಧನೆಗೂ ಮೀಸಲಿಟ್ಟಿದೆ. ಸಂಸ್ಥೆಯು ಸತತವಾಗಿ ಉಪನ್ಯಾಸ, ನಾಟಕ, ಯಕ್ಷಗಾನ, ಮಕ್ಕಳಿಗೆ ಸಂಬಂಧಿಸಿದಂತೆ ರಸಪ್ರಶ್ನೆ ಹೀಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತದೆ. ಬೆಂಗಳೂರಿನ ಪ್ರತಿಷ್ಠಿತ  ಸಾಹಿತ್ಯಕ ಸಂಸ್ಥೆ ಎಂದು ಗುರುತಿಸಲ್ಪಟ್ಟಿದ್ದು,  ಬೆಂಗಳೂರು ಉತ್ತರ ಭಾಗದ ಏಕೈಕ ಸಾಹಿತ್ಯ ವೇದಿಕೆ ಎನ್ನಲು ನಮಗೆ ಹೆಮ್ಮೆ ಎನಿಸುತ್ತದೆ. 

ನಮ್ಮ ಸಂಸ್ಥೆಯ ಕಳೆದ ವಾರ್ಷಿಕ 2024-25ನೇ ಸಾಲಿನ ಮಹಾಸಭೆ ದಿನಾಂಕ 22.6.2025ರ ಭಾನುವಾರ , ಮಧ್ಯಾಹ್ನ 3 ಗಂಟೆಗೆ ಸರಿಯಾಗಿ, ತರಳಬಾಳು ಕೇಂದ್ರ, ಮಿನಿ ಹಾಲ್ ನಲ್ಲಿ .ಆರ್. ಟಿ. ನಗರ ,ಬೆಂಗಳೂರು-32 ಇಲ್ಲಿ ನಡೆಯಿತು.
2024-25 ರ ವಾರ್ಷಿಕ ವರದಿಯ ವರ್ಷದಲ್ಲಿ ಕೆಳಗೆ ಕಾಣಿಸಿದವರು ಸಂಸ್ಥೆಯ ಏಳಿಗೆಗಾಗಿ ದುಡಿದಿದ್ದಾರೆ.   
ಸಂಸ್ಥಾಪಕರು - ಶ್ರೀ ಪಾ.ಚಂದ್ರಶೇಖರ ಚಡಗ ರವರು
ಅಧ್ಯಕ್ಷರು - ಡಾ. ದೀಪಾ ಫಡ್ಕೆ
ಗೌರವಾಧ್ಯಕ್ಷರು - ಶ್ರೀ ಎಸ್.ಆರ್. ವಿಜಯಶಂಕರ
ಉಪಾಧ್ಯಕ್ಷರು - ಡಾ. ಆರ್ .ಆರ್. ಪಾಂಗಾಳ್ ಮತ್ತು ಶ್ರೀ ವೀರಶೇಖರ ಸ್ವಾಮಿ
ಕಾರ್ಯದರ್ಶಿ - ಶ್ರೀಮತಿ ಮಂಜುಳಾ ಭಾರ್ಗವಿ
ಕೋಶಾಧಿಕಾರಿ         - ಶ್ರೀ. ಬಿ. ಜಯರಾಮ ಸೋಮಯಾಜಿ
ಕಾರ್ಯಕಾರಿ ಸಮಿತಿಯ ಸದಸ್ಯರು
ಶ್ರೀ ಕೆ. ರಮೇಶ್ ಗೋಟ
ಶ್ರೀಮತಿ ಸತ್ಯಭಾಮ ರಂಗೇಗೌಡ
ಶ್ರೀಮತಿ ಅರುಣ ಮಯ್ಯ
ಶ್ರೀಮತಿ ಚೇತನಾ ಹೆಗಡೆ
ಶ್ರೀಮತಿ ಸಂಧ್ಯಾ ಮಂಜುನಾಥ್
ಶ್ರೀ ಸುಧೀoದ್ರ
ಯಕ್ಷಗಾನ ಮತ್ತು ನಾಟಕ ಸಮಿತಿ - ಶ್ರೀ ಕೆ. ಕೃಷ್ಣ ಪ್ರಸಾದ .
ಸಂಪನ್ಮೂಲ ಸಮಿತಿ- ಶ್ರೀ ಬಿ.ಎಚ್. ಎಂ. ವೀರಶೇಖರ ಸ್ವಾಮಿ ಮತ್ತು ಶ್ರೀ. ಬಿ. ಜಯರಾಮ ಸೋಮಯಾಜಿ

ಕಾರ್ಯಕಾರಿ ಸಮಿತಿಯ ಸಮಯೋಜಿತ ಸಭೆಗಳ / ಸಂದರ್ಭಕ್ಕನುಗುಣವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತ ಮೇಲ್ಕಂಡ ಅವಧಿಯ ಕಾರ್ಯಕ್ರಮಗಳನ್ನು ರೂಪಿಸಿ , ನಡೆಸಿ ಯಶಸ್ವಿಯಾಗಿರುತ್ತದೆ. ಅದರನ್ವಯ  2024-2025 ರ ವಾರ್ಷಿಕ ಅವಧಿಯ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿಯನ್ನು ಈ ಮಹಾ ಸಭೆಯ ಮುಂದೆ ಇಡುತ್ತಿದ್ದೇನೆ.
1. ದಿನಾಂಕ 28.4.24 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ಡಿ. ಜಿ. ಕ್ಯೂ. ವಸತಿ ಸಂಕಿರ್ಣ ಆರ್.ಟಿ.ನಗರ. ಇಲ್ಲಿ ಪಾ. ವೆಂ. ಸ್ಮೃತಿ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಕ್ಕೆ.ಮುಖ್ಯ ಅತಿಥಿಗಳಾಗಿ ಜಯಂತ್ ಕಾಯ್ಕಿಣಿ ಮತ್ತು ಡಾ. ಶಶಿಕಲಾ ಅವರು  ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ. 
2. ದಿನಾಂಕ 23.ಜೂನ್.2024 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಸಭಾಂಗಣ ಆರ್.ಟಿ.ನಗರ. ಇಲ್ಲಿ ಪ್ರೊ. ಎಲ್. ಎಸ್. ಶೇಷಗಿರಿ ರಾವ್ ಜನ್ಮ ಶತಮಾನತ್ಸವದ ಅಂಗವಾಗಿ .ಮುಖ್ಯ ಅತಿಥಿಗಳಾಗಿ ಟಿ. ಎನ್ ವಾಸುದೇವ ಮೂರ್ತಿ ಹಾಗೂ ಖ್ಯಾತ ಸಾಹಿತಿಗಳು ಹಾಗು ವಿಮರ್ಶಕರಾದ ಶ್ರೀ ಎಸ್ ಆರ್. ವಿಜಯ ಶಂಕರ ಅವರು ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ. 
3. ದಿನಾಂಕ 22.ಅಕ್ಟೋಬರ್ ಭಾನುವಾರ. .2024  ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ ನಮ್ಮ ಆಹಾರ ನಮ್ಮ ಅರೋಗ್ಯ .ಈ ವಿಷಯವಾಗಿ ಡಾ. ಪ್ರಸನ್ನ ಸಂತೆ ಕಡೂರ್  ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ. 
4. ದಿನಾಂಕ 20.ಅಕ್ಟೋಬರ್ .2024 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಸಭಾಂಗಣ ಆರ್.ಟಿ.ನಗರ. ಇಲ್ಲಿ ಸರ್ವ ಸದಸ್ಯರ ಮಹಾ ಸಭೆ ಕಾರ್ಯಕಾರಿ ಸಮಿತಿಯ ಸಭೆ ನಡೆದಿರುತ್ತದೆ.
5. ದಿನಾಂಕ 26 ಅಕ್ಟೋಬರ್ .24 ಶನಿವಾರ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಸಭಾಂಗಣ ಆರ್.ಟಿ.ನಗರ. ಇಲ್ಲಿ ಕಾರಂತರ ವೇದಿಕೆಯಲ್ಲಿ ಕಾರಂತರ 132 ನೆ ಹುಟ್ಟುಹಬ್ಬ ನಿರಂಜನ ಸ್ಮರಣೆ ಕಾರ್ಯಕ್ರಮ ನಡೆದಿರುತ್ತದೆ.ಇದರಲ್ಲಿ ಎಚ್. ಎಸ್. ರಾಘವೇಂದ್ರ ರಾವ್ ಅವರು ಆಗಮಿಸಿ ತಮ್ಮ ಉಪನ್ಯಾಸ ನೀಡಿರುತ್ತಾರೆ.
6. ದಿನಾಂಕ 10 ನವಂಬರ್ 2024 ಭಾನುವಾರ  ಬೆಳಿಗ್ಗೆ 10.00 ಗಂಟೆಯಿಂದ  ಸ್ಥಳ: ವಿನಾಯಕ ದೇವಸ್ಥಾನ, ಸಭಾಂಗಣ,  ಆರ್.ಟಿ.ನಗರ. ಇಲ್ಲಿ ಕನ್ನಡ ರಾಜ್ಯೋತ್ಸವ 2024 ಕಾರ್ಯಕ್ರಮ, ಹಿರಿಯರಿಗೆ ಗೌರವ ಸನ್ಮಾನ, ಸಾಂಸ್ಕ್ರತಿಕ ಕಾರ್ಯಕ್ರಮ, ಪ್ರಸಾದ ವಿತರಣೆ,  ಬಿ. ಎಂ. ಶ್ರೀ. ಪ್ರತಿಷ್ಟಾನದ ಅಧ್ಯಕ್ಷರಾದ ಶ್ರೀ ಭೈರಮಂಗಲ ರಾಮೇಗೌಡ ಅವರು ಆಗಮಿಸಿ ಕಾರ್ಯಕ್ರಮ ವನ್ನು ಅತ್ಯಂತ ಅದ್ಧುರಿಯಿಂದ ಆಚರಿಸಿದ್ದೇವೆ.
7. ದಿನಾಂಕ 15.ಡಿಸೆಂಬರ್ .2024 ಸೋಮವಾರ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ ಗೆ ಶ್ರೀ ಬೇಲೂರು ರಘುನಂದನ್ ರವರು  ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ. 
8. ದಿನಾಂಕ 21.ಜನವರಿ 2025 ಮಂಗಳವಾರ ಕಾರ್ಯಕ್ರಮ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ ಶಿವರಾಮ ಕಾರoತ ವೇದಿಕೆಯ 32 ನೇ ವಾರ್ಷಿಕೋತ್ಸವದ ಪ್ರಯುಕ್ತ ಕಾಯ್ಕಿಣಿ ಸಾಹಿತ್ಯ ಸಂವಾದ ಈ ಕಾರ್ಯಕ್ರಮಕ್ಕೆ ಖ್ಯಾತ ಕವಿಗಳಾದ ಜಯಂತ್ ಕಾಯ್ಕಿಣಿ, ಸಚ್ಚಿದಾನಂದ ಹೆಗಡೆ, ಸಿಂಧು ರಾವ್ ರವರು  ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ. 
9.ಭಾನುವಾರ ಫೆಬ್ರವರಿ 16 2025  ವಿನಾಯಕ ದೇವಸ್ಥಾನ ಸಭಾಂಗಣ ಇಲ್ಲಿ ಪಾ. ವೆಂ. ಸ್ಮೃತಿ ಕಾರ್ಯಕ್ರಮ ಕ್ಕೆ ಪುರುಷೋತ್ತಮ ಬಿಳಿಮಲೆ. ಬಿ. ಕೆ. ಸುಮತಿ ರವರು ಬಂದು ಉಪನ್ಯಾಸವನ್ನು ಮಾಡಿರುತ್ತಾರೆ.
10.ಭಾನುವಾರ ಮಾರ್ಚ್ 2025  ಸ್ಥಳ ತರಳಬಾಳು ಕೇಂದ್ರ ಮಿನಿ ಹಾಲ್. ಇಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಎಂ. ಎಚ್ ಆಶಾ ದೇವಿ ಅವರು ಬಂದು ತಮ್ಮ ಉಪನ್ಯಾಸವನ್ನು ಮಾಡಿ ಚೇತನಾ ಹೆಗಡೆ ಅವರ " ಅವಳ ಅರಿವು "ಪುಸ್ತಕದ ಲೋಕಾರ್ಪಣೆನ್ನು ಮಾಡಿ ಸ್ತ್ರೀ ಅಸ್ಮಿತೆಯ ಕುರಿತು ಮಾತನಾಡಿರುತ್ತಾರೆ. 
  
ಹೊಸದಾಗಿ  ಕೈ ಗೊಂಡ ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆ (ಯೂ ಟ್ಯೂಬ್) ವಾಹಿನಿಯನ್ನು ಆರಂಭಿಸಿದೆ. ಈಗಾಗಲೇ 5 ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. ತಾವುಗಳೆಲ್ಲ ಈ ಕಾರ್ಯಕ್ರಮವನ್ನು ವೀಕ್ಷಿಸಿ ಪ್ರೋತ್ಸಾಹ ಪಡಿಸಬೇಕೆಂದು ಕೇಳಿ ಕೊಳ್ಳುತ್ತೇನೆ.

 ಆತ್ಮೀಯರೇ .
 ಮೇಲ್ಕಂಡ ವಾರ್ಷಿಕ ಅವಧಿಯ ವೇದಿಕೆಯ ಎಲ್ಲಾ ಕಾರ್ಯಕ್ರಮಗಳು ಯಶಸ್ಸಿನ ಬಾಗಿಲು ತಟ್ಟಿದ್ದು ನಮ್ಮ ಕಾರಂತ ವೇದಿಕೆಯ ಹೆಮ್ಮೆ..ಪ್ರತಿ ಯಶಸ್ಸಿನ ಕೊಂಡಿಗಳು ಮಾತ್ರ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಎಂಬ ಹೆಮ್ಮೆಯನ್ನು ವೇದಿಕೆಯ ಪರವಾಗಿ ವ್ಯಕ್ತಪಡಿಸುತ್ತಾ, 
ಮೂರು ದಶಕಗಳ ಈ ಸಂಭ್ರಮಾಚರಣೆಯಲ್ಲಿ ಶಿವರಾಮ ಕಾರಂತ ವೇದಿಕೆಯ ಸಂಸ್ಥಾಪಕರಾದ ಪಾ. ಚಂದ್ರಶೇಖರ ಚಡಗ ಸರ್ ರವರ ಆಶಯ,ಅಪ್ಪಣೆ, ಆದರ್ಶ ಮತ್ತು ಸತತ ಮಾರ್ಗದರ್ಶನದಲ್ಲಿ ,ಹಾಗು ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿರುವ ಡಾ.ದೀಪಾಫಡ್ಕೆ ಅವರಿಗೂ, ಗೌರವಾಧ್ಯಕ್ಷರಾದ ಶ್ರೀ ಎಸ್. ಆರ್. ವಿಜಯಶಂಕರ್ ರವರಿಗೂ , ಉಪಾಧ್ಯಕ್ಷರಾದ ವೀರಶೇಖರ ಸ್ವಾಮಿಯವರಿಗೂ, ಎಂದಿನಂತೆ ವೇದಿಕೆಯ ಲೆಕ್ಕಪತ್ರಗಳನ್ನು ಪರಿಶೋಧಿಸಿದ ಯಾವುದೇ ರೀತಿಯ ಶುಲ್ಕ ಪಡೆಯದ  ಶರತ್ ಅಂಡ್.ಕಂಪನಿ ಚಾರ್ಟೆಡ್ ಅಕೌಂಟೆಂಟ್ಸ್ ಶ್ರೀ ಶರತ್ ಚಂದ್ರ, ಅವರಿಗೆ ವೇದಿಕೆ ಅಭಾರಿಯಾಗಿದೆ.

ವೇದಿಕೆಯ ಲೆಕ್ಕಪತ್ರಗಳ ಜವಾಬ್ದಾರಿ ನಿರ್ವಹಿಸುವ ಖಜಾಂಚಿ ಶ್ರೀ ಜಯರಾಮಸೋಮಯಾಜಿ ಸರ್ ರವರಿಗೂ, ಮತ್ತು ಯೂಟ್ಯೂಬ್ ,ಫೇಸ್ಬುಕ್ ಮಾಧ್ಯಮಗಳ ಮೂಲಕವೂ ವೇದಿಕೆಯ ಕಾರ್ಯಕ್ರಮ ವೀಕ್ಷಿಸಲು ತಾಂತ್ರಿಕ ಸಹಕಾರ ಜವಾಬ್ದಾರಿ ನಿರ್ವಹಿಸಿದ ಪತ್ರಿಕೋದ್ಯಮಿ ಶ್ರೀ ಶಿವ ಸುಬ್ರಮಣ್ಯರವರು, ಸಮಿತಿ ಸದಸ್ಯರು ಶ್ರೀ ಸುದಿಂದ್ರ ರವರು, ಎಲ್ಲರಿಗೂ ತುಂಬು ಹೃದಯದಿಂದ ಧನ್ಯವಾದಗಳು.
ಅಷ್ಟೇ ಅಲ್ಲದೇ ತರಳಬಾಳು ಗ್ರಂಥಾಲಯದಿಂದ ಶ್ರೀ ವಿನಾಯಕ ದೇವಸ್ಥಾನ ಸಭಾಂಗಣದ ಆಡಳಿತ ಮಂಡಳಿಯ ಸದಸ್ಯರೂ ಹಾಗು ವೇದಿಕೆಯ ಉಪಾಧ್ಯಕ್ಷರಾದ ಶ್ರೀ ವೀರಶೇಖರ ಸ್ವಾಮಿರವರು.ತನು ಮನ ಧನಗಳಿಂದ ವೇದಿಕೆಯಲ್ಲಿ ಅದ್ಧೂರಿ ಯಕ್ಷಗಾನ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುವ ಡಾ. ಪಾಂಗಾಳ್ ಸರ್ ರವರಿಗೂ ನಮ್ಮ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
ಎಂದಿನಂತೆ ನೀವಿಲ್ಲದೇ ಯಾವ ಕಾರ್ಯಕ್ರಮಗಳಿಗೂ ಕಳೆ ಇರುವುದಿಲ್ಲ .ಪ್ರತಿ ಕಾರ್ಯಕ್ರಮದ ಹಿಂದೆ  ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರತಿಯೊಬ್ಬರ ಪಾತ್ರಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಇದ್ದುದ್ದನ್ನು ನಾವು ಕಾಣಬಹುದು.ಸಮಿತಿಯ ಪ್ರತಿ ಸದಸ್ಯರಿಗೂ ಕೂಡ ನಾನು ವಂದನೆಗಳನ್ನು ಸಲ್ಲಿಸುತ್ತೇನೆ. 
ವೇದಿಕೆಯನ್ನು ಬೆಳಸಿ ಸಾರಸ್ವತ ಲೋಕದ ದಿಗ್ಗಜರ ಸೇವೆಯನ್ನು ನೆನೆಯುತ್ತಾ ನಮ್ಮ ನಿಮ್ಮೆಲ್ಲರ ಸಾಹಿತ್ಯಾಭಿರುಚಿಯನ್ನು ಮತ್ತಷ್ಟು ಮಗದಷ್ಟು ರುಚಿಕರ ವಾಗುವಂತೆ ಮಾಡಿಕೊಂಡು ಸವಿಯೋಣ.
 ಧನ್ಯವಾದಗಳು. ಸರ್ವೇ ಜನಾ ಸುಖಿನೋಭವಂತು.
ಶ್ರೀಮತಿ ಮಂಜುಳಾ ಭಾರ್ಗವಿ, ಕಾರ್ಯದರ್ಶಿ 

Treasurer of the Vedike, Sri B Jayarama Somayaji, presented Income -Expenditure, Balance Sheet, and Receipt and Payment for the year ending 31st March 2025, audited by Chartered Accountants SHARAT AND CO.


A big thanks to Sri SharathChandra for their free, valuable service.


With couple of remarks the report was accepeted the house.

Mr ShivaSubramaniam asked that the report may be sent to the members a week in advance, so that they study the same and come prepared.

Mr Sudhindra proposed Vote of thanks.


Posted 24/5/2025



Monday, June 9, 2025

ಎಚ್. ಎಸ್.ವಿ. ನಮನ

ಭಾನುವಾರ,  ಜೂನ್ 8, 2025

ಪಾಂಚಜನ್ಯ ಸಭಾಂಗಣ, ವಿನಾಯಕ ದೇವಸ್ಥಾನ, ಅರ್. ಟಿ. ನಗರ, ಬೆಂಗಳೂರು.

ಶಿವರಾಮ ಕಾರಂತ ವೇದಿಕೆ, ಅರ್.ಟಿ.ನಗರ, ಬೆಂಗಳೂರು ಇವರು ಹಮ್ಮಿಕೊಂಡ,  ಇತ್ತೀಚಿಗೆ ನಿಧನರಾದ ಪ್ರಸಿದ್ಧ ಕವಿ ಶ್ರೀ ಎಚ್.ಎಸ್. ವೆಂಕಟೇಶ ಮೂರ್ತಿ ಅವರ ನುಡಿ ನಮನ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.



ಹಿರಿಯ ವಿಮರ್ಶಕ ಶ್ರೀ ಎಸ್.ಅರ್. ವಿಜಯಶಂಕರ ಮತ್ತು ಸಂಪಾದಕರು, ಅಭಿನವ ಚತುರ್ಮಾಸಿಕ ಪತ್ರಿಕೆ ನ. ರವಿಕುಮಾರ, ಅವರುಗಳು ಎಚ್.ಎಸ್.ವಿ. ಅವರಿಗೆ ನುಡಿ ನಮನವನ್ನು ಸಲ್ಲಿಸಿದರು.



ಹಲವಾರು ಎಚ್.ಎಸ್. ವಿ. ಅವರ ಅಭಿಮಾನಿಗಳು ಉಪಸ್ತಿತರಿದ್ದು ಕಾರ್ಯಕ್ರಮವು ಯಸಸ್ವಿಯಾಗಿ ನೆರವೇರಿತು.

ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರ ವರದಿ:

ಕಣ್ಣೊಂದಿದ್ದರೆ ಸಾಕೆ, ಬ್ಯಾಡವೆ ಮಂದೆ? ಕಣ್ಣಿನ ಮುಂದೆ ನಿಮಗೆ ಕಾಣೋಕೆ 
ಕೊರಳೊಂದಿದ್ದರೆ ಸಾಕೆ, ಬ್ಯಾಡವೆ ಹಾಡು? ಎಲ್ಲರ ಜೋಡಿ ಕೂಡಿ ಹಾಡೋಕೆ...... 

ಎಲ್ಲರಿಗೂ ನಮಸ್ಕಾರ.

ಶಿವರಾಮ ಕಾರಂತ ವೇದಿಕೆಯ ಜೂನ್ ತಿಂಗಳ 8ನೇ ತಾರೀಕು, ಭಾನುವಾರದ 'ಎಚ್. ಎಸ್. ವಿ ನಮನ' ಕಾರ್ಯಕ್ರಮದಲ್ಲಿ ಹಲವಾರು ಸದಸ್ಯರು ಭಾಗವಹಿಸಿದ್ದು ಸಂತಸದ ಸುದ್ದಿ. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದದ್ದು ಮತ್ತಷ್ಟು ಸಂತೋಷದ ಸುದ್ದಿ..

ಭೌತಿಕವಾಗಿ ನಮ್ಮನ್ನೆಲ್ಲ ಅಗಲಿದರು, ಶಾಶ್ವತವಾಗಿ ತಮ್ಮ ಬರಹದ ಮೂಲಕ, ಮತ್ತು ಅತ್ಯಂತ ಮಧುರವಾದ ಭಾವಗೀತೆಗಳ ಮೂಲಕ, ನಮ್ಮೊಡನೆ ಸದಾ ಕಾಲವೂ ಇರುವ, ಎಚ್. ಎಸ್. ವೆಂಕಟೇಶ್ ಮೂರ್ತಿ ಅವರಿಗೆ  ಶ್ರದ್ಧಾಂಜಲಿಯನ್ನು ಸಲ್ಲಿಸುವ ಸಲುವಾಗಿ ಆಯೋಜಿಸಲಾಗಿದ್ದ, ಈ ಕಾರ್ಯಕ್ರಮದಲ್ಲಿ ಮೊದಲಿಗೆ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಲಾಯಿತು. ನಂತರ ಎಚ್ಛೆಸ್ವಿ ಅವರದೇ ಆದ  ಭಾವಗೀತೆಯೊಂದನ್ನು ಅತ್ಯಂತ ಸುಮಧುರವಾದ  ಕಂಠದಲ್ಲಿ, ಕುಮಾರಿ ರಮ್ಯಾ ಶ್ರೀ ಎನ್ನುವ ಮೌoಟ್ ಕಾರ್ಮಲ್ ಕಾಲೇಜಿನ ವಿದ್ಯಾರ್ಥಿನಿ ಹಾಡಿದರು.  
ನಂತರ ಎಚ್. ಎಸ್. ವಿ ಅವರ ಭಾವಚಿತ್ರಕ್ಕೆ ಪುಷ್ಪನಮನ  ಸಲ್ಲಿಸಲಾಯಿತು. ನಮ್ಮ ವೇದಿಕೆಯ ಅಧ್ಯಕ್ಷರು ಡಾ. ದೀಪ ಫಡ್ಕೆ ಅವರು ಅಗಲಿದ ಎಚ್. ಎಸ್. ವಿ ಅವರ ಸಾಹಿತ್ಯ ಕ್ಷೇತ್ರದ ನೆನಪುಗಳನ್ನೂ ಹಾಗೂ ಭಾವಗೀತೆಗಳ ಕಡಲಿನಲ್ಲಿ ನಿರಂತರ ಅಲೆಗಳ ಮೊರೆತವನ್ನು ಹುಟ್ಟಿಸುವಂತ, ಭಾವಗೀತೆ ರಚನೆಕಾರರಿಗೆ ತಮ್ಮ ಪ್ರಾಸ್ತಾವಿಕ ನುಡಿಗಳ ಮೂಲಕ  ನುಡಿಯಾರ್ಚನೆಗೈಯುತ್ತಾ, ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ವಾಗತ ಕೋರಿದರು.ಅವರು ಎಚ್. ಎಸ್. ವಿ ಅವರ ಬಗ್ಗೆ ಆಡಿದ ಒಂದೊಂದು ಮಾತುಗಳೂ ಕೂಡ, ಅತ್ಯಂತ ಮೌಲ್ಯಬರಿತ, ಸಮಂಜಸ ನುಡಿಗಳಾಗಿದ್ದವು. 

ನಂತರ ನ. ರವಿಕುಮಾರ್, ಸಂಪಾದಕರು, ಅಭಿನವ ಚಾತುರ್ಮಾಸಿಕ, ಅವರು ಎಚ್. ಎಸ್. ವಿ. ಅವರ ಬಗ್ಗೆ ಮಾತನಾಡುತ್ತಾ, ಅವರ ಜೊತೆಗಿದ್ದ ತಮ್ಮ ನಿಕಟ ಸಂಪರ್ಕದ ಕುರಿತು,ಸಾಹಿತ್ಯ ಲೋಕದಲ್ಲಿಯೂ ಕೂಡ ಎಚ್. ಎಸ್. ವಿ. ಅವರು ಮಾಡಿದ ಸಾಧನೆಗಳನ್ನು, ಮನಸ್ಫೂರ್ವಕವಾಗಿ  ಹಾಡಿ ಹೊಗಳುತ್ತಾ  ತಮ್ಮ ಮಾತು -ಕತೆಯನ್ನು ಮುಂದು ವರಿಸಿದರು. ನಿಜಕ್ಕೂ ರವಿಕುಮಾರ್ ರವರು ತುಂಬಾ ಸಂಭಾವಿತರೆoಬುವುದಕ್ಕೆ ಸಾಕ್ಷಿಯಾಗಿ ನಮ್ಮ ಶಿವರಾಮ ಕಾರoತ ವೇದಿಕೆಯ ವಾಸ್ತವಾoಶಗಳನ್ನು ಅರಿತವರಂತೆ, ವೇದಿಕೆಯ ನಡೆಯನ್ನು ಪ್ರಶಂಸಿಸಿ ತಮ್ಮ ತನು ಮನ ಧನಗಳಿಂದಲೂ ನಮ್ಮೆಲ್ಲರನ್ನೂ ಪ್ರೋತ್ಸಾಹ ಪಡಿಸಿದ್ದು ನಿಜಕ್ಕೂ ತುಂಬಾ ಆದರಣೀಯವೆನಿಸಿತು. ಅಷ್ಟೇ ಅಲ್ಲದೆ, ಎಚ್. ಎಸ್. ವಿ ಅವರ ಸರಳತೆಯ ವ್ಯಕ್ತಿತ್ವನ್ನು ಮೆಲುಕು ಹಾಕುತ್ತಾ, ತಮ್ಮ ಜೀವನದಲ್ಲಿ ಎಚ್. ಎಸ್. ವಿ ಅವರಂತ ವ್ಯಕ್ತಿಯ ಅಗಲಿಕೆ ತುಂಬಲಾರದ ನಷ್ಟ ಎಂದು ಪರಿತಪಿಸಿದರು. ತಮ್ಮ ಮಾತುಗಳ ಮೂಲಕ ಎಲ್ಲರನ್ನೂ ಸೆಳೆದರು.

ನಂತರ ಮತ್ತೊಂದು ಸುಮಧುರವಾದ ಭಾವಗೀತೆಯನ್ನು ಹಾಡಲಾಯಿತು.
ನಂತರ ನಮ್ಮ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದ ನಮ್ಮ ವೇದಿಕೆಯ ಗೌರವಾಧ್ಯಕ್ಷರು ಹಾಗೂ ಖ್ಯಾತ ವಿಮರ್ಶಕರಾದ ಶ್ರೀ ಎಸ್. ಆರ್. ವಿಜಯ ಶಂಕರ ರವರು ಎಚ್. ಎಸ್. ವಿ ಅವರನ್ನು ಕುರಿತು ಮಾತನಾಡಿದರು.
ನಿಜಕ್ಕೂ ಇವರ ಮಾತುಗಳನ್ನು ಕೇಳುತ್ತಾ ಕುಳಿತವರಿಗೆ ಮತ್ತಷ್ಟು ಸಮಯ ಇದ್ದಿದ್ದರೆ ಬಹುಶ:  ಎಚ್. ಎಸ್. ವಿ. ಅವರ ಬಗ್ಗೆ ಇನ್ನಷ್ಟು ಹೊಸ ವಿಷಯಗಳು, ಚಿಂತನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರೇನೋ ಅನಿಸಿತು..ನಿಜಕ್ಕೂ ಎಚ್. ಎಸ್. ವಿ ಅವರಂತ ಹಿರಿಯ ಜೀವದೊಂದಿಗೆ ತಮಗಿದ್ದ ಭಾವ ಬೆಸುಗೆಯ ಬಗ್ಗೆ ತಿಳಿದು ನಾವೆಲ್ಲಾ ಮೂಕವಿಸ್ಮಿತರಾದೆವು. ಅಲ್ಲಿ ಮಾತಿಗಿಂತ ಮೌನವೆ ಎಲ್ಲದಕ್ಕೂ ಉತ್ತರವಾಗಿತ್ತು. ನಮ್ಮ ಸಾಹಿತ್ಯ ಲೋಕ ಇದುವರೆಗೂ ಅನೇಕ ದಿಗ್ಗಜರನ್ನು ಕಳೆದು ಕೊoಡಿದೆ. ಉದಾಹರಣೆಗೆ, ಕುವೆಂಪು, ಕಾರಂತರು, ಬೇಂದ್ರೆ, ಅಡಿಗರು, ಪು. ತಿ. ನ ಹೀಗೆ ಅನೇಕರು ಆಗಸದ ನಕ್ಷತ್ರಗಳಾಗಿದ್ದಾರೆ. ಆದರೆ ಎಚ್. ಎಸ್. ವಿ ಅವರ ಅಗಲಿಕೆಯು ಮನೆಯ ಹಿರಿಯ ಅಣ್ಣನನ್ನು  ಕಳೆದುಕೊಂಡoತಾಗಿದೆ ಎಂದು ಬಹಳ ವ್ಯಥೆ ಪಟ್ಟರು.  ಕ್ಷಣ ಕಾಲ ತಮ್ಮ ಮಾತುಗಳಲ್ಲಿ ಗದ್ಗದಿತರಾಗಿದ್ದು ತುಂಬಾ ಭಾರವಾದ ಹೃದಯವನೊತ್ತು ಬಂದದ್ದಕ್ಕೆ ಸಾಕ್ಷಿಯಾಗಿತ್ತು. ಎಚ್. ಎಸ್. ವಿ. ಅವರ ಸಾಂಗತ್ಯದಲ್ಲಿ ಸಾಥಿತ್ಯವನ್ನು ಕಂಡ ವಿಮರ್ಶಕರ ಮನದಲ್ಲಿದ್ದ ನೋವು,ಕೆಲವರ ಕಣ್ಣು ತೇವವಾಗುವಂತೆ ಮಾಡಿದ್ದು ಸುಳ್ಳಲ್ಲ..
ಇನ್ನೂ ತಮ್ಮ ಸಾಹಿತ್ಯದ ಪಯಣದಲ್ಲಿ ಎಚ್. ಎಸ್. ವಿ ಯವರ ಪಾತ್ರ ಎಂತಹ ಅನನ್ಯತೆಯ ಭಾವ ಮೂಡಿಸಿತ್ತೆoದರೆ, ಎಚ್. ಎಸ್. ವಿ. ಅವರ ಸಮಗ್ರ ಕಾವ್ಯಕ್ಕೆಒಂದು ಸುದೀರ್ಘ ಮುನ್ನುಡಿಯನ್ನೂ ಕೂಡ ನಮ್ಮ ವಿಮರ್ಶಕರು  ಬರೆಯುತ್ತಾರೆ. ಇದರಿಂದ, ಎಚ್. ಎಸ್. ವಿ ಯವರಸರಳ ಸಜ್ಜನಿಕೆಯ ಗುಣ, ಹಿರಿಯ, ಹಾಗೂ ಕಿರಿಯ ತಲೆಮಾರುಗಳಲ್ಲಿಯೂ ತಳವೂರಿ ನಿಲ್ಲಿವಂತ ಗಟ್ಟಿತನ ನಮಗೆಲ್ಲ ಆದರ್ಶವಾಗುವುದನ್ನು ನಾವು ಕಾಣಬಹುದು. ಮತ್ತು ಕಾಲಕ್ಕೆ ತಕ್ಕಂತೆ ಬದಲಾದ ಲಾಲಿತ್ಯ ಎಚ್. ಎಸ್. ವಿ ಯವರ ಭಾಷಾ ಸಾಹಿತ್ಯ ಎಂದು ವ್ಯಾಕ್ಯನಿಸುತ್ತಾ, ಹಳೆಗನ್ನಡದ ಸಾಹಿತ್ಯ, ಭಾಷಾ ಪಾರಂಪರ್ಯ, ನಡೆದು ಬಂದ ಹಾದಿಯಿಂದಲೂ, ಈಗಿನ ನವ್ಯ ಸಾಹಿತ್ಯದ ಕಾಲಕ್ಕೂ, ಸರ್ವಕಾಲಕ್ಕೂ ಸಲ್ಲುವಂತ ಎಚ್. ಎಸ್. ವಿ.ಯವರ ಓದು ಹಾಗೂ ಬರಹ, ಸಾಹಿತ್ಯ ಕ್ಷೇತ್ರದ ಒಂದು ಸುದೀರ್ಘ ಅಚ್ಛಾದಿತಾ ಹೆಜ್ಜೆ ಎಂಬಂತೆ ಹೇಳಿದರು.. ಹೀಗೆ ಮಾತನಾಡುತ್ತಾ ನಮ್ಮನ್ನೆಲ್ಲಾ ಎಚ್. ಎಸ್. ವಿ ಯವರ ಬರಹದ ಲೋಕಕ್ಕೆ ಕೊಂಡೊಯ್ದಿದ್ದರು.. ಎಚ್. ಎಸ್. ವಿ. ಯವರು ಕೇವಲ ಭಾವಗೀತೆಗಳನ್ನಷ್ಟೇ ರಚಿಸ ಬಲ್ಲರೇನೋ ಎನ್ನುವ, ಈಗಿನ ಕಾಲ ಘಟ್ಟದವರಿಗೆ ಬಹುಶ: ನಮ್ಮ ವೇದಿಕೆಯ ಹೆಮ್ಮೆಯ ವಿಮರ್ಶಕರಾದ ಶ್ರೀ ಎಸ್. ಆರ್. ವಿಜಯ ಶಂಕರರ ಮಾತುಗಳನ್ನು ಆಲಿಸಿದ್ದಿದ್ದರೆ ತುಂಬಾ ಸೂಕ್ತವಾದ ಮಾಹಿತಿಗಳು ದೊರಕುತ್ತಿತ್ತೇನೋ ಎನಿಸಿತು.  ಹೀಗೆ ಎಚ್. ಎಸ್. ವಿ. ಯವರ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡ ವಿಮರ್ಶಕರು, ಹಲವಾರು ನೆನಪುಗಳನ್ನು ತಮ್ಮ ನೆನಪಿನ ಬುತ್ತಿಯಿಂದ ನಮ್ಮೆದುರಿಗೆ ಬಿಚ್ಚಿಟ್ಟರು.

ಇದಾದ ನಂತರ ನಮಗೆಲ್ಲಾ ಅತ್ಯಂತ ಚಿರಪರಿಚಿತರಾದ, ಚಿದಂಬರ ಕೋಟೆ ಯವರು, ತಮ್ಮ ಇಂಪಾದ ದ್ವನಿಯಿಂದ ಎಚ್. ಎಸ್. ವಿ. ಯವರ ಸಾಹಿತ್ಯದಲ್ಲಿ ಅರಳಿದ ಮುಕ್ತ ಮುಕ್ತ ಮುಕ್ತಾ, ಎನ್ನುವ ಶೀರ್ಷಿಕೆಯ ಹಾಡೊoದನ್ನು ಪ್ರಸ್ತುತ ಪಡಿಸಿದರು..ಇದಕ್ಕೂ ಮುನ್ನ ಸಭಿಕರೆಲ್ಲ ಎದ್ದು ನಿಂತು ಒಂದು ನಿಮಿಷದ ಮೌನಾಚರಣೆಯನ್ನು ಮಾಡಿ ಅಗಲಿದ ಚೇತನಕ್ಕೆ ಶ್ರದ್ಧಾಂಜಲಿಯನ್ನು ಸಲ್ಲಿಸಿದೆವು.ಮತ್ತೊಂದು ಹಾಡನ್ನು ರಮ್ಯಶ್ರೀ ಹಾಡಿದರು.

ನಮ್ಮ ಸಮಿತಿಯ ಸದಸ್ಯರಾದ ಶ್ರೀ ಸುಧೀoದ್ರರವರೂ ಕೂಡ ಎಚ್. ಎಸ್. ವಿ. ಯವರ ಜೊತೆಗಿನ ಕೆಲವು ಅಮೂಲ್ಯ ಘಟನೆಗಳನ್ನು  ಸಭೆಯೊಂದಿಗೆ ಸ್ಮರಿಸಿದರು.
ಧನ್ಯವಾದ ಸಮರ್ಪಣೆ ಮಧುರವಾದ ಪ್ರಾರ್ಥನೆಯನ್ನು ಸೊಗಸಾಗಿ ಹಾಡಿದ ಕುಮಾರಿ ರಮ್ಯಶ್ರೀಯವರಿಗೆ ಧನ್ಯವಾದಗಳನ್ನು ಅರ್ಪಿಸಲಾಯಿತು. 
ನಂತರ ಎಲ್ಲರನ್ನೂ ಸ್ವಾಗತಿಸಿದ ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷರಿಗೂ, ಕಾರ್ಯಕ್ರಮಕ್ಕೆ
ಅತ್ಯಂತ ಸೊಗಸಾದ ನಿರೂಪಣೆಯನ್ನು ಮಾಡಿದ ಶ್ರೀಮತಿ ಚೇತನಾ ಹೆಗಡೆ ಅವರಿಗೂ ಈ ಸಭಾಂಗಣವನ್ನು ಒದಗಿಸಿ ಕೊಟ್ಟ ಶ್ರೀ ವಿನಾಯಕ ದೇವಸ್ಥಾನದ ಬಳಗಕ್ಕೂ, ಕಡೆಯದಾಗಿ ಶಿವರಾಮ ಕಾರಂತ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರಿಗೂ  ಬಹಳ ಮುಖ್ಯವಾಗಿ  ನಮ್ಮ ವೇದಿಕೆಯ ಯಶಸ್ಸಿಗೆ ಕಾರಣರಾದ  ನಿಮ್ಮೆಲ್ಲರಿಗೂ ನಾನು ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ.
ಧನ್ಯವಾದಗಳೊಂದಿಗೆ
ಕಾರ್ಯದರ್ಶಿ: ಮಂಜುಳಾ ಭಾರ್ಗವಿ

Posted 11/6/2025




Friday, April 18, 2025

ಉಪನ್ಯಾಸ - ಲಕ್ಷ್ಮೀಶ ತೋಳ್ಪಾಡಿ

 ಶುಕ್ರವಾರ, 18 ಏಪ್ರಿಲ್ 2025

ಗಾಂಧಿ ಭವನ, ಕುಮಾರ ಕೃಪಾ ರಸ್ತೆ, ಬೆಂಗಳೂರು.

ಶಿವರಾಮ ಕಾರಂತ ವೇದಿಕೆ, ಅರ್. ಟಿ. ನಗರ, ಬೆಂಗಳೂರು, ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಎರಡು ದಿನಗಳ ಶ್ರೀ  ಲಕ್ಷ್ಮೀಶ ತೋಳ್ಪಾಡಿ ಯವರ ಉಪನ್ಯಾಸ "ಭಕ್ತಿ ಮತ್ತು ಸಾಹಿತ್ಯ". ಮೊದಲನೇ ದಿನವು ಸಂಪನ್ನಗೊಂಡಿತು.


ಪ್ರಥಮದಲ್ಲಿ ಕಾರಂತ ವೇದಿಕೆಯ ಅಧ್ಯಕ್ಷೆ ಡಾ. ದೀಪಾ ಫಡ್ಕೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನೂ, ಸಭಿಕರನ್ನು ಸ್ವಾಗತಿಸಿದರು.



ನಾಡಿನ ಪ್ರಸಿದ್ಧ ಸಾಹಿತಿ, ಚಿಂತಕ ಶ್ರೀ ಲಕ್ಷ್ಮೀಶ ತೋಳ್ಪಾಡಿ ಅವರು ತಮ್ಮ ಉಪನ್ಯಾಸದಲ್ಲಿ "ದೇವರು, ಭಕ್ತಿ, ಸಾಹಿತ್ಯ " ವಿಷಯವಾಗಿ ಸುಮಾರು 90 ನಿಮಿಷ ಗಳ ಕಾಲ ಮಾತನಾಡಿದರು.


ಮುಖ್ಯ ವಿಷಯಗಳು 

 ವಚನಕ್ಕೆ ನಾಚದ ಮನೆ, ಮನಕ್ಕೆ ನಾಚದ ವಚನ.

ಈ ಮಾತು ಭಕ್ತಿಗೂ, ಸಾಹಿತ್ಯಕ್ಕೂ ಒಗ್ಗುವ  ಯುಗ.

ವ್ಯಕ್ತಿತ್ವ ಭಾಷೆಯಲ್ಲಿ ಬಂದ ಮಾತು, ಸಹೃದಯ... ದೇವರು..

ಶಬ್ದಾರ್ಥ ಇಲ್ಲದೇ ಬೇರೇನೂ ಆತನಿಗೆ ಬೇಡ..ಆತನೇ ದೇವರು

ಇದು ಕಲಿಯುಗದ ವೈಶಿಷ್ಟ್ಯ, ನಿನ್ನ ಮಾತಿನ ಶೋತ್ರುವಾಗಿ ಬರುವವನು ದೇವರು

ಭಕ್ತಿ, ಭಕ್ತ, ಭಕ್ತೆ .. ಸಾಹಿತ್ಯಕ್ಕೆ ಇರುವ ಸಂಬಂಧ.

ಹತ್ತಿರದಲ್ಲೇ ಇರುವುದನ್ನು ಗುರುತಿಸುವುದು ದೇಸಿ ಗುಣ

ನಮ್ಮ ಇಂದ್ರೀಯಕ್ಕೆ ಬಂದಂತಹ ಅನುಭವ.

ಕಣ್ಣಿನ ಕಣ್ಣು.. ಕನ್ನಡಿಯಲ್ಲಿ ಕಂಡ ಕಣ್ಣು...ಪ್ರತೀಕ.....



ಸಾಹಿತ್ಯಾಭಿನಿಗಳೂ, ತೋಳ್ಪಾಡಿ ಅವರ ಅಭಿಮಾನಿಗಳೂ , ಹಲವಾರು ಮಂದಿ ಹಾಜರಿದ್ದರು.











ಬರೆದಿರುವುದು 19/4/2025

Monday, April 14, 2025

ಶಿವರಾಮ ಕಾರಂತ ವೇದಿಕೆ - "ಪಾಂಗಾಳ ಡಾಕ್ಟ್ರು " - ಕೃತಿ ಬಿಡುಗಡೆ

 ಭಾನುವಾರ, 13 ಏಪ್ರಿಲ್, 2025

ತರಳಬಾಳು ಕೇಂದ್ರ, ಮಿನಿ ಹಾಲ್ , ಆರ್.ಟಿ. ನಗರ, ಬೆಂಗಳೂರು.

ಶಿವರಾಮ ಕಾರಂತ ವೇದಿಕೆಯ ಏಪ್ರಿಲ್ ತಿಂಗಳ ಕಾರ್ಯಕ್ರಮದಲ್ಲಿ ಶ್ರೀ ರಾಧಾಕೃಷ್ಣ ರಾವ್ ಪಾಂಗಳ್ ಅವರ ಕೃತಿ "ಪಾಂಗಳ್  ಡಾಕ್ಟ್ರು" ಲೋಕಾರ್ಪಣೆ ಗೊಂಡಿತು.



ಕನ್ನಡ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಶೋತ್ತಮ ಬಿಳಿಮಲೆ ಮುಖ್ಯ ಅತಿಥಿಗಳಾಗಿದ್ದು , ವೇದಿಕೆಯ ಗೌರವ ಅಧ್ಯಕ್ಷ ಎಸ.ಆರ್. ವಿಜಯಶಂಕರ್,  ಪಾಂಗಾಳ್  ಅವರ ಕೃತಿಯ ಬಗ್ಗೆ ಭಾಷಣ ಮಾಡಿದರು.


ಡಾ. ಪುರುಷೋತ್ತಮ ಬಿಳಿಮಲೆ 



ಎಸ್. ಆರ್. ವಿಜಯಶಂಕರ್ 


ಮೊದಲಿಗೆ ಪ್ರಾರ್ಥನೆಯಾದ ನಂತರ ವೇದಿಕೆಯ ಅಧ್ಯಕ್ಷೆ ಡಾ ದೀಪಾ ಫಡ್ಕೆ ಪ್ರಾಸ್ತಾವಿಕ ನುಡಿಯೊಂದಿಗೆ ಅತಿಥಿಗಳನ್ನು, ಸಭಿಕರನ್ನು ಸ್ವಾಗತಿಸಿದರು.

ಪಾ. ಚಂದ್ರಶೇಖರ ಚಡಗ 



ಕೃತಿಯ ಸಂಪಾದಕರೂ, ವೇದಿಕೆಯ ಸಂಸ್ಥಾಪಕರೂ ಆದ ಪಾ. ಚಂದ್ರಶೇಖರ ಚಡಗ ಕೃತಿಯ ಬಗ್ಗೆ ಮಾತನಾಡಿ , ಅವರನ್ನು ಗೌರವಿಸಲಾಯಿತು.



ವಿಶ್ವವಾಣಿ 

ಕನ್ನಡ ಪ್ರಭ 



ರಮೇಶ್ ಗೋಟ
 


ಶ್ರೀಮತಿ ಚೇತನಾ ಹೆಗ್ಡೆ ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ಮಾಡಿದರು.
ಶ್ರೀಮತಿ ಛಾಯ ಉಪಾದ್ಯ ಅವರ ಧನ್ಯವಾದ ಸಮರ್ಪಣೆಯೊಂದಿಗೆ  ಅಂದಿನ ಕಾರ್ಯಕ್ರಮ ಮುಕ್ತಾಯ ಗೊಂಡಿತು.

Posted 14/4/2025