Showing posts with label NAVARATRI. Show all posts
Showing posts with label NAVARATRI. Show all posts

Thursday, October 26, 2023

NAVARATRI UTSAV 2023 - PADU GARADI MANE

15th Oct. - 24th Oct 2023

Padu Garadi - Shri Chandika DurgaParameshwari,

Brahmavara, Udupi District.



Our Somayaji family has close link with GaradiMane Varambally Family.
My eldest sister Vanajakshi is married to Upendra Varambally.


We also worship Chandika Durga Parameshwari, and have open invitation to all the progrgrams year round.

Night Mangalarathi

Year round pooja, festivals like Navaratri. Chandika Homa, Dakke Bali or Anantha Chaturdashi, is taken care by Varmabally family, by roation.


Vijendra Varambally and Ramananda Varamabally take care of all the events.

This year, the Kuppanna Varambally family responsibility for performing and financing all the events, the children Shatharama, Krishnamurthy and Murali Varambally 's performed all the events very sencierly and honestly.

May God Bless them and their Family.

Vijaya Dashami Pooja, Mangalarathi.

We attended one night Navaratri Pooja, Mangalarathi, Oota and Chandika Homa, Grand Oota. 


Beautiful Video about PaduGaradi Chandika DurgaParameshwari

It was very divine and could feel the vibrations of Chandika DurgaParameshwari Devi.

God Bless All.

Posted 227/10/2023



OORU TRIP - NAVARATRI 2023

 Sat, 21st October - Wed 25th October 2023

Navaratri Festival is very special in Ooru, Udupi District.

To visit and participate in the Navaratri festivities, we travlled to Udupi  on the night of Friday, 20th October. by Sri Durgamba bus at 9.30 pm from LG Showroom, KodigeHalli gate,  and reached Udyavara 6 am next morning.

Day 1: Saturday, 21st Oct.2023

Reached Udyavara at 6 in the morning, engaged a auto and reached Sujatha's House, freshened up, had beautiful Kadubu, chutney,  coffee, proceeded to Birthi Salekeri, Native place, where brother's wife, Leela Somayaji and Sose Abhilasha lives.


with TV Serial actor "Bhoomige Banda Bhagavantha"

After bath, pooja at home, proceed to Neelavara Sri  Mahishamardini Temple, had darshan, and grand navaratri oota, came back home (Birthi) and slept.



Evening went to Garadimane Durgaparameshwari Temple, present for Mangalarathi and had sumptous Nvaratri Oota. Back home and slept.

Day 2 : Sunday, 22nd October 2023

We went to KunjaruGiri Durga Devi Temple for Darshan and Navaratri Oota, 


In the evening , went to Mandarthi for Darshan of Sri Durgaparameshwari temple, present for navaratri Pooja at Vishwanatha Udupa (F/O of Ramachandra Udupa). and special oota, returned to Birthi by 11 pm and slept.


with Vishwanath Udupa daughters and D-I-L s

Day 3 : Monday, 23rd Oct.2023

Today's darshan was  ShambhuKallu Veerabhadra DurgaParameshwari Temple at Udyavara, after which grand navaratri oota.


Went to Mayagundi, near Putturu for inviting Shama's wedding, Bhaskar Bhat, Kittu Bhat, Jayalaskhmi Krishnamoorthy Bhat, again went to Udupi for Sri Krishna Darshan, Dead mobile repair,  to Rajangana for Dance Drama and returned home.


Sadaram brothers and their family visited Birthi House.







Day 4: Tuesday, 24th Oct. 2023

After breaksfast, pooja at home,  went around some local relations for giving invitation for the wedding. 



Then to GaradiMane for Chandika Homa and Mangalarathi, and grand Oota.


Sponsors : Kuppanna Varambally sons - Shatharama, Krishnamurthy and Murali.




Evening to Anegudde, Kumbhashi for Darshana at Vinayaka Temple with Padmanabha Sahasra and wife Shalini.



Snacks at Paakashala, Kumbhashi and returned home.

Day 5: Wednesday, 25th Oct. 2023

MODALA TAAVU





After breakfast, packed, shopping in Brahmavara, then to search for 

Chittaranjan Hegde House, 

from there proceeded to "MODALA TAAVU" near Karje for visit of Large, 400 years



Old grand house of PATELRU DURING British era. 92 yr old Ratnavathi Hegde living with her daughter.


Bought a bottle of pure coconut oil processed by wood grinder.

Lunch at Vijalakshmi House at Kadiyali, siesta, then to Dr Raghavendra Udupa foe oil massage, proceeded to Udyavara.

Kadubu, chutney at Sujatha's house

After having bari akki dosa at Sujatha, dropped by Smitha (Mittu) at the highway, to catch Sri Durgamba Bus at 8.30 pm

Reached next morning at 6 am at Hebbal, engaged a auto and reached home thus ending 5 day happy, divine trip to ooru. 

Posted 26/10/2023




Friday, October 20, 2023

- ನವರಾತ್ರಿಯ 7 ನೇ ದಿನ - ಕಾಳರಾತ್ರಿ

 ಶನಿವಾರ. 21 ಅಕ್ಟೋಬರ್ 2023 

ನವರಾತ್ರಿಯ 7 ನೇ ದಿನ - ಕಾಳರಾತ್ರಿ 


ನವರಾತ್ರಿಯ ಸಪ್ತಮಿಯ ದಿನ ಪೂಜಿಸುವ ದುರ್ಗಾ ಮಾತೆಯ ಅವತಾರವೇ ಕಾಲರಾತ್ರಿ.

ನೋಡಲು ಭಯಂಕರಿಯಾದರೂ ಭಕ್ತರ ಪಾಲಿಗೆ ಈಕೆ ಶುಭಂಕರಿ. ಜಗದಲ್ಲಿನ ಅಂಧಕಾರವನ್ನು ಕಳೆದು ಬೆಳಕನ್ನು ನೀಡುವವಳು.

ನವರಾತ್ರಿಯ ಏಳನೇ ದಿನ ದುರ್ಗಾಮಾತೆಯ ಭಯಂಕರ ರೂಪವೇ ಕಾಲರಾತ್ರಿ. ಗಾಡಾಂಧಕಾರದಂತೆ ಶರೀರವೆಲ್ಲಾ ಕಪ್ಪಾಗಿ ಕತ್ತೆಯ ಮೇಲೆ ವಿರಾಜಮಾನಳಾಗಿ ಭಕ್ತರ ಅಭೀಷ್ಟವನ್ನು ನೆರವೇರಿಸುವವಳೇ ಕಾಲರಾತ್ರಿ. ಈಕೆಯನ್ನು ಶುಭಂಕರಿಯೆಂದೂ ಕರೆಯುತ್ತಾರೆ. ದೇವಿಯ ಹಲವು ರೂಪಗಳಲ್ಲಿ ಬಹಳ ಭೀಭತ್ಸ್ಯವಾದ ರೂಪವೆಂದರೆ ಕಾಲರಾತ್ರಿ. ಅಸುರರ ಪಾಲಿಗೆ ದುಃಸ್ವಪ್ನ ಈ ಕಾಲರಾತ್ರಿ. ಧರ್ಮದ ರಕ್ಷಣೆಗಾಗಿ, ಅಧರ್ಮರ ಪಾಲಿಗೆ ಭಯ ಹುಟ್ಟಿಸುವವಳು ಈಕೆ. ಆದರೆ ತನ್ನನ್ನು ಪೂಜಿಸುವ ಭಕ್ತರ ಪಾಲಿಗೆ ಮಾತ್ರ ಮಾತೃಸ್ವರೂಪಿಣಿಯಾದ ಪಾರ್ವತಿಯಾಗಿರುವವಳು.


ಕಾಲರಾತ್ರಿಯ ಮಂತ್ರ

ಓಂ ದೇವೀ ಕಾಲರಾತ್ರೈ ನಮಃ

ಓಂ ದೇವಿ ಕಾಲರಾತ್ರೈ ನಮಃ ಎಕ್ವೇಣಿ ಜಪಕಾರ್ಣಪೂರ ನಗ್ನಾ ಖರಾಸ್ಥಿತಾ

ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ ಶರೀರಿಣೀ ವಂ

ಪಾದೋಲ್ಲಸಲ್ಲೋಹ್ಲತಾ ಕಂಟಕ್ಬುಷಾನಾ

ಭರ್ಧನ್‌ ಮೂರ್ಧಂ ಧ್ವಜಾ ಕೃಷ್ಣ ಕಾಲರಾತ್ರಿ ಭಯಂಕರಿ

ಕಾಲರಾತ್ರಿ ಪ್ರಾರ್ಥನೆ

ಏಕ್ವೇವೇಣಿ ಜಪಕಾರ್ಣಪೂರ ನಗ್ನಾ ಖರಾಸ್ಥಿತಾ

ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ ಶರೀರಿಣೀ ವಂ

ಪಾದೋಲ್ಲಸಲ್ಲೋಹ್ಲತಾ ಕಂಟಕ್ಬುಷಾನಾ

ಭರ್ಧನ್‌ ಮೂರ್ಧಂ ಧ್ವಜಾ ಕೃಷ್ಣ ಕಾಲರಾತ್ರಿ ಭಯಂಕರಿ

ಸ್ತುತಿ

ಯಾ ದೇವಿ ಸರ್ವಭೂತೇಷು ಮಾ ಕಾಲರಾತ್ರಿ ರೂಪೇಣ ಸಂಸ್ಥಿತಾ

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ಕಾಲರಾತ್ರಿ ಧ್ಯಾನ

ಕರಾಲಾವಂದನ ಘೋರಂ ಮುಕ್ತಾಕ್ಷಿ ಚತುರ್ಭುಜಂ

ಕಾಲರಾತ್ರಿಂ ಕರಾಲಿಮ್ಕಾ ದಿವ್ಯಾಂ ವಿದ್ಯುತ್ಮಾಲ ವಿಭೂಷಿತಂ

ದಿವ್ಯಾಂ ಲಾಹುವಾಜ್ರಾ ಖಡ್ಗ ವಮೋಘೋರ್ಧ್ವಾ ಕರಂಭುಜಂ

ಅಭಯಂ ವರದಂ ಚೈವ ದಕ್ಷಿಣೋಧವಘಃ ಪರ್ಣಿಕಾಂ ಮಾಂ

ಮಹಾಮೇಘ ಪ್ರಭಂ ಶ್ಯಾಮಂ ತಕ್ಷ ಚೈವಾ ಗಾದರ್ಭಾರುಧ

ಘೋರದಂಶ ಕರಾಲ್ಯಾಸಂ ಪಿನ್ನೋನಾತಾ ಪಯೋಧರಂ

ಸುಖ ಪ್ರಸನ್ನವಧನ ಸ್ಮರೇಣ ಸರೋರುಹಂ

ಇವಾಂ ಸಚಿಯಂತಾಯೆತ್‌ ಕಾಲರಾತ್ರಿಂ ಸರ್ವಕಂ ಸಮೃದ್ಧಿಂ

ಕಾಲರಾತ್ರಿ ಸ್ತೋತ್ರ

ಹಿಂ ಕಾಲರಾತ್ರಿ ಶ್ರಿಂ ಕರಾಲಿ ಚ ಕ್ಲಿಂ ಕಲ್ಯಾಣಿ ಕಲಾವತಿ

ಕಲಾಮಾತಾ ಕಾಳಿದರ್ಪದ್ನಿ ಕಾಮದಿಶಾ ಕುಪನ್ವಿತಾ

ಕಾಮಬಿಜಪಂದ ಕಮಬಿಜಸ್ವರೂಪಿಣಿ

ಕುಮತಿಘ್ನಿ ಕುಲಿನಾರ್ತಿನಾಶಿನಿ ಕುಲಾ ಕಾಮಿನಿ

ಕ್ಲಿಂ ಹ್ರಿಂ ಶ್ರೀಂ ಮಾಂತ್ರ್ವರ್ನೆನಾ ಕಾಲಾಕಂತಕಘಾತಿನಿ

ಕೃಪಾಮಯಿ ಕೃಪಾಧಾರ ಕೃಪಾಪರ ಕೃಪಾಗಮಾ


ಕಾಲರಾತ್ರಿ ಕವಚ

ಓಂ ಕ್ಲಿಂ ಮೇ ಹೃದಯಂ ಪಾತು ಪದೌ ಶ್ರೀಕಾಲರಾತ್ರಿ

ಲಲಾಟೇ ಸತತಂ ಪಾತು ತುಶಾಗ್ರ ನಿವಾರಿಣಿ

ರಾಸನಂ ಪಾತು ಕೌಮಾರಿ, ಭೈರವಿ ಚಕ್ಷುಶೋರ್ಭಾಮಾ

ಕತೌ ಪ್ರಿಶ್ತೇ ಮಹೇಶನಿ, ಕರ್ಣೌಶಂಕರಾಭಾಮಿನಿ

ವರ್ಜಿತಾನಿ ತು ಸ್ತಾನಾಭಿ ಯಾನಿ ಚ ಕವಚೇನಾ ಹೇ

ತನಿ ಸರ್ವಾಣಿ ಮೀ ದೇವಿಸತತಾಪಂತು ಸ್ಥಾಂಭಿನಿ

NEIGHBOURS, 13 A CROSS

20/10/2023




Thursday, October 19, 2023

ನವರಾತ್ರಿಯ ಆರನೇ ದಿನ (2023 ) - ಕಾತ್ಯಾಯನಿ

 ಶುಕ್ರವಾರ, 20 ಅಕ್ಟೋಬರ್ 2023 

ನವರಾತ್ರಿಯ ಆರನೇ ದಿನ  - ಕಾತ್ಯಾಯನಿ ದೇವಿ 


ಕಾತ್ಯಾಯಿನಿಯ ಮಹತ್ವ

ಕಾತ್ಯಾಯಿನಿಯು ಗುರು ಗ್ರಹವನ್ನು ಆಳುತ್ತಾಳೆ. ಗುರುಗ್ರಹದ ದೃಷ್ಟಿ ಹಾಗೂ ಪ್ರಭಾವ ಉತ್ತಮವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಪ್ರಯೋಜನ, ಸಮೃದ್ಧಿ ಹಾಗೂ ಯಶಸ್ಸನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಜನ್ಮಕುಂಡಲಿಯಲ್ಲಿ ಗುರು ದೋಷವಿದ್ದರೂ ಪರಿಹಾರವಾಗುವುದು.

​ಕಾತ್ಯಾಯಿನಿ ದೇವಿ ಮಂತ್ರ

- ''ಯಾ ದೇವಿ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ|

ನಮಸ್ತ್ಯೈ ನಮಸ್ತ್ಯೈ ನಮಸ್ತ್ಯೈ ನಮೋ ನಮಃ||''

- ''ಓಂ ಕಾತ್ಯಾಯಿನಿ ದೇವ್ಯೇ ನಮಃ''

​ಪ್ರಾರ್ಥನೆ

''ಚಂದ್ರಹಾಸೋಜ್ವಲಕರಾ ಶಾರ್ದೂಲ್ವರ್ವಾಹನಾ ಕಾತ್ಯಾಯಿನಿ

ಶುಭಂ ದದ್ಯಾದ್ ದೇವೀ ದಾನವಗತಿನೀ''

ಕಾತ್ಯಾಯಿನಿ ಸ್ತುತಿ

"ಯಾ ದೇವಿ ಸರ್ವಭೂತೇಷು ಮಾ ಕಾತ್ಯಾಯಿನಿ ರೂಪೇಣ ಸಂಸ್ಥಿತಾ

ನಮಸ್ತಸ್ತೈ ನಮಸ್ತಸ್ತೈ ನಮಸ್ತಸ್ತೈ ನಮೋ ನಮಃ''

​ಧ್ಯಾನ ಮಂತ್ರ

" ವಂದೇ ವಂಚಿತ ಮನೋರಥಾರ್ಥ ಚಂದ್ರದ್ರಕೃತಾಶೇಖರಂ

ಸಿಂಹಾರುಧ ಚತುರ್ಭುಜ ಕಾತ್ಯಾಯಿನಿ ಯಶಸ್ವಿನೀಂ

ಸ್ವರ್ಣವರ್ಣ ಆಜ್ಞಾಚಕ್ರಂ ಸ್ಥಿತಂ ಶಾಶ್ತಮಾ ದುರ್ಗಾ ತ್ರಿನೇತ್ರಂ

ವರಭಿತ ಕರಂ ಶಗಪದಾಧರಂ ಕಾತ್ಯಾಯನಸುತಂ ಭಜಾಮಿ

ಪತಂಬರಾ ಪರಿಧನಂ ಸ್ಮೇರಮುಖಿ ನಾನಾಲಂಕಾರ ಭೂಷಿತಂ

ಮಂಜೀರಾ, ಹರಾ, ಕೇಯುರಾ, ಕಿಂಕಿಣಿ, ರತ್ನಕುಂಡಲ ಮಂಡಿತಂ

ಪ್ರಸನ್ನವದನಾ ಪಲ್ಲವಧಾರಂ ಕಾಂತ ಕಪೋಲಂ ತುಗಂ ಕುಚಂ

ಕಾಮನೀಯಂ ಲಾವಣ್ಯಂ ತ್ರಿವಲ್ಲಿವಿಭೂಷಿತ ನಿಮ್ನ ನಾಭೀಂ''


ಕಾತ್ಯಾಯಿನಿ ಸ್ತೋತ್ರ

ಕಂಚನಾಭ ವರಾಭಯಂ ಪದ್ಮಧಾರಾ ಮುಖತೋಜ್ಜವಲಂ

ಸ್ಮೇರಮುಖಿ ಶಿವಪತ್ನೀ ಕಾತ್ಯಾಯನೇಸುತೇ ನಮೋಸ್ತುತೇ

ಪತಂಬರಾ ಪರಿಧನಂ ನಾನಾಲಂಕಾರ ಭೂಷಿತಂ

ಸಿಂಹಸ್ಥಿತಂ ಪದ್ಮಹಸ್ತಂ ಕಾತ್ಯಾಯನಸ್ತುತೇ ನಮೋಸ್ತುತೇ

ಪರಮಾನಂದಮಯೀ ದೇವೀ ಪರಬ್ರಹ್ಮಾ ಪರಮಾತ್ಮ

ಪರಮಶಕ್ತಿ, ಪರಮಭುಕ್ತಿ ಕಾತ್ಯಾಯನಸ್ತುತೇ ನಮೋಸ್ತುತೇ

ವಿಶ್ವಕಾರ್ತಿ, ವಿಶ್ವಭಾರತೀ, ವಿಶ್ವಹಾರ್ತಿ, ವಿಶ್ವಪ್ರತಿಮ

ವಿಶ್ವಾಚಿಂತ, ವಿಶ್ವಾತೀತ ಕಾತ್ಯಾಯನಸ್ತುತೇ ನಮೋಸ್ತುತೇ

ಕಾಂ ಬಿಜಂ ಕಾಂ ಜಪನಂದಕಂ ಬಿಜಾ ತೋಶಿತೇಕಂ

ಕಾಂ ಬೀಜಂ ಜಪದಾಶಕ್ತಕಾಂ ಕಾಂ ಸಂತುತಾ

ಕಾಮ್ಕರಹಾರ್ಶಿ ನಿಕಂ ಧನದಾಧಾನಮಸಾನಕಂ

ಬೀಜ ಜಪಕಾರಿನಿಕಾಂ ಬಿಜಾ ತಪ ಮಾನಸಕಂ

ಕಾರಿಣಿ ಕಾಂ ಮಂತ್ರಪೂಜಿತಕಂ ಬೀಜ ಧಾರಿಣಿಕಂ

ಕಿಂ ಕುಂಕೈ ಕಾಹ್‌ ಥಾಹ್‌ ಚಾಹ್‌ ಸ್ವಾಹರೂಪಿಣಿ

​ಕಾತ್ಯಾಯಿನಿ ಕವಚ

ಕಾತ್ಯಾಯನೌಮುಕ್ತ ಪಾತು ಕಂ ಸ್ವಾಹಸ್ವರೂಪಿಣಿ

ಲಲಾಟೇ ವಿಜಯ ಪಾತು ಮಾಲಿನಿ ನಿತ್ಯ

ಸುಂದರಿಕಲ್ಯಾಣಿ ಹೃದಯಂ ಪಾತು ಜಯ ಭಾಗಮಾಲಿನಿ


ಕಾತ್ಯಾಯಿನಿ ಕಥೆ

ಮಹರ್ಷಿ ಕಾತ್ಯಾಯನನು ದೇವಿಯು ಆದಿಶಕ್ತಿಗಾಗಿ ತೀವ್ರ ತಪಸ್ಸು ಮಾಡಿದನು. ಪರಿಣಾಮವಾಗಿ ಅವನು ದೇವಿಯನ್ನು ತನ್ನ ಮಗಳಾಗಿ ಸ್ವೀಕರಿಸಿದನು. ದೇವಿ ಮಹರ್ಷಿ ಕಾತ್ಯಾಯನ ಅವರ ಆಶ್ರಮದಲ್ಲಿ ಜನಿಸಿದಳು. ಅವರ ಮಗಳ ಕಾರಣದಿಂದ ಅವಳನ್ನು ಕಾತ್ಯಾಯನಿ ಎಂದು ಕರೆಯಲಾಗುತ್ತದೆ. ದೇವಿಯು ಜನಿಸಿದಾಗ, ಮಹಿಷಾಸುರನೆಂಬ ರಾಕ್ಷಸನ ದೌರ್ಜನ್ಯವು ಬಹಳಷ್ಟು ಹೆಚ್ಚಾಯಿತು. ರಾಕ್ಷಸರು ಸ್ವರ್ಗ ಹಾಗೂ ಭೂಮಿಯಲ್ಲಿ ಗದ್ದಲ ಸೃಷ್ಟಿಸಿದರು. ಆಶ್ವೀಜ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಕಾತ್ಯಾಯನ ಮುನಿ ಮನೆಯಲ್ಲಿ ತ್ರಿದೇವರ ಪ್ರಕಾಶಮಾನವಾದ ದೇವತೆ ಜನಿಸಿದಳು.


Posted 20/10/2023 



Wednesday, October 18, 2023

ನವರಾತ್ರಿಯ ಐದನೇ ದಿನ (2023 ) - ಸ್ಕಂದಮಾತೆ

Thursday , 19 /10/2023  

ನವರಾತ್ರಿ ಮಹೋತ್ಸವ ಐದನೆಯ ದಿನ ಸ್ಕಂದಮಾತಾ ದೇವಿ ಆರಾಧನೆ 


ನವರಾತ್ರಿಯ ಐದನೇ ದಿನದಂದು ದುರ್ಗಾ ದೇವಿಯ ಸ್ಕಂದಮಾತಾ ರೂಪವನ್ನು ಪೂಜಿಸಲಾಗುತ್ತದೆ.  ಧರ್ಮಗ್ರಂಥಗಳ ಪ್ರಕಾರ, ಮೂರ್ಖನಾದರೂ ಕೂಡ ಈಕೆಯ ಕೃಪೆಯಿಂದ ಬುದ್ಧಿವಂತನಾಗುತ್ತಾನೆ. ಸ್ಕಂದಮಾತಾ ಪರ್ವತಗಳಲ್ಲಿ ವಾಸಿಸುವ ಮೂಲಕ ಲೌಕಿಕ ಜೀವಿಗಳಲ್ಲಿ ಹೊಸ ಪ್ರಜ್ಞೆಯನ್ನು ಸೃಷ್ಟಿಸಿದಂತಹ ದೇವತೆ. ಸ್ಕಂದ ಕುಮಾರ ಕಾರ್ತಿಕೇಯನ ತಾಯಿಯಾಗಿರುವುದರಿಂದ ಆಕೆಯನ್ನು ಸ್ಕಂದಮಾತೆ ಎಂದೂ ಕರೆಯುತ್ತಾರೆ. ಅವಳನ್ನು ಪೂಜಿಸುವ ಮೂಲಕ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಭಕ್ತನಿಗೆ ಮೋಕ್ಷ ಸಿಗುತ್ತದೆ. ಅದೇ ಸಮಯದಲ್ಲಿ, ಅವರನ್ನು ಪೂಜಿಸುವುದರಿಂದ ಸಂತಾನ ಭಾಗ್ಯವೂ ದೊರೆಯುತ್ತದೆ ಎನ್ನುವ ನಂಬಿಕೆಯಿದೆ. 

ಸ್ಕಂದಮಾತೆಯ ಮಂತ್ರ

ಓಂ ದೇವಿ ಸ್ಕಂದಮಾತಾಯೈ ನಮಃ

​ಪ್ರಾರ್ಥನೆ


''ಸಿಂಹಸಂಗತ ನಿತ್ಯಂ ಪದ್ಮಾಂಚಿತ ಕರದ್ವಾಯೇ

ಶುಭದಾಸ್ತು ಸದಾದೇವಿ ಸ್ಕಂದಮಾತಾ ಯಶಸ್ವಿನೀ''

​ಸ್ತುತಿ

''ಯಾ ದೇವಿ ಸರ್ವಭೂತೇಷು ಮಾ ಸ್ಕಂದಮಾತಾ ರೂಪೇಣ ಸಂಸ್ಥಿತಾ

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ''

​ಧ್ಯಾನ ಮಂತ್ರ

ವಂದೇ ವಂಚಿತ ಕಾಮರ್ಥೇ ಚಂದ್ರಾರ್ಧಕೃತಶೇಖರಂ

ಸಿಂಹಾರೂಢ ಚತುರ್ಭುಜಾ ಸ್ಕಂದಮಾತಾ ಯಶಸ್ವಿನಿಂ

ಧವಲವರ್ಣ ವಿಶುದ್ಧ ಚಕ್ರಸ್ಥಿತೋಂ ಪಂಚಮ ದುರ್ಗಾ ತ್ರಿನೇತ್ರಂ

ಅಭಯ ಪದ್ಮ ಯುಗ್ಮ ಕರಂ ದಕ್ಷಿಣ ಉರು ಪುತ್ರಧರಂ ಭಜೆಂ

ಪೀತಾಂಬರಾ ಪರಿಧನಂ ಮೃದುಹಾಸ್ಯ ನಾನಾಲಂಕಾರ ಭೂಷಿತಂ

ಮಂಜಿರಾ, ಹರಾ, ಕೀಯೂರ, ಕಿಂಕಿಣಿ, ರತ್ನಕುಂಡಲ ಧಾರಿಣೀಂ

ಪ್ರಫುಲ್ಲ ವಂದನಾ ಪಲ್ಲವಧರಂ ಕಾಂತಾ ಕಪೋಲಂ ಪಿನಾ ಪಯೋಧರಂ

ಕಾಮನಿಯಂ ಲಾವಣ್ಯಂ ಚಾರು ತ್ರೈವಲ್ಲಿ ನಿತಂಬನೀಂ

​ಸ್ತೋತ್ರ


ನಮಾಮಿ ಸ್ಕಂದಮಾತಾ ಸ್ಕಂದಧಾರಿಣೀಂ

ಸಮಗ್ರತಾತ್ವಸಾಗರಂ ಪರಪರಗಹರಂ

ಶಿವಪ್ರಭಾ ಸಮುಜ್ವಲಾಂ ಸ್ಫುಚ್ಛಾಶಾಶಶೇಖರಂ

ಲಲಾಟರತ್ನಭಾಸ್ಕರಂ ಜಗತ್ಪ್ರದೀಪ್ತಿ ಭಾಸ್ಕರಂ

ಮಹೇಂದ್ರಕಶ್ಯಪಾರ್ಚಿತ ಸನಂತಕುಮಾರ ಸಮಸ್ತುತಂ

ಸುರಸುರೇಂದ್ರವಂದಿತಂ ಯಥಾರ್ಥನಿರ್ಮಲಾಧ್ಬುತಂ

ಅತರ್ಕ್ಯರೋಚಿರುವಿಜಂ ವಿಕಾರ ದೋಷವರ್ಜಿತಂ

ಮುಮುಕ್ಷುಭಿರ್ವಿಚಿಂತಿತಂ ವಿಶೇಷತತ್ವಮುಚ್ಚಿತಂ

ನಾನಾಲಂಕಾರ ಭೂಷಿತಾಂ ಮೃಗೇಂದ್ರವಾಹನಾಗೃಜಂ

ಸುಶುದ್ಧತಾತ್ವತೋಶನಂ ತ್ರಿವೇಂದಮರ ಭೂಷಣಂ

ಸುಧಾರ್ಮಿಕಾಪುಕಾರಿಣಿ ಸುರೇಂದ್ರ ವೈರಿಗ್ರತಿನಿಂ

ತಮೋಂದಕರಾಯಮಿನಿ ಶಿವಾಶುಭಾವಕಾಮಿನಿಂ

ಸಹಸ್ರಸೂರ್ಯರಂಜಿಕಂ ಧನಜ್ಜೋಗಕಾರಿಕಂ

ಸುಶುದ್ಧಾ ಕಾಲ ಕಂಡಾಲ ಶುಭ್ರಿದವೃಂದಮಾಜ್ಜುಲಂ

ಪ್ರಜಾಯಿಣೀ ಪ್ರಜಾವತೀ ನಮಾಮಿ ಮಾತರಂ ಸತೀಂ

ಸ್ವಕರ್ಮಕಾರಣೇ ಗತೀಂ ಹರಿಪ್ರಯಾಚ ಪಾರ್ವತಿಂ

ಅನಂತಶಕ್ತಿ ಕಾಂತಿದಾಂ ಯಶೋರ್ಥಭಕ್ತಿಮುಕ್ತಿದಾಂ

ಪುನಃ ಪುನಾರ್ಜಗದ್ಧಿತಂ ನಮಾಮ್ಯಂ ಸುರಾರ್ಚಿತಂ

ಜಯೇಶ್ವರಿ ತ್ರಿಲೋಚನೆ ಪ್ರಸಿದಾ ದೇವಿ ಪಾಹಿಮಾಂ


Posted 19/10/2023


Tuesday, October 17, 2023

ನವರಾತ್ರಿಯ (2023) ನಾಲ್ಕನೆಯ ದಿನ :- "ಕುಷ್ಮಾಂಡ ದೇವಿ"

 ಬುಧವಾರ, 17 ಅಕ್ಟೋಬರ 2023 

ನವರಾತ್ರಿಯ ನಾಲ್ಕನೆಯ ದಿನ :- 

 


"ಕುಷ್ಮಾಂಡ ದೇವಿಯ ಹಿನ್ನಲೆ, ವಿಶೇಷ, ಕಥೆ ಮತ್ತು ಮಹತ್ವ :-" 

 "ಕುತ್ಸಿತಃ ಉಷ್ಮಾಃ ಕೂಷ್ಮಾಃ|" 

 "ಕುತ್ಸಿತಃ" ಅಂದರೆ "ಸಹಿಸಲು ಕಠಿಣವೆನಿಸಿದ್ದು". "ಉಷ್ಮಾ" ಎಂದರೆ "ಸೂಕ್ಷ ಲಹರಿಗಳ ಧ್ವನಿ". 

 "ತ್ರಿವಿಧತಾಪಯುಕ್ತಃ ಸಂಸಾರಃ ಸ ಅಂಡೇ ಮಾಂಸಪೇಶ್ಯಾಮ್ ಉದರರೂಪಾಯಾಂ ಯಸಾಃ ಸಾ ಕೂಷ್ಮಾಂಡಾ|". ಇಲ್ಲಿ ಈ ಶ್ಲೋಕದ ಅರ್ಥವು ಹೀಗಿದೆ. 

ತ್ರಿವಿಧದ ತಾಪಗಳೆಂದರೆ, ಉತ್ಪತ್ತಿ [ ಜನ್ಮ ], ಸ್ಥಿತಿ [ ಬೆಳವಣಿಗೆ ] ಮತ್ತು ಲಯ [ ಮೃತ್ಯು ]. ಇಲ್ಲಿ "ಮೃತ್ಯು" ಎಂದರೆ "ಮೋಕ್ಷದ ಸಂಕೇತ". ಅಂದರೆ, ಅನಿಶ್ಚಿತ ಕಾಲಾವಧಿಯವರೆಗೆ ವಿಶಿಷ್ಟ ಪದ್ಧತಿಯಿಂದ ನಾಶಹೊಂದುವುದು. 

"ಸಂಸಾರ"ವೆಂದರೆ, "ಪುನಃಪುನಃ". ಮತ್ತು "ಅಂಡ" ಎಂದರೆ, "ವಿಶಿಷ್ಟ ನಿಯಂತ್ರಣದಿಂದ ಯುಕ್ತವಾಗಿರುವ ಕೋಶ". "ಮಾಂಸ, ಜೀವಕೋಶಗಳು, ಉದರ ಮತ್ತು ರೂಪ ಇವುಗಳಿಂದ ಯುಕ್ತಸಂಪನ್ನವಾದ ಜೀವಗಳು ಈ ಕೋಶದಲ್ಲಿ ತ್ರಿವಿಧ ತಾಪಗಳ ಪುನಾರಾವೃತ್ತಿಯ ಅವಸ್ಥೆಯಿಂದ ಪುನಃಪುನಃ ಹೋಗುತ್ತಾರೆ. 

ಈ ಪ್ರಕ್ರಿಯೆಗಳಿಂದ ಬಿಡುಗಡೆ ಹೊಂದಲು ಯಾರ ಕೃಪೆಯ ಅವಶ್ಯಕತೆಯಿದೆಯೋ ಅವಳನ್ನೇ ಕೂಷ್ಮಾಂಡ ಎಂದು ಕರೆಯಲಾಗುತ್ತದೆ.

ಕೂಷ್ಮಾಂಡ ದೇವಿಯು ಸಿಂಹರೂಪಿಣಿಯಾಗಿದ್ದು ಇವಳಿಗೆ ಎಂಟು ಹಸ್ತಗಳಿದ್ದು ಅದರಲ್ಲಿ ತನ್ನ ಸಪ್ತ ಕೈಗಳಲ್ಲಿ ಕಮಂಡಲ, ಧನಸ್ಸು, ಬಾಣ, ಕಮಲ, ಚಕ್ರ, ಗಧೆ ಮತ್ತು ಅಮೃತ ಕಳಶ ಮತ್ತೊಂದು ಕೈಯಲ್ಲಿ ಜಪಮಾಲೆಯನ್ನು ಹಿಡಿದಿರುವಳು. ಇವಳ ತಲೆಯ ಮೇಲೆ ರತ್ನಗಳಿಂದ ಅಲಂಕರಿಸಿದ ಕಿರೀಟವಿದ್ದು, ಇವಳ ತಾಯಿಯ ರೂಪವನ್ನು ತೇಜಪುಂಜವೆಂದು ವರ್ಣಿಸಲಾಗುತ್ತದೆ. 

ಇವಳಿಗೆ ಅಷ್ಟ ಭುಜಗಳಿರುವುದರಿಂದ "ಅಷ್ಟಭುಜಾದೇವಿ" ಎಂದು ಬಣ್ಣಿಸಲಾಗುತ್ತದೆ. ಇವಳ ಮತ್ತೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು ಸದಾ ತನ್ನ ಭಕ್ತರಿಗೆ ರಕ್ಷಣೆ ನೀಡುವಳೆಂಬ ನಂಬಿಕೆ ಇದೆ. 


 ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಆರಾಧಿಸುವುದರಿಂದ ರವಿ ಗ್ರಹದಿಂದುಂಟಾಗುವ ಎಲ್ಲಾ ಬಗೆಯ ಕೆಡುಕುಗಳನ್ನು ನಿವಾರಿಸಬಹುದೆಂದು ವೈದಿಕ ಜ್ಯೋತಿಷ್ಯವು ಹೇಳುತ್ತದೆ. ದೇವಿ ಕೂಷ್ಮಾಂಡ ದೇವಿಯ ಆರಾಧನೆಯಿಂದ ನಾವು ನಮ್ಮ ಬದುಕಿನಲ್ಲಿ ಸರಿಯಾದ ದಾರಿಯಲ್ಲಿ ನಡೆಯಲು ಅನುಕೂಲವಾಗುತ್ತದೆ. ಇವಳ ಆರಾಧನೆಯು ನಮ್ಮ ಮನಸ್ಸಿನೊಳಗಿನ ದುಃಖ ಅಥವಾ ನೋವುಗಳನ್ನು ಕಡಿಮೆ ಮಾಡಿ ಸಂತಸವನ್ನು ನಮ್ಮ ಜೀವನದಲ್ಲಿ ತುಂಬುವಂತೆ ಮಾಡುವಳು.

ಕೂಷ್ಮಾಂಡ ದೇವಿಯ ವಿಶೇಷ :-" 


 ಕೂಷ್ಮಾಂಡ ದೇವಿಯು ಸಿಂಹರೂಪಿಣಿಯಾಗಿದ್ದು ಇವಳಿಗೆ ಎಂಟು ಹಸ್ತಗಳಿದ್ದು ಅದರಲ್ಲಿ ತನ್ನ ಸಪ್ತ ಕೈಗಳಲ್ಲಿ ಕಮಂಡಲ, ಧನಸ್ಸು, ಬಾಣ, ಕಮಲ, ಚಕ್ರ, ಗಧೆ ಮತ್ತು ಅಮೃತ ಕಳಶ ಮತ್ತೊಂದು ಕೈಯಲ್ಲಿ ಜಪಮಾಲೆಯನ್ನು ಹಿಡಿದಿರುವಳು. 

 


ಇವಳ ತಲೆಯ ಮೇಲೆ ರತ್ನಗಳಿಂದ ಅಲಂಕರಿಸಿದ ಕಿರೀಟವಿದ್ದು, ಇವಳ ತಾಯಿಯ ರೂಪವನ್ನು ತೇಜಪುಂಜವೆಂದು ವರ್ಣಿಸಲಾಗುತ್ತದೆ. 

 


ಇವಳಿಗೆ ಅಷ್ಟ ಭುಜಗಳಿರುವುದರಿಂದ "ಅಷ್ಟಭುಜಾದೇವಿ" ಎಂದು ಬಣ್ಣಿಸಲಾಗುತ್ತದೆ. ಇವಳ ಮತ್ತೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು ಸದಾ ತನ್ನ ಭಕ್ತರಿಗೆ ರಕ್ಷಣೆ ನೀಡುವಳೆಂಬ ನಂಬಿಕೆ ಇದೆ. 

 



ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಆರಾಧಿಸುವುದರಿಂದ ರವಿ ಗ್ರಹದಿಂದುಂಟಾಗುವ ಎಲ್ಲಾ ಬಗೆಯ ಕೆಡುಕುಗಳನ್ನು ನಿವಾರಿಸಬಹುದೆಂದು ವೈದಿಕ ಜ್ಯೋತಿಷ್ಯವು ಹೇಳುತ್ತದೆ. ದೇವಿ ಕೂಷ್ಮಾಂಡ ದೇವಿಯ ಆರಾಧನೆಯಿಂದ ನಾವು ನಮ್ಮ ಬದುಕಿನಲ್ಲಿ ಸರಿಯಾದ ದಾರಿಯಲ್ಲಿ ನಡೆಯಲು ಅನುಕೂಲವಾಗುತ್ತದೆ. ಇವಳ ಆರಾಧನೆಯು ನಮ್ಮ ಮನಸ್ಸಿನೊಳಗಿನ ದುಃಖ ಅಥವಾ ನೋವುಗಳನ್ನು ಕಡಿಮೆ ಮಾಡಿ ಸಂತಸವನ್ನು ನಮ್ಮ ಜೀವನದಲ್ಲಿ ತುಂಬುವಂತೆ ಮಾಡುವಳು.


Posted 18/10/2023



Monday, October 16, 2023

ನವರಾತ್ರಿಯ ಮೂರನೇ ದಿನ - 2023: ಚಂದ್ರ ಗಂಟಾ ದೇವಿ

 ಮಂಗಳವಾರ, 17/10/2023 



ನವರಾತ್ರಿ ಮಹೋತ್ಸವ ಮೂರನೆಯ ದಿನ - ಚಂದ್ರಘಂಟಾದೇವಿಯ ಆರಾಧನೆ - ಪೂಜಾ ವಿಧಾನ, ಮಂತ್ರ ಮತ್ತು ಮಹತ್ವ

ನವರಾತ್ರಿಯ ಮೂರನೇ ದಿನ ದುರ್ಗೆಯ ಮೂರನೇ ಅವತಾರವಾದ ಚಂದ್ರಘಂಟಾ ದೇವಿಗೆ ಅರ್ಪಿತವಾದ ದಿನ. ತನ್ನ ಭಕ್ತರ ಕಷ್ಟಗಳನ್ನು ಕ್ಷಣಮಾತ್ರದಲ್ಲೇ ನಿವಾರಿಸಿ, ಸಂತೋಷ, ಸಮೃದ್ಧಿಯನ್ನು ನೀಡುವ ತಾಯಿಯೇ ಈಕೆ. ಈಕೆಯನ್ನು ಹಲವಾರು ಮಂತ್ರ, ಸ್ತೋತ್ರ, ಪ್ರಾರ್ಥನೆಗಳಿಂದ ಒಲಿಸಿಕೊಳ್ಳಬಹುದು. ಮೂರನೇ ದಿನದ ಪೂಜಾ ವಿಧಾನ, ತಾಯಿಯನ್ನು ಒಲಿಸಿಕೊಳ್ಳುವ ಮಂತ್ರಗಳ ಕುರಿತು ಹೆಚ್ಚಿನ ಮಾಹಿತಿ... 

ಚಂದ್ರ ಘಂಟಾ ದೇವಿಯ ರೂಪ:

ದೇವಿ ಚಂದ್ರಘಂಟೆಯು ಚಿನ್ನದ ಮೈಬಣ್ಣ, ಹತ್ತು ತೋಳು ಹಾಗೂ ಮೂರು ಕಣ್ಣನ್ನು ಹೊಂದಿರುತ್ತಾಳೆ. ಘಂಟೆಯಾಕಾರದ ಚಂದ್ರನನ್ನು ಶಿರದಲ್ಲಿ ಧರಿಸಿದವಳಾದ್ದರಿಂದ ಈಕೆಯನ್ನು ಚಂದ್ರಘಂಟೆಯೆಂಬ ಹೆಸರು ಬಂದಿದೆ. ಈ ತಾಯಿಯನ್ನು ಚಂದ್ರಿಕಾ, ರಣಚಂಡಿಯೆಂದೂ ಕರೆಯುತ್ತಾರೆ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಪಡೆಯಬಹುದು. ಈಕೆಯ ಆಶೀರ್ವಾದದಿಂದ ಮನೆಯಲ್ಲಿ ಎಂದಿಗೂ ಆಹಾರದ ಕೊರತೆ ಎದುರಾಗದು ಎಂಬ ನಂಬಿಕೆ ಭಕ್ತರದ್ದು.


ಚಂದ್ರಘಂಟೆಯ ಮಂತ್ರ:

ಓಂ ದೇವಿ ಚಂದ್ರಘಂಟಾಯೈ ನಮಃ

ಓಂ ದೇವೀ ಚಂದ್ರಘಂಟಾಯೈ ನಮಃ ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ

ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ

ಚಂದ್ರಘಂಟೆಯ ಪ್ರಾರ್ಥನೆ:

ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ

ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ

ಚಂದ್ರಘಂಟೆಯ ಧ್ಯಾನ:

ವಂದೇ ವಂಚಿತಾಲಭಯ ಚಂದ್ರಧಾಕೃತ್ರಶೇಖರಂ

ಸಿಂಹರೂಢ ಚಂದ್ರಘಂಟ ಯಶಸ್ವಿನೀಂ

ಮಣಿಪುರಾ ಸ್ಥಿತಂ ತೃತಿಯಾ ದುರ್ಗಾ ತ್ರಿನೇತ್ರಂ

ಶಂಖ, ಗಧಾ, ತ್ರಿಶೂಲ, ಚಪಶರ, ಪದ್ಮಕಮಂಡಲು ಮಾಲಾ ವರಭಿತಕರಂ

ಪತಂಬರಾ ಪರಿಧಿಂ ಮೃದುಹಾಸ ನಾನಾಲಂಕಾರ ಭೂಷಿತಂ

ಮಂಜೀರಾ, ಹರಾ, ಕೆಯುರಾ, ಕಿಕಿಂಣಿ, ರತ್ನಾಕುಂಡಲ ಮಂಡಿಯಂ

ಪ್ರಫುಲ್ಲ ವಂದನಾ ಬಿಬಾಧಾರ ಕಾಂತಾ ಕಪೋಲಂ ತುಗಂ ಕುಚಂ

ಕಾಮನಿಯಂ ಲಾವಣ್ಯಂ ಕ್ಷಿನಾಕತಿ ನಿತಂಬನಿಂ

ಚಂದ್ರಘಂಟಾ ದೇವಿಯ ಸ್ತೋತ್ರ

ಅಪಾದುದ್ಧಾರಿಣಿ ತ್ವಂಹೀ ಆದ್ಯ ಶಕ್ತಿಃ ಶುಭ್‌ಪರಂ

ಅನಿಮಾದಿ ಸಿದ್ಧಿಧಾತ್ರಿ ಚಂದ್ರಘಂಟೇ ಪ್ರಣಮಾಮ್ಯಹಂ

ಚಂದ್ರಮಿಖಿ ಇಷ್ಟ ಧಾತ್ರಿ ಇಷ್ಟಂ ಮಂತ್ರ ಸ್ವರೂಪಿಣಿಂ

ಧನಧಾತ್ರಿ, ಆನಂದಧಾತ್ರಿ ಚಂದ್ರಘಂಟೇ ಪ್ರಣಮಾಮ್ಯಹಂ

ನಾನಾರೂಪಧಾರಿಣಿ ಇಚ್ಛಾಮಯಿ ಐಶ್ವರ್ಯದಾಯಿನೀಂ

ಸೌಭಾಗ್ಯಾರೋಗ್ಯದಾಯಿನಿ ಚಂದ್ರಘಂಟೇ ಪ್ರಣಮಾಮ್ಯಹಂ



Posted 17/10/2023