Thursday, November 30, 2023

WEDDING -MEDHA/GIRISH - INVITATION

 Thursday 30th December 2023

Birthimane, Bhuvaneshwarinagara, Bengaluru.

Lunch at home 

Medha is only daughter of Nagaraj (S/O Sister Nagaveni) and Shantala.

Compliments

Her wedding with Girish Kulkarni is scheduled for 16th and 17th Decemeber 2023 at Srishti Vilas resort at Kanakapura Road, Bengaluru.




Nagaraj and wife Shantala were at home with invitation card and invited us to attend both days and grace the ocassion.


Medha/Girish's write up with invitation: very interesting:

We are getting hitched, and you don't want to miss the shenanigans. Get ready for two full days filled with love, laughter, and just the right amount of chaos. Dress to impress, dance to express, and join us in our wedding celebrations. Save the date because your presence is mandatory unless you have a really good excuse (and even then, we might not buy it)!


Best Wishes.....

Stay Blessed.......

Posted 30/11/2023



ಓದಿನ ಗೀಳು - ಶೋಭಾ

26 ನವಂಬರ್ 2023  



ಇವತ್ತು ಸಮೀಪದ ‘ಉಷಾ ಕಿರಣ’ದಲ್ಲಿ ಹಿನ್ನೀರ ಓದುಗರ ಸಿಟ್ಟಿಂಗ್ ಇತ್ತು. ಕಾರಣಾಂತರಗಳಿಂದ ನಾನು ಅವರ ಜೊತೆಗೂಡಲಾಗಲಿಲ್ಲ. ಆ ಸಮಯದಲ್ಲಿ ನಾನು ಮನೆಯಲ್ಲೇ ಭಾರತ - ಭಾರತಿಯ “ಅಗಸ್ತ್ಯ” ಪುಸ್ತಕವನ್ನು ಓದಿದೆ. ತುಂಬಾ ಓದುವ ಗೀಳಿದ್ದ ನಾನು ಬಾಲ್ಯದಲ್ಲಿ ಭಾರತ - ಭಾರತಿಯ ನೂರಾರು ಪುಸ್ತಕಗಳನ್ನು ಓದಿದ್ದೆ. ಬಹಳ ಕಾಲಾನಂತರದಲ್ಲಿ ಇನ್ನೊಂದು ಪುಸ್ತಕ ಇಂದು ಓದಿದೆ.

ಮಕ್ಕಳಲ್ಲಿ ಓದಿನ ಆಸಕ್ತಿ ಬೆಳೆಸಲು ಭಾರತ - ಭಾರತಿ ಪುಸ್ತಕಗಳು ಬಹಳ ಸೂಕ್ತವಾದವುಗಳು! ಈ ಪುಸ್ತಕಗಳನ್ನು ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸುತ್ತದೆ. 1965 ರಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯವು ಭಾರತೀಯ ಜೀವನ ಮೌಲ್ಯಗಳನ್ನು ಜನರ ಹೃದಯ ಮತ್ತು ಮನಸ್ಸಿನಲ್ಲಿ ಪ್ರತಿಪಾದಿಸುವ ಸಾಹಿತ್ಯವನ್ನು ರಚಿಸಲು, ಉತ್ತೇಜಿಸಲು ಮತ್ತು ಪ್ರಕಟಿಸಲು ಮತ್ತು ಭಾರತದ ನಿಜವಾದ ಇತಿಹಾಸ, ಅದರ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಜೀವನಶೈಲಿಯನ್ನು ನೆನಪಿಸಲು ಪುಸ್ತಕ ಪ್ರಕಟಣೆ ಪ್ರಾರಂಭಿಸಿತು. ಇತಿಹಾಸ, ಸಂಸ್ಕೃತಿ, ಸಂಪ್ರದಾಯಗಳು, ಸಾಹಿತ್ಯ, ಆರೋಗ್ಯ, ಜೀವನಚರಿತ್ರೆ, ಆರ್ಥಿಕತೆ, ಪರಿಸರ, ವಿಜ್ಞಾನ, ಗಣಿತ. ವ್ಯಕ್ತಿತ್ವ ವಿಕಸನ ಇತ್ಯಾದಿಗಳು ಪ್ರಕಟಣೆಗಳ ಹಲವು ವಿಷಯಗಳಾಗಿವೆ. ರಾಷ್ಟ್ರೋತ್ಥಾನ ಸಾಹಿತ್ಯದ ಭಾರತ - ಭಾರತಿ ಪುಸ್ತಕ ಸಂಪದವು ಕಂದಮ್ಮಗಳ ಹಿರಿದಾದ ಸಂಪತ್ತು. ಅದರ ವಿಶೇಷತೆಗಳು ಹಲವಾರು :
ಮಕ್ಕಳ ಸಾಹಿತ್ಯಲೋಕದಲ್ಲಿ ಹೊಸಶಕೆ ಪ್ರಾರಂಭಿಸಿದ ಕೀರ್ತಿ ‘ಭಾರತ-ಭಾರತಿ ಪುಸ್ತಕ ಮಾಲೆ’ಯದ್ದು.
ಮಾಹಿತಿಗಳೇ ದುರ್ಲಭವಾಗಿದ್ದ ೭೦ರ ದಶಕದಲ್ಲಿ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರ ಸಂಪಾದಕತ್ವದಲ್ಲಿ ೫ ವರ್ಷಗಳಲ್ಲಿ ೫೧೦ (ವಾಲ್ಮೀಕಿಯಿಂದ ಜೆ.ಪಿ. ವರೆಗೆ) ರಾಷ್ಟ್ರೀಯ ಮಹಾಪುರುಷರ ಶೀರ್ಷಿಕೆಯ ಪುಸ್ತಕಗಳ ಪ್ರಕಟಣೆ.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲ ಪ್ರಾಂತಗಳಿಗೂ ಸೇರಿದ ಸಂತರು, ವಿಜ್ಞಾನಿಗಳು, ಕಲಾವಿದರು, ಸಂಗೀತಗಾರರು, ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು, ಯೋಧರು, ರಾಜರು ಮತ್ತು ಕ್ರೀಡಾಪಟುಗಳು ಹೀಗೆ ಸಮಾಜದ ಎಲ್ಲಾ ಕ್ಷೇತ್ರಗಳನ್ನು ಪ್ರತಿನಿಧಿಸಿದ ಮಹಾಪುರುಷರ ಬಗ್ಗೆ ಪುಸ್ತಕಗಳು.
ಮೊದಲ ಸರಣಿಯ ಬಿಡುಗಡೆಯ ದಿನದಂದೇ ೧,೩೦,೦೦೦ಕ್ಕೂ ಹೆಚ್ಚು ಪುಸ್ತಕಗಳ ಮಾರಾಟ.
ಹಿಂದಿ, ಇಂಗ್ಲೀಷ್, ಮರಾಠಿ, ಮಲೆಯಾಳಂ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದ.
ಇಲ್ಲಿಯವರೆಗೂ ಸುಮಾರು ಎರಡು ಕೋಟಿಗೂ ಹೆಚ್ಚು ಪುಸ್ತಕಗಳ ಮಾರಾಟ.
ಕನ್ನಡ ಸಾಹಿತ್ಯ ಲೋಕದ ಅತ್ಯಂತ ಹಿರಿಯ ಲೇಖಕರಾದ ದ.ರಾ. ಬೇಂದ್ರೆ, ದೇಜಗೌ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ತ.ಸು. ಶಾಮರಾವ್, ರಂ.ಶ್ರೀ. ಮುಗಳಿ, ಜಿ.ಎಸ್. ಶಿವರುದ್ರಪ್ಪ, ಎಂ.ವಿ. ಸೀತಾರಾಮಯ್ಯ, ವಿ.ಎಂ. ಇನಾಂದಾರ್, ಪಾ.ವೆಂ. ಆಚಾರ್ಯ, ತಿ.ತಾ. ಶರ್ಮ, ವ್ಯಾಸರಾಯ ಬಲ್ಲಾಳ, ಎಸ್.ಕೆ. ರಾಮಚಂದ್ರರಾವ್, ನಾ. ಡಿ’ಸೋಜಾ, ಎಚ್ಚೆಸ್ಕೆ, ಹಾಮಾನಾ, ಎಚ್.ಎಸ್. ಪಾರ್ವತಿ, ಟಿ.ಸುನಂದಮ್ಮ, ಹೊ.ವೆ. ಶೇಷಾದ್ರಿ, ಖಾದ್ರಿ ಶಾಮಣ್ಣ, ಎನ್. ರಂಗನಾಥ ಶರ್ಮಾ ಮೊದಲಾದವರು ಈ ಮಾಲೆಯ ಬರಹಗಾರರು ಎಂಬ ಹೆಮ್ಮೆ.
200 ಶೀರ್ಷಿಕೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ಪ್ರಕಟಣೆ
ಕಳೆದ ನಾಲ್ಕು ದಶಕದಲ್ಲಿ ದಾಖಲೆ ಮಾರಾಟ ಕಂಡ ಮಕ್ಕಳ ಸಾಹಿತ್ಯ .
ನಿಮ್ಮ ಮನೆಯ ಮಕ್ಕಳಲ್ಲಿ “ಓದಿನ ಹವಾ” ಬೆಳೆಸಬೇಕೆಂದರೆ ಈ ಪುಸ್ತಕಗಳನ್ನು ಮಕ್ಕಳಿಗೆ ಪರಿಚಯಿಸಿ .

Wednesday, November 29, 2023

WEDDING ENGAGEMENT - LAKSHMI/RAKSHITH

 Wednesday, 29th November 2023

RaghavendraSwamy Mutt, Dooravaninagara, K R Puram, Bengaluru.

That was Wedding Engagement of Rakshth (S/O Shubha Ravindra. Facebook Friend) with Lakshmi



The ceremony was grand with lot of items giving and taking from boys and girls side,



The grand ceremony with purohith leading the procedure, the dear and near distributing goodie items to ladies.




There were many relatives, wellwishers and friends of both Rakshith and Lakshmi.




Our wellwishers and friend, Usha Umesh Bharadhwaj were also there and another friend Athradi Suresh Hegde.




We had breakfast and Grand lunch with MysuruPaak and BadamPuri , Payasa as sweets.

MahaMangalarathi at Raghavendra Swamy Temple.



The gand wedding is fixed for 29th February 2024 at Bengaluru.

God Bless.

Posted 30/11/2023


Monday, November 27, 2023

ಬೆಂಗಳೂರು ಕಂಬಳ - ಕರಾವಳಿ ವೈಭವ

 ನವಂಬರ್ 25 -26, 2023 , ಶನಿವಾರ, ಭಾನುವಾರ 

ಅರಮನೆ ಮೈದಾನ , ಬೆಂಗಳೂರು.

ಅದೊಂದು ಬೃಹತ್ ಬೃಹತ್ ಸಮಾರಂಭ, ಲಕ್ಷಾಂತರ ಜನಗಳ ಜನ ಜಂಗುಳಿ... ಜನ ಸಾಗರ....

ನಾವು ಭಾನುವಾರ 12 ಗಂಟೆಗೆ ಹೋಗಿದ್ದು, ಕಾರು  ಪಾರ್ಕ್ ಮಾಡಿ ಸುಮಾರು 2 ಕಿಲೋಮೀಟರು ನಡೆಯಬೇಕಾಗಿತ್ತು.





ಕಂಬಳ ಕರಾವಳಿಯ ಕ್ರೀಡೆ, ಕೋಣ ಗಳನ್ನು ನೀರಿನಲ್ಲಿ ಓಡಿಸಿ ಸಂತಸ ಪಡುವುದು, ಅದರಲ್ಲಿ ಸ್ಪರ್ಧೆ...


ಸಾಂಸ್ಕೃತಿಕ ವೇದಿಕೆಯಲ್ಲಿ ಯಕ್ಷಗಾನ, ವಿವಿಧ ಕಲಾ ತಂಡಗಳು, ಪ್ರದರ್ಶನ ಕೊಟ್ಟು ಸಾವಿರಾರು ಜನರ ಮನರಂಜಿಸುತಿದ್ದರು.... 

ಸ್ಪರ್ದೆಯ ಕೋಣಗಳ ಓಟದ ಸ್ಥಳದಲ್ಲಿ ಸಹಸ್ರಾರು ಜನಗಳು, ನೂಕು ನುಗ್ಗಲು....



ಬರೆದಿರುವುದು 27/11/2023 



Sunday, November 26, 2023

ODISSI DANCE PROGRAM - SANJALI CENTRE

Saturday, 25th November 2023

A. D. A. RANGA MANDIRA ,  BENGALURU

That was Annual Day of Sanjali Centre for Odissi after three years.








Vidya Ravi is  student of this Dance School and she performed in the presentation in the group.



,

That was more than 2 hours program with all students of school performing various odissi dance from the beginners to professionals.




The item "DASHAVTHARA" was also superb performance with male and female dancers.






Sharmila Mukerjee, Director of the Dance School, also performing almost 15 minutes solo item.

Posted 26/11/2023




Saturday, November 25, 2023

ರಾಜ್ಯೋತ್ಸವ 2023 - ಶಿವರಾಮ ಕಾರಂತ ವೇದಿಕೆ

 ಶನಿವಾರ, 24 ನವಂಬರ 2023 

ಶ್ರೀ ವಿನಾಯಕ ದೇವಸ್ಥಾನ, ಅರ್.ಟಿ. ನಗರ, ಬೆಂಗಳೂರು.


ಶಿವರಾಮ ಕಾರಂತ ವೇದಿಕೆಯು ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮ "ಕನ್ನಡ ತೇರು", ಕೆಲವೇ ಕನ್ನಡಾಭಿಮಾನಿಗಳ ಸಮ್ಮುಖದಲ್ಲಿ ಸಂಪನ್ನ ಗೊಂಡಿತು.

ಬೆಂಗಳೂರಿನ ಆರ್ . ಟಿ. ನಗರದ ಶಿವರಾಮ ಕಾರಂತ ವೇದಿಕೆ, ಶನಿವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ- 'ಕನ್ನಡ ತೇರು' ಕಾರ್ಯಕ್ರಮದ ಕೆಲವು ಕ್ಷಣಗಳು. ಕನ್ನಡ- ಮಲಯಾಳಂ ಭಾಷಾ ಅನುವಾದಕ ಸುಧಾಕರನ್ ರಾಮಂತಳಿ ,

ಡಾ ಕೆ ಶರೀಫಾ 

ಸುಧಾಕರನ್ ರಾಮಂತಳಿ 
ಹಿರಿಯ ವಿಮರ್ಶಕ ಎಸ್. ಆರ್. ವಿಜಯಶಂಕರ ಮತ್ತು ವೇದಿಕೆಯ ಅಧ್ಯಕ್ಷರಾದ ದೀಪಾ ಫಡ್ಕೆ ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಕೆ. ಷರೀಫಾ ಅವರನ್ನು ಸನ್ಮಾನಿಸಿದರು.

ಹೇಮಶ್ರೀ ತಂಡದವರಿಂದ ಹಲವು ಕನ್ನಡ ಗೀತೆಗಳನ್ನು ಪ್ರಸ್ತುತ ಪಡಿಸಿದ ನಂತರ, ಸಭಾಕಾರ್ಯಕ್ರಮವನ್ನು ಕಾರ್ಯದರ್ಶಿ ಶಶಿಕಲಾ ಅವರು ನಿರ್ವಹಿಸಿದರು.

ನಾಡಗೀತೆಯ ಪ್ರಾರ್ಥನೆಯಾದನಂತರ ಅತಿಥಿಗಳನ್ನು ವೇದಿಕೆಯ ಅಧ್ಯಕ್ಷೆ ಡಾ ದೀಪಾ ಫದ್ಕೆಯವರು ಬರಮಾಡಿಕೊಂಡರು.

ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣದ ನಂತರ ಅತಿಥಿ, ಕನ್ನಡ-ಮಲಯಾಳಂ ಭಾಷಾ ಅನುವಾದಕ, ಸಾಹಿತಿ, ಸುಧಾಕರನ್ ರಾಮಂತಳಿಯವರು ಭಾಷಾ ಅನುವಾದಲ್ಲಿಯ ಸಮಸ್ಯೆಗಳು, ಸುಮಾರು ಮೂವತ್ತಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ಅನುವಾದ ಮಾಡಿದ ಶ್ರಮವನ್ನು ಹಂಚಿಕೊಂಡರು.




ವೇದಿಕೆಯ ಗೌರವಾಧ್ಯಕ್ಷ ಶ್ರೀ ಎಸ್. ಅರ್. ವಿಜಯಶಂಕರ್ ಅವರು ಡಾ.ಶರೀಫಾ ಅವರ ಸಾಧನೆ, ಸುಧಾಕರನ್ ಅವರ ಪರಿಶ್ರಮದ ಬಗ್ಗೆ ಉಪನ್ಯಾಸ ನೀಡಿದರು.
ವೇದಿಕೆಯ ಉಪಾಧ್ಯಕ್ಷ ಶ್ರೀ ವೀರಶೇಖರ ಸ್ವಾಮಿಯವರು ಧನ್ಯವಾದ ಸಮರ್ಪಣೆ ಮಾಡಿದರು.


ಕಾರ್ಯಕಾರಿ ಸಮಿತಿಯ ಸದಸ್ಯೆ ಶ್ರೀಮತಿ ಸತ್ಯಭಾಮ ಮೇಡಂ ಅವರ 50 ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ. ಉಪಹಾರದ ಖರ್ಚನ್ನು ದೇಣಿಗೆಯಾಗಿ ನೀಡಿದರು. ಶ್ರೀ ದೇವರು ಅವರಿಗೆ ಆಯುರಾರೋಗ್ಯ, ನೆಮ್ಮದಿಯನ್ನು ಕರುಣಿಸಲಿ ಎಂದು ಹಾರೈಸಲಾಯಿತು.
ಸುದೀರ್ಘ ಸುಂದರ ಬದುಕಿನ ಹಾದಿಯಲ್ಲಿ ನಗುನಗುತ್ತಾ ನಡೆದು ಆದರ್ಶರಾಗಿ,ಮದುವೆಯ ವಾರ್ಷಿಕ ಸುವರ್ಣ ಮಹೋತ್ಸವ ಆಚರಿಸಿಕೊಂಡು ಹಿರಿಯ ದಂಪತಿಗಳಾದ ಸತ್ಯಭಾಮ ಮೇಡಂ ದಂಪತಿಗಳಿಗೆ ಶುಭಾಶಯಗಳು ಭಗವಂತನ ಕೃಪೆ ಸದಾ ತಮಗಿರಲಿ. ಸಮಿತಿಯ ಸದಸ್ಯರು, ನಗುಮೊಗದಿ, ಸರಳ ಸಮಚಿತ್ತದ ಆದರ್ಶರು ಆದ ನಿಮ್ಮ ವಾರ್ಷಿಕೋತ್ಸವ ಶುಭ ದಿನ ಬಗ್ಗೆ ಹಾಗೂ ವಿಶೇಷ ದಿನದ ಪ್ರಯುಕ್ತ ಕಾರ್ಯಕ್ರಮದಲ್ಲಿ ತಿಂಡಿ ಪ್ರಾಯೋಜತ್ವದ ಜವಾಬ್ದಾರಿ ವಹಿಸಿಕೊಂಡ ಬಗ್ಗೆ ಮೊದಲೇ ವೇದಿಕೆಯಲ್ಲಿ ತಿಳಿಸಲಾಗಲಿಲ್ಲ. ಮತ್ತೊಮ್ಮೆ ಹಿರಿಯ ದಂಪತಿಗಳಿಗೆ ಮದುವೆಯ ಸುವರ್ಣ ವಾರ್ಷಿಕೋತ್ಸವದ ಶುಭಾಶಯಗಳು.


ಬರೆದಿರುವುದು 26/11/2023


Friday, November 24, 2023

ಡಾ. ಎಂ. ಪ್ರಭಾಕರ ಜೋಷಿಯವರ ಜೊತೆ- ವಿಂಶತಿ ಉತ್ಸವ (14)

ಶನಿವಾರ, 18 ನವಂಬರ, 202 3  

ಫಾರ್ಚೂನ್ ಪ್ಲಾಜಾ, ದುಬೈ.

ದುಬೈ ಬ್ರಾಹ್ಮಣ ಸಮಾಜದ ವಿಂಶತಿ ಉತ್ಸವದ 14 ನೇ ಕಾರ್ಯಕ್ರಮವಾಗಿ ಹಮ್ಮಿ ಕೊಂಡಿದ್ದ ಡಾ ಎಂ. ಪ್ರಭಾಕರ ಜೋಶಿ ಯವರೊಡನೆ ಮಾತುಕತೆ, ಸಮ್ಮಾನ, ಅದ್ದೂರಿಯಾಗಿ ಸಂಪನ್ನ ಗೊಂಡಿತು.




ಹಲವಾರು ಸಂಘ ಸಂಸ್ಥೆಗಳಿಂದ ಜೋಷಿಯವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.







ದುಬೈ ಬ್ರಾಹ್ಮಣ ಸಮಾಜವು, ಶ್ರೀ ಸುಧಾಕರ್ ರಾವ್ ಪೇಜಾವರ್ ಅವರ ನೇತೃತ್ವದಲ್ಲಿ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು  "ವಿಂಶತಿ ಉತ್ಸವ" (20 ನೇ ವರ್ಷ) ವನ್ನು ಅದ್ದೂರಿಯಾಗಿ ನಡೆಸಿ ಕೊಂಡು ಬರುತ್ತಿರುವುದು ಅತೀವ ಸಂತಸವನ್ನು ನೀಡುತ್ತಿದೆ.

ಬರೆದಿರುವುದು 24/11/2023