Wednesday, November 30, 2022

SUNDAY MORNING AT CUBBON PARK

 Sunday, 27th November 2022

SRI CHAMARAJENDRA (CUBBON) PARK , BENGALURU


It is after quite some time that we went to Cubbon Park on Sunday Morning.

As Rishi, Kavitha , Atharv were coming with Seena, we also joined them.


It was not crowded, as sometimes lot of peopel for some events like jogging, some run etc..


Last time, we could not enter the main road where Vidhana Soudha is there, as some major event was happening. Police blocked the entrance from all directions.


This time it was peaceful.


Spent some time going here and there, eneded up at Airlines hotel for breakfast and returned home.


amma with atharv (various ocassion)

Posted 1/12/2022

Tuesday, November 29, 2022

ರಾಜ್ಯೋತ್ಸವ 2022 - ಭುವನೇಶ್ವರಿನಗರ

 ಭಾನುವಾರ, 27 ನವಂಬರ 2022 

ಭುವನೇಶ್ವರಿನಗರ, ಹೆಬ್ಬಾಳ , ಬೆಂಗಳೂರು.



ಆಟೋ ಚಾಲಕರ ಸಂಘದಿಂದ ಕನ್ನಡ ರಾಜ್ಯೋತ್ಸವದ ಆಚರಣೆ.

ಭುವನೇಶ್ವರಿನಗರದ ಮುಖ್ಯ ರಸ್ತೆಯಲ್ಲಿ ಸಂಭ್ರಮ, ಎಲ್ಲಾ ಆಟೋಗಳಿಗೆ ಹಾರ, ರಸ್ತೆಯನ್ನು ತಳಿರು ತೋರಣಗಳಿಂದ ಅಲಂಕಾರ, ಕನ್ನಡದ ಧ್ವಜ ಎಲ್ಲೆಲ್ಲೂ ಹಾರಾಟ, 

ಜನರ ಗಮನ ಸೆಳೆಯಲು ಬೆಳಿಗ್ಗೆಯಿಂದ ಮೈಕಾಸುರನ ಆರ್ಭಟ, ಕನ್ನಡ ಹಾಡುಗಳ ಭೋರ್ಗರೆತ....


ನಮ್ಮ ಮಡದಿ ಅವರೊಡನೆ ಸಂವಾದ, ವೀಡಿಯೊ ಚಿತ್ರೀಕರಣ .....

ಆಟೋ ಚಾಲಕರಲ್ಲಿ ಖುಷಿಯ ನಗೆ, ದೊಡ್ಡ ಪಾತ್ರೆಯಲ್ಲಿ ತಯಾರಾದ ಊಟ/ಉಪಹಾರ...

ಒಂದು ದಿನದ/ಹೊತ್ತಿನ  ಸಂಭ್ರಮಾಚರಣೆ....

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಬರೆದಿರುವುದು 30/11/2022 

Monday, November 28, 2022

ANNUAL DAY - DECCAN INTERNATIONAL SCHOOL

 Saturday, 26th November 2022

VENUE: NIMHANS CONVENTION CENTER,  BENGALURU.

(National Institute of Mental Health and NeuroSciences - NIMHANS)

It was Annual Day of "Deccan International School" where Lahari (GrandDaughter, Shubha's daughter)) is studying in Grade XI.


I was taken back in memories of those years, when we at "Our Own English High School, Al Warqa'a, Dubai, running around organizing the program. Cultural programs, practicing prize receiving, arranging refreshments to parents, and decoration of the school.


Here at the auditorium it was a pleasure watching, children performing.



Lahari was one of the compere, (M. C. - Master of Ceremony,) done an excellant job, slim and tall, good presentation, looking smart in Saari.


There music on various instruments, dances, drama, Yakshagana, and BharataNatya presenting "Dashaavatara".

It was almost 8 pm when the program concluded.

Written 29/11/2022



ಬ್ರಹ್ಮ ಕಪಾಲ - ಯಕ್ಷಗಾನ

 ಭಾನುವಾರ, 27 ನವಂಬರ 2022 

ತರಳಬಾಳು ಕೇಂದ್ರ, ಅರ್. ಟಿ. ನಗರ, ಬೆಂಗಳೂರು.

ಯಕ್ಷಗಾನ ಪ್ರಿಯರಿಗೆ ಅದೊಂದು ರಸದೌತಣ. ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಕ್ರಪಾಪೋಷಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಕಮಲಶಿಲೆ, ಇವರಿಂದ, ಸುವರ್ಣ ಪ್ರಸಾಧನ ಯಕ್ಷರಂಗ ಇವರ ಸಹಯೋಗದಲ್ಲಿ

"ಬ್ರಹ್ಮ ಕಪಾಲ" ಎಂಬ ಪೌರಾಣಿಕ ಪ್ರಸಂಗವನ್ನು ಅದ್ಭುತವಾಗಿ ಆಡಿ ತೋರಿಸಿದರು.

ದೈವೆಂದ್ರನ ಅಸ್ತಾನ 


ಸುಮಾರು ಸಂಜೆ 4 ಗಂಟೆಗೆ ಪ್ರಾರಂಭವಾದ ಆಟ ಸತತವಾಗಿ ನಡೆದು 9 ಗಂಟೆಗೆ ಮುಗಿಯಿತು.

ಮಧ್ಯದಲ್ಲಿ ಸಭಾ ಕಾರ್ಯಕ್ರಮ ಇದ್ದು ಮಾಜಿ ಮಂತ್ರಿ ಶ್ರೀ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಇತರ ಪ್ರಾಯೋಜಕರುಗಳು  ಇದ್ದು ಅವರಿಗೆ ಸನ್ಮಾನ ವನ್ನು ಮಾಡಲಾಯಿತು.


ಪ್ರಸಂಗದ ಸಂಕ್ಷಿಪ್ತ ಕಥೆ ಹೀಗಿದೆ.

ಇಂದ್ರನ ಆಸ್ಥಾನದಲ್ಲಿ ಪರಮೇಶ್ವರನನ್ನು ಆಹ್ವಾನಿಸಬೇಕೆಂದು ತೀರ್ಮಾನಿಸಿ, ಅವನು ಈಗ ಕಾರ್ತೀಕ ಮಾಸ ಆದರಿಂದ ಬರಲಾಗ ದೆಂದೂ, ಮುಂದಿನ ತಿಂಗಳು ಮಾಘ ಮಾಸದಲ್ಲಿ ಬರುವನೆಂದು ತಿಳಿಸಿದನು.

ಈ ಮಧ್ಯೆ ಚತುರ್ಮುಖ ಬ್ರಹ್ಮನು ತನ್ನ ಆಸ್ಥಾನದಲ್ಲಿ ಯಕ್ಷ ಮದನನ ಫೋಟೋಗೆ ಕಾಲಲ್ಲಿ ತುಳಿದು ಅವಮಾನಿಸಿ ದ್ದರಿಂದ ಸ್ವಂತ ಮಗಳು ಶಾರದೆ ಯೊಡನೆ ಮಾತನಾಡುತ್ತಿರುವಾಗ ಕಾಮದೇವ ಮದನನು ನೋಡಿ ತನ್ನ ಬಾಣಗಳಿಂದ ಅವರಿಗೆ ಪ್ರೇಮಾಂಕುರ ವಾಗುವಂತೆ ಮಾಡಿದನು.

ಮದನ ಪಾತ್ರ ಧಾರಿಯು ಅದ್ಭುತವಾದ ಅಬಿನಯ, ನ್ರತ್ಯ ಮಾಡಿ ಸಭಿಕರಿಂದ ಮೆಚ್ಚುಗೆ ಪಡೆದನು.

ಬ್ರಹ್ನನು  ತನ್ನ ಮಗಳನ್ನು ಮದುವೆಯಾದಾಗ ಪರಶಿವನು ಅವನೊಡನೆ ಕಾದಾಡಿ , ಪರಸ್ಪರ ಹೀಯಾಳಿಸಿ, ಅವನ ಐದನೇ ತಲೆ (ಕಪಾಲ) ತುಂಡರಿಸಿದಾಗ ಬ್ರಹ್ಮನಿಂದ (ಬ್ರಹ್ಮ ಹತ್ಯಾ ದೋಷ) ಶಾಪ ಗ್ರಸ್ತ ನಾಗುವನು.


ಪರಶಿವನು ಒಂದು ಕೈಯಲ್ಲಿ ಭಿಕ್ಷಾ ಪಾತ್ರೆಯನ್ನು, ಇನ್ನೊಂದು ಕೈಯಲ್ಲಿ ಬ್ರಹ್ಮ ಕಪಾಲವನ್ನು ಹಿಡಿದುಕೊಂಡು ಹಲವಾರು ಕಡೆ ತೆರಳುವನು.

"ಪತಿವ್ರತೆ" - ಕುಮುದಿನಿ 
ಶಿವನು ಯಕ್ಷಿಣಿ ಯೊಡನೆ, ಸನ್ಯಾಸಿಯ ಮಡದಿ  ಕುಮುದಿನಿ ಯೊಡನೆ ತೆರಳಿ ಭಿಕ್ಷೆ ಬೇಡುತ್ತಾನೆ.ಕೊನೆಯಲ್ಲಿ ಮಹಾವಿಷ್ಣುವನೊಡನೆ ತೆರಳಿ,  ಕೈಯಿಂದ ಮಾಂಸ ಮತ್ತು ರಕ್ತವನ್ನು ಹೀರುತ್ತಿರುವ ಕಪಾಲವನ್ನು 
ತೆರವುಗೊಳಿಸಿ ಮುಂದೆ ಕುರುಕ್ಷೇತ್ರದ ಯುದ್ಧದಲ್ಲಿ ಸಾಯುತ್ತಿರುವ ಜನರಿಂದ ರಕ್ತ ಮಾಂಸ ವನ್ನು ಹೀರಿ ಶಾಪದಿಂದ ಮುಕ್ತನಾಗುತ್ತಾನೆ. 
The Brahma Kapala. However, that was just the beginning of an untold misery for Lord Shiva. Since Lord Shiva had tortured Lord Brahma, the chief Brahmana, he was inflicted with the Brahmahathi Dosha. Lord Brahma’s skull (Kapala) stuck to Lord Shiva’s hands and refused to fall off.

ಯಕ್ಷಗಾನವು ಕರಾವಳಿಯ ಜನಪ್ರಿಯ ಕಲೆ. ವೇಷಭೂಷಣ, ನ್ರತ್ಯ, ಅಭಿನಯ, ಸಂಭಾಷಣೆ, ಹಾಗೂ ಕೊನೆಯಲ್ಲಿ ಕಥೆಯ ನೀತಿ ಪಾಠ ವನ್ನು ತಿಳಿಸುತ್ತಾರೆ.

ಬರೆದಿರುವುದು 29/11/2022 


Sunday, November 27, 2022

SUGAMA BHAJANE - 14

 Saturday, 19th November 2022

ZOOM ONLINE

HOST : LAKSHMI SURYAKUMAR 


November Month Bhajane was hosted by Lakshmi Surya Kumar at Sharjah.


ಶುಕ್ಲಾಂಬರಧರಂ ವಿಷ್ಣುಂ - ಜಯರಾಮ ನಳಿನಿ ಸೋಮಯಾಜಿ 
The foloowing were present for the event:


ಪಾಹಿ ಪಾಹೀ ಗಜಾನನ - ರಾಘವೇಂದ್ರ ಉಡುಪ 
1. Sudhaker Rao Pejavar and Latha at Dubai
2. Jayarama Somayaji and Nalini at Bengaluru


ದೇವಿ ಬಂದಳೇ ...... ನಳಿನಿ ಸೋಮಯಾಜಿ 
3. Rajeshwara Holla and Hemalatha at Mangaluru
4 Raviraj Tantry and Pratima, at Sharjah


ಸಕಲ ಗ್ರಹ ಬಲ ನೀನೇ ...... ಜಯರಾಮ ಸೋಮಯಾಜಿ 
5. Ramachandra Udupa, Rajani and Raghavendra,at Udupi


ಬ್ರಹ್ಮ ಮುರಾರಿ........ ನಳಿನಿ ಸೋಮಯಾಜಿ 
6. Ashok at Sharjah

ಬಿನ್ನಹಕೆ ಬಾಯಿಲ್ಲವಯ್ಯ...... ರಜನಿ ಉಡುಪ 

7. Sudhakar Khandiga and Sumangali at Parampalli, Saligrama

ಪವಮಾನ.... ಪವಮಾನ .... ಉದಯ ಕುಮಾರ್ 

8. Udayakumar and Savithri at Dubai

ZOOM ONLINE AT BIRTHIMANE

The program started with the recitation of  LALITHA SAHASRANAMA 

This followed by Sloka of " SHUKLAAM BHARADARAM" BY Jayarama, Nalini Somayaji.

This followed by "GANESHA STUTHI" by Suryakumar.

Other Bhajans followed"

Chintane by Sudhaker Rao Pejavar'

ಚಿಂತನೆ - ಸುಧಾಕರ್ ರಾವ್ ಪೇಜಾವರ್ 



Saturday, November 26, 2022

ಕವಿ ಗೋಪಾಲಕ್ರಷ್ಣ ಅಡಿಗರ ಸ್ಮರಣೆ

 ಶನಿವಾರ, ನವಂಬರ 26, 2022 

ರವಿಂದ್ರನಾಥ್ ಟಾಗೋರ್ ಉದ್ಯಾನವನ, ಗಾಂಧಿ ಬಜಾರ್, ಬೆಂಗಳೂರು.

ಅದೊಂದು ಅಪರೂಪದ ಕಾರ್ಯಕ್ರಮ. ಗಾಂಧಿ ಬಜಾರ್ ನ ಉದ್ಯಾನವನದಲ್ಲಿ.....



ಕವಿ ಗೋಪಾಲಕ್ರಷ್ಣ ಅಡಿಗರ 30 ನೇ ಸ್ಮರಣೆ, ಶ್ರೀ ಬಿ. ವಿ ಕೆದಿಲಾಯರ ಪುಸ್ತಕ ಬಿಡುಗಡೆ, ಹಾಗೂ ಅಡಿಗರ ಆಯ್ದ ಹಾಡುಗಳ ಹಾಡುವಿಕೆ.



ಶ್ರೀ ಬಾಹುಬಲಿ ಮತ್ತು ಜಯರಾಮ ಅಡಿಗರ ನೇತ್ರತ್ವದಲ್ಲಿ "ಗಾಂಧಿ ಬಜಾರ್ ವಿಚಾರ ವೇದಿಕೆಯ" ಆಶ್ರಯದಲ್ಲಿ ಬಿಸಿಲು, ನೆರಳುವಿನ ಪ್ರಕ್ರತಿಯ ವಾತಾವರಣ ದಲ್ಲಿ ನಡೆದ ಕಾರ್ಯಕ್ರಮ.


ಸುಮಾರು 40 - 50 ಹಿರಿಯ ನಾಗರಿಕರ ಸಮ್ಮುಖದಲ್ಲಿ ರವಿಂದ್ರನಾಥ್ ಟಾಗೋರ್ ಅವರ ಪುತ್ಥಳಿಗೆ ಹಾರಾರ್ಪಣೆ ಯಾದ ನಂತರ ಖ್ಯಾತ ಗಾಯಕಿ ಶ್ರೀಮತಿ ಲೀಲಾವತಿಯವರಿಂದ ಭಾಷಣ, ಅಡಿಗರ ಸಮಯದಲ್ಲಿ ಕಳೆದ ವರ್ಷಗಳು, ಒಡನಾಟ, ವಿವರಿಸಿ ಸ್ಮರಣೆ ಮಾಡಿದರು.






ಶ್ರೀ ಬಿ. ವಿ. ಕೆದಿಲಾಯರ ಪುಸ್ತಕ "ಆಯ್ದ ವೈಚಾರಿಕ ಲೇಖನಗಳು" ಬಿಡುಗಡೆಯಾದ ನಂತರ ಗೋಪಾಲಕ್ರಷ್ಣ ಅಡಿಗರ ಬರಹಗಳು, ವ್ಯಕ್ತಿತ್ವ, ಒಡನಾಟ ವನ್ನು ಸ್ಮರಿಸಿಕೊಂಡು ಭಾಷಣ ಮಾಡಿದರು.


"ಸ್ವಾತಂತ್ರ್ಯ ವೇದಿಕೆಯ ಶೀರ್ಷಿಕೆ " ಯಲ್ಲಿ  ನಡೆದ ಈ ಕಾರ್ಯಕ್ರಮದಲ್ಲಿ ಅಡಿಗರ ಕೆಲವು ಕವಿತೆಗಳ ವಿಭನ್ನ ರಾಗ ಸಂಯೋಜನೆ ಯೊಳ ಗೊಂಡ "ಕವಿತಾ ಮಂಜರಿ" ಯನ್ನು ಪ್ರಸ್ತುತ ಪಡಿಸಿದ ಗಾಯಕರು - ಡಾ ಹೇಮಾ ಪ್ರಸಾದ್, ಮುರಳಿಧರ್ ನಾವುಡ, ಶ್ರೀದೇವಿ ಗರ್ತಿಕೆರೆ, ರಾಜೀವ್ ಅಗಲಿ, ವಿ.ಜಿ. ಅವಿನಾಶ್, ಚಾಂದನಿ ಗರ್ತಿಕೆರೆ.

ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ಮನರಂಜಿಸಿದರು.


ಶ್ರೀ ಬಾಹುಬಲಿಯವರ ಧನ್ಯವಾದ ಸಮರ್ಪಣೆ ಯೊಂದಿಗೆ ಮಧ್ಯಾಹ್ನ 12.30 ಗಂಟೆಗೆ ಕಾರ್ಯಕ್ರಮ ಮುಕ್ತಾಯವಾಯಿತು.




Sunday, November 20, 2022

ಶುಭಾಷಿತ - ನುಡಿ ಮುತ್ತುಗಳು (1)


 

ಆತುರದ ನಿರ್ಧಾರ ಬದುಕನ್ನು ಆತಂಕದ ಪ್ರಪಾತಕ್ಕೆ ತಳ್ಳಬಹುದು...

ಯೋಚಿಸಿ.. ಅರಿತು ಮಾಡುವ ನಿರ್ಧಾರ ಬದುಕನ್ನು ಏಳಿಗೆಯ ಪಥದಲ್ಲಿ ಕೊಂಡೊಯ್ಯುವುದು..

ನಂಬಿಕೆ, ತಾಳ್ಮೆ, ಭರವಸೆ ನಮ್ಮಲ್ಲಿದ್ದರೆ ಅದರ ಮಧುರ ಫಲ ನಮಗೆ ಖಂಡಿತವಾಗಿಯೂ ಸಿಗುತ್ತದೆ.

***************************************

ಜೀವನ ಒಂದು ಕನಸಿನ ಮೂಟೆ.😍 ಕಟ್ಟುವುದು ಸುಲಭ,😔ಹೊತ್ತು ಸಾಗುವುದೇ ಕಷ್ಟ.🥶

***************************************

ಆಪತ್ತು ಬಂದ ವಿನಹ ಯಾವನೂ ಯಾರನ್ನೂ ಯಾಚಿಸಬಾರದು - ಮನು ಸ್ಮೃತಿ

**************************************

ಸೋಲಿನಿಂದ ಪಾಠ ಕಲಿಯಬೇಕು, ನೋವಿನಿಂದ ಬದುಕು ಅರಿಯಬೇಕು.

*************************

ಬದುಕು....*

ಬೊಗಸೆಯಲ್ಲಿ ಹಿಡಿದಿಟ್ಟ ನೀರಿನಂತೆ.....* ಬಸಿದು ಹೋಗುವ ಮುನ್ನ ಬಳಸೋಣ..* ಪ್ರತಿಕ್ಷಣ ವ್ಯರ್ಥವಾಗದಂತೆ.*

***************************

ಒತ್ತಡವಿಲ್ಲದ ಉದ್ಯೋಗವಿಲ್ಲ.* ನಷ್ಟವಿಲ್ಲದ ವ್ಯಾಪಾರವಿಲ್ಲ.* ಕಷ್ಟವಿಲ್ಲದ ವ್ಯವಸಾಯವಿಲ್ಲ.*ನೋವಿಲ್ಲದ ಸಂಸಾರವಿಲ್ಲ.*

ಸಮಸ್ಯೆಗಳಿಲ್ಲದ ಮನುಷ್ಯನಿಲ್ಲ.* ಇವೆಲ್ಲವನ್ನೂ ನಿಭಾಯಿಸುವುದೇ..* ಜೀವನ.*

****************************************

ಶೀಲವಿಲ್ಲದ ಶಿಕ್ಷಣ, ತತ್ವರಹಿತ ರಾಜಕಾರಣ, ಮಾನವೀಯತೆ ಇಲ್ಲದ ವಿಜ್ಞಾನ, ನೀತಿಯಿಲ್ಲದ ವ್ಯಾಪಾರ - ಇವುಗಳಿಂದ ಅಪಾಯ ನಿಶ್ಚಿತ. - ಚಾಣಕ್ಯ

ಜೀವನದಲ್ಲಿ_....*ನೆಮ್ಮದಿ ಮತ್ತು ಅಭಿವೃದ್ಧಿ ಬೇಕಾದಲ್ಲಿ...,*

ನಿನ್ನೆಗಿಂತ ಈ ದಿನ ಉತ್ತಮ ಎಂಬ ಭರವಸೆಯಿಂದ ಮುನ್ನುಗ್ಗಿ ಹಿಡಿದ ಕಾರ್ಯವನ್ನು ಸಾಧಿಸಬೇಕು.*

ಸಂತೋಷಕರ ವಿಷಯವೆಂದರೆ ಆಗ ತನ್ನಿಂತಾನೆ ನಾಳೆಗಳು ಅತ್ಯುತ್ತಮವಾಗುತ್ತವೆ.*

************************************

ನೋವು ಅನುಭವಿಸಲು ಅಶಕ್ತರಾದರೆ ಒಳ್ಳೆಯವರಾಗಲು ಹೋಗ್ಬೇಡಿ,*

ಮೋಸ ಹೋಗುವ ಭಯವಿದ್ದರೆ ನೆರವು ನೀಡಲು ಹೋಗ್ಬೇಡಿ,*

ನಿರೀಕ್ಷೆಗಳ ಮೂಟೆ  ಹೊತ್ತಿದ್ದರೆ ಪ್ರೀತಿಸಲು ಹೋಗ್ಬೇಡಿ,*

ವಾದ ಸರಣಿಯಲ್ಲಿ ಗೆಲ್ಲುವ ಚಪಲವಿದ್ದರೆ  ಗೆಳೆತನ ನಿಭಾಯಿಸಲು ಹೋಗ್ಬೇಡಿ.*

***********************************

ನಾವು ಸಂಪಾದಿಸಿದ ಒಡವೆ, ಹಣ, ಆಸ್ತಿ ಇವೆಲ್ಲವನ್ನೂ ನಾವೇ ಕಾಯಬೇಕು...., ಆದರೆ; ನಾವು ಸಂಪಾದಿಸಿದ ವಿದ್ಯೆ, ಪುಣ್ಯ, ಸ್ನೇಹ..., ಮಾಡಿದ ಸಪಾತ್ರ ದಾನ, ಧರ್ಮ, ಪ್ರೀತಿ, ನಿರೀಕ್ಷೆ ಇಲ್ಲದೆ ಮಾಡಿದ ಸಹಾಯ...ನಮ್ಮನ್ನು ಕಾಯುತ್ತವೆ.*

**************************************

ದೇವರು ಯುಗಕ್ಕೊಂದು ಅವತಾರ ತಾಳುತ್ತಾನೆ.ಮನುಷ್ಯನೋ ಕ್ಷಣಕ್ಕೊಂದು.....ಪರಿಣಾಮ.... ಜೀವನದ ಇಷ್ಟೆಲ್ಲ ಆವಾಂತರ

*************************************

ಕೈಲಾಗದ ಶತ್ರುವಿನ, ಕೊನೆಯ ಆಯುಧವೇ......ಅಪಪ್ರಚಾರ.

************************************

ಹೃದಯಾಂತರಾಳದಲಿ ಒಲವಿನ ದೀಪ ಪ್ರಜ್ವಲಿಸಿ,ಈ ದೀಪಾವಳಿಯು ಎಲ್ಲರಿಗೂ ಶುಭ ತರಲಿ.

************************************

ನಮ್ಮ ಕರ್ಮವನ್ನೇ ಧರ್ಮವಾಗಿಸಿ ಜೀವನ ನಡೆಸಿದರೆ, ದೇವರು, ಧರ್ಮ, ವೇದ, ಶಾಸ್ತ್ರಗಳ ಕುರಿತು,ಚಿಂತಿಸಬೇಕಿಲ್ಲ.

************************************

ಗೆಲುವನ್ನು ತಲೆಗೆರಲು ಬಿಡದಿರೋಣ,ಸೋಲನ್ನು ಹೃದಯಕ್ಕೆ ಇಳಿಯಲು ಬಿಡದಿರೋಣ.

ನಮ್ಮವರೊಡನೆ ಒಂದಾಗಿ ಆದಷ್ಟೂ ಪರರ ಬಾಳಲ್ಲಿ ಬೆಳಕು ಚೆಲ್ಲೋಣ.

**********************************

ಪಾಪದ ಹೊರೆ ಹೆಚ್ಚಾಗುವಷ್ಟು ಗಳಿಸಬೇಡಿ. ನಿಮ್ಮ ಸಾಲದ ಹೊರೆ ಹೆಚ್ಚಾಗುವಂತೆ ಖರ್ಚು ಮಾಡಬೇಡಿ.

ಕಲಹಗಳು ಹೆಚ್ಚಾಗುವ ಹಾಗೆ ಮಾತನಾಡಬೇಡಿ. ದೇಹದಲ್ಲಿ ರೋಗಗಳು ಹೆಚ್ಚಾಗುವಷ್ಟು ತಿನ್ನಬೇಡಿ.

ಚಿಂತೆ ಹೆಚ್ಚಾಗುವ ಹಾಗೆ ವಿಪರೀತ ಯೋಚಿಸಬೇಡಿ.

*********************************

ಯಾರು ತಮ್ಮ ಲಾಭಕ್ಕಾಗಿ ಇತರರನ್ನು ಬಳಸಿಕೊಳ್ಳುವರೋ, ಒಂದಲ್ಲ ಒಂದು ದಿನ, ಒಂದಲ್ಲ ಒಂದು ಕಡೆ ಅವರು ಕೂಡಾ ಇನ್ಯಾರದೋ ಲಾಭಕ್ಕಾಗಿ ಖಂಡಿತ ಬಳಕೆ ಆಗುತ್ತಾರೆ.

ಬದುಕು ಸವಿಯಿರಿ. ಬದುಕಲು ಕಲಿಯಿರಿ. 

************************************

ಬೇರೆಯವರ ಕಾಲನ್ನು ಎಳೆದು ಸಂತೋಷ ಪಡುವವರು ಅನೇಕರಿದ್ದಾರೆ.., ಆದರೆ; ಅದರಿಂದ ತಮ್ಮದೇ ಪತನವಾಗುತ್ತಿದೆ...,ಈ ವಿಷಯವನ್ನು ಕಡೆಗಣಿಸುತ್ತಾರೆ.

ನಮ್ಮಿಂದಾದ ಅನ್ಯಾಯದ ಪರ ಸಂತಾಪದ ಅಶ್ರು ನಮ್ಮ ಅತೀ ದೊಡ್ಡ ಶತ್ರು.

****************************************

ಮನುಷ್ಯನ ಮನಸ್ಸು ಮತ್ತು ನಾಲಿಗೆ ಬಹು ಉಪಯೋಗಕಾರಿ..., ಆದರೆ;

ದುರ್ಬಳಕೆ ಮಾಡಿದ್ದಲ್ಲಿ ಇವೆರಡಕ್ಕಿಂತ ದೊಡ್ಡ ಹಿತ ಶತ್ರು ಬೇರೆ ಬೇಕಿಲ್ಲ.

****************************

ಜೀವನ ಒಂದು ನಾಣ್ಯದಂತೆ...*

ಅದಕ್ಕೆ ಅದರದೇ ಆದ ಬೆಲೆಯಿಲ್ಲ.. ಅದರ ಬೆಲೆ ಅದರ ಉಪಯೋಗದ ಮೇಲೆ ಅವಲಂಬಿತ.

ಆದರೆ.... ಜೀವನ ನಾಣ್ಯವು ಕೇವಲ ಒಂದೇ ಉಪಯೋಗಕ್ಕೆ ಲಭ್ಯ.. ಅದು ಕೇವಲ.... ಹೌದು ಕೇವಲ... ನಮ್ಮದೇ ಹೊಣೆ.

ನಾವು ಜೀವನದಲ್ಲಿ ಏನೇ ಸಾಧಿಸಲು ಅತೀ ಅಗತ್ಯವಾದದ್ದು ಹಣವಲ್ಲ,* 

ಯಾರ ಆಶ್ರಯವೂ ಅಲ್ಲ, ಇನ್ನೊಬ್ಬರ ಉತ್ತೇಜನವೂ ಅಲ್ಲ, ಬೇಕು ಆತ್ಮವಿಶ್ವಾಸ.

************************************

ಅತ್ಯಂತ ಒಳ್ಳೆಯ ಆಯುಧ, ಸಹನೆ, .ಬಹು ದೊಡ್ಡ ಪ್ರತಿಕಾರ..ಮೌನ.*
ಜೀವನದ ಅತೀ ದೊಡ್ಡ ಕಷ್ಟ..* ನಮ್ಮವರು ಎನಿಸಿಕೊಂಡವರ ನಡುವೆ...

ನಮ್ಮವರನ್ನು ಹುಡುಕುವುದು. ಖಾಲಿ ಕೈಗೆ, ಆಸರೆಯಾದ ಸಂಬಂಧ,

*********************************

ಸಂಪತ್ತಿಗಿಂತ ಮೌಲ್ಯವಾದದ್ದು.ಅದು ಶ್ರೇಷ್ಠ ಕೂಡಾ.*

***************************************

ಕುದಿಯುವವರು ಕುದಿಯಲಿ..!* ಉರಿಯುವವರು ಉರಿಯಲಿ..!* ನಿನ್ನ ಪಾಡಿಗೆ ನೀನಿರು..!*

ಕುದಿಯುವವ ಆವಿಯಾಗುತ್ತಾನೆ.* ಉರಿಯುವವ ಬೂದಿಯಗುತ್ತಾನೆ.*

********************************

ಕೊಡುವುದನ್ನು ಶುರು ಮಾಡಿ ಬರುವುದು ತಾನಾಗಿಯೇ ಬರುತ್ತದೆ.*

ಅದು;* ಸಂಪತ್ತೇ ಇರಬಹುದು* ಗೌರವವೇ ಇರಬಹುದು... ಅಥವಾ* ಪ್ರೀತಿಯೇ ಇರಬಹುದು.*

ನಗುವನ್ನು ಮರೆಸುವ ಸಮಯ ಬಾರದಿರಲಿ.* ಸಮಯವನ್ನು ಮರೆಸುವ ನಗು ನಿಮ್ಮದಾಗಿರಲಿ.*

************************************

ಕೈಯಿಂದ ಬಿಸಾಡಿದ ಕಲ್ಲು,* ಬಾಯಿಂದ ಜಾರಿದ ಮಾತು,*

ಕಳೆದು ಹೋದ ಸಮಯ,* ಕಳೆದುಕೊಂಡ ನಂಬಿಕೆ,*ಎಂದಿಗೂ ತಿರುಗಿ ಬಾರದು.*

********************************

ದಂಡಿಸೋ ಅವಕಾಶವಿದ್ದರೂ ದಂಡಿಸದೆ ಇರೋದನ್ನ ಸಹನೆ ಎನ್ನುತ್ತಾರೆ.*
ಬಿಟ್ಟು ಹೋಗುವುದಕ್ಕೆ ಹಲವಾರು ಕಾರಣಗಳಿದ್ದರೂ ಜೊತೆಯಲ್ಲಿ ಇರುವುದನ್ನು ಪ್ರೀತಿ ಎನ್ನುತ್ತಾರೆ.*
ತಪ್ಪು ಮಾಡುವುದಕ್ಕೆ ಹಲವಾರು ಅವಕಾಶಗಳಿದ್ದರೂ ತಪ್ಪು ಮಾಡದೆ ಇರುವುದಕ್ಕೆ ವ್ಯಕ್ತಿತ್ವವೆನ್ನುತ್ತಾರೆ.*
************************************
ಯಾರಿಗಾಗಿಯೂ ಅಳಬೇಡಿ, ಅವರು ನಿಮ್ಮ ಕಣ್ಣೀರಿಗೆ ಯೋಗ್ಯರಲ್ಲ....ಏಕೆಂದರೆ...*
ನಿಮ್ಮ ಕಣ್ಣೀರಿಗೆ ಯೋಗ್ಯರಾದವರು ನಿಮಗೆ ಅಳಲು ಬಿಡುವುದಿಲ್ಲ.*
*****************************
ನಡೆಯಲು ಕಲಿಯುವಾಗ ಜನ ಬೀಳೋಕೆ ಬಿಡ್ತಾ ಇರಲಿಲ್ಲ,*
ನಡೆಯಲು ಕಲಿತ ಮೇಲೆ ಬಿಳಿಸೋಕೆ ಕಾಯ್ತಾ ಇರ್ತಾರೆ.*
***********************************
ನಗುವನ್ನು ಮರೆಸುವ ಸಮಯ ಬಾರದಿರಲಿ.* ಸಮಯವನ್ನು ಮರೆಸುವ ನಗು ನಿಮ್ಮದಾಗಿರಲಿ.*
****************************************
ನಮ್ಮಿಚ್ಚೆಯ  ಪಾತ್ರಗಳು,*  ಸಿಗದೇ ಹೋಗುವ,* ನಾಟಕದ ಹೆಸರೇ....*ಬ ದು ಕು*
*********************************************
ಕೆಲವು ನಮಗೆ ಬೇಕಾಗಿರುತ್ತವೆ. ಅವು ತಕ್ಷಣ ಸಿಕ್ಕಿ ಬಿಡುತ್ತವೆ. ಅದೇ ಅದೃಷ್ಟ .
ಮತ್ತೆ ಕೆಲವು ನಮಗೆ ಬೇಕಾಗಿರುತ್ತವೆ. ಅದಕ್ಕಾಗಿ ಕಾಯುತ್ತೇವೆ. ಸಮಯ ಬಂದಾಗ ಸಿಗುತ್ತದೆ. ಅದು ಸಮಯ .
ಕೆಲವು ನಮಗೆ ಬೇಕಾಗಿರುತ್ತವೆ. ಸಿಗುವುದಿಲ್ಲ ಎಂದು ಒಪ್ಪಿ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಅದು ಬದುಕು .
ಇನ್ನು ಕೆಲವು ನಮಗೆ ಬೇಕಾಗಿರುತ್ತದೆ. ಕಾಯುತ್ತೇವೆ. ಹೊಂದಾಣಿಕೆ ಮಾಡಿಕೊಳ್ಳದೆ,  ಹೋರಾಡಿ ಪಡೆಯುತ್ತೇವೆ.
ಅದು ಯಶಸ್ಸು .
************************************
ಹುಳಿಯನ್ನು ಯಾವ ಅಡುಗೆಗೆ, ಎಷ್ಟು ಬಳಸಬೇಕು ಎಂದು ಗೊತ್ತಿರಲಿ...,ಹಾಗೆಯೇ;* 

ಹುಳಿ ಹಿಂಡುವವರನ್ನು ಎಲ್ಲಿ ಇಡಬೇಕು ಎಂದು ಸಹ ಗೊತ್ತಿರಲಿ...* ಏಕೆಂದರೆ ಹುಳಿಯ ಗುಣವೇ ಒಡೆಯುವುದು ..*
****************************************
ಸಜ್ಜನರ ಸಂಗ ಮಾಡುವಾಗ ಹಸಿದ ಹೊಟ್ಟೆಯಲ್ಲಿ ಇರುವ ಪ್ರಸಂಗ ಬಂದರೂ ಬಿಡಬೇಡ...*
ಮೃಷ್ಟಾನ್ನ ಭೋಜನ ಇಕ್ಕಿದರೂ ದುರ್ಜನರ ಸಂಗ ಮಾಡಬೇಡ.*
****************************************
ಗೆದ್ದ ವ್ಯಕ್ತಿಗೆ ಚಪ್ಪಾಳೆ ಹೊಡೆಯುವವರು ದೊಡ್ಡವರಾಗುವುದಿಲ್ಲ....!*
ಬಿದ್ದ ವ್ಯಕ್ತಿಯನ್ನು ಕೈಹಿಡಿದು ಎತ್ತುವವರು ದೊಡ್ಡವರಾಗುತ್ತಾರೆ.*
************************************************
ಕೆಟ್ಟ ಸಮಯ ಒಳ್ಳೆಯ ತಕ್ಕಡಿ ಇದ್ದಂತೆ...,*ಅದು ನಮ್ಮ 'ಬಂಧು ಬಳಗದ' ಸರಿಯಾದ ತೂಕ ತೋರಿಸುತ್ತದೆ.*
************************************************
ದೇವರನ್ನು ನಾನು ನೋಡಲಿಲ್ಲ... ಎಂಬ ನೋವು ಬಿಡಿ..* ದೇವರು ನನ್ನನ್ನು ಅನುಕ್ಷಣವೂ ನೋಡುತ್ತಿದ್ದಾನೆ.. ಎಂಬ ನಂಬಿಕೆ ಇಡಿ..* ದೇವರ ಸಾಕ್ಷಾತ್ಕಾರ ಖಂಡಿತ.*
********************************************
ಜೀವ ಸ್ವತಂತ್ರ..* ಯಾವ ಕ್ಷಣದಲ್ಲೂ ಹಾರಿ ಹೋಗಬಹುದು.*
ಜೀವನ ನಮ್ಮ ಅಧೀನ..* ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು.*
********************************************
ಎಲ್ಲರೂ ಹೇಳುತ್ತಾರೆ..* 
ಮನುಷ್ಯನು ಖಾಲಿ ಕೈಯಲ್ಲಿ ಬರುತ್ತಾನೆ... ಖಾಲಿ ಕೈಯಲ್ಲಿ ಹೋಗುತ್ತಾನೆ.., ನಿಜವೇ?*🤔
ಅವನು ಬರುವಾಗ ತನ್ನ ಭಾಗ್ಯದ ಜತೆ ಬರುತ್ತಾನೆ..* ಹೋಗುವಾಗ ತನ್ನ ಕರ್ಮಫಲವನ್ನು ಕೊಂಡು ಹೋಗುತ್ತಾನೆ.*
 ಭಗವದ್ಗೀತೆ*🪷
**********************************************
ನಾನು ಯಾರು?* ಏಕೆ ಬಂದೆ?* ಏನನ್ನು ಕೊಂಡು ಹೋಗುವೆ?* ಇದನ್ನು ತಿಳಿದ ಕ್ಷಣದಿಂದ,*
ಸುಖ, ಶಾಂತಿ, ನೆಮ್ಮದಿ ಕಟ್ಟಿಟ್ಟ ಬುತ್ತಿ.*
********************************************
ನಮ್ಮನ್ನು ನಿರ್ಲಕ್ಷ್ಯಿಸುವವರು ಎಷ್ಟೇ ಮಹಾನ್ ವ್ಯಕ್ತಿಯಾಗಿದ್ದರೂ ಪರವಾಗಿಲ್ಲ.., ಅವರಿಂದ ದೂರದಲ್ಲಿರುವುದು ಒಳ್ಳೆಯದು.*
ನಮ್ಮನ್ನು ಪ್ರೀತಿಸುವವರು ಸಾಮಾನ್ಯ ವ್ಯಕ್ತಿಯಾಗಿದ್ದರೂ ಪರವಾಗಿಲ್ಲ..., ಅವರನ್ನು ಪ್ರೀತಿಸೋಣ.... ಗೌರವಿಸೋಣ.*
********************************************
ಜವಾಬ್ದಾರಿ....*
ತೆಗೆದು ಕೊಳ್ಳದ ವ್ಯಕ್ತಿ ಎದ್ದರೂ ಜಡವಾಗಿರುತ್ತಾನೆ.*
ತೆಗೆದು ಕೊಳ್ಳುವ ವ್ಯಕ್ತಿ ನಿದ್ದೆಯಲ್ಲಿದ್ದರೂ ಸಕ್ರಿಯನಾಗಿರುತ್ತಾನೆ.*
*******************************************
ಹುಟ್ಟು ಆಕಸ್ಮಿಕ - ಸಾವು ಖಚಿತ.*
ಆಕಸ್ಮಿಕ ಹುಟ್ಟಿನ ಕುರಿತು ತಂದೆ ತಾಯಿಯರು ತಯಾರಿ ಮಾಡಿರುತ್ತಾರೆ..., ಆದರೆ;*
ಖಚಿತ ಸಾವಿನ ಕುರಿತು ನಾವೆಷ್ಟು ತಯಾರಿದ್ದೇವೆ?🤔*
******************************************
ನಾವು ಎಡವುವುದು ಸಣ್ಣ ಕಲ್ಲುಗಳಿಗೆ ಹೊರತು ದೊಡ್ಡ ಬಂಡೆಗಲ್ಲ.*
ಅದೇ ತರಹ ಪತನ, ಸಣ್ಣ ತಪ್ಪುಗಳಿಂದಲೇ ಆಗುತ್ತದೆಯೇ ಹೊರತು ದೊಡ್ಡ ತಪ್ಪುಗಳಿಂದಲ್ಲ.*
ಜಾಗರೂಕರಾಗಿರೋಣ.*
******************************************
ಆಂತರಿಕ ವಿಷಯಗಳು ಅಂತರಂಗದಲ್ಲೇ ಇರಬೇಕು.* ಬಹಿರಂಗ ಪಡಿಸಿದಲ್ಲಿ ವ್ಯಕ್ತಿತ್ವದ ಹನನವಾದೀತು.*
*********************************************
ಕತ್ತಲನ್ನು ದೂಷಿಸಿ ಪ್ರಯೋಜನವಿಲ್ಲ,*
ದೀಪ ಹಚ್ಚೋಣ - ಕತ್ತಲು ತಾನಾಗಿಯೇ ಓಡಿ ಹೋಗುತ್ತದೆ.*
**********************************************
ಸಲಹೆ... ಅತೀ ಅಗ್ಗ..* ಒಂದು ಕೇಳಿ.. ಉಚಿತವಾಗಿ ಸಾವಿರ ಸಿಗುತ್ತದೆ.*
ಸಹಾಯ.. ಅತೀ ದುಬಾರಿ.*ಸಾವಿರ ಜನರನ್ನು ಕೇಳಿದರೂ..,*ಒಬ್ಬರು ಮಾಡಿದರೂ ಹೆಚ್ಚು.*
********************************************
ಪ್ರತಿಷ್ಠೆಯೆಂದರೆ ನಮ್ಮ ಕನ್ನಡಕದ ಮೇಲಿನ ಧೂಳಿದ್ದಂತೆ ಒರೆಸಿಕೊಂಡಾಗ ಎದುರುಗಿರುವುದು ಸ್ಪಷ್ಟವಾಗುತ್ತದೆ ಮತ್ತು ತಪ್ಪು ತಿಳುವಳಿಕೆ ದೂರವಾಗುತ್ತದೆ!
******************************************
ಯಾವಾಗ ನಾವು ಬೇರೆಯವರ ಅಪಮಾನ ಮಾಡುವ ಕಾರ್ಯದಲ್ಲಿ ತೊಡಗಿರುತ್ತೇವೋ,*
ಅದೇ ಕ್ಷಣದಲ್ಲಿ ನಮ್ಮ ಸಮ್ಮಾನವನ್ನೂ ಕಳೆಯುತ್ತಿರುತ್ತೇವೆ.*
*****************************************
ಬಹುತೇಕ ಜನರು ದೇವರನ್ನು ಕಲ್ಲಲ್ಲಿ ನೋಡುವರು..*ಹಲವರು ಬೆಳ್ಳಿಯಲ್ಲಿ...* ಕೆಲವರು ಚಿನ್ನದಲ್ಲಿ....*
ಆದರೆ ಆ ದಯಾಮಯನು ಒಲಿಯುವುದು ನಮ್ಮ ಹೃದಯ ಮಂದಿರದಲ್ಲಿ ಪ್ರತಿಷ್ಠಾಪಿಸಿದಾಗ ಮಾತ್ರ.*
*****************************************
ಮನೆಗೆ ಬರುವ ಎಲ್ಲ ಅತಿಥಿಗಳು ಸಂತೋಷ ಕೊಡುತ್ತಾರೆ..* ವ್ಯತ್ಯಾಸವಿಷ್ಟೇ...*
ಕೆಲವರು ಬಂದಾಗ..* ಹೆಚ್ಚಿನವರು ಹೋಗುವಾಗ.*
*******************************************
ನೀವು ಎಚ್ಚರವಾದಾಗ ನಿಮ್ಮನ್ನು ಸಕಾರಾತ್ಮಕತೆಯಿಂದ ತುಂಬಿಕೊಳ್ಳಿ, 
ಮತ್ತು ನಿಮ್ಮ ಜೀವನವು ಸರಿಯಾದ ದಿಕ್ಕಿನಲ್ಲಿ ತಿರುಗುತ್ತದೆ. - 
****************************************
ಜೀವ, ಜೀವನವನ್ನು ಶುರು ಮಾಡಿತು..., ಆದರೆ;*
ಒಂದು ದಿನ ಜೀವ ಹೋಗುತ್ತದೆ, ಆದರೆ ಅದು ಜೀವನವನ್ನು ಕೊಂಡೊಯ್ಯಲಾರದು.*
ನಮ್ಮ ಜೀವನದ ಪ್ರಕಾಶಕರಾಗುವ ಸೌಲಭ್ಯವನ್ನು ಜೀವ ನಮಗೆ ಕೊಡುತ್ತದೆ.....*
ಪ್ರಶ್ನೆ - ಎಷ್ಟು ಜನರು ಇದರ ಸದುಪಯೋಗ ಮಾಡುತ್ತಾರೆ? ಜೀವ ಹೋದ ನಂತರವೂ ಜೀವಿಸುತ್ತಾರೆ?*
***********************************************
ಬಡತನ ಮನುಷ್ಯನಿಗಿರಬೇಕು,*  ಮನಸ್ಸಿಗಿರಬಾರದು.*
ಶ್ರೀಮಂತಿಕೆ ಮನಸ್ಸಿಗಿರಬೇಕು,*  ಮನುಷ್ಯನಿಗಿರಬಾರದು.*
*********************************************
ದಂಡಿಸೋ ಅವಕಾಶವಿದ್ರೂ ದಂಡಿಸದೆ ಇರೋದನ್ನು ಸಹನೆ ಅಂತಾರೆ.*
ಬಿಟ್ಟು ಹೋಗೋದಕ್ಕೆ ಹಲವಾರು ಕಾರಣಗಳಿದ್ರೂ ಜೊತೆಯಾಗಿರುವುದನ್ನು ಪ್ರೀತಿ ಅಂತಾರೆ.*
ತಪ್ಪು ಮಾಡೋದಕ್ಕೆ ಬೇಕಾದಷ್ಟೂ ಮಾರ್ಗವಿದ್ರೂ ಮಾಡದೆ ಇರೋದಕ್ಕೆ ವ್ಯಕ್ತಿತ್ವ ಅಂತಾರೆ.*
*********************************************
ನಿಮ್ಮ ಚಿಂತೆ ನಿಮ್ಮ ಅನಾರೋಗ್ಯವನ್ನು ಸರಿ ಪಡಿಸುವದಾದರೆ ನೀವು ಸದಾ ಚಿಂತಿಸಿ,* 
ನಿಮ್ಮ ಆಯುಷ್ಯವನ್ನು ಚಿಂತೆ ಹೆಚ್ಚಿಸುವುದಾದರೆ ನೀವು ಸದಾ ಚಿಂತಿಸಿ,*
ಸಂತೋಷಗಳಿಗೆ  ಚಿಂತೆಗಳನ್ನು ಬದಲಿಸ ಬಹುದಾದರೆ ಪ್ರತೀ ಕ್ಷಣವೂ ಚಿಂತಿಸಿ.*
ಈಗ' ಸಂತೋಷಿಸಿ - ಚಿಂತೆಗಳನ್ನು 'ನಾಳೆಗೆ' ದೂಡಿ.*
*********************************************
ಜನರಿಗೆ ಅಗತ್ಯವಿದ್ದಾಗ ಅವರಿಗೆ ಸಹಾಯ ಮಾಡಿ, ಮತ್ತು ಅವರು ಬೆಳಿಗ್ಗೆ ಎದ್ದಾಗ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ. - 
********************************************
ನೀವು ಎಚ್ಚರವಾದಾಗ ನಿಮ್ಮನ್ನು ಸಕಾರಾತ್ಮಕತೆಯಿಂದ ತುಂಬಿಕೊಳ್ಳಿ, ಮತ್ತು ನಿಮ್ಮ ಜೀವನವು ಸರಿಯಾದ ದಿಕ್ಕಿನಲ್ಲಿ ತಿರುಗುತ್ತದೆ. 
*********************************************
ತೊಂದರೆ ಬಂದರೆ ತಾಳ್ಮೆಯಿಂದಿರಬೇಕು, ಹಣ ಬಂದಾಗ ಸರಳವಾಗಿರಬೇಕು. ಅಧಿಕಾರ ಸಿಕ್ಕಾಗ ಪ್ರಾಮಾಣಿಕರಾಗಿರಬೇಕು.  ಮತ್ತು ಕೋಪ ಬಂದಾಗ ಶಾಂತರಾಗಿರಬೇಕು. ಇದನ್ನು ಜೀವನದ ನಿರ್ವಹಣೆ ಎಂದು ಕರೆಯಲಾಗುತ್ತದೆ.
**********************************************
ಸಂಬಂಧಗಳು ಶ್ರೀಗಂದದಂತೆ ಇರಬೇಕು...! ಹಲವಾರು ತುಂಡುಗಳಾದರೂ 'ಸುಗಂದ' ಮಾತ್ರ ತುಂಡಾಗದು.
********************************************
ಯಾವುದೇ ಫಲಾಪೇಕ್ಷೆಯಿಲ್ಲದೆ ಎಲ್ಲರಿಗೂ ಒಳ್ಳೆಯದನ್ನು ಬಯಸಿ, ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡಿ, ಏಕೆಂದರೆ ಹೂ ಮಾರುವವರ ಕೈಯಲ್ಲಿ ಯಾವಾಗಲೂ ಹೂವಿನ ಸುವಾಸನೆ ಇರುತ್ತದೆ.
********************************************
ಜೀವನ ಅಂದರೇನೇ ಒಂದು ತರಗತಿಯ ಕೊಠಡಿ ಇದ್ದಂತೆ, ಗಂಟೆ-ಗಂಟೆ ಒಂದು ಹೊಸ ಪಾಠ, ದಿನ-ದಿನಕ್ಕೊಂದು ಹೊಸ ಅನುಭವ.
*******************************************
ನಿಮ್ಮ ಮೇಲೆ ನಂಬಿಕೆಯೊಂದಿಗೆ ಬೆಳಿಗ್ಗೆ ಎದ್ದೇಳಿ, ಮತ್ತು ನಿಮ್ಮ ಎಲ್ಲಾ ಕೆಲಸಗಳು ಸುಲಭವಾಗುತ್ತವೆ. - 
**********************************************
ಮನುಷ್ಯ ಕುಸಿಯುವುದು,* ಬಂದ ಕಷ್ಟಗಳಿಂದಲ್ಲ,* ಕುಸಿಯುತ್ತಾನೆ,* ಅವನ ಭಾವನೆಗಳಿಗೆ ಪೆಟ್ಟು ಬಿದ್ದಾಗ.*
**********************************************
ನಿಮ್ಮ ಸಮಸ್ಯೆಗೊಳೊಂದಿಗೆ ಮಲಗಿಕೊಳ್ಳಿ ಮತ್ತು ಪರಿಹಾರಗಳೊಂದಿಗೆ ತಾಜಾವಾಗಿ ಎಚ್ಚರಗೊಳ್ಳಿ.
***********************************************
ನೀವು ಬೆಳಿಗ್ಗೆ ಹೆಚ್ಚು ಆರಾಮವಾಗಿರುತ್ತೀರಿ ಆದ್ದರಿಂದ ನಿಮ್ಮ ಮನಸ್ಸು ಇನ್ನೂ ಸ್ಪಷ್ಟವಾಗಿರುವಾಗ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಿ.  
**********************************************
ನಮ್ಮ ಸಂಕಟದ ಸಂದರ್ಭದಲ್ಲಿ ನಮ್ಮಲ್ಲಿ ಸಂತಸ ಮೂಡಿಸಿದವರನ್ನು ಯಾವತ್ತೂ ಮರೆಯಬಾರದು. ಬದುಕಿನಲ್ಲಿ ಭರವಸೆ ಮೂಡಿಸಿದವರು ಅವರು.*
ಹಾಗೆಯೇ ನಮ್ಮ ಸಂಕಟದ ಸಂದರ್ಭವನ್ನು ನೋಡಿ ಸಂತಸಪಟ್ಟವರನ್ನು ಕೂಡಾ ಯಾವತ್ತೂ ಮರೆಯಬಾರದು. ಬದುಕಿನಲ್ಲಿ ಛಲ ಮೂಡಿಸಿದವರು ಅವರು.*
**********************************************
 ಗೆಳೆಯನನ್ನು ಉಪ್ಪಿನಂತೆ ಬಳಸಬೇಕು,ಸಕ್ಕರೆಯಂತೆ ಸುರುವಿಕೊಳ್ಳಬಾರದು.
 ಗೆಳೆಯರನ್ನು ಗಳಿಸಿಕೊಳ್ಳುವುದೆಷ್ಟು  ಸುಲಭವೋ, ಉಳಿಸಿಕೊಳ್ಳುವುದು ಅಷ್ಟೇ ಕಷ್ಟ.
************************************************
ಮನುಷ್ಯ ಕುಸಿಯುವುದು,* ಬಂದ ಕಷ್ಟಗಳಿಂದಲ್ಲ,* ಕುಸಿಯುತ್ತಾನೆ, ಅವನ ಭಾವನೆಗಳಿಗೆ ಪೆಟ್ಟು ಬಿದ್ದಾಗ.*
***********************************************
ಮನುಷ್ಯ ಮನೆಮನೆಯಲ್ಲೂ ಜನ್ಮ ತಾಳುತ್ತಾನೆ., ಆದರೆ; ಮನುಷ್ಯತ್ವ...* ಕೆಲವರಲ್ಲಿ ..... ಮಾತ್ರ.*
**********************************************
ಕಷ್ಟ ಎಂಬ ಕತ್ತಲು ಸರಿದು, ಬೆಳಕೆಂಬ ಸುಖವು ಮುಂದೆ ನಿನ್ನ  ಜೀವನದಲ್ಲಿ ಬರುತ್ತದೆ,
ಆತ್ಮವಿಶ್ವಾಸ ಮತ್ತು ಛಲ ನಿನ್ನದಾಗಿರಲಿ 
*********************************************
ನಾಳೆ ಎಂಬುದು ಶತ್ರು, ಇವತ್ತು ಎಂಬುವುದೇ ಸಂಬಂಧಿಕರು,
ಈಗ ಎಂಬುದೇ ಮಿತ್ರ, ಈ ಕ್ಷಣ ಎಂಬುವುದೇ ಜೀವನ..
*******************************************
ಪ್ರೀತಿ ಜಗದ ನಿಯಮ, ಸಾವು ಆ ದೇವರ ನಿಯಮ,
ಸಾವಿಗಾಗಿ ಕಾಯಬಾರದು, ಪ್ರೀತಿಗಾಗಿ ಸಾಯಬಾರದು. 
******************************************
ಸೋಲು ಕನಸಲ್ಲಿ ಇರಲಿ, ಗೆಲುವು ಮನಸಲ್ಲಿ ಇರಲಿ, ನಗು ಜೀವನದಲ್ಲಿ ಸದಾ ಇರಲಿ. 
*******************************************
ಬೇವಿನ ಮರವನ್ನು ಕಂಡೆ, ಆದರೆ ಎಲ್ಲಿಯೂ ಬೆಲ್ಲದ ಮರವೇ ಇಲ್ಲ...!! 
ಈಗ ಜೀವನದ ಕಹಿ-ಸಿಹಿಗಳಿಗೆ ಸ್ಪಷ್ಟತೆ ಸಿಕ್ಕಿತು... !! 
ಬೇವು ಸಹಜ, ಆದರೆ ಬೆಲ್ಲ ತಯಾರಿಸಬೇಕು...!! 
ಹಾಗೆಯೇ ನಮ್ಮ ಜೀವನದಲ್ಲಿ ಕಷ್ಟ(ಕಹಿ) ಸಹಜ; ಆದರೆ ಪ್ರತಿಯೊಬ್ಬರೂ ಜೀವನದಲ್ಲಿ ಕಷ್ಟ ಪಟ್ಟು ಸುಖವನ್ನು (ಸಿಹಿ) ಪಡೆಯಬೇಕು. ಅದೇ ಜೀವನ...!! 
*******************************************
ಜ್ಞಾನ ಮತ್ತು ಸಂಸ್ಕಾರ ಜೀವನದ ಶಕ್ತಿ.  ಜ್ಞಾನ ನಿಮ್ಮನ್ನು ತಲೆ ತಗ್ಗಿಸುವಂತೆ ಮಾಡುವುದಿಲ್ಲ.
ಸಂಸ್ಕಾರವು ಎಂದಿಗೂ ನಿಮ್ಮನ್ನು ಬೀಳಲು ಬಿಡುವುದಿಲ್ಲ.
******************************************
ನಮ್ಮ ಬಾಯಿಗೆ ಹೋಗುವ ಆಹಾರ ಎಷ್ಟು ಶುದ್ಧವಾಗಿರಬೇಕೋ 
ಹಾಗೆಯೇ ಬಾಯಿಂದ ಹೊರಬರುವ ಮಾತುಗಳೂ ಅಷ್ಟೇ ಶುದ್ಧವಾಗಿರಬೇಕು. 
ಆಗ ಸಂಬಂಧಗಳು ಮತ್ತು ಸ್ನೇಹ ಎರಡೂ ಗಟ್ಟಿಯಾಗಿರುತ್ತವೆ  ಹಾಗೂ ಬೆಳೆಯುತ್ತವೆ. 
******************************************
ಒಳ್ಳೆಯ ಸಂಬಂಧವು ಒಂದು ಪುಸ್ತಕ ವಿದ್ದಂತೆ. ಪುಸ್ತಕ ಎಷ್ಟೇ ಹಳೆಯದಾದರೂ ಅದರಲ್ಲಿನ ಪದಗಳು ಬದಲಾಗುವುದಿಲ್ಲ. 
******************************************
ಸಂಬಂಧಗಳಲ್ಲಿ ಸುಂದರ ಹಾಗೂ ಶೃೇಷ್ಟ ಸಂಬಂಧ ವೆಂದರೆ.. ಅದು ಕಣ್ಣುಗಳ ಸಂಬಂಧ. ಏಕೆಂದರೆ.. ತೆರೆದರೆ ಜೊತೆಯಾಗಿ ತೆರೆದುಕೊಳ್ಳುತ್ತವೆ, ಮುಚ್ಚಿದರೆ ಜೊತೆಯಾಗಿ ಮುಚ್ಚಿಕೊಳ್ಳುತ್ತವೆ, ಅತ್ತರೂ ಎರಡೂ ಜತೆಯಾಗಿ ಅಳುತ್ತವೆ, ಅದೂ ಕೂಡಾ ಜೀವನಪೂರ್ತಿ ಒಂದನ್ನೊಂದು  ನೋಡದೆ... 
*******************************************
ಬಯಕೆಗಳು ಕಡಿಮೆ ಇದ್ದಾಗ ಕಲ್ಲು ಬಂಡೆಯ ಮೇಲೆ ಮಲಗಿ ದರೂ ಹಿತವಾದ ನಿದ್ರೆ ಬರುತ್ತದೆ. ಬಯಕೆಗಳು ಹೆಚ್ಚಾದಾಗ ನಯವಾದ ಹಾಸಿಗೆ ಕೂಡ ಚುಚ್ಚುತ್ತದೆ. 
******************************************
ಹೂಗಳಿಂದ ತುಂಬಿದ ತೋಟ ಎಷ್ಟು ಸುಂದರವಾಗಿರುತ್ತೋ, ಒಳ್ಳೆಯ ಆಲೋಚನೆಗಳಿಂದ ತುಂಬಿದ ಮನಸ್ಸು ಸಹ ಅಷ್ಟೇ ಸುಂದರವಾಗಿರುತ್ತೆ..
******************************************
ಸುಮನೋಹರದ ಸುಪ್ರಭಾತವು ಮೂಡುತಿರುವುದು ಪ್ರಕೃತಿಯ ಮಡಿಲಲ್ಲಿ, ನಿಮ್ಮಲ್ಲಿ ಮೂಡಿಸಲಿ ಸುಭಿಕ್ಷೆಯನ್ನು.
******************************************
ಸುಲಭದಲ್ಲಿ ಸುಖ ದಯಪಾಲಿಸು ಎಂದು ಬೇಡಕೊಳ್ಳುವುದಕ್ಕಿಂತ  ಕಠಿಣ ಪರಿಸ್ಥಿತಿಗಳನ್ನು ಎದುರಿಸುವ ಶಕ್ತಿ ಕೊಡು ಎಂದು ಪ್ರಾರ್ಥಿಸೋಣ. 
*****************************************
ನಿನ್ನ ಬಳಿ ಇರುವುದನ್ನು ನೀನು ಗಮನಿಸಿದರೆ ನೀನು ಇವರೆಲ್ಲರಿಗಿಂತಲೂ ಸಿರಿವಂತ... ಇಲ್ಲದಿರುವುದನ್ನು ಕೆದಕುತ್ತಾ ಕುಳಿತರೆ ನೀನು ಇವರೆಲ್ಲರಿಗಿಂತಲೂ ಬಡವ.... ಇದು ಬದುಕುವ ದಾರಿ... 
******************************************
ಸಂತೋಷ, ನಂಬಿಕೆ ಎನ್ನುವವು ಮಾರಾಟಕ್ಕೆ ದೊರಕುವುದಿಲ್ಲ. ಸಂತೋಷವನ್ನು ಮನುಷ್ಯರ ಬಳಿ ಹಂಚಿಕೊಳ್ಳಬೇಕು, ನಂಬಿಕೆಯನ್ನು ಮನಸ್ಸಿನಿಂದ ಹಂಚಿಕೊಳ್ಳಬೇಕು.
*******************************************
ಪರರನ್ನು  ನಿಂದಿಸುತ್ತಾ ಪರಮಪಾಪಿ ಆಗಬಾರದು... ಪರರಿಗೆ ಉಪಕಾರ ಮಾಡುತ್ತಾ ಪರಮಾತ್ನಿನಿಗೆ ಪ್ರೀತಿ ಪಾತ್ರರಾಗಿ. 
******************************************
ಮನುಷ್ಯ ಯಾವಾಗ ತನ್ನ ದೌರ್ಬಲ್ಯಗಳಿಗೆ ಸಮರ್ಥನೆಗಳನ್ನು ಹುಡುಕುವದನ್ನು ಬಿಟ್ಟು ದೌರ್ಬಲ್ಯಗಳ ವಿರುದ್ಧವಾಗಿ ಆಲೋಚಿಸಲು ತೊಡಗುತ್ತಾನೆಯೋ ಅಂದಿನಿಂದ ಉತ್ತಮನಾಗುತ್ತಾ ಹೋಗುತ್ತಾನೆ. 
******************************************
ಸಾಧ್ಯವಾಗುವದನ್ನು ಮಾಡಲು ಶಕ್ತಿ ಸಾಕು. ಅಸಾಧ್ಯವಾದುದನ್ನು ಮಾಡಲು ವಿಶ್ವಾಸ ಬೇಕು. ಶಕ್ತಿ ವಿಶ್ವಾಸ ಎರಡೂ ಕೂಡಿದರೆ ಎಲ್ಲವೂ ಸಾಧ್ಯ. 
******************************************
ದಾರಿಯಲ್ಲಿ ಬಿದ್ದ ಕಲ್ಲಿನ್ನು  ನೋಡಿ ದಾಟಿ ಹೋಗುವವನು ಬುದ್ದಿವಂತ... 
ಬೇರೆಯವರು ಬೀಳದಂತೆ ಅದನ್ನು ಪಕ್ಕಕ್ಕೆ ಸರಿಸಿ ಮುಂದೆ ಹೋಗುವವನು ಹೃದಯವಂತ...!!
******************************************
ಯಾರೋ ಕೈ ಮುಗಿದ ಮಾತ್ರಕ್ಕೆ ನಾವು ದೊಡ್ಡ ವರೆಂದು ಭಾವಿಸುವುದು ದಡ್ಡತನ. ಅದು ಕೈಮುಗಿದವರ ದೊಡ್ಡತನ. 
******************************************
ಗೆದ್ದವರು ಸಂತೋಷದಿಂದ ಇರುತ್ತಾರೆ, ಸೋತವರು ಯೋಚಿಸುತ್ತ ಇರುತ್ತಾರೆ, ಸೋಲು ಗೆಲುವು ಶಾಶ್ವತ ಅಲ್ಲ ಎಂದು ತಿಳಿದವರು ಪ್ರತಿದಿನ ಸಂತೋಷದಿಂದ ಇರುತ್ತಾರೆ.
*****************************************
ನಮಗೆ ಜಗತ್ತು ಅನಿವಾರ್ಯವೇ ಹೊರತು, ಜಗತ್ತಿಗೆ ನಾವು ಅನಿವಾರ್ಯವಲ್ಲ ಎಂದು ಅರಿತ ಕ್ಷಣ, ಮನುಷ್ಯನ ಅಹಂಕಾರ ಕಡಿಮೆ ಯಾಗುತ್ತದೆ. ಸರ್ವೇ ಜನ ಸುಖಿನೋ ಭವಂತು. 
**************************************
ಖುಷಿಯಿಂದ ಹೋರಾಡುತ್ತಿರುವ ಗಾಳಿಪಟದ ನಿಯಂತ್ರಣ ನೆಲದಲ್ಲಿರುವ ಸೂತ್ರದಲ್ಲಿದೆ. ಎತ್ತರಕ್ಕೇರಿದರೂ ನೆಲದ ನಂಟು ಮರೆಯಬಾರದು. 
***************************************
ಮಾತಲ್ಲೇ ಮನೆ ಕಟ್ಟುವವರ ಬಳಿ ಕಿವುಡನಾಗಿರು, ನಿನಗೆ ಬೆಲೆ ಕೊಡದಿರುವವರ ಬಳಿ ಮೂಖನಾಗಿರು, ಮಮತೆ ಇಲ್ಲದವರ ಬಳಿ ಅನಾಥನಾಗಿರು, ಪ್ರೀತಿಯಿಂದ ಇರುವವರ ಬಳಿ ಜೋಡಿ ಜೋಡಿಯಾಗಿರು, ಕಷ್ಟಕ್ಕಾಗುವವರ ಬಳಿ ಎಂದೆಂದಿಗೂ ನೀ ಋಣಿಯಾಗಿರು. 
***************************************
ಜೀವನವಿರುವುದು ಅಲ್ಪ ಕಾಲ. ಆದ್ದರಿಂದ ನಗು ಪ್ರೀತಿ ಮಮತೆ ಹೃದಯವಂತಿಕೆ ತುಂಬಿದ ಜನರ ಬಳಿ ಸಮಯವನ್ನು ಕರೆಯಿರಿ. 
**************************************
ಮನುಷ್ಯನಾಗಿ ಹುಟ್ಟಿದ ಮೇಲೆ ಹೊಗಳಿಕೆ ತೆಗಳಿಕೆ, ಮಾನ ಅವಮಾನ, ಲಾಭ ನಷ್ಟ, ಸೋಲು ಗೆಲುವು ಎಲ್ಲಾ ಸಹಜ. ಅವುಗಳಿಗೆ ಅಂಜದೆ ಬದಕಿ ತೋರಿಸುವುದೇ ಜೀವನ. 
***************************************
ಗುಣದಿಂದ ಗುಣಿಸಿದರೆ ಗುಣವಂತ, ಭಾವನೆಗಳಿಂದ ಭಾಗಿಸಿದರೆ ಭಾಗ್ಯವಂತ, ಹಣದಿಂದ ಕೂಡಿಸಿದರೆ ಸಿರಿವಂತ ಇದ್ದದ್ದನ್ನು ಕಳೆದರೆ ಸಾಲವಂತ ಇವರೆಲ್ಲ ರನ್ನೂ ಗುಣಿಸಿ ಭಾಗಿಸಿ ಕೂಡಿಸಿ ಕಳೆಯುವವನು ಭಗವಂತ... 
****************************************
ಪಡೆದು ಕೊಳ್ಳುವ ದಕ್ಕಿಂತ ಉಳಿಸಿ ಕೊಳ್ಳುವುದು ಮುಖ್ಯ. ಹುಡುಕುವ ಪದಕ್ಕಿಂತ ಸಿಕ್ಕಿರುವುದನ್ನು ಕಳೆದು ಹೋಗದಂತೆ ಕಾಪಾಡಿಕೊಳ್ಳುವುದು ಮುಖ್ಯ, ಅದು ವ್ಯಕ್ತಿಗಾದರೂ ವಸ್ತು ವಾದರೂ... 
*****************************************
ಬದುಕಲು ಇರಬೇಕು ಹುಮ್ಮಸ್ಸು, ಆವಾಗಲೇ ಸಿಗುತ್ತದೆ ಯಶಸ್ಸು ಇಳಿವಯಸ್ಸಿನಲ್ಲಿ. ಕಳೆದುಕೊಳ್ಳಬೇಡಿ ಉತ್ಸಾಹ, ಆವಾಗಲೇ ಬದುಕಲು ಸಿಗುವುದು ಪ್ರೋತ್ಸಾಹ.
***************************************
ಅದ್ಬುತವಾದ ಬದುಕು ಕಟ್ಟಿಕೊಳ್ಳಲು ಒಂದು ಕಡೆ ಕಷ್ಟಗಳು ಇರಬೇಕು, ಇನ್ನೊಂದು ಕಡೆ ನಂಬಿಕೆಗಳು ಇರಬೇಕು. ಕಷ್ಟಗಳು ಪಾಠ ಕಲಿಸಿದರೆ ನಂಬಿಕೆಗಳು ಶಕ್ತಿ ತುಂಬುತ್ತವೆ. 
**************************************
ಕೆಟ್ಟವರು ಒಳ್ಳೆಯ ವರಂತೆ ನಟಿಸಬಹುದು, ಆದರೆ ಒಳ್ಳೆಯವರು ಕೆಟ್ಟವರಂತೆ ಅಭಿನಯಿಸಲಾಗುವುದಿಲ್ಲ. ಯಾಕಂದರೆ ಅವರಿಗೆ ನಟಿಸಲು ಬರುವುದಿಲ್ಲ ಮತ್ತು ಅದಕ್ಕೆ ಅವರ ಆತ್ಮ ಸಾಕ್ಷಿಯೂ ಒಪ್ಪುವುದಿಲ್ಲ! 
**************************************



ಕನ್ನಡ ರಾಜ್ಯೋತ್ಸವ 2022 - ಶಿವರಾಮ ಕಾರಂತ ವೇದಿಕೆ

 ಭಾನುವಾರ , 20 ನವಂಬರ 2022 

ಗ್ರಂಥಾಲಯ, ತರಳಬಾಳು ಕೇಂದ್ರ, ಅರ್.ಟಿ. ನಗರ, ಬೆಂಗಳೂರು 

ಶಿವರಾಮ ಕಾರಂತ ವೇದಿಕೆಯ 2022ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.


 

ಕಾರ್ಯಕ್ರಮವು ಸಂಜೆ 4 ಗಂಟೆಗೆ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.

"ಬಂದಿದೆ ಕನ್ನಡ ರಾಜ್ಯೋತ್ಸವ" - ಪ್ರಾರ್ಥನೆ 



ಎಸ್. ಷಡಕ್ಷರಿ 

ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಅವರು ನೆರೆದ ಸಭಿಕರನ್ನು ಆಹ್ವಾನಿಸಿ, ಮುಖ್ಯ ಅತಿಥಿ ಶ್ರೀ ಎಸ್. ಷಡಕ್ಷರಿ ಅವರನ್ನು ವೇದಿಕೆಗೆ ಬರಮಾಡಿಕೊಂಡರು .




ವೇದಿಕೆಯ ಉಪಾಧ್ಯಕ್ಷ ಶ್ರೀ ವೀರಶೇಖರ ಸ್ವಾಮಿಯವರು ಮುಖ್ಯ ಅತಿಥಿಯನ್ನು ಪರಿಚಯ ಮಾಡಿ ಕನ್ನಡ ರಾಜ್ಯೋತ್ಸವದ ಬಗ್ಗೆ ಕೆಲ ಕಾಲ ಮಾತನಾಡಿದರು.

ದೀಪಾ ಫಡ್ಕೆ 


ಸಾಹಿತಿ, ಚಿಂತಕ,  ಉದ್ಯಮಿ ಶ್ರೀ ಎಸ್. ಷಡಕ್ಷರಿ ಯವರು "ಕ್ಷಣ ಹೊತ್ತು, ನುಡಿ ಮುತ್ತು - ಕನ್ನಡ ಮಾತು" ವಿಷಯವಾಗಿ ಹಗುರವಾದ ಮಾತುಗಳಿಂದ, ಸಭಿಕರನ್ನು ಒಂದು ಗಂಟೆಯ ಕಾಲ ಮನರಂಜಿಸಿದರು.


"ಹಚ್ಚೇವು ಕನ್ನಡ ದೀಪ" - ಹಾಡನ್ನು ನಳಿನಿ ಸೋಮಯಾಜಿ, ರಾಧಮಣಿ ಮತ್ತು ಸುಜಾತ ರಾಮಸ್ವಾಮಿ     ಅವರು ಮಧುರವಾಗಿ ಹಾಡಿದರು.


ವೇದಿಕೆಯ ಅಧ್ಹ್ಯಕ್ಷೆ ಶ್ರೀಮತಿ ದೀಪಾ ಫಡ್ಕೆ ಒಂದೆರಡು ಮಾತುಗಳನ್ನು ಆಡಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

ಮುಖ್ಯ ಅತಿಥಿಗಳಿಗೆ ಶಾಲು, ಹಾರ ಮತ್ತು ಪುಸ್ತಕ ಉಡುಗೊರೆಯಾಗಿ ಕೊಟ್ಟು ಸಮ್ಮಾನಿಸಲಾಯಿತು.

ಈ ಕೆಳಗಿನ ಫೇಸ್ ಬುಕ್ ಲೈವ್ ನಿಂದ ಸಂಪೂರ್ಣ ಕಾರ್ಯಕ್ರಮವನ್ನು ವೀಕ್ಷಿಸಬಹುದು.

ಶ್ರಮ ವಹಿಸಿದ ಶ್ರೀ ಸುಧೀಂದ್ರ ಅವರಿಗೆ ಧನ್ಯವಾದಗಳು.

https://m.facebook.com/story.php?story_fbid=3315849428631180&id=100085636043383&mibextid=Nif5oz

ಕಾರ್ಯಕ್ರಮದ ನಿರೂಪಣೆಯನ್ನು ಶಶಿಕಲಾ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಬರೆದಿರುವುದು 21/11/2022 


Saturday, November 19, 2022

HAPPY BIRTHDAY PARTY - AMEYA

 Saturday, 19th November 2022

Priya Darshini Grand Hotel, Basaveshwaranagara, Bengaluru.

Birthdays are special and so are you... our little Ameya turned  so I would like to invite you to Ameya's birthday party. Kindly grace us with your presence on Saturday 19th November 11am onwards

Thank you Kishore. Shashi, Kishore's wife is daughter of Radhakka, is my doddappa Shakaranarayana Somayaji's daughter. Radhakka's husband was I P S Nagappayya, was a strongman in Araknut association in Shimoga for many years.




Priyadarshini Grand is realy a grand hotel, with beautiful ambiance, nice decoration.


Kishore Shashi son Pradyumna and D-I-L Sindhura's son is one year. It was a grand celebration.




Cake was cut in the  presence of large number of relatives, friends and well wishers.



Then of course, social networking catching up like "Long time No see"

Lunch was served in the second floor on banana leaf with servers in decent uniform.


Grand lunch was with sweets like Mysuru Paak, Jamoonu, Payasa along with other items.



After lunch, it was time to say Bye Bye and we left.

God Bless AMEYA, his parents Padyumna/Sindhura and Grand parents Kishore/Shahsi.

Posted Sunday, 20th November 2022