Showing posts with label KANNADA DRAMA. Show all posts
Showing posts with label KANNADA DRAMA. Show all posts

Saturday, April 4, 2026

#36 SATHI SAVITRI NIVASA - KANNADA DRAMA

 Saturday, April 4, 2026

Ranga Shankara, J P Nagara, Bengaluru



#36 Sathi Savitri, Kannada Play is hilarious, good punching dialogues and acting is written and directed by Karthik Hebbar.


His recent play 36 Sati Savitri Nivasa happening today at 7:30 p.m. in Ranga Shankara, J.P. Nagar is a lighthearted feminist story. The play chronicles the lives of three middle-class women as they go through important milestones in life. What happens to the lives of women leading a predictable life when it is turned upside down due to an unusual candidate taking residency in their middle-class apartment? This is a play about sisterhood, old age, loneliness and friendship. It is also an ode to all the chaos that adds beauty to the lives of these women, including television serials and cinema. There is music, some dancing and loads of madness in this tribute to women and their strength in this patriarchal society that we dwell in.  







The play enacted by renowed theatre artists Dr Seetha Kote (Sharadamma), Deepika Aaradhya (Jayamma)Yashaswini Chennaih (Saroja) Divyashree and Vishak Bharadwaj.



The housefull Ranga Shankara Auditorium, people mostly senior citizens were bursting with laughter for dialogues and acting of artists. The songs and dances by girls/boys were very entertaining. The mimic of TV ads were very good.


It was after a long time, we were going to Ranga Shankara for watching a play and it was very refreshing. Returned home after tiffin at Rajatadri Resturant by Wuber Taxi.


Posted 5/4/2026










Wednesday, December 31, 2025

"ಹಕ್ಕಿ ಮತ್ತು ಅವಳು"- ನಾಟಕ SANGEETHA MAALIKE -2025 :

 ಶನಿವಾರ, ದಶಂಬರ 27, 2025 

ಬಿರ್ತಿ ಮನೆ, ಸಾಲಿಕೇರಿ , ಬ್ರಹ್ಮಾವರ  

ಹಕ್ಕಿ ಮತ್ತು ಅವಳು 


ಕನ್ನದಲ್ಲಿಯ ಮತ್ತು ಕನ್ನಡಕ್ಕೆ ಒದಗಿ ಬಂದ ಕವನ, ಕಥೆ, ಪ್ರಬಂಧಗಳನ್ನು ಆಧರಿಸಿದ ಕಾವ್ಯ ಪ್ರಯೋಗವಿದು. ಕಾವ್ಯ ಪ್ರಯೋಗದ ರಂಗದಾಟ , ಹೆಣ್ಣಿನ ಬಿಡುಗಡೆಯ ಹಾಡುಗಳನ್ನು ಇಲ್ಲಿ ಅಭಿನಯಿಸಲಾಗುತ್ತಿದೆ. 



ಕಾವ್ಯ ಹಂದೆ ಈ ಕಾವ್ಯಭಿನಯವನ್ನು ಅದ್ಭುತವಾಗಿ ಪ್ರದರ್ಶಿಸಿದ್ದಾಳೆ.   


ದೇಹ, ದೇಶಗಳನ್ನು ಬಂಧಿಸಲ್ಪಟ್ಟ "ಅವಳು", ತನ್ನ ಬಿಡುಗಡೆಯನ್ನು ಕಾಣಸುವ ಆಟವಿದು. ಸ್ವಾತಂತ್ರ್ಯದ ಆಟ,  ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದೆಂದರೆ ಅದು ನೋವಿನಿಂದ ಬಿಡುಗಡೆ ಪಡೆಯುವ ಹಾದಿಯೂ ಹೌದು. ತಿಳಿಯುವ ಸತ್ಯ ನೋಯಿಸ ಬಲ್ಲುದು, ಆದರೆ ತಿಳಿಯದೇ ಹೋಗುವ ಸತ್ಯ  ಕೊಲ್ಲಬಹುದು. 


ಅರಿವಿನಿಂದಲೇ ನೋವ ಬಗೆಯ ಆಸಕ್ತಿಯಲ್ಲಿ ಇದು ರೂಪು ತಳೆದಿದೆ. ನಮಗೆ ನಂಬಿಕೆ ಇದೆ.  "ಒಂದಲ್ಲ ಒಂದು ಮಿದು ಜಾಗವುಂಟು ನಮ್ಮೆಲರಲ್ಲಿ" - ಈ ನಂಬಿಕೆಯೇ ಇಂತಹ ಪ್ರಯೋಗಕ್ಕೆ  ಇಂಬು ನೀಡುವದು. 





ಬಂಧನಗಳ ಮೂಲದ ಹುಡುಕಾಟದಲ್ಲಿ ಈ ನೆಲದಗಳ, ಜಲದಗಳ , ಮುಗಿಲಗಲ ಹರವಿಕೊಂಡ ಬಿಡುಗಡೆಯ ನುಡಿಗಳನ್ನು ಆಯ್ದು ಪೋಣಿಸಿ ಕೊಂಡಿರುವೆವಿಲ್ಲಿ , ಚಾವೊಸನ ಪತಂಗ ಪರಿಣಾಮ ಸಿದ್ಧಾಂತ ಹೇಳುವಂತೆ "ಎಲ್ಲೋ ಬಡಿಯುವ ಚಿಟ್ಟೆಯ ರೆಕ್ಕೆಗಳು ಮತ್ತೆಲ್ಲೋ  ಬಿರುಗಾಳಿ ಎಬ್ಬಿಸಬಹುದು" ಎಂಬ ನಂಬಿಕೆಯಿಂದ . 
ಮಿತ್ರಾ ವೆಂಕಟರಾಜು, ವೈದೇಹಿ, ಪ್ರತಿಭಾ ನಂದ ಕುಮಾರ,ಚಿಮ ಮಾಂಡ , ಮಾಯಾ ಎಂಜಎಲೊ, ಲಾಟೇಶ,  ಅಭಿಲಾಶ ಎಸ್. ಅವರ ಬರಹಗಳನ್ನು ಇಲ್ಲಿ ಪಠ್ಯ ವಾಗಿ ಬಲಸಿಕೊಳ್ಳಲಾಗಿದೆ,


ಭಿನ್ನ ಭಾಷೆಯ ಇಲ್ಲಿಯ ಕೆಲವು ಪಠ್ಯ ಗಳನ್ನು  ಕನ್ನಡದ ವಿವೇಕಕ್ಕೆ ಒದಗಿಸಿ ಕೊಟ್ಟವರು ಜ. ನಾ. ತೇಜಶ್ರೀ, ಸುಧಾ ಅಡುಕಳ, ಕಾವ್ಯ ಶ್ರೀ ಎಚ್., ಇವರೆಲ್ಲಾರಿಗೂ ನಾವು ಋಣಿಗಳು.    


ಕಾವ್ಯಾಳ ಅಭಿನಯ, ನೃತ್ಯ, ಸಂಭಾಷಣೆ, ಹಾಗೂ ಮುಖಭಾವ ಎಲ್ಲವೂ ತುಂಬಾ ಚಂದ. 
ರಂಗ ವಿನ್ಯಾಸ, ಬೆಳಕು, ಸಂಗೀತ ಎಲ್ಲವೂ ಆಕರ್ಷಕವಾಗಿತ್ತು. 








Abhilasha S in her Faceook post : 3/1/2026

ಡಿಸೆಂಬರ್ 27ರ ನಮ್ಮ‌ ಸಂಗೀತ ಸಂಜೆಯ ಇನ್ನೊಂದು ಮುಖ್ಯ ಕಾರ್ಯಕ್ರಮ ಸುವಿಕಾ ತಂಡದ ಕಾವ್ಯ ಹಂದೆ ಯವರ "ಹಕ್ಕಿ ಮತ್ತು ಅವಳು" ಏಕವ್ಯಕ್ತಿ ನಾಟಕ ಪ್ರದರ್ಶನ.
ಮಿತ್ರಾ ವೆಂಕಟ್ರಾಜ್ ಅವರ ಹಕ್ಕಿ ಮತ್ತು ಅವಳು ಕಥೆಯ ಜೊತೆ ಮಹಿಳಾ ಸಂವೇದೀ ಕವನಗಳನ್ನು ರಂಗ ಪ್ರಯೋಗವಾಗಿಸಿದ್ದು ಇಲ್ಲಿನ ವಿಶೇಷ. ಚಿಮಮಾಂಡ, ವೈದೇಹಿ, ಪ್ರತಿಭಾ ನಂದಕುಮಾರ್, ಕೆ.ವಿ.ತಿರುಮಲೇಶ್, ಅಭಿಲಾಷಾ, ಸುಧಾ ಆಡುಕಳ‌- ಹೀಗೆ ಅನೇಕರು "ಕನ್ನಡಿಯೊಳಗೆ ಅಡಗಿರುವ ರಾಜಕುಮಾರಿಯರು" ಕನ್ನಡಿಯೊಡೆದು ಹೊರಬಂದು ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳುವ ಬಗೆಯನ್ನು ಬರಹವಾಗಿಸಿದರೆ ಆ ಬರಹಗಳನ್ನು ನಟಿ ಕಾವ್ಯ ಸಶಕ್ತವಾಗಿ ರಂಗ ಕಾವ್ಯವಾಗಿಸಿದ್ದಳು. ನೈಜೀರಿಯಾದ ಚಿಮಮಾಂಡ ತನ್ನ ಸ್ನೇಹಿತೆಗೆ ಅವಳ ಮಗಳನ್ನು ಬೆಳಸುವ ಬಗೆಗೆ ನೀಡುವ ಸಲಹೆಯೊಂದಿಗೆ ಬಹಳ ಸರಳವಾಗಿ ಪ್ರಾರಂಭವಾಗುವ ನಾಟಕ ಮುಂದೆ ಭಾವ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತ ಸಾಗುತ್ತದೆ. ತನ್ನ ಮನೆಯವರಿಂದಲೇ ತನಗಾಗುತ್ತಿರುವ ಲೈಂಗಿಕ ಶೋಷಣೆಯನ್ನು ವಿವರಿಸುವ ಪುಟ್ಟ ಬಾಲಕಿಯಾಗಿ " ನಾನೇಕೆ ಬರೆಯುತ್ತೇನೆ" ಎಂದು ಕಾವ್ಯ ಮಗ್ಧವಾಗಿ ಅಭಿನಯಿಸುತ್ತದ್ದರೆ , ಆ ತೀಕ್ಷ್ಣತೆ ನೋಡುಗರನ್ನು ಬೆಚ್ಚಿ ಬೀಳಿಸುವಂತಿತ್ತು. ಗಟ್ಟಿಗಿತ್ತಿ ಸೀತೆ, ಸುಕೋಮಲೆಯಾಗುತ್ತ ಅಸಹಾಯಕಳಾಗಿ ಪರಿತಪಿಸುತ್ತಾ ಮತ್ತೆ ಅಶೋಕ ವನವೇ ಆದ ಕತೆಯನ್ನು ಅಪೂರ್ವವಾದ ನೃತ್ಯದ ನಡೆಯ ಮೂಲಕ ಪ್ರಸ್ತುತ ಪಡಿಸಿ ಈ ಭಾಗವನ್ನು ನಟಿ ದೃಶ್ಯಕಾವ್ಯವಾಗಿಸಿದಳು. ಅಡುಗೆ ಮನೆ ಹುಡುಗಿಯರು ಹೊರದಾರಿಗಾಗಿ ಹಂಬಲಿಸುವ ಪರಿ ನಗೆಯುಕ್ಕಿಸುತ್ತಲೇ ಹಸಿ ವಾಸ್ತವವನ್ನು ಬಿಚ್ಚಿಟ್ಡಿತ್ತು. ದೇವೀ ಮಹಾತ್ಮೆ ಯ ದೇವಿ " ಪ್ರತಿ ನಿತ್ಯ ಹೆಣ್ಣುಗಳ ಮುಡಿಗೆ ಕೈ ಹಾಕುವ ಭಂಡರಿಗೆ" ಮಾತಿನಿಂದಲೇ ಚಾಟಿ ನೀಡಿದರೆ, "ಹಕ್ಕಿ ಮತ್ತು ಅವಳು" ಕತೆಯ ಆರತಿ ಹಕ್ಕಿಯ ಮಾತು ಕೇಳಿಸಿಕೊಳ್ಳುತ್ತಲೇ ತನಗೂ ರೆಕ್ಕೆ ಮೂಡಿಸಿಕೊಳ್ಳುತ್ತಾಳೆ. ಆರತಿಯ ಮನದಲ್ಲಾಗುವ ತಲ್ಲಣಗಳನ್ನು ಕಾವ್ಯ ಚೌಕಟ್ಟಿನೊಳಗೆ ಮುಖವಿಟ್ಟು ಅಭಿನಯಿಸಿದ್ದು, ಭಾವ ನಿವೇದಿಸಿಕೊಂಡದ್ದು ನೋಡುಗರ ಹೃದಯವನ್ನೇ ತಲ್ಲಣಗೊಳಿಸಿತ್ತು. ಈ ಭಾಗದಲ್ಲಿ ನಟಿಯ ಸೂಕ್ಷ್ಮ ಅಭಿನಯ ಉತ್ತುಂಗಕ್ಕೇರಿತ್ತು. ನಂತರದ ದಾಕ್ಷಾಯಿಣಿ ಪ್ರಸಂಗ ಯಕ್ಷಗಾನೀಯ ಮಾದರಿಯಲ್ಲಿದ್ದು ನಟಿಯ ಕುಣಿತ, ಅಬ್ಬರದ ಚಲನೆ ಇವೆಲ್ಲವೂ ಭಾವದ ಇನ್ನೊಂದು ಮಜಲನ್ನು ಸಾಕ್ಷಾತ್ಕರಿಸಿದವು.ಕೊನೆಯಲ್ಲಿ ಅರ್ಧನಾರೀಶ್ವರನ ಕಲ್ಪನೆಯೊಂದಿಗೆ ಮುಕ್ತಾಯವಾದ ಈ ರಂಗ ಪ್ರಯೋಗ ತಾತ್ವಿಕ ಕೊನೆ ಮುಟ್ಟಿತ್ತು.
ಇಂತದ್ದೊಂದು ಅಪೂರ್ವ ರಂಗ ಪ್ರಯೋಗವನ್ನು ವಿನ್ಯಾಸ ಮಾಡಿ ನಿರ್ದೇಶಿಸಿದವರು ಖ್ಯಾತ ರಂಗ ನಿರ್ದೇಶಕ ಡಾ.ಶ್ರೀಪಾದ ಭಟ್. ಆ ದಿನ ಅವರೂ ನಮ್ಮ‌ ಜೊತೆ ಇದ್ದದ್ದು ನಮಗೆ ಇನ್ನಷ್ಡು ಸಂತಸ ತಂದಿತ್ತು.
ಬೆಳಕನ್ನು ನೀಡಿದವರು ರೋಹಿತ್ ಬೈಕಾಡಿ , ಸಂಗೀತದಲ್ಲಿ ಸಹಕರಿಸಿದವರು ವಿನೀತಾ ಹಂದೆ, ಹಾಗಯೇ ಸಂಯೋಜನೆಯಲ್ಲಿ ಜತೆಯಾದವರು Sujayeendra Hande .
Kavya Hande ತನ್ನ ಸ್ನಾತಕೋತ್ತರ ಪದವಿ ಮುಗಿಸಿ ಈಗ ಬೆಂಗಳೂರಿನ " ಪ್ರಯೋಗ" ದಲ್ಲಿ ಕೆಲಸ ಮಾಡುತ್ತಿರುವ ಯುವ ಕಲಾವಿದೆ. ಈಗಾಗಲೇ ಈ ರಂಗ ಪ್ರಯೋಗವನ್ನು ಅನೇಕ ಕಡೆ ಪ್ರದರ್ಶನ ನೀಡಿದ್ದಲ್ಲದೇ " ಶಿಕ್ಷಣದಲ್ಲಿ ರಂಗಭೂಮಿ " ಎಂಬ ಶಿಕ್ಷಕರ ಕಾರ್ಯಾಗಾರದಲ್ಲಿಯೂ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾಳೆ. ಈ ಪ್ರಯೋಗ ಇನ್ನಷ್ಟು ಪ್ರದರ್ಶನ ಕಂಡು ಇನ್ನಷ್ಟು ಮನಸ್ಸುಗಳ ಅರಳುವಿಕೆಗೆ ಕಾರಣವಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ





ಅಭಿನಂದನೆಗಳು.. 

Posted  31/12/2025 













Friday, September 19, 2025

ಗೋಕುಲ ನಿರ್ಗಮನ - ಕನ್ನಡ ನಾಟಕ

 ಶುಕ್ರವಾರ, ಸೆಪ್ಟೆಂಬರ 19, 2025 

ರವೀಂದ್ರ ಕಲಾಕ್ಷೇತ್ರ, ಬೆಂಗಳೂರು. 

ಗೋಕುಲ ನಿರ್ಗಮನ - ದೃಶ್ಯ ನಾಟಕ 




ಪು. ತಿ. ನರಸಿಂಹ ಆಚಾರ್ ವಿರಚಿತ, ಬಿ ವಿ ಕಾರಂತ್ ನಿರ್ದೇಶನದ, ಡಾ. ಟಿ ಎಸ್ ನಾಗಾಭರಣ ಮರು ನಿರ್ದೇಶಿಸಿದ ಮರುವಿನ್ಯಾಸದ ವಿನೂತನ ದೃಶ್ಯ ಕನ್ನಡ ನಾಟಕ "ಗೋಕುಲ ನಿರ್ಗಮನ". 



ಸುಮಾರು 30 ಕಿಂತ ಹೆಚ್ಚಿನ ಯುವಕ, ಯುವತಿಯನ್ನು ಒಳಗೊಂಡಿದ್ದು , 90 ನಿಮಿಷಗಳ ಕಾಲದ ನಾಟಕ ನೃತ್ಯ, ಹಾಡುಗಳನ್ನು ಬಳಸಿಕೊಂಡು ಪ್ರದರ್ಶಿಸಿದ ಅದ್ಭುತವಾದ ನಾಟಕ. 




50 ವರ್ಷಲಿಂದ   ರಂಗಭೂಮಿಯಲ್ಲಿ ನಾಟಕಗಳನ್ನು ಪ್ರದರ್ಶನ ಮಾಡಿಕೊಂಡು ಬಂದ "ಬೆನಕ" ನಾಟಕ ತಂಡ, ಇನ್ನೂ 50 ವರ್ಷಗಳ ಕಾಲ ರಂಗಭೂಮಿಯನ್ನು ಜೀವಂತ ವಾಗಿರಿಸಿಲು ಯುವ ಪೀಳಿಗೆಯನ್ನು ತಾಲೀಮು ಮಾಡಿಸುವುದು, ಪ್ರೋತ್ಸಾಹಿಸುವುದು, ನಾಗಾಭರಣ ಅವರ ಬೆನಕ ತಂಡದ ಪ್ರಯತ್ನ ಶ್ಲಾಘನೀಯ. 


ನಾಟಕದ ಯಶಸ್ಸಿಗೆ ತುಂಬಿದ ಕಲಾಕ್ಷೇತ್ರದ ಸಭಾಂಗಣದಲ್ಲಿ ನೆರೆದ ಜನರೇ ಸಾಕ್ಷಿ. 

ಬೆನಕ ತಂಡದವರಿಗೆ ಹಾರ್ದಿಕ ಅಭಿನಂದನೆಗಳು. 

Posted 20/9/2025 











Thursday, July 10, 2025

ಮೈ ಮನಗಳ ಸುಳಿಯಲ್ಲಿ - ಕನ್ನಡ ನಾಟಕ

 ಗುರುವಾರ, ಜುಲೈ 10, 2025

ಚೌಡಯ್ಯ ಮೆಮೋರಿಯಲ್ ಹಾಲ್, ಬೆಂಗಳೂರು.

ಜ್ಞಾನ  ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತರ "ಮೈಮನಗಳ ಸುಳಿಯಲ್ಲಿ" ಕಾದಂಬರಿಯ ವಿಭಿನ್ನ ರೂಪದ  ರಂಗ ಪ್ರಸ್ತುತಿ, ನಿರ್ದಿಗಂತ ತಂಡದವರಿಂದ.



ವೈಶ್ಯೆ ಮಂಜುಳಾ ಅವಳ ಆತ್ಮ ಕಥನದಿಂದ ಪ್ರಾರಂಭವಾದ ನಾಟಕ, ಬರೇ ಕತೆಯನ್ನು ಹೇಳುತ್ತಾ ಮುಂದುವರಿಯುವುದು. ಮೈ ಮತ್ತು ಮನಸ್ಸುಗಳನ್ನು ಬೇರೆ ಬೇರೆಯಾಗಿ ಪರಿಗಣಿಸಬೇಕು ಎಂಬ ಮಂಜುಲೆಯ ಅಮ್ಮನ ನಿರ್ದೇಶನ, ಹಾಗೆಯೇ ಹೆಣ್ಣು ಗಂಡಿನ ಸಂಭಂದವೆಂಬ ಕಗ್ಗಂಟಾಗಿರುವ ವಿಷಯವನ್ನು ಶೋಧಿಸುತ್ತಾರೆ.


ನಾಟಕದಲ್ಲಿ ಮಂಜುಳೆಗೆ ಸಿಗುವ ಮೂರು ಪ್ರಮುಖ ವ್ಯಕ್ತಿಗಳ ಜತೆಗಿನ ಸಂಬಂಧ ಮುಂದುವರಿಯುತ್ತದೆ. 

ಕಾದಂಬರಿಯಲ್ಲಿ ಬರುವ  ಕಂಡಲೂರು ವಾಸುದೇವ ಪೈ, ಉಳ್ಳೂರು ಸುಬ್ರಾಯ ಅಡಿಗ ಮತ್ತು ಲಕ್ಷ್ಮಣ ತೀರ್ಥ ಸ್ವಾಮಿಗಳು ಇವರೊಡನೆ ಸರಸ ಸಲ್ಲಾಪ, ಆತ್ಮೀಯ ದ್ರಶ್ಯಗಳು,  ಸಂಭಾಷಣೆ, ಅಭಿನಯ ಅದ್ಭುತವಾಗಿತ್ತು. 



ರಂಗದ ಮೇಲೆ ಅಭಿನಯಿಸಿದ ಅಕ್ಷತಾ ಕುಮಟ (ಮಂಜುಳಾ),  ರಾಜೇಶ್ ಮಾಧವನ್ (ಮೂರು ಗಂಡಸಿನ ಪಾತ್ರಗಳು) ಅಭಿನಯ ತುಂಬಾ ಚೆನ್ನಾಗಿತ್ತು.


ಪಮ್ಮ- ದುಗ್ಗಿಯ ಬೊಂಬೆ 

ನಿರ್ದಿಗಂತ ತಂಡದ ಹಲವಾರು ಕಲಾವಿದರು, ತಂತ್ರಜ್ಞರು ರಂಗ ಪ್ರಸ್ತುತಿಗೆ ಕೈ ಜೋಡಿಸಿದ್ದರು.  
ಅಮಿತ್ ರೆಡ್ಡಿ- ನಿರ್ದೇಶನ,  ಹಿನ್ನೆಲೆ ಧ್ವನಿ - ವಿಜಯಮ್ಮ, ಸಂಗೀತ - ಅನುಷ್ ಶೆಟ್ಟಿ.

ಸರಳ ರಂಗ ಸಜ್ಜಿಕೆ, ಬೆಳಕು, ಹಿನ್ನೆಲೆ ಸಂಗೀತ (ನಿರಂತರವಾಗಿ ಕೇಳಿಸುವ ಸಮುದ್ರದ ಅಲೆಗಳ ನಾದ), ಹಾಡುಗಳು ಇತ್ಯಾದಿ, ಸಾಧಾರಣ ವಾಗಿತ್ತು.


ಕಾದಂಬರಿಯನ್ನು ಓದಿ, ಬೇರೇ ರೀತಿಯ ಕಲ್ಪನೆಯನ್ನು ಇಟ್ಟುಕೊಂಡು ನಾಟಕ ವೀಕ್ಷಿಸಿಲು ಹೋದವರಿಗೆ ಒಂದು ವಿಭಿನ್ನವಾದ ಅನುಭವ.

ಸುಮಾರು ಎರಡು ಗಂಟೆಗಳ ರಂಗ ಪ್ರಸ್ತುತಿಯು ಗಂಡು ಹೆಣ್ಣಿನ ಸಂಬಂಧವು ಸಮಾಜದ ಹೊಣೆ....??


Posted 11/7/2025



Monday, April 21, 2025

ಶಿವದೂತ ಗುಳಿಗ - ಕನ್ನಡ ನಾಟಕ

 ಭಾನುವಾರ, 20 ಏಪ್ರಿಲ್ 2025

ತರಳಬಾಳು ಕೇಂದ್ರ ಸಭಾಂಗಣ. ಅರ್. ಟಿ. ನಗರ, ಬೆಂಗಳೂರು.

"ಶಿವದೂತ ಗುಳಿಗ" - ಕನ್ನಡ ನಾಟಕ 

ಕಲಾವಿದರು.


ಶಿವದೂತ ಗುಳಿಗ -ಅದೊಂದು ಸುಮಾರು ೨ ಗಂಟೆಗಳ ಕಾಲ ಕಿವಿ ಚುಚ್ಚುವ ಶಬ್ದ ದೊಂದಿಗೆ ಚೀರಾಟ, ಹಾರಾಟ, ಕೂಗಾಟ ದೊಂದಿಗೆ ಅಬ್ಬರಿಸಿದ ಕನ್ನಡ ನಾಟಕ.

ಕಲಾವಿದರು 
ಕಲಾ ಸಂಗಮದ ಎಲಾ ಸದಸ್ಯರ ಅಭಿನಯ, ಹಾವ ಭಾವ, ನೃತ್ಯ, ಸಂಭಾಷಣೆ ಎಲ್ಲವೂ ಅದ್ಭುತ.

ರಣಗ ಸಜ್ಜಿಕೆ,ಅದ್ದೂರಿಯ  ದೃಶ್ಯ ಸಂಯೋಜನೆ, ಪಾತ್ರಗಳ ರಂಗ ಪ್ರವೇಶ, ಸಂಗೀತ, ಬೆಳಕು ಎಲ್ಲವೂ ಉತ್ತಮವಾದ ನಿರ್ವಹಣೆ. ಮೂರು ಕಲಾವಿದರು ಗುಳಿಗನ ಪಾತ್ರವನ್ನು ಅತ್ಯುತ್ತಮ ವಾಗಿ  ನಿರ್ವಹಿಸಿ ಸಭಿಕರ ಮೆಚ್ಚುಗೆಯನ್ನು ಪಡೆದಿದ್ದಾರೆ.



ಅದೊಂದು ಮುಖ್ಯವಾಗಿ ಕರಾವಳಿ ಭಾಗದ ಜನರ ದೈವಾರದನೆಯ ಕಥೆ. ಕೈಲಾಸದಲ್ಲಿ ಶಿವನ ಭಸ್ಮ ಮತ್ತು ಬೆವರಿನ ಗುಳಿಗೆಯಿಂದ ಹುಟ್ಟಿದವನೇ 
"ಗುಳಿಗ", ಅತ್ಯಂತ ಬಲಶಾಲಿ, ಹಸಿವು, ಬಾಯಾರಿಕೆಯಿಂದ ಅಬ್ಬರಿಸುತ್ತಾನೆ.



ನಂತರ ಶಿವನು ಅವನನ್ನು ವಿಷ್ಣುವಿನ ವೈಕುಂಟ ಕ್ಕೆ  ಹಸಿವಿನ  ಕಳುಹಿಸುತ್ತಾನೆ. , ವಿಷ್ಣುವು ಗುಳಿಗ ಶಪಿಸಿ  ಭೂಮಿಯಲ್ಲಿ ರಾಕ್ಷಸಿ "ನೆಲವುಲ್ಲ ಸಂಖೆ"ಯ ಉದರದಲ್ಲಿ ಜನಿಸಿ ಅವಳನ್ನೇ ತಿಂದು ಬಿಡುತ್ತಾನೆ.


ಹಾಗೆಯೇ ಕಥೆ ಮುಂದುವರಿದು ಗುಳಿಗ ,  ಬ್ರಾಹ್ಮಣ ಊರು, ಚಾಮುಂಡಿ, ಬಬ್ಬುರಾಯ ಬ್ರಹ್ಮ ರಾಕ್ಷಸನ್ನು ಕೊಂದು   ವಿವಿಧ ಸ್ಥಳಗಳಿಗೆ ಹೋಗಿ ಸ್ಥಾಪನೆಯಾಗಿ ಒಳ್ಳೆಯವರಿಗೆ ಒಳ್ಳೆಯವನು, ದುಷ್ಟರಿಗೆ ಕೆಟ್ಟವನಾಗಿ ಮುಂದುವರಿಯುತ್ತಾನೆ.



ಎಲ್ಲ ಸನ್ನಿವೇಶಗಳ ರಂಗ ಸಜ್ಜಿಕೆ ಸೂಪರ್ (ಅದ್ಭುತ)

ತುಂಬಿದ ಸಭಾಂಗಣ ದಲ್ಲಿ ಸಭಿಕರು ಮಂತ್ರ ಮುಗ್ಧರಾಗಿ ಕುಳಿತಿರುವುದು ನಾಟಕದ ವಿಶೇಷ. 


ನಾಟಕದ ಚಿತ್ರೀಕರಣ ಮಾಡುವುದು ನಿಷೇಧಿಸಿದ್ದರಿಂದ ವೀಡಿಯೋ ತೆಗೆಯಲಾಗಲಿಲ್ಲ.

ಹೊಸ ಪೀಳಿಗೆಯ ಜನಾಂಗಕ್ಕೆ ಒಳ್ಳೆಯ ಸಂಸ್ಕಾರ, ಪರಂಪರೆಯನ್ನು ತಿಳಿಸಿಕೊಡುವ ನಾಟಕ.

ಕಲಾ ಸಂಗಮ ತಂಡದ ಎಲ್ಲ ಸದಸ್ಯರಿಗೆ ಹಾರ್ದಿಕ ಅಭಿನಂದನೆಗಳು.

Posted 22/4/2025


Thursday, February 20, 2025

BOB MARLEY FROM KODIHALLI - KANNADA DRAMA

Sunday, February 16, 2025

Muddana Mantapa, M G M College, Udupi 

ಮುರಾರಿ - ಕೆದ್ಲಾಯ ರಂಗೋತ್ಸವ

16.02.2025, 6.30 PM

ಮುದ್ದಣ ಮಂಟಪ ಎಂಜಿಎಂ. ಕಾಲೇಜು, ಉಡುಪಿ .

ರಥಬೀದಿ ಗೆಳೆಯರು ಉಡುಪಿ, ಜಂಗಮ ಕಲೆಕ್ಟಿವ್ ಬೆಂಗಳೂರು ಪ್ರಸ್ತುತಿ

ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ 

ರಚನೆ,ವಿನ್ಯಾಸ,,ನಿರ್ದೇಶನ: ಲಕ್ಷ್ಮಣ್ ಕೆ. ಪಿ.



'ಗುರುತು’ ಅನ್ನುವುದು ಕೆಲವರಿಗೆ ಹೆಮ್ಮೆಯಾದರೆ, ಕೆಲವರಿಗದು ಅಸಹ್ಯ, ಹಿಂಸೆ, ಜೀವನದ್ದುದ್ದಕ್ಕೂ ಹೊತ್ತು ತಿರುಗಬೇಕಾದ ಹೆಣಭಾರದ ಚಾಕರಿ. ಹಲವು ಬಾರಿ ‘ಉಳಿವಿಗಾಗಿ’ ಗುರುತುಗಳನ್ನು ಮುಚ್ಚಿಡುತ್ತಾ ಸಾಗುವುದೇ’ ಬದುಕು’ ಅನ್ನಿಸಿಕೊಂಡು ಹರಿಯುತ್ತಾ ಹಗುರಾಗುವುದು ಸಾಗದ ದಾರಿಯಾಗಿ ಕಂಡು ದಣಿವಾಗುತ್ತದೆ. ದಣಿವಾಗುತ್ತದೆ ಎಂಬ ಕಾರಣಕ್ಕೆ ಹಾರಾಡುವ ಬಯಕೆಯನ್ನು ಬಿಡುವಂತೆಯೂ ಇರುವುದಿಲ್ಲ. ಕತ್ತಲ ದಾರಿಯಲ್ಲಿ ಮಿಂಚುಹುಳುಗಳಿಗಾಗಿ ಜೀವ ಆತುಕೊಳ್ಳಬೇಕಾಗುತ್ತದೆ. ಆಗ ಕತ್ತಲೊಂದು  ಸಂಭ್ರಮ ಬೆಳಕೊಂದು ಸಂಭ್ರಮ. ಹೀಗೆ ಗುರುತಿನ ಸುತ್ತ ಇರುವ ಹಲವು ಸಂಕೀರ್ಣ ವೀರೋಧಭಾಸಗಳನ್ನು ಎದುರುಗೊಳ್ಳುವ ಕಥನಗಳ ಗೊಂಚಲು’ ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’



ಇಲ್ಲಿ‘ಬಾಬಾ ಸಾಹೇಬ್ ಅಂಬೇಡ್ಕರ್ ಅವರ ‘Waiting for a Visa’ ಒಂದು ರೂಪಕವಾಗಿ ಕಂಡು ಅವರು ನಿಜಕ್ಕೂ ಪ್ರವೇಶ ಕೇಳುತ್ತಿರುವುದು ಎಲ್ಲಿಗೆ? ಅನ್ನುವ ಪ್ರಶ್ನೆ ಮುಖ್ಯವಾಗುತ್ತದೆ.

ಪಠ್ಯ ಆಕರ: ಎನ್.ಕೆ ಹನುಮಂತಯ್ಯ, ಚಂದ್ರಶೇಕರ್ ಕೆ

ಡ್ರಮಟರ್ಗ್: ವಿ. ಎಲ್. ನರಸಿಂಹಮೂರ್ತಿ

ಅದೊಂದು ನೀರಸ, ಹಾಡುಗಳ ಕಿರುಚಾಟ, ಮೇಲಿನ ಕಥಾನಕದಂತೆ ಶೋಷಿತ ಸಮುದಾಯದ ಸಂಘರ್ಷ.

ಮೂರು ಪಾತ್ರಗಳ ಹಾಡು, ಸಂಭಾಷಣೆ, ಅನುಭವ.

ರಂಗ ವಿನ್ಯಾಸ, ಸಂಗೀತ, ಬೆಳಕು ಉತ್ತಮ.

ಅಭಿಲಾಷ, ನಳಿನಿ, ಅನೀಶ, ಅಕ್ಷಿತ ಮತ್ತು ನಾನು ವೀಕ್ಷಿಸಿದ ನನ್ನ ಕಾಲೇಜಿನಲ್ಲಿ ನಡೆದ ನಾಟಕ....


ಬರೆದಿರುವುದು 21/2/2025