Showing posts with label PEOPLE. Show all posts
Showing posts with label PEOPLE. Show all posts

Wednesday, September 3, 2025

ಪದ್ಮನಾಭ ಸೋಮಯಾಜಿ

 Wednesday, 3rd September 2025

ಪದ್ಮನಾಭ ಸೋಮಯಾಜಿ 

ನಾಳೆ ನನ್ನ ಅಪ್ಪನ ಹುಟ್ಟಿದ ಹಬ್ಬ. ಅವರು ಬದುಕಿದ್ದಿದ್ದರೆ ಅವರಿಗೆ ತೊಂಬತ್ತೆಂಟು ವರ್ಷ ಆಗಿರುತ್ತಿತ್ತು. ಅವರು ತಮ್ಮ ಅರವತ್ತೇಳನೆ ವಯಸ್ಸಿಗೇ ಕಾಲವಶರಾದರು.

ಒಟ್ಟು ಕುಟುಂಬದ ಎಲ್ಲರ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡಿದ್ದ ಅಪ್ಪನಿಗೆ ಅವರ ಇಪ್ಪತ್ತೆಂಟನೆ ವಯಸ್ಸಿಗೆ ಕೂದಲು ಬಿಳಿಯಾಗತೊಡಗಿತ್ತು. ಕರಿ ಬಣ್ಣದ ಬಳಕೆ ಆಗಲೇ ಶುರು ಮಾಡಿದ್ದರು. ಗೋಧಿವರ್ಣದ ಅಪ್ಪನ ಮೈ ಬಣ್ಣ ಅವರ ಜವಾಬ್ದಾರಿ ಹಾಗೂ ತಿರುಗಾಟದ ಕೆಲಸದಿಂದಾಗಿ ಹರೆಯದಲ್ಲೇ ಬಣ್ಣ ಕಳೆದುಕೊಂಡಿತ್ತು. ಇಷ್ಟಿದ್ದೂ ಅವರಲ್ಲಿ ನಾನು ಸದಾ ಕಂಡಿದ್ದು ಅಪಾರ ಜೀವನೋತ್ಸಾಹ. ಮಕ್ಕಳಲ್ಲಿ ಮಕ್ಕಳಾಗಿರುತ್ತಿದ್ದ ಅವರ ಮಗುತನ. ಎಂದಿಗೂ ಸಿಡುಕದ ಅವರ ಶಾಂತಭಾವ.

ವೆಂಕಟರಮಣ ಸೋಮಯಾಜಿ ಕುಟುಂಬ (ಸೆಪ್ಟಂಬರ್ 1980)

ತಮಗಾಗುತ್ತಿದ್ದ ವಯಸ್ಸನ್ನು ಸಹಜವಾಗಿ ಸ್ವೀಕರಿಸಿ ವಯೋಸಹಜವಾದ ಪ್ರೌಢತೆಯಲ್ಲಿ ಎಲ್ಲವನ್ನು - ಎಲ್ಲರನ್ನು ನಿಭಾಯಿಸುತ್ತಿದ್ದವರು ನನ್ನಪ್ಪ. ಅವರು ನಿವೃತ್ತರಾದ ಮೇಲೆ ನಾನು ಅವರೊಡನೆ ಜಗಳ ಮಾಡಿ ತಲೆಕೂದಲಿಗೆ ಬಣ್ಣ ಹಾಕುವುದನ್ನು ಬಿಡಿಸಿದ್ದೆ. ಬಿಳಿಕೂದಲಿನಿಂದಾಗಿ ಎದ್ದು ಕಾಣುತ್ತಿದ್ದ ವಯಸ್ಸಿನ ಪ್ರಭಾವವನ್ನು ಕೂಡಾ ನನ್ನಪ್ಪ ಸಹಜವಾಗಿ ಸ್ವೀಕರಿಸಿ ಆನಂದಿಸಿದವರೆ! ಬದುಕನ್ನು ಅದು ಬಂದಂತೆ ಸ್ವೀಕರಿಸಿ ಅದರಲ್ಲೇ ಸಕಾರಾತ್ಮಕತೆಯ ಅಂಶವನ್ನು ಕಂಡು ಖುಷಿಯಿಂದ ಬದುಕುವುದನ್ನು ತೋರಿಸಿಕೊಟ್ಟವರು ನನ್ನಪ್ಪ. ಅವರು ಬೋಧಿಸಿದಕ್ಕಿಂತ ನಮಗೆ ‘ತಿಳಿಸಬೇಕಾದ ಅಂಶಗಳನ್ನು’ ತಾವು ಬದುಕಿ ತೋರಿಸಿದ್ದೇ ಜಾಸ್ತಿ. 

ನನ್ನಪ್ಪ ಒಂದು ರೀತಿಯಲ್ಲಿ ಅಜಾತಶತ್ರು. ಎಲ್ಲರನ್ನೂ ಸಂಭಾಳಿಸಿಕೊಂಡು/ಸಹಿಸಿಕೊಂಡು ಹೋಗುತ್ತಿದ್ದ ಅವರನ್ನು ಎಲ್ಲಾ ಇಷ್ಟಪಡುವವರೇ ಆಗಿದ್ದರು. ಬಿ.ಪಿ.ಸೋಮಯಾಜಿ ಎಂದರೆ ಎಲ್ಲರೂ ಪ್ರೀತಿಯಿಂದ ಬರಮಾಡಿಕೊಂಡು ಆದರಿಸುತ್ತಿದ್ದ ವ್ಯಕ್ತಿಯಾಗಿದ್ದರು. ಅವರ ಮಗಳು ನಾನೆಂಬ ಹೆಮ್ಮೆ ಯಾವಾಗಲೂ ನನ್ನಲ್ಲಿದೆ. ಅವರಿಂದ ಪಡಕೊಂಡ ಹಲವಾರು ಉತ್ತಮ ಗುಣಗಳೇ ನನ್ನ ಆಸ್ತಿ ಎಂದು ನಾನು ಅಭಿಮಾನದಿಂದ ಹೇಳಬಲ್ಲೆ


ರವಿ (ದುಬೈ ಅಕ್ಟೋಬರ್ 1989)

Posted 4/9/2025

Tuesday, September 3, 2024

SHRI PUTTIGE SHRI VENKATESH SHASTRY

 4th June 2024

Dubai Brahmana Samaja.




Shri Puttige Venkatesh Shastry is a very talented person, versatile speaker, sincere and devoted to his resposibilities.

He has been active member of U A E Brahmana Samaja, since its inception in 2023.



He is also Maddale artist and made his daughter as good singing for Bhagavataru.

We wish to congratulate him for being awarded "YAKSHA SHRI RAKSHA GOURAVA "

SARVE JANAH SUKHINO BHAVANTHU"

God Bless.

Posted 4/9/2024




Tuesday, August 27, 2024

SUDHAKER RAO PEJAVAR

 Tuesday, 27th August 2024

SRI SUDHAKER RAO PEJAVAR



Sri Sudhaker Rao Pejavar has been a friend, well wisher for last 38 years since 1986, the time of my Dubai Years .




Our family had been together on many ocassion, whether it is New Year Get-together, Birthday parties, or Picnic, Weddings etc


Since 2003, we were closely together for Dubai Brahmana Samaja activities, which we started together.

We were there, for his son Vikas Wedding in Feb 2016,  His Shastabdi celebrations at Vidyapeeta, in July 2019, his new Apartment in March 2023,  his recent Birthday at GeethaMandira, Udupi



His greatest effort was to celebrate "VIMSHATHI UTSAV", commemorating  20 years of Dubai Brahmana Samaja, 2023-2024, organizing 20 different programs throughout the year, culminating in Grand "VISHAMTHI VAIBHAV" in April 2024, a day long program, at wich we also travelled to Dubai to particiapte.




Last week he was awarded "ADHYATMIKA RATNA - 2024". on 25th August at Sri Guru Raghavendra Swami Aaraadhana Mahotsava at Ajaman, UAE.



Also on 26th August 2024, he was awarded with "SHRI KRISHANUGRAHA PRASHASTHI" by Paryaya Puttige Sripadaru, Sri Sugunendra Thirtha Swamiji,  at Sri Krishna Janmasthami Celebrations, "SHRI KRISHNA MAASOTSAVA" at Rajangana, Sri Krishna Math. Udupi.



It's only his devotion, dedication and hardwork to religious program and social events, apart from his office work at Dubai.

12 July 2024 at Udupi, Geetha Mandira, Sri Krishna Mutt


We were together at an Event

He is also active member of "SUGAMA BHAJANE",  Zoom online Bhajan Group, meeting once in a month.


We wish him long life, health and happiness, and May God shower him with more accolades and awards.

God Bless.

Posted 27/8/2024


Tuesday, May 14, 2024

ಲೀಲಾ ಸೋಮಯಾಜಿ

 ಮಂಗಳವಾರ, 14 ಮೇ 2024 

ಲೀಲಾ ಸೋಮಯಾಜಿ 


ನಾನು ಹಾರಾಡಿ ಪ್ರೈಮರಿ ಶಾಲೆಯಲ್ಲಿ  ಮೂರೋ/ನಾಲ್ಕನೇ ಕ್ಲಾಸಿನಲ್ಲಿ ಓದುತ್ತಿರುವಾಗ ನಮ್ಮ ಅಗ್ರಜ ಪದ್ಮನಾಭ ಸೋಮಯಾಜಿ ಅವರು, ಆರೂರು ಗುಂಡು ರಾವ್ ಅವರ ಮಗಳು ಲೀಲಾ  ಅವರನ್ನು ಮದುವೆ ಆದರು. ಅದು 1955 ನೇ ವರ್ಷ ಇರಬಹುದು.


ಆಗ ನಮ್ಮ ಬಿರ್ತಿ ಸಾಲೆಕೇರಿ ಮನೆಯಲ್ಲಿ ಸೌಲಭ್ಯಗಳು ಸರಿಯಾಗಿ ಇರಲಿಲ್ಲ, ಶೌಚಾಲಯವೂ ಇರಲಿಲ್ಲ. ಹಳೆಯ ಮನೆ. ಅಗ್ರಜರು ಬ್ರಹ್ಮಾವರ ಹೈಸ್ಕ್ಕೊಲ್ ನಲ್ಲಿ ಚಿತ್ರಕಲಾ ಅಧ್ಯಾಪಕರು.

ನಾನು ನಳಿನಿಯನ್ನು ಮದುವೆ ಯಾದ ಸಂದರ್ಭ  (1980)

ಬಿರ್ತಿ ಮನೆ ಯಲ್ಲಿ ಪರಿವಾರ 

ಲೀಲಾ ಅವರು ಬಹಳ ಅಸಮಾಧಾನದಿಂದ ಮನೆಯಲ್ಲಿ ಇರುತಿದ್ದರು. ಮನೆಯಲ್ಲಿ ಎರಡು ಭಾಗ, ಒಂದನೇ ಭಾಗ ಹುಲ್ಲಿನ ಮಾಡು, ಅಡುಗೆ ಮನೆ, ಪಡಸಾಲೆ, ಎರಡನೇ ಭಾಗದಲ್ಲಿ ಚಾವಡಿ, ಕೋಣೆ ಮತ್ತು ಉಪ್ಪರಿಗೆ.  

1957 ರಲ್ಲಿ ಅವರ ಮಗ ಶ್ರೀಕಾಂತನ ಜನನವಾಯಿತು. ಮನೆಯಲ್ಲಿ ಸಂಭ್ರಮ.

1963 ಸಮಯದಲ್ಲಿ ಅಗ್ರಜ ಪದ್ಮನಾಭ ಸೋಮಯಾಜಿ ಅವರು ಲೈ.ಐ. ಸಿ ಯ ಅಭಿವ್ರದ್ಧಿ ಅಧಿಕಾರಿಯಾಗಿ (Develoment Oficer), ಹತ್ತಿರದ ಹೆಬ್ರಿ ಯಲ್ಲಿ ಕೆಲಸ ಪ್ರಾರಂಭ ಮಾಡಿದರು.

ನಾನು, ನಳಿನಿ, ಅಚ್ಚಿ, ಲೀಲಾ 


ಅವರು ಅಲ್ಲಿ ಮನೆ ಮಾಡಿದಾಗ ನಮಗೆ ಶಾಲೆಯ ರಜ ಸಮಯದಲ್ಲಿ ಅಲ್ಲಿಗೆ ಹೋಗಿ ಇರುವ ಆಸೆ. ಅತ್ತಿಗೆ ಲೀಲಾ ಅವರು ರುಚಿ ರುಚಿಯಾದ ತಿಂಡಿ ತಿನಸುಗಳು ಮಾಡುವವರು.

1966 ನಲ್ಲಿ ಮಗಳು ಶೋಭಾಳ ಜನನ, 1973 ರಲ್ಲಿ ಮಗಳು ಶೈಲಾ ಳ ಜನನ.

ಲೀಲಾ, ನಾಗವೇಣಿ, ಸುನಂದ 

ತಂಗಿ ಸರೋಜಿನಿ, ಕುಸುಮ 

1971 ರಲ್ಲಿ ನಾನು ವಿದೇಶ, ಆಫ್ರಿಕಾದ ಸಿಯರಾ ಲಿಯೋನ್ ರಾಜ್ಯದ ಫ್ರೀ ಟೌನ್ ಕೆಲಸಕ್ಕಾಗಿ ಪಯಣ.

ಶ್ರೀ ಕಾಂತನು 1988 ಮೆ ತಿಂಗಳಲ್ಲಿ ಕೋಟ ಶ್ರೀಧರ್ ಹಂದೆ ಯವರ ಮಗಳು ಅಭಿಲಾಷ ಅವಳನ್ನು ಮದುವೆ ಆದನು.

ಹುಬ್ಬಳ್ಳಿಗೆ ಪಯಣ ... 1983 

ಅಕ್ಟೋಬರ್ 1971 , ಉಡುಪಿ 

1997 ರಲ್ಲಿ ಅಗ್ರಜ ಪದ್ಮನಾಭ ಸೋಮಯಾಜಿ ಅವರು ಆರೋಗ್ಯ ಸಮಸ್ಯೆಯಿಂದ  ಹಾಗೂ 2004 ರಲ್ಲಿ ಶ್ರೀಕಾಂತನೂ ರಸ್ತೆ ಅಫಘಾತ ದಲ್ಲಿ ಮರಣ ಹೊಂದಿದರು.

ಲೀಲಾ ಅವರು ಸ್ವಪ್ರತಿಷ್ಟೇಯುಳ್ಳ, ಅಹಂ, ಗರ್ವ, ಹೃದಯದಲ್ಲಿ ಒಳ್ಳೆತನ ಇರುವ ಹೆಂಗಸು.


ಇತ್ತೀಚಿಗೆ ಮೊಮ್ಮಗ ಅನೀಶನ ಮದುವೆ ಸಂದರ್ಭದಲ್ಲಿ ಅವರ 87 ನೇ ಹುಟ್ಟುಹಬ್ಬವನ್ನು ಮಕ್ಕಳು, ಮೊಮ್ಮಕ್ಕಳು ಇರೊಡನೆ ಸಂಭ್ರಮಿಸಲಾಯಿತು.


ಅವರಿಗೆ ಆರೋಗ್ಯ, ಆಯುಸ್ಸು, ನೆಮ್ಮದಿಯನ್ನು ಶ್ರೀ ದೇವರು ಸದಾ ಕರುಣಿಸಲಿ ಎಂಬ ಹಾರೈಕೆಗಳು.

Posted 14/5/2024 







Wednesday, December 6, 2023

ಬಾಳೆಕುದ್ರು ವೆಂಕಟಕೃಷ್ಣ ಕೆದಿಲಾಯ - (B. V. KEDILAYA)

 ಮಂಗಳವಾರ, ಡಿಸೆಂಬರ್ 5. 2023 

ಹುಟ್ಟು ಹಬ್ಬದ ಶುಭಾಶಯಗಳು,

ಶ್ರೀ ಬಿ ವಿ ಕೆದಿಲಾಯರಿಗೆ.

ಬಾಳೆಕುದ್ರು ಶ್ರೀನಿವಾಸ ಕೆದಿಲಾಯರು (ಶಾಸ್ತಿಗಳೂ, ವೇದಾಧ್ಯಯನ ಮಾಡಿದ ಪಂಡಿತರೂ) ಆಗಿದ್ದ, ನನ್ನ ಸೋದರ ಮಾವ, ಇವರ ಸುಪುತ್ರ ವೆಂಕಟಕೃಷ್ಣ ಕೆದಿಲಾಯರು.


87  ನೇ ವಯಸ್ಸಿನಲ್ಲಿರುವ ಇವರು ಮಗಳು ಜ್ಯೋತಿ, ಅಳಿಯ ಶ್ರೀನಿವಾಸ್, ಇವರೊಡನೆ ಬೆಂಗಳೂರಿನ ಹತ್ತಿರದ ನಾಗಸಂದ್ರ ದಲ್ಲಿ ಇವರ ವಾಸ.


ಕೆದಿಲಾಯರ 50ರ ಹರಯದ ಚಿತ್ರ.
ಸಾಹಿತ್ಯಾಸಕ್ತರೂ  , ಸಂಗೀತಪ್ರಿಯ, ಯಕ್ಷಗಾನದ ಅಭಿಮಾನಿ, ಖ್ಯಾತ ವಿಮರ್ಶಕ, ಅದ್ಭುತ ಭಾಷಣಕಾರ,  


ವಾಗ್ಮಿ, ಶಾಸ್ತ್ರಜ್ಞ ಹಾಗೂ ಪರಿಸರ ಪ್ರೇಮಿ ಶ್ರೀ ಬಾಳೇಕುದ್ರು ವೆಂಕಟಕೃಷ್ಣ ಕೆದಿಲಾಯರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಅವರಿಗೆ 60+27ರ ಉತ್ಸಾಹ.


ಬೆಂಗಳೂರಿನ ಅರ್.ಟಿ. ನಗರದ ಶಿವರಾಮ ಕಾರಂತ ವೇದಿಕೆಯ, ಹಲವಾರು ವರ್ಷ ಅಧ್ಯಕ್ಷರಾಗಿದ್ದು ಸೇವೆ ಸಲ್ಲಿಸಿದವರು.



ಬಿ, ವಿ. ಕೆದಿಲಾಯರ ಮುದ್ರಣವಾದ ಕೆಲವು ಪುಸ್ತಕಗಳು:

1. ಅರ್ಥ ಮತ್ತು ಅಪಾರ್ಥ - ವೈಚಾರಿಕ ಬರಹಗಳ ಸಂಕಲನ 

ಪ್ರಕಾಶಕರು - ಶಿವರಾಮ ಕಾರಂತ ವೇದಿಕೆ- 2003 



2. ಅಡಿಗ ನೆನಪು ಅಡಿಗಡಿಗೆ - ಗೋಪಾಲಕೃಷ್ಣ ಅಡಿಗ ಕವಿ ಕಾವ್ಯ ಪರಿಚಯ 

ಪ್ರಕಾಶಕರು - ಅಂಕಿತ ಪುಸ್ತಕ , ಬೆಂಗಳೂರು 2017 



3. ಬಿ.ವಿ. ಕೆದಿಲಾಯರ ಆಯ್ದ ವೈಚಾರಿಕ ಲೇಖನಗಳು - ಸಂಪಾದಕರು : ಗಣೇಶ್ ವಿ. ಸಾಗರ. 

ಪ್ರಕಾಶಕರು - ಪಾರಿಜಾತ ಪ್ರಿಂಟರ್ಸ್, ಮೈಸೂರು. 2022 





ಶ್ರೀನಿವಾಸ ಕೆದಿಲಾಯರು (ಶಾಸ್ತ್ರಿಗಳು)


ಶ್ರೀ ಬಿ.ವಿ. ಕೆದಿಲಾಯರಿಗೆ ಆಯುರಾರೋಗ್ಯ, ಸುಖ, ಶಾಂತಿ, ನೆಮ್ಮದಿಯನ್ನು ಶ್ರೀದೇವರು ಕರುಣಿಸಲಿ ಇಂಚು ಪ್ರಾರ್ಥನೆ.

ಬರೆದಿರುವುದು 6/12/2023 

Sunday, October 29, 2023

A VISHWANATHA UDUPA

 Sunday, 22 October 2023

Mandarthi, Udupi District.

Sri Vishwanatha Udupa known for many years, as his son Ramachandra Udupa was close at Dubai, when we were working.




He got married to Rajani that time and they are having a daughter Ruchira and son Raghavendra.


We were invited for his 80 yrs celebrations (Sahasra chandra Darshana) at Mandarthi, we did not attend.


He regularly performs Pooja at famous Durgaparameshwari Temple at Mandarthi, his house is just behind the temple. 



During Navaratri Festival, we at their house at Mandarthi, atteneded pooja and oota in the night.


May God Bless him with good health, long life and Happiness.

Posted 30/10/2023