ಭಾನುವಾರ, ನವಂಬರ 10, 2024, ಬೆಳಿಗ್ಗೆ 10 ಗಂಟೆಗೆ
ವಿನಾಯಕ ದೇವಸ್ತಾನ, ಅರ್. ಟಿ. ನಗರ, ಬೆಂಗಳೂರು.
ಕನ್ನಡ ರಾಜ್ಯೋತ್ಸವ 2024
ಶಿವರಾಮ ಕಾರಂತ ವೇದಿಕೆ, ವಿನಾಯಕ ದೇವಸ್ತಾನ, ಮಂಥನ, ಇವರ ಜಂಟಿ ಆಶ್ರಯದಲ್ಲಿ ರಾಜ್ಯೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಸಂಪನ್ನ ಗೊಂಡಿತು.
![]() |
ಶ್ರೀ ಬೈರಮಂಗಲ ರಾಮೇ ಗೌಡ |
![]() |
ದೀಪ ಬೆಳಗುವಿಕೆ |
ಅರ್.ಟಿ. ನಗರ ಮಹಿಳೆಯರಿಂದ ನಾಡ ಗೀತೆ, ದೀಪ ಬೆಳಗುವಿಕೆ, ವೀರಶೇಖರ ಸ್ವಾಮಿ ಅವರಿಂದ ಸ್ವಾಗತ, ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷೆ ಡಾ. ದೀಪಾ ಫಡ್ಕೆ ಅವರಿಂದ ಪ್ರಸ್ತಾವಿಕ ಭಾಷಣ, ನಂತರ ಮುಖ್ಯ ಅತಿಥಿ ಶ್ರೀ ಬೈರಮಂಗಳ ರಾಮೇ ಗೌಡರಿಂದ ಉದ್ಘಾಟನಾ ಭಾಷಣ ನೆರವೇರಿತು.
![]() |
ನಾಡ ಗೀತೆ |
![]() |
ಅಧ್ಯಕ್ಷೆ ಡಾ ದೀಪಾ ಫಡ್ಕೆ |
ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ತಮ್ಮ ಭಾಷಣದಲ್ಲಿ ಕನ್ನಡ ಬಗ್ಗೆ ಕನ್ನಡಿಗರ ತಿರಸ್ಕಾರ, ಕನ್ನಡವನ್ನು ಬಳಸಿ, ಬೆಳೆಸಿ, ಉಳಿಸುವುದರ ಬಗ್ಗೆ ಸೊಗಸಾಗಿ ಮಾತನಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳಿಂದ ನೃತ್ಯ, ಹಾಗೂ ಹಾಡಿನ ಕಾರ್ಯಕ್ರಮ ಚೆನ್ನಾಗಿ ನಡೆಯಿತು.
ನಾಲ್ಕು ಜನ ಗಣ್ಯರಿಗೆ - ಶ್ರೀ ಚಂದ್ರಶೇಖರ ಚಡಗ, ಶ್ರೀ ಭೋಜಪ್ಪ, ಶ್ರೀ ಲಕ್ಷ್ಮಿ ನಾರಾಯಣ್. ಶ್ರೀ ರಿಜಿ ಮೊಯಿನುದ್ದೀನ್ ಇವರಿಗೆ ವಿವಿಧ ಕ್ಷೇತ್ರಗಳಲ್ಲಿ , ಸಮಾಜಕ್ಕೆ ಕೊಡುಗೆಗಾಗಿ ಸನ್ಮಾನಿಸಲಾಯಿತು.
![]() |
ಹಿರಿಯರಿಗೆ ಗೌರವ ಸನ್ಮಾನ |
ಶ್ರೀಯುತ ವೀರಶೇಖರ ಸ್ವಾಮಿಯವರ ನೇತ್ರತ್ವದಲ್ಲಿ ಕಾರ್ಯಕ್ರಮವು ಸುಗಮವಾಗಿ, ಅಚ್ಚುಕಟ್ಟಾಗಿ ನೆರವೇರಿತು.
![]() |
ಪ್ರಜಾವಾಣಿ, 11/11/2024 |
![]() |
ವಿಶ್ವವಾಣಿ |
ಅವರಿಗೆ ಎಲ್ಲರ ಪರವಾಗಿ ಹಾರ್ದಿಕ ಅಭಿನಂದನೆಗಳು.
![]() |
Nalini, Satybhama, Bhuvaneshwari |
ವಿನಾಯಕ ದೇವಸ್ಥಾನದಿಂದ ಪ್ರಸಾದ (ಮೊಸರನ್ನ, ಪುಳಿಯೋಗರೆ, ಕೇಸರಿಬಾತ್ ) ವಿತರಣೆಯಾದ ನಂತರ ಕಾರ್ಯಕ್ರಮ ಮುಕ್ತಾಯವಾಯಿತು.