Showing posts with label RAJYOTSAVA. Show all posts
Showing posts with label RAJYOTSAVA. Show all posts

Sunday, November 10, 2024

ಕನ್ನಡ ರಾಜ್ಯೋತ್ಸವ 2024 - ಶಿವರಾಮ ಕಾರಂತ ವೇದಿಕೆ.

 ಭಾನುವಾರ, ನವಂಬರ 10, 2024,  ಬೆಳಿಗ್ಗೆ 10 ಗಂಟೆಗೆ 

ವಿನಾಯಕ ದೇವಸ್ತಾನ, ಅರ್. ಟಿ. ನಗರ, ಬೆಂಗಳೂರು.

ಕನ್ನಡ ರಾಜ್ಯೋತ್ಸವ 2024

ಶಿವರಾಮ ಕಾರಂತ ವೇದಿಕೆ, ವಿನಾಯಕ ದೇವಸ್ತಾನ, ಮಂಥನ, ಇವರ ಜಂಟಿ ಆಶ್ರಯದಲ್ಲಿ ರಾಜ್ಯೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಸಂಪನ್ನ ಗೊಂಡಿತು.

ಶ್ರೀ ಬೈರಮಂಗಲ ರಾಮೇ ಗೌಡ 

ದೀಪ ಬೆಳಗುವಿಕೆ 

ಅರ್.ಟಿ. ನಗರ ಮಹಿಳೆಯರಿಂದ ನಾಡ ಗೀತೆ, ದೀಪ ಬೆಳಗುವಿಕೆ, ವೀರಶೇಖರ ಸ್ವಾಮಿ ಅವರಿಂದ ಸ್ವಾಗತ, ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷೆ ಡಾ. ದೀಪಾ ಫಡ್ಕೆ ಅವರಿಂದ ಪ್ರಸ್ತಾವಿಕ ಭಾಷಣ, ನಂತರ ಮುಖ್ಯ ಅತಿಥಿ ಶ್ರೀ ಬೈರಮಂಗಳ ರಾಮೇ ಗೌಡರಿಂದ ಉದ್ಘಾಟನಾ ಭಾಷಣ ನೆರವೇರಿತು.

ನಾಡ ಗೀತೆ 

ಅಧ್ಯಕ್ಷೆ ಡಾ ದೀಪಾ ಫಡ್ಕೆ 



ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ತಮ್ಮ ಭಾಷಣದಲ್ಲಿ ಕನ್ನಡ ಬಗ್ಗೆ ಕನ್ನಡಿಗರ ತಿರಸ್ಕಾರ, ಕನ್ನಡವನ್ನು ಬಳಸಿ, ಬೆಳೆಸಿ, ಉಳಿಸುವುದರ ಬಗ್ಗೆ ಸೊಗಸಾಗಿ  ಮಾತನಾಡಿದರು.


ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳಿಂದ ನೃತ್ಯ, ಹಾಗೂ ಹಾಡಿನ ಕಾರ್ಯಕ್ರಮ ಚೆನ್ನಾಗಿ ನಡೆಯಿತು.




ನಾಲ್ಕು ಜನ ಗಣ್ಯರಿಗೆ - ಶ್ರೀ ಚಂದ್ರಶೇಖರ ಚಡಗ, ಶ್ರೀ ಭೋಜಪ್ಪ, ಶ್ರೀ ಲಕ್ಷ್ಮಿ ನಾರಾಯಣ್. ಶ್ರೀ ರಿಜಿ ಮೊಯಿನುದ್ದೀನ್ ಇವರಿಗೆ ವಿವಿಧ ಕ್ಷೇತ್ರಗಳಲ್ಲಿ , ಸಮಾಜಕ್ಕೆ ಕೊಡುಗೆಗಾಗಿ ಸನ್ಮಾನಿಸಲಾಯಿತು.

ಹಿರಿಯರಿಗೆ ಗೌರವ ಸನ್ಮಾನ 


ಶ್ರೀಯುತ ವೀರಶೇಖರ ಸ್ವಾಮಿಯವರ ನೇತ್ರತ್ವದಲ್ಲಿ ಕಾರ್ಯಕ್ರಮವು ಸುಗಮವಾಗಿ, ಅಚ್ಚುಕಟ್ಟಾಗಿ ನೆರವೇರಿತು.

ಪ್ರಜಾವಾಣಿ, 11/11/2024

ವಿಶ್ವವಾಣಿ

ಅವರಿಗೆ ಎಲ್ಲರ ಪರವಾಗಿ ಹಾರ್ದಿಕ ಅಭಿನಂದನೆಗಳು.


Nalini, Satybhama, Bhuvaneshwari

ವಿನಾಯಕ ದೇವಸ್ಥಾನದಿಂದ ಪ್ರಸಾದ (ಮೊಸರನ್ನ, ಪುಳಿಯೋಗರೆ, ಕೇಸರಿಬಾತ್ ) ವಿತರಣೆಯಾದ ನಂತರ ಕಾರ್ಯಕ್ರಮ ಮುಕ್ತಾಯವಾಯಿತು.

ವರದಿ :ಮಂಜುಳಾಭಾರ್ಗವಿ ( ಕಾರ್ಯದರ್ಶಿ.ಶಿವರಾಮ ಕಾರಂತ ವೇದಿಕೆ )

ಎಲ್ಲರಿಗೂ ನಮಸ್ಕಾರ... ತರಳಬಾಳು ಶಿವರಾಮ ಕಾರಂತ ವೇದಿಕೆ. ಹಾಗೂ ಶ್ರೀ ವಿನಾಯಕ ದೇವಸ್ಥಾನ ಸಮಿತಿ ಮತ್ತು ಮಂಥನ ಇವರ ಸಹಯೋಗದಲ್ಲಿ ನಡೆದ 69 ನೇ ಕನ್ನಡ ರಾಜ್ಯೋತ್ಸವದ ಒಂದು ವರದಿ.
ಶಿವರಾಮ ಕಾರಂತ ವೇದಿಕೆಯು  ಶ್ರೀ ಚಂದ್ರಶೇಖರ ಚಡಗರವರ ಪ್ರೀತಿಯ ಕನಸು. ಸುಮಾರು ಮೂವತ್ತು ವರ್ಷಗಳಿಂದ ಹಲವಾರು ಸುಪ್ರಸಿದ್ದ ಕವಿ, ಸಾಹಿತಿ, ಮಹೋದಯರನ್ನು ಸಭೆಗೆ ಕರೆಸಿ, ಅತ್ಯುನ್ನತ ಉಪನ್ಯಾಸಗಳನ್ನು ಹಾಗೂ ಸಾಹಿತ್ಯ ಚಟುವಟಿಕೆಗಳನ್ನು ನಡೆಸಿ ಕೊಡುತ್ತಾ ಬಂದಿದೆ. ಹಾಗೆ ಈ ದಿನ ರಾಜ್ಯೋತ್ಸವದ ಅಂಗವಾಗಿ ನಮ್ಮ ಬಿ. ಎಂ. ಶ್ರೀ ಪ್ರತಿಷ್ಠಾನದ ಅಧ್ಯಕ್ಷರು, ಸಾಹಿತ್ಯ ಪ್ರಿಯರೂ ಆದ ಡಾ.ಶ್ರೀ ಭೈರಮಂಗಲ ರಾಮೇಗೌಡರು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲು ಆಗಮಿಸಿ, ಕಾರ್ಯಕ್ರಮದ ಕಡೆಯ ಘಟ್ಟದವರೆಗೂ ನಮ್ಮ ಜೊತೆಯಲ್ಲಿದ್ದು, ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲು ತಮ್ಮ ಕೈ ಜೋಡಿಸಿದ್ದು ನಿಜಕ್ಕೂ ನಮ್ಮ ಅದೃಷ್ಟವೇ ಸರಿ. ಕಾರ್ಯಕ್ರಮ ನಾಡಗೀತೆಯೊಂದಿಗೆ ಪ್ರಾರಂಭವಾಗಿ,ಶಿವರಾಮ ಕಾರಂತರ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಡಾ. ದೀಪಾ ಫಡ್ಕೆ ಯವರು ಹಾಗೂ ವೇದಿಕೆಯ ಪದಾಧಿಕಾರಿಗಳು ಉಪಾಧ್ಯಕ್ಷರು, ಕೋಶಧಿಕಾರಿಗಳು, ಕಾರ್ಯದರ್ಶಿಗಳನ್ನು ಒಳಗೊಂಡಂತೆ, ಭೈರಮಂಗಲ ರಾಮೇಗೌಡರ ನೇತೃತ್ವದಲ್ಲಿ ದೀಪ ಬೆಳಗುವ ಕಾರ್ಯ ಸರಾಗವಾಗಿ ಜರುಗಿತು.. ಹಲವು ಶಾಲಾ ಮಕ್ಕಳು ಮತ್ತು ಅಲ್ಲಿನ ಸ್ಥಳೀಯರು ಅದಕ್ಕೆ ಸಾಕ್ಷಿಯಾದದ್ದು ಕಾರ್ಯಕ್ರಮಕ್ಕೆ ಮೆರುಗು ತಂದು ಕೊಟ್ಟಿತ್ತು.ಮೊದಲಿಗೆ ಪ್ರಾಸ್ತಾವಿಕ ನುಡಿಗಳೊಂದಿಗೆ, ಸ್ವಾಗತ ಭಾಷಣವನ್ನು ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷೆ  ಡಾ. ದೀಪಾ ಫಡ್ಕೆ ಅವರು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದರು.ತಮ್ಮ ರಸವತ್ತಾದ ಮಾತುಗಳ ಮೂಲಕ, ಕನ್ನಡ ಭಾಷೆಯನ್ನು ಇನ್ನಷ್ಟು ಮೇರು ಮಟ್ಟಕ್ಕೆ ಕೊಂಡೊಯ್ಯುವ ಬಗ್ಗೆ, ಹಾಗೂ ತಮ್ಮ ಗ್ರಾಮೀಣ ಬದುಕಿನಲ್ಲಿ ಕನ್ನಡದ ಮಹತ್ವ, ಕನ್ನಡ ಭಾಷೆಯ ಉಳಿವಿಗಾಗಿ ಸಾರ್ವಜನಿಕರಾಗಿ, ಕರ್ನಾಟಕದ ಪ್ರಜೆಗಳಾಗಿ ನಾವೆಲ್ಲರೂ ಮಾಡಲೇ ಬೇಕಾದ ಕೆಲವು ಆದ್ಯ ಕರ್ತವ್ಯಗಳ ಬಗ್ಗೆ ನೆರೆದಿದ್ದ ಜನರನ್ನು ಎಚ್ಚರಿಸಿದರು. ಅಷ್ಟೇ ಅಲ್ಲದೆ ತಾವು ವಾಸ ಮಾಡುತ್ತಿರುವ ಸ್ಥಳದ ಬಗ್ಗೆ ಅತ್ಯಂತ ಸ್ವಾರಸ್ಯಕರವಾದ ಮಾತುಗಳನ್ನು ಹೇಳುತ್ತಾ, ಹಿರಿಯ ಸಾಹಿತಿಗಳಾದ ಪುರುಷೋತ್ತಮ ಬಿಳಿಮಲೆ ಅವರ ಕೆಲವು ಮಾತುಗಳನ್ನು ನೆನಪಿಸಿ ಕೊಳ್ಳುತ್ತಾ, ಕನ್ನಡ ಭಾಷೆಯನ್ನು,ಬೆಳೆಸುವ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿಯನ್ನು ತಿಳಿಸಿದರು. ನಂತರ ಬಿ. ಎಂ. ಶ್ರೀ. ಪ್ರತಿಷ್ಠಾನದ ಅಧ್ಯಕ್ಷರ ನುಡಿಗಳಿಗಾಗಿ ಕಾದು ಕುಳಿತಿದ್ದ ಜನರನ್ನು ನಿರಾಸೆಗೊಳಿಸದಂತೆ, ತಮ್ಮ ವಾಕ್ಚಾತುರ್ಯದಿಂದ ಕನ್ನಡದ ಸೊಬಗನ್ನು ಮತ್ತಷ್ಟು ಸುಂದರವಾಗಿಸಿದರು. ಕನ್ನಡ ಭಾಷಿಕರೆಂದೇ ಕರೆಸಿಕೊಂಡವರು, ಕನ್ನಡಮ್ಮನಿಗೆ ಮಾಡುತ್ತಿರುವ ಭಾಷಾ ನಿರ್ಲಕ್ಷ, ಪರಭಾಷೆಯನ್ನು ಪರೋಕ್ಷವಾಗಿ ನಾವು ಬೆಳೆಸುತ್ತಿರುವ ಪರಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಹಲವಾರು ಜನಾಂಗದ ಜನರು ಇಲ್ಲಿಗೆ ಬರುತ್ತಾರೆ, ತಮ್ಮ ವ್ಯಾಪಾರ ವಹಿವಾಟುಗಳನ್ನು ಮಾಡುತ್ತಾ ನಮ್ಮ ಗ್ರಹಿಕೆಗೂ ಮೀರಿ,ತಮ್ಮ ಜೀವನಗಳನ್ನು ಕಟ್ಟಿ ಕೊಂಡು ತಮ್ಮ ಸ್ವಂತ ಹಳ್ಳಿ, ಊರುಗಳಿಗೆ ತೆರಳುತ್ತಾರೆ, ಭಾರತ ಒಂದು ಒಕ್ಕೂಟ ರಾಷ್ಟವಾದ ಕಾರಣ ವಲಸಿಗರನ್ನು ನಮ್ಮ ಕರ್ನಾಟಕಕ್ಕೆ ಬಾರದಂತೆ ತಡೆಯುವುದು ಅತ್ಯಂತ ಕಷ್ಟಕರ ಪರಿಸ್ಥಿತಿ, ಎಂದು ತಮ್ಮ ನಿರಾಸೆಯನ್ನು ಹೊರ ಹಾಕಿದರು.ಅಷ್ಟೇ ಅಲ್ಲದೆ ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಹವಾಮಾನ, ಇಲ್ಲಿನ ಭೌಗೋಳಿಕ ವ್ಯವಸ್ಥೆ ಎಲ್ಲವೂ ಅನೇಕರನ್ನು ಆಕರ್ಷಿಸಿದೆ.ಇದರಿಂದ ಅನೇಕ ವಲಸಿಗರು ಬೆಂಗಳೂರನ್ನು ಆಯ್ಕೆ ಮಾಡಿ ಕೊಂಡಿದ್ದಾರೆ. ಮತ್ತು ಇದು ಯಾವುದೊ ಒಂದು ಕಾರಣಕ್ಕೆ ಇಷ್ಟವಾಗಿ, ಹಲವಾರು ವರ್ಷಗಳ ಕಾಲ ಜನ ಇಲ್ಲೇ ವಾಸ ಇದ್ದರೂ ಕೂಡ, ಕನ್ನಡವನ್ನು ಕಲಿಯದೇ ಒಂದು ರೀತಿಯ ಅಸಡ್ಡೆ ತೋರುತ್ತಿದ್ದಾರೆ.ನಮ್ಮ ಜನರು ಯಾರ್ಯಾರು ಯಾವ ಭಾಷೆಗಳಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೋ ಆಯಾ ಭಾಷೆಗಳಲ್ಲಿಯೇ ಇಲ್ಲಿನ ಸ್ಥಳೀಯರು ಉತ್ತರ ಕೊಡುತ್ತಿದ್ದಾರೆ ಎಂಬ ಕಳವಳವನ್ನು ವ್ಯಕ್ತಪಡಿಸಿದರು. ಕನ್ನಡವನ್ನು ಉಳಿಸಿ, ಬೆಳೆಸುವ, ನಿಟ್ಟಿನಲ್ಲಿ ನಮ್ಮ ಜವಾಬ್ದಾರಿಯು ಅತ್ಯಂತ ಅನಿವಾರ್ಯವಾಗಿದೆ, ಇದು ಪ್ರತಿಯೊಂದು ಮನೆ ಮನೆಯ ಭಾಷೆಯಾಗಬೇಕೆ ಹೊರತು ವರ್ಷಕ್ಕೊಮ್ಮೆ ವೇದಿಕೆಗಳಲ್ಲಿ ಮಾಡುವ ಭಾಷಣಗಳಾಗಬಾರದು ಎನ್ನುವುದನ್ನು ಅತ್ಯಂತ ಸರಳವಾಗಿಯೂ, ಹಾಗೂ ಅತ್ಯಂತ ವಿನಯವಾಗಿಯೂ, ಪರೋಕ್ಷವಾಗಿ ಹೇಳಿದರು.ಸಾಮಾನ್ಯವಾಗಿ ಭಾಷಣಗಳೆoದರೆನೇ ಜನರು ಕಿವಿಗೊಟ್ಟು ಕೇಳದ ಈ ಕಾಲದಲ್ಲಿ, ನೆರೆದಿದ್ದ ಪ್ರತಿಯೊಬ್ಬರೂ ಒಂದೊಂದು ಮಾತುಗಳನ್ನು ಚಾಚುತಪ್ಪದೆ ಕೇಳಿಸಿ ಕೊಳ್ಳುತ್ತಿದ್ದುದ್ದು ಅವರ, ಮಾತಿನ ಶೈಲಿ, ಸ್ವಾರಸ್ಯಕರ ಘಟನೆಗಳ ಕುರಿತು, ಮಾಡಿದ ಪದಬಳಕೆ ಇವೆಲ್ಲವನ್ನು ಸಾಕ್ಷೀಕರಿಸುತ್ತಿದ್ದವು. ಸಭೆಗೆ ಶೋಭೆ ತರುವಂತಾ ನುಡಿಗಳಿಂದ ಎಲ್ಲರನ್ನು ಮೂಕ ವಿಸ್ಮಿತರನ್ನಾಗಿಸಿದ್ದವು. ಇದಾದ ನಂತರ ಹಲವಾರು ಮಕ್ಕಳ ನೃತ್ಯ ಹಾಗೂ ಕಲಾವಿದರ ಹಾಡುಗಳು ಕಾರ್ಯಕ್ರಮಕ್ಕೆ ಮುಡಿಸಿದ ಗರಿಗಳoತಿದ್ದವು. ಕಾರ್ಯಕ್ರಮದ ನಡುವೆ ಕನ್ನಡಾಂಬೆಯ ಹಾಡುಗಳಿಗೆ ಎಲ್ಲರ ದನಿಗೂಡಿದವು.ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದ ಸಮಾಧಾನ ಎಲ್ಲರ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಶ್ರೀ ವೀರಶೇಖರ ಸ್ವಾಮಿ (ಉಪಾಧ್ಯಕ್ಷ) - ವರದಿ 

ಕಾರ್ಯಕ್ರಮ ಮುಗಿದ ನಂತರ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು

Posted 14/11/2024


Saturday, November 2, 2024

ಕನ್ನಡ ರಾಜ್ಯೋತ್ಸವ - 2024

 ಶುಕ್ರವಾರ, ನವಂಬರ 1, 2024

ಕನ್ನಡ ಭವನ, ಕಾಫೀ ಬೋರ್ಡ್ ಬಡಾವಣೆ, ಕೆಂಪಾಪುರ, ಬೆಂಗಳೂರು.



ಬೆಂಗಳೂರಿನ ಕಾಫಿ ಬೋರ್ಡ್ ಬಡಾವಣೆಯ ಕನ್ನಡ ಭವನದ ಮುಂಬಾಗದಲ್ಲಿ, ಕನ್ನಡ ಸಾಹಿತ್ಯ ಪರಿಷತ್, ಬ್ಯಾಟರಾಯನಪುರ ಘಟಕದ ವತಿಯಿಂದ ಹಾಗೂ ಸ್ಥಳೀಯ ನಾಗರಿಕರ ಸಮ್ಮುಖದಲ್ಲಿ ಬೆಳಿಗ್ಗೆ 8 ಗಂಟೆಗೆ  69ನೇ ಕನ್ನಡ ರಾಜ್ಯೋತ್ಸವವನ್ನು ಧ್ವಜಾರೋಹಣದ ಮೂಲಕ ಆಚರಿಸಲಾಯಿತು.


ಪುಷ್ಪಾರ್ಚನೆ 

ಅಧ್ಯಕ್ಷ ಶ್ರೀಯುತ ರೇಣುಕಾ ಹೆಗಡೆಯವರು ಕಾರ್ಯಕ್ರಮವನ್ನು ನೆರವೇರಿಸಿದರು. ನಂತರ ಅವರು ಮಾತನಾಡುತ್ತ 1956 ನವಂಬರ್ 1 ರಂದು ಭಾಷಾವಾರು ಪ್ರಾಂತಗಳಾಗಿ  ವಿಭಜನೆಗೊಂಡು ಮೈಸೂರು ರಾಜ್ಯ ಎಂದು ಹೆಸರುಗೊಂಡು, 1973 ರಲ್ಲಿ ಕರ್ನಾಟಕ ರಾಜ್ಯ ಎಂದು ಮರು ನಾಮಕರಣ ಮಾಡಲಾಯಿತು.


ಬೆಂಗಳೂರಿನಲ್ಲಿ ಅನ್ಯ ಭಾಷಿಕರು ಬಹಳಷ್ಟು ಸಂಖ್ಯೆಯಲ್ಲಿ ನೆಲೆಸಿರುವುದರಿಂದ, ಕನ್ನಡ ಭಾಷೆಯನ್ನೂ ಕಡೆಗಣಿಸಲಾಗುತ್ತಿದೆ. ಕನ್ನಡವನ್ನು ಉಳಿಸಿ, ಬಳಸಿ, ಬೆಳೆಸಿ, ಕನ್ನಡವನ್ನೇ ಮಾತನಾಡಿ, ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪ್ರತಿಪಾದಿಸಿದರು.

ತಾಯಿ ಭುವನೇಶ್ವರಿಗೆ, ಎಲ್ಲರಿಂದ ಪುಷ್ಪಾರ್ಚನೆಯಾದ ನಂತರ ಕಾರ್ಯಕ್ರಮ ಮುಕ್ತಾಯವಾಯಿತು. 

ಕಾಫಿ ಬೋರ್ಡ್ ಬಡಾವಣೆ 

Posted 2/11/2024

Thursday, November 2, 2023

ಕನ್ನಡ ರಾಜ್ಯೋತ್ಸವ 2023 - ಕಾಫಿ ಬೋರ್ಡ್ ಬಡಾವಣೆ

 ಬುಧವಾರ, ನವಂಬರ್ 1, 2023 

ಕಾಫಿ ಬೋರ್ಡ್ ಬಡಾವಣೆ, ಕೆಂಪಾಪುರ, ಬೆಂಗಳೂರು.




ಈ ಬಾರಿಯ ರಾಜ್ಯೋತ್ಸವದ ಧ್ವಜಾರೋಹಣದ ಕಾರ್ಯಕ್ರಮ, ಕನ್ನಡ ಭವನದ ಸಾರ್ವಜನಿಕ ಗ್ರಂಥಾಲಯದ ಎದುರು ಸಂಪನ್ನ ಗೊಂಡಿತು.



ಬೆಳಿಗ್ಗೆ 8 ಗಂಟೆಗೇ, ಹಲವಾರು ಕನ್ನಡಾಭಿಮಾನಿಗಳು ಗ್ರಂಥಾಲಯದ ಎದುರು ನೆರೆದಿದ್ದು, ಸಂಭ್ರಮದ ವಾತಾರವಣ ನೆಲೆಸಿತ್ತು.




ಕನ್ನಡ ಸಾಹಿತ್ಯ ಪರಿಷತ್ , ಬ್ಯಾಟರಾಯನಪುರ ಘಟಕದ ಅದ್ಯಕ್ಷ ಶ್ರೀ ರೇಣುಕಾ ಹೆಗಡೆಯವರು ಧ್ವಜಾರೋಹಣ ಮಾಡಿ, ಕನ್ನಡ ಧ್ವಜಕ್ಕೆ ಗೌರವ ಸಮರ್ಪಣೆ  ಮಾಡಲಾಯಿತು.


ನಂತರ ನಾಡಗೀತೆ, ಜನಗಣ ಮನ ಹಾಡುಗಳನ್ನು ಸಾಮೂಹಿಕವಾಗಿ ಹಾಡಲಾಯಿತು.

ಕನ್ನಡ ದೇಶ ಭಕ್ತಿ ಗೀತೆಗಳನ್ನು ನುಡಿಸಲಾಯಿತು.


ಇನ್ನೊಮ್ಮೆ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

Posted 2/11/2023 



Tuesday, February 14, 2023

ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ - ಸಂಭ್ರಮ

 ಶನಿವಾರ, ಫೆಬ್ರವರಿ 11, 2023 

ಕಾಫಿ ಬೋರ್ಡ್ ಬಡಾವಣೆ, ಕೆಂಪಾಪುರ, ಬೆಂಗಳೂರು.


ಅದೊಂದು ಅದ್ದೂರಿಯ ಕನ್ನಡ ಸಾಹಿತ್ಯ ಪರಿಷತ್ತು , ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಕಾರ್ಯಕ್ರಮ.




ಬೆಳಿಗ್ಗೆ 8 ಗಂಟೆಗೆ ಕನ್ನಡ ತಾಯಿ ಭುವನೇಶ್ವರಿಗೆ ಪೂಜೆ ಆದ ನಂತರ ಗಣ್ಯರಿಂದ ದ್ವಜಾರೋಹಣ ನಡೆಯಿತು.


ನಂತರ ವಿವಿಧ ಸಂಘಟನೆಗಳಿಂದ ಪ್ರದರ್ಶನ, ಡೊಳ್ಳು ಕುಣಿತ, ಬೊಂಬೆಗಳಿಂದ ನ್ರತ್ಯ, ಶಾಲಾ  ಮಕ್ಕಳಿಂದ ಕವಾಯತು, ಕನ್ನಡ ಜಾಗ್ರತಿ ಮೆರವಣಿಗೆ  ನಡೆಯಿತು.




ನೆರೆದಿದ್ದ ಸರ್ವರಿಗೂ ಬೆಳಿಗ್ಗಿನ ಉಪಾಹಾರ, ಉಪ್ಪಿಟ್ಟು, ಕೇಸರಿ ಬಾತ್ .... 

ಸುಮಾರು ೧೨ ಗಂಟೆಗೆ, ಗಣ್ಯರ ಆಗಮನ, ಸಭಾ ಕಾರ್ಯಕ್ರಮ.


ಕಾಂಗ್ರೆಸ್ ಶಾಸಕ , ಮಾಜಿ ಮಂತ್ರಿ ಶ್ರೀ ಕ್ರಷ್ಣ ಬೈರೇಗೌಡ ರ ಉದ್ಘಾಟನಾ ಭಾಷಣ ರಾಜಕೀಯ ಪ್ರೇರಿತ ವಾಗಿತ್ತು. ಕೇಂದ್ರ ಸರಕಾರದಿಂದ ಹಿಂದಿ ಭಾಷೆ ಹೇರಿಕೆ, ಚರಿತ್ರೆಯನ್ನು ತಿರುಚುವಿಕೆ, ಭಿನ್ನತೆಯಲ್ಲಿ ಏಕತೆಯನ್ನು ಕಾಣುವ ಮನಸ್ತಿತಿ ಇಲ್ಲದಿರುವುದು, ಇತ್ಯಾದಿ, ಇತ್ಯಾದಿ ....

ಸಮ್ಮೇಳನದ ಅಧ್ಯಕ್ಷರಾದ  ಡಾ. ಸಿ ಅರ್ ಚಂದ್ರಶೇಖರ್, ಖ್ಯಾತ ಮನೋ ವೈದ್ಯರು ಹಾಗೂ ವೈದ್ಯ ಸಾಹಿತಿಗಳು, ತಮ್ಮ ಭಾಷಣದಲ್ಲಿ ಕನ್ನಡಕ್ಕೆ, ಕನ್ನಡ ಸಾಹಿತ್ಯಕ್ಕೆ ಇರುವ ಸಂಕಟಗಳು,  ಅದರ ಪರಿಹಾರಕ್ಕೆ ಸೂಕ್ತ ಸಲಹೆಗಳನ್ನೂ ನೀಡಿದರು.


ಮಧ್ಯಾಹ್ನದ ನಂತರ ಕುವೆಂಪು ವಿಚಾರ ಗೋಷ್ಠಿ, ಮಹಿಳಾ ಕವಿ ಗೋಷ್ಠಿ,  ಡಾ. ನಾ ಸೋಮೇಶ್ವರ ಅಧ್ಯಕ್ಷತೆಯಲ್ಲಿ ಚಿಂತನಾ ಗೋಷ್ಠಿ ನಡೆಯಿತು.


ಸಂಜೆಯ ಸಮಾರೋಪ ಕಾರ್ಯಕ್ರಮದಲ್ಲಿ ಸನ್ಮಾನ, ಪ್ರತಿಭಾ ಪುರಸ್ಕಾರ, ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.

ಸಂವೇದನಾ ಕ್ರಿಯೇಷನ್ಸ್ ಮತ್ತು ತಂಡದವರಿಂದ "ಶ್ರೀ ಕ್ರಷ್ಣ ಸಂಧಾನ" ನಗೆ ನಾಟಕ ಸಂಪನ್ನ ಗೊಂಡಿತು.

ಬರೆದಿರುವುದು ಫೆಬ್ರುವರಿ 15, 2023 




Tuesday, November 29, 2022

ರಾಜ್ಯೋತ್ಸವ 2022 - ಭುವನೇಶ್ವರಿನಗರ

 ಭಾನುವಾರ, 27 ನವಂಬರ 2022 

ಭುವನೇಶ್ವರಿನಗರ, ಹೆಬ್ಬಾಳ , ಬೆಂಗಳೂರು.



ಆಟೋ ಚಾಲಕರ ಸಂಘದಿಂದ ಕನ್ನಡ ರಾಜ್ಯೋತ್ಸವದ ಆಚರಣೆ.

ಭುವನೇಶ್ವರಿನಗರದ ಮುಖ್ಯ ರಸ್ತೆಯಲ್ಲಿ ಸಂಭ್ರಮ, ಎಲ್ಲಾ ಆಟೋಗಳಿಗೆ ಹಾರ, ರಸ್ತೆಯನ್ನು ತಳಿರು ತೋರಣಗಳಿಂದ ಅಲಂಕಾರ, ಕನ್ನಡದ ಧ್ವಜ ಎಲ್ಲೆಲ್ಲೂ ಹಾರಾಟ, 

ಜನರ ಗಮನ ಸೆಳೆಯಲು ಬೆಳಿಗ್ಗೆಯಿಂದ ಮೈಕಾಸುರನ ಆರ್ಭಟ, ಕನ್ನಡ ಹಾಡುಗಳ ಭೋರ್ಗರೆತ....


ನಮ್ಮ ಮಡದಿ ಅವರೊಡನೆ ಸಂವಾದ, ವೀಡಿಯೊ ಚಿತ್ರೀಕರಣ .....

ಆಟೋ ಚಾಲಕರಲ್ಲಿ ಖುಷಿಯ ನಗೆ, ದೊಡ್ಡ ಪಾತ್ರೆಯಲ್ಲಿ ತಯಾರಾದ ಊಟ/ಉಪಹಾರ...

ಒಂದು ದಿನದ/ಹೊತ್ತಿನ  ಸಂಭ್ರಮಾಚರಣೆ....

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಬರೆದಿರುವುದು 30/11/2022 

Tuesday, November 1, 2022

ಕನ್ನಡ ರಾಜ್ಯೋತ್ಸವ - 2022

 ಮಂಗಳವಾರ, ನವಂಬರ 1, 2022 

ಕಾಫಿ ಬೋರ್ಡ್ ಉದ್ಯಾನವನ, ಕೆಂಪಾಪುರ, ಬೆಂಗಳೂರು.


ವರ್ಷಂ ಪ್ರತಿಯಂತೆ ಕಾಫಿ ಬೋರ್ಡ್ ಉದ್ಯಾನವನದ ಕನ್ನಡ ಕಟ್ಟೆ ಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬ್ಯಾಟರಾಯನಪುರ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವಾಗಿ ಧ್ವಜಾರೋಹಣ ಮತ್ತು ಕನ್ನಡ ಹಾಡುಗಳ ಗಾಯನ ಸಂಪನ್ನಗೊಂಡಿತು.


ಅಭಿಮಾನಿ ಕನ್ನಡಿಗರು ಹಲವಾರು ಸಂಖ್ಯೆಯಲ್ಲಿ ಕನ್ನಡ ಧ್ವಜಕ್ಕೆ ಗೌರವ ಸಲ್ಲಿಸಿ ಕನ್ನಡ ನಾಡ ಗೀತೆಯನ್ನು ಸಾಮೂಹಿಕವಾಗಿ ಹಾಡಿ ಕನ್ನಡತನವನ್ನು ಮೆರೆದರು.


ಕನ್ನಡವನ್ನು "ಬಳಸಿ, ಬೆಳೆಸಿ, ಉಳಿಸಿ, ಕಲಿಸಿ " ಎಂಬ ಪ್ರತಿಜ್ಞಾ ಸ್ವೀಕಾರವನ್ನು ಮಾಡಿಸಲಾಯಿತು.

ಘಟಕದ ಅಧ್ಯಕ್ಷ ರೇಣುಕಾ ಹೆಗಡೆಯವರು ಕನ್ನಡಿಗರಲ್ಲೇ ಕನ್ನಡದ ಅಭಿಮಾನ ಕಡಿಮೆಯಾಗುತ್ತಿರುವುದಕ್ಕೆ ಕಳಕಳಿ ವ್ಯಕ್ತ ಪಡಿಸಿದರು. ಕನ್ನಡದಲ್ಲೇ ಮಾತನಾಡಿ, ಕನ್ನಡವನ್ನು ಕಲಿಸಿ, ಎಂಬ ಕಿವಿಮಾತು ಹೇಳಿದರು.


ಸಭಿಕರಲ್ಲಿಯ ಆಸಕ್ತರು ಕನ್ನಡ ಗೀತೆಗಳನ್ನು ಹಾಡಿ, ಸಿಹಿ ವಿತರಣೆಯೊಂದಿಗೆ ಕಾರ್ಯಕ್ರಮ ಮಕ್ತಾಯ ಗೊಂಡಿತು.

ಜಯ್ ಭುವನೇಶ್ವರಿ, ಜಯ್ ಕರ್ನಾಟಕ, ಜಯ್ ಕನ್ನಡ....

ಬರೆದಿರುವುದು 2/1/2022 


Friday, October 28, 2022

ಕೋಟಿ ಕಂಠ ಗಾಯನ - (CRORE PEOPLE SINGING)

 ಶುಕ್ರವಾರ, ಅಕ್ಟೋಬರ್ 28, 2022 

ಕೋಟಿ ಕಂಠ ಗಾಯನ - 














ಕನ್ನಡ ರಾಜ್ಯೋತ್ಸವದ ಭಾಗವಾಗಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪರಿಕಲ್ಪನೆ.


ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ, ಏಕ ಕಾಲದಲ್ಲಿ ಕನ್ನಡ ಏಳು ಹಾಡುಗಳನ್ನು ಹಾಡುವಿಕೆ.
ಅಕ್ಟೋಬರ್ 28, ಶುಕ್ರವಾರ, ಬೆಳಿಗ್ಗೆ 11 ಗಂಟೆಗೆ ಏಕ ಕಾಲದಲ್ಲಿ ಗಾಯನ.

ನಾವೂ ಅರ್.ಟಿ. ನಗರದ ತರಳಬಾಳು ಕೇಂದ್ರದ ಮುಂಭಾಗದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು.

ಮಹಿಳೆಯರು ಹಳದಿ ಸೀರೆ ಮತ್ತು ಕೆಂಪು ರವಕೆ ಧರಿಸಿ, ಪುರುಷರು ಬಿಳಿ ವಸ್ತ್ರವನ್ನೂ ಧರಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದ್ದರು.
ರಾಜ್ಯ ಸಭೆಯ ಸದಸ್ಯ ಡಾ ವ್ಯ್ ನಾರಾಯಣ ಸ್ವಾಮಿಯವರು ಉಪಸ್ಥಿತರಿದ್ದು, ಎಲ್ಲರಿಗೂ ಸಿಹಿಯನ್ನು ಹಂಚಲಾಯಿತು.
ಬರೆದಿರುವುದು 29/10/2022