ಶನಿವಾರ, ಜುಲೈ 4, 2026
ತರಳಬಾಳು ಕೇಂದ್ರ, ಗ್ರಂಥಾಲಯ, ಆರ್. ಟಿ. ನಗರ, ಬೆಂಗಳೂರು.
ಆರ್. ಟಿ ನಗರದ "ನಗೆ ಕೂಟ" ದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮಕ್ಕೆ ಮೆರುಗನ್ನು ತಂದಿತ್ತು.
MEMORIES OF BIRTHIMANE,BIRTHDAYS, POOJA, CELEBRATIONS, FESTIVALS, VISITS, DRAMA, MUSIC, YAKSHAGANA, GET-TOGETHERS, WEDDING ENGAGEMENTS, WEDDINGS, WEDDING ANNIVERSARY, BRAHMOPADESHA, NAMAKARANA, SEEMANTHA, BOOK RELEASE, BOOK REVIEW, AND SHRADDHANJALI....
ಶನಿವಾರ, ಜುಲೈ 4, 2026
ತರಳಬಾಳು ಕೇಂದ್ರ, ಗ್ರಂಥಾಲಯ, ಆರ್. ಟಿ. ನಗರ, ಬೆಂಗಳೂರು.
ಶನಿವಾರ. ಜುಲೈ 4, 2026
ಇಂದು ಹಿನ್ನೀರ ಓದುಗರ ಒಂದು ಬೈಠಕ್ ಕಿಟ್ಟಣ್ಣನ ಮನೆಯ ಲೈಬ್ರೆರಿಯಲ್ಲಿ ನಡೆಯಿತು. ಬಹಳ ತಿಂಗಳುಗಳ ನಂತರ ನಡೆದ ಬೈಠಕ್ ಇದು. ನಾವೊಂದು ಏಳೆಂಟು ಜನ ಸೇರಿದ್ದೆವು. ವಿಭಾ ಒಂದು ಐಸ್ ಬ್ರೇಕ್ ಆಕ್ಟಿವಿಟಿ ಮಾಡಿಸಿದ ನಂತರ ನಾವು ನಮಗೆ ಬೇಕಾದ ಪುಸ್ತಕದ ಓದಿನಲ್ಲಿ ತೊಡಗಿಕೊಂಡೆವು. ನಾನು ಕಳೆದ ಹೊಂಗಿರಣೋತ್ಸವದಲ್ಲಿ ಖರೀದಿಸಿದ್ದ ಆದರೆ ಇತ್ತೀಚೆಗೆ ಓದಲು ಪ್ರಾರಂಭಿಸಿದ್ದ ಕರ್ಜಗಿಯವರ “ಈಶಾವಾಸ್ಯ ಉಪನಿಷತ್" ಪುಸ್ತಕವನ್ನು ಓದುವುದರಲ್ಲಿ ತೊಡಗಿಕೊಂಡೆ. ನಾನಿನ್ನೂ ಅದರ ಪೀಠಿಕಾ ಭಾಗವನ್ನು ಓದುತ್ತಿದ್ದೇನೆ ಅಷ್ಟೇ! ಪುಸ್ತಕದ ಪೂರ್ಣ ಒಳಗಿನ್ನೂ ಹೋಗಿಲ್ಲ. ಈ ವೇದ, ಅರಣ್ಯಕ, ಉಪನಿಷತ್ ಬಗ್ಗೆ ಓದಿ ಜೀರ್ಣಿಸಿಕೊಳ್ಳುವುದು ನನಗೆ ಸ್ವಲ್ಪ ಕಷ್ಟ. ಒಂದೊಂದು ಸಲ ಕೆಲವು ಭಾಗಗಳನ್ನು ಎರಡೆರಡು ಸಲ ಓದಬೇಕಾದ ಅಗತ್ಯ ನನಗೆ ಬರುತ್ತದೆ. ಆದರೆ ಅಂತಹ ಓದಿನಲ್ಲೂ ಏನೋ ಸುಖವಿದೆ! ಅದರಲ್ಲಿ ಬರೆದಿರುವ ಎಷ್ಟೋ ವಿಷಯಗಳು ಈ ವಯಸ್ಸಿನಲ್ಲಿ ತುಂಬಾ ಕನೆಕ್ಟ್ ಆಗುತ್ತವೆ. ನಮ್ಮೊಳಗಿರುವ ಗೊಂದಲಗಳಿಗೆ ಅಲ್ಲೆಲ್ಲೋ ಉತ್ತರ ಸಿಗುತ್ತದೆ.
ನಮ್ಮ ಸನಾತನ ಪರಂಪರೆಯ ತತ್ವಮಸಿ - ಅಂದರೆ know thyself - ಇದು ಹೇಳುವುದು ಎಷ್ಟು ಸುಲಭವೋ ಸಾಧಿಸುವುದು ಅಷ್ಟೇ ಕಷ್ಟ ಎನ್ನುವ ಅರಿವು ಈ ಪುಸ್ತಕ ಮೂಡಿಸುತ್ತದೆ. ಆ ಪುಸ್ತಕದಲ್ಲೊಂದು ಸಾಲಿದೆ " ಬಹಳಷ್ಟು ಜನ ತೊಳಲಾಟದಲ್ಲೇ ಆಯುಷ್ಯ ನೀಗುತ್ತಾರೆ”. ಎಷ್ಟು ಸತ್ಯದ ಮಾತಲ್ಲವೆ? ಅಲ್ಲಿ ಇನ್ನೂ ಒಂದು ವಿಷಯ ಬರುತ್ತದೆ “ಧರ್ಮದ ಹುಟ್ಟಿಗೆ ಭೀತಿ ಎಷ್ಟು ಕಾರಣವೋ, ಸೃಷ್ಟಿಯು ಮನುಷ್ಯನಲ್ಲಿ ಪ್ರಚೋದಿಸಿದ ಕುತೂಹಲವೂ ಅಷ್ಟೇ ಕಾರಣ”. ಒಪ್ಪುವ ಮಾತು ತಾನೆ? ನನ್ನನ್ನು ತಟ್ಟಿದ ಇನ್ನೊಂದು ಸಾಲೆಂದರೆ" ಸತ್ಯದ ಅನ್ವೇಷಣೆ ವಸ್ತುನಿಷ್ಠವಾದಾಗ ವಿಜ್ಞಾನವಾಯಿತು, ಭಾವನಿಷ್ಠವಾದಾಗ ಸಾಹಿತ್ಯ ಮತ್ತು ಕಲೆಯಾಯಿತು….” ಈ ಪುಸ್ತಕದ ಪೀಠಿಕೆಯಲ್ಲಿ ವೇದದ ಉಗಮ, ವೇದದ ಮೂಲ ಉದ್ದೇಶ, ಜೀವನದ ಅರ್ಥ, ನಾನು ಯಾರು, ನಾನೇಕೆ ಇಲ್ಲಿಗೆ ಬಂದಿದ್ದೇನೆ ಎನ್ನುವಂತಹ ತಾತ್ವಿಕ ವಿಷಯಗಳು, ಸಂಹಿತೆಗಳು, ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ತುಗಳ ಬಗ್ಗೆ ಸರಳವಾದ ವಿವರಣೆ ಇದೆ.
ವೇದೋಪನಿಷತ್ತುಗಳ ಬಗ್ಗೆ ಅಂತಹ ತಿಳುವಳಿಕೆ ಇಲ್ಲದ ನನ್ನಂತಹವರೂ ಸಹಾ ಅವುಗಳ ಕುರಿತು ಅರಿಯುವಂತೆ, ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಡಲು ಈ ಕೃತಿ ಸಹಾಯಕವಾಗಿದೆ. ಇದರಲ್ಲಿ ದೃಷ್ಟಾಂತ ಕಥೆಗಳಿವೆ, ಪ್ರಸಂಗ - ಪ್ರಹಸನಗಳಿವೆ. ಇದರಿಂದ ಓದು ಸರಳವಾಗುತ್ತದೆ. ವಿಷಯವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತದೆ. ಹುಮ್ಮಸ್ಸಿನಲ್ಲಿ ಈ ಪುಸ್ತಕವನ್ನು ಓದಲು ಪ್ರಾರಂಭಿಸಿ ‘ಪ್ರಾಜ್ಞ’ಳಾಗುವ ಪ್ರಯತ್ನ ಮಾಡುತ್ತಿದ್ದೇನೆ. ಇದೊಂದು ಯಶಸ್ವಿ ಓದಾಗಬಹುದಲ್ಲವೆ?
Posted 6/7/2026
Sunday, June 21, 2026
Dubai Style Creation Hall
Thursdaym July 2, 2026
Sunandi OldageCare Centre, KodigeHalli, Bengaluru
Yoga Jayaram, who lives nearby, joined me in today's Bhajan and Satsang at Sunandi Oldage care.
June 28, 2026
“ಭಾವನಾತ್ಮಕ ಕುಸಿತ"
ನನಗೆ ಪ್ರತಿದಿನ ದಿನಪತ್ರಿಕೆಯ ಅಂಕಣ, ವಾರಪತ್ರಿಕೆಯ ಲೇಖನ ಹಾಗೂ ಫೇಸ್ಬುಕ್ ವಾಲ್ ನಲ್ಲಿ ಬರುವ ಲೇಖನಗಳನ್ನು ಓದುವ ಅಭ್ಯಾಸವಿದೆ. ಮೊನ್ನೆ ಯಾವುದೋ ಲೇಖನ ಓದುವಾಗ “ಭಾವನಾತ್ಮಕ ಕುಸಿತ" ಎನ್ನುವ ಪದ ಪ್ರಯೋಗವನ್ನು ನೋಡಿದೆ. ಆ ಪದ ನನ್ನ ಮನಸ್ಸನ್ನು ತಟ್ಟಿ ಬಿಟ್ಟಿತು. ಎಷ್ಟು ಸರಳ ಪದವದು! ಆದರೆ ಎಷ್ಟು ಭಾವನೆಗಳನ್ನು ವ್ಯಕ್ತಪಡಿಸುತ್ತದೆ.
ಎಷ್ಟೇ " ಗಟ್ಟಿ ಮನಸ್ಸಿನ” ವ್ಯಕ್ತಿಯಾದರೂ ಕೂಡಾ “ಭಾವನಾತ್ಮಕವಾಗಿ" ಒಳಗೊಳಗೆ " ಕಲುಕ” ಪಟ್ಟವರು ಇರದೇ ಇರಲು ಸಾಧ್ಯವಿಲ್ಲ. ಎಂತಹುದೇ ವೃತ್ತಿಪರ ಸವಾಲನ್ನು ಧೈರ್ಯದಿಂದ ಎದುರಿಸಬಹುದು; ಆದರೆ ವೈಯಕ್ತಿಕ ಸಂಬಂಧಗಳನ್ನು ನಿರ್ವಹಿಸುವಾಗ ಎದುರಿಸುವ ಸವಾಲುಗಳು ಎಂತಹವರನ್ನೂ ಅಲುಗಾಡಿಸುತ್ತದೆ. ಅಂತಹ ಸಮಯದಲ್ಲಿ ಸಹಜವಾಗಿ ಪ್ರತಿಯೊಬ್ಬರೂ ಭಾವನಾತ್ಮಕವಾಗಿ ದುರ್ಬಲರಾಗುತ್ತಾರೆ.
ಸಂಬಂಧಗಳ ನಿರ್ವಹಣೆಯ ವಿಷಯ ಬಂದಾಗ ಪ್ರತಿಯೊಬ್ಬರೂ ಭಾವನಾತ್ಮಕ ಒತ್ತಡಕ್ಕೆ ಒಳಗಾಗುತ್ತಾರೆ. ಅನ್ನಲೂ ಆಗದೆ, ಅನುಭವಿಸಲೂ ಆಗದೆ ‘ಬಿಸಿ ತುಪ್ಪವನ್ನು ಗಂಟಲಲ್ಲಿ ಇಟ್ಟುಕೊಂಡಂತೆ’ ಅನಿಸಿಕೆ/ಅಭಿಪ್ರಾಯವನ್ನು ವ್ಯಕ್ತಪಡಿಸಲಾಗದೆ ಹಾಗೆಯೇ ಇಟ್ಟುಕೊಳ್ಳುವ ಸಂಕಷ್ಟಕ್ಕೆ ಒಳಗಾಗುತ್ತಾರೆ. ಪ್ರೀತಿಗೆ ಸರಿಯಾದ ಸ್ಪಂದನೆ ಸಿಗದಿದ್ದಾಗಲೂ ಅದು ಒಳಗಿಂದೊಳಗೆ ಭಾವುಕ ವ್ಯಕ್ತಿಗಳ ಮನಸ್ಸಿನ ತಿಳಿಗೊಳವನ್ನು ಕಲುಕುತ್ತದೆ. ಅಂತಹ ಸಮಯದಲ್ಲಿ ಕಾಣುವುದು ಎಲ್ಲವೂ “ ಕಾಮಾಲೆ ಬಂದವನಿಗೆ ಪ್ರಪಂಚವೆಲ್ಲಾ ಹಳದಿಯಾಗಿ ಕಾಣುವಂತೆ" ನಕಾರಾತ್ಮಕವಾಗಿ ಕಾಣುತ್ತದೆ. ‘ಭಾವನಾತ್ಮಕ ಕುಸಿತ’ ಅಂತಹ ಸಂದರ್ಭದಲ್ಲಿ ಅನುಭವಕ್ಕೆ ಬರುತ್ತದೆ. ಅದು ಮಾನಸಿಕ ಬಳಲುವಿಕೆಯೊಂದಿಗೆ ದೈಹಿಕ ಬಳಲುವಿಕೆಯನ್ನು ಉಂಟು ಮಾಡುತ್ತದೆ. ಯಾವ ಕೆಲಸವನ್ನು ಮಾಡುವ ಉತ್ಸಾಹ ಮೂಡದೆ ನಿರುತ್ಸಾಹ ಕಾಡುತ್ತದೆ. ತಾನು ‘ನಿಷ್ಪ್ರಯೋಜಕ’ ಎನ್ನುವ ಭಾವನೆ ಬರುತ್ತದೆ. ಕೋಪ, ಕಿರಿಕಿರಿಯ ಭಾವಗಳು ಉದಿಸುತ್ತವೆ. ಜಗತ್ತನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ಸಂಬಂಧಗಳ ಸಹ್ಯತೆ ಕಡಿಮೆಯಾಗುತ್ತದೆ. ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ.
ನಾವು ಅದೇ ‘ವಲಯ’ದೊಳಗೆ ಮುಂದುವರಿಯಬಾರದು. ಅದರಿಂದ ಹೊರಬರಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು. ಪ್ರೀತಿಪಾತ್ರರೊಡನೆ ಹೆಚ್ಚಿನ ಕಾಲ ಕಳೆಯಬೇಕು. ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬರ ಒತ್ತಡ ನಿರ್ವಹಣೆಯ ಸಾಮರ್ಥ್ಯ ಬೇರೆ ಬೇರೆ ಇರುವ ಕಾರಣ ಸಮಸ್ಯೆ ತೀವ್ರವಾಗಿದೆ ಎಂದೆನಿಸಿದಾಗ ವೈದ್ಯಕೀಯ ನೆರವು ಪಡೆಯಬೇಕಾಗುತ್ತದೆ. “ಭಾವನಾತ್ಮಕ ಕುಸಿತದ” ಅನುಭವವಾದಾಗ ಧೃತಿಗೆಡದೆ ಅದನ್ನು ನಿರ್ವಹಿಸಬೇಕು. ಬದುಕು ಬಂದಂತೆ ಸ್ವೀಕರಿಸುವುದು ಬುದ್ಧಿವಂತರ ಲಕ್ಷಣವಲ್ಲವೆ?!
Posted 29/6/2026
Sunday, June 28, 2026
Sri Convention Hall, Bhuvaneshwarinagara, Bengaluru
General body meeting and the Annual Day program of Bhuvaneshwari Nagara Nagarikara Seva Samithi (BNNSS) took place at the above venue with large number of members present.
Friday, June 26, 2026
Mara Residences, C V Raman Nagara, Bengaluru
Mom's sister Vijayalakshmi and her husband Ramachandra Bhat were at home, it was time to visit their son Sathosh and daughter-in-law Asshwini in their home.
Thursday, June 25, 2026
Sunandi Oldage Care, KodigeHalli, Bengaluru.
Another divine session of Devotional songs and Naamasmarane took place with residents of Sunandi Oldage Care for soothing their body and Mind.
Saturday, June 20, 2026
Bengaluru Cafe, Sampige Road, Malleshwara, Bengaluru
After some shopping at Malleshwara, we proceeded to tha market-like restaurant, Bengaluru Cafe,