Saturday, February 14, 2026

ARCHANA MANJUNATH - SHRADDHANJALI

 Saturday, February 14, 2026

Majunatha Holla, a relation and a well wisher, went through agonising days with his daughter Archana, who was suffering with ALS dicease for last three years.


That’s really sad to hear… Archana Manjunath battled sclerosis for three years, and passing away on January 31st must be heartbreaking for her family and friends. Losing someone after such a long illness leaves a deep void — she must have shown so much courage through it all.

Manjunath's message last month when Archana was on her death bed:

Archana's conversation with me. Search screen of TV is being used as an alphabet chart. 

To get one sentence , she has to blink her eyes for each character and line. 

She knows that her days are numbered, but not ready to go.

After bravely battling scleroderma for three years, she left us on January 31st. Her strength, grace, and gentle spirit will always be remembered. Heartfelt condolences to her family and loved ones. May her soul rest in peace. 🌹


There was grand lunch at Manjunath's House, Coffee board Layout as Shraddhanjali, which I attended and condoled the family.

May her Soul Rest in Peace....

Om Shanthi....


Posted 14/2/2026



Friday, February 13, 2026

BHAJAN/SATSANG AT SUNANDI - 49

 Thursday, February 12, 2026

Sunandi Holistic Eldercare, KodigeHalli, Bengaluru.

Another divine session of Bahjane to residents of ElderCare centtre was conducted .




Jayaram Suvarna was a special volunter for Thursday Bhajane and he was present today and actively participated.




From Bharathi, Admin of Sunandi

Hi Sir, deepest gratitude for yesterday bhajans were very soulful with mangalarathi and encouraging all the elders to sing. Seeing them so involved in bhajans and Satsang sessions. Thanks for your contribution Sairam! @Somayaji Jayarama 🙏🏻 and Ramakrishna Bhat.


There was Upanyasa about King Nahusha, who was very proud and headstrong, and how he had face the end, Moral of the story - Dont be proud.... 

Aarthi was done, Vibhoothi was given to all, and prasada was distributed.

Loka Samastha Sukhino Bhavanthu.....


Posted 13/2/2026










Thursday, February 12, 2026

MADDURU TIFFANYS - RESTAURANT

 Wednesday, February 11, 2026

Madduru, Karnataka



On the way to Mysuru, 90 Km from Bengaluru, you srop over at a place called Madduru, at "MADDURU TIFFANY'S",  for very tasty, Maddur Vade.
That crispy, flaky south Indian snack.



Almost everyone, on the way to Mysuru, stops over at this place, to taste some Vade, made of Rava, Rice flour, Onion, green chillies, curry leaves, coriandor leaves, ginger, salt, made into paste and deep fried.



Well decorated interiors, ample space for parking and polite and smiling hostess are positive features of the restaurant.

Spent about half hour and proceeded to Mysuru.


Posted 13/2/2026








VISIT HOME - UDAYKUMAR /SAVITHRI

 Wednesday, February 11, 2026

Prakruthi Prem Apartment, Vijayanagara, Mysuru..



UdayaKumar Savithri have been close family friends since the time of our Dubai days.

They were actively participating in Dubai Brahmana Samaja in all programs, and Sugama Bhajane group.



For last one year, they are relocated in Mysuru and living in a beautiful apartment in the 5th floor, having lot of friends.


Udayakumar is a good singer and participating in Sugama Sangeeth programs and Savithri is fun loving, active in social circles and good speaker.


We spent more than an hour, on our way back from Manohara Rao's mother's Vaikuntha Samaradhane at Sri Krishna Dhama.

Sudhaker Rao Pejavar, Latha from Bengaluru

Krishnaraja Tantry, Sulatha from Udupi,

Jayarama Somayaji, Nalini from Bengaluru

Udaykumar, Savithri at Mysuru (Host)

It was nice meeting old friends from Dubai and now settled back in India.

God Bless All.


Posted 12/2/2026







Tuesday, February 10, 2026

ಅಲರ್ಜಿಯ ವೃತ್ತಾಂತ! - SHOBHA SOMAYAJI

 Tuesday. February 10, 2026


ನನಗೆ ಅಲರ್ಜಿ ಎಲ್ಲಾ ಆಗುವುದು ಬಹಳ ಕಡಿಮೆ. ಉಳಿದವರಿಗೆ ಆದ ಅಲರ್ಜಿಯನ್ನು ನೋಡಿ ನಾನು ಅನೇಕ ಸಂದರ್ಭಗಳಲ್ಲಿ ಮರುಕ ಪಟ್ಟಿದ್ದು ಇದೆ. 


ಅಲರ್ಜಿಗೆ ಸಡನ್ ಆಗಿ ನನ್ನ ನೆನಪಾಯಿತೋ ಏನೋ? ಬಂದು ನನ್ನನ್ನು ಆವರಿಸಿಯೇ ಬಿಟ್ಟಿತು ನೋಡಿ! ಕಳೆದ ಮಂಗಳವಾರ ಬೆಳಿಗ್ಗೆ ಏಳುವಾಗ ನನ್ನ ಮೂಗು, ತುಟಿಗಳು ಸ್ವಲ್ಪ ಬಿರುಸಾಗಿದ್ದವು ಹಾಗೂ ಅವುಗಳ ಸುತ್ತಲಿನ ಪ್ರದೇಶ ಕೆಂಪಗಾಗಿತ್ತು. ಮೇಲ್ತುಟಿಯ ಒಂದು ಭಾಗ ಸ್ವಲ್ಪ ಊದಿತ್ತು. ಇದೇನಪ್ಪಾ ಎಂದು ನನ್ನ ‘ಅಂದದ’ ಫೋಟೊ ತೆಗೆದು ನನ್ನ ಡಾಕ್ಟರ್ ಸೊಸೆಗೆ ಕಳಿಸಿದೆ. “ಅಲರ್ಜಿಯ ತರಹ ಕಾಣಿಸುತ್ತದೆ; ಒಂದು ಒಕಾಸೆಟ್ ಮಾತ್ರೆ ತಗೊಳ್ಳಿ” ಎಂದು ಅವಳಿಂದ ಸಲಹೆ ಬಂದ ಮೇಲೆ ಮಧ್ಯಾಹ್ನ ಒಂದು ಮಾತ್ರೆ ತೆಗೆದುಕೊಂಡು ರೆಸ್ಟ್ ಮಾಡಿದೆ. ಸಾಯಂಕಾಲ ಸೂರ್ಯಾಸ್ತ ನೋಡಲು ಕಾರಿನಲ್ಲಿ ಒಂದು ಪುಟ್ಟ ತಿರುಗಾಟ ಮಾಡಿಕೊಂಡು ಬಂದ ನಂತರ ಅಲರ್ಜಿ ಹೆಚ್ಚಿದ ಹಾಗೆ ಕಂಡಿತು. ನಾನೇ ಡಾಕ್ಟರ್ ಆಗಿ ಮತ್ತೊಂದು ಮಾತ್ರೆ ತಗೊಂಡು ಮಲಗಿದೆ. ರಾತ್ರಿ ನಿದ್ರೆ ಅಷ್ಟೇನೂ ಹಿತಕರವಾಗಿರಲಿಲ್ಲ. ಮುಖ ತುಂಬಾ ಬಾಧಿಸುತ್ತಿತ್ತು. ಭಾರವೆನಿಸುತ್ತಿದ್ದ ಮುಖವನ್ನು ಹೊತ್ತು ಬೆಳಿಗ್ಗೆ ಎದ್ದ ನಾನು ಮುಖ ಮಾರ್ಜನ ಮಾಡುತ್ತಾ ಕನ್ನಡಿಯಲ್ಲಿ ನೋಡಿಕೊಂಡರೆ ಯಾವುದೋ ‘ಏಲಿಯೆನ್’ ಅನ್ನು ನೋಡಿದ ಹಾಗಾಯಿತು. ನನ್ನ ಗುರುತು ನನಗೇ ಸಿಗದೆ ಕಂಗಾಲಾದೆ. ಕೋಣೆಯಿಂದ ಹೊರ ಬಂದ ನನ್ನ ಗುರುತು ನಮ್ಮ ಶಂಕರಿಗೂ ಸಿಗದಷ್ಟು ಮುಖ-ಮೂತಿ ಊದಿಕೊಂಡಿತ್ತು. ತುಟಿಯಂತೂ ಊದಿ ನೇತಾಡುತ್ತಿತ್ತು. ಮುಖದಲ್ಲಿ ಊದದೇ ಇದ್ದ ಯಾವ ಭಾಗವೂ ಇರಲಿಲ್ಲ. ಯಾರದ್ದೋ ಎಕ್ಸ್ಟ್ರಾ ಮುಖವನ್ನು ನನ್ನ ಮುಖಕ್ಕೆ ಫಿಕ್ಸ್ ಮಾಡಿದ ಹಾಗಾಗಿತ್ತು. ಪುನಃ ಸೊಸೆಗೆ ಫೋಟೊ ಕಳಿಸಿದಾಗ 'ಕೂಡಲೇ ಲೋಕಲ್ ಡಾಕ್ಟರ್ ಹತ್ತಿರ ಹೋಗಿ' ಎಂದು ಹೇಳಿದಳು. ಬೆಳಗಿನ ಹತ್ತೂವರೆಯ ಸುಮಾರಿಗೆ ಸಾಗರದ ಡಾ. ದೀಪಕ್ ಹತ್ತಿರ ಹೋದಾಗ ಅಲರ್ಜಿ ಇಂಜೆಕ್ಷನ್ ಚುಚ್ಚಿ, ಒಂದು ಕೋರ್ಸ್ ಮಾತ್ರೆ ಕೊಟ್ಟರು. ನಂತರದಲ್ಲಿ ಊತ ಸಾಕಷ್ಟು ಇಳಿದರೂ ಅಲರ್ಜಿಯ ‘ಆಫ್ಟರ್ ಇಫೆಕ್ಟ್’ ಜೋರಾಗಿಯೇ ಇತ್ತು. ಮುಖವಂತೂ ಕೆಂಪು ಮೂತಿಯ ಮಂಗನ ತರಹ ಆಗಿತ್ತು. ತದನಂತರದಲ್ಲಿ ಮುಖದಿಂದ ಅಲರ್ಜಿ ಮೈಕೈಗೆಲ್ಲಾ ರವಾನೆ ಆಯ್ತು. ಹಾಗೆ ಮಾಡದಿದ್ದರೆ ಒಂದೇ ದೇಹದ ಉಳಿದ ಭಾಗಗಳಿಗೆ ಬೇಜಾರಾಗಬಹುದೆಂಬ ಯೋಚನೆ ಅಲರ್ಜಿಯದ್ದೋ ಏನೋ? ಅಲ್ಲೆಲ್ಲಾ ಆದದ್ದು ಊತಕ್ಕಿಂತ ಹೆಚ್ಚು ಕೆಂಪು ದದ್ದುಗಳು, ರ್ಯಾಶಸ್ ಹಾಗೂ ಅದರೊಡನೆಯ ಅದ್ಭುತವಾದ ತುರಿಕೆ! ಎಲ್ಲಾದರೂ ಒಂದು ಕಡೆ ಮುಟ್ಟಿದರೆ ತುರಿಸುತ್ತಾ ಇರುವ ಎನ್ನುವ ಭಾವ. ತುರಿಸುವ ಪ್ರಕ್ರಿಯೆ ಎಷ್ಟು ರಗಳೆ ಕೊಡುತ್ತದೋ ಅಷ್ಟೇ ಹಿತವನ್ನೂ ಕೊಡುತ್ತದೆ. ಅಲ್ಲವೆ?!

ಈ ಅಲರ್ಜಿಯ ಕಾಲದಲ್ಲಿ ನಾನೊಂದಿಷ್ಟು ದಣಿದೆ! ನನ್ನ ಸಹಜವಾದ ಮಲಗುವ ಭಂಗಿಯಲ್ಲಿ ಮಲಗಲು ಆಗದಂತಹ ತೊಂದರೆ ಕೊಡುವ ಅಲರ್ಜಿಯು ನನ್ನ ನಿದ್ರಾ ಸುಖವನ್ನೇ ಕೊಂದು ಹಾಕಿ ಬಿಟ್ಟಿದೆ. ಈಗ ಕಡಿಮೆಯಾಗುತ್ತಿರುವಂತೆ ಅನಿಸುತ್ತಿರುವ ಅಲರ್ಜಿ ನನ್ನನ್ನು ಬಿಟ್ಟು ತೊಲಗಿದರೆ ಸಾಕೆಂಬ ಹಂಬಲ ನನ್ನದು. ಅಲರ್ಜಿಯನ್ನು ಅನುಭವಿಸಿದವರಿಗೆ ಇದೆಲ್ಲ ಸುಲಭವಾಗಿ ಅರ್ಥವಾಗುವ ವಿಷಯವಲ್ಲವೆ?

ಹೀಗೊಂದು ಅಲರ್ಜಿಯ ವೃತ್ತಾಂತ!


Posted 11/2/2026


VISIT HOME - SUJAY UDUPA

 Sunday, February 8, 2026

Nagarabavi, Bengaluru.

Sujay Udupa is college mate of Ravi, at MIT Manipal, during their Engineering studies. 




Sujay married to Shubha, have two children, daughter Ruthu, son Manvith, had good time with Ravi's daughter Urvi.

Ruthu presenting Yakshagana dn BharathaNatya

Urvi showing dancing skills

We were returning from Kengeri, after having grand lunch at SureshUsha's Get-together party, Spent more than an hour at Sujay's house.

Shubha, Sujay's wife


Sujay lives with his parents, nice people.

Left after having some coffee and light eats.


Posted 10/2/2026








Monday, February 9, 2026

PADMABHOSHANA SHATAVADHANI R GANESH

 Tuesday, February 10, 2026

Feeling proud writing about PadmaBhooshana Shatavadhani R Ganesh.



ನಾಡಿನ ಏಕೈಕ ಶತಾವಧಾನಿ ಎನಿಸಿರುವ ಡಾ. ಆರ್. ಗಣೇಶ್ ಅವರಿಗೆ ಈ ಬಾರಿಯ ಪದ್ಮ ಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಬಹುಭಾಷಾ ಪಂಡಿತರಾದ ಅವರು ಕಾವ್ಯ, ಕಥೆ, ಕಾದಂಬರಿ, ವಿಮರ್ಶೆ, ಇತಿಹಾಸ ಮುಂತಾದ ಹತ್ತುಹಲವು ಮುಖಗಳಲ್ಲಿ ಕ್ರಿಯಾಶೀಲರು. ಸಂಗೀತ, ನೃತ್ಯ, ಯಕ್ಷಗಾನ, ನಾಟಕ ಸೇರಿದಂತೆ ಕಲಾಪ್ರದರ್ಶನ ಕ್ಷೇತ್ರದವರಿಗೆ ಒದಗಿಬರುವ ಮಾರ್ಗದರ್ಶಕರು. ನಡೆದಾಡುವ ವಿಶ್ವವಿದ್ಯಾಲಯದ ರೀತಿಯಲ್ಲಿ ಬಹು ಮೌಲಿಕ ಪಾತ್ರವನ್ನು ನಿರ್ವಹಿಸುತ್ತಿರುವ ಅವರ ವ್ಯಕ್ತಿತ್ವದ ಕಿರುಚಿತ್ರಣವಿದು.


January 3, 2016

January 24, 2016


ವಿದ್ವಲ್ಲೋಕದ ವಿಸ್ಮಯ ಶತಾವಧಾನಿ  ಡಾ. ಆರ್. ಗಣೇಶ್

~ ಗಣೇಶ ಭಟ್ಟ ಕೊಪ್ಪಲತೋಟ

ಶತಾವಧಾನಿ ಡಾ. ಆರ್. ಗಣೇಶ್ ಅವರ ವಿದ್ವತ್ತೆಯನ್ನು ನೋಡಿ ಬೆರಗಾಗದವರು ತಾನೇ ಯಾರು! ನಿಜಕ್ಕೂ ಅವರ ಪ್ರತಿಭೆ-ಪಾಂಡಿತ್ಯಗಳು ವಿಸ್ಮಯವೇ ಎಂದು ಹಿರಿಯ ಪತ್ರಕರ್ತ, ಲೇಖಕ, ಚಿಂತಕ, ನಾಡೋಜ ಎಸ್. ಆರ್. ರಾಮಸ್ವಾಮಿಗಳು ಅವರನ್ನು ‘ವಿದ್ವಲ್ಲೋಕದ ವಿಸ್ಮಯ’ ಎಂದು ಕರೆದಿದ್ದಾರೆ. ಒಂದೊಂದು ಶಾಸ್ತ್ರವನ್ನೋ ವಿದ್ಯೆಯನ್ನೋ ಅಧ್ಯಯನ ಮಾಡುವುದಕ್ಕೆ ಹತ್ತಾರು ವರ್ಷಗಳೇ ಬೇಕಾಗುತ್ತವೆ ಎಂದು ಹೇಳುತ್ತಾರೆ. ಆದರೆ ಅದು ಸಾಮಾನ್ಯರನ್ನು ಕುರಿತು ಹೇಳುವ ಮಾತು. ವಿಶೇಷ ಪ್ರತಿಭೆಯುಳ್ಳವರು ಯಾವ ಮಟ್ಟದಲ್ಲಿ ವೈದುಷ್ಯವನ್ನು ಸಾಧಿಸಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿ ಶತಾವಧಾನಿಗಳು ನಮ್ಮ ನಡುವೆ ಇದ್ದಾರೆ.

ಗಣೇಶ್ ಅವರು ಹುಟ್ಟಿದ್ದು ಕೋಲಾರದಲ್ಲಿ, ೧೯೬೨ರ ಡಿಸೆಂಬರ್ ನಾಲ್ಕರಂದು. ಅವರ ತಾಯಿ ಅಲಮೇಲಮ್ಮ. ತಂದೆ ಆರ್. ಶಂಕರನಾರಾಯಣ ಅಯ್ಯರ್. ಚಿಕ್ಕಂದಿನಲ್ಲಿಯೇ ಅವರ ತಾಯಿಯವರ ಮಾರ್ಗದರ್ಶನದಲ್ಲಿ ಸಂಗೀತ-ಚಿತ್ರಕಲೆ-ನಟನೆ ಮೊದಲಾದ ಹಲವು ಬಗೆಯ ಲಲಿತಕಲೆಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಓದುವ ಹವ್ಯಾಸವನ್ನು ರೂಢಿಸಿಕೊಂಡ ಅವರು ತಮ್ಮ ಸಹಜವಾದ ಜ್ಞಾನಕುತೂಹಲದಿಂದ ನಿರಂತರವಾಗಿ ಅಧ್ಯಯನವನ್ನು ನಡೆಸುತ್ತ ಮನಸ್ಸಿನಲ್ಲಿ ನೆಟ್ಟ ಜ್ಞಾನವೃಕ್ಷವನ್ನು ಕಲ್ಪವೃಕ್ಷವನ್ನಾಗಿಸಿಕೊಂಡರು.

ಬಹುಭಾಷಾಜ್ಞಾನ

ಚಿಕ್ಕಂದಿನಿಂದ ಅವರು ಬೆಳೆದ ವಾತಾವರಣದಲ್ಲಿ ಕನ್ನಡ, ತೆಲುಗು ಹಾಗೂ ತಮಿಳು ಪ್ರಭಾವ ಇದ್ದ ಕಾರಣ ಶಾಲೆಗೆ ಹೋಗುವ ವಯಸ್ಸಿನಲ್ಲಿಯೇ ಈ ಮೂರೂ ಭಾಷೆಗಳನ್ನು ಕಲಿತರು. ಆ ಬಳಿಕ ಶಾಲೆಯ ಪಾಠ್ಯಕ್ರಮದಲ್ಲಿ ಹಿಂದಿ, ಸಂಸ್ಕೃತ, ಇಂಗ್ಲಿಷ್ ಮೊದಲಾದ ಭಾಷೆಗಳ ಪರಿಚಯವಾಯಿತು. ಸಂಸ್ಕೃತ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಬೆಳೆದು ಅದರ ಮೂಲಕ ಶೌರಸೇನಿ, ಮಾಗಧೀ, ಮಹಾರಾಷ್ಟ್ರೀ ಮೊದಲಾದ ಹಲವು ಬಗೆಯ ಪ್ರಾಕೃತಗಳು, ಪಾಳಿ ಮೊದಲಾದ ಭಾಷೆಗಳನ್ನು ಕಲಿತರು. ಆ ಸಮಯದಲ್ಲಿ ಪಾಶ್ಚಾತ್ಯದೇಶಗಳ ಮಹಾಕಾವ್ಯಗಳನ್ನು ಅಧ್ಯಯನ ಮಾಡುವ ಆಸಕ್ತಿ ಹುಟ್ಟಿ ಗ್ರೀಕ್ ಲ್ಯಾಟಿನ್ ಮುಂತಾದ ಭಾಷೆಗಳನ್ನು ಕಲಿತರು. ಹೀಗೆ ಸುಮಾರು ೨೧ ಭಾಷೆಗಳಲ್ಲಿ ಅವರು ಪಾಂಡಿತ್ಯವನ್ನು ಪಡೆದಿದ್ದಾರೆ.

‘ನೀವು ಇಷ್ಟೊಂದು ಭಾಷೆಗಳನ್ನೆಲ್ಲ ಯಾವಾಗ ಕಲಿತದ್ದು?’ ಎಂದು ಒಮ್ಮೆ ಕುತೂಹಲದಿಂದ ಅವರ ಬಳಿ ಕೇಳಿದ್ದೆ. ಹೆಚ್ಚುಕಡಿಮೆ ಈ ಎಲ್ಲ ಭಾಷೆಗಳನ್ನೂ ತಮ್ಮ ೨೦-೨೧ರ ವಯಸ್ಸಿನ ಒಳಗೇ ಕಲಿತುಕೊಂಡದ್ದಾಗಿ ತಿಳಿಸಿದ್ದರು. ‘ಪ್ರಸ್ತುತ ಒಂದು ಭಾಷೆ ಬರುತ್ತದೆ ಎಂದು ಹೇಳಬೇಕು ಎಂದರೆ ಆ ಭಾಷೆಯಲ್ಲಿ ಸುಮಾರು ಸಾವಿರ ಪುಸ್ತಕಗಳನ್ನಾದರೂ ಓದಿರಬೇಕು’ ಎಂಬುದು ಅವರಿಗೆ ಅವರೇ ಹಾಕಿಕೊಂಡ ನಿಯಮವಂತೆ! ಹೀಗೆ ನೋಡಿದರೆ ನಮಗೆ ಕನ್ನಡ ಬರುತ್ತದೆ ಎಂದು ಹೇಳುವುದಕ್ಕೇ ಆಲೋಚನೆ ಮಾಡಬೇಕಾಗುತ್ತದೆ!

ಅಧ್ಯಯನ ಅಧ್ಯಾಪನ

ಭಾಷೆ-ಕಲೆ-ಸಾಹಿತ್ಯ-ಸಂಗೀತ ಎಂದು ಈ ಕ್ಷೇತ್ರಗಳಲ್ಲಿ ಅಪಾರ ಸಾಧನೆಯನ್ನು ಮಾಡಿರುವ ಅವರು ಕಾಲೇಜಿನ ವ್ಯಾಸಂಗದಲ್ಲಿ ಕಲಿತದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಆ ಬಳಿಕ ಲೋಹಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಸಂಸ್ಕೃತದಲ್ಲಿ ಎಂ.ಎ. ಮಾಡಿದ ಅವರು ಅವಧಾನಕಲೆಯನ್ನು ಕುರಿತು ಸಂಶೋಧನೆಯನ್ನು ಮಾಡಿ ಮಂಡಿಸಿದ ‘ಕನ್ನಡದಲ್ಲಿ ಅವಧಾನಕಲೆ’ ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮೊದಲ ಡಿ.ಲಿಟ್ ಪದವಿ ದೊರೆತದ್ದು ಇತಿಹಾಸ. ತಮ್ಮ ಇಂಜಿನಿಯರಿಂಗ್ ವಿದ್ಯಾಭ್ಯಾಸದ ಬಳಿಕ ಹಲವು ವರ್ಷಗಳ ಕಾಲ ಅದೇ ವಿಷಯದಲ್ಲಿ ಅಧ್ಯಾಪನವನ್ನೂ ಮಾಡಿದ್ದಾರೆ.


ಅವಧಾನಕಲೆಗೆ ಹೊಸ ರೂಪ

ಕನ್ನಡನಾಡಿನಲ್ಲಿ ಅವಧಾನಕಲೆ ಎಂದರೆ ಏನು ಎಂದೇ ಪರಿಚಯವಿಲ್ಲದಂತಹ ಸಂದರ್ಭ ಸೃಷ್ಟಿಯಾಗಿದ್ದಾಗ ಆ ಅದ್ಭುತವಾದ ಕಲೆಯನ್ನು ಪರಿಚಯಿಸಿ ಅದಕ್ಕೆ ಹೊಸರೂಪವನ್ನು ತೋರಿಸಿ ಇಂದು ಕರ್ಣಾಟಕದಲ್ಲಿ ಶತಾವಧಾನಿಗಳು ಎಂದರೆ ಇವರೊಬ್ಬರೇ ಎಂಬಂತೆ ಮನೆಮಾತಾಗಿರುವವರು ಗಣೇಶ್! ಏಕಾಗ್ರತೆ, ನೆನಪಿನ ಶಕ್ತಿ, ಸದ್ಯಃಸ್ಫೂರ್ತಿ, ಆಶುಕವಿತಾರಚನೆ, ಬಹುಶಾಸ್ತ್ರಪಾಂಡಿತ್ಯ, ಭಾಷಾಪ್ರಭುತ್ವ ಹೀಗೆ ಹಲವಾರು ಬಗೆಯ ಅಪೂರ್ವವಾದ ಸಾಧನೆಯನ್ನು ಮಾಡಿಕೊಂಡವರು ಮಾತ್ರ ಕರಗತ ಮಾಡಿಕೊಳ್ಳಬಹುದಾದ ದುಷ್ಕರವಾದ ಕಲಾಪ್ರಕಾರವೇ ಅವಧಾನ. ವೇದಿಕೆಯಲ್ಲಿ ಹಲವಾರು ಪಂಡಿತರು ಬಗೆಬಗೆಯ ಪ್ರಶ್ನೆಗಳನ್ನು ಒಡ್ಡಿದರೆ ಅವಧಾನಿಗಳು ಅವುಗಳೆಲ್ಲವುಗಳಿಗೂ ತಮ್ಮ ಪಾಂಡಿತ್ಯಪ್ರತಿಭೆಗಳಿಂದ ಸೂಕ್ತವಾದ ಸಮಾಧಾನವನ್ನು ನೀಡಬೇಕು.


ತೆಲುಗಿನಲ್ಲಿ ಬಹಳ ಜನಪ್ರಿಯವಾಗಿರುವ ಈ ಕಲೆಯ ಬೇರು ಅಲ್ಲಿಗಿಂತ ಮೊದಲು ಕನ್ನಡದಲ್ಲಿಯೇ ಸ್ಪಷ್ಟವಾಗಿ ಕಾಣಿಸುತ್ತದೆ. ಇಂತಹ ಅದ್ಭುತವಾದ ಕಲೆ ಕನ್ನಡದಲ್ಲಿ ಇಲ್ಲದಂತಾಗಿ ಹಲವು ದಶಕಗಳೇ ಕಳೆದಿದ್ದವು. ಅಂಥ ಸಂದರ್ಭದಲ್ಲಿ, ಒಮ್ಮೆ ಬೆಂಗಳೂರಿನಲ್ಲಿ ನಡೆದ ತೆಲುಗಿನ ಒಬ್ಬ ಅವಧಾನಿಗಳ ಅಷ್ಟಾವಧಾನವನ್ನು ತಮ್ಮ ಹತ್ತೊಂಬತ್ತನೇ ವಯಸ್ಸಿನಲ್ಲಿ ನೋಡಿ, ಮಾರನೆಯ ದಿನವೇ ಯಶಸ್ವಿಯಾಗಿ ಅಷ್ಟಾವಧಾನವನ್ನು ನಿರ್ವಹಿಸಿದಂತಹ ಬಾಲಪ್ರತಿಭೆ ಶತಾವಧಾನಿಗಳದ್ದು.


೧೩೦೦ಕ್ಕೂ ಹೆಚ್ಚು ಅಷ್ಟಾವಧಾನಗಳು

ಅವಧಾನಕ್ಷೇತ್ರದಲ್ಲಿ ಅವರು ಸಾಧಿಸಿದ ವಿಕ್ರಮ ಅನೂಹ್ಯ! ಈ ತನಕ ದೇಶ-ವಿದೇಶಗಳಲ್ಲಿ ಸಾವಿರದ ಮುನ್ನೂರಕ್ಕೂ ಹೆಚ್ಚು ಅಷ್ಟಾವಧಾನಗಳನ್ನು ನಡೆಸಿಕೊಟ್ಟಿದ್ದಾರೆ. ಅಲ್ಲದೆ ಐದು ಶತಾವಧಾನಗಳನ್ನೂ ನಿರ್ವಹಿಸಿದ್ದಾರೆ. ತೆಲುಗಿನವರು ಅಸಾಧ್ಯವೆಂದೇ ಹೇಳಿದ್ದ ಚಿತ್ರಕವಿತೆಯೆಂಬ ವಿಭಾಗವನ್ನು ಅವಧಾನದಲ್ಲಿ ನಿರ್ವಹಿಸಿ ಅಳವಡಿಸಿಕೊಂಡದ್ದು ಅವರ ಗರಿಮೆ. ಅದಲ್ಲದೆ ನಾಟಕವಾಚನ, ಮಾತು-ಧಾತು, ಅನಂತಕಥಾಕವಿತೆ ಹೀಗೆ ಹಲವು ಬಗೆಯ ಕಷ್ಟಕರವಾದ ವಿಭಾಗಗಳನ್ನೂ ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ.

ಒಂದೇ ಪದ್ಯಕ್ಕೆ ಐದಾರು ಭಾಷೆಗಳಲ್ಲಿ ಅರ್ಥವನ್ನು ಹೇಳಬಲ್ಲಂತಹ ಭಾಷಾಚಿತ್ರ, ಒಂದೇ ಪದ್ಯದಲ್ಲಿ ಹಲವು ಬಗೆಯ ಛಂದಸ್ಸುಗಳು ಒಳಗೊಂಡಿರುವಂತೆ ಗರ್ಭಚಿತ್ರ, ಅವಧಾನವೇದಿಕೆಯಲ್ಲಿ ಆಶುವಾಗಿ ಹೇಳಲು ಅಸಾಧ್ಯವೆಂದೇ ಹೇಳಬಹುದಾದ ದುಷ್ಕರ ಬಂಧಚಿತ್ರಗಳ ರಚನೆಗಳನ್ನೆಲ್ಲವನ್ನೂ ಅವರು ಸಾಧಿಸಿದ್ದಾರೆ. ಆಯಾ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದರೆ ಮಾತ್ರ ನಮಗೆ ಇದರ ಕಷ್ಟ ಎಷ್ಟೆಂದು ಅರಿವಾದೀತು! ಅಲ್ಲದೆ ಎಂಟು ಭಾಷೆಗಳಲ್ಲಿ ಅವಧಾನವನ್ನು ನಿರ್ವಹಿಸಬಲ್ಲ ಏಕೈಕ ಅಷ್ಟಭಾಷಾವಧಾನಿಗಳೂ ಆಗಿದ್ದಾರೆ. ಅತ್ಯಂತ ವೇಗವಾಗಿ ತಾಸಿಗೆ ನೂರು ಅಭಿಜಾತಶೈಲಿಯ ರಸಮಯವಾದ ಪದ್ಯಗಳನ್ನು ರಚಿಸಿ ಹೇಳುವಂತಹ ಶಕ್ತಿಯಿರುವ ಅವರು ಘಳಿಗೆಯೊಂದರಲ್ಲಿ ನೂರು ಸಂಸ್ಕೃತ ಶ್ಲೋಕಗಳನ್ನು ರಚಿಸುವ ಸಾಮರ್ಥ್ಯವನ್ನೂ ಹೊಂದಿದ್ದಾರೆ.



ಉಳಿದ ಕಲಾಕ್ಷೇತ್ರಗಳಲ್ಲಿಯೂ ಕೃಷಿ

ಒಬ್ಬ ಒಳ್ಳೆಯ ಕಲಾವಿದನಾದವನು ತಾನು ರೂಢಿಸಿಕೊಂಡ ಕಲೆಗೆ ಹೊಸ ಹೊಳಹನ್ನು ಕೊಡಬಲ್ಲವನಾಗುತ್ತಾನೆ. ಆ ದೃಷ್ಟಿಯಿಂದ ಶತಾವಧಾನಿಗಳು ಅವಧಾನಕ್ಷೇತ್ರಕ್ಕೆ ಕೊಟ್ಟ ಕೊಡುಗೆಗಳ ಜೊತೆಯಲ್ಲಿ ಉಳಿದ ಕಲೆಗಳಲ್ಲಿ ತೊಡಗಿಸಿಕೊಂಡ ಬಗೆಯನ್ನೂ ಗಮನಿಸಿದರೆ ಅವರ ಎತ್ತರ ಬಿತ್ತರಗಳ ಅರಿವಾದೀತು.

ಸಂಗೀತ ನೃತ್ಯ ಮೊದಲಾಗಿ ಹಲವು ಕಲಾಪ್ರಕಾರಗಳಲ್ಲಿ ಆಳವಾದ ಜ್ಞಾನವನ್ನು ಹೊಂದಿರುವ ಅವರು ಸಾಕಷ್ಟು ಸಂಗೀತಕೃತಿಗಳನ್ನು ರಚಿಸಿದ್ದಾರೆ. ಶಾಸ್ತ್ರೀಯನೃತ್ಯಗಳಿಗೆ ಸಾಹಿತ್ಯವನ್ನು ರಚಿಸಿದ್ದಾರೆ. ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ. ಯಕ್ಷಗಾನದಲ್ಲಿ ಮಂಟಪ ಪ್ರಭಾಕರ ಉಪಾಧ್ಯಾಯರ ಮೂಲಕ ಏಕವ್ಯಕ್ತಿ ಯಕ್ಷಗಾನ, ದಿವಾಕರ ಹೆಗಡೆ ಅವರ ಮೂಲಕ ಏಕವ್ಯಕ್ತಿ ತಾಳಮದ್ದಲೆ ಎಂಬ ಹೊಸ ಆಯಾಮವನ್ನು ಕೂಡ ಕಲ್ಪಿಸಿಕೊಟ್ಟಿದ್ದಾರೆ. ಪರಿಪೂರ್ಣವಾಗಿ ರಸಮಾತ್ರದೃಷ್ಟಿಯಿಂದ ಕಲೆಯನ್ನು ಆಸ್ವಾದಿಸುವ ಸಹೃದಯರೆಲ್ಲರೂ ಇದನ್ನು ಮೆಚ್ಚಿ ಆಸ್ವಾದಿಸಿ ಜನಪ್ರಿಯವೂ ಆಗಿರುವುದೇ ಈ ಕಲಾಪ್ರಕಾರದ ಸಾಧ್ಯತೆಯನ್ನು ತೋರಿಸಿಕೊಟ್ಟ ಗಣೇಶರ ಶ್ರೇಯಸ್ಸಿಗೆ ಸಾಕ್ಷಿ. ಇವುಗಳಲ್ಲದೆ ‘ಕಾವ್ಯ-ಚಿತ್ರ-ಗೀತ-ನೃತ್ಯ’ದಂತಹ ವಿಶಿಷ್ಟ ಕಲಾಪ್ರಕಾರವನ್ನು ರಂಗಕ್ಕೆ ಪರಿಚಯಿಸಿ ಯಶಸ್ವಿಯಾಗಿ ಅನೇಕ ಪ್ರದರ್ಶನಗಳನ್ನು ನಡೆಸಿದ್ದಾರೆ. ಬಿ.ಕೆ.ಎಸ್ ವರ್ಮಾ ಅವರ ಜೊತೆಯಲ್ಲಿ ಸತತ ೨೪ ಗಂಟೆಗಳ ಕಾಲ ಕಾವ್ಯ-ಚಿತ್ರ ಕಾರ್ಯಕ್ರಮವನ್ನು ನಡೆಸಿ ವಿಶ್ವದಾಖಲೆಯನ್ನು ಮಾಡಿದ್ದಾರೆ.

ಶಾಸ್ತ್ರಕಾರ-ಉಪನ್ಯಾಸಕಾರ

ಅವಧಾನಿ-ಕವಿ ಆದವರಿಗೆ ಆವಶ್ಯಕವಾಗಿರುವ ಛಂದಶ್ಶಾಸ್ತ್ರ, ವ್ಯಾಕರಣ, ಅಲಂಕಾರಶಾಸ್ತ್ರ ಮೊದಲಾದವುಗಳಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಅವರು ಈ ತನಕ ಇದ್ದ ಶೃಂಗಾರ-ಹಾಸ್ಯ ಮೊದಲಾದ ನವರಸಗಳಷ್ಟೇ ಅಲ್ಲದೆ ‘ಧೀರರಸ’ ಎಂಬ ಇನ್ನೊಂದು ರಸ ಇರುವುದನ್ನೂ ಶೋಧಿಸಿ ವಿಸ್ತಾರವಾಗಿ ಲೇಖನವನ್ನು ಬರೆದು ಅದರ ಹರಹನ್ನು ತೋರಿಸಿಕೊಟ್ಟಿದ್ದಾರೆ. ಕಾವ್ಯಮೀಮಾಂಸೆಯ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಇದೊಂದು ಅಪೂರ್ವ ಶೋಧನೆಯೇ ಆಗಿದೆ. ಆಗಮ, ಧರ್ಮಶಾಸ್ತ್ರ, ವೇದವೇದಾಂತಾದಿ ಅನೇಕ ವಿಷಯಗಳಲ್ಲಿ ಸಾಕಷ್ಟು ಪಾಂಡಿತ್ಯವನ್ನು ಸಂಪಾದಿಸಿಕೊಂಡಿದ್ದಲ್ಲದೆ, ಜ್ಯೋತಿಷ್ಯದಂತಹ ಶಾಸ್ತ್ರದಲ್ಲೂ ಪ್ರವೇಶವನ್ನು ಹೊಂದಿದ್ದಾರೆ. ಕಾವ್ಯ, ನಾಟಕ, ತತ್ತ್ವಶಾಸ್ತ್ರ, ವೇದ, ವೇದಾಂತ, ಧರ್ಮಶಾಸ್ತ್ರ, ಅಲಂಕಾರಶಾಸ್ತ್ರ ಮೊದಲಾಗಿ ಭಾರತೀಯ ಜ್ಞಾನಪರಂಪರೆಯಲ್ಲಿ ಅವರಿಗೆ ಗೊತ್ತಿಲ್ಲದ ವಿಷಯವೇ ಇಲ್ಲವೆಂದರೆ ಅತಿಶಯೋಕ್ತಿಯಲ್ಲ. ಇವುಗಳೆಲ್ಲವುಗಳ ಹಿನ್ನೆಲೆಯಲ್ಲಿ ಹತ್ತಾರು ಸಾವಿರ ಗಂಟೆಗಳಷ್ಟು ಕಾಲದ ಉಪನ್ಯಾಸಗಳನ್ನು ನೀಡಿದ್ದಾರೆ.

ಅಧ್ಯಯನಪೂರ್ಣ ಗ್ರಂಥಕರ್ತ

ಉಪನ್ಯಾಸ, ಕಲಾಪ್ರಯಾಣ, ಅವಧಾನಪ್ರದರ್ಶನ ಮೊದಲಾದ ಲೋಕಾಂತಕಾರ್ಯಗಳ ನಡುವೆ ಏಕಾಂತಕಾರ್ಯವಾಗಿ ಶತಾವಧಾನಿಗಳು ರಚಿಸಿದ ಕೃತಿಗಳೂ ಅಸಂಖ್ಯ! ಅಭಿಜಾತ ಶೈಲಿಯ ಕಾವ್ಯಗಳು, ಕಾದಂಬರಿಗಳು, ಕಥೆಗಳು, ಅನುವಾದ, ನೃತ್ಯರೂಪಕಗಳು, ಗೀತೆಗಳು ಹೀಗೆ ಅವರು ಸಾಧಿಸದ ಪ್ರಕಾರವಿಲ್ಲ. ‘ಮಣ್ಣಿನ ಕನಸು’ ಅವರ ಇತ್ತೀಚಿನ ಮಹಾ-ಕಾದಂಬರಿ. ‘ಪುಟಗಳ ನಡುವಣ ನವಿಲುಗರಿ’ ಕಥಾಸಂಕಲನ. ಪರೋಕ್ಷ, ಹದನು-ಹವಣು, ಕಾವ್ಯಕಲ್ಪ, ಮಾರ್ಗಣ, ಮಂತಣ ಇತ್ಯಾದಿ ಅನೇಕ ಕೃತಿಗಳು ಶತಾವಧಾನಿಗಳ ಹಲವು ವರ್ಷಗಳ ವಿವಿಧ ಅಧ್ಯಯನಪೂರ್ಣ ಲೇಖನಗಳ ಸಂಗ್ರಹಗಳು.


ಸರ್ವತಂತ್ರಸ್ವತಂತ್ರ, ವಾಣೀವಾಹನ, ವಿಭೂತಿಪುರುಷ ವಿದ್ಯಾರಣ್ಯ ಮೊದಲಾದವು ಜೀವನಚಿತ್ರಣಗಳು. ‘ಅಭಿರುಚಿ’ ಎಂಬುದು ಲಲಿತಪ್ರಬಂಧಗಳ ಸಂಕಲನ. ಮಧುಸದ್ಮ, ಪ್ರತಿಭಾದೂತಂ, ವನಿತಾಕವಿತೋತ್ಸವ, ರಾಮಾನುರಾಗಾನಲಂ, ವಾತ್ಸಲ್ಯಗೋಪಾಲಕಂ ಮೊದಲಾದ ಅನೇಕ ಸಂಸ್ಕೃತ ಕಾವ್ಯಗಳೂ, ವಂಶೀಸಂದೇಶಂ, ಸ್ವಪ್ನಸಂಗಮಂ ಮೊದಲಾದ ಕನ್ನಡ ಕಾವ್ಯಗಳೂ, ‘ಧೂಮದೂತ’ದಂತಹ ವಿಡಂಬನ ಕಾವ್ಯಗಳೂ ಅವರ ಲೇಖನಿಯಿಂದ ಹೊರಹೊಮ್ಮಿವೆ. ಕವಿಸಾರ್ವಭೌಮ, ಮೂರು ಪ್ರಹಸನಗಳು, ಮಹಾಬ್ರಾಹ್ಮಣ ಮೊದಲಾದವು ಅವರು ಅನುವಾದಿಸಿರುವ ಕೆಲವು ಕೃತಿಗಳು. ಈವರೆಗೆ ಅವರು ರಚಿಸಿರುವ ಬಿಡಿ ಪದ್ಯಗಳ ಸಂಖ್ಯೆಯೇ ಸುಮಾರು ಒಂದೂವರೆ ಎರಡು ಲಕ್ಷಗಳಷ್ಟು ಇದ್ದಿರಬಹುದು!

ಮನ್ನಣೆ, ಪುರಸ್ಕಾರಗಳು

ಗಣೇಶ್ ಅವರನ್ನು ಅತೀ ಕಿರಿಯ ವಯಸ್ಸಿನಲ್ಲಿಯೇ ರಾಜ್ಯೋತ್ಸವ ಪ್ರಶಸ್ತಿ ಅರಸಿಕೊಂಡು ಬಂದದ್ದು ವಿಶೇಷವೇನಲ್ಲ. ಅವರಿಗೆ ದೇವುಡು ಅವರ ‘ಮಹಾಬ್ರಾಹ್ಮಣ’ ಕೃತಿಯ ಅನುವಾದಕ್ಕಾಗಿ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ರಾಷ್ಟ್ರಪತಿಗಳು ಕೊಡುವ ಬಾದರಾಯಣ ವ್ಯಾಸ ಪುರಸ್ಕಾರವೇ ಮೊದಲಾಗಿ ಅನೇಕ ಪ್ರಶಸ್ತಿ ಸಂಮಾನಗಳು ಸಂದಿವೆ. ಅವುಗಳಿಗೆ ಕಿರೀಟಪ್ರಾಯವಾಗಿ ಈ ವರ್ಷ ಪದ್ಮ ಭೂಷಣ ಪ್ರಶಸ್ತಿ ಘೋಷಿಸಲಾಗಿದೆ.


ತಮ್ಮ ಜೀವಿತಾವಧಿಯಲ್ಲಿಯೇ ದಂತಕಥೆಯಾಗಿರುವ ಸುಪ್ರಸಿದ್ಧ ಭರತನಾಟ್ಯ ಕಲಾವಿದೆ, ಸಂಶೋಧಕಿ, ಲೇಖಕಿ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರು ‘ತಮ್ಮ ಭರತನಾಟ್ಯ ಸಂಪೂರ್ಣವಾಗಿ ಯಾರಿಗಾದರೂ ಅರ್ಥವಾಗಿದ್ದರೆ ಅದು ಗಣೇಶ್ ಅವರಿಗೊಬ್ಬರಿಗೇ’ ಎಂದು ಹೇಳಿದ್ದಾರೆ. ಬಹಳ ಹಿಂದೆ ಪ್ರಸಿದ್ಧ ವಿದ್ವಾಂಸ, ಸಂಶೋಧಕ, ಕವಿ ಸೇಡಿಯಾಪು ಕೃಷ್ಣಭಟ್ಟರು ತಮ್ಮ ಶಿಷ್ಯರೊಬ್ಬರಿಗೆ ಬರೆದ ಪತ್ರವೊಂದರಲ್ಲಿ, ‘ನನ್ನ ಛಂದೋಗತಿ ಪುಸ್ತಕವನ್ನು ಓದಿ ಅರ್ಥಮಾಡಿಕೊಂಡ ಕೆಲವೇ ಕೆಲವರಲ್ಲಿ ಬೆಂಗಳೂರಿನ ಗಣೇಶ್ ಒಬ್ಬರು’ ಎಂಬ ಅರ್ಥದ ವಾಕ್ಯವನ್ನು ಬರೆದಿದ್ದರು. ಆಗಿನ್ನೂ ಗಣೇಶರ ವಯಸ್ಸು ಇಪ್ಪತ್ತು-ಮೂವತ್ತರ ಒಳಗೆ ಇದ್ದಿರಬಹುದು. ‘ಉಳಿದೆಲ್ಲ ಪ್ರಶಸ್ತಿಗಳಿಗಿಂತ ಈ ಮನ್ನಣೆಯೇ ಹೆಚ್ಚಿನದು’ ಎಂದು ಭಾವಿಸುವಂತಹ ವಿನಯಶಾಲಿಗಳು, ಸರಳರು ಶತಾವಧಾನಿಗಳು. ಆ ಕಾರಣದಿಂದಲೇ ಅವರು ಇಂದಿಗೂ ಎಲ್ಲರಿಗೂ ಆದರಣೀಯರಾಗಿದ್ದಾರೆ.

(ಲೇಖಕರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ, ಕವಿ, ಕಾದಂಬರಿಕಾರ, ಅನುವಾದಕ. ಕರ್ನಾಟಕದ ಪ್ರಮುಖ ಅಷ್ಟಾವಧಾನಿಗಳಲ್ಲಿ ಒಬ್ಬರು.)




Posted 10/2/2026



Sunday, February 8, 2026

FAMILY GET-TOGETHER : KENGERI MANE

 Sunday, February 8, 2026

Kengeri Mane, Kengeri Upanagara, Bengaluru

That was Family Grt-together with fun, Laughter and love.




SureshUsha's daughter Spoorthi and her husband Michael,  who got married in January 2024,  at Discvoery village, Nandi Hills, Bengaluru, lives in USA, made it extra special.




Grand lunch was at 1 pm, with pulav, mysuru paak, paayasa and Rs 500 note to all.




Suresh's pet Epi was darling to all.






Good memories to cherish and remember....

God Bless All.


Posted 9/2/2026



















Saturday, February 7, 2026

ಸ್ಮರಿಕಾ - ನೆನಪಿನ ಸೆಲೆಯಲ್ಲಿ

 Saturday, 7th February 2026



ಸ್ಮರಿಕಾ - ನೆನಪಿನ ಸೆಲೆಯಲ್ಲಿ” ಎನ್ನುವ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ಕಳೆದ ವರ್ಷ. ಯಾವುದೇ ಸಂಸ್ಥೆ ಪ್ರಗತಿ ಪಥದಲ್ಲಿ ಮೇಲೇರುವಾಗ ತಾನು ಕಾಲಿಟ್ಟ ಘಳಿಗೆ, ಸ್ಥಿತಿ, ಧ್ಯೇಯ…. ಇವುಗಳನ್ನು ಮರೆಯಬಾರದು. ಪ್ರತಿ ಸಂಸ್ಥೆಯ ಹುಟ್ಟು ತುಂಬಾ ಸಾಧಾರಣವಾಗಿ ಸರಳವಾಗಿರುತ್ತದೆ. ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿರುತ್ತದೆ. ಹೊಂಗಿರಣದ ಪ್ರಾರಂಭವೂ ಕೂಡಾ ಪುಟ್ಟ ಹೆಜ್ಜೆಗಳೊಡನೆಯೇ ಆದದ್ದು. ಆ ‘ಪುಟ್ಟ ಹೆಜ್ಜೆ’ಯನ್ನು ಬಲಗೊಳಿಸಲು ನೆರವಾದವರನ್ನು ನೆನಪಿಸಿಕೊಂಡು ಪುನಃ ಒಂದಾಗಿ ಹಳೆಯ ನೆನಪುಗಳನ್ನು ಹಂಚಿಕೊಳ್ಳಲೋಸುಗವೇ ಪ್ರಾರಂಭವಾದದ್ದು 'ಸ್ಮರಿಕಾ'. ಇದರರ್ಥ 'ಸ್ಮರಣಾರ್ಥ' ಎಂದು. ಒಂದರ್ಥದಲ್ಲಿ ನಮ್ಮೊಡನೆ ಇರದವರನ್ನು ಸ್ಮರಿಸುವುದು ಹಾಗೂ ನಮ್ಮೊಡನೆ ಇದ್ದವರು ನೀಡಿದ ಸಹಕಾರವನ್ನು ಸ್ಮರಿಸುವುದು ಎಂದು ಇನ್ನೊಂದು ರೀತಿಯಲ್ಲೂ ಅರ್ಥೈಸಿಕೊಳ್ಳಬಹುದು.


2025ರ ಜನವರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾವು ನಮ್ಮ ಮೊದಲ ಮೂರು ಬ್ಯಾಚುಗಳ, ಸುತ್ತಮುತ್ತಲಿನ ಊರಿನ ಪಾಲಕರನ್ನು ಆಹ್ವಾನಿಸಿದ್ದೆವು. ಪ್ರತಿಯೊಬ್ಬರ ಮನೆಗೆ ಖುದ್ದಾಗಿ ಹೋಗಿ ಕರೆದು ಬಂದಾಗ, ಅವರು ತೋರಿಸಿದ ಪ್ರೀತಿ, ವಿಶ್ವಾಸ ಹಾಗೂ ಹೊಂಗಿರಣದಲ್ಲಿ ಕಲಿತ ಅವರ ಮಕ್ಕಳ ಗಟ್ಟಿಗೊಂಡು ನೆಲೆನಿಂತ ಬದುಕಿನ ಬಗೆಗಿನ ಸಂತೃಪ್ತಿ ಕಂಡು ಮನದುಂಬಿ ಬಂದಿತ್ತು. ಆಮಂತ್ರಿತರೆಲ್ಲರೂ ಬಂದಿದ್ದರು. ನಮ್ಮದೇ ಹಳೆಯ ವಿದ್ಯಾರ್ಥಿ ಸಂವತ್ಸರ ಹಾಗೂ ತಂಡದವರು ನೀಡಿದ ಸಂಗೀತ ಕಾರ್ಯಕ್ರಮ ಆಹ್ಲಾದಕರವಾಗಿತ್ತು. ಒಟ್ಟಿನಲ್ಲಿ ಅದೊಂದು ಸುಂದರವಾದ ಪುನರ್ಮಿಲನದ ಕಾರ್ಯಕ್ರಮವಾಗಿತ್ತು.
ಇಂದು ನಡೆದ ಸ್ಮರಿಕಾ ಕಾರ್ಯಕ್ರಮವನ್ನು ಮೊದಲ ಎಂಟು ಬ್ಯಾಚಿನ ಮಕ್ಕಳು ಹಾಗೂ ಆಗ ನಮ್ಮಲ್ಲಿದ್ದ ಶಿಕ್ಷಕರ ಪುನರ್ಮಿಲನಕ್ಕಾಗಿ ಮೀಸಲಾಗಿಟ್ಟಿದ್ದೆವು. ನವೋದಯದ ನಮ್ಮ ಹಳೆಯ ವಿದ್ಯಾರ್ಥಿ ಹಾಗೂ ನಾಡಿನ ಹೆಸರಾಂತ ಸುಗಮಸಂಗೀತಕಾರನಾದ ಶ್ರೀ ವಿನಯ್ ನಾಡಿಗ್ ನ ಮಧುರ ಸಂಗೀತ ಸುಧೆಯೊಂದಿಗೆ ನಮ್ಮ ಇಂದಿನ ಕಾರ್ಯಕ್ರಮ ಪ್ರಾರಂಭವಾಯಿತು. ಹೇಳಿದ ಸಮಯಕ್ಕೆ ಹಳೆಯ ವಿದ್ಯಾರ್ಥಿಗಳು ಬಾರದಿದ್ದ ಕಾರಣ ನಮ್ಮ ಈಗಿನ ಹಿರಿಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. ಸಂಗೀತ ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬರುವಾಗ ಒಬ್ಬೊಬ್ಬರಾಗಿ ಕೆಲವು ಹಳೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬಂದು ನಮ್ಮನ್ನು ಸೇರಿಕೊಂಡರು. ಸಂಗೀತ ಕಾರ್ಯಕ್ರಮ ಮುಗಿದ ನಂತರ ಒಂದು ಗಂಟೆಯ ಕಾಲ ಹಳೆಯ ನೆನಪುಗಳನ್ನು ಮೆಲುಕು ಹಾಕಲಾಯಿತು. ಸಮಯದ ಚಕ್ರ ಒಮ್ಮೆ ಹಿಂದೆ ಹೋಗಿ ಮುಂದೆ ಬಂದಂತಾಯಿತು. ನಮ್ಮ ನಿರೀಕ್ಷೆಯಷ್ಟು ಮಕ್ಕಳು ಬರದಿದ್ದರೂ, ಬಂದವರು ‘ನಿಮ್ಮ ಜೊತೆಗೆ ನಾವಿದ್ದೇವೆ’ ಎನ್ನುವ ಭರವಸೆಯ ಭಾವವನ್ನು ಕೊಟ್ಟರು. ಸರಳ ಸಹಭೋಜನದ ನಂತರ ಅಲ್ಲೇ ಅಷ್ಟಿಷ್ಟು ಮಾತನಾಡಿ ಎಲ್ಲರೂ ತಮ್ಮ ತಮ್ಮ ಗೂಡಿಗೆ ಇನ್ನೊಂದಿಷ್ಟು ನೆನಪುಗಳೊಡನೆ ಹಿಂದಿರುಗಿದರು. ಇಲ್ಲಿ ಉಳಿದ ನಾವು ಅವರೆಲ್ಲರೊಡನೆಯ ಒಡನಾಟದ ಖುಷಿಯನ್ನು ಪಡೆದ ಭಾವದಲ್ಲಿ ಮುಳುಗಿದ್ದೆವು.

Posted 8./2/2026


Friday, February 6, 2026

NEIGHBOUR'S HOUSE DEMOLITION

 Jan 12 - Feb 6 2026

Birthimane, Bhuvaneshwarinagar, Bengaluru.




Neighbour’s house demolition causing quite a bit of disturbance  hard to stay at home.
 




  • Noise, dust, and chaos all around — tough times with the neighbour’s house demolition.”“Home sweet home… except when the neighbour’s demolition makes it feel like a construction zoneNeighbour’s house demolition in progress — a challenging time to stay comfortable at home. Hoping it settles soon.”

  • “Renovation next door bringing some discomfort, but reminding us patience is also part of peaceful living.”




  • Posted 7/2/2026