Tuesday, February 3, 2026

LEELA VARADARAJA RAO SHRADDHANJALI

 Saturday, January 30, 2026

Mysuru

Message from Manohar Rao:

Regret to inform you that mom expired Friday morning at 10:30 am in mysore evening

Landing in Blore early morning Sunday Cremiation will over by 9 am in Mysore now body we kept at home.

Reply:

Sad to hear the news.

May God give you strength to bear the loss 

Om Shanthi,

Om Sadgathi for the departed soul.


Manohar Rao, now living in Mysuru, has been close family friend and well wisher for many years since the time we were in Dubai.

We had been to his two daughters Sneha and Preethi  grand wedding in Mysuru.

His mother, Leela has been ill for some time and he was taking care of her very well.


We pray for Sadgathi for the departed soul and give strength to the family members to bear the loss.

Om Shanthi.


Posted 4/2/2026


Sunday, February 1, 2026

CASUAL TOGETHER AT HOME

 Saturday, January 31, 2026

Birthimane, Bhuvaneshwarinagara, Bengaluru



That sounds so lovely,— nothing beats a family lunch where children and grand children fill the house with laughter and chatter! 🍛✨ The joy of seeing together, sharing stories over favorite dishes… pure bliss.


PATHRODE BEFORE STEAMING

That was happy times together, children Shubha, Ravi, Rishi and grand children  Atharv, (4 and half +), Urvi (4 and hald +) and Lahari ( 19 +) and of course S-I-L Raghu.



Lunch with Pathrode, rice, sambaar, Basale Palya, Sasive and mosaru.  

Evening Poori and Parota... Yummy....

URVI WITH HER STORY

ATHARV AT WORK ON THE TERRACE


That was memorable day spent..... memories to cherish and remember....

God Bless.........


Posted 1/2/2026






Saturday, January 31, 2026

SHANI POOJE 2026

 Saturday, January 31, 2026

Mayamani Party Hall. Al Qushais, Dubai

Shani Pooje from Dubai Brahmana Samaja was organized and took place with participation of large number of Brahmans present in Dubai and Sharjah.






Sri Venkatesha Shastry highlighted the importance of Shani Pooje, listening and rendering the stotras will benefit all members of the family.







Very happy and blessed to note that Dubai Brahamana Samaja activities are continuing with leadership of Shivaram Bhat, Raghvendra Upadhya, Venkatesh Shastry  and  participation of large number of devotees.



SARVE JANAH SUKHINO BHAVANTHU.....

GOD BLESS ALL


Posted 1/2/2026












Thursday, January 29, 2026

BAHAJNE AT SUNANDI ELDERCARE - 47

 Thursday, January 29, 2026

Sunandi Holistic Eldercare Centre, KodigeHalli, Bengaluru

Sunandi Holistic Eldercare is a serene and spiritually nurturing environment designed to care for elders in body, mind, and soul. The daily routine beautifully integrates devotion, wellness, and community bonding, making it a sanctuary of peace and purpose for senior residents.




Our Thursday spiritual session with Ramakrishna Bhat  began at 4.45 pm with elder residents seated , waiting for the bhajans to start.




Bhajane—soulful singing of devotional songs that fill the atmosphere with positivity and reverence. Residents and caregivers gather in a hall, starts with Dhyana and Omkaara, accompanied by Taala. This collective energy fosters not only spiritual growth but also emotional connection among everyone present.


Following Bhajane, there Upanyasa about the importance of NAAMASMARANE, forllowed by Aarthi with song "JAI JAGADISHA HARE"


Vibhoothi and Prasada was given to all

LOKA SAMASTHA SUKHINO BHAVANTHU

OM SHANTHI....

Posted 30/1/2026






Wednesday, January 28, 2026

JOJO THE PET - SHOBHA SOMAYAJI

 Wednesday, January 28, 2026

JOJO

ಬೋಜೋ ಬಗ್ಗೆ ಶೃದ್ಧಾಂಜಲಿಯ ಬರಹ ಬರೆಯುವ ಸಮಯ ಇಷ್ಟು ಬೇಗ ಬರುತ್ತದೆಯೆಂದು ನಾನೆಂದೂ ಭಾವಿಸಿರಲಿಲ್ಲ. ಬೋಜೋ ನಮ್ಮ ಕ್ಯಾಂಪಸ್ ನ ಸುಂದರ, ಸದೃಢ, ಹೀರೋ ಮೆಟೀರಿಯಲ್ ಹೊಂದಿದ ವ್ಯಕ್ತಿತ್ವ ಉಳ್ಳವನಾಗಿದ್ದ. ಅವನ ನಡೆ ಚೆಂದ; ಅವನ ನೋಟ ಚೆಂದ; ಅವನ ಸೂಕ್ಷ್ಮ ಸ್ವಭಾವ ಅಂದ. ನಮ್ಮ ಯಾರದ್ದೇ ಮುಖಭಾವ ಬದಲಾದರೂ, ಮಾತಿನ ಟೋನ್ ಬದಲಾದರೂ ಅವನಿಗೆ ಕೂಡಲೇ ಗೊತ್ತಾಗುತ್ತಿತ್ತು. ಧ್ವನಿ ಏರಿಸಿ ವಾರ್ನ್ ಮಾಡುವ ಅಗತ್ಯ ಇರಲಿಲ್ಲ. ಒಂದು ರೀತಿಯಲ್ಲಿ ‘ಮರ್ಯಾದಾ ಪುರುಷೋತ್ತಮ’ನ ಗುಣ ಹೊಂದಿದವನಾಗಿದ್ದ. ನನ್ನ ಆಫೀಸಿನಲ್ಲಿ ಅವನ ಜಾಗ ನನ್ನ ಟೇಬಲ್ ಕೆಳಗೆ, ನನ್ನ ಪದತಲದಲ್ಲಾಗಿತ್ತು. ಒಮ್ಮೆಯಂತೂ ಅವನು ನನ್ನ ಆಫೀಸಿನಲ್ಲಿ ಇರುವುದು ನನಗೆ ಮರೆತು ಹೋಗಿ ಬಾಗಿಲು ಹಾಕಿಕೊಂಡು ಊಟಕ್ಕೆ ಬಂದುಬಿಟ್ಟಿದ್ದೆ. ಹಿಂದಿರುಗಿ ಹೋದಾಗ ಅವನು ನನ್ನ ಕುರ್ಚಿಯ ಮೆಲೆ ಆರಾಮಾಗಿ ಮಲಗಿದ್ದ. ನಾನು ನನ್ನ ಆಫೀಸಿನವರಿಗೆ ಆ ‘ಹೊಸ ಪ್ರಿನ್ಸಿಪಾಲ್’ ಅನ್ನು ತೋರಿಸಿ ನಕ್ಕಿದ್ದೆ. ನನ್ನನ್ನು ನೋಡಿದವನು ಕುರ್ಚಿಯಿಂದಿಳಿದು ಹೊರ ಹೋಗಿದ್ದ.


ನಮ್ಮ ಸುಕ್ಕುವಿನ ಮರಿಯಾಗಿದ್ದ ಬೋಜೋ ‘ಸ್ವಚ್ಛ ಭಾರತ್’ ಪ್ರಣಾಳಿಕೆಯ ಅಪರಾವತಾರವಾಗಿದ್ದ. ಅವನು ಪುಟ್ಟ ಮರಿ ಇದ್ದಾಗ ನನ್ನ ಮಗಳು ವಿಭಾಳೊಡನೆ ಮಲಗುತ್ತಿದ್ದ. ಒಂದು ಸಲವೂ ಹಾಸಿಗೆಯಲ್ಲಿ ಮೂತ್ರ ಮಾಡಿದವನಲ್ಲ. ಅಷ್ಟು ಶಿಸ್ತಿನ ಸಿಪಾಯಿ. ಅವನ ಶಿಸ್ತಿನ ನಡವಳಿಕೆಯನ್ನು ಅವನ ನಡಿಗೆಯಲ್ಲಿ ಕಾಣಬಹುದಿತ್ತು. ಒಂದು ರೀತಿಯಲ್ಲಿ ಗೌರವ ಕೊಡುವಂತಿದ್ದ ವ್ಯಕ್ತಿತ್ವ ಅವನದ್ದು. 

ಕಲ್ಲಿನಲ್ಲಿ ಕೆತ್ತಿದ ಗ್ರೀಕ್ ಶಿಲ್ಪದಂತಹ ಮೈಕಟ್ಟು ಅವನದ್ದು. ಹದವಾದ ಎತ್ತರದ ಅವನನ್ನು ನೋಡುವುದೇ ಒಂದು ಖುಷಿ. ತುಂಬಾ ತೀಕ್ಷ್ಣ ಕಣ್ಣುಗಳು ಅವನವು. ಅವನು ಮಂಗ ದ್ವೇಷಿ! ಮಂಗಗಳನ್ನು ಕಂಡಾಗ ಅವನ ಓಡುವಿಕೆಯ ವೇಗ ತೀವ್ರಗೊಳ್ಳುತ್ತಿತ್ತು. ಚಿಗರೆ ಮರಿಯಂತೆ ಓಡುತ್ತಿದ್ದ. ಒಮ್ಮೆಯಂತೂ ಮಂಗವೊಂದರೊಡನೆ ಜಗಳವಾಡಿ ಅವನ ಅರ್ಧ ಮುಖ ಹರಿದು ಹೋಗಿತ್ತು. ಡಾಕ್ಟರ್ ಹತ್ತಿರ ಕರೆದೊಯ್ದು, ಹರಿದ ಮುಖವನ್ನು ಹೊಲಿದು, ಬಾಲಣ್ಣ - ಶಂಕರಿಯವರ ಸೇವೆಯಿಂದ ಅವನು ಮೊದಲಿನಂತಾದದ್ದು ಎಲ್ಲರಿಗೂ ಸಮಾಧಾನ ತಂದಿತ್ತು. 

ಅವನು ಕ್ಯಾಂಪಸ್ಸಿನ ನಾಯಕನಾಗಿದ್ದ. ಅವನಿದ್ದರೆ ಎಲ್ಲರಿಗೂ ಒಂದು ರೀತಿಯ ಧೈರ್ಯ. ಕೇವಲ ಮೂರು ವರ್ಷಗಳಲ್ಲಿ ಅವನು ನಮ್ಮನ್ನೆಲ್ಲಾ ತೊರೆದು ಹೋಗಿಬಿಡುತ್ತಾನೆ ಎಂದು ನಾವ್ಯಾರೂ ಕನಸುಮನಸಿನಲ್ಲೂ ಯೋಚಿಸಿರಲಿಲ್ಲ. ಗ್ಯಾಸ್ ಸಿಲಿಂಡರ್ ತರುವ ಗಾಡಿಯ ಚಾಲಕ ನೋಡನೋಡುತ್ತಿದ್ದಂತೆ ಬೋಜೋನ ಮೇಲೆ ಗಾಡಿ ಹಾಯಿಸಿ ಅವನ ಅಂತ್ಯಕ್ಕೆ ಕಾರಣವಾದದ್ದು ಮರೆಯಲಾರದ ನೋವನ್ನು ನಮ್ಮೆಲ್ಲರಿಗೂ ಕೊಟ್ಟಿದೆ. ಎಲ್ಲೇ ಇರಲಿ, ಹೇಗೇ ಇರಲಿ, ಬೋಜೋನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ನಮ್ಮೆಲ್ಲರ ಪ್ರಾರ್ಥನೆ 🙏

Posted 29/1/2026


Tuesday, January 27, 2026

WEDDING INVITE : SANTHOSH/ASHWINI

 Tuesday, January 27, 2026

BirthiMane, Bengaluru


WE ARE GETTING MARRIED✨

Together with our families, we invite you to share in our joy as we embark on this beautiful new journey together! 👩‍❤️‍👨

Please join us for the wedding ceremony of:

SANTHOSH & ASHWINI💍

Pre-Wedding Get-Together🎊

Join us for an evening of laughter and catching up!

🗓️ Wednesday, Feb 25th, 2026

🕓 Time: 4:00 PM onwards

📍 Venue: Shri Rajarajeshwari Sabhabhavna

Location: https://maps.app.goo.gl/wE3wgJgTBbBjy7fr7

The Wedding Ceremony🎊

🗓️ Save the Date: Thursday, February 26th, 2026

🕒 Muhurtham: 11:35 AM 🪔

📍 The Venue: Shri Rajarajeshwari Sabhabhavna

Location: https://maps.app.goo.gl/wE3wgJgTBbBjy7fr7

The Wedding Reception & Lunch 🎊

🗓️ Saturday, February 28th, 2026

🕒 Join us  from 11:00 AM onwards ✨

📍 Venue: Shri Mahishamardhini Temple, Kadiyali

🎐 Location : https://maps.app.goo.gl/pEr4uFvTGoGGPsfP8

Your presence and blessings will make our day truly complete! We can’t wait to celebrate with you! 🥂🎊

ನಮ್ಮ ಮನೆಯ ಮದುವೆ ಕಾರ್ಯಕ್ರಮಕ್ಕೆ ನಿಮ್ಮನ್ನು ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಸಂಭ್ರಮದ ಪ್ರತಿ ಹಂತದಲ್ಲೂ ನಿಮ್ಮ ಮಾರ್ಗದರ್ಶನ ಮತ್ತು ಸಹಾಯ ನಮಗೆ ಅತಿ ಮುಖ್ಯ. ನೀವು ಬಂದು ನಮ್ಮ ಜೊತೆಗಿದ್ದು, ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿ, ಈ ಮದುವೆಯನ್ನು ಮತ್ತಷ್ಟು ಸುಂದರವಾಗಿಸಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ. Jai Mahishmati 🚩







.
Posted 28/1/2026






ಶ್ರೀವಿಷ್ಣು ಸಹಸ್ರನಾಮದ ಮಹತ್ವ:

ಸೋಮವಾರ, 26/1/2026 

ಭೀಷ್ಮಾಷ್ಟಮಿ ಅಂದರೆ ಅಂದೇ ವಿಷ್ಣು ಸಹಸ್ರನಾಮ ಜಯಂತಿ ಅದಕ್ಕಾಗಿ ಈ ಪೋಸ್ಟ್

ಶ್ರೀವಿಷ್ಣು ಸಹಸ್ರನಾಮದ ಮಹತ್ವ:

ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ

೧. ವಿಷ್ಣು ಸ್ವತಃ ತನ್ನ ಹೆಸರಿನ ಅತೀಂದ್ರಿಯ ಧ್ವನಿಯಲ್ಲಿ ಸಂಪೂರ್ಣವಾಗಿ ಅಸ್ತಿತ್ವದಲ್ಲಿರುತ್ತಾನೆ. ಹಾಗಾಗಿ ವಿಷ್ಣುಸಹಸ್ರನಾಮವನ್ನು ಹೆಚ್ಚು ಹೆಚ್ಚು ಕಾಲ ಪಠಣಮಾಡಿದರೆ ಒಳ್ಳೆಯದು.

೨. ವಿಷ್ಣು ಸಹಸ್ರನಾಮದಲ್ಲಿ ಎಲ್ಲ ವೈದಿಕ ಮಂತ್ರಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಈ ಮಂತ್ರವನ್ನು ಪಠಿಸುವ ಮೂಲಕ ಹೇಳುವವರಿಗೆ ಅಷ್ಟೇ ಅಲ್ಲ ಕೇಳುವವರು ಕೂಡ ಪ್ರಯೋಜನ ಪಡೆಯುತ್ತೀರಿ

೩. ವಿಷ್ಣುಸಹಸ್ರನಾಮ ಪಾರಾಯಣಕ್ಕೂ ಭೇದವೇನೂ ಇರುವದಿಲ್ಲ. ಹಾಗೆ ಪಠಣಕ್ಕಾಗಿ ಯಾವುದೇ ಕಠಿಣ ಮತ್ತು ವೇಗದ ನಿಯಮಗಳಿಲ್ಲ. ಯಾವುದೇ ಸಂದರ್ಭಗಳಲ್ಲಿ, ಯಾವುದೇ ಸಮಯದಲ್ಲಿ ನೀವು ಎಲ್ಲಿಯಾದರೂ ಪಠಿಸಬಹುದು.

೪. ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ನಿಮ್ಮ ಹಿಂದಿನ ಜನ್ಮದ ಕರ್ಮದ ಪ್ರತಿಕ್ರಿಯೆಗಳಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.

೫. ವಿಷ್ಣು ಸಹಸ್ರನಾಮ ಪಠಿಸುವ ಭಕ್ತರಿಗೆ ಎಂದೂ ಭಯವಿಲ್ಲ. ಇದರಿಂದ ವಿಶೇಷ ಕಾಂತಿ, ವರ್ಚಸ್ಸು, ಆತ್ಮವಿಶ್ವಾಸ, ಮನೋಬಲ, ದೇಹಬಲ ಇಂದ್ರಿಯಬಲ ಹೆಚ್ಚಾಗಿ ಉತ್ತಮ ಆರೋಗ್ಯವನ್ನು ಪಡೆಯಬಹುದು.

೬. ವಿಷ್ಣುಸಹಸ್ರನಾಮವನ್ನು ಪ್ರತಿನಿತ್ಯ ಪಾರಾಯಣ ಮಾಡಿದರೆ ಜೀವನದಲ್ಲಿ ಬರುವ ಸಂಕಷ್ಟಗಳು ಪರಿಹಾರವಾಗುತ್ತವೆ.

೭. ಶುದ್ಧಮನದಿಂದ ವಿಷ್ಣುಸಹಸ್ರನಾಮವನ್ನು ಪಠಿಸಿದರೆ ಆಧ್ಯಾತ್ಮಿಕ, ಆಧಿದೈವಿಕ ಹಾಗೂ ಆಧಿಭೌತಿಕ ಪೀಡೆಗಳಿಗೆ ಪರಿಹಾರ ದೊರೆಯುತ್ತದೆ.

೮. ವಿಷ್ಣುಸಹಸ್ರನಾಮ ಅಂದರೆ ಮಹಾವಿಷ್ಣುವಿನ ಸಹಸ್ರನಾಮ ಪಠನ ಇದರಲ್ಲಿ ಅಲೌಕಿಕ ಶಕ್ತಿ ಇರುವುದನ್ನು ಅನೇಕ ಸಾಧಕರು ಕಂಡಿದ್ದಾರೆ, ಅನುಭವಿಸಿದ್ದಾರೆ. ವಿಷ್ಣುಸಹಸ್ರನಾಮ ಪಾರಾಯಣದಿಂದ ಕ್ಯಾನ್ಸೆರ್ ನಂತಹ ಭಯಂಕರ ಖಾಯಿಲೆಯಿಂದ ಹಿಡಿದು ಇನ್ನು ಇತರೆ ಕಾಯಿಲೆಗಳು ಕೂಡ ವಾಸಿಯಾಗುತ್ತವೆ.

೯. ಮನೆಯಲ್ಲಿ ಸಾಮೂಹಿಕ ಪಾರಾಯಣ ಪಠಿಸಿದರೆ ಮನೆಯ ವಾತವರಣವೇ ಬದಲಾಗುತ್ತದೆ. ಮನೆಯವ ಮೈಯಲ್ಲಿ ಮನಸ್ಸಲ್ಲಿ ಆಧ್ಯಾತ್ಮದ ಶಕ್ತಿಸಂಚಾರವಾದಂತಹ ಅನುಭವವಾಗುತ್ತದೆ. ಸಾಮೂಹಿಕ ಪಾರಾಯಣದಲ್ಲಿ ಅಂಥ ಒಂದು ವಿಶೇಷ ಶಕ್ತಿ ಇದೆ.

೧೦. ವಿಷ್ಣುಸಹಸ್ರನಾಮಕ್ಕೆ ಗಂಡಸು-ಹೆಂಗಸು-ಶೂದ್ರ-ಬ್ರಾಹ್ಮಣ ಎನ್ನುವ ಭೇದವಿಲ್ಲ. ಅದು ಎಲ್ಲಾ ವರ್ಣಾಶ್ರಮದವರಿಗೆ ಭಗವಂತ ನೀಡಿದ ಪಂಚಮ ವೇದ ಇದಾಗಿದೆ. ಹಾಗಾಗಿ ಈ ಸ್ತೋತ್ರವನ್ನು ಎಲ್ಲ ವರ್ಗದವರು ಮತ್ತು ಎಲ್ಲವಯಸ್ಸಿನವರು ಪಠಿಸಬಹುದಾಗಿದೆ.

11. ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿ ನಾವಾಗಿಯೇ ಪರಣ ಮಾಡಿ ಬರಬಹುದು . ಸಮಯ ವಿಲ್ಲದವರು ತಮ್ಮ ತಮ್ಮ ಮನೆಯಲ್ಲಿಯೇ ನಿತ್ಯ ಪಠಣ ಮಾಡಿದರೆ ನಮಗೂ ಹಾಗು ನಮ್ಮ ಸುತ್ತ ಮುತ್ತಲಿನ ಪರಿಸರಕ್ಕೂ ವಿಶೇಷ ಶಕ್ತಿ ಪ್ರಾಪ್ತಿಯಾಗುವುದು.

12. *ಪ್ರಾಕೃತಿಕ ಸಮತೋಲನಕ್ಕಾಗಿ,

ಗ್ರಾಮದ ಶಾಂತಿಗಾಗಿ,

ಕುಟುಂಬ ರಕ್ಷಣೆಗಾಗಿ, ನಮ್ಮೆಲ್ಲರ ಉನ್ನತಿಗಾಗಿ 

ನಿತ್ಯ ಪಠಿಸೋಣ*


ಮನುಷ್ಯನ ಆಯಸ್ಸು ನೂರು ವರ್ಷ… 

ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು.

ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ..- ಶ್ರೀ ವಿಷ್ಣು ಸಹಸ್ರ ನಾಮ ..

ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ.

ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ಶ್ರೀ ವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ !! ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ಶ್ರೀ ವಿಷ್ಣುಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ ಪರಿಗಣಿಸಿದ್ದಾರೆ. ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು(ಸಾಕ್ಷಾತ್ ಶ್ರೀಹರಿ) ನಮಗೆ ಕರುಣಿಸಿದ್ದಾರೆ

ಶ್ರೀ ವಿಷ್ಣು ಸಹಸ್ರನಾಮ ಮತ್ತು ಅದರ ಮಹತ್ವದ ಬಗ್ಗೆ ಹಿರಿಯರೊಬ್ಬರಿಂದ ಕೇಳಿ ತಿಳಿದ ವಿಚಾರ ....

ತಿರುಚ್ಚಿಯ ಶ್ರೀರಂಗನಾಥ ದೇವಸ್ಥಾನ , ಅಲ್ಲಿ ಬೆಳಗಿನ ಪೂಜೆ ಆದ ಬಳಿಕ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದವನ್ನು ನೆರೆದ ಭಕ್ತರಿಗೆ ಹಂಚುವುದು ವಾಡಿಕೆ .ಹಾಗೆ ಅದನ್ನು ಸ್ವಕರಿಸಲು ಭಕ್ತರೆಲ್ಲರೂ ಸರದಿಯ ಸಾಲಿನಲ್ಲಿ ಬಂದು ಭಕ್ತಿಯಿಂದ ಸ್ವೀಕರಿಸುತ್ತಿದ್ದಾಗ ಕಡು ಬಡವ ಹಿರಿಯರೊಬ್ಬರು ಸರದಿಯ ಸಾಲಿನಲ್ಲಿ ನಿಲ್ಲದೆ ಎಲ್ಲರನ್ನು ದೂಡಿ ಮುಂದೆಹೋಗಿ ನಿಲ್ಲುತ್ತಿದ್ದರು ಅಲ್ಲದೆ ಕೈಯಲ್ಲಿ ದೊಡ್ಡದೊಂದು ಪಾತ್ರೆಯನ್ನು ಹಿಡಿದು ಪ್ರಸಾದವನ್ನು ಕೇಳುತ್ತಿದ್ದರು. ನಾನು ಬಡವ ನನಗೆ 6 ಜನ ಮಕ್ಕಳಿದ್ದಾರೆ , ಇದು ಸಿಗದಿದ್ದರೆ ಅವರೆಲ್ಲ ನಿರಾಹಾರರಾಗ ಬೇಕಾಗುತ್ತದೆ ಎನ್ನುತ್ತಾ ಪ್ರಸಾದವನ್ನು ಕೇಳಿ ಪಡೆಯುತ್ತಿದ್ದರು. ಆದರೆ ಇದು ಪ್ರಸಾದ ಹಂಚುವ ದೇವಸ್ಥಾನದವರಿಗೆ ಮುಜುಗರ ತರುತ್ತಿತ್ತು, ಹಾಗಾಗಿ ಅವರು ನೇರವಾಗಿ ಶ್ರೀಪಾದ ರಾಮಾನುಜರ ಬಳಿ ದೂರು  ಕೊಟ್ಟರು.

ಇದನ್ನು ಕೇಳಿದ ಶ್ರೀಪಾದ ರಾಮಾನುಜರು ಆ ಬಡವನನ್ನು ನೋಡಿ ವಿಚಾರ ತಿಳಿಯಲೆಂದು ಒಂದು ದಿನ ಪ್ರಸಾದ ಹಂಚುವಲ್ಲಿಗೆ ಬಂದು ಆ ಬಡವ ಹಿರಿಯರನ್ನು ಕಂಡು ಯಾಕೆ ಹೀಗೆ ಮಾಡುತ್ತೀರಿ ಎನ್ನಲು . ಆ ಬಡವ ಹಿರಿಯರು ಸ್ವಾಮಿ ನಾನು ಬಡವ ನನಗೆ 6 ಜನ ಸಣ್ಣಸಣ್ಣ ಮಕ್ಕಳಿದ್ದಾರೆ , ಹೊಟ್ಟೆಗೆ ಗತಿಯಿಲ್ಲ ಹಾಗಾಗಿ ನಾನು ಎಲ್ಲರನ್ನು ಹಿಂದೆಹಾಕಿ ಮುಂದೆನಿಂತು ಪಾತ್ರೆಯಲ್ಲಿ ಪ್ರಸಾದ ಕೇಳುತ್ತೇನೆ. ಸಾಲಿನಲ್ಲಿ ನಿಂತರೆ ಎಲ್ಲಿ ಪ್ರಸಾದ ಖಾಲಿಯಾಗುತ್ತದೆಯೋ ಅನ್ನುವ ತವಕ..

ವಿಚಾರ ತಿಳಿದ ಶ್ರೀಪಾದ ರಾಮಾನುಜರು ಆ ಹಿರಿಯರನ್ನು ನಿಮಗೆ ಶ್ರೀ ವಿಷ್ಣುಸಹಸ್ರನಾಮ ಹೇಳಲು ಬರುತ್ತದೆಯೋ ಅನ್ನಲು ಹಿರಿಯರು ನಾನು ಕಲಿತವನಲ್ಲ .. ಆದರೆ ಇಲ್ಲಿ ದೇವಸ್ಥಾನದಲ್ಲಿ ಅಲ್ಪ ಸ್ವಲ್ಪ ಕೇಳಿದ್ದೇನೆ.. ಶ್ರೀ ವಿಷ್ಣುಸಹಸ್ರನಾಮವನ್ನು...

ಹಾಗಾದರೆ ನಿನಗೆ ಬರುವಷ್ಟು ಹೇಳು ಅನ್ನಲು ಆತ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |

ಭೂತಕೃದ್ಭೂತಭೃದ್ಭಾವೋ ... ಅನ್ನುತ್ತಲೇ ಶ್ರೀರಾಮಾನುಜರು ಅಂದರೆ ನಿನಗೆ ಶ್ರೀ ವಿಷ್ಣುವಿನ ಸಾವಿರ ಹೆಸರಿನಲ್ಲಿ ಆರು ಹೆಸರು ಮಾತ್ರ ಬರುತ್ತದೆ .. ಹೌದು ನಾನು ಕಲಿತವನಲ್ಲ... ಆಗ ಶ್ರೀಪಾದರು ಅದಕ್ಕೇನು ಬೇಸರವಿಲ್ಲ ಅದರಲ್ಲಿ ಬರುವ ಆರನೆಯ ಹೆಸರು ಭೂತ-ಭೃತ್: ಅಂದರೆ ಎಲ್ಲಾ ಜೀವಿಗಳನ್ನು ಪೋಷಿಸುವವನು ಎಂದು , ನೀನು ಶ್ರದ್ದೆ ಮತ್ತು ಸಂಪೂರ್ಣ ಭಕ್ತಿಯಿಂದ ಆ ಆರನೆಯ ಹೆಸರನ್ನು ಜಪಮಾಡು ಅದರಿಂದ ನಿನ್ನ ಕಷ್ಟ ಪರಿಹಾರವಾಗುತ್ತದೆ ಎಂದು ಆತನಿಗೆ ಶ್ರೀ ಭೂತ-ಭೃತ್ಯಯೇ ನಮಃ ಅನ್ನುವಂತೆ ಉಪದೇಶಿಸಿದರು..

ಕೆಲದಿನಗಳ ಬಳಿಕ ಶ್ರೀಪಾದರು ಪ್ರಸಾದ ಹಂಚುವವರನ್ನು ಆ ಹಿರಿಯ ವಿಚಾರದಲ್ಲಿ ಕೇಳಿದಾಗ ಅವರು ಸ್ವಾಮಿ ಅವರು ಈಗ ಬರುತ್ತಿಲ್ಲ . ಏನಾಗಿದೆ ಅಂತ ಗೊತ್ತಿಲ್ಲ. ಬಹಳಷ್ಟು ಸಮಯ ವಾಯಿತು ಅವರನ್ನು ನೋಡದೆ.. ಆದರೆ ಒಂದು ವಿಚಾರ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದ ಪೂಜೆಯ ಬಳಿಕ ನೋಡಿದರೆ ಯಾರೋ ತೆಗೆದಂತೆ ಕಾಣುತ್ತದೆ . ಆ ಹಿರಿಯರು ಹೇಗೋ ಬಂದು ಅದನ್ನು ತೆಗೆಯುತ್ತಾರಾ ಏನೋ ಅನ್ನುವ ಸಂಶಯ ವ್ಯಕ್ತ ಪಡಿಸಿದರು. ಶ್ರೀಪಾದರು ಒಂದು ದಿನ ನೋಡಲು ಪ್ರಸಾದ ಪೂಜೆಯ ಬಳಿಕ ಕಮ್ಮಿಯಾದದ್ದನ್ನು ಕಂಡು...

ಶ್ರೀಪಾದರು ಆ ಹಿರಿಯರನ್ನು ಕಾಣಲು ನದಿಯನ್ನು ದಾಟಿ ಹಿರಿಯರಿದ್ದ ಸಣ್ಣ ಗುಡಿಸಲಿನತ್ತ ಹೋದಾಗ ಹಿರಿಯರು ಶ್ರೀಪಾದರ ಕಾಲಿಗೆ ನಮಸ್ಕರಿಸಿ ತಾವು ಮಹಾನ್ ಮಹಿಮರು ನಮ್ಮ ಕಷ್ಟಗಳೆಲ್ಲ ಪರಿಹಾರವಾಯಿತು. ಅಲ್ಲಿಗೆ ಪ್ರಸಾದಕ್ಕೆ ಬರಬೇಕಾಗಿಲ್ಲ ದಿನಾ ನೀವು ಕಳುಹಿಸಿದ ಹುಡುಗ ಬಂದು ನಮಗೆ ಬೇಕಾದಷ್ಟು ಪ್ರಸಾದವನ್ನು ಕೊಟ್ಟು ಹೋಗುತ್ತಿದ್ದಾನೆ . ನಿಮಗೆ ತುಂಬುದು ಹೃದಯದ ಧನ್ಯವಾದಗಳು ಅನ್ನುತ್ತಲೇ ಶ್ರೀಪಾದರಿಗೆ ಅರಿವಾಯಿತು ಇದೆಲ್ಲ ಶ್ರೀ ರಂಗನಾಥನ ಮಹಿಮೆ ....

ಭೂತ-ಭೃತ್: ಎಲ್ಲಾ ಜೀವಿಗಳನ್ನು ಪೋಷಿಸುವವನು ಅವನೇ ಹಾಗಿರುವಾಗ ಭಕ್ತಿಯಿಂದ ಪೂಜಿಸಿದ ಜಪಮಾಡಿದ ಹಿರಿಯರನ್ನು ಹೇಗೆಬಿಟ್ಟುಹೋಗುತ್ತಾನೆ ಎಂದು ಮನದಲ್ಲಿಯೇ ನೆನೆಸಿದರು. ಅಲ್ಲದೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಮಾತು ಮತ್ತೆ ನೆನಪಾಯಿತು. ನಚ ಮಸ್ತಾನಿ ಭೂತಾನಿ .. ಪಶ್ಯಾಮಿ ಯೋಗ ಮಸ್ವರಂ..

ಶ್ರೀ ವಿಷ್ಣುಸಹಸ್ರನಾಮದ ಪ್ರತಿಯೊಂದು ಹೆಸರು ಅದರದೇ ಆದ ಮಹತ್ವವನ್ನು ಹೊಂದಿದೆ ಅದನ್ನು ಅರಿತು ಪಠಿಸಿದರೆ ಒಳ್ಳೆಯದು...

▬▬▬ஜ۩۞۩ஜ▬▬▬*▬▬▬ஜ۩۞۩ஜ▬▬

ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು

'ಸರ್ವೇ ಜನಾಃ ಸುಖಿನೋ ಭವಂತು'

ಶುಭವಾಗಲಿ ಧನ್ಯವಾದಗಳು ಶ್ರೀಮತಿ ನಿರ್ಮಲ ರಾಜೇಶ್  @everyone 

 ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು*

▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

Monday, January 26, 2026

ನವಜಾತ ಶಿಶು - ಸಂಭ್ರಮ - ಶೋಭಾ ಸೋಮಯಾಜಿ

 Monday, 26th January 2026


ದಿನಾಂಕ ಜನವರಿ 23, 2026ರಂದು ನನ್ನ ಮಗನ ಮಗುವಿಗೆ ನಾನು ಅಧಿಕೃತ ಅಜ್ಜಿಯಾದೆ.

ನಾನು ಮದುವೆಯಾಗಿ ಸೇರಿದ ಮನೆ ಕೂಡು ಕುಟುಂಬದ ಮನೆ. ನನ್ನ ಗಂಡ ರವಿ ಆ ಮನೆಯ ಕೊನೆಯ ಸಂಜಾತ. ಹೀಗಾಗಿ ಅವನಿಗೂ ಅವನ ಹಿರಿಯ ಅಣ್ಣ - ಅಕ್ಕಂದಿರಿಗೂ ಸುಮಾರು ಹದಿನೈದು ಇಪ್ಪತ್ತು ವರ್ಷಗಳ ಅಂತರ. ನನ್ನ ಎರಡನೆಯ ಅತ್ತಿಗೆಯ ಮಗಳು ಹೆತ್ತಾಗ ನನಗೆ ಮೂವತ್ತರ ಆಸುಪಾಸಿನ ವಯಸ್ಸು. ನಾನು ಆ ವಯಸ್ಸಿನಲ್ಲಿಯೇ ಅಜ್ಜಿಯ ಪಟ್ಟವನ್ನೇರಿದ್ದೆ! ನಂತರದಲ್ಲಿ ರವಿಯ ಉಳಿದ ಅಣ್ಣ - ಅಕ್ಕಂದಿರ ಮಕ್ಕಳು ಮದುವೆಯಾಗಿ ಪಾಲಕರಾದಾಗ ನಾನು ಅಜ್ಜಿಯ ಸ್ಥಾನದಲ್ಲಿ ಬಡ್ತಿ ಪಡೆಯುತ್ತಾ ಹೋದೆ. ಈಗ ನನ್ನ ಮಗನ ಹೆಂಡತಿ ಹೆತ್ತಾಗ ನಾನು ‘ಅಧಿಕೃತ’ವಾಗಿ ಅಜ್ಜಿಯಾದೆ ಅಂದರೆ ಸರಿ ತಾನೆ!?

ಪುಟ್ಟ ಮಕ್ಕಳೆಂದರೆ ಸಹಜವಾಗಿ ನನ್ನೊಳಗಿಂದ ಒಲುಮೆ ಉಕ್ಕಿ ಹರಿಯುತ್ತದೆ. ಮಕ್ಕಳೊಡನೆ ಮಕ್ಕಳಾಗುವ ಖುಷಿ ಅನುಭವಿಸಿದವರೇ ಬಲ್ಲರು! ಅದರಲ್ಲೂ ಆಗ ತಾನೆ ಹುಟ್ಟಿದ ಮಗುವಿನ ಮೈಯ್ಯ ಬಿಸುಪಂತೂ ಅನಿರ್ವಚನೀಯ ಅನುಭವವನ್ನು ಕೊಡುವಂತಹುದು. ನನ್ನ ಮೊಮ್ಮಗಳು ಹುಟ್ಟಿದ ಒಂದೂವರೆ ತಾಸಿನ ನಂತರ ಬಟ್ಟೆಯಲ್ಲಿ ಸುತ್ತಿ ರೂಮಿಗೆ ತಂದಾಗ ಅದರ ಬರಿ ಮೈಯ್ಯ ಬಿಸುಪನ್ನು ಆಸ್ವಾದಿಸುವ ಅವಕಾಶ ತಪ್ಪಿ ಹೋದದ್ದಕ್ಕೆ ಒಂದರೆಗಳಿಗೆ ಬೇಸರವಾದದ್ದಂತೂ ಸತ್ಯ. ಆದರೆ ನನಗೆ ಬಹಳ ಕೆಮ್ಮು ಬಾಧಿಸುತ್ತಿದ್ದ ಕಾರಣ ಮೊಮ್ಮಗಳನ್ನು ನಾನು ಎತ್ತಿಕೊಳ್ಳುವುದು ಎಷ್ಟು ಸಮಂಜಸ ಎಂದು ನನ್ನೊಳಗೆ ತಾಕಲಾಟವಾದದ್ದೂ ನಿಜ! ಆದರೂ ಮಗುವಿನ ಮೇಲಿನ ಮೋಹ - ಸೆಳೆತ ನನ್ನನ್ನು ಮಗುವನ್ನು ಸ್ವಲ್ಪ ಹೊತ್ತು ಎತ್ತಿಕೊಳ್ಳುವಂತೆ ಮಾಡಿ ಬಿಟ್ಟಿತು. ನನ್ನ ಕೆಮ್ಮಿನಿಂದ ಬಾಣಂತಿ ಹಾಗೂ ಮಗುವಿಗೆ ತೊಂದರೆ ಆಗದೆ ಇರಲಿ ಎಂದು ಮನದಲ್ಲೇ ಪ್ರಾರ್ಥಿಸುತ್ತಾ ಅಪರಾಧಿ ಪ್ರಜ್ಞೆಯಲ್ಲೇ ಮಗು - ಬಾಣಂತಿಯೊಡನೆ ಸ್ವಲ್ಪ ಹೊತ್ತು ಸಮಯ ಕಳೆದೆ. ಅದೃಷ್ಟವಶಾತ್ ನನ್ನ ಕೆಮ್ಮು ಅವರಿಗೆ ಬಾಧೆ ತರದೇ ಇದ್ದದ್ದು ನನ್ನ ಮನಸ್ಸಿಗೆ ಸಮಾಧಾನ ನೀಡಿತು.

ಈ ಎಲ್ಲಾ ಕಲಸುಮೇಲೋಗರದ ಮನಸ್ಥಿತಿಯಲ್ಲಿ ನನ್ನ ‘ಅಜ್ಜಿ’ತನದ ತಾಜಾ ಭಾವನೆಯನ್ನು ಅನುಭವಿಸಲು ಆಗದಿರುವುದು ನನಗೆ ನಂತರದಲ್ಲಿ ಅರಿವಾಯಿತು. ಎಲ್ಲವನ್ನೂ ಅನುಭವಿಸಲು ಯೋಗ ಇರಬೇಕು ಎನ್ನುವ ಬಲ್ಲವರು ಹೇಳಿದ ಮಾತು ಸತ್ಯವೆಂದು ಅನುಭವಕ್ಕೆ ಬಂದಿತು. ಅದೇನೆ ಇರಲಿ; ನಮ್ಮ ಮನೆಗೊಂದು ಹೊಸ ಸದಸ್ಯೆಯ ಆಗಮನವಾಗಿದೆ. ಅದು ನಮಗೆಲ್ಲರಿಗೂ ಖುಷಿ ತಂದ ವಿಷಯವಾಗಿದೆ. ಅಜ್ಜಿಯ ಪಾತ್ರ ನಿರ್ವಹಿಸಲು ಮುಂಬರುವ ದಿನಗಳು ನನ್ನ ಮುಂದಿವೆ ಎನ್ನುವುದು ಸಮಾಧಾನದ ಭಾವ ಕೊಟ್ಟಿದೆ. ಅವಳು ಒಳ್ಳೆಯ ಆಯುರಾರೋಗ್ಯ ಪಡೆದು ಸಂತಸದ ಸಮೃದ್ಧ ಬದುಕನ್ನು ಬಾಳಲಿ ಎಂದು ಮನಃಪೂರ್ವಕವಾಗಿ ಹಾರೈಸುವುದನ್ನು ಬಿಟ್ಟರೆ ನನ್ನಲ್ಲಿ ಅದಕ್ಕಿಂತ ಕೊಡಲು ಹೆಚ್ಚಿನದೇನು ಇಲ್ಲ. ಅಷ್ಟು ಸಾಕಲ್ಲವೆ??


Posted 27/1/2026

EMBASSY PRE-SCHOOL

 Monday, January 26, 2026

13 A Cross, Bhuvaneshwarinagara, Hebbala. Bengaluru.

There is a new Pre-School started by Sri Venkatesh, retired KAS officer,  in the neighbourhood of our 13 A Cross, Bhuvaneshwarinagara.



Very good ambiance for small children , 2+, 3+, 4+ years for learn and play.  Well decorated, designed and colourdul furniture, small play area   etc.




The fee structure of Embassy Preschool,
13th A Cross, Bhuvaneshwari Nagar, is given below:

Fee Structure:

Daycare (1 hour): ₹1,250 permonth 

Playgroup: ₹60,000
Nursery: ₹65,000
LKG: ₹72,000
UKG: ₹75,000

Application Fee: ₹500
Including books and uniform 

(Excluding Transportation)

All celebrations are free except the Annual Day.

For any queries or admissions enquiries, please contact:
Phone: 9606876347 / 6360362208 / 9108845554
Email: [info@embassypreschool.in]
Website: [www.embassypreschool.in]



Best wishes.


Posted 27/1/2026






REPUBLIC DAY 2026

 Monday, 26th January 2026

CoffeeBoard Park, Kempapura, Bengaluru.



ಆತ್ಮೀಯರೆ ಎಲ್ಲರಿಗು ೭೭ನೇ ಗಣರಾಜ್ಯೋ ತ್ಸವದ ಹಾರ್ದಿಕ ಶುಭಾಷಯಗಳು. ತಮ್ಮಗಳಲ್ಲಿ ಮತ್ತೊಮ್ಮೆ ಮನವಿ, ಇಂದು ಕ ಸಾ ಪ ವತಿಯಿಂದ ನಡೆಯಲಿರುವ ಗಣರಾಜ್ಯೋ ತ್ಸವ ಪ್ರಯಕ್ತ ಧ್ವಜಾರೋಹಣ ಕಾರ್ಯಕ್ರಮಕ್ಕೆ ದೇಶಾಭಿಮಾನಿಗಳಾದ ತಾವು ದಯವಿಟ್ಟು ಬಿಡುವು ಮಾಡಿಕೊಂಡು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ತಮ್ಮೆಲ್ಲರಲ್ಲಿ ಕಳಕಳಿಯಿಂದ ವಿನಂತಿಸುತ್ತೇವೆ.ಇದು ನಿಮಗೆ ವಯಕ್ತಿಕ ಮನವಿ ಎಂದು ಪರಿಗಣಿಸಿ ಭಾಗವಹಿಸಬೇಕಾಗಿ ಮನವಿ ಮಾಡುತ್ತಿದ್ದೇನೆ.

ಸ್ಥಳ:ಕಾಫೀ ಬೋರ್ಡ್ ಉದ್ಯಾನವನ

ದಿನಾಂಕ: 26/01/2026

ಸಮಯ: ಬೆಳಿಗ್ಗೆ 7.45 ಗೆ  ಇಂತಿ ನಿಮ್ಮವ, ರೇಣುಕ ಹೆಗ್ಗಡೆ



ಇಂದು ಬೆಳಿಗ್ಗೆ 8.10 ಗಂಟೆಗೆ ಕಾಫಿಬೋರ್ಡ್ ಉದ್ಯಾನವನದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಶಿವಕುಮಾರ್ ಅವರು ಧ್ವಜಾರೋಹಣ ಮಾಡುವುದರೊಂದಿಗೆ 77 ನೆ ಗಣರಾಜ್ಯೋತ್ಸವ ದಿನಾಚರಣೆ ಸಂಪನ್ನ ಗೊಂಡಿತು. 



ಡಿ ಐ ಜಿ ಪಿ ಶಿವಕುಮಾರ್ ಅವರು ತಮ್ಮ ಭಾಷಣದಲ್ಲಿ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತಾ ಭಾರತದ "ರಾಮರಾಜ್ಯ" ಕನಸನ್ನು ಸಾಕರಗೊಳಿಸಲು ಇಂದಿನ ಯುವ ಜನಾಂಗ ಮುಂದೆ ಬರಬೇಕೆಂದು ಮನವಿಮಾಡಿದರು. 

ನಿವೃತ್ತ ಕೆ. ಇ. ಬಿ. ಅಧಿಕಾರಿಯಾಗಿದ್ದ ಛಾಯಾಪತಿ ಅವರು ಗಣರಾಜ್ಯದ ಹಿನ್ನೆಲೆಯನ್ನು ಮಾತನಾಡುತ್ತಾ ಭಾರತದ ಸಂವಿಧಾನದ ಕುರಿತು ಮಾತನಾಡಿ  ಡಾ ಅಂಬೇಡ್ಕರ್ ಅವರನ್ನು ಸ್ಮರಿಸಿದರು. 


Posted 26/1/2026