Monday, July 27, 2026

HAPPY BIRTHDAY LAHARI (20)

 Sunday, July 26, 2026

Birthimane, Bhuvaneshwarinagara, Bengaluru.


Grand Daughter Lahari turning 20, was time for celebration, and we were together at Birthimane and Mom prepared a nice jackfruit Cake.


Lahari, plays Veena melodiously after 10 years of learning & practice, and in the evening today, there will be Veena Concert at TaralaBalu Kendra, R T nagara.


HAPPY BIRTHDAY LAHARI, MAY GOD BLESS YOU WITH LOT OF  ACCOMPLISHMENTS AND ACCOLADES.

Posted 27/7/2026






GENERAL BODY MEETING- 2026

 Sunday, July 26, 2026

TaralaBalu Kendra Granthalaya, R,T. Nagara, Bengaluru.

The Annual Genaral Body Meeting of Shivarama Karantha Vedike held  at the  Granthalaya of TaralaBalu Kendra, Bengaluru.


MANJULA BHARGAVI


After the NAADAGEETHE singing, Dr Deepa Phadke, President, Shivarama Karantha Vedike, welcomed the memebrs present and gave an account the accomplishments of the Vedike in the year 2025 - 26.

NAADA GEETHE 

DEEPA PHADKE


Vedike Secretary, Mrs Manjula Bhargavi, informed the achiements in her reposrt, including the programs happened during the year 2025-26, and the YouTube channel containing more tha 35 novels of Shivarama Karntha.



Treasurer of the Vedike, Jayarama Somayaji presented the report of financial transaction of Shivarama Karantha Vedike, for the year 2025 - 26. audited by Sri Sharatchandra of Sharat & Company, which was approved by the Committe and in the General Body Meeting.

JAYARAMA SOMAYAJI






After some discussion on the report, it was approved.

VEERASHEKHARA SWAMY

Sri Veerashekhara Swamy, Vice President, delivered Vote of thanks.

The meeting concluded for the next program special Upanyasa.


Posted 27/7/2026






















Friday, July 24, 2026

‘ಸ್ನೇಹಿತರ ಕೊರತೆ’ -

 Saturday, July 25, 2026

From WhatsApp


`‘ಸ್ನೇಹಿತರ ಕೊರತೆ’ - ಯೋಚಿಸಬೇಕಾದ ಸಮಯ ಬಂದಿದೆ!

ಈಗ ಜಗತ್ತನ್ನು ಕಾಡುತ್ತಿರುವ ಅತಿದೊಡ್ಡ ಸಮಸ್ಯೆಗಳಲ್ಲಿ ಒಂದು ‘ಸ್ನೇಹಿತರ ಕೊರತೆ’. ನಂಬಲು ಕಷ್ಟವಾದರೂ ಇದು ನಿಜ

ಅಂಕಿಅಂಶಗಳು ಏನು ಹೇಳುತ್ತವೆ?  

1960 ರಲ್ಲಿ ಒಬ್ಬ ವ್ಯಕ್ತಿಗೆ ಸರಾಸರಿ 100 ಆಪ್ತ ಸ್ನೇಹಿತರಿದ್ದರು. 1990 ರ ಹೊತ್ತಿಗೆ ಆ ಸಂಖ್ಯೆ 50 ಕ್ಕೆ ಇಳಿಯಿತು. 2020 ರ ಹೊತ್ತಿಗೆ ಅದು ಕೇವಲ 10 ಕ್ಕೆ ತಲುಪಿತು

ಇನ್ನು ಈಗ? ಒಬ್ಬ ನಿಜವಾದ ಸ್ನೇಹಿತ ಸಿಗುವುದೇ ಕಷ್ಟವಾಗಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ 12% ಜನರಿಗೆ ಹೇಳಿಕೊಳ್ಳುವಂತಹ ಸ್ನೇಹಿತರೇ ಇಲ್ಲವಂತೆ

ಒಂದು ಕಾಲದಲ್ಲಿ ದಿನಕ್ಕೆ ಕನಿಷ್ಠ ಒಂದು ಗಂಟೆ ಸ್ನೇಹಿತರೊಂದಿಗೆ ಮುಖಾಮುಖಿಯಾಗಿ ಕಳೆಯುತ್ತಿದ್ದೆವು. ಈಗ ಅದು 35 ನಿಮಿಷಗಳಿಗೆ ಸೀಮಿತವಾಗಿದೆ. ಸ್ಕ್ರೀನ್ ಮುಂದೆ ಕಳೆಯುವ ಸಮಯ ಹೆಚ್ಚಾಯಿತು, ಮನಸು ಬಿಚ್ಚಿ ಮಾತನಾಡುವ ಜನರ ಸಂಖ್ಯೆ ಕಡಿಮೆಯಾಯಿತು

ಸ್ನೇಹ = ಜೀವನಕ್ಕೆ ಇನ್ಸೂರೆನ್ಸ್.  

ಒಳ್ಳೆಯ ಸ್ನೇಹಿತರು ನಿಜವಾಗಿಯೂ ‘ಲೈಫ್ ಇನ್ಸೂರೆನ್ಸ್’ ಇದ್ದಂತೆ. ಏಕೆಂದರೆ

1. ಆರೋಗ್ಯಕ್ಕೆ ಒಳ್ಳೆಯದು: ಸ್ನೇಹಿತರಿಲ್ಲದ ಏಕಾಂಗಿತನ ದಿನಕ್ಕೆ 20 ಸಿಗರೇಟ್ ಸೇದಿದಷ್ಟೇ ಅಪಾಯಕಾರಿ ಎಂದು ಸಂಶೋಧನೆಗಳು ಹೇಳುತ್ತವೆ. ಒತ್ತಡ, ಡಿಪ್ರೆಶನ್ ಅವರನ್ನು ಆವರಿಸುತ್ತದೆ

2. ಹೃದಯಕ್ಕೆ ಭರವಸೆ: ಒಳ್ಳೆಯ ಸ್ನೇಹಿತರಿರುವವರಲ್ಲಿ ರಕ್ತದೊತ್ತಡ, ಹೃದ್ರೋಗಗಳು ತುಂಬಾ ಕಡಿಮೆ ಬರುತ್ತವೆ  

3. ಚಟುವಟಿಕೆಯ ಜೀವನ: ಸ್ನೇಹಿತರ ಜೊತೆಯಿದ್ದರೆ ಖುಷಿಯಾಗಿರುತ್ತದೆ. ಒಟ್ಟಿಗೆ ವ್ಯಾಯಾಮ ಮಾಡುವುದು, ಆಟವಾಡುವುದು, ಹೊಸ ಕೆಲಸಗಳನ್ನು ಶುರುಮಾಡುವುದು ಸುಲಭವಾಗುತ್ತದೆ. ಅವರ ಒಡನಾಟ ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಸ್ನೇಹ ಎಂದರೆ ಇನ್‌ಸ್ಟಂಟ್ ನೂಡಲ್ಸ್ ಅಲ್ಲ.  

ಸ್ನೇಹ ಸುಮ್ಮನೆ ಹುಟ್ಟುವುದಿಲ್ಲ. ಅದಕ್ಕೆ ‘ಸಮಯ’ ಎಂಬ ಅತಿದೊಡ್ಡ ಹೂಡಿಕೆ ಬೇಕು

ಮನಶಾಸ್ತ್ರಜ್ಞರ ಲೆಕ್ಕದ ಪ್ರಕಾರ

ಒಬ್ಬ ವ್ಯಕ್ತಿಯೊಂದಿಗೆ ಕನಿಷ್ಠ ಪರಿಚಯವಾಗಲು 40 ಗಂಟೆಗಳು ಒಟ್ಟಿಗೆ ಕಳೆಯಬೇಕು

ಅದು ಒಂದು ರೀತಿಯ ಸ್ನೇಹವಾಗಲು ಇನ್ನೂ 90 ಗಂಟೆಗಳು ಬೇಕು 

‘ ಪ್ರಾಣ ಸ್ನೇಹಿತ’ * ಎಂಬ ಹಂತಕ್ಕೆ ತಲುಪಲು ಇನ್ನೂ 40 ಗಂಟೆಗಳು ಬೇಕು  

ಒಟ್ಟು ಸುಮಾರು 170 ಗಂಟೆಗಳು! ಈ ಓಟದ ಜೀವನದಲ್ಲಿ ನಮ್ಮ ಬಳಿ ಅಷ್ಟು ಸಮಯ ಇದೆಯಾ

ಒಮ್ಮೆ ಒಳ್ಳೆಯ ಸ್ನೇಹ ಬೆಳೆದ ನಂತರ ಅದನ್ನು ಉಳಿಸಿಕೊಳ್ಳಲು ಕೂಡ ಪ್ರತಿದಿನ ಸ್ವಲ್ಪ ಸಮಯ ಮೀಸಲಿಡಬೇಕು. ಗಿಡಕ್ಕೆ ನೀರು ಹಾಕಿದಂತೆ, ಸ್ನೇಹಕ್ಕೂ ‘ಮಾತುಗಳು’ ಎಂಬ ನೀರು ಬೇಕು



ಇದು ಸ್ನೇಹವೇ? ಒಮ್ಮೆ ಯೋಚಿಸಿ:

1. ಆಫೀಸ್ ಸ್ನೇಹಗಳು: ನಾವು ‘ಸ್ನೇಹ’ ಎಂದು ಭಾವಿಸುವುದು ಬಹಳಷ್ಟು ಅವಶ್ಯಕತೆಗಳವರೆಗೆ, ಬಾಹ್ಯ ಶುಭಾಶಯಗಳೇ  

2. ಸೋಶಿಯಲ್ ಮೀಡಿಯಾ ಸ್ನೇಹಗಳು: ಫೇಸ್‌ಬುಕ್‌ನಲ್ಲಿ 5000 ಫ್ರೆಂಡ್ಸ್, ವಾಟ್ಸಾಪ್‌ನಲ್ಲಿ 100 ಗ್ರೂಪ್‌ಗಳಿದ್ದರೂ, ಆಪತ್ತಿನಲ್ಲಿ ಸಹಾಯ ಮಾಡುವವರು ಒಬ್ಬರೂ ಇರುವುದಿಲ್ಲ. ಇವು ಬಹಳಷ್ಟು ‘ಕಾಲಕ್ಷೇಪ’ ಮಾತುಗಳೇ

3. ಬಾರ್ & ರೆಸ್ಟೋರೆಂಟ್ ಸ್ನೇಹಗಳು: ಗ್ಲಾಸ್ ಖಾಲಿಯಾಗುವವರೆಗಿನ ಮಾತುಗಳು, ನಗುಗಳು. ಮಾದಕತೆ ಇಳಿದರೆ ಮನುಷ್ಯ ಮಾಯ

ಅಸಲಿ ಸಮಸ್ಯೆ ಎಲ್ಲಿದೆ?  

ಸ್ನೇಹದ ಬಂಧಗಳು ಏಕೆ ಕಡಿದುಕೊಳ್ಳುತ್ತಿವೆ ಎಂದರೆ ಕಾರಣಗಳು ಬಹಳಷ್ಟಿವೆ. ಟೆಕ್ನಾಲಜಿ, ನ್ಯೂಕ್ಲಿಯರ್ ಫ್ಯಾಮಿಲಿಗಳು, ಸ್ಪರ್ಧೆಯ ಜಗತ್ತು... ಆದರೆ ಎಲ್ಲಕ್ಕಿಂತ ದೊಡ್ಡ ಕಾರಣ ಒಂದೇ

“ಸಮಯವಿಲ್ಲ ಮಿತ್ರಮಾ!”

ಹಣ ಸಂಪಾದಿಸುವ ಯಂತ್ರಗಳಂತೆ ಆಗಿಬಿಟ್ಟಿದ್ದೇವೆ. ಬಂಧಗಳನ್ನು ಉಳಿಸಿಕೊಳ್ಳುವುದನ್ನು ಮರೆತಿದ್ದೇವೆ

ಈಗಲಾದರೂ ಎಚ್ಚರಗೊಳ್ಳಿ:

1. ಸಮಯ ಮೀಸಲಿಡಿ: ದಿನದಲ್ಲಿ 15 ನಿಮಿಷವಾದರೂ ಸ್ನೇಹಿತರಿಗೆ ಫೋನ್ ಮಾಡಿ ಮಾತನಾಡಿ. ವಾರದಲ್ಲಿ ಒಮ್ಮೆಯಾದರೂ ಭೇಟಿಯಾಗಿ 

2. ಕ್ವಾಲಿಟಿ ಟೈಮ್ ಕೊಡಿ: ಭೇಟಿಯಾದಾಗ ಫೋನ್ ಪಕ್ಕದಲ್ಲಿಟ್ಟು ಮನಸಿಟ್ಟು ಮಾತನಾಡಿ 

3. ಹೊಸ ಸ್ನೇಹಗಳನ್ನು ಸ್ವಾಗತಿಸಿ: ವಾಕಿಂಗ್‌ಗೆ ಹೋದಾಗ, ಹೊಸ ಕ್ಲಾಸ್‌ಗೆ ಸೇರಿದಾಗ ಜನರೊಂದಿಗೆ ಮಾತು ಬೆಳೆಸಿ

4. ಇರುವ ಸ್ನೇಹಗಳನ್ನು ಕಾಪಾಡಿಕೊಳ್ಳಿ: ಸಣ್ಣಪುಟ್ಟ ಮನಸ್ತಾಪಗಳಿಗೆ ಬೆಲೆಬಾಳುವ ಸ್ನೇಹವನ್ನು ಬಿಟ್ಟುಕೊಡಬೇಡಿ. ‘ಸಾರಿ’, ‘ಥ್ಯಾಂಕ್ಸ್’ ಹೇಳಲು ಹಿಂಜರಿಯಬೇಡಿ

ನೆನಪಿರಲಿ, ಕೊನೆಯ ಉಸಿರಿನವರೆಗೂ ನಮ್ಮೊಂದಿಗೆ ನಡೆಯುವುದು ಬ್ಯಾಂಕ್ ಬ್ಯಾಲೆನ್ಸ್ ಅಲ್ಲ, ಒಳ್ಳೆಯ ಸ್ನೇಹಿತರು ಮಾತ್ರ

ಆದ್ದರಿಂದ ಇಂದಿನಿಂದಲೇ ಶುರುಮಾಡಿ. ನಿಮ್ಮ ಫೋನ್ ಕಾಂಟಾಕ್ಟ್ ಲಿಸ್ಟ್ ತಿರುಗಿಸಿ. ಬಹಳ ಕಾಲದಿಂದ ಮಾತನಾಡದ ಆ ‘ಬೆಸ್ಟ್ ಫ್ರೆಂಡ್’ಗೆ ಒಂದು ಮೆಸೇಜ್ ಮಾಡಿ

ಸ್ನೇಹವನ್ನು ಉಳಿಸಿಕೊಳ್ಳೋಣ. ನಮ್ಮನ್ನು ನಾವು ಕಾಪಾಡಿಕೊಳ್ಳೋಣ.



ಸಂಗ್ರಹ : ಕೃತಂ

Posted 25/7/2026

Thursday, July 23, 2026

BHAJANE/SATSANG AT SUNANDI OLDAGE HOME - 67

 Thursday, July 23, 2026

Sunandi Oldage Home, KodigeHalli, Bengaluru.

Another divine session of Bhajane and Satsang took place to the benefit of residents of Sunandi Oldage Care.




The inmates, at least for sometime forget their vows and pain, and involved in devotional singing.



Sri Ramakrishna Bhat (Parabrahma Vittaladasa) conveyed the importance of reading BHAGAVADDEETHA in young age and Bhagavantana Namasmarane.




The session ended with Mangalarathi, Vibhoothi and Prasada from Bhat's house.

Sarve Janah Sukhino Bhavanthu,

Om Shanthi.... Shanthi..... Shanthi....


Posted 24/7/2026

















 

Tuesday, July 21, 2026

ಮರೆಯಾಗುತ್ತಿರುವ ಹಿರಿಯರ ತಲೆಮಾರು

 ಬುಧವಾರ, ಜುಲೈ 22, 2026 

ಮರೆಯಾಗುತ್ತಿರುವ ಹಿರಿಯರ ತಲೆಮಾರು

ಒಬ್ಬೊಬ್ಬರಾಗಿ ನಮಗೆ ಶಾಶ್ವತ ವಿದಾಯ ಹೇಳುತ್ತಾ ಒಂದು ಅದ್ಭುತ ತಲೆಮಾರು ನಿಧಾನವಾಗಿ ನಮ್ಮಿಂದ ದೂರವಾಗುತ್ತಿದೆ.

1. ಊಟ ಮಾಡುವ ಮೊದಲು ಇತರರ ಹಸಿವನ್ನು ಅರಿತ ತಲೆಮಾರು.

2. ಇಕ್ಕಟ್ಟಿನ ಮನೆಗಳಲ್ಲೂ ಅಪಾರ ಪ್ರೀತಿ ಮತ್ತು ಸಂತೋಷದಿಂದ ಬದುಕಿದ ತಲೆಮಾರು.

3. ಜವಾಬ್ದಾರಿಯನ್ನು ಅರಿತ ತಲೆಮಾರು. "ನಾನು" ಎನ್ನುವುದಕ್ಕಿಂತ "ನಾವು" ಎಂದು ಬದುಕಿದ ತಲೆಮಾರು.

4. ಪದವಿಗಳಿಲ್ಲದಿದ್ದರೂ ಜೀವನವನ್ನೇ ಓದಿದ ತಲೆಮಾರು.

5. ಗಡಿಯಾರವಿಲ್ಲದಿದ್ದರೂ ಸಮಯವನ್ನು ಸರಿಯಾಗಿ ಬಳಸಿದ ತಲೆಮಾರು.

6. ಇಂಟರ್ನೆಟ್ ಇಲ್ಲದಿದ್ದರೂ ಜ್ಞಾನವನ್ನು ಸಂಪಾದಿಸಿದ ತಲೆಮಾರು.

7. ಕ್ಯಾಲ್ಕುಲೇಟರ್ ಇಲ್ಲದಿದ್ದರೂ ಲೆಕ್ಕ ಹಾಕಬಲ್ಲ ತಲೆಮಾರು.

8. ಮೊಬೈಲ್ ಫೋನ್‌ಗಳಿಲ್ಲದಿದ್ದರೂ ಸ್ನೇಹ ಮತ್ತು ಮಾತುಕತೆಯಲ್ಲಿ ಕೊರತೆಯಿಲ್ಲದ ತಲೆಮಾರು.

9. ಟಿವಿ ಇಲ್ಲದಿದ್ದರೂ ಸಂತೋಷದಿಂದ ಸಮಯ ಕಳೆಯುತ್ತಿದ್ದ ತಲೆಮಾರು.

10. GPS ಇಲ್ಲದಿದ್ದರೂ ಗುರಿಯನ್ನು ನಿಖರವಾಗಿ ತಲುಪಿದ ತಲೆಮಾರು.

11. ತಂತ್ರಜ್ಞಾನವಿಲ್ಲದಿದ್ದರೂ ಸುಖ-ಸಂತೋಷದಿಂದ ಬದುಕಿದ ತಲೆಮಾರು.

12. ಎಸಿ ಅಥವಾ ಕೂಲರ್ ಇಲ್ಲದಿದ್ದರೂ ತೆರೆದ ಗಾಳಿಯಲ್ಲಿ ಸುಖವಾಗಿ ನಿದ್ರಿಸಿದ ತಲೆಮಾರು.

13. ಮಿನರಲ್ ವಾಟರ್ ಬದಲು ಬಾವಿ ಅಥವಾ ಕೆರೆಯ ನೀರು ಕುಡಿದು ಆರೋಗ್ಯವಾಗಿ ಬದುಕಿದ ತಲೆಮಾರು.

14. ಪಿಜ್ಜಾ, ಬರ್ಗರ್ ಇಲ್ಲದೇ ಅತ್ತಿ ಹಣ್ಣು,ಮಿಠಾಯಿ, ಮಂಡಕ್ಕಿ ಮುಂತಾದ ಸರಳ ಆಹಾರಗಳಲ್ಲಿ ಸಂತೋಷ ಕಂಡ ತಲೆಮಾರು.

15. ರಾತ್ರಿ ಮನೆಯ ಮುಂಭಾಗದಲ್ಲಿ ಕುಳಿತು ಕಥೆ ಹೇಳುತ್ತಾ ಕಾಲ ಕಳೆಯುತ್ತಿದ್ದ ತಲೆಮಾರು.

16. ಆರು ವರ್ಷದವರೆಗೆ ಮಕ್ಕಳ ಬಾಲ್ಯವನ್ನು ಆಟ-ಪಾಟಗಳಿಂದ ತುಂಬಿಸಿದ ತಲೆಮಾರು.

17. ನಂತರ ಉಚಿತ ಸರ್ಕಾರಿ ಶಾಲೆಗಳಲ್ಲಿ ತಾಯಿನುಡಿಯಲ್ಲಿ ಶಿಕ್ಷಣ ನೀಡಿ, ಮಕ್ಕಳು ಹಿಂದೀ ಮತ್ತು ಆಂಗ್ಲದಲ್ಲೂ ಪಾಂಡಿತ್ಯ ಗಳಿಸುವಂತೆ ಮಾಡಿದ ತಲೆಮಾರು.

18. ಹಲವು ಕಿಲೋಮೀಟರ್ ದೂರವನ್ನೂ ಸುಲಭವಾಗಿ ನಡೆದು ಹೋಗುತ್ತಿದ್ದ ತಲೆಮಾರು.

19. ಶಾಲೆಯಲ್ಲಿ ಶಿಕ್ಷಕರು ತಪ್ಪು ಮಾಡಿದ ಮಗುವಿಗೆ ಹೊಡೆದರೆ, ಮನೆಯಲ್ಲಿ ಮತ್ತಷ್ಟು ಶಿಸ್ತು ಕಲಿಸಿದ ತಲೆಮಾರು.

20. ಬೀದಿ ನಾಟಕ, ತೊಗಲು ಗೊಂಬೆಯಾಟ ಮತ್ತು ಪುರಾಣ ಕಥೆಗಳನ್ನು ಆಸ್ವಾದಿಸಿದ ತಲೆಮಾರು.

21. ಸೆನ್ಸಾರ್ ಅಗತ್ಯವಿಲ್ಲದ ಅರ್ಥಪೂರ್ಣ ಕಪ್ಪು-ಬಿಳಿ ಸಿನಿಮಾಗಳನ್ನು ನೋಡಿದ ತಲೆಮಾರು.

22. ಮನೆಯ ಬಾಗಿಲನ್ನು ರಂಗೋಲಿಯಿಂದ ಅಲಂಕರಿಸಿದ ತಲೆಮಾರು.

23. ಯೋಗ, ಜಿಮ್ ಅಥವಾ ವ್ಯಾಯಾಮ ಕೇಂದ್ರಗಳಿಲ್ಲದೆ ಕಷ್ಟಪಟ್ಟು ದುಡಿದು, ಬೆವರು ಸುರಿಸಿ ದೀರ್ಘಾಯುಷ್ಯ ಪಡೆದ ತಲೆಮಾರು.

24. ಬಂಧು-ಬಳಗ ಮತ್ತು ಸಂಬಂಧಗಳಿಗೆ ಮೌಲ್ಯ ನೀಡಿದ ತಲೆಮಾರು.

25. ಆಸ್ತಿಗಿಂತ ಪ್ರೀತಿ ಮತ್ತು ಬಾಂಧವ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ ತಲೆಮಾರು.

26. ಕೂಡು ಕುಟುಂಬಗಳಲ್ಲಿ ಸಂತೋಷದಿಂದ ಬದುಕಿದ ತಲೆಮಾರು.

27. ಭಿನ್ನಾಭಿಪ್ರಾಯಗಳಿದ್ದರೂ ಎಲ್ಲರನ್ನು ಪ್ರೀತಿಯಿಂದ ಒಗ್ಗೂಡಿಸಿಕೊಂಡ ತಲೆಮಾರು.

28. ವ್ಯಾಪಾರದಲ್ಲಿ ಕಲಬೆರಕೆಗೆ ಅವಕಾಶ ಕೊಡದ ತಲೆಮಾರು.

29. ಇತರರ ಒಳಿತನ್ನೇ ಬಯಸಿದ ತಲೆಮಾರು.

30. ನ್ಯಾಯ, ಪ್ರಾಮಾಣಿಕತೆಯಿಂದ ಯಾರನ್ನೂ ಮೋಸ ಮಾಡದೆ ಬದುಕಿದ ತಲೆಮಾರು.

31. ಎಂತಹ ಕಠಿಣ ಆಹಾರವನ್ನೂ ಜೀರ್ಣಿಸಬಲ್ಲ ದೇಹ ಹೊಂದಿದ್ದ ತಲೆಮಾರು.

32. ಕಾರ್ಪೊರೇಟ್ ಆಸ್ಪತ್ರೆಗಳಿಲ್ಲದಿದ್ದರೂ ಆರೋಗ್ಯದಿಂದ ಬದುಕಿದ ತಲೆಮಾರು.

33. ಹೃದಯಾಘಾತ, ಕ್ಯಾನ್ಸರ್‌ಗಳ ಬಗ್ಗೆ ಅಷ್ಟಾಗಿ ತಿಳಿಯದ ತಲೆಮಾರು.

34. ರಕ್ತದೊತ್ತಡ ಮತ್ತು ಮಧುಮೇಹವನ್ನು ದೂರವಿಟ್ಟ ತಲೆಮಾರು.

35. ಲಾಂಟರ್ನ್ ದೀಪದ ಬೆಳಕಿನಲ್ಲಿ ಜೀವನವನ್ನು ಬೆಳಗಿಸಿದ ತಲೆಮಾರು.

36. ಕಷ್ಟಗಳನ್ನು ಧೈರ್ಯದಿಂದ ಎದುರಿಸಿದ ತಲೆಮಾರು.

37. ಎಷ್ಟೇ ಇದ್ದರೂ ಇನ್ನೂ ಬೇಕೆಂಬ ಅತಿಯಾದ ಆಸೆ ಇಲ್ಲದೆ ಸಂತೋಷದಿಂದ ಬದುಕಿದ ತಲೆಮಾರು.

38. ಆಡಂಬರದಿಂದ ದೂರವಿದ್ದು, ಪೋಸ್ಟ್‌ಕಾರ್ಡ್‌ಗಳ ಮೂಲಕ ಭಾವನೆಗಳನ್ನು ಹಂಚಿಕೊಂಡ ತಲೆಮಾರು.

39. ತಮ್ಮ ತ್ಯಾಗಗಳಿಂದ ಮಕ್ಕಳ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿದ, ಜಾತಿ-ಧರ್ಮಗಳಾಚೆ ಸಹೋದರತ್ವದಿಂದ ಬದುಕಿದ ತಲೆಮಾರು.

40. ಕಾಫಿ, ಟಿಫಿನ್ ಇಲ್ಲದೇ ತಂಗಳ ಅನ್ನ ತಿಂದು ಶಾಲೆಗೆ ಓಡಿದ ತಲೆಮಾರು.

ಇಂತಹ ಅಮೂಲ್ಯ ತಲೆಮಾರಿನವರು ಇಂದು ಒಬ್ಬೊಬ್ಬರಾಗಿ ನಮ್ಮನ್ನು ಅಗಲುತ್ತಿದ್ದಾರೆ.

ಅವರನ್ನು ಕಳೆದುಕೊಳ್ಳುವಾಗ, ನಮ್ಮ ಜೀವನದ ಅಮೂಲ್ಯವಾದ ಒಂದು ಯುಗವೇ ಕಳೆದುಹೋದಂತೆ ಅನಿಸುತ್ತದೆ.


WhatsAp forwarded 

Posted 22/6/2026 

ಗ್ರಾಮ ದೇವತೆ - ಶ್ರೀ ಮುತ್ತು ಮಾರಿಯಮ್ಮ - ಹುಣಸೂರು

 ಭಾನುವಾರ, ಜುಲೈ 19, 2026 

ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ - ಹುಣಸೂರು. 



ನಾವು ಶನಿವಾರ ಸಂಜೆ ಹುಣಸೂರಿನಲ್ಲಿ ಮಡದಿ ನಳಿನಿಯ ಸಹೋದರ ಸತೀಶ್ ರಾವ್ ಅವರ ಮನೆಯಲ್ಲಿ  ಇದ್ದು ಮಾರನೇ ದಿನ ಬೆಳಿಗ್ಗೆ ಸ್ನಾನ ಫಲಾಹಾರವನ್ನು ಮುಗಿಸಿ ಹತ್ತಿರದ ಗ್ರಾಮ ದೇವತೆ ಶ್ರೀ ಮುತ್ತು ಮಾರಿಯಮ್ಮನ ಸನ್ನಿಧಾನಕ್ಕೆ ಬಂದೆವು. 



ಕಿರಿದಾದ ರಸ್ತೆ ಯಿಂದ ತೆರಳಬೇಕಾದ ಜಾಗ, ಸುಂದರವಾದ ವಾತಾವರಣ, ಶುಚಿಯಾಗಿ ಇರುವ ಪ್ರಾಂಗಣ ಹಾಗೂ ದೇವತೆ, ಮನಸ್ಸಿಗೆ ಆಹ್ಲಾದಕರ ದೇವಸ್ಥಾನ. 



ಸುತ್ತಲಿನ ಜಾಗ ಕಿರಿದಾಗಿದ್ದರೂ ಹಲವಾರು ದೇವ ದೇವತೆಯರ ವಿಗ್ರಹಗಳು, ಭಕ್ತರನ್ನು ಮುದ ಗೊಳಿಸುವ ಪ್ರಾಂಗಣ, ನಾವೂ ಸ್ವಲ್ಪ ಹೊತ್ತು ವಿರಮಿಸಿ, ಧ್ಯಾನಸ್ತರಾಗಿ ದೇವಿಯ ದರ್ಶನ, ಮಂಗಳಾರತಿ ವೀಕ್ಷಿಸಿ ಅಲ್ಲಿಂದ ನಿರ್ಗಮಿಸಿದೆವು. 



ಹುಣಸೂರು ಪಟ್ಟಣದ ಪ್ರಮುಖ ಗ್ರಾಮದೇವತೆಯು ಶ್ರೀ ಮುತ್ತು ಮಾರಿಯಮ್ಮ (ಶ್ರೀ ಶ್ರೀ ಮುತ್ತು ಮಾರಿಯಮ್ಮನವರು) ಆಗಿದ್ದಾರೆ. ಈ ದೇವಸ್ಥಾನವು ಹುಣಸೂರಿನ ಕಲ್ಕುಣಿಕೆ ಪ್ರದೇಶದಲ್ಲಿದೆ. 

ದೇವಾಲಯದ ವತಿಯಿಂದ ಪ್ರತಿ ವರ್ಷ ಅದ್ಧೂರಿಯಾಗಿ ಕರಗ ಮಹೋತ್ಸವ ಮತ್ತು ಜಾತ್ರಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದು ೫೦ನೇ ವರ್ಷದ ಕರಗ ಮಹೋತ್ಸವಗಳನ್ನು ಕಂಡಿದ್ದು, ಭಕ್ತರು ಅತ್ಯಂತ ಭಕ್ತಿಯಿಂದ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ. 


Posted 21/7/2026 






Monday, July 20, 2026

SEENA AT THE PET BOARDING.

 Sat, Sun, Mon 18, 19, 20th July 2026

As we were going to Hunsur for a visit and to attend a function, Pet Seena was left at the boarding on Saturday 18th July.



Monday, 20th July, midday, we collected him from the boarding and he was happy.



Posted 20/7/2026












ಪಾರಾಯಣ ಪೂಜೆ - ನಿತೀಶ್/ವೈಷ್ಣವಿ

 ಭಾನುವಾರ, ಜುಲೈ 19, 2026 

ಹುಣಸೂರು , ಕರ್ನಾಟಕ 


ಮಡದಿ ನಳಿನೀಯ ಸಹೋದರ ದಿನೇಶ್ ರಾವ್ ಅವರ ಮನೆಯಲ್ಲಿ ಅವರ ಮಗ ಸೊಸೆ , ನಿತೀಶ್, ವೈಷ್ಣವಿ ಅವರು ಆಶಾಡ ಮಾಸದ ವಿಶೇಷವಾದ ಪಾರಾಯಣ ಪೂಜೆಯನ್ನು ಸಂಪನ್ನ ಗೊಳಿಸಿದರು 







ನೆರೆದಿದ್ದ ಬಂಧು ಬಳಗದವರು ಪೂಜೆಯಲ್ಲಿ ಭಾಗವಹಿಸಿ ಶೋಭಾನೆ ಹಾಡು, ವಿಷ್ಣು ಸಹಸ್ರನಾಮ ಪಟಿಸಿ ಕಾರ್ಯಕ್ರಮವನ್ನು ಚಂದಗಾಣಿಸಿದರು . 



ಮಂಗಳಾರತಿಯ ನಂತರ ತೀರ್ಥ, ಪ್ರಸಾದವು ನೆರವೇರಿತು. 
ಭೋಜನದ ವ್ಯವಸ್ತೆಯನ್ನು ರಾಘವೇಂದ್ರ ಸ್ವಾಮಿ ಸಭಾಂಗಣ ದಲ್ಲಿ ಏರ್ಪಡಿಸಲಾಗಿತ್ತು. ವಿಶೇಷ ಊಟ, ಮೈಸೂರು  ಪಾಕ್, ಪಾಯಸ, ಇತ್ಯಾದಿಗಳೊಂದಿಗೆ ಪೂರ್ಣಗೊಂಡಿತು. 

ಸರ್ವೇ ಜನಾಹ ಸುಖಿನೋ ಭವಂತು.....

ಓಂ ಶಾಂತಿ.. ಶಾಂತಿ.. ಶಾಂತಿ.. 


Posted  20/7/2026 


















Sunday, July 19, 2026

HOME VISIT - SATHISH RAO HUNSUR

 Saturday/Sunday 18 -19 July 2026

Sathisha, Nalini's brother, living at Hunsur, recently had knee surgery and is recovering. 



Nalini's sisters Vijaya, Sujatha,and her daughter Dr Smitha (Mittu) came from Udupi to attend a function at another brother Dinesh's house.


Sunday after lunch at Raghavendra Swamy Mutt, we left for Bengaluru.



Ramanagara, returning to Bengaluru

Reached home by 7.30 pm

All well.

Posted 20/7/2026














MYSURU - HOME VISITS

 Saturday, July 18, 2026

Mysuru Home visits

1. Visit to Shama-Abhijith

Short visit to Shama Abhijith in their home at Vidyarayapuram, Mysuru.




on the Expressway near Ramanagara 

After casual talk, and tea & biscuits, we left from the place.

2. Ashwin Pandith/ Shwetha, daughter Jagruthi.


Ashwin /Shwetha were neighbours near our house Birthimane at Bengaluru and they have shifted to Mysuru, staying at Jayanagara, Ashwin is purohith and both they catering for special ocassion.

3. Usha Bopayya at Jayalakshmipurum, Mysuru



Usha Bopayya were longtime family friends, even when Bopayya was there, and now Usha, 85, lives in Aishwarya apartments for some years, her children Ashish, Nitya and Ramya visit them.

From there, we proceeded to Hunsur for night halt.


Posted 20/6/2026