Wednesday, March 18, 2026

ಡಿ ವಿ ಜಿ. ನಮನ - ಸ್ನೇಹ ಸೇತು

 ಮಂಗಳವಾರ, ಮಾರ್ಚ್ 17, 2026 

ಮಂಗಳಾ ವೆಂಕಟೇಶ ಅವರ ಮನೆ, ಗೋವಿಂದರಾಜ ನಗರ, ಬೆಂಗಳೂರು. 


ಸಮಾನ ಮನಸ್ಕರು ಸೇರಿ ಮಹಾ ಚೈತನ್ಯ ಡಿವಿಜಿಯವರ ನುಡಿ ನಮನ ಕಾರ್ಯಕ್ರಮ ಅದ್ಭುತವಾಗಿ ಸಂಪನ್ನಗೊಂಡಿತು. ರೂವಾರಿ ಶ್ರೀಪಾದ ರಾವ್ ಮಂಜುನಾಥ್, ಮಂಗಳಾವೆಂಕಟೇಶ್  ಅವರಿಗೆ ಧನ್ಯವಾದಗಳು.

ಭಾಗವಹಿಸಿದ್ದ ಇತರರ ಪ್ರತಿಕ್ರಿಯೆಗಳು:

ನಳಿನಿ ಸೋಮಯಾಜಿ:

ಒಂದು ಸುಂದರ ಸಂಜೆ... 

ಈ ಕಾರ್ಯ ಕ್ರಮ ಆಯೋಜಿಸಿದ ಮಂಜಣ್ಣ ಮತ್ತು ಸ್ನೇಹಿತರ ಸ್ನೇಹ ಸೇತು ಬಳಗಕ್ಕೆ ಮನಪೂರ್ಣ, ಭಾವಪೂರ್ಣ ಧನ್ಯವಾದಗಳು 🙏🏻.ಮಾಹಿತಿ ಪೂರ್ಣ ವಿಷಯಗಳು ಹಾಗೂ ಮನಸಿಗಾನಂದ ನೀಡುವ ಹಾಡುಗಳನ್ನು ಹಾಡಿದ  ಅಂಜಲಿ ‌ಹಾಗೂ ರೇಖಾ ಅವರಿಗೆ ರುಚಿ ರುಚಿಯಾದ ಊಟ. ಅನ್ನದಾತ ಸುಖೀಭವ ವೆಂಕಟೇಶ್ - ಮಂಗಳಾ ದಂಪತಿಗಳಿಗೆ. ಪ್ರತಿಯೋರ್ವರಿಗೂ ಧನ್ಯವಾದಗಳು 🙏🏻 🙏🏻





ಅಂಜಲಿ ಹಳಿಯಾಳ 

ಸ್ನೇಹ ಸೇತು ಬಳಗದ Sripadarao Sir, Krishnamurthy Sir ಮತ್ತು ಶಶಿಧರನ್ ಮತ್ತು ಈ  ಬಳಗದ ಎಲ್ಲ ಆತ್ಮೀಯ ಬಂಧುಗಳಿಗೆ ನನ್ನ ನಮನಗಳು.  ಅದ್ಭುತ ಕಾರ್ಯಕ್ರಮ.  ಮಂಗಳ ಲಕ್ಷ್ಮಿಯವರ  ಮನದುಂಬಿದ ಆತಿಥ್ಯ,  ಎಲ್ಲರೊಡನೆ ಮಾತು ಹರಟೆ, ಹಾಡು ಕಗ್ಗ... ಎಲ್ಲವೂ ಮನಕೆ ಮುದ ತಂದವು..  ಧನ್ಯವಾದಗಳು ಎಲ್ಲರಿಗೂ ಧನ್ಯವಾದಗಳು 🙏

ರೇಣುಕಾ ಮಂಜುನಾಥ್ 

ಡಿವಿಜಿಯವರ  ಜನ್ಮದಿನದ ನೆಪದಲ್ಲಿ ನೆನಪಲ್ಲಿ ಅವರ ಚಿಂತನೆಗಳ ತುಂತುರಲ್ಲಿ ಒಂದಷ್ಟು ಸಜ್ಜನರು ಕಲೆತು ಸ್ನೇಹದ ಪರಿಸರದೊಂದಿಗೆ ಪರಸ್ಪರ ಖುಷಿಯಿಂದ ರುಚಿಕಟ್ಟಾದ  ಭೋಜನವನ್ನೇ ಸೇವಿಸಿ ಮಂಗಳಾ- ವೆಂಕಟೇಶ್ ದಂಪತಿಗಳ ಆತ್ಮೀಯ ಸತ್ಕಾರದ ಸವಿಯೊಂದಿಗೆ ದಿನವನ್ನು ಸಂಪನ್ನಗೊಳಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು 🙏. ಸ್ನೇಹಸೇತುವಿನ ಸದಸ್ಯಳಲ್ಲದೆಯೂ, ನನ್ನನ್ನೂ ಮಂಜುನಾಥ್ ಸರ್ ಈ ಸುಂದರ ಬಳಗದ ಸುಂದರ ಕ್ಷಣಗಳಲ್ಲಿ ಭಾಗಿಯಾಗಲು ಅವಕಾಶವಿತ್ತಿದ್ದಕ್ಕಾಗಿ ಅವರಿಗೆ ವಿಶೇಷ ಧನ್ಯವಾದಗಳು. ಎಂದಿನಂತೆ ಅಂಜಲಿಯವರ ಅತ್ಯದ್ಭುತ ಗಾಯನ, ನಮ್ಮ ನೀಲಿಚಿಟ್ಟೆಯ ಲವಲವಿಕೆಯ ಉಪಸ್ಥಿತಿ ಕಾರ್ಯಕ್ರಮಕ್ಕೆ ಹೆಚ್ಚು ಜೀವಂತಿಕೆ ತಂದಿತು ❤💚. ನನಗೆ ಮನೆಯ ಕಡೆ ಹೆಚ್ಚು ಒತ್ತಡವಿದ್ದುದರಿಂದ ಎಲ್ಲರೊಡನೆ ವೈಯಕ್ತಿಕವಾಗಿ ಸಾವಕಾಶವಾಗಿ ಇದ್ದು ಮಾತಾಡಿಕೊಂಡು ಬರುವ ನಿರಾಳ ಮನಸ್ಥಿತಿ ಇರಲಿಲ್ಲವಾದ್ದರಿಂದ , ಅಷ್ಟರ ಮಟ್ಟಿನ ಕೊರತೆ ನನಗೆ ಉಂಟಾಗಿತ್ತು. ಇಲ್ಲದಿದ್ದರೆ ಸುಧಾ ಅಂಜಲಿ ಮಂಗಳಾ ನಳಿನಿ   ಮತ್ತೆಲ್ಲರೊಂದಿಗೆ ಮತ್ತಷ್ಟು ಸಮಯ ಕಳೆಯಬಹುದಿತ್ತು ಅನಿಸಿದ್ದು ಸುಳ್ಳಲ್ಲ. 

ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು. ಸದಾ high thinking simple living ಅಲ್ಲದೆ , ತಮ್ಮ ಸ್ನೇಹವಲಯದಲ್ಲಿ ಬಂದವರಲ್ಲೆಲ್ಲಾ ಉತ್ತಮ ಚಿಂತನೆಗಳೇ  ಉಂಟಾಗುವಂತೆ ಕಾಳಜಿ ವಹಿಸುವ , ಸದಾ ಹಸನ್ಮುಖಿ ಮಂಜುನಾಥ್ ಸರ್ ಈ ಕಾರ್ಯಕ್ರಮದ ಹಿಂದಿನ ಶಕ್ತಿ ಎಂಬುದು ಗಣನೀಯ ಅಂಶ. ಸ್ನೇಹಸೇತು ಸದಾ ಹೀಗೇ ಸ್ನೇಹಪರವಾಗಿ ಮುಂದುವರೆಯಲಿ ಎಂದು ಆಶಿಸುವೆ...





ಲೋಕೇಶ್ ಶ್ರೀಕಾಂತ್ 

ಶ್ರೀ ಡಿ ವಿ ಜಿ ಅವರಿಗೆ ನಮನಗಳು.  ಇಂದಿಗೂ ಎಂದೆಂದಿಗೂ ಪ್ರಸ್ತುತವಾದ ಅವರ ಬರಹದ ಕೆಲವು ಹನಿಗಳು ಕೇಳಲು ಅವಕಾಶ ಮಾಡಿಕೊಟ್ಟ ನಿಮ್ಮೆಲ್ಲರಿಗೂ ಧನ್ಯವಾದಗಳು. ಮಂಜಣ್ಣ, ಮಂಗಳ ಮೇಡಂ ಮತ್ತು ಮನೆಯವರಿಗೆ ನಮನಗಳು. ನಮ್ಮಲ್ಲಿನ ಸಾತ್ವಿಕ ಸ್ವಭಾವಗಳು ಹೊರತರುವ ಈ ಕೂಟ ಒಂದು ಸುಂದರ ಅನುಭವ. ಎಲ್ಲರನ್ನು ಸೇರಿಸಿಕೊಂಡು ನಡೆದ, ಕೆಲವರ ಉತ್ತಮ ವೈಯಕ್ತಿಕ ಪ್ರತಿಭೆಗಳಿಂದ ಕಳೆ ತುಂಬಿದ ಈ ಕೂಟ ಸಂತೋಷ ತಂದಿತು. ಕಡೆಯದಾಗಿ ಏರ್ಪಡಿಸಿದ್ದ ಊಟ ತುಂಬ ಚೆನ್ನಾಗಿತ್ತು. 

ನಂತರದಲ್ಲಿ ಬಂದಿರುವ ಚಿತ್ರಗಳು ಸುಂದರ ಸಂಜೆಯ ಪ್ರತಿಬಿಂಬ. ಸೊಗಸಾಗಿವೆ.

ಯತಿರಾಜ್ ವೀರಾಂಬುದಿ :

ನಿಮ್ಮೆಲ್ಲರನ್ನೂ ಹೆಚ್ಚು ಕಡಿಮೆ ಒಂದು ವರ್ಷದ ನಂತರ ಭೇಟಿಯಾಗಿ ಸಂತಸ ತಂದಿತು. ನನ್ನ ನಲವತ್ತು ವರ್ಷಗಳ ಗೆಳೆಯ ಮಂಜುನಾಥನಿಗೆ ನನ್ನ ನಮನಗಳು. ನನ್ನನ್ನು ನಂಬಿ ನನಗೆ ಕಾರ್ಯಕ್ರಮದ ಉದ್ಘೋಷಕನ ಕೆಲಸ ನೀಡಿದ್ದಕ್ಕೆ ಕೃತಜ್ಞತೆಗಳು.

ಚಿಕ್ಕನಹಳ್ಳಿ ಕೃಷ್ಣಮೂರ್ತಿ :

ಸುಮಧುರ ಸುಮನಸ್ಸಿನ ಸಮ್ಮಿಲನದಲ್ಲಿ ಸವಿದ  ಸಿಹಿ ಹೂರಣ ಸದಾಕಾಲ ನೆನಪಿಡುವಂತಹದ್ದು.  ನಮಗೆಲ್ಲಾ

ಅಜ್ಜನ ಆಶೀರ್ವಾದ ದೊರಕಿಸಿಕೊಟ್ಟ ಆತ್ಮೀಯ ಮಂಜಣ್ಣನಿಗೆ ಎಷ್ಟು ಅಭಿನಂದಿಸಿದರೂ ಸಾಲದು.  ಅತಿ ಕ್ರಿಯಾಶೀಲ ವ್ಯಕ್ತಿ ನಮ್ಮ ಮಂಜಣ್ಣ.  ಗೆಳೆಯ ಶಶಿಧರ ಅವರ ಹುಟ್ಟು ಹಬ್ಬವನ್ನು ಆಚರಿಸಿದ್ದು ಮತ್ತೊಂದು ಸಂಭ್ರಮ. 

ಮಂಗಳ ತಾಯಿಯ ಉಪಹಾರದ ಉಪಚಾರ ಅವರ ದೊಡ್ಡ ಗುಣಕ್ಕೆ ಸಾಕ್ಷಿಯಾಗಿತ್ತು.  ಅವರು ಮತ್ತು ಅವರ ಪತಿ ನಮ್ಮನ್ನೆಲ್ಲಾ ವಿಶ್ವಾಸದ ನೆರಳಲ್ಲಿ ಉಪಚರಿಸಿದ ಬಗೆ ಅನನ್ಯ.  ಮೇಲಿನ ಎಲ್ಲರ ಪ್ರತಿಕ್ರಿಯೆಗಳೇ ಸಾಕ್ಷಿ ಚೆಂದದ ಕ್ರಾಯಕ್ರಮ ಸಂಪನ್ನವಾದ ರೀತಿಗೆ.  ಬಹಳ ದಿನಗಳ ನಂತರ ಕೆಲವು ಗೆಳೆಯರನ್ನು ಕಂಡು ಸಂಭ್ರಮಿಸಿದ್ದು  ಖುಷಿ ತಂದಿದೆ.  ಕಾರಣಕರ್ತ ನಮ್ಮ ಮಂಜಣ್ಣನಿಗೆ ಇವೆಲ್ಲಾ ಸಾಧ್ಯವಾಗಿಸಿದ್ದಕ್ಕೆ ಅನಂತ ನಮನಗಳು.

ನಮಗೆಲ್ಲಾ ಶುಭವಾಗಲಿ. CSK

Sudha Sarnobat

ನಿನ್ನೆಯ  ದಿನ ,ನನ್ನ  ಬಾಳಿನ ಸುದಿನ.ನನ್ನ  ನೊಂದ  ಮನಕ್ಕೆ ನಿಮ್ಮೆಲ್ಲರ  ಪ್ರೀತಿ,ಮತ್ತು ಪ್ರೋತ್ಸಾಹ  ಅದಮ್ಯ ಉತ್ಸಾಹ ನೀಡಿತು.ಮಂಗಳಾ ಅವರ ಆದರಾತಿಥ್ಯ ,ಅವರ ಉದಾರ ಮನಸ್ಸು ನನಗೆ ತುಂಬ  ಇಷ್ಟ ವಾಯಿತು.ನನ್ನ  ಮನಸ್ಸಿಗೆ ಮುದ  ನೀಡಿದ ಅದ್ಭುತವಾದ  ಕಾರ್ಯಕ್ರಮ  ಇದಾಗಿದ್ದು,ಇದರಲ್ಲಿ ಭಾಗವಹಿಸಿದ ಎಲ್ಲ  ಸಹೃದಯ  ಸಹೋದರ  ಸಹೋದರಿಯರಿಗೆ ನನ್ನ  ಹೃತ್ಪೂರ್ವಕ  ಧನ್ಯವಾದಗಳು.

ನೀಲಿ ಚಿಟ್ಟೆ: shammi

ನಿಂಗಮ್ಮ ಬರಲಿ ಬೇವು ಬೆಲ್ಲದೊಂದಿಗೆ. 

ಈ ದುಃಖದ್ದೊಂದು ವಿಶೇಷ ಗುಣ ಬಚ್ಚಿಟ್ಟಂತೆಲ್ಲ ಅದು ಸಾಂದ್ರವಾಗಿ ನರನಾಡಿಗಳಲ್ಲಿ ಹಬ್ಬುತ್ತದೆ, ಇನ್ಯಾವುದೋ ರೋಗ ಅಥವಾ ಮಾನಸಿಕ ಖಿನ್ನತೆಯಲ್ಲಿ ಪ್ರಕಟಗೊಳ್ಳುತ್ತೆ, ಅದಕ್ಕಿರುವ ರಹದಾರಿ ಒಂದೇ 'ಅಭಿವ್ಯಕ್ತಿ' ಯಾವುದೇ ಕಲೆ ಸಾಹಿತ್ಯದ ಮೂಲಕ... 

ಹೇಳಿಕೊಂಡು ಹಗುರಾಗುತ್ತೇವೆ, ನಮ್ಮ ದುಃಖ ನಮ್ಮದೊಂದೆ ಅಲ್ಲ ಎನ್ನುವ ಭಾವ‌ ಬರುತ್ತಿದ್ದಂತೆ, ನೋವು ಸಾರ್ವತ್ರಿಕವಾಗಿ ಕಾಣಸಿಗುವ ಪದಾರ್ಥ ಅನ್ನೋದು ಅರಿವಾಗುತ್ತದೆ, ಇದು ಬದುಕಿನಲ್ಲಿ ಸಮೀಕರಿಸಿ ನೋಡಿದಾಗ, ಒಳ ಮನಸ್ಸಿನ ಆಳದಲ್ಲಿ ಇರುವ ಆನಂದ ನಿಧಾನವಾಗಿ ಹೊರಹೊಮ್ಮುತ್ತದೆ,ಬದುಕು ಮತ್ತೊಮ್ಮೆ ಉತ್ಸಾಹದಿಂದ ಚಿಮ್ಮುತ್ತದೆ

ಬಚ್ಚಿಟ್ಟುಕೊಂಡದ್ದು ಭಾರ...ಹೊರಗೆ ತೋರಿದಂತೆಲ್ಲ ಕತ್ತಲ‌ಮೂಲೆಗಳೆಲ್ಲ ಬೆಳಕಾಗಿ ನಿಚ್ಚಳ ಬದುಕು ಹಗೂssರಾ... ❤❤😍😍

ಸಿ. ಜಿ. ಶಸಿದರನ್ 

ಕಾರಣಾಂತರಗಳಿಂದ ಶ್ರೀ ಶ್ರೀಪಾದರಾವ್ ಮಂಜುನಾಥ್ ಅವರು ನಡೆಸಿಕೊಡುತ್ತಿದ್ದ ಎರಡು ಕಾರ್ಯಕ್ರಮಗಳು ನೆನ್ನೆ ಮತ್ತೆ ಚಾಲನೆ ಪಡೆಯಿತು. ಮೊದಲನೆಯದು ಡಿವಿಜಿ ಕುರಿತು ವಾರ್ಷಿಕ ಕಾರ್ಯಕ್ರಮ, ಮತ್ತೊಂದು 'ಸ್ನೇಹ ಸೇತು ಬಳಗ'ದ ಕಾರ್ಯಕ್ರಮ. ಡಿವಿಜಿ ೧೩೯ ಎಂಬ ಶೀರ್ಷಿಕೆಯಡಿ 'ಸ್ನೇಹ ಸೇತು ಬಳಗ'ದ ಮೂಲಕ ನೆನ್ನೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮ ಶ್ರೀಮತಿ ಮಂಗಳಾಲಕ್ಷ್ಮಿ ಅವರ ಮನೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರೆಂದರೆ, ಶ್ರೀ ಕೃಷ್ಣಮೂರ್ತಿ ಚಿಕ್ಕನಹಳ್ಳಿ, ಶ್ರೀ ಶ್ರೀಪಾದರಾವ್ ಮಂಜುನಾಥ್, ಶ್ರೀ ಯತಿರಾಜ್ ವೀರಾಂಬುಧಿ, ಶ್ರೀ ಲೋಕೇಶ್, ಶ್ರೀಮತಿ ಮಂಗಳಾ ಲಕ್ಷ್ಮಿ ದಂಪತಿಗಳು, ಶ್ರೀಮತಿ ಸುಧಾ ಸರ್ನೋಬಾತ್, ಶ್ರೀಮತಿ ಅಂಜಲಿ ಹಲ್ಯಾಳ್ ದಂಪತಿಗಳು, ಶ್ರೀಮತಿ ಅನುಪಮಾ ದಂಪತಿಗಳು, ಶ್ರೀಮತಿ ರೇಣುಕಾ ಮಂಜುನಾಥ್, ಶ್ರೀ ವೆಂಕಟೇಶಮೂರ್ತಿ ಕನಕಪುರ, ಶ್ರೀಮತಿ ನೀಲಿ ಚಿಟ್ಟೆ (ಶಮ್ಮಿ), ಶ್ರೀಮತಿ ರೇಖಾ ವಾಸು, ಶ್ರೀಮತಿ ನಳಿನಿ ಸೋಮಯಾಜಿ, ಶ್ರೀ ಜಯರಾಮ ಸೋಮಯಾಜಿ ಅವರುಗಳು. 

ಇಂದಿನ ಕಾರ್ಯಕ್ರಮದಲ್ಲಿ ನನಗೆ ಹಿರಿಯರಾದ ಶ್ರೀಮತಿ ಸುಧಾ ಸರ್ನೋಬಾತ್ ಅವರ ಆಶೀರ್ವಾದ, ಮತ್ತು ಕೆಲವು ಹೊಸ ಸ್ನೇಹಿತರ ಪರಿಚಯವಾದ್ದು ನನಗೆ ಸಂತೋಷಕೊಡುವ ಸಂಗತಿಯಾಗಿತ್ತು. ಇದಕ್ಕಾಗಿ ಮತ್ತೊಮ್ಮೆ ಶ್ರೀ ಶ್ರೀಪಾದರಾವ್ ಮಂಜುನಾಥ್ ಅವರಿಗೆ ಅನಂತ ಧನ್ಯವಾದಗಳು. ಹಾಗೆಯೇ, ಸಭೆಯಲ್ಲಿ ಎಲ್ಲರೂ ಕುಳಿತುಕೊಳ್ಳುವದಕ್ಕಾಗಿ ಆಸನಗಳನ್ನು ಒಪ್ಪ ಓರಣವಾಗಿ ಅಣಿ ಮಾಡಿಕೊಟ್ಟಿದ್ದಲ್ಲದೇ, ಬಂದವರೆಲ್ಲರನ್ನೂ ಪ್ರೀತ್ಯಾದರಗಳಿಂದ ಸತ್ಕರಿಸಿದ ಶ್ರೀ ವೆಂಕಟೇಶ್ ಅವರಿಗೂ, ಸಭೆಗೆ ಬರುತ್ತಿದ್ದಂತೆಯೇ ತಂಪು ಪಾನೀಯವನ್ನು ಕೊಡುವುದರಿಂದ ಮೊದಲ್ಗೊಂಡು, ಕೊನೆಯವರೆವಿಗೂ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಸತ್ಕರಿಸಿದ ಶ್ರೀಮತಿ ಮಂಗಳಾಲಕ್ಷ್ಮಿ ಅವರುಗಳಿಗೂ ನನ್ನ ಅನಂತ ಧನ್ಯವಾದಗಳು. 

ಶ್ರೀಪಾದ ರಾವ್ ಮಂಜುನಾಥ್ (ಮಂಜಣ್ಣ) :
ಕೃತಜ್ಞತಾ ಸಮರ್ಪಣೆ 

೧. ಭಗವಂತ ಡಿವಿಜಿ ರವರಂತ ಮಹನೀಯರನ್ನು ಈ ಲೋಕಕ್ಕಿತ್ತಿದ್ದಕ್ಕೆ. 

೨. ಎಲ್ಲ ಹಂತದಲ್ಲೂ ನಮ್ಮೊಂದಿಗಿದ್ದು ಸೂಕ್ತ ಮಾರ್ಗದರ್ಶನ ನೀಡಿದ ನನ್ನ ಹಿರಿಯ ಮಿತ್ರ ಶ್ರೀಯುತ ಕೃಷ್ಣಮೂರ್ತಿ ಚಿಕ್ಕನಹಳ್ಳಿ ರವರಿಗೆ. 

೩. ನಮ್ಮ ಮಿತ್ರ ಶಶಿಧರನ್ ರವರ ಹುಟ್ಟುಹಬ್ಬದಂದು ಅವರನ್ನು ಸನ್ಮಾನಿಸಲು ಶ್ರದ್ಧಾಪೂರ್ವಕವಾಗಿ ಸಹಕರಿಸಿದ ೩೯ ವರ್ಷದ ಸಹೋದ್ಯೋಗಿ ಮಿತ್ರ ಶ್ರೀಯುತ ಲೋಕೇಶ್ ಶ್ರೀಕಂಠಯ್ಯ ರವರಿಗೆ. 

೪. ಕಾರ್ಯಕ್ರಮದ ಸಾರಥ್ಯವಹಿಸಿಕೊಂಡು ಸೊಗಸಾಗಿ ನಡೆಸಿಕೊಟ್ಟ ನನ್ನ ೩೯ ವರ್ಷದ ಗೆಳೆಯ ಶ್ರೀಯುತ ಯತಿರಾಜ್ ವೀರಾಂಬುಧಿ ರವರಿಗೆ.

೫. ನಮ್ಮ ಕರೆಗೆ ಸ್ಪಂದಿಸಿ ಬಳಗದ ವತಿಯಿಂದ ಗೌರವವನ್ನು ಸ್ವೀಕರಿಸಿದ ನಮ್ಮ ಗೆಳೆಯ ಶ್ರೀಯುತ ಶಶಿಧರನ್ ರವರಿಗೆ.

೬.  ಕಾರ್ಯಕ್ರಮವನ್ನು ತಮ್ಮ ಸ್ವಗೃಹದಲ್ಲಿ ನಡೆಸಿಕೊಡಲೆಂದು ವಿನಂತಿಸಿಕೊಂಡು, ಎಲ್ಲ ವ್ಯವಸ್ಥೆಯನ್ನೂ ಬಹಳ ಅಕ್ಕರಾಸ್ಥೆಯಿಂದ ಆಯೋಜಿಸಿ ಎಲ್ಲ ಹಂತದಲ್ಲೂ ಸಹಕಾರವಿತ್ತ ಶ್ರೀಮತಿ ಮಂಗಳಲಕ್ಷ್ಮಿ ಹಾಗೂ ಶ್ರೀಯುತ ವೆಂಕಟೇಶ್ ದಂಪತಿಗಳಿಗೆ. 

೭. ನೊಂದಿದ್ದ ತಾಯಿ ತಂಗಿಯೊಂದಿಗೆ ಆಗಮಿಸಿ ಪಾಲ್ಗೊಂಡ ಗೆಳತಿ ಶ್ರೀಮತಿ ಅಂಜಲಿ - ವಾಸು, ಶ್ರೀಮತಿ ಅನುಪಮಾ - ಮಹೇಶ್ ರವರಿಗೆ. ಅಂಜಲಿ ಹಾಡಿದ ಎರಡೂ ಹಾಡು ಮುದನೀಡಿತು. 

೮. ತಮ್ಮ ಕೌಟುಂಬಿಕ ಅನಿವಾರ್ಯತೆಗಳ ನಡುವೆಯೂ ಸಮಯ ಮಾಡಿಕೊಂಡು ಪಾಲ್ಗೊಂಡ ಶ್ರೀಮತಿ ರೇಣುಕಾ ಮಂಜುನಾಥ್ ರವರಿಗೂ.  

೯. ನಮ್ಮ ಕರೆಗೆ ಓಗೊಟ್ಟು ಬಹಳ ದೂರದಿಂದ ಆಗಮಿಸಿ ನಮ್ಮೊಡನಿದ್ದು ಸ್ಪೂರ್ತಿನೀಡಿದ ಶ್ರೀಯುತ ಜಯರಾಮ್ ಸೋಮಯಾಜಿ ಮತ್ತು ಶ್ರೀಮತಿ ನಳಿನಿ ಸೋಮಯಾಜಿ ದಂಪತಿಗಳಿಗೂ. 

೧೦. ನಮ್ಮ ಗೆಳತಿ ಶ್ರೀಮತಿ ರೇಖಾವಾಸು ರವರು ನಮ್ಮೊಂದಿಗೆ ಸಕ್ರಿಯವಾಗಿ ಪಾಲ್ಗೊಂಡು ಅದ್ಭುತವಾಗಿ ಡಿವಿಜಿ ರಚನೆಯನ್ನು ಹಾಡಿ ರಂಜಿಸಿದ್ದಕ್ಕಾಗಿ. 

೧೧. ಬಹುತೇಕ ನಮ್ಮೆಲ್ಲ ಕಾರ್ಯಕ್ರಮಗಳಲ್ಲಿ ನಮ್ಮೊಡನಿದ್ದು ಪಾಲ್ಗೊಳ್ಳುವ ಚೈತನ್ಯದ ಗೊಂಬೆ ಶ್ರೀಮತಿ ಶಮ್ಮಿ ಸಂಜೀವ್ ರವರಿಗೆ. 

೧೨. ನಮ್ಮ ಮಿತ್ರ ಶ್ರೀಯುತ ರಾಘವ ಶರ್ಮ ಸಮಯ ಮಾಡಿಕೊಂಡು ಪೂರ್ತಿ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಪಾಲ್ಗೊಂಡಿದ್ದು ಹರುಷ ತಂದಿದೆ. 

೧೩. ಡಿವಿಜಿ ಬಗ್ಗೆ ಅತ್ಯಂತ ಶ್ರದ್ಧೆ, ಭಕ್ತಿಯುಳ್ಳ ನನ್ನ ಯುವ ಮಿತ್ರ ಶ್ರೀಯುತ ವೆಂಕಟೇಶ ಮೂರ್ತಿ ಕನಕಪುರ ತನ್ನ ಔದ್ಯೋಗಿಕ ಅನಿವಾರ್ಯತೆಯ ನಡುವೆಯೂ ಪಾಲ್ಗೊಂಡಿದ್ದು ಮುದನೀಡಿತು. 

೧೪.  ಉದರ ಪೋಷಣೆಗೆ ನೆರವು ನೀಡಿದ (ಯುವಕ, ಯುವತಿ) ಹೆಸರು ಗೊತ್ತಿಲ್ಲವಾದರೂ ಅವರ ಪಾತ್ರ ಅತ್ಯಂತ ಸೊಗಸಾಗಿತ್ತು. 

೧೫.  ಅನಿವಾರ್ಯ ಕಾರಣದಿಂದ ಪಾಲ್ಗೊಳ್ಳಲಾಗದ ಕೆಲವು ಮಿತ್ರರಿಗೂ.

೧೬. ನೀವೆಲ್ಲರೂ ನಿಮ್ಮ ಅಮೂಲ್ಯ ಸಮಯವನ್ನು ಈ ಕಾರ್ಯಕ್ರಮಕ್ಕಾಗಿ ಮೀಸಲಿಟ್ಟಿದ್ದಕ್ಕಾಗಿ  .....ಎಲ್ಲರಿಗೂ ನಮಿಸುವ.....ಮಂಜುತಿಮ್ಮ (ಸ್ನೇಹ ಸೇತು) ಪರವಾಗಿ. ಒಂದು ವೇಳೆ ಯಾರನ್ನಾದರೂ ಹೆಸರಿಸಲು ಬಿಟ್ಟಿದ್ದರೆ ನಿಮ್ಮ ಕ್ಷಮೆಯಿರಲಿ. 

ರಾಘವ್ ಶರ್ಮಾ :

ಮನಕೆ ಮುದ ನೀಡಿದ ಒಂದು ಸುಂದರ ಸಂಜೆಯ ಕಾರ್ಯಕ್ರಮ. ಎಲ್ಲಾ ಮಿತ್ರವೃಂದಕ್ಕೂ ಸಸ್ನೇಹ ವಂದನೆಗಳು. 

ಮಂಜಣ್ಣ, ಸಿಎಸ್ಕೆ, ಶಶಿ, ಯತಿರಾಜ್, ಲೋಕೇಶ್ ರವರಿಗೆ ಅಭಿನಂದನೆಗಳು 🙏🏼

ಮಂಗಳಾ ಮೇಡಂ ಮತ್ತು ಮನೆಯವರ ಹೃತ್ಪೂರ್ವಕ ಆತಿಥ್ಯಕ್ಕೆ ವಂದನೆಗಳು. 

ಮುಂದಿನ ಭೇಟಿಗಾಗಿ ಕಾತರದಿಂದ ಕಾಯುತ್ತಿದ್ದೇನೆ. ❤️

ಮಂಗಳಾ ಲಕ್ಷ್ಮಿ 

ನನಗಂತೂ ಮರೆಯಲಾಗದ ದಿನವಿದು.ಎಲ್ಲರ ಅದ್ಭುತ ಸಹಕಾರ,ಮಾತುಗಳು,ಹಾಡುಗಳು,ಮಂಜಣ್ಣನವರ ಕಗ್ಗದ ವಾಚನ  ಹಾಗೂ ಅದರ ಅರ್ಥ,,ಒಟ್ಟಿನಲ್ಲಿ ಎಲ್ಲರದ್ದೂ ಒಂದಷ್ಟು contribution ಮನಕ್ಕೆ ಮುದನೀಡಿತು, ಎಲ್ಲರಿಗೂ ಹೃತ್ಪೂರ್ವಕ ನಮನಗಳು☝️👍❤️❤️👌👌🙏🙏🙏🙏🙏






Posted 18/3/2026



Saturday, March 14, 2026

HAOME VISIT - RAMAKRISHNA BHAT

 Saturday, March 14, 2026

14th Cross, Bhuvaneshwarinagara, Bengaluru.



On the eve of Ramakrishna Bhat (Parabrahma Vittaladas) and his wife travelling to Dallas, USA, we were at his house to wish him best wishes and safe journey and safe return. 

There was Praveen Rao (Son-in-Law) of Bhat, son Bharadhwaj and his wife and his grand son, and Jayaram Suvarna, bhajane partner


We spent about half hour, had coffee and said "Safe Journey and Safe Return"


God Bless


Posted 15/3/2026

Thursday, March 12, 2026

BHAJANE / SATSANG AT SUNANDI - 52

 Thursday, March 12, 2026

Sunandi Holistic Eldercare, KodigeHalli, Bengaluru.




The weekly divine session of Bhajan, Satsang  to the residents of Sunandi Holistic Eldercare was held at the centre, with active participation of men and women.



Sri Ramakrishna Bhat, in his Upanyasa, spoke about importance of  concentration and Bhakthi when praying or doing "Naamasmarane"


As usual there was Mangalarathi and Distribution of Vibhoothi to all and Prasada.



The elders of the Centre enjoyed the session fprgetting the anxiety, stress, physical and mental pain.

Lokaa Samasthaa Sukhino Bhavanthoo

Om Shanthi..... Shanthi.... Shanthi....





















ಅಂತಿಮ ಸತ್ಯ - ಉತ್ತಮವಾಗಿ ಸ್ವೀಕರಿಸಬೇಕು

 Thursday, 12 March 2026

WhatsApp forwarded:

ಅಂತಿಮ ಸತ್ಯ - ಉತ್ತಮವಾಗಿ ಸ್ವೀಕರಿಸಬೇಕು


1) ಪುರುಷನು ವೃದ್ಧನಾಗುತ್ತಾನೆ, ಮಹಿಳೆ ಪ್ರಬುದ್ಧಳಾಗುತ್ತಾಳೆ.

2) ಪುರುಷನು ತನ್ನ ಮಕ್ಕಳನ್ನು ಮದುವೆ ಮಾಡಿ ಕುಟುಂಬದ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿಕೊಂಡ ನಂತರ, ಕುಟುಂಬದಲ್ಲಿ ಅವನ ಹಿರಿಯ ಮತ್ತು ಗೌರವಾನ್ವಿತ ಸ್ಥಾನವು ಸದ್ದಿಲ್ಲದೆ ಕೊನೆಗೊಳ್ಳುತ್ತದೆ.

3) ಅದರ ನಂತರ, ಅವನನ್ನು ಹೊರೆಯಾಗಿ ಪರಿಗಣಿಸಲಾಗುತ್ತದೆ - ಒಬ್ಬ ಕೋಪಗೊಂಡ, ಕಿರಿಕಿರಿಗೊಳಿಸುವ ಮತ್ತು ಅನಿರೀಕ್ಷಿತ ವೃದ್ಧನಾಗಿ ನೋಡಲಾಗುತ್ತದೆ.

4) ಅವನು ತನ್ನ ಹೆಂಡತಿ ಮತ್ತು ಮಕ್ಕಳಿಗಾಗಿ ಒಮ್ಮೆ ತೆಗೆದುಕೊಂಡ ಕಠಿಣ ನಿರ್ಧಾರಗಳನ್ನು ಈಗ ವಿಶ್ಲೇಷಿಸಲಾಗುತ್ತದೆ ಮತ್ತು ಟೀಕಿಸಲಾಗುತ್ತದೆ; ಅವನು ಒಂದಲ್ಲ ಒಂದು ಕಾರಣಕ್ಕಾಗಿ ತಪ್ಪಿತಸ್ಥನೆಂದು ಕಂಡುಬಂದಿದೆ. ಮತ್ತು ಅವನು ನಿಜವಾಗಿಯೂ ತಪ್ಪುಗಳನ್ನು ಮಾಡಿದ್ದರೆ - ದೇವರು ಅವನನ್ನು ರಕ್ಷಿಸಲಿ.

5) ಆದಾಗ್ಯೂ, ವಯಸ್ಸಾದ ಮಹಿಳೆ ತನ್ನ ಮಕ್ಕಳು ಮತ್ತು ಸೊಸೆಯಂದಿರಿಂದ ಸಹಾನುಭೂತಿಯನ್ನು ಪಡೆಯುತ್ತಾಳೆ - ಏಕೆಂದರೆ ಅವಳ ಮೂಲಕ ಇನ್ನೂ ಕೆಲಸಗಳನ್ನು ಮಾಡಬೇಕಾಗಿದೆ.

6)  ಸರಿಯಾದ ಸಮಯದಲ್ಲಿ, ಅವಳು ಬುದ್ಧಿವಂತಿಕೆಯಿಂದ ಗಂಡನ ಶಿಬಿರದಿಂದ ಮಕ್ಕಳ ಶಿಬಿರಕ್ಕೆ ಹೋಗುತ್ತಾಳೆ.

7) ಗಂಡ ದೊಡ್ಡವನಾಗಿದ್ದರೆ, ಮಗ ತನ್ನಿಂದ ದೂರವಾಗದಂತೆ ಮತ್ತು ಅವಳನ್ನು ನೋಡಿಕೊಳ್ಳುವುದನ್ನು ಮುಂದುವರಿಸುವಂತೆ ಹೆಂಡತಿ ಸೊಸೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾಳೆ.

8) ಪುರುಷನ ಯೌವನದ ದಿನಗಳಲ್ಲಿ ಅವನ ಸಾಧನೆಗಳು ಎಷ್ಟೇ ದೊಡ್ಡದಾಗಿದ್ದರೂ, ಆ ವೈಭವವು ವೃದ್ಧಾಪ್ಯದಲ್ಲಿ ಅವನಿಗೆ ಸಹಾಯ ಮಾಡುವುದಿಲ್ಲ.

9) ಆದಾಗ್ಯೂ, ವಯಸ್ಸಾದ ಮಹಿಳೆ ತನ್ನ ಹಿಂದಿನ ಸದ್ಗುಣಗಳ ಮೇಲಿನ ಆಸಕ್ತಿಯನ್ನು ಆನಂದಿಸುತ್ತಲೇ ಇರುತ್ತಾಳೆ.

10) ಪೂರ್ವಜರ ಆಸ್ತಿ ಅಥವಾ ಕೃಷಿಭೂಮಿಯನ್ನು ಹೊಂದಿರುವವರು (ಮಕ್ಕಳು ಇನ್ನೂ ಬಯಸುವ) ಸ್ವಲ್ಪ ಉತ್ತಮವಾಗಿ ಬದುಕುತ್ತಾರೆ. ಆದರೆ ಭವಿಷ್ಯದ ವಿವಾದಗಳನ್ನು ತಪ್ಪಿಸಲು ತಮ್ಮ ಮಕ್ಕಳಲ್ಲಿ ತಮ್ಮ ಆಸ್ತಿಯನ್ನು ಹಂಚಿಕೊಂಡವರು ಮೇಲೆ ವಿವರಿಸಿದಂತೆ ಅದೇ ದುಃಖಕರ ಅದೃಷ್ಟವನ್ನು ಎದುರಿಸುತ್ತಾರೆ. ಆದ್ದರಿಂದ, ಅಕಾಲಿಕವಾಗಿ ಆಸ್ತಿಯನ್ನು ವಿಭಜಿಸದಿರುವುದು ಉತ್ತಮ.

11) ಯಾವುದೇ ಆಸ್ಪತ್ರೆಗೆ ಭೇಟಿ ನೀಡಿ - ವೃದ್ಧ ಅಥವಾ ವೃದ್ಧ ಮಹಿಳೆ ದಾಖಲಾಗಿದ್ದಾರೆಯೇ ಎಂದು ನೀವು ತಕ್ಷಣ ಅವರ ಸಂಬಂಧಿಕರ ಕಣ್ಣುಗಳನ್ನು ನೋಡುವ ಮೂಲಕ ಹೇಳಬಹುದು. ಅದು ವೃದ್ಧನಾಗಿದ್ದರೆ, ಅವನ ಮಗಳನ್ನು ಹೊರತುಪಡಿಸಿ, ಯಾರ ಕಣ್ಣುಗಳು ತೇವವಾಗಿರುವುದಿಲ್ಲ.

12) ನೀತಿ: ಒಬ್ಬ ಪುರುಷ ವಯಸ್ಸಾದ ನಂತರ, ಅವನು ಇತರರಿಂದ ಏನನ್ನೂ ನಿರೀಕ್ಷಿಸದೆ ಬದುಕಲು ಕಲಿಯಬೇಕು. ನೆನಪಿಡಿ — ಒಬ್ಬ ಪುರುಷನು ತನ್ನ ಜೀವನದುದ್ದಕ್ಕೂ ವಿದ್ಯಾರ್ಥಿಯಾಗಿಯೇ ಇರುತ್ತಾನೆ. ಈ ಜಗತ್ತಿನಲ್ಲಿ ಯಾರೂ ನಿಜವಾಗಿಯೂ ಯಾರಿಗೂ ಸೇರಿದವರಲ್ಲ ಎಂದು ಒಪ್ಪಿಕೊಳ್ಳಿ. ನಿರ್ಲಿಪ್ತ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ಜೀವನವನ್ನು ನಡೆಸಿ.

13) ನೀವು ಇತರರಿಗಾಗಿ ಏನು ಮಾಡಿದ್ದೀರಿ ಎಂಬುದರ ಬಗ್ಗೆ ಯೋಚಿಸಬೇಡಿ. ಅದರ ಬಗ್ಗೆ ಮಾತನಾಡಲೂಬೇಡಿ.

14) ಪ್ರಾಚೀನ ಗ್ರಂಥಗಳಲ್ಲಿಯೂ ಸಹ, ಮಹಿಳೆ ವಾನಪ್ರಸ್ಥ (ಲೌಕಿಕ ಜೀವನದಿಂದ ನಿವೃತ್ತಿ) ಅಥವಾ ಸನ್ಯಾಸ (ತ್ಯಾಗ) ಸ್ವೀಕರಿಸಿದ ಉದಾಹರಣೆ ಇಲ್ಲ.

15) ಜೀವನದ ಈ ಹಂತಗಳನ್ನು ಪುರುಷರಿಗೆ ಮಾತ್ರ ಸೂಚಿಸಲಾಗಿದೆ. ಅವುಗಳ ಮಹತ್ವವನ್ನು ಅರ್ಥಮಾಡಿಕೊಳ್ಳಿ — ಮತ್ತು ನಮ್ಮ ಪೂರ್ವಜರು ನಿಜವಾಗಿಯೂ ಎಷ್ಟು ದೂರದೃಷ್ಟಿಯುಳ್ಳವರಾಗಿದ್ದರು ಎಂಬುದನ್ನು ನೀವು ಅರಿತುಕೊಳ್ಳುವಿರಿ.



ಡಾ. ಶಿರೀಶ್ ರಾಜೆ,

ಮನಶ್ಶಾಸ್ತ್ರಜ್ಞ,

ನಾಸಿಕ್

Tuesday, March 10, 2026

CRICKET20 - INDIA CHAMPIONS

Sunday, March 8, 2026

It was celebration for India, winning Men's T20 World Cup for 2026

See below Udayavani coverage on the 9th March 2026













Posted 10/3/2026



















 

Monday, March 9, 2026

E. JAYAPRAKASH (JP) - SHRADDHANJALI

 Monday, March 9, 2026

A man who was full of life, laughs and make others to laugh, sad to hear is no more.


ಎಲ್ಲರಿಗೂ ಅಚ್ಚು ಮೆಚ್ಚಿನವರಾಗಿದ್ದ ಜಯಪ್ರಕಾಶ್ ಇನ್ನಿಲ್ಲ ಎಂಬುವುದು ನಂಬಲು ಅಸಾಧ್ಯ

ಫೆಬ್ರುವರಿ  2022 ರಲ್ಲಿ ಆರತಿ ಘಟಿಕರ ಅವರ ಮಗನ ಮದುವೆಯ ಸಂದರ್ಭದಲ್ಲಿ ತೆಗೆದ ಜೆಪಿ ಅವರೊಡನೆ ತೆಗೆದ ಫೋಟೋಗಳು....




ತಿರು ಶ್ರೀಧರ್ ಅವರ ನುಡಿ ನಮನ 

ಇ. ಜಯಪ್ರಕಾಶ್ ಇನ್ನೆಲ್ಲಿ!
Respects to departed friend Jayaprakasha E🌷🌷🌷
ಈ (ಇ) ಜಯಪ್ರಕಾಶ್‌ ಸದಾ ಹೃದಯಾಳದಿಂದ ನಗುತ್ತಿದ್ದ ಸುಂದರ ಹೃದಯಿ. ಅಂತೆಯೇ ಇವರ ಕಂಗಳು, ಅಂತರಂಗದ ಆಳದಿಂದ ಹೊರಹೊಮ್ಮುವ ಕಾಂತಿಯಿಂದ, ಎಲ್ಲೆಡೆ ಬೆಳಕು ಚೆಲ್ಲುತ್ತಿದ್ದವು.
'ಜಹಾಪನ' ಹೆಸರಿನಲ್ಲಿ ಮೊನ್ನೆ ಮೊನ್ನೆಯವರೆಗೆ ಬರೆಯುತ್ತಿದ್ದ ಜಯಪ್ರಕಾಶ್‌ ಅವರು ಎಲ್ಲರೊಂದಿಗೆ ನಸು ನಗುತ್ತ ಬೆರೆಯುತ್ತ, ಯಾವುದನ್ನೂ ಟೀಕಿಸದೆ, ತಮಗೆ ಇಷ್ಟವಾದದ್ದನ್ನು ಮೆಚ್ಚುತ್ತ, ಬರೆಯುತ್ತ ಬದುಕುವ ರೀತಿಯೇ ಸೊಗಸಿನದಾಗಿತ್ತು. ಹೀಗೆ ಜಹಾಪನ, ನಿಜ ಜಯಪ್ರಕಾಶರೇ ಆಗಿದ್ದರು.
"ಜಯಪ್ರಕಾಶ್ ಹೋಗಿಬಿಟ್ರು" ಎಂಬ ಸುದ್ದಿ ಕೆಲವು ನಿಮಿಷದೆ ಹಿಂದೆ ಓದಿದಾಗ ಅದನ್ನು ನಂಬದೆ ಅವರ ಮೆಸೆಂಜರಿಗೆ ಹೋಗಿ 'ಹಲೋ" ಎಂದೆ. ಎಂದೂ ತಡಮಾಡದೆ ಉತ್ತರಿಸುತ್ತಿದ್ದ ಅಲ್ಲಿಂದ ಉತ್ತರ ಬರಲಿಲ್ಲ!
ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ನನ್ನ ಜೊತೆ ಇರುತ್ತಿದ್ದರು. ನನ್ನ ಅನೇಕ ಪರಿಚಯಸ್ಥರೊಡನೆ ಫೋಟೊ ಕ್ಲಿಕ್ ಮಾಡಿಕೊಟ್ಟವರು ಅವರೆ. ನಾವಿಬ್ಬರೂ ಕಾರ್ಯಕ್ರಮದಲ್ಲಿ ಭೇಟಿ ಆದಾಗ ಒಂದು ಸೆಲ್ಫಿ ತೊಗೊಂಡು, "ಇರಿ ಇಂದು ಇಲ್ಲಿಗೆ ಬಂದಿಲ್ಲದೆ ಇರುವ ನಮ್ಮ ಕಾಮನ್ ಗೆಳೆಯ ಗೆಳತಿಯರಿಗೆ ಕಳಿಸಿ ಹೊಟ್ಟೆ ಉರಿಸುತ್ತೇನೆ ಅಂತಿದ್ರು".
ಅತಿಯಾದ ವಿಚಾರವಂತಿಕೆಗೆ ಎಡೆಕೊಡದೆ, ಸದಾ ಸರಳಮುಖಿಯಾಗಿ ಗುರುತು ಪರಿಚಯ ಯಾವುದೇ ಇಲ್ಲದಿದ್ದರೂ ಕ್ಷಣಮಾತ್ರದಲ್ಲಿ ಎಲ್ಲರೊಂದಿಗೆ ಹಸನ್ಮುಖಿಯಾಗಿ ನಲಿಯುತ್ತಿದ್ದ ಜಯಪ್ರಕಾಶ್ ಅವರ ಬದುಕು ಅಮರವೇ ಸರಿ.
ನಾನು ಅವರು ಬಂದಿಲ್ಲದ ಕಾರ್ಯಕ್ರಮಕ್ಕೆ ಹೋಗಿ ಫೇಸ್ಬುಕ್ನಲ್ಲಿ ಫೋಟೊ ಹಾಕಿದರೆ, "ಬ್ರೊ, ನನಗೆ ತಿಳಿಸದೆ ಹೀಗೆ ಕಾರ್ಯಕ್ರಮಕ್ಕೆ ಹೋಗೋದು ನ್ಯಾಯಾನಾ?" ಅಂತ ಮೆಸೇಜ್ ಮಾಡ್ತಿದ್ರು.
"ಜಹಾಪನ ಬ್ರೊ, ನೀವು ನನಗಿಂತ ಇಷ್ಟು ಚಿಕ್ಕವರು, ಹೀಗೆ ಹೋದದ್ದು ನ್ಯಾಯಾನ?"
ಎಲ್ಲಿದ್ದರೂ ನಗ್ತಾ ಇರು ಜಹಾಪನ. ನೀನು ನನ್ನಲ್ಲಂತೂ ಅಮರ.




ಅವರ ಆತ್ಮಕ್ಕೆ ಚಿರ ಶಾಂತಿ, ಸದ್ಗತಿಯನ್ನು ಶ್ರೀ ದೇವರು ಕರುಣಿಸಲಿ ಎಂದು ಪ್ರಾರ್ಥನೆ..

Posted 10/3/2026

Friday, March 6, 2026

WEDDING - KRISHNAMOORTHY/MEGHNA

Friday, March 6, 2026

 Srishti  Vilas Resort, Kanakapura Road, Bengaluru

Krishnamoorthy is Grandson of Handadi Srinivasa Bhat/Lalitha and son Late Vishwanatha Bhat.







So we were there at the venue "SHRISTI VILAS"  by 11 am, by engaging a driver, a distance of 45 km from here. It's one and half hours journey.



The ocassion was to meet relatives, friends as it is time to join the sambhrma.

Halladi Nagaraj Kedlaya and his brothers Bhaskar, Sadashiva, Subramanya Rao from Hyderabad and his son Srinivas, the senior member of the family Handadi Satyanarayana Bhat, wife Krishnaveni, son Surya and many more.




Senior member of the Family Krishnaveni, Handadi SatyanarayanaBhat







Wedding was also show of fashion, new design and decor....



As usual there was grand Oota, holige, burfi, payasa, along with other items,  ice cream and beeda.




  6-3-26 - ಶು‌ಕ್ರ ವಾರ 
ಹಂದಾಡಿ ಕೃಷ್ಣ‌ ಮೇಘನ ರಿಗೆ ವಿವಾಹ ಬಂಧ ಮಹೋತ್ಸವ!!
 

 6-3-26 ಶುಕ್ರ ವಾರ ದಂದು ಬೆಂಗಳೂರು ಕನಕಪುರ ರಸ್ತೆಯಲ್ಲಿರುವ ಸೃಷ್ಟಿ ವಿಲಾಸ್ ಅತ್ಯಂತ ವಿಲಾಸ ಹಾಗು ಅತ್ಯಂತ ವಿಶಾಲವಾದ ರಿಸಾರ್ಟ್‌ ನಲ್ಲಿ 10.44 a.m.ವೃಷಭ ಲಗ್ನ‌‌ದಲ್ಲಿ ಗಟ್ಟಿ ಹೆಸರಾಂತ ಪುರೋಹಿತರು, ಗುರು ಹಿರಿಯರಿಂದ ನಿರ್ಣಯಿಸಲ್ಪಟ್ಟ ಸುಮುಹೂರ್ತ ದಲ್ಲಿ, ನಮ್ಮ (ಚತುರ್ಥಸೋದರ)  ದಿ. ವಿಶ್ವನಾಥ‌ (ಭಟ್) ರಾವ್ ಹಾಗೂ ಲತಾ‌ದಂಪತಿಯರ ಪುತ್ರ ಚಿ. ಕೃಷ್ಣಮೂರ್ತಿ (,ಪುಟ್ಟ) ಗೂ ಶ್ರೀ ಉದಯ ಆಚಾರ್ಯ ಹಾಗೂ ಶ್ರೀಮತಿ ಶರ್ಮಿಳಾ Uಆಚಾರ್ಯ  ದಂಪತಿಯರ ಪುತ್ರಿ ಡಾ. ಮೇಘನ (ಕರ್ಣಾ ಟಕ ಸರ್ಕಾರದ) ವೈದ್ಯಾಧಿಕಾರಿ ಗೂ ಅತ್ಯಂತ ವೈಭವದಿಂದ ವಿವಾಹ ಬಂಧ  ಮಹೋತ್ಸವ ಕಾರ್ಯಕ್ರಮವು‌ ನೆರವೇರಿತು !!  ಶುರೂನಿಂದ, ಕಿವಿಗೆ 
ಇಂಪಾದ ಸುಶ್ರಾವ್ಯ, ಮಂದ್ರ ಧ್ವನಿ ಯಲ್ಲಿ ಚೆಂಡೆ ವಾದ್ಯ ಕೇಳಿ ಬರುತ್ತಿತ್ಣು !! ನಾದ ಸ್ವರ, ಸೆಕ್ಸಾ ಫೊನ್ ಕಚೇರಿ ಬೇರೇ !!
ಮಧ್ಯಾಹ್ನ 12.30 ಗೆ 2-3 ಪಂಕ್ತಿ ಯಲ್ಲಿ ಸುಮಧುರ ಹ‌ಲವು‌  ಬಗೆಯ ಮೃಷ್ಟಾನ್ನ‌ ಭೋಜನ  !! ಅನೇಕ ಫೊಟೋ ಗಳು ತೆಗೆದದ್ದಾಯ್ತು‌ ಕೊನೆ ಯಲ್ಲಿ ಐಸ್ ಕ್ರೀಮ್, ಬೀಡಾ ಕಡ್ಡಾಯ !! ಊಟಕ್ಕೆ 200 -250 ಜನ ಆಯ್ತು !!  
ಅಂತೂ ಮದುವೆ ಮಾತ್ರ ಅತ್ಯಂತ‌‌ ಧೂಂ ಧಾಂ ವೈಭವ ರೀತಿ ಯಲ್ಲಿ, ಮನೋಲ್ಲಾಸ ವಾತಾವರಣ ದಲ್ಲಿ‌ ನಡಿಯ್ತು‌!!
    "ಹಂಸ" !! (ಹಂದಾಡಿ ಸತ್ಯನಾರಾಯಣ ರಾವ್)


(7-3-26 - ಶನಿ ವಾರ)
ಬೆಂಗಳೂರು ನ್ಯೂ ತಿಪ್ಪ ಸಂದ್ರ ಎಚ್ ಏ ಎಲ್ 3 ನೇ ಹಂತ ಭೂಮಿ ರೆಡ್ಡಿ ಕಾಲೊನೀ ಶ್ರೀ ಕೋದಂಡ ರಾಮ‌ ಸ್ವಾಮಿ
ದೇವಸ್ಥಾನ ದಲ್ಲಿ, ನೂತನ ವಿವಾಹಿತ ಮದು ಮಕ್ಕಳಿಂದ ಶ್ರೀ ಸತ್ಯನಾರಾಯಣ ಸ್ವಾಮಿ ದೇವರ‌ ಪೂಜಾ‌ ಕಾರ್ಯಕ್ರಮ/ 12.30 ನಂತರ ವೈಭವೋಪೇತವಾದ ಬಗೆ‌ ಬಗೆಯ ಮೃಷ್ಟಾನ್ನ ಒಳಗೊಂಡ ಬೀಗರ‌ ಕೂಟ
ಔತಣ ಭೋಜನಕಾರ್ಯಕ್ರಮ ನಡೆಯಿತು !! ಐಸ್ ಕ್ರೀಮ್, ಬೀಡಾ, ತೆಂಗಿನ ಕಾಯಿ ಮಾಮೂಲೇ !! ಅಂತೂ 4 ದಿನದ ಮದುವೆಯ ಕಾರ್ಯಕ್ರಮ (ಸಮಾವರ್ತನೆ/ನಾಂದಿ,ಗೆಟ್ ಟುಗೇದರ್, ವಿವಾಹ ಬಂಧ ಮಹೋತ್ಸವ, ಬೀಗರ ಕೂಟ ಔತಣ ಕಾರ್ಯಕ್ರಮ ಶಾಸ್ತ್ರೋತ್ರ ವಾಗಿ, ಕ್ರಮ ಪ್ರಕಾರ, ಅಶೇಷ‌ ಬಂಧು ಮಿತ್ರ ಗುರು ಹಿರಿಯರ ಸಮಕ್ಷ‌ ದಲ್ಲಿ, ವೈಭವೋ ಪೇತ ವಾಗಿ, ನಡಿಯ್ತು. !! ಜೈ ಶ್ರೀ ಕೋದಂಡ ರಾಮ ಸ್ವಾಮಿನೇ‌‌ ನಮ: !!
ಜೈ ಕೃಷ್ಣ ಮೆಘನಾ !! ಜೈ ಜೈ ಮೇಘನ ಕೃಷ್ಣಾ !! ಮಂಗಳಂ ಮಹತ್ !!
ಸರ್ವೇ ಜನಾ: ಸುಖಿನೋ ಭವಂತು !!
                      "ಹಂಸ" !!


ಮೂರು ದಿನ ದಿಂದ ಮೂರು ಕಾರ್ಯಕ್ರಮ ಗಳ ಬಗ್ಗೆ (ಗೆಟ್ ಟುಗೆದರ್ ಕಾರ್ಯಕ್ರಮದಲ್ಲಿ ನಾವು ದಂಪತಿ‌  ಇರ ಲಿಲ್ಲಾ ) ಏನೋ ನಪಗೆ ತಿಳಿದ ಜ್ಞಾನ ದಲ್ಲಿ ಸಮಾಚಾರ ವಿವರಣೆ ಮಾಡಿರುವೆನು !! ಇದಕ್ಕೆಲ್ಲಾ
ಶ್ರೀ ಬಿರ್ತಿ ಜಯರಾಮ ಸೋಮಯಾಜಿ (ನಮ್ಮ ತಾಯಿಯ ಕಜಿನ್); ಶ್ರೀ ರಾಘವೇಂದ್ರ ಭಟ್ (ಮದು
ಮಗನ ಚಿಕ್ಕಪ್ಪ) ಮತ್ತೆ 2-3 ಜನ ಯಿವರೆಲ್ಲರು ನನ್ನನ್ನು ಬೆನ್ನಟ್ಟಿ, ಬೆಂಬಳಿಸಿ‌ ಪ್ರೋತ್ಸಹಿಸಿದ್ದೇ‌ ಕಾರಣ. !! ‌ಅವರೆಲ್ಲರಿಗೂ ನಾನು‌ ಆಭಾರಿ
ಯಾಗಿರುವೆನು !!
                        "ಹಂಸ" !!
(ಹಂ) ದಾಡಿ
(ಸ) ತ್ಯನಾರಾಯಣ ರಾವ್ !!

Back home after two hours on the road, traffic and waiting in the signals.

Wished the newly wedded couple , a Happy and a long Married life.

God Bless.


Posted 7/3/2026