April 1, 2026
ರಾಮನ ನಡೆ ಚೆಂದ, ಕೃಷ್ಣನ ನುಡಿ ಚಂದ
👉 ರಾಮನ ಜನನ ನಡು ಮಧ್ಯಾಹ್ನವಾದರೆ, ಕೃಷ್ಣನ ಜನನ ನಡುರಾತ್ರಿ.
👉 ಬೇಸಿಗೆ ಕಾಲದಲ್ಲಿ ರಾಮನ ಜನನವಾದರೆ, ಭೋರ್ಗರೆಯುವ ಮಳೆಗಾಲದಲ್ಲಿ ಕೃಷ್ಣನ ಜನನ.
👉 ಅರಮನೆಯಲ್ಲಿ ರಾಮ ಜನಿಸಿದರೆ ಸೆರೆಮನೆಯಲ್ಲಿ ಕೃಷ್ಣ ಜನಿಸಿದ
👉 ರಾಮ ಹಿರಿಯ ಮಗನಾದರೆ, ಕೃಷ್ಣ ಕೊನೆಯ ಮಗ.
👉 ರಾಮ ಶುಕ್ಲಪಕ್ಷವಾದರೆ, ಕೃಷ್ಣ ಕೃಷ್ಣಪಕ್ಷ.
👉 ರಾಮನ ಬದುಕು ತೆರೆದಿಟ್ಟ ಪುಸ್ತಕವಾದರೆ, ಕೃಷ್ಣನದ್ದು ರಹಸ್ಯ, ನಿಗೂಢ.
👉 ರಾಮ ಏಕಪತ್ನಿ ವ್ರತಸ್ಥ, ಕೃಷ್ಣ 16108 ಪತ್ನಿಯರ ವಲ್ಲಭ.
👉ರಾಮ ಮರ್ಯಾದಾವತಾರ, ಕೃಷ್ಣ ಲೀಲಾವತಾರ.
👉ಕೃಷ್ಣನ ನುಡಿ ಭಗವದ್ಗೀತೆ, ರಾಮನ ನಡೆ ರಾಮಾಯಾಣ
👉 ಕೃಷ್ಣನಸಿದ್ಧಾಂತ, ರಾಮನ ಆಚರಣೆ
👉 ರಾಮನೇ ಯುದ್ಧ ಮಾಡಿ ಗೆದ್ದ ಕಥೆ ರಾಮಾಯಣವಾಯ್ತು.
ಕೃಷ್ಣ ಯುದ್ಧವನ್ನೇ ಮಾಡದೆ ಗೆದ್ದ ಕಥೆ ಮಹಾಭಾರತವಾಯ್ತು
👉 "ರಾಮ" ಮತ್ತು "ಕೃಷ್ಣ" ಒಂದೇ ದೇವರ ಅವತಾರವಾದರೂ ಅವರ ನಡೆ ನುಡಿಗಳಲ್ಲಿ ವ್ಯತ್ಯಾಸವಿದೆ.
ನಾವು ನಮ್ಮ ಜೀವನದಲ್ಲಿ ಹೇಗೆ ಇರಬೇಕೆಂದು ರಾಮ ನಡೆದು ತೋರಿಸಿದ,
ಕೃಷ್ಣ ಹೇಳಿ ತೋರಿಸಿದ.
ಕೃಷ್ಣ ನುಡಿದಂತೆ ನುಡಿದಾಗ ರಾಮ ನಡೆದಂತೆ ನಡೆದಾಗ ನಾವು ರಾಮ ಕೃಷ್ಣರಾಗ್ತೇವೆ.
ಅದಕ್ಕಾಗಿಯೇ ಹಿರಿಯರು ಹೇಳಿದ್ದು ರಾಮನ ನಡೆ ಚಂದ ಕೃಷ್ಣನ ನುಡಿ ಚಂದ
🙏🌺🙏🙏🌺🙏
ನಮ್ಮ ನಡೆ ನುಡಿ ಚೆನ್ನಾಗಿರಲಿ. ಬಾಳು ಬಂಗಾರವಾಗಲಿ. ಇತರರಿಗೆ ದಾರಿ ದೀಪವಾಗಲಿ ಎಂದು ಆಶಿಸುತ್ತಾ ಈ ನುಡಿ ಮುತ್ತುಗಳು...
Posted 1/4/2026











































