Saturday, June 13, 2026
Celesta Salarpuria Apartment, K R Puram, Bengaluru
It's grand children Urvi and Atharv together having fun and play.
After nice lunch at home with Ravi, Rishi, Mom and Vidya, children had good time.
Posted 14/6/2026
MEMORIES OF BIRTHIMANE,BIRTHDAYS, POOJA, CELEBRATIONS, FESTIVALS, VISITS, DRAMA, MUSIC, YAKSHAGANA, GET-TOGETHERS, WEDDING ENGAGEMENTS, WEDDINGS, WEDDING ANNIVERSARY, BRAHMOPADESHA, NAMAKARANA, SEEMANTHA, BOOK RELEASE, BOOK REVIEW, AND SHRADDHANJALI....
Saturday, June 13, 2026
Celesta Salarpuria Apartment, K R Puram, Bengaluru
It's grand children Urvi and Atharv together having fun and play.
Posted 14/6/2026
ಜೂನ್ 12, 2026
Aroma ಮತ್ತು ‘ಪರಿಮಳ’
ನಾವು ರೆಗ್ಯುಲರ್ ಆಗಿ ಬಳಸುವ/ಮಾಡುವ ಆಹಾರದ, ನಮ್ಮ ನಮ್ಮ ಜಾಗದ, ನಾವು ಉಪಯೋಗಿಸುವ ವಸ್ತುಗಳ ವಿಶಿಷ್ಟ ಪರಿಮಳ ಯಾವತ್ತೂ ಕೂಡಾ ನಮ್ಮಲ್ಲಿ “ಸುರಕ್ಷಿತ" ಮನೋಭಾವವನ್ನು ಮೂಡಿಸುತ್ತದೆ ಎನ್ನುವುದು ನನ್ನ ಅನಿಸಿಕೆ. ಅದು ಭಾವನಾತ್ಮಕ ನಂಟನ್ನು ಕೂಡಾ ಸೃಷ್ಟಿಸುತ್ತದೆ ಎನ್ನುವುದು ನನ್ನ ಅನುಭವ. ನಾವು ಅಡುಗೆ ಮಾಡುವಾಗ ಅದು ಹೊಮ್ಮಿಸುವ ‘ಪರಿಮಳ’ ಆ ಹೊತ್ತಿಗೆ ನಮ್ಮ ಅನುಭವಕ್ಕೆ ಬರುವುದಿಲ್ಲ. ಆದರೆ ಮನೆಯ ಹೊರಗೆ ಹೋಗಿ ಮನೆಯೊಳಗೆ ಹೊಕ್ಕಾಗ ನಮ್ಮ ಮೂಗಿಗೆ ಅದರ ಘಮಲು ಹೊಡೆದಾಗ ಏನೋ ಒಂದು ರೀತಿಯ " ಸುಖ”ದ ಭಾವ ಸಿಗುತ್ತದೆ. ನಾಯಿಗಳು ಊರು ತಿರುಗ ಹೊರಟಾಗ ಅಲ್ಲಲ್ಲಿ ಉಚ್ಚಿ ಹಾರಿಸಿ ತಮ್ಮ ಗಡಿಯನ್ನು ಮಾರ್ಕ್ ಮಾಡಿ ವಾಪಾಸ್ ಹಿಂದಿರುಗುವಾಗ ಆ ಜಾಗಗಳನ್ನು ಮೂಸಿ ತಮ್ಮ ಗಡಿಯಲ್ಲಿ ಇದ್ದೇವೆ ಎಂದು ಖಚಿತ ಪಡಿಸಿಕೊಂಡು ಧೈರ್ಯದಿಂದ ತಮ್ಮ ಪಯಣವನ್ನು ಮುಂದುವರಿಸುತ್ತವೆ. ಅದೇ ರೀತಿ ನಮ್ಮ ಮನೆಯೊಳಗೆ ಹೊಕ್ಕಾಗ ನಮ್ಮ ಮೂಗಿಗೆ ಅಡರುವ ಪರಿಚಿತ ‘ಪರಿಮಳ’ ನಮ್ಮೊಳಗೆ ನೆಮ್ಮದಿಯ ಭಾವವನ್ನು ಹುಟ್ಟಿಸುತ್ತದೆ. ಇದು ಬಹಳ ವಿಚಿತ್ರವಲ್ಲವೆ?
ನಾವು ಪರವೂರಿಗೆ ಹೋದಾಗ ನಮಗೆ ಬೇಕಾದಂತಹ ಆಹಾರ ಸಿಗದಿದ್ದಾಗ ಯಾವುದೋ ಮನೆಯ ಒಳಗಿನಿಂದ ನಮ್ಮ ಪರಿಚಿತ ಆಹಾರದ ಪರಿಮಳ ಬಂದಾಗ ನಮಗರಿವಿಲ್ಲದೆ ನಮ್ಮ ಬಾಯಿಯಲ್ಲಿ ನೀರೂರುತ್ತದೆಯಲ್ಲವೆ? ಹಾಗೆಯೇ ನಮ್ಮ ಆಪ್ತರು ಬಳಸುವ ಸುಗಂಧದ್ರವ್ಯದ ಪರಿಮಳ, ಹಸುಗೂಸಿನ ಮೈಯ್ಯ ಪರಿಮಳ, ನಾವು ಬಳಸುವ ಸೋಪಿನ ಪರಿಮಳ, ದೇವರಿಗೆ ಹಚ್ಚುವ ಊದುಬತ್ತಿಯ ಪರಿಮಳ, ಮೂಗಿಗೆ ಅಡರುವ ಸೊಗಸಾದ ಕಾಫಿಯ ಪರಿಮಳ….ಒಂದೇ ಎರಡೇ. ಹೀಗೆ ನಮ್ಮನ್ನು ಆವರಿಸಿರುವ, ನಮಗರಿವಿಲ್ಲದೆ ನಮ್ಮ ಬದುಕಿನ ಭಾಗವಾಗಿರುವ ಹಲವಾರು ಬಗೆಯ ಪರಿಮಳವನ್ನು ನಾವು ಪಟ್ಟಿ ಮಾಡಬಹುದು. ನಮ್ಮ ಕಣ್ಣಿಗೆ ಕಾಣದ “ಪರಿಮಳ” ನಮ್ಮೆಲ್ಲರ ಬದುಕಿನಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ ಎನ್ನುವುದು ಎಲ್ಲರೂ ಒಪ್ಪುವ ಮಾತಲ್ಲವೆ?!
Posted 14/6/2026
Friday, June 12, 2026
WhatsApp Forwarded
ಗಂಡ ಹೆಂಡತಿ: ಬದುಕಿನ ಕೊನೆಯ ಸಂಗಾತಿಗಳು 💞
✍️ವೆಂಕಟೇಶ ಚವ್ಹಾಣ್
ದಾಂಪತ್ಯ ಎಂದರೆ ಫೋಟೋಗಳಲ್ಲಿ ನಗುವ ಎರಡು ಮುಖಗಳ ಕಥೆಯಲ್ಲ. ಅದು ಒಂದೇ ಮನೆಯೊಳಗೆ ಸಾವಿರ ಬಾರಿ ಮುರಿದುಕೊಂಡರೂ, ಹೊರಗಿನವರಿಗೆ ಗೊತ್ತಾಗದಂತೆ ಮತ್ತೆ ಮತ್ತೆ ಜೋಡಿಸಿಕೊಳ್ಳುವ ಎರಡು ಜೀವಗಳ ಕಥೆ.
ಗಂಡ–ಹೆಂಡತಿಯ ನಡುವೆ ಪ್ರೀತಿ ಮಾತ್ರ ಇರುವುದಿಲ್ಲ. ಕೋಪ ಇರುತ್ತದೆ. ಅಹಂಕಾರ ಇರುತ್ತದೆ. ಬೇಸರ ಇರುತ್ತದೆ. ದಿನಗಟ್ಟಲೆ ಮಾತಾಡದ ಮೌನ ಇರುತ್ತದೆ. “ಇವನು ಬದಲಾಗಲ್ಲ” ಎನ್ನುವ ಹೆಂಡತಿಯ ನೋವು ಇರುತ್ತದೆ. “ಇವಳು ನನ್ನನ್ನು ಅರ್ಥಮಾಡಿಕೊಳ್ಳಲ್ಲ” ಎನ್ನುವ ಗಂಡನ ಒಳತಾಪ ಇರುತ್ತದೆ.
ಆದರೂ ವಿಚಿತ್ರ ನೋಡಿ…
ಅದೇ ಹೆಂಡತಿ ಗಂಡ ತಡವಾಗಿ ಮನೆಗೆ ಬಂದರೆ ಬಾಗಿಲು ತೆರೆದ ಶಬ್ದಕ್ಕೆ ಎಚ್ಚರವಾಗುತ್ತಾಳೆ. ಅದೇ ಗಂಡ ಹೆಂಡತಿ ಊಟ ಮಾಡಿಲ್ಲವೆಂದು ತಿಳಿದರೆ, ಕೋಪದಲ್ಲಿದ್ದರೂ ತಟ್ಟೆ ಮುಂದೆ ಇಡುತ್ತಾನೆ.
ಇದನ್ನೇ ದಾಂಪತ್ಯ ಎನ್ನುತ್ತಾರೆ.
ಮಕ್ಕಳು ಚಿಕ್ಕವರಿದ್ದಾಗ ಮನೆ ತುಂಬಿರುತ್ತದೆ. ಅವರ ಓದು, ಮದುವೆ, ಕೆಲಸ, ಮಕ್ಕಳು ಎಲ್ಲದರಲ್ಲೂ ತಂದೆ-ತಾಯಿ ಕರಗಿಹೋಗುತ್ತಾರೆ. ಆದರೆ ಒಂದು ದಿನ ಮಕ್ಕಳು ತಮ್ಮ ತಮ್ಮ ಜೀವನದಲ್ಲಿ ಮುಂದಕ್ಕೆ ಹೋಗುತ್ತಾರೆ. ಮನೆ ನಿಧಾನವಾಗಿ ಖಾಲಿಯಾಗುತ್ತದೆ.
ಆಗ ಉಳಿಯುವುದು ಇಬ್ಬರೇ.
ಅದೇ ಗೊರಕೆ, ಒಮ್ಮೆ ಕಿರಿಕಿರಿ ಆಗಿದ್ದದ್ದು, ಒಂದು ದಿನ ಕೇಳಿಸದೆ ಹೋದರೆ ಕಣ್ಣೀರು ಬರುತ್ತದೆ. ಅದೇ “ಬೇಡ ಅಷ್ಟು ಮಾತನಾಡಬೇಡ” ಎಂದು ಗದರಿಸಿದ್ದ ಧ್ವನಿ, ಒಂದು ದಿನ ಶಾಶ್ವತವಾಗಿ ನಿಂತುಹೋದರೆ, ಮನೆಯ ಗೋಡೆಗಳೇ ಖಾಲಿ ಎನಿಸುತ್ತವೆ.
ಅಗಲಿದ ನಂತರ ಯಾರೋ ಬಂದು ಸಾಂತ್ವನ ಹೇಳುತ್ತಾರೆ. ಆದರೆ ರಾತ್ರಿ ಹಾಸಿಗೆಯ ಖಾಲಿ ಜಾಗವನ್ನು ಯಾರೂ ತುಂಬಲಾರರು. ಔಷಧಿ ಕೊಡುವ ಕೈಯನ್ನು, “ಊಟ ಆಯ್ತಾ?” ಎಂದು ಕೇಳುವ ಧ್ವನಿಯನ್ನು, ಕೋಪದಲ್ಲೂ ಕಾಳಜಿ ಮರೆಮಾಡಿದ ಆ ಕಣ್ಣುಗಳನ್ನು ಯಾರೂ ಮರಳಿ ತರಲಾರರು.
ಆದ್ದರಿಂದ ನೆನಪಿರಲಿ…
ಅತ್ಯುತ್ತಮ ಜೋಡಿ ಎನ್ನುವುದು ಜಗಳವಿಲ್ಲದ ಜೋಡಿ ಅಲ್ಲ.
ಜಗಳದ ನಂತರವೂ ಒಬ್ಬರನ್ನೊಬ್ಬರು ಬಿಟ್ಟು ಹೋಗದ ಜೋಡಿ.
ದಾಂಪತ್ಯದಲ್ಲಿ ಪ್ರೀತಿಗಿಂತ ದೊಡ್ಡದು ಹೊಂದಾಣಿಕೆ.
ಹೊಂದಾಣಿಕೆಗೆಿಂತ ದೊಡ್ಡದು ಸಹನೆ.
ಸಹನೆಗಿಂತ ದೊಡ್ಡದು... ಕೊನೆಯವರೆಗೂ ಜೊತೆಗಿರುವ ಮನಸ್ಸು.
ಚೇಷ್ಟೆ, ನಾಚಿಕೆ, ಜಗಳ, ಮೌನ, ಕಷ್ಟ, ಸುಖ, ಕಣ್ಣೀರು, ನಗು, ಹೊಂದಾಣಿಕೆ ಇವೆಲ್ಲವೂ ಸೇರಿ ದಾಂಪತ್ಯವನ್ನು ಪವಿತ್ರವಾಗಿಸುತ್ತವೆ.
ಬದುಕಿರುವಾಗಲೇ ಸಂಗಾತಿಯ ಬೆಲೆ ಅರಿಯಿರಿ. ಏಕೆಂದರೆ ಸತ್ತ ಮೇಲೆ ಅಳುವ ಕಣ್ಣೀರಿಗಿಂತ, ಬದುಕಿರುವಾಗ ಕೊಡುವ ಗೌರವವೇ ಪವಿತ್ರ.
ನೆನಪಿರಲಿ...
ಜೀವನದಲ್ಲಿ ಪರಿಪೂರ್ಣ ಸಂಗಾತಿ ಸಿಗುವುದಿಲ್ಲ. ಆದರೆ ಅಪರಿಪೂರ್ಣತೆಯನ್ನು ಒಪ್ಪಿಕೊಂಡು ಕೊನೆಯವರೆಗೂ ಜೊತೆಗಿರುವ ಸಂಗಾತಿಗಿಂತ ದೊಡ್ಡ ಭಾಗ್ಯ ಮತ್ತೊಂದಿಲ್ಲ.
Posted 12/6/2026
Thursday, June 11, 2026
Sunandi Oldage Care, KodigeHalli, Bengaluru.
Thursday Bhajan/Satsang took place at Sunandi Vraddhashrama today with inmates of the centre participating.
Wednesday, June 10, 2026
ವಯಸ್ಸು ನಿಲ್ಲುವುದಿಲ್ಲ; ವರ್ಷಗಳು ಕಳೆದಂತೆ ವಯಸ್ಸು ನಿಲ್ಲದೆ ಅದರೊಡನೆ ಬೆಳೆಯುತ್ತದೆ. ವಯಸ್ಸು ಬರೀ ಸಂಖ್ಯೆಯಲ್ಲಿ ಹೆಚ್ಚಾಗುವುದಿಲ್ಲ; ಅದರ ಪ್ರಭಾವ ನಮ್ಮ ಪ್ರತೀ ಅವಯವದ ಮೇಲೂ ಕಾಣಿಸುತ್ತದೆ. ಸುಕ್ಕಾದ ಬಣ್ಣಗುಂದಿದ ಚರ್ಮ, ನರೆತ ತಲೆಗೂದಲು, ಕಾಂತಿ ಕಳೆದುಕೊಂಡ ಕಣ್ಣುಗಳು, ವೇಗ ಕಳೆದುಕೊಂಡ ನಡಿಗೆ, ಶಕ್ತಿಗುಂದಿದ ದೇಹ…..ಒಂದೇ ಎರಡೇ. ಮನಸ್ಸು ಇನ್ನೂ ತನ್ನ ಹುರುಪನ್ನು ಉಳಿಸಿಕೊಂಡಿದ್ದರೂ ದೇಹ ಮಾತ್ರ ಕಾಲನ ಕೃಪೆಗೆ ಬಾಗುತ್ತಿರುತ್ತದೆ. ಇಂತಹ ಬದಲಾವಣೆಯನ್ನು ಒಪ್ಪುವುದು ಮನಸ್ಸಿಗೆ ಕಷ್ಟವೆನಿಸುತ್ತದೆ. ಆದರೆ ಅದನ್ನು ಒಪ್ಪಲೇಬೇಕಾದ ಅನಿವಾರ್ಯತೆ ಇರುವುದು ವಾಸ್ತವ ಸತ್ಯ.
ನಾವಿದನ್ನೆಲ್ಲ ಮರೆಯಲು ಸಾಧ್ಯವಾಗುವುದು ಒಂದು ಪುಟ್ಟ ಕಂದನ ಒಡನಾಟದಲ್ಲಿ. ಪುಟ್ಟ ಕಂದನನ್ನು ಹಿಡಿದು ಮುದ್ದಿಸುವಾಗ ವಯಸ್ಸು ನಮ್ಮ ಮೇಲೆ ಮಾಡಿದ ಪ್ರಭಾವದ ಸಂಪೂರ್ಣ ಅರಿವಾಗುತ್ತದೆ. ಮಗುವಿನ ರಸಭರಿತ ಪುಟ್ಟ ಕೈ ಬೆರಳುಗಳು ನಮ್ಮ ಸುಕ್ಕುಗಟ್ಟಿದ ಬೆರಳುಗಳನ್ನು ಹಿಡಿದಾಗ ವಯಸ್ಸಿನ ವ್ಯತ್ಯಾಸ ಸ್ಪಷ್ಟವಾಗಿ ಕಾಣ ಸಿಗುತ್ತದೆ. ಆದರೆ ಆ ಮಗುವಿನೊಡನೆ ಕಳೆಯುವ ಸಮಯ ನಮ್ಮ ವಯಸ್ಸನ್ನು ನಾವು ಮರೆತು ಬಿಡುವಂತೆ ಮಾಡುತ್ತದೆ. ಪುಟ್ಟ ಕಂದ ನಮ್ಮೊಡನೆ ಇರುವ ಭಾವವೇ ಒಂದು ವಿಶಿಷ್ಟ ಅನುಭೂತಿಯನ್ನು ಕೊಡುವಂತಹುದು. ಅದರ ಮೈಯ್ಯ ಬಿಸುಪು ನಮ್ಮ ಬದುಕಿನ ಒತ್ತಡವನ್ನೆಲ್ಲಾ ಕರಗಿಸಿಬಿಡುವಂತಹುದು. ಅದರ ಇನಿದನಿ, ಕೇಕೆಯ ದನಿ ಇಂಪಾದ ಸಂಗೀತವನ್ನು ಕೇಳಿಸಿಕೊಂಡ ಅನುಭವ ಕೊಡುವಂತಹುದು. ಅದರ ಅಳುವಿನ ದನಿ ಹೃದಯವನ್ನು ಕರಗಿಸುವಂತಹುದು. ನಾವು ಕೂಡಾ ಒಂದಾನೊಂದು ಕಾಲದಲ್ಲಿ ಅಮ್ಮನ ಮಡಿಲಲ್ಲಿ, ಮುದ್ದಿಸುವವರ ತೆಕ್ಕೆಯಲ್ಲಿ ಬೆಳೆದು ಬಂದವರೇ ತಾನೆ? ಮಗುವಾಗಿ ನಾವು ಹಿರಿಯರಿಗೆ ಕೊಟ್ಟ ಸುಖವನ್ನು ನಾವೀಗ ಹಿರಿಯರಾಗಿ ಪುಟ್ಟ ಮಗುವಿನಿಂದ ಪಡೆಯುತ್ತಿದ್ದೇವೆ. ‘“ಕಾಲಾಯ ತಸ್ಮೈನಮಃ" ಎನ್ನುವುದು ಸತ್ಯವಲ್ಲವೆ? 'ಕಾಲ'ದ ನಡೆಯನ್ನು ಒಪ್ಪಿಕೊಳ್ಳೋಣ; ಹಾಗೆಯೇ ನಮ್ಮ ವಯಸ್ಸನ್ನು ಒಪ್ಪಿಕೊಂಡು ಸ್ವೀಕರಿಸೋಣ; ಮಕ್ಕಳ ಹೂ ಮನಸ್ಸನ್ನು ಪ್ರೀತಿಸೋಣ. ಅಲ್ಲವೆ?!
Posted 11/6/2026
Sunday, June 7, 2026
TaralaBalu Kendra Granthalaya, R.T. Nagara, Bengaluru
Shivarama Karantha Vedike organized a Upanyasa by Sri Anandarama Upadhya, about YAKSHAGANA, in TaralaBalu Kendra Granthalaya.
Sunday, June 7, 2026
TaralaBalu Kendra Sabhangana, R T Nagara, Bengaluru.


Sunday, June 7, 2026
GouravNagara, J P Nagara, Bengaluru
Smt. Sinchana Murthy, of Shri Music Academy, organized ADHIKA MAASA Bhajan, Satsang at their residence at K S N Murthy
No : Kumar Nivas, Opp : H20 water solutions, 8 th main, 4 th cross
Gaurav Nagar, J P Nagara, Bengaluru
Saturday, June 6, 2026
GOOGLE MEET ONLINE
Saturday, June 6, 2026
Subrmanya Mutt, BasvanaGudi, Bengaluru.
It's six months since SAROJINI TANTRY passed away and there was a ritual of Shrassda and Gopooja for the departed soul.