ಭಾನುವಾರ, ಮಾರ್ಚ್ 22, 2026
ತರಳಬಾಳು ಕೇಂದ್ರ ಮಿನಿ ಹಾಲ್, ಆರ್. ಟಿ. ನಗರ, ಬೆಂಗಳೂರು
ಸ್ತ್ರೀ ಧ್ವನಿ - ಮುದ್ದಣನ ಮನೋರಮೆ
MEMORIES OF BIRTHIMANE,BIRTHDAYS, POOJA, CELEBRATIONS, FESTIVALS, VISITS, DRAMA, MUSIC, YAKSHAGANA, GET-TOGETHERS, WEDDING ENGAGEMENTS, WEDDINGS, WEDDING ANNIVERSARY, BRAHMOPADESHA, NAMAKARANA, SEEMANTHA, BOOK RELEASE, BOOK REVIEW, AND SHRADDHANJALI....
ಭಾನುವಾರ, ಮಾರ್ಚ್ 22, 2026
ತರಳಬಾಳು ಕೇಂದ್ರ ಮಿನಿ ಹಾಲ್, ಆರ್. ಟಿ. ನಗರ, ಬೆಂಗಳೂರು
ಸ್ತ್ರೀ ಧ್ವನಿ - ಮುದ್ದಣನ ಮನೋರಮೆ
Thursday, March 19, 2026
Birthimane, Bengaluru.
Friday, March 20, 2026
WhatsApp Forwarded
"ಓಂಕಾರ"ವನ್ನು ಎಲ್ಲಾ ಮಂತ್ರಗಳ ರಾಜ ಎಂದು ಕರೆಯಲಾಗುತ್ತದೆ. ಯಾಕೆಂದರೆ ಎಲ್ಲಾ ಮಂತ್ರಗಳ ಮೂಲವೇ "ಓಂ"..
"ಓಂಕಾರ"ವು ಅನಂತವಾದ ಶಕ್ತಿಯನ್ನುಪ್ರತಿನಿಧಿಸುತ್ತದೆ. "ಓಂಕಾರ"ಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಅತೀ ಹೆಚ್ಚು ಮಹತ್ವವನ್ನು ನೀಡಲಾಗುತ್ತದೆ.
ದೇವರ ನಾಮಸ್ಮರಣೆಯೂ "ಓಂ" ಶಬ್ದದಿಂದಲೇ ಆರಂಭವಾಗುತ್ತದೆ. "ಓಂಕಾರ"ದ ಮೂಲಕ ಆರಂಭವಾಗುವ ದೇವರ ನಾಮಾರ್ಚನೆಯು ಹೆಚ್ಚು ಪರಿಣಾಮಕಾರಿಯಾದುದು ಎಂದು ವೇದದಲ್ಲಿ ಉಲ್ಲೇಖ ಮಾಡಲಾಗಿದೆ.
"ಓಂ" ಎನ್ನುವುದು ಒಂದು ಅಕ್ಷರವಲ್ಲ. ಅದು "ಅ.. ಉ.. ಮ" ಎಂಬ ಮೂರು ಅಕ್ಷರಗಳ ಸಂಗಮ.
ಅ ಎಂದರೆ ಸೃಷ್ಟಿ....ಉ ಎಂದರೆ ವಿಕಸನ...ಮ ಎಂದರೆ ಮೌನ ಹಾಗೂ ವಿನಾಶ.
ಹಾಗಾಗಿ ಈ ಒಂದೇ ಪದವು ಸೃಷ್ಟಿಯ ಆದಿ ಮತ್ತು ಅಂತ್ಯವನ್ನು ಪ್ರತಿಬಿಂಬಿಸುತ್ತದೆ. ಓಂಕಾರವನ್ನು ಪ್ರತಿದಿನ ಪಠಿಸಿದರೆ ನಿಮ್ಮ ಒತ್ತಡಗಳೆಲ್ಲಾ ನಿವಾರಣೆಯಾಗಿ ಮನಸ್ಸು ಆಹ್ಲಾದಕರವಾಗಿರುತ್ತದೆ.
🙏 ಮುಂಜಾನೆ ಎದ್ದು ಸ್ನಾನಾದಿ ಕರ್ಮಗಳನ್ನು ಮುಗಿಸಿ, ಕುಳಿತುಕೊಳ್ಳಿ, ನಿಮ್ಮ ಕಣ್ಣುಗಳನ್ನು ಮುಚ್ಚಿ ನಿರಾಳರಾಗಿ, ನಿಮ್ಮ ಎರಡೂ ಹುಬ್ಬಿನ ಮಧ್ಯಭಾಗವನ್ನು ಕೇಂದ್ರೀಕರಿಸಿ, ಓಂಕಾರವನ್ನು ನಿಧಾನವಾಗಿ ಪಠಿಸಿ. 21 ಬಾರಿ ಪಠಿಸುವುದು ಒಳ್ಳೆಯದು, ನಿಮ್ಮ ಉಸಿರಾಟದ ಮೂಲಕ ಪಠಣವನ್ನು ಲೆಕ್ಕಹಾಕಬಹುದು....
"ಓಂಕಾರ"ವನ್ನು ಹೇಳುವಾಗ ಮೂಗಿನಿಂದ ಒಳ ಸೇರಿದ ಗಾಳಿ ಅದೇ ಲಯದಲ್ಲಿ ಗಂಟಲು, ಎದೆ ಕೊನೆಗೆ ನಾಬಿಯ ಸುತ್ತಲೂ ವ್ಯಾಪಿಸಿ ಮತ್ತೂ ಕೆಳಗೆ ಹೋಗಿ ದೇಹದ ತುಂಬೆಲ್ಲಾ ವ್ಯಾಪಿಸಿ ನಿಧಾನಕ್ಕೆ ಉಸಿರು ಬಿಟ್ಟಾಗ ದೇಹದಲ್ಲಿ ಒಂದು ಕಂಪನ ಏರ್ಪಡುತ್ತದೆ....
ಉಪಯೋಗ.....
🙏ಹದಿನೈದು ದಿನಗಳ ನಿರಂತರ ಓಂಕಾರದ ಪಠಣದಿಂದ ಒತ್ತಡಗಳೆಲ್ಲಾ ನಿವಾರಣೆಯಾಗಿ, ಮನಸ್ಸು ಶಾಂತವಾಗುವುದು, ಸಂಶೋಧನೆಯ ಪ್ರಕಾರ ಓಂಕಾರವು ದೇಹದಲ್ಲಿರುವ ಅಡ್ರಿನಲಿನ್ ಸ್ರಾವವನ್ನು ಕಡಿಮೆಗೊಳಿಸುತ್ತದೆ, ಇದರಿಂದಾಗಿ ಮಾನಸಿಕ ಒತ್ತಡವು ನಿಧಾನವಾಗಿ ಕಡಿಮೆಯಾತ್ತದೆ ಎಂದು ಹೇಳಲಾಗುತ್ತದೆ
🙏 ಇದು ಮನಸ್ಸಿನಲ್ಲಿರುವ ಭಯ, ಅಸಮಾಧಾನವನ್ನು ನಿವಾರಣೆಗೊಳಿಸುತ್ತದೆ...
🙏 "ಓಂಕಾರ"ದ ಪಠಣವು ನಿಮ್ಮ ಸುತ್ತಲಿನ ವಾತಾವರಣವನ್ನು ಶುದ್ಧಗೊಳಿಸಿ, ಧನಾತ್ಮಕ ಕಂಪನವನ್ನು ಉಂಟುಮಾಡುತ್ತದೆ...
🙏 "ಓಂಕಾರ"ದ ಉಚ್ಛಾರಣೆಯು ದೇಹದಲ್ಲಿರುವ ಎಲ್ಲಾ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ...
🙏 "ಓಂಕಾರ" ಪಠಣದಿಂದ ನಿಮ್ಮ ಹೃದಯದ ಆರೋಗ್ಯ ವೃದ್ಧಿಯಾಗುವುದು ಹಾಗೂ ರಕ್ತಸಂಚಾರವೂ ಆರೋಗ್ಯಕರವಾಗುವುದು ಜೀರ್ಣಾಂಗವ್ಯವಸ್ಥೆಯನ್ನು ಸುಧಾರಿಸುತ್ತದೆ...
🙏 "ಓಂಕಾರ"ವು ನಿಮ್ಮಲ್ಲಿರುವ ಉದಾಸೀನತೆಯನ್ನು ಬದಿಗೆ ಸರಿಸಿ, ಉತ್ಸಾಹವನ್ನು ಹೆಚ್ಚಿಸುತ್ತದೆ
ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ, ಮಲಗುವ ಮುನ್ನ 5ನಿಮಿಷ ಓಂಕಾರವನ್ನು ಪಠಿಸಿ...
🙏 "ಓಂಕಾರ"ದ ಪಠಣದಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚುವುದು..
🙏 ಮನುಷ್ಯನ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯವನ್ನು ಹೆಚ್ಚಿಸುವುದು...
🙏 "ಓಂಕಾರ" ಪದವನ್ನು ಉಚ್ಚರಿಸುವಾಗ ನಿಮ್ಮ ದೇಹದಲ್ಲಿ ಉಂಟಾಗುವ ಕಂಪನವನ್ನು ಗಮನಿಸಬಹುದು, ಈ ಕಂಪನವು ಬೆನ್ನು ಮೂಳೆಗೆ ಒಳ್ಳೆಯದು. ಇದರಿಂದಾಗಿ ಬೆನ್ನುಮೂಳೆಯ ಕಾರ್ಯಕ್ಷಮತೆ ಹೆಚ್ಚಾಗುವುದು...
🙏 "ಓಂಕಾರ"ದ ಉಚ್ಚಾರಣೆಯು ಗಂಟಲಿನ ಆರೋಗ್ಯಕ್ಕೂ ಒಳ್ಳೆಯದು, ಇದು ಥೈರಾಯ್ಡ್ ಗ್ರಂಥಿಯನ್ನು ಆರೋಗ್ಯವಾಗಿಡುವುದು...
🙏 "ಓಂಕಾರ" ಪದವು ನಿಮ್ಮ ದೇಹದಲ್ಲಿ ಹೊಸ ಶಕ್ತಿಯನ್ನು ಪ್ರವಹಿಸಿ, ಯಾವುದೇ ಕೆಲಸದಲ್ಲೂ ನಿಮ್ಮ ಆತ್ಮವಿಶ್ವಾಸ ವೃದ್ಧಿಯಾಗುವಂತೆ ಮಾಡುತ್ತದೆ.
ಏಕಾಗ್ರತೆಯು ವೃದ್ಧಿಯಾಗಿ, ನಿಮ್ಮ ಗುರಿಯನ್ನು ಸಾಧಿಸಲು ಓಂಕಾರವು ಸಹಕರಿಸುವುದು..
🙏 "ಓಂಕಾರ" ಪಠಣವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸ್ವಯಂಪ್ರತಿರೋಧಕವನ್ನು ಉಂಟುಮಾಡುವುದು...
🙏 "ಓಂಕಾರ"ವನ್ನು ಪಠಿಸುವವರಿಗೆ ಮಾತ್ರವಲ್ಲದೇ, ಅವರ ಸುತ್ತಮುತ್ತಲಿನವರೂ ಓಂಕಾರದ ಕಂಪನವನ್ನು ಅನುಭವಿಸುವುದರಿಂದ ಇತರರಿಗೂ ಉಪಯೋಗವಾಗುವುದು...
🙏 "ಓಂಕಾರ"ವನ್ನು ಪಠಿಸುವುದರಿಂದ ನಿಮ್ಮ ಭಾವನೆಗಳ ಮೇಲೆ ನಿಯಂತ್ರಣವನ್ನು ಸಾಧಿಸಬಹುದು...
ನೀವು ಮೊದಲ ಬಾರಿ "ಓಂಕಾರ" ಪಠಣ ಆರಂಭಿಸುತ್ತಿದ್ದಲ್ಲಿ ಪ್ರತಿದಿನ 5 ನಿಮಿಷ ಮಾತ್ರ ಮಾಡಿ.
ಪ್ರತಿದಿನ ಅಭ್ಯಾಸ ಮಾಡುತ್ತಾ ಹಿಡಿತ ಬಂದಂತೆ ಸಮಯವನ್ನು ನಿಧಾನವಾಗಿ ವಿಸ್ತರಿಸುತ್ತಾ ಬನ್ನಿ.
ಆರಂಭದಲ್ಲೇ 5 ನಿಮಿಷಕ್ಕಿಂತ ಹೆಚ್ಚು ಅಭ್ಯಾಸ ಮಾಡಿದರೆ ದೇಹದಲ್ಲಿ ಉಂಟಾಗುವ ಶಕ್ತಿಯ ಕಂಪನದಿಂದ ಬಾಧೆಗೊಳಗಾಗಬಹುದು. ಯಾಕೆಂದರೆ ಓಂ ಜಪವು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ....
"ಓಂಕಾರ"ದಲ್ಲಿ ಧ್ವನಿ ತರಂಗ ಹಾಗೂ ನಾದಕ್ಕೆ ಭೌತ ಶಾಸ್ತ್ರೀಯ ಮಹತ್ವಗಳನ್ನು ಇವೆ. ಓಂಕಾರದಲ್ಲಿ "ಉ" ಕಾರ, "ಅ" ಕಾರ ಹಾಗೂ "ಮ ಕಾರ" ಗಳು ಸೇರುವುದರಿಂದ ಅವುಗಳನ್ನು ಒಟ್ಟಿಗೆ ಉಚ್ಛಾರ ಮಾಡಿದಾಗ ಹೊಟ್ಟೆ ಬೆನ್ನು ಹುರಿ ಗಂಟಲು ಮೂಗು ಹಾಗೂ ಮೆದುಳಿನ ಭಾಗಗಳು ಕ್ರಿಯಾಶೀಲಾ ಆಗುತ್ತವೆ ಇದರಿಂದ ಏಕಾಗ್ರತೆ ಹೆಚ್ಚುತ್ತದೆ ಮನಸ್ಸಿಗೆ ಶಾಂತಿಯು ದೊರೆಯುತ್ತದೆ ಹಾಗೂ ನಮ್ಮ ಒತ್ತಡವೂ ಸಹಾ ಕಡಿಮೆ ಆಗುತ್ತದೆ.
"ಓಂಕಾರ" ಎಂಬ ಶಕ್ತಿ,ಧ್ಯಾನ ಎಂಬ ಸಾಧನ
🙏🙏🙏🙏🙏🙏🙏🙏🙏🙏🙏🙏
"ಓಂಕಾರ" ಮಂತ್ರದ ಮಹತ್ವ
ಪ್ರಣವ ಮಂತ್ರವನ್ನು ಜಪಿಸುತ್ತಿದ್ದಾನೆ ಸೂರ್ಯ !
ಹಲವು ವರ್ಷಗಳ ನಿರಂತರ ಅಧ್ಯಯನದಿಂದ ವಿಜ್ಞಾನಿಗಳು ಶೋಧಿಸಿದ ವೈಜ್ಞಾನಿಕ ಸತ್ಯ..!!
ಜಗತ್ಪ್ರಸಿದ್ಧ ವೈಜ್ಞಾನಿಕ ಸಂಸ್ಥೆ NASA ಹಲವು ಸಂಶೋಧನೆಗಳ ನಂತರ, ಸೂರ್ಯನಿಂದ ಪ್ರತಿಕ್ಷಣವೂ ಹೊರಹೊಮ್ಮುವ ಧ್ವನಿಯನ್ನು ರೆಕಾರ್ಡ್ ಮಾಡಿತು. ಆ ಧ್ವನಿಯನ್ನು ಕೇಳಿದ ವಿಜ್ಞಾನಿಗಳಿಗೆ ಅಚ್ಚರಿ…!! ವೇದಗಳಲ್ಲಿ ಗುಣಗಾನ ಮಾಡಲಾಗಿರುವ , ಸನಾತನ ಧರ್ಮದ ಪವಿತ್ರ ಮಂತ್ರ "ಓಂಕಾರ"..
ಇನ್ನೂ ಅಚ್ಚರಿಯೆಂದರೆ , ಸಾಮಾನ್ಯ ಮನುಷ್ಯ 20 ಮೆಗಾ ಹರ್ಟ್ಸಿನಿಂದ 2೦೦೦೦ ಮೆಗಾ ಹರ್ಟ್ಸ್ ಮಧ್ಯದ ಧ್ವನಿಯನ್ನಷ್ಟೇ ಕೇಳಬಲ್ಲ. ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಶಬ್ದವನ್ನು ಮನುಷ್ಯ ಗ್ರಹಿಸಲಾರ ಎಂದು ವಿಜ್ಞಾನ ತಿಳಿಸುತ್ತದೆ. ಆದರೆ ಸೂರ್ಯನಿಂದ ಬರುವ ಈ ಓಂಕಾರನಾದವನ್ನು ನಮ್ಮ ಋಷಿಮುನಿಗಳು ಅರಿತಿದ್ದಾದರೂ ಹೇಗೆ ಎಂಬುದೇ ಅಚ್ಚರಿ...!!
ವೇದಗಳಲ್ಲಿ ಕೊಂಡಾಡಿದ್ದು ಹೇಗೆ..?
ಓಂಕಾರವನ್ನು ಮಹಾಮಂತ್ರವೆಂದು ಸ್ವೀಕರಿಸಿದ್ದು ಹೇಗೆ..? ಪ್ರಶ್ನೆಗಳು ಈಗಲೂ ವಿಜ್ಞಾನಿಗಳನ್ನ ಕಾಡುತ್ತಿವೆ..!!
ನಮ್ಮ ಋಷಿಗಳ ಪ್ರಕಾರ "ಓಂಕಾರ"ವೇ ಪರಮಾತ್ಮನ ನಿಜವಾದ ಹೆಸರು.
”ಓಮಿತ್ಯೇಕಾಕ್ಷರಂ ಬ್ರಹ್ಮ”. ಮಹರ್ಷಿ ಪತಂಜಲಿ ತಿಳಿಸುವಂತೇ “ತಸ್ಯ ವಾಚಕಃ ಪ್ರಣವಃ” ಪ್ರಣವವೆಂದರೆ “ಓಂಕಾರ”......
ಸೂರ್ಯನಿಂದ ಓಂಕಾರನಾದ ಬರಲು ಕಾರಣವಾದರೂ ಏನು..? ಇದಕ್ಕೆ ಉತ್ತರ ಗೀತೆಯಲ್ಲಿದೆ..
👇👇👇
ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ ಹೇಳುತ್ತಾನೆ:- “ಅರ್ಜುನ, ನಿನಗಿಂದು ಯಾವ ವಿದ್ಯೆಯನ್ನು ನಾನು ಉಪದೇಶಿಸಿದೆನೋ ಈ ವಿದ್ಯೆಯನ್ನು ನಿನಗಿಂತಲೂ ಮೊದಲು ಸೂರ್ಯನಿಗೆ ಉಪದೇಶಿಸಿದ್ದೆ. ಅಂದಿನಿಂದ ಸೂರ್ಯ ನಿರಂತರವಾಗಿ ಓಂಕಾರವನ್ನು ಜಪಿಸುತ್ತಾ ಲೋಕವನ್ನು ಬೆಳಗುತ್ತಿದ್ದಾನೆ. ಕೇವಲ ಸೂರ್ಯನಷ್ಟೇ ಅಲ್ಲ. ಸಮಸ್ತ ಬ್ರಹ್ಮಾಂಡವೂ ಓಂಕಾರದಲ್ಲೇ ಅಧೀನವಾಗಿದೆ”....
ಅಂದರೆ ವಿಜ್ಞಾನಿಗಳು ಇಂದು ಕಂಡುಹಿಡಿದ ಸತ್ಯವು, ಋಷಿ-ಮುನಿಗಳಿಗೆ , ಕೃಷ್ಣನಿಗೆ ಅಂದೇ ತಿಳಿದಿತ್ತು..!!
ಯಾವಾಗ ನಾವು "ಓಂ" ಎಂದು ಜೋರಾಗಿ ಉಚ್ಚರಿಸುತ್ತೇವೋ ಆಗ ನಮ್ಮ ಮನಸ್ಸಿನಲ್ಲಿರುವ ದುಗುಡ-ದುಮ್ಮಾನಗಳು ಖಾಲಿಯಾಗುತ್ತವೆ.
ಓಂಕಾರದ ಜಪ ತೀವ್ರವಾಗುತ್ತಿದ್ದಂತೇ , ಬ್ರಹ್ಮಾಂಡದಲ್ಲಿರುವ ಓಂಕಾರ ಹಾಗೂ ಸಾಧಕನ ಓಂಕಾರನಾದಗಳ ಸಮ್ಮಿಲನವಾಗುತ್ತದೆ.
ಆ ಸಮಯದಲ್ಲಿ ಸಾಧಕನ ಮನಸ್ಸು ಧ್ಯಾನದಲ್ಲಿ ಕಳೆದುಹೋಗುತ್ತದೆ. ಈ ಅವಸ್ಥೆಯಲ್ಲಿ ಮನಸ್ಸು ಚೇತನದೊಂದಿಗೆ ಸೇರಿಕೊಳ್ಳುತ್ತದೆ..🙏
(ಸಂಗ್ರಹ)
ಸನಾತನವೇ ಸತ್ಯ, ಸನಾತನವೇ ಶ್ರೇಷ್ಠ...🙏🏻😍🚩
ಸನಾತನವೇ ವಿಶ್ವ ಧರ್ಮ...🙏🏻😍
ಶುಕ್ರವಾರ, ಮಾರ್ಚ್ 20, 2026
WhatsApp forwarded
"ದೇವರ ಮನೆ ಮತ್ತು ಪೂಜೆ" ಯ ವಿಷಯಗಳು..
೧. ದೇವರ ಮನೆ, ದೀಪಗಳು , ದೇವರ ಪೂಜಾ ಸಾಮಗ್ರಿಗಳು ಎಷ್ಟು ಶುದ್ಧವಾಗಿರುತ್ತದೋ ಅಷ್ಟೂ ಶುಭಫಲವಿರುತ್ತದೆ..
೨. ದೇವರ ಮನೆಯಲ್ಲಿ ಒಡೆದಿರುವ, ಭಿನ್ನವಾಗಿರುವ, ವಿಗ್ರಹಗಳು, ಫೋಟೋಗಳು, ಯಂತ್ರಗಳು ಇಡಬೇಡಿ..
೩. ದೇವರ ಮನೆಯಲ್ಲಿ ಗುಡಿಸೋ ಕಸವನ್ನು ಒಂದು ಬಟ್ಟೆಯಿಂದ ಗುಡಿಸಿದರೆ ತುಂಬಾ ಒಳ್ಳೆಯದು.
೪. ದೇವರ ಮನೆಯನ್ನು ಅರಿಸಿನ ಹಾಕಿದ ನೀರಿನಿಂದ ಶುದ್ಧ ಮಾಡಿ, ಆ ಮನೆಯಲ್ಲಿ ದೈವಕಳೆ ವೃದ್ಧಿಸಿ, ಹಣದ ಸಮಸ್ಯೆ ನಿವಾರಣೆಯಾಗುತ್ತದೆ,ನೆಲ ಒಣಗುವವರೆಗೂ ತುಳಿಯುವ ಹಾಗಿಲ್ಲ..
೫. ದೇವರ ಮನೆಯಲ್ಲಿ ತುಂಬಾ ವಿಗ್ರಹಗಳು ಬೇಡ, ವಿಗ್ರಹಗಳು ಜಾಸ್ತಿಯಾದರೆ "ನೈವೇದ್ಯ "ದ ಪ್ರಮಾಣವೂ ಜಾಸ್ತಿ ಮಾಡಬೇಕಾಗುವುದು..
೬. ತುಂಬಾ ಎತ್ತರದ ವಿಗ್ರಹಗಳು ಬೇಡ, ಅಕಸ್ಮಾತ್ತಾಗಿ ಇದ್ದರೆ ಪ್ರತಿದಿನ ಒಂದು ಸೇರು ಅಕ್ಕಿಯ ಅನ್ನವನ್ನಾದರೂ ನೈವೇದ್ಯ ಮಾಡಬೇಕಾಗುವುದು..
೭. ದೇವರ ವಿಗ್ರಹಗಳನ್ನು ಮಂಗಳವಾರ, ಶನಿವಾರ , ಶುಕ್ರವಾರದಂದು ಶುದ್ಧಿ ಮಾಡುವುದು ಬೇಡ..
(ಅನಿವಾರ್ಯ ಪರಿಸ್ಥತಿಗಳಲ್ಲಿ, ಗ್ರಹಣ ಕಾಲದಲ್ಲಿ, ಇತ್ಯಾದಿ ಸಮಯದಲ್ಲಿ ಮಾಡಬಹುದು)
೮. ಪ್ರತೀ ಅಮಾವಾಸ್ಯೆ ಮತ್ತು ಪೌರ್ಣಾಮಿಯ ಮರುದಿನ ದೇವರ ವಿಗ್ರಹಗಲಕನ್ನು "ಅರಿಸಿನದ ನೀರಿನಿಂದ ಶುದ್ಧ ಮಾಡಿ..
೯. ದೇವರ ಪೂಜೆಗೆ "ಆಂಜನೇಯ" ಸ್ವಾಮಿ ಇರೋ ಘಂಟೆಯನ್ನೇ ಉಪಯೋಗಿಸಿ, ಆಂಜನೇಯ ದೇವರ ಪಾದವನ್ನು ಹಿಡಿದು ಘಂಟೆಬಾರಿಸಬೇಕು..
೧೦. ದೇವರುಗಳು ಯಾವಾಗಲೂ ಆಹಾರ ಕೇಳುತ್ತಿರುತ್ತವೆ , ದೇವರ ಹತ್ತಿರ ಮಧುಪರ್ಕ ಇರಿಸಿರಿ, ರಾತ್ರಿ ಮಲಗೋಕೆ ಮುಂಚೆ ಅದನ್ನು ಮನೆಯವರೆಲ್ಲಾ ಅಥವಾ ಹಿರಿಯರಾಗಲೀ ಭಕ್ತಿಯಿಂದ ಸೇವಿಸಿ..
೧೧. ದೇವರ ಪೂಜೆ ಮಾಡೋವಾಗ ಆಕಳಿಕೆ ,ಕೋಪ, ಇವೆಲ್ಲದರಿಂದ ದೂರ ಇರಿ, ಅನಗತ್ಯ ಚಟುವಟಿಕೆಗಳು ಬೇಡ..
೧೨. ಸಂಧ್ಯಾವಂದನೆ ಮತ್ತು ಸ್ತ್ರೀಯರ ತುಳಸೀ ಪೂಜೆ ಇಲ್ಲದಿದ್ದರೆ ಯಾವ ಪೂಜೆಯೂ ಫಲ ಕೊಡುವುದಿಲ್ಲ..
೧೩. ದೇವರ ಪೂಜೆಯ ಸಮಯದಲ್ಲಿ ಪುರುಷರು ಮೇಲುಹೊದಿಕೆ ಅಂದರೆ ಶಲ್ಯವನ್ನು ಧರಿಸಿರಲೇಬೇಕು..
ಇಲ್ಲದಿದ್ದರೆ ಪೂಜಾ ಫಲ ರಾಕ್ಷಸರ ಪಾಲಾಗುವುದು..ಬರೀ ಮೈಯಲ್ಲಿ ಕುಳಿತು ಪೂಜೆ ಮಾಡುವುದು, ಊಟ ಮಾಡುವುದು ಒಳಿತಲ್ಲ..
೧೪. ಹಣೆಯಲ್ಲಿ ಕುಂಕುಮ, ಗಂಧ, ಅಥವಾ ಭಸ್ಮ .ಇತ್ಯಾದಿ ಯಾವುದದಾರೂ ಧರಿಸದೇ ಪೂಜೆ ಮಾಡಬಾರದು..
ಧರಿಸಿಯೇ ಪೂಜೆ ಮಾಡಬೇಕು, ಇಲ್ಲದಿದ್ದರೆ ಪೂಜಾಫಲ ನಶಿಸುವುದು..
೧೫. ದೇವರ ಪೂಜೆಗೆ "ಹಸಿಯಾದ ಹಾಲನ್ನು ಮಾತ್ರ ಬಳಸಿ..
೧೬. ದೇವರ ನೈವೇದ್ಯ ಮಾಡೋವಾಗ ವೀಳ್ಯದೆಲೆ, ಅಡಿಕೆ ತಾಂಬೂಲ ಇಲ್ಲದ ನೈವೇದ್ಯ ಫಲ ಕೊಡುವುದಿಲ್ಲ..
ನೈವೇದ್ಯ ಮಾಡೋವಾಗ "ತುಳಸೀಪತ್ರೆಯನ್ನು" ಬಳಸಬೇಕು..
೧೭. ದೇವರ ಪೂಜೆಗಳು ಸಂಕಲ್ಪ ಇಲ್ಲದೇ ಮಾಡಬೇಡಿ, ಸಂಕಲ್ಪ ಇದ್ದರೆ ನಿಮ್ಮ ಪ್ರಾರ್ಥನೆಗಳು ಬೇಗ ಈಡೇರುತ್ತವೆ..
೧೮. ದೇವರ ಮನೆಯಲ್ಲಿ ಚಿಕ್ಕದೀಪಗಳನ್ನು ಜೋಡಿಸಿ ಇಡಿ, ದೊಡ್ಡ ದೀಪಗಳಾಗಿದ್ದರೆ ಎಡಗಡೆ ಬಲಗಡೆ ಇಡಿ..
೧೯. ಗಣಪತಿ ಪೂಜೆ, ಮನೆದೇವರ ಪೂಜೆ, ದೇವಿ ಪೂಜೆಯಿಂದ ಮಾತ್ರ ಪೂರ್ಣ ಪೂಜಾಫಲ ದೊರೆಯವುದು..
ದೇವಿಯು ಎಲ್ಲಾ ದೇವರುಗಳ ತಾಯಿಯಾದ್ದರಿಂದ ಅಮ್ಮನವರನ್ನು ಪೂಜಿಸಿದರೇ ಮನೆಗೆ ನಮಗೆ ರಕ್ಷಣೆ..
ಮನೆದೇವರ ಪೂಜೆ ಇಲ್ಲದಿದ್ದರೆ ಯಾವ ದೇವರಗಳೂ ನಿಮ್ಮ ಮನೆಯನ್ನು ರಕ್ಷಿಸುವುದಿಲ್ಲ, ಎಂಥಾ ಕಷ್ಟಬಂದರೂ ನಮ್ಮ ಮನೆಯನ್ನು ನಮ್ಮನ್ನು ರಕ್ಷಿಸುವುದು "ಮನೆದೇವರೇ.."!
೨೦. ಮನೆಯ ಹೊಸ್ತಿಲನ್ನು ಪೊರಕೆಯಿಂದ ಗುಡಿಸಬೇಡಿ, ಹೊಸ್ತಿಲಲ್ಲಿ "ಮಹಾಲಕ್ಷ್ಮೀ" ಸಾನಿಧ್ಯ ಇರುತ್ತದೆ..
೨೧. "ಶ್ರೀ ಚಕ್ರ" , ಬಲಮುರಿ ಶಂಖ, ಬಲಮುರಿ ಗಣೇಶ, ಸಾಲಿಗ್ರಾಮಗಳು, ಎರಡೂ ಪಾದ ಕಾಣಿಸೋ ಮಹಾಲಕ್ಷ್ಮೀ .. ಇತ್ಯಾದಿ ಈ ದೇವರುಗಳೆಲ್ಲಾ "ಅಷ್ಟೈಶ್ವರ್ಯಗಳನ್ನು ಪ್ರಧಾನಿಸೋ ದೇವರುಗಳು, ಈ ದೇವರುಗಳ ಪೂಜೆ ತುಂಬಾ ವಿಶೇಷವಾಗಿರುತ್ತದೆ..
https://chat.whatsapp.com/GxE1TOKoqedCln5XUwZEcM?mode=gi_t
Thursday, March 19, 2026
Sunandi Holistic Eldercare, Kodigehalli, Bengaluru.
In the absence of Ramakrishna Bhat (Who had travelled to USA), Jayaram Suvarna (Yoga Jayaram) and myself condusted divine session of Bhajans / Satsang for the elders of the centre.
ಮಂಗಳವಾರ, ಮಾರ್ಚ್ 17, 2026
ಮಂಗಳಾ ವೆಂಕಟೇಶ ಅವರ ಮನೆ, ಗೋವಿಂದರಾಜ ನಗರ, ಬೆಂಗಳೂರು.
ಸಮಾನ ಮನಸ್ಕರು ಸೇರಿ ಮಹಾ ಚೈತನ್ಯ ಡಿವಿಜಿಯವರ ಹುಟ್ಟು ಹಬ್ಬ, ಮತ್ತು ನುಡಿ ನಮನ ಕಾರ್ಯಕ್ರಮ ಅದ್ಭುತವಾಗಿ ಸಂಪನ್ನಗೊಂಡಿತು. ರೂವಾರಿ ಶ್ರೀಪಾದ ರಾವ್ ಮಂಜುನಾಥ್, ಮಂಗಳಾಲಕ್ಷ್ಮಿ ವೆಂಕಟೇಶ್ ಅವರಿಗೆ ಅನಂತಾನಂತ ಧನ್ಯವಾದಗಳು.
ಭಾಗವಹಿಸಿದ್ದ ಇತರರ ಪ್ರತಿಕ್ರಿಯೆಗಳು:
ಒಂದು ಸುಂದರ ಸಂಜೆ...
ಈ ಕಾರ್ಯ ಕ್ರಮ ಆಯೋಜಿಸಿದ ಮಂಜಣ್ಣ ಮತ್ತು ಸ್ನೇಹಿತರ "ಸ್ನೇಹ ಸೇತು" ಬಳಗಕ್ಕೆ ಮನಪೂರ್ಣ, ಭಾವಪೂರ್ಣ ಧನ್ಯವಾದಗಳು 🙏🏻.ಮಾಹಿತಿ ಪೂರ್ಣ ವಿಷಯಗಳು ಹಾಗೂ ಮನಸಿಗಾನಂದ ನೀಡುವ ಹಾಡುಗಳನ್ನು ಹಾಡಿದ ಅಂಜಲಿ ಹಾಗೂ ರೇಖಾ ಅವರಿಗೆ, ರುಚಿ ರುಚಿಯಾದ ಊಟ. ಅನ್ನದಾತ ಸುಖೀಭವ ವೆಂಕಟೇಶ್ -ಮಂಗಳಾ ದಂಪತಿಗಳಿಗೆ. ಪ್ರತಿಯೋರ್ವರಿಗೂ ಧನ್ಯವಾದಗಳು 🙏🏻 🙏🏻
ಸ್ನೇಹ ಸೇತು ಬಳಗದ Sripadarao Sir, Krishnamurthy Sir ಮತ್ತು ಶಶಿಧರನ್ ಮತ್ತು ಈ ಬಳಗದ ಎಲ್ಲ ಆತ್ಮೀಯ ಬಂಧುಗಳಿಗೆ ನನ್ನ ನಮನಗಳು. ಅದ್ಭುತ ಕಾರ್ಯಕ್ರಮ. ಮಂಗಳ ಲಕ್ಷ್ಮಿಯವರ ಮನದುಂಬಿದ ಆತಿಥ್ಯ, ಎಲ್ಲರೊಡನೆ ಮಾತು ಹರಟೆ, ಹಾಡು ಕಗ್ಗ... ಎಲ್ಲವೂ ಮನಕೆ ಮುದ ತಂದವು.. ಧನ್ಯವಾದಗಳು ಎಲ್ಲರಿಗೂ ಧನ್ಯವಾದಗಳು 🙏
ಡಿವಿಜಿಯವರ ಜನ್ಮದಿನದ ನೆಪದಲ್ಲಿ ನೆನಪಲ್ಲಿ ಅವರ ಚಿಂತನೆಗಳ ತುಂತುರಲ್ಲಿ ಒಂದಷ್ಟು ಸಜ್ಜನರು ಕಲೆತು ಸ್ನೇಹದ ಪರಿಸರದೊಂದಿಗೆ ಪರಸ್ಪರ ಖುಷಿಯಿಂದ ರುಚಿಕಟ್ಟಾದ ಭೋಜನವನ್ನೇ ಸೇವಿಸಿ ಮಂಗಳಾ- ವೆಂಕಟೇಶ್ ದಂಪತಿಗಳ ಆತ್ಮೀಯ ಸತ್ಕಾರದ ಸವಿಯೊಂದಿಗೆ ದಿನವನ್ನು ಸಂಪನ್ನಗೊಳಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು 🙏. ಸ್ನೇಹಸೇತುವಿನ ಸದಸ್ಯಳಲ್ಲದೆಯೂ, ನನ್ನನ್ನೂ ಮಂಜುನಾಥ್ ಸರ್ ಈ ಸುಂದರ ಬಳಗದ ಸುಂದರ ಕ್ಷಣಗಳಲ್ಲಿ ಭಾಗಿಯಾಗಲು ಅವಕಾಶವಿತ್ತಿದ್ದಕ್ಕಾಗಿ ಅವರಿಗೆ ವಿಶೇಷ ಧನ್ಯವಾದಗಳು. ಎಂದಿನಂತೆ ಅಂಜಲಿಯವರ ಅತ್ಯದ್ಭುತ ಗಾಯನ, ನಮ್ಮ ನೀಲಿಚಿಟ್ಟೆಯ ಲವಲವಿಕೆಯ ಉಪಸ್ಥಿತಿ ಕಾರ್ಯಕ್ರಮಕ್ಕೆ ಹೆಚ್ಚು ಜೀವಂತಿಕೆ ತಂದಿತು ❤💚. ನನಗೆ ಮನೆಯ ಕಡೆ ಹೆಚ್ಚು ಒತ್ತಡವಿದ್ದುದರಿಂದ ಎಲ್ಲರೊಡನೆ ವೈಯಕ್ತಿಕವಾಗಿ ಸಾವಕಾಶವಾಗಿ ಇದ್ದು ಮಾತಾಡಿಕೊಂಡು ಬರುವ ನಿರಾಳ ಮನಸ್ಥಿತಿ ಇರಲಿಲ್ಲವಾದ್ದರಿಂದ , ಅಷ್ಟರ ಮಟ್ಟಿನ ಕೊರತೆ ನನಗೆ ಉಂಟಾಗಿತ್ತು. ಇಲ್ಲದಿದ್ದರೆ ಸುಧಾ ಅಂಜಲಿ ಮಂಗಳಾ ನಳಿನಿ ಮತ್ತೆಲ್ಲರೊಂದಿಗೆ ಮತ್ತಷ್ಟು ಸಮಯ ಕಳೆಯಬಹುದಿತ್ತು ಅನಿಸಿದ್ದು ಸುಳ್ಳಲ್ಲ.
ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು. ಸದಾ high thinking simple living ಅಲ್ಲದೆ , ತಮ್ಮ ಸ್ನೇಹವಲಯದಲ್ಲಿ ಬಂದವರಲ್ಲೆಲ್ಲಾ ಉತ್ತಮ ಚಿಂತನೆಗಳೇ ಉಂಟಾಗುವಂತೆ ಕಾಳಜಿ ವಹಿಸುವ , ಸದಾ ಹಸನ್ಮುಖಿ ಮಂಜುನಾಥ್ ಸರ್ ಈ ಕಾರ್ಯಕ್ರಮದ ಹಿಂದಿನ ಶಕ್ತಿ ಎಂಬುದು ಗಣನೀಯ ಅಂಶ. ಸ್ನೇಹಸೇತು ಸದಾ ಹೀಗೇ ಸ್ನೇಹಪರವಾಗಿ ಮುಂದುವರೆಯಲಿ ಎಂದು ಆಶಿಸುವೆ...
ಶ್ರೀ ಡಿ ವಿ ಜಿ ಅವರಿಗೆ ನಮನಗಳು. ಇಂದಿಗೂ ಎಂದೆಂದಿಗೂ ಪ್ರಸ್ತುತವಾದ ಅವರ ಬರಹದ ಕೆಲವು ಹನಿಗಳು ಕೇಳಲು ಅವಕಾಶ ಮಾಡಿಕೊಟ್ಟ ನಿಮ್ಮೆಲ್ಲರಿಗೂ ಧನ್ಯವಾದಗಳು. ಮಂಜಣ್ಣ, ಮಂಗಳ ಮೇಡಂ ಮತ್ತು ಮನೆಯವರಿಗೆ ನಮನಗಳು. ನಮ್ಮಲ್ಲಿನ ಸಾತ್ವಿಕ ಸ್ವಭಾವಗಳು ಹೊರತರುವ ಈ ಕೂಟ ಒಂದು ಸುಂದರ ಅನುಭವ. ಎಲ್ಲರನ್ನು ಸೇರಿಸಿಕೊಂಡು ನಡೆದ, ಕೆಲವರ ಉತ್ತಮ ವೈಯಕ್ತಿಕ ಪ್ರತಿಭೆಗಳಿಂದ ಕಳೆ ತುಂಬಿದ ಈ ಕೂಟ ಸಂತೋಷ ತಂದಿತು. ಕಡೆಯದಾಗಿ ಏರ್ಪಡಿಸಿದ್ದ ಊಟ ತುಂಬ ಚೆನ್ನಾಗಿತ್ತು.
ನಂತರದಲ್ಲಿ ಬಂದಿರುವ ಚಿತ್ರಗಳು ಸುಂದರ ಸಂಜೆಯ ಪ್ರತಿಬಿಂಬ. ಸೊಗಸಾಗಿವೆ.
ನಿಮ್ಮೆಲ್ಲರನ್ನೂ ಹೆಚ್ಚು ಕಡಿಮೆ ಒಂದು ವರ್ಷದ ನಂತರ ಭೇಟಿಯಾಗಿ ಸಂತಸ ತಂದಿತು. ನನ್ನ ನಲವತ್ತು ವರ್ಷಗಳ ಗೆಳೆಯ ಮಂಜುನಾಥನಿಗೆ ನನ್ನ ನಮನಗಳು. ನನ್ನನ್ನು ನಂಬಿ ನನಗೆ ಕಾರ್ಯಕ್ರಮದ ಉದ್ಘೋಷಕನ ಕೆಲಸ ನೀಡಿದ್ದಕ್ಕೆ ಕೃತಜ್ಞತೆಗಳು.
ಸುಮಧುರ ಸುಮನಸ್ಸಿನ ಸಮ್ಮಿಲನದಲ್ಲಿ ಸವಿದ ಸಿಹಿ ಹೂರಣ ಸದಾಕಾಲ ನೆನಪಿಡುವಂತಹದ್ದು. ನಮಗೆಲ್ಲಾ
ಅಜ್ಜನ ಆಶೀರ್ವಾದ ದೊರಕಿಸಿಕೊಟ್ಟ ಆತ್ಮೀಯ ಮಂಜಣ್ಣನಿಗೆ ಎಷ್ಟು ಅಭಿನಂದಿಸಿದರೂ ಸಾಲದು. ಅತಿ ಕ್ರಿಯಾಶೀಲ ವ್ಯಕ್ತಿ ನಮ್ಮ ಮಂಜಣ್ಣ. ಗೆಳೆಯ ಶಶಿಧರ ಅವರ ಹುಟ್ಟು ಹಬ್ಬವನ್ನು ಆಚರಿಸಿದ್ದು ಮತ್ತೊಂದು ಸಂಭ್ರಮ.
ಮಂಗಳ ತಾಯಿಯ ಉಪಹಾರದ ಉಪಚಾರ ಅವರ ದೊಡ್ಡ ಗುಣಕ್ಕೆ ಸಾಕ್ಷಿಯಾಗಿತ್ತು. ಅವರು ಮತ್ತು ಅವರ ಪತಿ ನಮ್ಮನ್ನೆಲ್ಲಾ ವಿಶ್ವಾಸದ ನೆರಳಲ್ಲಿ ಉಪಚರಿಸಿದ ಬಗೆ ಅನನ್ಯ. ಮೇಲಿನ ಎಲ್ಲರ ಪ್ರತಿಕ್ರಿಯೆಗಳೇ ಸಾಕ್ಷಿ ಚೆಂದದ ಕ್ರಾಯಕ್ರಮ ಸಂಪನ್ನವಾದ ರೀತಿಗೆ. ಬಹಳ ದಿನಗಳ ನಂತರ ಕೆಲವು ಗೆಳೆಯರನ್ನು ಕಂಡು ಸಂಭ್ರಮಿಸಿದ್ದು ಖುಷಿ ತಂದಿದೆ. ಕಾರಣಕರ್ತ ನಮ್ಮ ಮಂಜಣ್ಣನಿಗೆ ಇವೆಲ್ಲಾ ಸಾಧ್ಯವಾಗಿಸಿದ್ದಕ್ಕೆ ಅನಂತ ನಮನಗಳು.
ನಮಗೆಲ್ಲಾ ಶುಭವಾಗಲಿ. CSK
ನಿನ್ನೆಯ ದಿನ ,ನನ್ನ ಬಾಳಿನ ಸುದಿನ.ನನ್ನ ನೊಂದ ಮನಕ್ಕೆ ನಿಮ್ಮೆಲ್ಲರ ಪ್ರೀತಿ,ಮತ್ತು ಪ್ರೋತ್ಸಾಹ ಅದಮ್ಯ ಉತ್ಸಾಹ ನೀಡಿತು.ಮಂಗಳಾ ಅವರ ಆದರಾತಿಥ್ಯ ,ಅವರ ಉದಾರ ಮನಸ್ಸು ನನಗೆ ತುಂಬ ಇಷ್ಟ ವಾಯಿತು.ನನ್ನ ಮನಸ್ಸಿಗೆ ಮುದ ನೀಡಿದ ಅದ್ಭುತವಾದ ಕಾರ್ಯಕ್ರಮ ಇದಾಗಿದ್ದು,ಇದರಲ್ಲಿ ಭಾಗವಹಿಸಿದ ಎಲ್ಲ ಸಹೃದಯ ಸಹೋದರ ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ನೀಲಿ ಚಿಟ್ಟೆ: shammi
ನಿಂಗಮ್ಮ ಬರಲಿ ಬೇವು ಬೆಲ್ಲದೊಂದಿಗೆ.
ಈ ದುಃಖದ್ದೊಂದು ವಿಶೇಷ ಗುಣ ಬಚ್ಚಿಟ್ಟಂತೆಲ್ಲ ಅದು ಸಾಂದ್ರವಾಗಿ ನರನಾಡಿಗಳಲ್ಲಿ ಹಬ್ಬುತ್ತದೆ, ಇನ್ಯಾವುದೋ ರೋಗ ಅಥವಾ ಮಾನಸಿಕ ಖಿನ್ನತೆಯಲ್ಲಿ ಪ್ರಕಟಗೊಳ್ಳುತ್ತೆ, ಅದಕ್ಕಿರುವ ರಹದಾರಿ ಒಂದೇ 'ಅಭಿವ್ಯಕ್ತಿ' ಯಾವುದೇ ಕಲೆ ಸಾಹಿತ್ಯದ ಮೂಲಕ...
ಹೇಳಿಕೊಂಡು ಹಗುರಾಗುತ್ತೇವೆ, ನಮ್ಮ ದುಃಖ ನಮ್ಮದೊಂದೆ ಅಲ್ಲ ಎನ್ನುವ ಭಾವ ಬರುತ್ತಿದ್ದಂತೆ, ನೋವು ಸಾರ್ವತ್ರಿಕವಾಗಿ ಕಾಣಸಿಗುವ ಪದಾರ್ಥ ಅನ್ನೋದು ಅರಿವಾಗುತ್ತದೆ, ಇದು ಬದುಕಿನಲ್ಲಿ ಸಮೀಕರಿಸಿ ನೋಡಿದಾಗ, ಒಳ ಮನಸ್ಸಿನ ಆಳದಲ್ಲಿ ಇರುವ ಆನಂದ ನಿಧಾನವಾಗಿ ಹೊರಹೊಮ್ಮುತ್ತದೆ,ಬದುಕು ಮತ್ತೊಮ್ಮೆ ಉತ್ಸಾಹದಿಂದ ಚಿಮ್ಮುತ್ತದೆ
ಬಚ್ಚಿಟ್ಟುಕೊಂಡದ್ದು ಭಾರ...ಹೊರಗೆ ತೋರಿದಂತೆಲ್ಲ ಕತ್ತಲಮೂಲೆಗಳೆಲ್ಲ ಬೆಳಕಾಗಿ ನಿಚ್ಚಳ ಬದುಕು ಹಗೂssರಾ... ❤❤😍😍
ಕಾರಣಾಂತರಗಳಿಂದ ಶ್ರೀ ಶ್ರೀಪಾದರಾವ್ ಮಂಜುನಾಥ್ ಅವರು ನಡೆಸಿಕೊಡುತ್ತಿದ್ದ ಎರಡು ಕಾರ್ಯಕ್ರಮಗಳು ನೆನ್ನೆ ಮತ್ತೆ ಚಾಲನೆ ಪಡೆಯಿತು. ಮೊದಲನೆಯದು ಡಿವಿಜಿ ಕುರಿತು ವಾರ್ಷಿಕ ಕಾರ್ಯಕ್ರಮ, ಮತ್ತೊಂದು 'ಸ್ನೇಹ ಸೇತು ಬಳಗ'ದ ಕಾರ್ಯಕ್ರಮ. ಡಿವಿಜಿ ೧೩೯ ಎಂಬ ಶೀರ್ಷಿಕೆಯಡಿ 'ಸ್ನೇಹ ಸೇತು ಬಳಗ'ದ ಮೂಲಕ ನೆನ್ನೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮ ಶ್ರೀಮತಿ ಮಂಗಳಾಲಕ್ಷ್ಮಿ ಅವರ ಮನೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರೆಂದರೆ, ಶ್ರೀ ಕೃಷ್ಣಮೂರ್ತಿ ಚಿಕ್ಕನಹಳ್ಳಿ, ಶ್ರೀ ಶ್ರೀಪಾದರಾವ್ ಮಂಜುನಾಥ್, ಶ್ರೀ ಯತಿರಾಜ್ ವೀರಾಂಬುಧಿ, ಶ್ರೀ ಲೋಕೇಶ್, ಶ್ರೀಮತಿ ಮಂಗಳಾ ಲಕ್ಷ್ಮಿ ದಂಪತಿಗಳು, ಶ್ರೀಮತಿ ಸುಧಾ ಸರ್ನೋಬಾತ್, ಶ್ರೀಮತಿ ಅಂಜಲಿ ಹಲ್ಯಾಳ್ ದಂಪತಿಗಳು, ಶ್ರೀಮತಿ ಅನುಪಮಾ ದಂಪತಿಗಳು, ಶ್ರೀಮತಿ ರೇಣುಕಾ ಮಂಜುನಾಥ್, ಶ್ರೀ ವೆಂಕಟೇಶಮೂರ್ತಿ ಕನಕಪುರ, ಶ್ರೀಮತಿ ನೀಲಿ ಚಿಟ್ಟೆ (ಶಮ್ಮಿ), ಶ್ರೀಮತಿ ರೇಖಾ ವಾಸು, ಶ್ರೀಮತಿ ನಳಿನಿ ಸೋಮಯಾಜಿ, ಶ್ರೀ ಜಯರಾಮ ಸೋಮಯಾಜಿ ಅವರುಗಳು.
ಇಂದಿನ ಕಾರ್ಯಕ್ರಮದಲ್ಲಿ ನನಗೆ ಹಿರಿಯರಾದ ಶ್ರೀಮತಿ ಸುಧಾ ಸರ್ನೋಬಾತ್ ಅವರ ಆಶೀರ್ವಾದ, ಮತ್ತು ಕೆಲವು ಹೊಸ ಸ್ನೇಹಿತರ ಪರಿಚಯವಾದ್ದು ನನಗೆ ಸಂತೋಷಕೊಡುವ ಸಂಗತಿಯಾಗಿತ್ತು. ಇದಕ್ಕಾಗಿ ಮತ್ತೊಮ್ಮೆ ಶ್ರೀ ಶ್ರೀಪಾದರಾವ್ ಮಂಜುನಾಥ್ ಅವರಿಗೆ ಅನಂತ ಧನ್ಯವಾದಗಳು. ಹಾಗೆಯೇ, ಸಭೆಯಲ್ಲಿ ಎಲ್ಲರೂ ಕುಳಿತುಕೊಳ್ಳುವದಕ್ಕಾಗಿ ಆಸನಗಳನ್ನು ಒಪ್ಪ ಓರಣವಾಗಿ ಅಣಿ ಮಾಡಿಕೊಟ್ಟಿದ್ದಲ್ಲದೇ, ಬಂದವರೆಲ್ಲರನ್ನೂ ಪ್ರೀತ್ಯಾದರಗಳಿಂದ ಸತ್ಕರಿಸಿದ ಶ್ರೀ ವೆಂಕಟೇಶ್ ಅವರಿಗೂ, ಸಭೆಗೆ ಬರುತ್ತಿದ್ದಂತೆಯೇ ತಂಪು ಪಾನೀಯವನ್ನು ಕೊಡುವುದರಿಂದ ಮೊದಲ್ಗೊಂಡು, ಕೊನೆಯವರೆವಿಗೂ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಸತ್ಕರಿಸಿದ ಶ್ರೀಮತಿ ಮಂಗಳಾಲಕ್ಷ್ಮಿ ಅವರುಗಳಿಗೂ ನನ್ನ ಅನಂತ ಧನ್ಯವಾದಗಳು.
೧. ಭಗವಂತ ಡಿವಿಜಿ ರವರಂತ ಮಹನೀಯರನ್ನು ಈ ಲೋಕಕ್ಕಿತ್ತಿದ್ದಕ್ಕೆ.
೨. ಎಲ್ಲ ಹಂತದಲ್ಲೂ ನಮ್ಮೊಂದಿಗಿದ್ದು ಸೂಕ್ತ ಮಾರ್ಗದರ್ಶನ ನೀಡಿದ ನನ್ನ ಹಿರಿಯ ಮಿತ್ರ ಶ್ರೀಯುತ ಕೃಷ್ಣಮೂರ್ತಿ ಚಿಕ್ಕನಹಳ್ಳಿ ರವರಿಗೆ.
೩. ನಮ್ಮ ಮಿತ್ರ ಶಶಿಧರನ್ ರವರ ಹುಟ್ಟುಹಬ್ಬದಂದು ಅವರನ್ನು ಸನ್ಮಾನಿಸಲು ಶ್ರದ್ಧಾಪೂರ್ವಕವಾಗಿ ಸಹಕರಿಸಿದ ೩೯ ವರ್ಷದ ಸಹೋದ್ಯೋಗಿ ಮಿತ್ರ ಶ್ರೀಯುತ ಲೋಕೇಶ್ ಶ್ರೀಕಂಠಯ್ಯ ರವರಿಗೆ.
೪. ಕಾರ್ಯಕ್ರಮದ ಸಾರಥ್ಯವಹಿಸಿಕೊಂಡು ಸೊಗಸಾಗಿ ನಡೆಸಿಕೊಟ್ಟ ನನ್ನ ೩೯ ವರ್ಷದ ಗೆಳೆಯ ಶ್ರೀಯುತ ಯತಿರಾಜ್ ವೀರಾಂಬುಧಿ ರವರಿಗೆ.
೫. ನಮ್ಮ ಕರೆಗೆ ಸ್ಪಂದಿಸಿ ಬಳಗದ ವತಿಯಿಂದ ಗೌರವವನ್ನು ಸ್ವೀಕರಿಸಿದ ನಮ್ಮ ಗೆಳೆಯ ಶ್ರೀಯುತ ಶಶಿಧರನ್ ರವರಿಗೆ.
೬. ಕಾರ್ಯಕ್ರಮವನ್ನು ತಮ್ಮ ಸ್ವಗೃಹದಲ್ಲಿ ನಡೆಸಿಕೊಡಲೆಂದು ವಿನಂತಿಸಿಕೊಂಡು, ಎಲ್ಲ ವ್ಯವಸ್ಥೆಯನ್ನೂ ಬಹಳ ಅಕ್ಕರಾಸ್ಥೆಯಿಂದ ಆಯೋಜಿಸಿ ಎಲ್ಲ ಹಂತದಲ್ಲೂ ಸಹಕಾರವಿತ್ತ ಶ್ರೀಮತಿ ಮಂಗಳಲಕ್ಷ್ಮಿ ಹಾಗೂ ಶ್ರೀಯುತ ವೆಂಕಟೇಶ್ ದಂಪತಿಗಳಿಗೆ.
೭. ನೊಂದಿದ್ದ ತಾಯಿ ತಂಗಿಯೊಂದಿಗೆ ಆಗಮಿಸಿ ಪಾಲ್ಗೊಂಡ ಗೆಳತಿ ಶ್ರೀಮತಿ ಅಂಜಲಿ - ವಾಸು, ಶ್ರೀಮತಿ ಅನುಪಮಾ - ಮಹೇಶ್ ರವರಿಗೆ. ಅಂಜಲಿ ಹಾಡಿದ ಎರಡೂ ಹಾಡು ಮುದನೀಡಿತು.
೮. ತಮ್ಮ ಕೌಟುಂಬಿಕ ಅನಿವಾರ್ಯತೆಗಳ ನಡುವೆಯೂ ಸಮಯ ಮಾಡಿಕೊಂಡು ಪಾಲ್ಗೊಂಡ ಶ್ರೀಮತಿ ರೇಣುಕಾ ಮಂಜುನಾಥ್ ರವರಿಗೂ.
೯. ನಮ್ಮ ಕರೆಗೆ ಓಗೊಟ್ಟು ಬಹಳ ದೂರದಿಂದ ಆಗಮಿಸಿ ನಮ್ಮೊಡನಿದ್ದು ಸ್ಪೂರ್ತಿನೀಡಿದ ಶ್ರೀಯುತ ಜಯರಾಮ್ ಸೋಮಯಾಜಿ ಮತ್ತು ಶ್ರೀಮತಿ ನಳಿನಿ ಸೋಮಯಾಜಿ ದಂಪತಿಗಳಿಗೂ.
೧೦. ನಮ್ಮ ಗೆಳತಿ ಶ್ರೀಮತಿ ರೇಖಾವಾಸು ರವರು ನಮ್ಮೊಂದಿಗೆ ಸಕ್ರಿಯವಾಗಿ ಪಾಲ್ಗೊಂಡು ಅದ್ಭುತವಾಗಿ ಡಿವಿಜಿ ರಚನೆಯನ್ನು ಹಾಡಿ ರಂಜಿಸಿದ್ದಕ್ಕಾಗಿ.
೧೧. ಬಹುತೇಕ ನಮ್ಮೆಲ್ಲ ಕಾರ್ಯಕ್ರಮಗಳಲ್ಲಿ ನಮ್ಮೊಡನಿದ್ದು ಪಾಲ್ಗೊಳ್ಳುವ ಚೈತನ್ಯದ ಗೊಂಬೆ ಶ್ರೀಮತಿ ಶಮ್ಮಿ ಸಂಜೀವ್ ರವರಿಗೆ.
೧೨. ನಮ್ಮ ಮಿತ್ರ ಶ್ರೀಯುತ ರಾಘವ ಶರ್ಮ ಸಮಯ ಮಾಡಿಕೊಂಡು ಪೂರ್ತಿ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಪಾಲ್ಗೊಂಡಿದ್ದು ಹರುಷ ತಂದಿದೆ.
೧೩. ಡಿವಿಜಿ ಬಗ್ಗೆ ಅತ್ಯಂತ ಶ್ರದ್ಧೆ, ಭಕ್ತಿಯುಳ್ಳ ನನ್ನ ಯುವ ಮಿತ್ರ ಶ್ರೀಯುತ ವೆಂಕಟೇಶ ಮೂರ್ತಿ ಕನಕಪುರ ತನ್ನ ಔದ್ಯೋಗಿಕ ಅನಿವಾರ್ಯತೆಯ ನಡುವೆಯೂ ಪಾಲ್ಗೊಂಡಿದ್ದು ಮುದನೀಡಿತು.
೧೪. ಉದರ ಪೋಷಣೆಗೆ ನೆರವು ನೀಡಿದ (ಯುವಕ, ಯುವತಿ) ಹೆಸರು ಗೊತ್ತಿಲ್ಲವಾದರೂ ಅವರ ಪಾತ್ರ ಅತ್ಯಂತ ಸೊಗಸಾಗಿತ್ತು.
೧೫. ಅನಿವಾರ್ಯ ಕಾರಣದಿಂದ ಪಾಲ್ಗೊಳ್ಳಲಾಗದ ಕೆಲವು ಮಿತ್ರರಿಗೂ.
೧೬. ನೀವೆಲ್ಲರೂ ನಿಮ್ಮ ಅಮೂಲ್ಯ ಸಮಯವನ್ನು ಈ ಕಾರ್ಯಕ್ರಮಕ್ಕಾಗಿ ಮೀಸಲಿಟ್ಟಿದ್ದಕ್ಕಾಗಿ .....ಎಲ್ಲರಿಗೂ ನಮಿಸುವ.....ಮಂಜುತಿಮ್ಮ (ಸ್ನೇಹ ಸೇತು) ಪರವಾಗಿ. ಒಂದು ವೇಳೆ ಯಾರನ್ನಾದರೂ ಹೆಸರಿಸಲು ಬಿಟ್ಟಿದ್ದರೆ ನಿಮ್ಮ ಕ್ಷಮೆಯಿರಲಿ.
ಮನಕೆ ಮುದ ನೀಡಿದ ಒಂದು ಸುಂದರ ಸಂಜೆಯ ಕಾರ್ಯಕ್ರಮ. ಎಲ್ಲಾ ಮಿತ್ರವೃಂದಕ್ಕೂ ಸಸ್ನೇಹ ವಂದನೆಗಳು.
ಮಂಜಣ್ಣ, ಸಿಎಸ್ಕೆ, ಶಶಿ, ಯತಿರಾಜ್, ಲೋಕೇಶ್ ರವರಿಗೆ ಅಭಿನಂದನೆಗಳು 🙏🏼
ಮಂಗಳಾ ಮೇಡಂ ಮತ್ತು ಮನೆಯವರ ಹೃತ್ಪೂರ್ವಕ ಆತಿಥ್ಯಕ್ಕೆ ವಂದನೆಗಳು.
ಮುಂದಿನ ಭೇಟಿಗಾಗಿ ಕಾತರದಿಂದ ಕಾಯುತ್ತಿದ್ದೇನೆ. ❤️
ನನಗಂತೂ ಮರೆಯಲಾಗದ ದಿನವಿದು.ಎಲ್ಲರ ಅದ್ಭುತ ಸಹಕಾರ,ಮಾತುಗಳು,ಹಾಡುಗಳು,ಮಂಜಣ್ಣನವರ ಕಗ್ಗದ ವಾಚನ ಹಾಗೂ ಅದರ ಅರ್ಥ,,ಒಟ್ಟಿನಲ್ಲಿ ಎಲ್ಲರದ್ದೂ ಒಂದಷ್ಟು contribution ಮನಕ್ಕೆ ಮುದನೀಡಿತು, ಎಲ್ಲರಿಗೂ ಹೃತ್ಪೂರ್ವಕ ನಮನಗಳು☝️👍❤️❤️👌👌🙏🙏🙏🙏🙏
Saturday, March 14, 2026
14th Cross, Bhuvaneshwarinagara, Bengaluru.
There was Praveen Rao (Son-in-Law) of Bhat, son Bharadhwaj and his wife and his grand son, and Jayaram Suvarna, bhajane partner
God Bless
Posted 15/3/2026
Thursday, March 12, 2026
Sunandi Holistic Eldercare, KodigeHalli, Bengaluru.