ಶನಿವಾರ, ಏಪ್ರಿಲ್ 18, 2026
ಶಿವರಾಮ ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆ.
ಶಿವರಾಮ ಕಾರಂತ ವೇದಿಕೆ ಹಮ್ಮಿಕೊಂಡ ಶಿವರಾಮ ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆ ಯಲ್ಲಿ ನನ್ನದೊಂದು ಸಣ್ಣ ಪ್ರಯತ್ನ.
ಉಡುಪಿಯ ಬಿರ್ತಿ, ಸಾಲಿಕೇರಿ ಮೂಲದ ಜಯರಾಮ ಸೋಮಯಾಜಿಯವರು ಎಮ್ ಎಸ್ಸಿ ಪದವೀಧರರು. ಅಧ್ಯಾಪನವನ್ನು ಅತ್ಯಂತ ಪ್ರೀತಿಯಿಂದ ಅನೇಕ ದಶಕಗಳ ಕಾಲ ಪೂರೈಸಿದ ಇವರು ಶಿಕ್ಷಕರಾಗಿ 15 ವರ್ಷ, ನೈಜೀರಿಯಾ, ಆಫ್ರಿಕಾದಲ್ಲಿ ಮತ್ತು 24 ವರ್ಷಗಳ ಕಾಲ ದುಬೈನಲ್ಲಿ ಕಾರ್ಯ ನಿರ್ವಹಿಸಿದವರು. ಪ್ರಸ್ತುತ ಬೆಂಗಳೂರಿನ ಶಿವರಾಮ ಕಾರಂತ ವೇದಿಕೆಯ ಕೋಶಾಧಿಕಾರಿಯಾಗಿರುವ ಜಯರಾಮ ಸೋಮಯಾಜಿ ಅವರ ಆಸಕ್ತಿಗಳಲ್ಲಿ ಕನ್ನಡ ಸಾಹಿತ್ಯದ ಓದೂ ಒಂದಾಗಿದೆ
ಶಿವರಾಮ ಕಾರಂತರು, ಭಾರತೀಯ ಕಾದಂಬರಿ ಲೋಕದ ಅತ್ಯಂತ ಮಹತ್ವದ ಹೆಸರು. ಅವರ ಹೆಸರಿನಲ್ಲಿ ಆರಂಭವಾದ ಸಂಸ್ಥೆ ಬೆಂಗಳೂರಿನ ಆರ್. ಟಿ. ನಗರದ 'ಶಿವರಾಮ ಕಾರಂತ ವೇದಿಕೆ', ಕಳೆದ ಮೂವತ್ತೆರಡು ವರ್ಷಗಳಿಂದ ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳನ್ನು ಸದ್ದಿಲ್ಲದೇ ಮಾಡಿಕೊಂಡು ಬಂದಿರುವ ಸಂಸ್ಥೆ. ಬೆಂಗಳೂರಿನ ತರಳಬಾಳು ಜಗದ್ಗುರು ಶ್ರೀ ಶಿವಾಚಾರ್ಯ ಮಹಾಸ್ವಾಮಿಗಳ ಶುಭಾಶೀರ್ವಾದಗಳೊಂದಿಗೆ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರಿಂದ 1993 ರಲ್ಲಿ ಉದ್ಘಾಟನೆಗೊಂಡಿತ್ತು. ನಾಡಿನ ಪ್ರಮುಖ ಸಾಹಿತಿಗಳಾದ, ಎಸ್ ಎಲ್ ಶೇಷಗಿರಿರಾವ್, ವೆಂಕಟಸುಬ್ಬಯ್ಯ, ಯು. ಆರ್. ಅನಂತಮೂರ್ತಿ, ಹಾ. ಮಾ. ನಾಯಕ್, ನಿಸಾರ್ ಅಹಮದ್ ಕೆ ಸತ್ಯನಾರಾಯಣ, ಜಯಂತ ಕಾಯ್ಕಿಣಿ, ಎಸ್. ಆರ್. ವಿಜಯಶಂಕರ, ಎಂ. ಎಸ್ ಆಶಾದೇವಿ, ಲಲಿತಾ ಸಿದ್ಧಬಸವಯ್ಯ ಹೀಗೆ ಸಾಹಿತ್ಯ ಲೋಕದ ಬಹುತೇಕ ಎಲ್ಲಾ ಸಾಹಿತಿಗಳು ಶಿವರಾಮ ಕಾರಂತ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸಗಳನ್ನು ನೀಡಿದ್ದಾರೆ. ಈ ಬಾರಿ ಕಾರಂತ ವೇದಿಕೆ, ಕಾರಂತರ ಕಾದಂಬರಿಗಳ ಅವಲೋಕನವನ್ನು ಕೈಗೆತ್ತಿಕೊಂಡಿದೆ. ನಾಡಿನ ಹಿರಿಯ, ಕಿರಿಯ ವಿಮರ್ಶಕರು, ಕವಿಗಳು, ಕತೆಗಾರರು ಕಾರಂತರ ಒಂದೊಂದು ಕಾದಂಬರಿಯನ್ನು ಪರಿಚಯಿಸಲಿದ್ದಾರೆ, ಆ ಮೂಲಕ ವಿದ್ಯಾರ್ಥಿಗಳು, ಹೊಸ ಓದುಗರಿಗೆ ಕಾರಂತರ ಸಾಹಿತ್ಯ ಮತ್ತೆ ತಲುಪಲಿ ಎನ್ನುವ ಮಹದಾಸೆ ಶಿವರಾಮ ಕಾರಂತ ವೇದಿಕೆಯದು.
ಈ ಒಂದು ಅವಕಾಶಕ್ಕೆ ಶಿವರಾಮ ಕಾರಂತ ವೇದಿಕೆ, ಆರ್. ಟಿ. ನಗರ, ಬೆಂಗಳೂರು ಇವರಿಗೆ ಧನ್ಯವಾದಗಳು.
Posted 21/4/2026
































.jpg)











