Monday, April 8, 2024

ಮದುವೆಯ ಸವಿ ನೆನಪುಗಳು

ಮದುವೆಯ ಸವಿ ನೆನಪುಗಳು 


 1991 ಏಪ್ರಿಲ್ 8 ನನ್ನ ಹಾಗೂ ರವಿಯ ಮದುವೆ ನಡೆದ ದಿನ. ಎಂಟು ವರ್ಷಗಳ ಪ್ರೇಮ ಸಂಬಂಧದ ನಂತರದಲ್ಲಿ ನಡೆದ ಮದುವೆ ನಮ್ಮದು.

ಆಗ ನವೋದಯದಲ್ಲಿ ಕೆಲಸ ಮಾಡುತ್ತಿದ್ದ ನನಗೆ ಏಪ್ರಿಲ್ ತಿಂಗಳಲ್ಲಿಯೂ ತರಗತಿಗಳು ನಡೆಯುತ್ತಿದ್ದವು. ನಮಗೆ ರಜೆ ದೊರೆಯುತ್ತಿದ್ದದ್ದು ಮೇ ಹಾಗೂ ಜೂನ್ ತಿಂಗಳುಗಳಲ್ಲಿ. ಆದರೆ ಉಳಿದವರಿಗೆಲ್ಲರಿಗೂ ಏಪ್ರಿಲ್ ತಿಂಗಳು ಅನುಕೂಲಕರವಾದ ಕಾರಣವೋ ಏನೋ ಹಿರಿಯರೆಲ್ಲರೂ ಸೇರಿ ಏಪ್ರಿಲ್ 8ಕ್ಕೆ ಮದುವೆ ಮಾಡುವುದೆಂದು ನಿಶ್ಚಯಿಸಿದರು. ಆಗ ನನಗೆ ದೊರೆತಿದ್ದು ಕೇವಲ ಎಂಟು ದಿವಸಗಳ ರಜೆ. ಹೀಗಾಗಿ ಮದುವೆಗೆ ಎರಡು ದಿವಸಗಳ ಹಿಂದೆಯಷ್ಟೇ ನಾನು ಮನೆಗೆ ಬರಲು ಸಾಧ್ಯವಾಯಿತು.
ನನ್ನ ಅಪ್ಪನಿಗೆ ಮದುವೆಯನ್ನು ಯಾವುದಾದರೂ ಒಳ್ಳೆಯ ಕಲ್ಯಾಣ ಮಂಟಪದಲ್ಲಿ ಮಾಡುವ ಮನಸ್ಸಿತ್ತು. ಆದರೆ ನಾನು ನನ್ನ ಮದುವೆ ಮನೆಯಲ್ಲೇ ಆಗಬೇಕೆಂದು ಹಠ ಹಿಡಿದೆ. ಅದನ್ನು ನೆರವೇರಿಸಲು ನನ್ನಪ್ಪ ಅಜ್ಜಯ್ಯನ ಮನೆಯ ಅಂಗಳಕ್ಕೆ ಸಿಮೆಂಟ್ ಹಾಕಿಸಿದರು ಹಾಗೂ ಓಪನ್ ಆಗಿದ್ದ ಜಗುಲಿಗೆ ತಳಿ ಹಾಕಿಸಿ ಒಳಗೈ ಮಾಡಿಸಿದರು. ನನ್ನ ಮದುವೆಯ ಎಲ್ಲಾ ತಯಾರಿಗೆ ಆಚೆಮನೆ ಸಣ್ಣಮಾಣಿಯ ಪೂರ್ಣ ಸಹಕಾರ ಅಪ್ಪನಿಗೆ ಇತ್ತು. ಹೀಗಾಗಿ ಅಪ್ಪ ಸ್ವಲ್ಪ ನಿರಾಳರಾಗಿದ್ದರು.
ಮದುವೆಯ ಹಿಂದಿನ ಎರಡು ದಿವಸಗಳು ಜಿರಾಪತಿ ಮಳೆ. ಮದುವೆಯ ದಿನವೂ ಹೀಗೆ ಮಳೆ ಸುರಿದರೆ ಎಂತ ಕಥೆ ಎಂದು ಎಲ್ಲರಿಗೂ ತಲೆಬಿಸಿ. ನಾನು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಆರಾಮದಲ್ಲಿದ್ದೆ. ಮದುವೆಯ ದಿವಸ ಮಳೆ ಬಂದು ತೊಂದರೆ ಕೊಡುವುದಿಲ್ಲ ಎನ್ನುವುದು ನನ್ನ ದೃಢ ನಂಬಿಕೆಯಾಗಿತ್ತು. ಅಂದು ಮಳೆ ಬರಲಿಲ್ಲ ಕೂಡಾ!
1981ರಲ್ಲಿ ಉಷಕ್ಕ ಹಾಗೂ ಸುರೇಶನ ಮದುವೆ ಮನೆಯಂಗಳದಲ್ಲೇ ಆಗಿತ್ತು. ತದನಂತರದಲ್ಲಿ ಮನೆಯಂಗಳದಲ್ಲಿ ನಡೆದ ಮದುವೆ ನನ್ನದೇ ಸೈ. ಮನೆ ತುಂಬಾ ಬಂಧು ಬಳಗದವರು ತುಂಬಿದ್ದರು. ಆಚೆಮನೆಯಲ್ಲಿ ಗಂಡಿನ ಕಡೆಯವರು ಬಂದು ಕೂರಲು ಹಾಗೂ ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮದುವೆಗೆ ಸುಮಾರು ಏಳೆಂಟು ನೂರು ಜನ ಬಂದಿದ್ದರು. ಅಪ್ಪನಿಗೆ ಆತ್ಮೀಯರಾಗಿದ್ದ ಕೋಟ ಶಿವರಾಮ ಕಾರಂತರು ಬಂದಿದ್ದರು. ನಮ್ಮ ಬಂಧು ಬಳಗದವರಲ್ಲದೆ ನನ್ನ ಸ್ನೇಹಿತರು, ಸಹೋದ್ಯೋಗಿಗಳು, ಶಿಕ್ಷಕರು, ಊರಿನವರು ಎಲ್ಲರೂ ಬಂದಿದ್ದರು.
ಆಗಿನ್ನೂ ಮದುವೆಯ ವೀಡಿಯೋ ಮಾಡುವುದು ಪ್ರಾರಂಭವಾಗಿತ್ತು. ನನಗೆ ವೀಡಿಯೋ ಕ್ಯಾಮರವೆಂದರೆ ಒಂದು ರೀತಿಯ ಹೇವರಿಕೆಯ ಭಾವವಿದ್ದ ಕಾರಣ ನಾನು ಬರೀ ಫೋಟೊ ತೆಗೆದರೆ ಸಾಕು ಎಂದಿದ್ದೆ. ಹೀಗಾಗಿ ಮದುವೆಯ ವೀಡಿಯೋ ಚಿತ್ರೀಕರಣ ಆಗಲಿಲ್ಲ☺️
ಮದುವೆಯ ದಿನ ಮೂರು ಗಂಟೆಯ ನಂತರ ಸಾಗರದೆಡೆಗೆ ಗಂಡನ ಮನೆಯವರ ಜೊತೆ ನನ್ನ ಪಯಣ. ರಾತ್ರಿ ವಧು ಪ್ರವೇಶ. ಅಲ್ಲಿ ಮರುದಿನ ದೊಡ್ಡ ಪ್ರಮಾಣದಲ್ಲಿ ವಧು ಪ್ರವೇಶದ ಔತಣ. ಪೂಜೆ ಪುನಸ್ಕಾರ, ಹಿರಿಯರಿಗೆ ನಮಸ್ಕಾರ ಎಂದು ಮಾರನೇ ದಿನವಿಡೀ ಆಚರಣೆಗಳಲ್ಲೇ ಕಳೆದು ಹೋಯಿತು. ಅಲ್ಲೂ ಸುಮಾರು ಏಳೆಂಟು ನೂರು ಜನ ಸೇರಿದ್ದರು. ಕೆಳಮನೆಯ ಅಂಗಳದಲ್ಲೇ ದೊಡ್ಡ ಚಪ್ಪರ ಹಾಕಿ ವಧು ಪ್ರವೇಶದ ಔತಣವನ್ನು ಭರ್ಜರಿಯಾಗಿ ನಡೆಸಿದರು.
ಮೂವತ್ಮೂರು ವರುಷಗಳ ಹಿಂದೆ ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಎರಡು ವಿಭಿನ್ನ ಸಂಸ್ಕೃತಿಗಳ ಮಿಳಿತದ ಮದುವೆ ನಮ್ಮದಾಗಿತ್ತು! 

ಪ್ರತಿಕ್ರಿಯೆಗಳು:
ಎಂಥ ಚಂದದ ಫೋಟೋಗಳು - ಅನಿಲ್ ಕುಮಾರ್ 
ಸವಿ ನೆನಪುಗಳ ಶುಭಾಶಯಗಳು ಮೇಡಂ ತುಂಬಾ ಉತ್ತಮ ಬರಹ  ಜಗದೀಶ್ ನಾಗೇಂದ್ರಪ್ಪ      
Happy Anniversary Madam --- ಚನ್ನ ಮಲ್ಲಿಕಾರ್ಜುನಪ್ಪ 
Nenapu Kanu tumbutade - ವರದಾಕ್ಷಿ ಭಟ್ 
ಅಯ್ಯೋ ನಮ್ಮ ಗುರುಗಳು ಎಷ್ಟು ಚಂದ , ಪ್ರೇಮ ಕುರುಡು ಅಂತ ಹೇಳೋದು ನಿಜ 
😅
ವಾರ್ಷಿಕೋತ್ಸವದ ಶುಭಾಶಯಗಳು 💐💐💐
ವಿನಯ್ ನಾಡಿಗ್ 

 Very happy to see u both together madam....i know u know that my english is very poor madam i use to be always in English remidial class madam...raveendranth sir use to love us a lot mam....madam di u remember our yakshagana show did on principle shobha mams send off program...sir directed it ganapath bhat is use to teach us bagavatharu iddaru.....vinay anna did bhagavathige for that madam...very happy to see u....still I am improving my english madam need some more remedial classes ....ಪ್ರಶಾಂತ್ ನಾಗರಾಜಪ್ಪ 
Wish you happy anniversary and many more to come in your life stay safe with lots of happiness together with love, laughter and happiness stay safe enjoy your day with happiness in Madam.
ವಿರೂಪಾಕ್ಷ  ಬಸವರಾಜಯ್ಯ 

Happy anniversary Shobha chikki ಧರಿತ್ರಿ ವೆಂಕಟೇಶ್ 
ಸವಿ ನೆನಪು ಜನಾರ್ಧನ ಹಂದೆ 
Nice recap. Dad is there in one photo !!!
33 yrs !!! God bless you Shobha and stay blessed with the memories.....ವಿ.ಎಸ.ಎಸ. ಐತಾಲ್ 
ಕಣ್ಮುಂದೆ ನಡೆದಂತೆ ಈ ಚಿತ್ರಣ . ನೆನಪುಗಳು ಬಾಳಿನ ನಂದಾದೀಪ   ತಿರುಮಲ ರಾವ್ 
ಮದುವೆಯ ಸಂಭ್ರಮದ ಸವಿ ಸವಿ ನೆನಪುಗಳು  ಜಯರಾಮ ಸೋಮಯಾಜಿ 
ಚಂದದ ನೆನಪಿನ ಬುತ್ತಿ..ನಳಿನಿ ಸೋಮಯಾಜಿ 
Shobha aunty, I have very fond memories of attending your wedding along with my grand parents! ಸ್ವಾತಿ ಐತಾಲ್ 
Ninna maduvege banda nenapide nanage.
Savi nenapugalu beku saviyalee baduku.....ಆಶಾ ರಾವ್ 

ಮೋದಿ ಮತ್ತೊಮ್ಮೆ -2

 2014ರಲ್ಲಿ.....


" ಬೀಜೇಪಿ
ಅಧಿಕಾರಕ್ಕೆ ಬಂದಮೇಲೆ ಮುಸ್ಲಿಮರ ಬದುಕು ದುಸ್ತರವಾಗಿದೆ.. ಅಲ್ಪಸಂಖ್ಯಾತರು ಭಯದಿಂದ ಜೀವಿಸುತ್ತಿದ್ದಾರೆ.... !ಭಾರತದಲ್ಲಿ ಅಸಹಿಷ್ಣುತೆ ಜಾಸ್ತಿಯಾಗಿದೆ....."...
ಹೀಗೆ ಗುಲ್ಲೆಬ್ಬಿಸಿ ಒಂದಷ್ಟು ಬುದ್ಧಿ ಜೀವಿಗಳು ...ತಮಗೆ ಸಿಕ್ಕ ಪ್ರಶಸ್ತಿಗಳನ್ನು ವಾಪಸ್ಸು ಮಾಡುವ ಅಭಿಯಾನ
ಶುರು ಮಾಡಿದರು...!ಸಾಹಿತ್ಯದ ಪ್ರಾಮಾಣಿಕ ಓದುಗರಿಗೆ..
" ಇದು ಹೌದಾ !!..."....ಎಂದು ಹುಬ್ಬೇರಿಸುವಷ್ಟು ಆಶ್ಚರ್ಯವಾಯಿತು....!
ಒಬ್ಬ ಸ್ಟಾರ್ ನಟನಂತೂ..."ತನ್ನ ಮಡದಿ ಭಾರತದಲ್ಲಿ ಬದುಕುವದಕ್ಕೆ ಹೆದರಿಕೆ "..ಅಂತ ಹೇಳಿದಳು..
ಅಂತ ಬೊಬ್ಬೆ ಹೊಡೆದ..ಬುದ್ಧೀ ಜೀವಿಗಳ ಸುದ್ಧಿ ಚಾನೆಲ್ಲುಗಳು ತಿಂಗಳು ಗಟ್ಟಲೆ ಅವನ ಸಂದರ್ಶನ ಪ್ರಸಾರ ಮಾಡಿದವು...
******************************************************
ಗೌರಿ ಲಂಕೇಶ ಹತ್ಯೆಯ ನೆನಪನ್ನು ಈಗ ಯಾವುದಾದರೂ ಬುದ್ದಿಜೀವಿ ಸಾಹಿತಿಗಳು ನೆನಪು ಮಾಡಿಕೊಳ್ಳುತ್ತಾರಾ ?..ಖಂಡಿತ ಇಲ್ಲ..ಯಾಕೆ ಗೊತ್ತಾ ?..ತಾವು ತಿನ್ನುವ ಎಂಜಲು ಪ್ರಸಾದದ ಋಣ ತೀರಿಸಬೇಕಲ್ಲ..
ಈಗಿರುವದು ಜಾತ್ಯಾತೀತರ ಸರಕಾರ...ಇವರಿಗೆ ಬೈಯ್ಯುವ ಹಾಗಿಲ್ಲ.....ಒಂದು ವೇಳೆಇದೇ ಸಂದರ್ಭದಲ್ಲಿ
ಯಡ್ಯೂರಪ್ಪನ, ಬೊಮ್ಮಾಯಿ ಸರ್ಕಾರ ಇದ್ದಿದ್ದರೆ ಟೌನ್ ಹಾಲಿನಲ್ಲಿ ಮೊಂಬತ್ತಿಗಳ ದೀಪಾವಳಿ ಆಗುತ್ತಿತ್ತು...
ಜೇ ಎನ್ ಯೂ ಪ್ರಾಡಕ್ಟುಗಳ ಅಸಹ್ಯ ಮುಖ ಇದು....
****************************************************
ಈಗ ಜಾತ್ಯಾತೀತ ಸರಕಾರವಿದೆ...ಗೌರಿ ಲಂಕೇಶರ ಹತ್ಯೆಯ ಪ್ರಕರಣ ಏನಾಯಿತು ?..ತನಿಖೆ ಏನಾಯಿತು ?...
ಉತ್ತರ ಕೇಳಬೇಡಿ...ಯಾಕೆಂದರೆ ....ಈಗ ಅದು ಓಟು ತರುವದಿಲ್ಲ.....!ಅದರಿಂದ ಮುಗ್ಧ ಜನರ ಮನಸ್ಸನ್ನು ಕೆಡಿಸಲು ಆಗುವದಿಲ್ಲ...ಅವರಲ್ಲಿ ಗೊಂದಲ ಸೃಷ್ಟಿಸಿ....ಜಾತ್ಯಾತಿತರಿಗೆ ಓಟ್ ಹಾಕಿ ಎಂದು ಹೇಳಲಾಗುವದಿಲ್ಲ...!
ತುಕುಡೇ ಗ್ಯಾಂಗಿನವರ ದೇಶ ದ್ರೋಹಿಗಳ ಮುಖ ಅಸಹ್ಯ....
*************************************************
ಇದೆಲ್ಲ ಇರಲಿ...ದುಬೈ ಸರಕಾರ ಪ್ರಧಾನಿ ಮೋದಿಯವರಿಗೆ ತನ್ನ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಘೋಷಣೆ ಮಾಡಿತು...ನೆನಪಿಡಿ..ದುಬೈ ಮುಸ್ಲಿಮ್ ರಾಷ್ಟ್ರ..ನಮ್ಮಮೋದಿ ಅಲ್ಪ ಸಂಖ್ಯಾತರ ಹಾಗುಮುಸ್ಲಿಮ್ಮರ ವಿರೋಧಿ. ....ಇದರ ಬಗೆಗೆ ಪತ್ರಿಕೆಗಳಲ್ಲಿ ಮೈಗೆ ಎಣ್ಣೆ ಹಚ್ಚಿಕೊಂಡು ಬರೆಯುವ ಜೆ ಎನ್ ಯೂ ಪ್ರಾಡಕ್ಟುಗಳು ತಮ್ಮ
ಅಭಿಪ್ರಾಯ ಬರೆಯುವದಿಲ್ಲ...ಯಾಕೆಂದರೆ ಬಹುಶಃ ಅವರಿಗೆ ಇದರ ಬಗೆಗೆ ಹಣ ಸಂದಾಯ ಆಗುವದಿಲ್ಲವೇನೋ....ತುಕುಡೆ ಗ್ಯಾಂಗ್ ಅಸಹ್ಯ ಕಣ್ರೀ....
********************************************
ಸೌದಿ ಅರೇಬಿಯಾ ಗೊತ್ತಲ್ಲ..ಮುಸ್ಲಿಮರ ಪವಿತ್ರ ಸ್ಥಳವಿರುವ ದೇಶ...ದೇಶ ಕೂಡ ಮೋದಿಯವರನ್ನು ಕರೆದು
ತಮ್ಮದೇಶದ ಅತ್ಯುನ್ನತ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿತು..ತನ್ನನ್ನುತಾನು ಧನ್ಯ ಎಂದು ಭಾವಿಸಿತು...
ಆದರೆ ನಮ್ಮಲ್ಲಿ ಇನ್ನೂಕೆಲವರಿಗೆ...ಮೋದಿ ಅಲ್ಪಸಂಖ್ಯಾತ ವಿರೋಧಿ...ಮುಸ್ಲಿಮ್ ವಿರೋಧಿ...
ವಿಚಿತ್ರ ಅಲ್ಲವಾ ?...
********************************************
ಮುಸ್ಲಿಮ್ ದೇಶಗಳ ಒಂದು ಒಕ್ಕೂಟವಿದೆ...ಅಲ್ಲಿ ಮುಸ್ಲಿಮ್ ದೇಶಗಳಿ ಮಾತ್ರ ಅವಕಾಶವಿರುತ್ತದೆ..ಹಿಂದೆ
ಸುಷ್ಮಾ ಸ್ವರಾಜ್ ಇದ್ದಾಗ....ವರ್ಷ ಆ ಒಕ್ಕೂಟ ಭಾರತವನ್ನು ಆಹ್ವಾನಿಸಿತ್ತು..."ಭಾರತವನ್ನು
ಆಹ್ವಾನಿಸಿದರೆ..ತಾನು ಭಾಗವಹಿಸುವದಿಲ್ಲ...":ಅಂತ ಭಿಕಾರಿ ಪಾಕಿಸ್ತಾನ ನಮ್ಮನ್ನು ವಿರೋಧಿಸಿತು...
ಮುಸ್ಲಿಮ್ ದೇಶಗಳು ಪಾಕಿಸ್ತಾನದ ಅರಚಾಟವನ್ನು ಯಾರೂ ಕೇಳಲೇ ಇಲ್ಲ...ಭಾರತದ ಉಕ್ಕಿನ ಮಹಿಳೆ
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಲ್ಲಿಗೆ ಹೋಗಿದ್ದರು...ಅಲ್ಲಿ ಸೊಗಸಾದ ಭಾಷಣ ಮಾಡಿದರು...
ವೇದ ಉಪನಿಷತ್ತು..ಭಗವದ್ಗೀತೆಗಳ ಒಳ್ಳೋಳ್ಳೆ ಮಾತುಗಳನ್ನು ಉದಹರಿಸಿ ...."ನಾವು ಧರ್ಮ ಸಹಿಷ್ಣು ದೇಶ..
ಇಲ್ಲಿ ನಾವು ಸಾವಿರಾರು ಮತದವರು ..ಶಾಂತಿಯಿಂದ ಬದುಕುತ್ತೇವೆ..ನಮ್ಮ ವಿರೋಧ ಮಾನವತಾ ವಿರೋಧಿ..
ಉಗ್ರವಾದದ ವಿರುದ್ಧ.."ಅಂತ ಘಂಟಾ ಘೋಷವಾಗಿ ಹೇಳಿ ಬಂದರು..ತನ್ನನ್ನು ತಾನು ಶ್ರೇಷ್ಠ ಮುಸಲ್ಮಾನ ದೇಶವೆಂದು ಕೂಗಿಕೊಳ್ಳುವ ಭಿಕಾರಿ ಪಾಕಿಸ್ತಾನ ಅಲ್ಲಿ ಭಾಗವಹಿಸಲಿಲ್ಲ...ಯಾಕೆ ಗೊತ್ತಾ ?..
ತನ್ನ ಮರ್ಯಾದೆ ಉಳಿಸಿಕೊಳ್ಳಲು..ಇನ್ನೂ ಒಂದು ವಿಷಯ ಗೊತ್ತಾ ?..ಹಿಂದೊಮ್ಮೆಇಂದಿರಾ ಗಂಢಿಯವರ
ಸರಕಾರ ...ಇದೇ ಮುಸ್ಲಿಮ್ ರಾಷ್ಟ್ರಗಳ ಒಕ್ಕೂಟದ ಸಮಾರಂಭಕ್ಕೆ ತನ್ನಪ್ರತಿನಿಧಿಯಾಗಿ ಫಕ್ರುದ್ದೀನ್ ಅಲಿ ಅಹಮದ್ ಅವರನ್ನು ಕಳಿಸಿತ್ತು..ಅವರು ಅಲ್ಲಿ ಹೋಗಿ ಹೊಟೆಲ್ಲಿನಲ್ಲಿ ತಂಗಿದ್ದರು..ಆದರೆ ಮುಖ ತಗ್ಗಿಸಿಕೊಂಡು ವಾಪಸ್ ಬಂದಿದ್ದರು..."ಇದು ಮುಸ್ಲಿಮ್ ದೇಶಗಳ ಒಕ್ಕೂಟ..ಹಾಗಾಗಿ ಭಾರತಕ್ಕೆ ಆಹ್ವಾನ ಇಲ್ಲ..."ಅಂತ ಹೇಳಿತ್ತು..ದೇಶದ ಮರ್ಯಾದೆ ಮೂರುಪಾಲಾಗಿತ್ತು....ಈಗ ದೇಶ ಹೆಮ್ಮೆಯಿಂದ ತಲೆ ಎತ್ತಿ ನಿಲ್ಲುವಂತೆ ಮಾಡಿದ
ಮೋದಿ ಸರಕಾರ ಕೆಲವರಿಗೆ...ಅಲ್ಪ ಸಂಖ್ಯಾತ ವಿರೋಧಿ... ವಿಚಿತ್ರ ...ಅಲ್ಲವಾ ?....!
****************************************************************
ಮೋದಿಸರಕಾರದ ಯಶಸ್ವಿವಿದೇಶಂಗ ನೀತಿ..ಯಾವತ್ತಿಗೂ ಭಾರತ ಶ್ರೇಷ್ಠ ಎನ್ನುವ ದೇಶಪ್ರೇಮಿಗಳ ಸರಕಾರದ
ಸಾಧನೆಯನ್ನುಯಾವ ಬುದ್ಧಿ ಜೀವಿಯೂ ಹೊಗಳುವದಿಲ್ಲ....ಯಾಕೆಂದರೆ ಅವರೆಲ್ಲ ಬುದ್ಧಿ ಜೀವಿಗಳು..... ಅಷ್ಟೆ....ದೇಶ ಭಕ್ತರಲ್ಲ...
*************************************************************
ಮೋದಿ ಅಲ್ಪ ಸಂಖ್ಯಾತ ವಿರೋಧಿ..ಮೋದಿ ಮುಸ್ಲಿಮ್ ವಿರೋಧಿ..ಎಂದು ಅರಚಾಡುವ ಜವಾಹರ ಲಾಲ್
ವಿಶ್ವ ವಿದ್ಯಾಲಯದ ಪ್ರಾಡಕ್ಟುಗಳು ...ಇದರ ಬಗೆಗೆ ಏನನ್ನುತ್ತಾರೆ ?...ಯಾಕೆ ಮುಸ್ಲಿಮ್ ದೇಶಗಳು
ಮೋದಿಯನ್ನು ಕರೆದು ಗೌರವಿಸುತ್ತವೆ ?...ಭಾರತದಲ್ಲಿ ಅಸಹಿಷ್ಣುತೆ ಜಾಸ್ತಿಯಾಗಿದ್ದಲ್ಲಿ....ತಮ್ಮಧರ್ಮೀಯರ ಬಗೆಗೆ ಅವರಿಗೆ ಕಾಳಜಿ ಇಲ್ಲವೆ ?...ಏನನ್ನುತ್ತಾರೆ? ಬುದ್ಧಿಜೀವಿಗಳು ?...
***************************************************
ಮೋದಿಯ ಜನಪ್ರಿಯ ಯೋಜನೆಗಳು...ಬಡವರಿಗೆ ಫ್ರೀ ಗ್ಯಾಸ್..ಉಚಿತ ಮನೆಗಳು..ಜನ ಧನ ಯೋಜನೆ..
ವಿದ್ಯುತ್ ಯೋಜನೆ...ಕಿಸಾನ್ ಸನ್ಮಾನ ಯೋಜನೆ...ಇನ್ನೂ ಅನೇಕ ಯೋಜನೆಗಳು ಇವೆಯಲ್ಲ....
ಯೋಜನೆಗಳು " ಮುಸ್ಲಿಮರಿಗೆ ಇಲ್ಲ.."ಅಂತ ನಿಯಮ ಇದೆಯಾ?ಇಲ್ಲವಲ್ಲ...!ಜಾತಿಗಳ ಮುಖ ನೋಡದೆ
ಬಡವರಿಗಾಗಿ ಆ ಯೋಜನೆಗಳು ಇವೆ...ಭಾರತೀಯರೆಲ್ಲರೂ ಒಂದು...ಮೋದಿ ನಮ್ಮ ದೇಶವನ್ನು ದೇಶ ಭಕ್ತಿಯ
ಮೂಲಕ ಒಂದು ಗೂಡಿಸುತ್ತಿದ್ದಾರೆ...ಯಾವ ಜಾತಿಯ ಹೆಸರು ಹೇಳುತ್ತಿಲ್ಲ...ಯಾವ ಮತದವರನ್ನೂ ದೂರ ಸರಿಸುತ್ತಿಲ್ಲ...ಸರ್ವ ಧರ್ಮ ಸಮಾನ.."ಸಬ್ ಕಾ ಸಾತ್.. ಸಬ್ ಕಾ ವಿಕಾಸ್..".. ! ...
ಎಲ್ಲರ ಜೊತೆಗೂಡಿ ಎಲ್ಲರ ಅಭಿವೃದ್ಧಿ..."..ಬಡವರಿಗೆ ಉಚಿತ ಗ್ಯಾಸ್ ಕೊಟ್ಟರೆ ಅಲ್ಲಿ ಜಾತಿ ಮತಗಳು ಮುಖ್ಯವಲ್ಲ...ಶೌಚಾಲಯ ಕಟ್ಟಿಸಿದರೆ ಅಲ್ಲಿ ಜಾತಿ ಮತಗಳ ಉಲ್ಲೇಖವಿಲ್ಲ.. ಕೇವಲ ಬಡವರಿಗಾಗಿ ಇದು...
ವಿದ್ಯುತ್ ಪ್ರತಿ ಹಳ್ಳಿ ಹಳ್ಳಿಗೂ ಮುಟ್ಟಿಸಿದರೆ ಅಲ್ಲಿ ಅಲ್ಪ ಸಂಖ್ಯಾತರಿಗೂ..ಎಲ್ಲ ಜಾತಿಯವರಿಗೂ ಸಿಗುತ್ತದೆ..
ಆದರೂ ಕಾಂಗ್ರೆಸ್ಸಿನವರು.ಜಾತ್ಯಾತೀತರು..ಎಡಬಿಡಂಗಿಗಳು ಮಾತ್ರ ಅರಚುತ್ತಾರೆ..
"ಮೋದಿ ಮುಸ್ಲಿಮ್ ವಿರೋಧಿ .. ಅಲ್ಪಸಂಖ್ಯಾತರ ವಿರೋಧಿ..."..ಬಹಳ ವಿಚಿತ್ರ ಕಣ್ರೀ.. ಇವರ ತರ್ಕ...!..
******************************************************
ಬಡವರಲ್ಲಿ ಜಾತಿ ನೋಡದ..ತನಗಾಗಿ ಏನನ್ನೂ ಬಯಸದ..ನಿಸ್ವಾರ್ಥಿ..ಪ್ರಾಮಾಣಿಕ...ಕುಟುಂಬ ರಾಜಕೀಯ ಮಾಡದ ಮೋದಿ ನಮ್ಮ ದೇಶದ ಹೆಮ್ಮೆ...!
ಮೋದಿ ಇನ್ನೊಮ್ಮೆ...
ಜಯ ಜಯ ಮೋದಿ...
ಮೋದಿ ಜಯ ಜಯ.. . ದೇಶ ಭಕ್ತಿಗೆ ಜೈ ಜೈ ಜೈ .......
********************************************************
( ಯಥಾ ಪ್ರಕಾರಇದು ಮೋದಿಯವರ ಬಗೆಗೆ ಬರೆದ ಲೇಖನ...ನಿಮಗೆಲ್ಲ ಇಷ್ಟ ಬಂದ ಹಾಗೆ ಹಂಚಿಕೊಳ್ಳಿ...
ನನ್ನ ಹೆಸರಿನ ಅಗತ್ಯವೂ ಇಲ್ಲ...ಕಾಪಿ ಪೇಸ್ಟ್ ಮಾಡಿಕೊಳ್ಳಿ...ಒಟ್ಟಿನಲ್ಲಿ...ಧರ್ಮ ಭಾರತದ ಭರವಸೆ....
ಮೋದಿ ಗೆಲ್ಲಬೇಕು... ಅಷ್ಟೇ..)

Sunday, April 7, 2024

ಮಹಾ ಚುನಾವಣೆ---2024

 ಶ್ರೀ ಶಕೆ 1946ನೆಯ ಕ್ರೋಧಿನಾಮ ಸಂವತ್ಸರದಲ್ಲಿ ಜರುಗುವ (2024) ಮಹಾ ಚುನಾವಣೆಯ ವಿಶ್ಲೇಷಣೆ.

   ವರ್ಷಪ್ರವೇಶ ಲಗ್ನ    




[ಶ್ರೀ]    [ಶ್ರೀ]     [ಶ್ರೀ]     [ಕು ಶ] 

[ಶ್ರೀ] ಕ್ರೋಧಿ [ರ ಚಂ ಶು ರಾ][ಕೇ]   ಸಂವತ್ಸರ   [ಬು ಗು][ಲಗ್ನ]    [ಶ್ರೀ]    [ಶ್ರೀ]    [ಶ್ರೀ]

[ಶ್ರೀ]    [ಶ್ರೀ]    [ಶ್ರೀ]   [ಕು ಶ] [ಶ್ರೀ]   ಜಗಲ್ಲಗ್ನ      [ಕೇ][ರಾ]   [ಚಂ ಗು ಬು]

[ಶ್ರೀ]    [ಲಗ್ನ]   [ಶ್ರೀ]    [ಶ್ರೀ]

ದಿನಾಂಕ: 21/03/2024.

ಈ ಸಂವತ್ಸರದಲ್ಲಿ ಜರುಗಲಿರುವ ಭಾರತ ದೇಶದ ಲೋಕಸಭಾ ಚುನಾವಣೆ ಅತ್ಯಂತ ಕುತೂಹಲವೂ ಕೌತುಕಪೂರ್ಣವು ಆಗಿರುತ್ತದೆ. ಚುನಾವಣೆಯಲ್ಲಿ ಧುಮುಕುತ್ತಿರುವ ಹಳೆ ಅಲೆ ಹೊಸ ಅಲೆ ಒಂದಾಗಿ ಮಹಾ ಚುನಾವಣೆಯನ್ನು ಎದುರಿಸಿ ಅತ್ಯಂತ ಕುತೂಹಲಕರ ಫಲಿತಾಂಶ ನೀಡಲಿದೆ. ದೇಶದ 543 ಕ್ಷೇತ್ರಗಳ ಅಭೂತಪೂರ್ವ ಫಲಿತಾಂಶ ತಿಳಿಯಲು ಅತ್ಯಂತ ಕುತೂಹಲದಿಂದ ಇಡೀ ಪ್ರಪಂಚವೇ ಎದುರು ನೋಡುತ್ತಿವೆ. ಭಾರತದ ಧ್ರುವತಾರೆ ಪ್ರಸಕ್ತ ಪ್ರಧಾನಮಂತ್ರಿ ಜಗನ್ನಾಯಕ ಶ್ರೀ ನರೇಂದ್ರ ಮೋದಿಜಿಯವರು ಮೂರನೇ ಸಲ ಪ್ರಧಾನಮಂತ್ರಿ ಸ್ಥಾನಕ್ಕೆ ಸ್ಪರ್ಧೆಗಿಳಿದಿರುವುದು ಎಲ್ಲಿಲದ ಕುತೂಹಲ ಸಂಗತಿ. ಬಿಜೆಪಿ ಹಾಗೂ NDA ಮಿತ್ರ ಪಕ್ಷಗಳು ಒಂದೆಡೆಯಾದರೆ ಮೋದಿಯವರಿಗೆ ಪೈಪೋಟಿ ನೀಡಲು ಹವಣಿಸುತ್ತಿರುವ INDIA ಒಕ್ಕೂಟಗಳು ಪ್ರಬಲವಾಗಿ ಜಿದ್ದಾಜಿದ್ದಿಗೆ ಇಳಿದಿವೆ. ನಂತರ ಹಲವಾರು ಪಕ್ಷಗಳು, ಸ್ವತಂತ್ರ ಪಕ್ಷಗಳು ಬಹಳ ತುರುಸಿನಿಂದ ಕಾದಾಡಲೆಣಿಸುತ್ತಿವೆ. ಮೋದಿಜಿಯವರ ಹವೆ ಎಲ್ಲೆಡೆ ಭಾರೀ ಅಲೆಯನ್ನೇ ಸೃಷ್ಟಿ ಮಾಡುತ್ತಿದೆ. ಇವರ ಮುಖಂಡತ್ವದಲ್ಲಿ ನಡೆಯಲಿರುವ ಈ ಚುನಾವಣೆ 7 ಹಂತದಲ್ಲಿ ನಡೆಯಲಿವೆ.

 ಈ 2024ರಲ್ಲಿ ಜರುಗುತ್ತಿರುವ 18ನೇ ಲೋಕ ಸಮರ ಹಿಂದೆಂದೂ ಕಂಡಿರದ, ಕೇಳರಿಯದ, ಕುತೂಹಲದಿಂದ ಕೂಡಿದ್ದು ಮೋದಿಯವರ ಇಚ್ಛಾಶಕ್ತಿ, ಧೀಶಕ್ತಿ ಮತ್ತು ಆತ್ಮನಿರ್ಭರತೆಯಿಂದ ಕೂಡಿರುವುದಂತು ನಿಜವೇ. ಮೋದಿಯವರನ್ನು ಪರಾಜಯಗೊಳಿಸಲು ಏನೇನು ಮಸಲತ್ತುಗಳು ಬೇಕೋ ಅದೆಲ್ಲವನ್ನೂ ವ್ಯವಸ್ಥಿತವಾಗಿ ನಡೆಸುತ್ತಿವೆ. ಈ ಒಕ್ಕೂಟಕ್ಕೆ ವಿಪಕ್ಷಗಳಿಗೆ ಭಾರತ ವಿರೋಧಿ ರಾಷ್ಟ್ರಗಳಿಂದ ತನು ಮನ ಧನ ಸಹಾಯ, ಸಹಕಾರ ನಿರಂತರವಾಗಿ ನಡೆಯುತ್ತ ಬಂದಿರುವುದು ಸರ್ವವಿದಿತ. ಇದು ಈಗ ಆಡಳಿತ ನಡೆಸುತ್ತಿರುವ ಕೇಂದ್ರ ಸರಕಾರಕ್ಕೂ ತಿಳಿದಿದೆ. ಪರ ದೇಶದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುತ್ತಿರುವ ನಮ್ಮ ಪರಮ ಶತ್ರು ರಾಷ್ಟ್ರಗಳಿಗೆ ಭಾರತ ದೇಶದ ಜನತೆ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ. ಇನ್ನು ನಮ್ಮ ಆಂತರಿಕದಲ್ಲಿ ಮಾವೋವಾದಿಗಳು, ನಕಲಿ ದೇಶಭಕ್ತರ ಸೋಗಿನಲ್ಲಿ ಹಲವಾರು ರೀತಿಯ ಷಡ್ಯಂತ್ರಗಳು ಸೂಕ್ಷ್ಮಮತಿಗಳಿಗೆ ಗೋಚರಿಸುವುದು ಸ್ಪಷ್ಟ. ಏನೇ ಇರಲಿ ಬಲಿಷ್ಠ ಗ್ರಹಗಳ ಸಹಾಯದಿಂದ ಎದುರಿಸುವ ಶಕ್ತಿ ಆಡಳಿತಾರೂಢ ಸರಕಾರಕ್ಕೆ ಇದೆಯೆಂದು ಪ್ರಧಾನಿ ಮೋದಿಯವರು ಹೇಳಿರುವುದು ಸಹಜ.

ಈ ಮಹಾ ಚುನಾವಣೆಯಲ್ಲಿ ಶ್ರೀ ಮೋದಿಯವರದು ವಿಪರೀತ ರಾಜಯೋಗವಾಗಿದ್ದು ನಿಚ್ಚಳ ಬಹುಮತದ ಮೂಲಕ ಬಿಜೆಪಿ ಹಾಗೂ NDA ಮೈತ್ರಿಕೂಟಗಳಿಗೆ ರಾಜಯೋಗ, ಗಜಕೇಸರಿ, ಯೋಗಗಳು ಗೋಚರಿಸುತ್ತಿವೆ. ಗ್ರಹಗಳ ಬಲಾಬಲದಿಂದ ಪರಿಶೀಲಿಸಲಾಗಿ (ಜ್ಯೋತಿಷ್ಯಶಾಸ್ತ್ರ & ನ್ಯೂಮರಾಲಜಿ ಸೂಚಿಸುತ್ತಿರುವಂತೆ) ಕ್ರೋಧಿನಾಮ ಸಂವತ್ಸರದಲ್ಲಿ ಜಗಲ್ಲಗ್ನ & ವರ್ಷಪ್ರವೇಶ ಲಗ್ನದಂತೆ BJP ಹಾಗೂ NDA ಕೂಟಗಳಿಗೆ ಸ್ಪಷ್ಟ ಬಹುಮತ ಗಳಿಸುವತ್ತ ದಾಪುಗಾಲು ಹಾಕಲಿವೆ.

ಈ ಮಹಾ ಚುನಾವಣೆಯಲ್ಲಿ ಭಾರತೀಯ ಜ್ಯೋತಿಷ್ಯಶಾಸ್ತ್ರ &  ನ್ಯೂಮರಾಲಜಿ ಸೂಚಿಸುವಂತೆ ಧನುರ್ಲಗ್ನ ವರ್ಷಪ್ರವೇಶ ಲಗ್ನವಾಗಿದ್ದು ಗುರು ಗ್ರಹ ಅತ್ಯಂತ ಬಲಿಷ್ಠನಾಗಿದ್ದು ಸ್ವಕ್ಷೇತ್ರದಲ್ಲಿ ಅಧಿಕಾರರೂಢ ಕೇಂದ್ರ BJP ಹಾಗೂ NDA ಮಿತ್ರ ಪಕ್ಷಗಳಿಗೆ ವಿಶೇಷ ಲಾಭದಾಯಕನಾಗಿದ್ದಾನೆ. 8ನೇ ಮನೆಯಲ್ಲಿ ಗಜಕೇಸರಿ ಯೋಗದಾಯಕನಾಗಿರುತ್ತಾನೆ. (ಕರ್ಕಾಟಕ ರಾಶಿಯಲ್ಲಿ) 9ನೇ ಸ್ಥಾನದಲ್ಲಿ ಗುರು ಬುಧರು ಅದಕ್ಕೆ ಪುಷ್ಟಿದಾಯಕರು ಆಗಿರುತ್ತಾರೆ. ಭಾರತದ ಪ್ರಧಾನಿಯಾಗಿರುವ ಲೋಕನಾಯಕರೂ ಆಗಿರುವ ಶ್ರೀ ನರೇಂದ್ರ ಮೋದಿಯವರ ಜನ್ಮಲಗ್ನವೂ ವೃಶ್ಚಿಕ ಲಗ್ನವಾಗಿರುವುದರಿಂದ ವಿಪರೀತ ರಾಜಯೋಗ ಮತ್ತು ಗಜಕೇಸರಿ ಯೋಗ ಘಟಿಸುವುದರಿಂದ ಮತ್ತೊಮ್ಮೆ ಪ್ರಧಾನಮಂತ್ರಿಯಾಗುವುದನ್ನು ತಪ್ಪಿಸಲು ಯಾವುದೇ ಶಕ್ತಿಗಳಿಂದ ಸಾಧ್ಯವಿಲ್ಲ. ಅರ್ಥಾತ್ BJP ಗೆ 543ರಲ್ಲಿ 352, NDA ಮೈತ್ರಿಕೂಟಕ್ಕೆ 38 ಕ್ಷೇತ್ರಗಳಲ್ಲಿ ಜಯಗಳಿಸಲಿವೆ. ಇನ್ನು BJP ಗೆ ಪ್ರಬಲ ವಿರೋಧಿ ಪಕ್ಷವೆನಿಸಿದ ಕಾಂಗ್ರೆಸ್ ಗೆ 38 ರಿಂದ 43 ಸ್ಥಾನಗಳು ಲಭಿಸಲಿವೆ. ಉಳಿದವು ಇನ್ನಿತರ ಪಕ್ಷೇತರ ಅಭ್ಯರ್ಥಿ ಪಾಲಾಗಲಿವೆ. 


ಇನ್ನು ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ 21 ರಿಂದ 23 ರವೆರೆಗೆ BJP ಬರುವ ಎಲ್ಲ ಸಾಧ್ಯತೆಗಳಿವೆ. ಒಳಜಗಳ, ಕಿತ್ತಾಟ ಮುಗಿಯಲಾರದ ಕಥೆಯಾಗಿದೆ. ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳಗಳಲ್ಲಿ BJP ಚೆನ್ನಾಗಿ ಚೇತರಿಸಿಕೊಳ್ಳುವುದು. ಈ ಚುನಾವಣೆಯಲ್ಲಿ ದ್ವೇಷ, ಅಸೂಯೆ, ಹಿಂಸಾಚಾರ, ಜಾತಿನಿಂದನೆ, ಕುಟುಂಬ ರಾಜಕಾರಣ, ಗೂಂಡಾಗಿರಿ ಇವೇ ಪ್ರಮುಖ ಅಸ್ತ್ರಗಳಾಗಲಿವೆ. ಅನೇಕ ಅಡೆತಡೆಗಳ ಮಧ್ಯೆ BJP ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲಿದೆ. 

18ನೇ ಈ ಮಹಾ ಚುನಾವಣೆಯಲ್ಲಿ ದೇಶ ವಿದೇಶಗಳ ಕೈವಾಡ ಎದ್ದು ಕಾಣುತ್ತದೆ. ಜಾಗತಿಕ ಮಟ್ಟದಲ್ಲಿ ಅತೀ ಶ್ರೀಮಂತ ರಾಷ್ಟ್ರಗಳ ಒಕ್ಕೂಟ ಮುಖ್ಯವಾಗಿ ಇಂಗ್ಲೆಂಡ್, ಅಮೆರಿಕ, ಜರ್ಮನಿ, ಚೀನಾ ಮುಂತಾದ ಶ್ರೀಮಂತ ರಾಷ್ಟ್ರಗಳ ದುಷ್ಟಕೂಟಗಳು (Deep State) ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕಟ್ಟಿಹಾಕಲು ಬೇರೆ ಬೇರೆ ದೇಶಗಳಿಗೆ ಕುಮ್ಮಕ್ಕು ನೀಡುತ್ತಾ ವಿವಿಧ ಹಂತಗಳಲ್ಲಿ ದುರ್ಬಲಗೊಳಿಸುವ ಹುನ್ನಾರ ನಡೆಸುತ್ತಿವೆ. BJP ಸರಕಾರ ಬಂದರೆ ಅದು ಅಸಾಧ್ಯವೆಂದು ವಿಶ್ವಸಂಸ್ಥೆಯವರೆಗೆ ಹಣ ಹಂಚಿ ಷಡ್ಯಂತ್ರ ನಡೆಸುತ್ತಿರುವುದು ಸರ್ವಥಾ ಖಂಡನೀಯ. ಇದಕ್ಕೆ ವಿಪಕ್ಷಗಳು ಬಳಿ ಬೀಳುತ್ತಾ ಗುಲಾಮಿ ಸಂಸ್ಕೃತಿಗೆ ಕುಮ್ಮಕ್ಕು ನೀಡುತ್ತಿರುವುದು ಗೋಚರಿಸುತ್ತಿದೆ. 

ಇನ್ನು ಹೆಸರೇ ಹೇಳುವಂತೆ ಈ ಕ್ರೋಧಿ ಸಂವತ್ಸರದಲ್ಲಿ ರಕ್ತಪಾತ, ಯುದ್ಧ, ಭೂಕಂಪ, ಕ್ರೋಧಾಗ್ನಿ, ಅವಘಡ, ಸುನಾಮಿ, ಬಿರುಗಾಳಿ, ಬೇರೆ ಬೇರೆ ರೀತಿಯ ರಕ್ತ ಸಂಬಂಧಿ ಕಾಯಿಲೆಗಳು, ದೋಂಬಿ, ಅಶಾಂತಿ, ಜ್ವಾಲಾಮುಖಿ, ಹಿಮಸ್ಫೋಟ, ಬೇರೆ ಬೇರೆ ದೇಶಗಳಲ್ಲಿ ಭಯೋತ್ಪಾದನೆಯಂಥ ಭಯಾನಕ ಸನ್ನಿವೇಶಗಳು ಜರುಗಲಿವೆ. ಜಲ ಪ್ರಳಯ, ಖಂಡಮಳೆ, ಧೂಳಿನ ಆರ್ಭಟ ಹೆಚ್ಚಲಿವೆ. ಇದಕ್ಕೆಲ್ಲಾ ಸರ್ವಶಕ್ತ ಭಗವಂತನನ್ನು ಮೊರೆ ಹೋದರೆ ಶಾಂತಿ, ನೆಮ್ಮದಿ ಸಾಧ್ಯ. 

|


ಲೋಕಾ ಸಮಸ್ಥಾ ಸುಖಿನೋ ಭವಂತುlಮಂಗಳಾನಿ ಭವಂತುl. 

ದಿನಾಂಕ: 21/03/2024.

ಕಾಲಜ್ಞಾನಿ ಡಾ. ವಿಷ್ಣು ನಾರಾಯಣ ಭಟ್

9901158474

ಉಳ್ಳಾಲ, ಬೆಂಗಳೂರು ©️.

Wednesday, April 3, 2024

VENKATAM CAFE - RESTAURANT

 Wednesday, 3rd April 2024

Venkatam Cafe, Near Hebbal, Bengaluru.



In the hussle-bussle of Bengaluru, on the Outer-Ring Road from Hebbal to K R Puram, there is spacious eating outlet "VENKATAM CAFE"



We were there at the restaurant for lunch, mom took Poori-Palya, which was of giant size and I ate south Thali.


Price was reasonable, food was of normal taste.



One can visit the place once or twice....

Posted 4/4/2024


VEER DAMODAR SAVARKAR - MOVIE

Wednesday, 3rd April 2024

Galleria Mall, Yalahanka, Bengaluru.

 VEER DAMODAR SAVARKAR - HINDI MOVIE 



That was a great movie, well directed , well acted by Randeep Hooda as Savarkar.

VEER DAMODAR SAVARKAR (28/5/1883 - 26/2/1966)

Th man, revolutionary, who did not believe in Non-violence for India's Freedom from British, had strong belief in"Akhand Bharath"

His argument/conversation/Interaction with notable fredom fighters  M K Gandhi, Jawaharlal Nehru, Subhaschndra Bose, Gopalakrishna Gokhale,  Chandrashekhar Azad,  Balagangadhar Tilak, and more, were beautifully picturized.


It's 3 hour movie, full of suspense, second half with Savarkar in Kalapaani Jail, so much torture and suffering.

Later, when he was released, back in India, organizing freedom struggle.

Worth watching the movie, which arouses Desha Bhakthi and Hidutva awareness.

Posted 3/4/2024



Monday, April 1, 2024

ಮೋದಿ ಮತ್ತೊಮ್ಮೆ - 1

 2 ಏಪ್ರಿಲ್ 2024 


ರಾಮಾಯಣವನ್ನು ಗಮನಿಸಿ........
ಅಂಗದ, ಸಂಧಾನಕ್ಕೆ ಬಂದಾಗ ರಾವಣ ಗಹಗ್ಗಹಿಸಿ ನಕ್ಕಿದ್ದ....."ಅಂಗದಾ...ನಿನ್ನಪ್ಪಲಿ ಮತ್ತು ನಾನು ಇಬ್ಬರೂ ಪ್ರಾಣ ಸ್ನೇಹಿತರು....!ನಿನ್ನ ಅಪ್ಪನನ್ನು ಮರೆಯಲ್ಲಿ ನಿಂತು ಬಾಣ ಬಿಟ್ಟು ಕೊಂದವ ರಾಮ....!
ನೀನು ಈಗ ರಾಮನ ಪರವಾಗಿ ..ಸಂಧಾನಕ್ಕೆಂದು ಬಂದಿದ್ದೀಯಾ....!!ನೀನು....ನನ್ನ ಪರವಾಗಿ ನಿಲ್ಲು...
ನಿನ್ನ ಸಕಲ ರಾಜ್ಯವನ್ನು ಸುಗ್ರೀವನಿಂದ ನಿನಗೆ ನೀಡುತ್ತೇನೆ..."...ಅಂಗದ ನಕ್ಕ....
"ರಾವಣಾ....ನಾವು ಏನೇ ಮಾಡಿದರೂ ....ಯಾವುದೇ ನಿರ್ಣಯ ತೆಗೆದು ಕೊಂಡರೂ...ಅದಕ್ಕೊಂದು
ಘನತೆ ಇರಬೇಕು...ಗೌರವ ಇರಬೇಕು....ನಮ್ಮನಿರ್ಧಾರದಲ್ಲಿ..ಸತ್ಯನ್ಯಾಯ.. ಧರ್ಮಗಳಿರಬೇಕು...
ಶ್ರೀರಾಮ ಯಾರು ಗೊತ್ತಾ ?...ಅಪ್ಪ ದಶರಥ ಮಹಾರಾಜ ಕೈಕೆಯಿಗೆ ಕೊಟ್ಟ ಮಾತಿನಂತೆ..
ಪಟ್ಟಾಭಿಷೇಕವನ್ನು ಬಿಟ್ಟು...ರಾಜ್ಯವನ್ನೂ..ಅರಮನೆಯ ಸಕಲ ವೈಭೋಗವನ್ನುತ್ಯಜಿಸಿ....ತಾನು ಹದಿನಾಲ್ಕು ವರ್ಷ ವನವಾಸಕ್ಕೆ ಬಂದವ.....!ಸತ್ಯಕ್ಕಾಗಿ..ನ್ಯಾಯಕ್ಕಾಗಿ.. ಧರ್ಮಕ್ಕಾಗಿ ..ಬದುಕುತ್ತಿರುವವ ನನ್ನ
ಶ್ರೀರಾಮ...ನನ್ನ ತಂದೆ ವಾಲಿಯು ದೊಡ್ಡ ತಪ್ಪು ಮಾಡಿದ್ದ...ಹಾಗಾಗಿ ಅವನಿಗೆ ಶಿಕ್ಷೆ ಕೊಟ್ಟ... ಅದರಲ್ಲಿ ತಪ್ಪಿಲ್ಲ....
ಮರ್ಯಾದ ಪುರುಷೋತ್ತಮ ನನ್ನ ಶ್ರೀರಾಮ......ರಾಮನ ಮಡದಿ ಸೀತಾಮಾತೆಯನ್ನು ನೀನು ಬಲಾತ್ಕಾರವಾಗಿ
ಕದ್ದು ತಂದದ್ದು ತಪ್ಪು..ಅದು ಅಪರಾಧ....ಈಗಲೂ ಕಾಲ ಮಿಂಚಿಲ್ಲ....ಸೀತಾ ಮಾತೆಯನ್ನು ರಾಮನಿಗೆ ಒಪ್ಪಿಸಿ
ಧರ್ಮ ದೇವತೆ ರಾಮನಿಗೆ ಶರಣಾಗು...."..
ಅಂಗದನ ನಿಲುವು ಸ್ಪಷ್ಟವಾಗಿತ್ತು...ರಾವಣ ಗಹಗ್ಗಸಿ ನಕ್ಕ....ಅಂಗದನ ಮಾತಿಗೆ ರಾವಣ ಒಪ್ಪಲಿಲ್ಲ....
ಘನ ಘೋರ ಯುದ್ಧವಾಯಿತು....!ರಾಮ ರಾವಣನನ್ನು ಯುದ್ಧದಲ್ಲಿ ಕೊಂದು ಹಾಕಿದ....
ರಾಮ ವಿಜಯವನ್ನು ಸಾಧಿಸಿದ....ಸ್ವಲ್ಪತಡ ಆಗಬಹುದು...ಆದರೆ....ಯಾವತ್ತಿಗೂ ಸತ್ಯ..ನ್ಯಾಯ..
ಧರ್ಮದ ವಿಜಯವೇ ಶತ ಸಿದ್ಧ.....
*************************************************
ಮಹಾಭಾರತವನ್ನೂ ಗಮನಿಸಿ....
ವಿದುರ...ದಾಸಿ ಪುತ್ರ...ಕೌರವ ಎಷ್ಟೇ ಅನಾಚಾರ ಮಾಡಿದರೂ...
ಅದನ್ನು ಖಂಡಿಸುತ್ತ ತನ್ನ ನೀತಿಯನ್ನು ಬಿಡದವ ಈ ವಿದುರ...ತನ್ನಸತ್ಯಧರ್ಮ ಪಾಲನೆಯನ್ನು ಯಾವತ್ತಿಗೂ ಪಾಲಿಸಿಕೊಂಡು ಬಂದವ...ಸಂಧಾನಕ್ಕೆಂದು ಹಸ್ತಿನಾವತಿಪುರಕ್ಕೆಶ್ರೀಕೃಷ್ಣಬಂದಾಗ...ವಿದುರನ ಮನೆಗೇ
ಮೊದಲು ಬರುತ್ತಾನೆ....!!!ತನ್ನಬದುಕಿನ ಮಹೋನ್ನತ ಕನಸು...ಶ್ರೀಕೃಷ್ಣ ಪರಮಾತ್ಮ...!ತನ್ನಮನೆಗೆ ಬಂದಿದ್ದು
ನೋಡಿ ವಿದುರ ಹಿರಿ ಹಿರಿ ಹಿಗ್ಗುತ್ತಾನೆ....ತನ್ನ ಆರಾಧ್ಯ ದೈವಶ್ರೀಕೃಷ್ಣನನ್ನು ಕಣ್ ತುಂಬಾ ನೋಡುತ್ತಾನೆ..!
ಅನುಭವಿಸುತ್ತಾನೆ..! ಆರಾಧಿಸುತ್ತಾನೆ...!ಅವನಿಗೆ ಕೊಡಲು ..ಒಂದು ತೊಟ್ಟು ಹಾಲು ಮಾತ್ರ ಇದ್ದಿರುತ್ತದೆ...
ಶ್ರೀಕೃಷ್ಣ ಅದೇ ಒಂದು ತೊಟ್ಟು ಹಾಲು ಕುಡಿದು..ಹಸ್ತಿನಾವತಿ ಪುರದಲ್ಲಿ ಭಕ್ತಿಯ ಹಾಲಿನ ಹೊಳೆಯನ್ನೇ ಹರಿಸುತ್ತಾನೆ...ವಿದುರ ಭಕ್ತಿಯಿಂದ ಮೂಕನಾಗುತ್ತಾನೆ..ಶ್ರೀಕೃಷ್ಣ ನಗುತ್ತಾನೆ..ಹಸ್ತಿನಾವತಿಪುರದಲ್ಲಿ ಶಿಕೃಷ್ಣನ ಸ್ವಾಗತಕ್ಕೆ ಭರ್ಜರಿ ತಯಾರಿ ನಡೆದಿತ್ತು...ಮೃಷ್ಟಾನ್ನ ಭೋಜನ ತಯಾರಿಸಿದ್ದರು...ಎಲ್ಲೆಲ್ಲೂ ರತ್ನಗಂಬಳಿ ಹಾಕಿದ್ದರು..ಭೀಷ್ಮ.. ಕೃಪ... ಅನೇಕ ಕೃಷ್ಣನ ಭಕ್ತರು ಅಲ್ಲಿದ್ದರೂ...ಕೃಷ್ಣ ಮಾತ್ರ ವಿದುರನ ಮನೆಗೆ ಬಂದಿದ್ದ...!
ನ್ಯಾಯ.. ಧರ್ಮ ನಂಬಿಕೆಗಳು ಯಾವತ್ತಿಗೂ ಸತ್ಯವನ್ನು ಹುಡುಕಿ ಬರುತ್ತವೆ....ಮುದ್ದು ಕೃಷ್ಣನ ಹಾಗೆ...
ಸತ್ಯ ಧರ್ಮಗಳು...ಮುದ್ದಾಗಿ ನಗುತ್ತ ವಿದುರನ ಮನೆಯನ್ನೇ ಹುಡುಕಿ ಬಂದು ಮುಗ್ಧ ಭಕ್ತಿಯನ್ನು ಸ್ವೀಕರಿಸುತ್ತವೆ...
ಹಾಲಿನ ಹೊಳೆಯನ್ನು ಹರಿಸುತ್ತವೆ...ಇಲ್ಲಿಯೂ ಗೆದ್ದಿದ್ದು ವಿದುರನ ಘನತೆಯ ಬದುಕು...!!ಸತ್ಯ ನ್ಯಾಯ
ಧರ್ಮದ ಆಚರಣೆಯ ಸ್ವಾಭಿಮಾನದ ಬದುಕು....
***************************************
ತಾತ್ಪರ್ಯವಿಷ್ಟೆ...ಬದುಕಿಗೊಂದು ಘನತೆ ಇರಬೇಕು....ಸ್ವಾಭಿಮಾನವಿರಬೇಕು....ಯಾವುದೇ ಆಮಿಶಕ್ಕೊಳಗಾದ
ಸಂಕುಚಿತ ಭಾವನೆಗಳಿಗೆ ಅವಲಂಬಿತವಾದ ಬದುಕು ನಮ್ಮದಾಗಿರಬಾರದು...
****************************************
ಇದೀಗ ಮತ್ತೊಮ್ಮೆಚುನಾವಣೆ ಬಂದಿದೆ...ಮೋದಿ ನಮ್ಮ ಜಾತಿಯವ ಅಲ್ಲವೇ ಅಲ್ಲ....ಅವನ ಕುಲ ಭಾಷೆ ರಾಜ್ಯ..
ಯಾವುದೂ ನಮ್ಮದಲ್ಲ....ಆದರೂ ಮೋದಿ ನಮ್ಮವ ಅಂತ ಅನ್ನಿಸುತ್ತಾನೆ...!ನಮ್ಮ ಮನೆಯವ ಎನ್ನುವ
ಭಾವನೆ ಬಂದಿರುತ್ತದೆ..ಕಾರಣ ಆತನ ನಿಷ್ಕಳಂಕ ಬದುಕು...!ತನಗಾಗಿ..ತನ್ನ ಕುಟುಂಬಕ್ಕಾಗಿ..ತನ್ನ
ಮಕ್ಕಳು...ಸೊಸೆಯಿಂದಿರಿಗಾಗಿ..ಮೊಮ್ಮಕ್ಕಳಿಗಾಗಿ ...ಆಸ್ತಿ..ಹಣ..ಸಂಪತ್ತು ಮಾಡಿದ ಬದುಕು ಅವನದಲ್ಲ....
ದೇಶಕ್ಕಾಗಿ ...ತನ್ನಸ್ವಂತ ಬದುಕನ್ನೇ ತ್ಯಾಗ ಮಾಡಿದ ಮಹಾನ್ ದೇಶ ಭಕ್ತ ಮೋದಿ....
ಅವನಿಗೆ ನಾಲ್ಕಾರು ಜನ ಅಣ್ಣ ತಮ್ಮಂದಿರು..ಅವರೆಲ್ಲ ಯಾರೋ...ನಮ್ಮ ಮ್ಮ ನಿಮ್ಮಂತೆ ಸಾಮಾನ್ಯರ
ಬದುಕನ್ನು ಬದುಕುತ್ತಿದ್ದಾರೆ...ಅವನಿಗೊಬ್ಬಳು ಅಮ್ಮ ಇದ್ದಳು ಹತ್ತು ಫೂಟಿನ ರೂಮಿನಲ್ಲಿ ನಮ್ಮ ನಿಮ್ಮ
ಅಮ್ಮನಂತೆ ಸರಳ ಬದುಕು ನಡೆಸುತ್ತಿದ್ದಳು...!ಅಮ್ಮನಿಗಾದರೂ ...ಹಣ ಮಾಡುವ ಹಂಬಲ
ಮೋದಿಗೆ ಆಗಲಿಲ್ಲವೆ ?,,,,,
ಅಮ್ಮ ಕೂಡ ಅಕ್ರಮ ಆಸ್ತಿಗೆ ಒಪ್ಪುಲಿಲ್ಲವಂತೆ..,!ಶಿವಾಜಿಯ ಅಮ್ಮ ಜೀಜಾಬಾಯಿ ನೆನಪಾಗುತ್ತಾಳೆ...
ಎಂಥಹ ದೇಶ ಭಕ್ತಿಯ..ಪ್ರಾಮಾಣಿಕ... ರಕ್ತ ಅವರದ್ದು ?...ಪ್ರಧಾನಿಯಾಗಿ ಕಳೆದ ಹತ್ತು ವರ್ಷದಲ್ಲಿ...ಒಂದೇ
ಒಂದು ರಜೆಯನ್ನು ಹಾಕದೆ...ದಿನಕ್ಕೆ ಹದಿನೆಂಟು ತಾಸು ತನ್ನನ್ನು ತಾನು ದೇಶಕ್ಕೆ ಸಮರ್ಪಿಸಿಕೊಂಡವ
ಮೋದಿ....!ಅಷ್ಟು ನಿಸ್ವಾರ್ಥದ ಬದುಕು ನಮ್ಮಿಂದ ಸಾಧ್ಯವಿಲ್ಲ ಬಿಡಿ.....
::::::::::::::::::::::
ಆದರೆ ನಾವು ಒಂದು ಕೆಲಸವನ್ನು ಖಂಡಿತವಾಗಿ ಮಾಡಬಹುದು...ಒಂದು ದಿನ ರಜೆ ಸಿಗುತ್ತದೆ ಅನ್ನೋದನ್ನು ಮರೆತು...ನಮ್ಮಸ್ವಾರ್ಥವನ್ನು ಸ್ವಲ್ಪ ಬದಿಗಿಟ್ಟು ಚುನಾವಣೆಯಲ್ಲಿ ಮತ ಹಾಕೋಣ.....ದೇಶದ ಹೆಮ್ಮೆ...
ಪ್ರಾಮಾಣಿಕ ಮೋದಿಯನ್ನು ಗೆಲ್ಲಿಸೋಣ....
ದೇಶ ಭಕ್ತನಿಗಾಗಿ ನಮ್ಮಒಂದು ಮತವನ್ನು ಚಲಾಯಿಸಿ ನಮ್ಮ ದೇಶ ಧರ್ಮ..ಭಕ್ತಿಯನ್ನು ಮೆರೆಯೋಣ.....
ದಿನದ ಮತ ಹಾಕುವ ಒಂದು ಕ್ಷಣವಾದರೂ...ದೇಶಭಕ್ತಿಯ ಭಾವವನ್ನು ಅನುಭವಿಸೋಣ.....! ...
ಜೈ ಜೈ ಮೋದಿ... ಜೈ ಜೈ ಮೋದಿ..ನಮ್ಮ ಹೆಮ್ಮೆಯ ಮೋದಿ ಮತ್ತೊಮ್ಮೆ... ಮತ್ತೊಮ್ಮೆ...
ಜೈ ಶ್ರೀ ರಾಮ್...!
ಶಿವ ಶಿವ ಶಂಭೋ...
ಹರ ಹರ ಮಹಾದೇವ..!!!
(ಎಂದಿನಂತೆ....
ಇದು ಮೋದಿ ಬಗೆಗೆ ಬರೆದ ಲೇಖನ...ನಿಮಗೆಇಷ್ಟ ಆದಲ್ಲಿ..ಕಾಫಿ ಪೇಸ್ಟ್ ಮಾಡಿ...ಎಲ್ಲಕಡೆ ಹಂಚಿ...ವಾಟ್ಸಪ್...
ಇತರೆ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿ, ಶೇರ್ ಮಾಡಿ...
ನನ್ನ ಹೆಸರು ಬೇಕು ಅಂತೇನೂ ಇಲ್ಲ...ಒಟ್ಟಿನಲ್ಲಿ ಮೋದಿ ಗೆಲ್ಲಲಿ....ಗೆಲ್ಲಬೇಕು ...
***************************************

.....ಪ್ರಕಾಶ್ ಹೆಗ್ಡೆ