Friday, May 22, 2026
MEMOIRS
MEMORIES OF BIRTHIMANE,BIRTHDAYS, POOJA, CELEBRATIONS, FESTIVALS, VISITS, DRAMA, MUSIC, YAKSHAGANA, GET-TOGETHERS, WEDDING ENGAGEMENTS, WEDDINGS, WEDDING ANNIVERSARY, BRAHMOPADESHA, NAMAKARANA, SEEMANTHA, BOOK RELEASE, BOOK REVIEW, AND SHRADDHANJALI....
Tuesday, May 26, 2026
KRISHNAVENI BHAT - SHRDDHANJALI
Sunday, May 24, 2026
HOME VIST - RAMAKRISHNA(BABU), KAVANA, SHRINIKA
Sunday, May 24, 2026
Birthimane, Bhuvaneshwarinagara, Bengaluru
Ramakrishna (Babu), Udyavara Sujatha's (Nalini's sister) son, with his wife Kavana and cute little daughter Shrinika were home in the evening, for a short visit.
Thursday, May 21, 2026
BHAJANE AT SUNANDI AT OLDAGE HOME -59
Thursday, May 21, 2026
Sunandi Oldage Care, KodigeHalli, Bengaluru
Wednesday, May 20, 2026
RAGHAVENDRA RAO KUNJITTAYA - VISIT HOME
Wednesday, May 20, 2026
Raghavendra Rao, elederly gentleman (94 years) lives in neaby house with his wife, son, daughter-in-law and grand children.
He had been Education officer in Charge of many schools in Karnataka, retired long time ago.
He is God-fearing person, does pooja and excercise, reads Bhagavadgita and other religious books.
His health is normal for his age, and has active mind and concern for others.
It was a short visit, retuned home walking .
Posted 215.2026
Tuesday, May 19, 2026
ನಮ್ಮ ಟೆರೇಸ್ ತೋಟದ ಹೂಗಳು
ಮಂಗಳವಾರ , ಮೇ 19, 2026
Monday, May 18, 2026
ಧರ್ಮ ಯುದ್ಧ - ಡಾ. ನಾ. ಮೊಗಸಾಲೆ
ಸೋಮವಾರ, ಮೇ 18, 2026
ಧರ್ಮ ಯುದ್ಧ - ಡಾ. ನಾ. ಮೊಗಸಾಲೆ
ಡಾ. ನಾ. ಮೊಗಸಾಲೆ ಯವರ "ಧರ್ಮ ಯುದ್ಧ", 213 ಪುಟಗಳ ಕಾದಂಬರಿಯು ಅತ್ಯಂತ ಸುಂದರವಾದ ಓದಿಸಿಕೊಂಡು ಹೋಗುವ ಕೃತಿ. ಈ ಕಾದಂಬರಿಯನ್ನು ಮೊಗಶಾಲೆಯವರು 10/6/2020 ರಿಂದ 9/7/2020 . ಅಂದರೆ ಇತ್ತೀಚಿನ ಕಾಲಘಟ್ಟದಲ್ಲಿ ಒಂದು ತಿಂಗಳಲ್ಲಿ ಬರೆದ ಕೃತಿ. ಇದೊಂದು ಪ್ರಾದೇಶಿಕ ಕಾದಂಬರಿ, ಕರಾವಳಿ ಕರ್ನಾಟಕದಲ್ಲಿ, ಅದರಲ್ಲಿ ಮುಖ್ಯವಾಗಿ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯ ಬಹುದಾದ ವಸ್ತುವುಳ್ಳ ಕೃತಿ.
ಸುರಪುರ ಎಂಬ ಗ್ರಾಮದ ಹತ್ತಿರದಲ್ಲಿ ಒಂದು ಸಣ್ಣ ಗುಡ್ಡೆ (Hill) , ನಂತರ ಇದನ್ನು "ಪಂಜುರ್ಲಿ ಗುಡ್ಡೆ" ಎಂದು ಗ್ರಾಮಸ್ತರು ನಂಬಿದ್ದರು. ಅಲ್ಲಿಯ ಸೂರಪ್ಪನ ಮನೆಯ ಬಾವಿಯಲ್ಲಿ ಮೂರು ಕರಿ ಬೆಕ್ಕುಗಳು ಬಿದ್ದ ಘಟನೆಯಿಂದ ಪ್ರಾರಂಭವಾದ ಕಥೆ ಮುಂದೆ ಹಲವಾರು ಮಜಲುಗಳನ್ನು ದಾಟಿ, ಪಂಜುರ್ಲಿ ಗುಡ್ಡೆಯ ಅಭಿವೃದ್ದಿ, ಜನರ ನಂಬಿಕೆ, ಮೂಡ ನಂಬಿಕೆ, ರಾಜಕೀಯ ಒಳಸುಳಿವು, ಆಷ್ಟ ಮಂಗಳ ಪ್ರಶ್ನೆ, ಬ್ರಹ್ಮ ಕಳಶ, ಜನರ ಶ್ರಮದಾನ, ಇನ್ನೂ ಹಲವಾರು ವಿಷಯಗಳು ಬಂದು ಕಥೆ ಮುಂದುವರಿಯುತ್ತದೆ.
ಗ್ರಾಮದ ಪ್ರತಿಷಿತ ವ್ಯಕ್ತಿ ಜಯರಾಮ ಹೆಗ್ಡೆ, ಪಂಚಾಯತ್ ಅಧ್ಯಕ್ಷ ಶೇಶಪ್ಪ, ಇನ್ನೋರ್ವ ಪ್ರಭಾವಿ ವ್ಯಕ್ತಿ ಕೋಟೆಯವರು, ವೆಂಕಪ್ಪ ಮಾಸ್ತರು, ರಾಗು, ಹೊರಗಿನಿಂದ ಬಂದು ಊರಲ್ಲಿ ಪ್ರಭಾವಿಯಾದ ಸುಕುಮಾರ (ಸುಕ್ಕ, ಸುಕ್ಕಅಣ್ಣ), ಕೇಳು ಪಂಡಿತರು, ಪೊದುವಾಳರು, ಶ್ರೀಕಾಂತ ಭಟ್ಟರು, ತಂತ್ರಿಗಳು, ಇನ್ನೂ ಹಲವಾರು ವ್ಯಕ್ತಿಗಳು ಕಾದಂಬರಿಯಲ್ಲಿ ಬಂದು ಓದುಗರ ಗಮನ ಸೆಳೆಯುತ್ತದೆ.
Saturday, May 16, 2026
ಮಾವಿನ ಹಣ್ಣಿನ ಬನ್ಸ್ - ಶೋಭಾ ಸೋಮಯಾಜಿ
ಮೇ 14, 2026
ಈ ವರ್ಷ ನಮ್ಮ ಮನೆಯ ಮುಂದಿನ ಎರಡು ಮಾವಿನಮರಗಳಲ್ಲಿ ಮೊತ್ತ ಮೊದಲ ಮಾವಿನ ಫಸಲು ಬಂದಿತ್ತು. ತುಂಬ ಚೆಂದದ ಹಣ್ಣುಗಳು. ಆದರೆ ಕತ್ತರಿಸಿದರೆ ಕೆಲವು ಹಣ್ಣುಗಳಲ್ಲಿ ಪಿತಪಿತಗುಟ್ಟುವ ಹುಳುಗಳು ಧಾರಾಳವಾಗಿದ್ದವು. ಇಲ್ಲವೇ ಹಣ್ಣುಗಳು ಅರ್ಧ ಭಾಗ ಕಾಯಿ ಮತ್ತರ್ಧ ಭಾಗ ಹಣ್ಣಾಗುತ್ತಿದ್ದವು. ಏನೇ ಆದರೂ ಮಾವಿನ ಹಣ್ಣು ಮಾವಿನ ಹಣ್ಣೇ! ಹೀಗಾಗಿ ಪ್ರತೀ ಹಣ್ಣಿನಲ್ಲಿ ಸಿಕ್ಕಷ್ಟು ಭಾಗವನ್ನು ಬಳಸಿ, ಅದನ್ನು ರೂಪಾಂತರಿಸಿ ಹೊಟ್ಟೆಗೆ ಹೋಗಿಸುವ ಕಾರ್ಯಕ್ರಮ ಈಗ್ಗೆ ಹತ್ತಾರು ದಿನಗಳಿಂದ ನಡೆಯುತ್ತಿದೆ. ನಿನ್ನೆ ನನ್ನ ಮಗಳು ಕಳಿಸಿದ ಮಾವಿನ ಹಣ್ಣಿನ ಬನ್ಸ್ ನ ರೆಸಿಪಿ ನೋಡಿ ಇವತ್ತು ಸಾಯಂಕಾಲ ಮಾವಿನ ಹಣ್ಣಿನ ಬನ್ಸ್ ಮಾಡಿದ್ದಾಯಿತು.
ಬೆಳಿಗ್ಗೆಯೇ ಒಂದು ಮಾವಿನಹಣ್ಣಿನ ತಿರುಳಿಗೆ(ಹುಳವಿಲ್ಲದ
) ಸ್ವಲ್ಪ ಮೊಸರು, ಬೆಲ್ಲ, ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸಿಯಲ್ಲಿ ಟರ್ ಗುಡಿಸಿ, ಅದಕ್ಕೊಂದಿಷ್ಟು ಜೀರಿಗೆ ಸೇರಿಸಿ, ಗೋಧಿ ಹಿಟ್ಟನ್ನು ಹಾಕಿ ಕಲೆಸಿ(ನಾನು ಸೋಡಾ ಬಳಸುವುದಿಲ್ಲ) ಒಂದು ಪಾತ್ರೆಯಲ್ಲಿ ಮುಚ್ಚಿ ಇಟ್ಟಿದ್ದೆ. ಸಾಯಂಕಾಲದ ಹೊತ್ತಿಗೆ ಅದು ಸ್ವಲ್ಪ ಹುದುಗು ಬಂದಿತ್ತು. ಅದರ ಉಂಡೆಗಳನ್ನು ಮಾಡಿ, ಒಂದು ಪ್ಲಾಸ್ಟಿಕ್ ಕವರಿಗೆ ಎಣ್ಣೆ ಹಚ್ಚಿ ಲಟ್ಟಿಸಿ, ಕಾದ ಎಣ್ಣೆಗೆ ಹಾಕಿದಾಗ ಉಬ್ಬಿದ ಬನ್ಸ್ ರೆಡಿಯಾಗಿ ಹೊರ ಬಂದಿತು! ಇವತ್ತು ಮೋಡದ ಕವಿದ ವಾತಾವರಣದಲ್ಲಿ ಬಿಸಿ ಬಿಸಿ ಬನ್ಸ್ ಅನ್ನು ಚಟ್ನಿಯೊಡನೆ ತಿನ್ನುವಾಗ ಸ್ವರ್ಗಕ್ಕೆ ಮೂರೇ ಗೇಣು ಎಂಬ ಅನುಭವ.
ನೀವೂ ಮಾವಿನ ಹಣ್ಣಿನ ಬನ್ಸ್ ಮಾಡಿ. ಒಂದು ಒಳ್ಳೆಯ ತಿಂಡಿಯದು. ನನಗಂತೂ ಹೊಸ ಹೊಸ ರೆಸಿಪಿಗಳನ್ನು ಟ್ರೈ ಮಾಡುವುದೆಂದರೆ ಖುಷಿ. ನೀವುಗಳು ಏಕೆ ಮನಸು ಮಾಡಬಾರದು?
Posted , 17/5/2026
Thursday, May 14, 2026
LEGO STORE - ATHARV SOMAYAJI
Thursday, 14th May 2026
Mall of Asia, Airport Road, Bengaluru
Atharv, grandson, s/o RishiKavitha, is so fascinated by LEGO that his excitment has no bounds. He feels that it is treasure and he wants to by more.
Wednesday, May 13, 2026
ಅಂತಾರಾಷ್ಟ್ರೀಯ ತಾಯಂದಿರ ದಿನ. - ಶೋಭಾ ಸೋಮಯಾಜಿ
ಶನಿವಾರ, ಮೇ 9, 2026
ನಾಳೆ ಅಂತಾರಾಷ್ಟ್ರೀಯ ತಾಯಂದಿರ ದಿನ. ತೊಂಬತ್ತರ ಹರೆಯದ ನನ್ನಮ್ಮ ಆರೋಗ್ಯಯುತವಾಗಿ, ಅವಳ ಕೆಲಸವನ್ನು ಅವಳು ಮಾಡುತ್ತಾ ವಯೋಸಹಜ ಸಣ್ಣ ಪುಟ್ಟ ನೋವನ್ನು ಅನುಭವಿಸುವುದನ್ನು ಹೊರತು ಪಡಿಸಿ ಉತ್ತಮ ಕೇಳುವಿಕೆ, ದೃಷ್ಟಿ, ನಿದ್ರೆ ಹಾಗೂ ಜೀರ್ಣಕ್ರಿಯೆಯನ್ನು ಹೊಂದಿ ಅವಳ ಇಚ್ಛೆಯ ಪ್ರಕಾರ ಬದುಕು ನಡೆಸುತ್ತಿದ್ದಾಳೆ. ಅವಳು ಇವತ್ತಿಗೂ ತಾನು ಹೋಗಿ ಇರುವಲ್ಲಿ ತನ್ನ ಅಧಿಕಾರವನ್ನು ನಡೆಸುವ ಗಟ್ಟಿಗಿತ್ತಿ. ಅವಳ ಗಟ್ಟಿತನ ಅವಳ ಮಕ್ಕಳಾದ ನಮಗ್ಯಾರಿಗೂ ಬಂದಿಲ್ಲವೆಂದೇ ಹೇಳಬಹುದು. ನನ್ನನ್ನು ಹೊತ್ತು, ಹೆತ್ತು, ಕಾಲಕಾಲಕ್ಕೆ ನನ್ನ ದೇಖಾರೇಖಿ ಮಾಡಿದ ಬಗ್ಗೆ ನನ್ನಮ್ಮನ ಬಗ್ಗೆ ಗೌರವ ಹಾಗೂ ಕೃತಜ್ಞತಾ ಭಾವವಿದೆ. ಆದರೆ ನನಗೆ ಮಾನಸಿಕ ಸ್ಥೈರ್ಯ, ಪ್ರೀತಿ, ಒಲುಮೆ ತೋರಿಸಿ ಜೀವನ ಪಾಠವನ್ನು ಕಲಿಸಿದ ನನ್ನಪ್ಪ ನನ್ನ ನಿಜವಾದ ತಾಯಿ. ಅವರ ಬಗ್ಗೆ ನನಗೆ ವಿಶೇಷ ಪ್ರೀತಿ.
Posted 14/5/2026
Tuesday, May 12, 2026
SHAMBU KALLU SHIVA TEMPLE, UDYAVARA
Tuesday, 5th May 2026
Shri Shambhu Shaileshwara Shiva Temple, Udyavara




































