Sunday, February 15, 2026
Bhuvaneshwarinagara, Kempapura, Bengaluru.
Today being Maha Shivaratri Day, and we wanted to visit nearby temple and the we found one in our Bhuvaneshwarinagara, in the 7th Cross.
MEMORIES OF BIRTHIMANE,BIRTHDAYS, POOJA, CELEBRATIONS, FESTIVALS, VISITS, DRAMA, MUSIC, YAKSHAGANA, GET-TOGETHERS, WEDDING ENGAGEMENTS, WEDDINGS, WEDDING ANNIVERSARY, BRAHMOPADESHA, NAMAKARANA, SEEMANTHA, BOOK RELEASE, BOOK REVIEW, AND SHRADDHANJALI....
Sunday, February 15, 2026
Bhuvaneshwarinagara, Kempapura, Bengaluru.
Today being Maha Shivaratri Day, and we wanted to visit nearby temple and the we found one in our Bhuvaneshwarinagara, in the 7th Cross.
Saturday, February 14, 2026
Majunatha Holla, a relation and a well wisher, went through agonising days with his daughter Archana, who was suffering with ALS dicease for last three years.
Manjunath's message last month when Archana was on her death bed:
Archana's conversation with me. Search screen of TV is being used as an alphabet chart.
To get one sentence , she has to blink her eyes for each character and line.
She knows that her days are numbered, but not ready to go.
After bravely battling scleroderma for three years, she left us on January 31st. Her strength, grace, and gentle spirit will always be remembered. Heartfelt condolences to her family and loved ones.
May her soul rest in peace. 🌹
May her Soul Rest in Peace....
Om Shanthi....
Posted 14/2/2026
Thursday, February 12, 2026
Sunandi Holistic Eldercare, KodigeHalli, Bengaluru.
Another divine session of Bahjane to residents of ElderCare centtre was conducted .
Wednesday, February 11, 2026
Madduru, Karnataka
Wednesday, February 11, 2026
Prakruthi Prem Apartment, Vijayanagara, Mysuru..
They were actively participating in Dubai Brahmana Samaja in all programs, and Sugama Bhajane group.
Sudhaker Rao Pejavar, Latha from Bengaluru
Krishnaraja Tantry, Sulatha from Udupi,
Jayarama Somayaji, Nalini from Bengaluru
Udaykumar, Savithri at Mysuru (Host)
It was nice meeting old friends from Dubai and now settled back in India.
God Bless All.
Posted 12/2/2026
Tuesday. February 10, 2026
ಅಲರ್ಜಿಗೆ ಸಡನ್ ಆಗಿ ನನ್ನ ನೆನಪಾಯಿತೋ ಏನೋ? ಬಂದು ನನ್ನನ್ನು ಆವರಿಸಿಯೇ ಬಿಟ್ಟಿತು ನೋಡಿ! ಕಳೆದ ಮಂಗಳವಾರ ಬೆಳಿಗ್ಗೆ ಏಳುವಾಗ ನನ್ನ ಮೂಗು, ತುಟಿಗಳು ಸ್ವಲ್ಪ ಬಿರುಸಾಗಿದ್ದವು ಹಾಗೂ ಅವುಗಳ ಸುತ್ತಲಿನ ಪ್ರದೇಶ ಕೆಂಪಗಾಗಿತ್ತು. ಮೇಲ್ತುಟಿಯ ಒಂದು ಭಾಗ ಸ್ವಲ್ಪ ಊದಿತ್ತು. ಇದೇನಪ್ಪಾ ಎಂದು ನನ್ನ ‘ಅಂದದ’ ಫೋಟೊ ತೆಗೆದು ನನ್ನ ಡಾಕ್ಟರ್ ಸೊಸೆಗೆ ಕಳಿಸಿದೆ. “ಅಲರ್ಜಿಯ ತರಹ ಕಾಣಿಸುತ್ತದೆ; ಒಂದು ಒಕಾಸೆಟ್ ಮಾತ್ರೆ ತಗೊಳ್ಳಿ” ಎಂದು ಅವಳಿಂದ ಸಲಹೆ ಬಂದ ಮೇಲೆ ಮಧ್ಯಾಹ್ನ ಒಂದು ಮಾತ್ರೆ ತೆಗೆದುಕೊಂಡು ರೆಸ್ಟ್ ಮಾಡಿದೆ. ಸಾಯಂಕಾಲ ಸೂರ್ಯಾಸ್ತ ನೋಡಲು ಕಾರಿನಲ್ಲಿ ಒಂದು ಪುಟ್ಟ ತಿರುಗಾಟ ಮಾಡಿಕೊಂಡು ಬಂದ ನಂತರ ಅಲರ್ಜಿ ಹೆಚ್ಚಿದ ಹಾಗೆ ಕಂಡಿತು. ನಾನೇ ಡಾಕ್ಟರ್ ಆಗಿ ಮತ್ತೊಂದು ಮಾತ್ರೆ ತಗೊಂಡು ಮಲಗಿದೆ. ರಾತ್ರಿ ನಿದ್ರೆ ಅಷ್ಟೇನೂ ಹಿತಕರವಾಗಿರಲಿಲ್ಲ. ಮುಖ ತುಂಬಾ ಬಾಧಿಸುತ್ತಿತ್ತು. ಭಾರವೆನಿಸುತ್ತಿದ್ದ ಮುಖವನ್ನು ಹೊತ್ತು ಬೆಳಿಗ್ಗೆ ಎದ್ದ ನಾನು ಮುಖ ಮಾರ್ಜನ ಮಾಡುತ್ತಾ ಕನ್ನಡಿಯಲ್ಲಿ ನೋಡಿಕೊಂಡರೆ ಯಾವುದೋ ‘ಏಲಿಯೆನ್’ ಅನ್ನು ನೋಡಿದ ಹಾಗಾಯಿತು. ನನ್ನ ಗುರುತು ನನಗೇ ಸಿಗದೆ ಕಂಗಾಲಾದೆ. ಕೋಣೆಯಿಂದ ಹೊರ ಬಂದ ನನ್ನ ಗುರುತು ನಮ್ಮ ಶಂಕರಿಗೂ ಸಿಗದಷ್ಟು ಮುಖ-ಮೂತಿ ಊದಿಕೊಂಡಿತ್ತು. ತುಟಿಯಂತೂ ಊದಿ ನೇತಾಡುತ್ತಿತ್ತು. ಮುಖದಲ್ಲಿ ಊದದೇ ಇದ್ದ ಯಾವ ಭಾಗವೂ ಇರಲಿಲ್ಲ. ಯಾರದ್ದೋ ಎಕ್ಸ್ಟ್ರಾ ಮುಖವನ್ನು ನನ್ನ ಮುಖಕ್ಕೆ ಫಿಕ್ಸ್ ಮಾಡಿದ ಹಾಗಾಗಿತ್ತು. ಪುನಃ ಸೊಸೆಗೆ ಫೋಟೊ ಕಳಿಸಿದಾಗ 'ಕೂಡಲೇ ಲೋಕಲ್ ಡಾಕ್ಟರ್ ಹತ್ತಿರ ಹೋಗಿ' ಎಂದು ಹೇಳಿದಳು. ಬೆಳಗಿನ ಹತ್ತೂವರೆಯ ಸುಮಾರಿಗೆ ಸಾಗರದ ಡಾ. ದೀಪಕ್ ಹತ್ತಿರ ಹೋದಾಗ ಅಲರ್ಜಿ ಇಂಜೆಕ್ಷನ್ ಚುಚ್ಚಿ, ಒಂದು ಕೋರ್ಸ್ ಮಾತ್ರೆ ಕೊಟ್ಟರು. ನಂತರದಲ್ಲಿ ಊತ ಸಾಕಷ್ಟು ಇಳಿದರೂ ಅಲರ್ಜಿಯ ‘ಆಫ್ಟರ್ ಇಫೆಕ್ಟ್’ ಜೋರಾಗಿಯೇ ಇತ್ತು. ಮುಖವಂತೂ ಕೆಂಪು ಮೂತಿಯ ಮಂಗನ ತರಹ ಆಗಿತ್ತು. ತದನಂತರದಲ್ಲಿ ಮುಖದಿಂದ ಅಲರ್ಜಿ ಮೈಕೈಗೆಲ್ಲಾ ರವಾನೆ ಆಯ್ತು. ಹಾಗೆ ಮಾಡದಿದ್ದರೆ ಒಂದೇ ದೇಹದ ಉಳಿದ ಭಾಗಗಳಿಗೆ ಬೇಜಾರಾಗಬಹುದೆಂಬ ಯೋಚನೆ ಅಲರ್ಜಿಯದ್ದೋ ಏನೋ? ಅಲ್ಲೆಲ್ಲಾ ಆದದ್ದು ಊತಕ್ಕಿಂತ ಹೆಚ್ಚು ಕೆಂಪು ದದ್ದುಗಳು, ರ್ಯಾಶಸ್ ಹಾಗೂ ಅದರೊಡನೆಯ ಅದ್ಭುತವಾದ ತುರಿಕೆ! ಎಲ್ಲಾದರೂ ಒಂದು ಕಡೆ ಮುಟ್ಟಿದರೆ ತುರಿಸುತ್ತಾ ಇರುವ ಎನ್ನುವ ಭಾವ. ತುರಿಸುವ ಪ್ರಕ್ರಿಯೆ ಎಷ್ಟು ರಗಳೆ ಕೊಡುತ್ತದೋ ಅಷ್ಟೇ ಹಿತವನ್ನೂ ಕೊಡುತ್ತದೆ. ಅಲ್ಲವೆ?!
ಈ ಅಲರ್ಜಿಯ ಕಾಲದಲ್ಲಿ ನಾನೊಂದಿಷ್ಟು ದಣಿದೆ! ನನ್ನ ಸಹಜವಾದ ಮಲಗುವ ಭಂಗಿಯಲ್ಲಿ ಮಲಗಲು ಆಗದಂತಹ ತೊಂದರೆ ಕೊಡುವ ಅಲರ್ಜಿಯು ನನ್ನ ನಿದ್ರಾ ಸುಖವನ್ನೇ ಕೊಂದು ಹಾಕಿ ಬಿಟ್ಟಿದೆ. ಈಗ ಕಡಿಮೆಯಾಗುತ್ತಿರುವಂತೆ ಅನಿಸುತ್ತಿರುವ ಅಲರ್ಜಿ ನನ್ನನ್ನು ಬಿಟ್ಟು ತೊಲಗಿದರೆ ಸಾಕೆಂಬ ಹಂಬಲ ನನ್ನದು. ಅಲರ್ಜಿಯನ್ನು ಅನುಭವಿಸಿದವರಿಗೆ ಇದೆಲ್ಲ ಸುಲಭವಾಗಿ ಅರ್ಥವಾಗುವ ವಿಷಯವಲ್ಲವೆ?
ಹೀಗೊಂದು ಅಲರ್ಜಿಯ ವೃತ್ತಾಂತ!
Posted 11/2/2026
Sunday, February 8, 2026
Nagarabavi, Bengaluru.
Sujay Udupa is college mate of Ravi, at MIT Manipal, during their Engineering studies.
Tuesday, February 10, 2026
Feeling proud writing about PadmaBhooshana Shatavadhani R Ganesh.
~ ಗಣೇಶ ಭಟ್ಟ ಕೊಪ್ಪಲತೋಟ
ಶತಾವಧಾನಿ ಡಾ. ಆರ್. ಗಣೇಶ್ ಅವರ ವಿದ್ವತ್ತೆಯನ್ನು ನೋಡಿ ಬೆರಗಾಗದವರು ತಾನೇ ಯಾರು! ನಿಜಕ್ಕೂ ಅವರ ಪ್ರತಿಭೆ-ಪಾಂಡಿತ್ಯಗಳು ವಿಸ್ಮಯವೇ ಎಂದು ಹಿರಿಯ ಪತ್ರಕರ್ತ, ಲೇಖಕ, ಚಿಂತಕ, ನಾಡೋಜ ಎಸ್. ಆರ್. ರಾಮಸ್ವಾಮಿಗಳು ಅವರನ್ನು ‘ವಿದ್ವಲ್ಲೋಕದ ವಿಸ್ಮಯ’ ಎಂದು ಕರೆದಿದ್ದಾರೆ. ಒಂದೊಂದು ಶಾಸ್ತ್ರವನ್ನೋ ವಿದ್ಯೆಯನ್ನೋ ಅಧ್ಯಯನ ಮಾಡುವುದಕ್ಕೆ ಹತ್ತಾರು ವರ್ಷಗಳೇ ಬೇಕಾಗುತ್ತವೆ ಎಂದು ಹೇಳುತ್ತಾರೆ. ಆದರೆ ಅದು ಸಾಮಾನ್ಯರನ್ನು ಕುರಿತು ಹೇಳುವ ಮಾತು. ವಿಶೇಷ ಪ್ರತಿಭೆಯುಳ್ಳವರು ಯಾವ ಮಟ್ಟದಲ್ಲಿ ವೈದುಷ್ಯವನ್ನು ಸಾಧಿಸಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿ ಶತಾವಧಾನಿಗಳು ನಮ್ಮ ನಡುವೆ ಇದ್ದಾರೆ.
ಗಣೇಶ್ ಅವರು ಹುಟ್ಟಿದ್ದು ಕೋಲಾರದಲ್ಲಿ, ೧೯೬೨ರ ಡಿಸೆಂಬರ್ ನಾಲ್ಕರಂದು. ಅವರ ತಾಯಿ ಅಲಮೇಲಮ್ಮ. ತಂದೆ ಆರ್. ಶಂಕರನಾರಾಯಣ ಅಯ್ಯರ್. ಚಿಕ್ಕಂದಿನಲ್ಲಿಯೇ ಅವರ ತಾಯಿಯವರ ಮಾರ್ಗದರ್ಶನದಲ್ಲಿ ಸಂಗೀತ-ಚಿತ್ರಕಲೆ-ನಟನೆ ಮೊದಲಾದ ಹಲವು ಬಗೆಯ ಲಲಿತಕಲೆಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಓದುವ ಹವ್ಯಾಸವನ್ನು ರೂಢಿಸಿಕೊಂಡ ಅವರು ತಮ್ಮ ಸಹಜವಾದ ಜ್ಞಾನಕುತೂಹಲದಿಂದ ನಿರಂತರವಾಗಿ ಅಧ್ಯಯನವನ್ನು ನಡೆಸುತ್ತ ಮನಸ್ಸಿನಲ್ಲಿ ನೆಟ್ಟ ಜ್ಞಾನವೃಕ್ಷವನ್ನು ಕಲ್ಪವೃಕ್ಷವನ್ನಾಗಿಸಿಕೊಂಡರು.
ಬಹುಭಾಷಾಜ್ಞಾನ
ಚಿಕ್ಕಂದಿನಿಂದ ಅವರು ಬೆಳೆದ ವಾತಾವರಣದಲ್ಲಿ ಕನ್ನಡ, ತೆಲುಗು ಹಾಗೂ ತಮಿಳು ಪ್ರಭಾವ ಇದ್ದ ಕಾರಣ ಶಾಲೆಗೆ ಹೋಗುವ ವಯಸ್ಸಿನಲ್ಲಿಯೇ ಈ ಮೂರೂ ಭಾಷೆಗಳನ್ನು ಕಲಿತರು. ಆ ಬಳಿಕ ಶಾಲೆಯ ಪಾಠ್ಯಕ್ರಮದಲ್ಲಿ ಹಿಂದಿ, ಸಂಸ್ಕೃತ, ಇಂಗ್ಲಿಷ್ ಮೊದಲಾದ ಭಾಷೆಗಳ ಪರಿಚಯವಾಯಿತು. ಸಂಸ್ಕೃತ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಬೆಳೆದು ಅದರ ಮೂಲಕ ಶೌರಸೇನಿ, ಮಾಗಧೀ, ಮಹಾರಾಷ್ಟ್ರೀ ಮೊದಲಾದ ಹಲವು ಬಗೆಯ ಪ್ರಾಕೃತಗಳು, ಪಾಳಿ ಮೊದಲಾದ ಭಾಷೆಗಳನ್ನು ಕಲಿತರು. ಆ ಸಮಯದಲ್ಲಿ ಪಾಶ್ಚಾತ್ಯದೇಶಗಳ ಮಹಾಕಾವ್ಯಗಳನ್ನು ಅಧ್ಯಯನ ಮಾಡುವ ಆಸಕ್ತಿ ಹುಟ್ಟಿ ಗ್ರೀಕ್ ಲ್ಯಾಟಿನ್ ಮುಂತಾದ ಭಾಷೆಗಳನ್ನು ಕಲಿತರು. ಹೀಗೆ ಸುಮಾರು ೨೧ ಭಾಷೆಗಳಲ್ಲಿ ಅವರು ಪಾಂಡಿತ್ಯವನ್ನು ಪಡೆದಿದ್ದಾರೆ.
‘ನೀವು ಇಷ್ಟೊಂದು ಭಾಷೆಗಳನ್ನೆಲ್ಲ ಯಾವಾಗ ಕಲಿತದ್ದು?’ ಎಂದು ಒಮ್ಮೆ ಕುತೂಹಲದಿಂದ ಅವರ ಬಳಿ ಕೇಳಿದ್ದೆ. ಹೆಚ್ಚುಕಡಿಮೆ ಈ ಎಲ್ಲ ಭಾಷೆಗಳನ್ನೂ ತಮ್ಮ ೨೦-೨೧ರ ವಯಸ್ಸಿನ ಒಳಗೇ ಕಲಿತುಕೊಂಡದ್ದಾಗಿ ತಿಳಿಸಿದ್ದರು. ‘ಪ್ರಸ್ತುತ ಒಂದು ಭಾಷೆ ಬರುತ್ತದೆ ಎಂದು ಹೇಳಬೇಕು ಎಂದರೆ ಆ ಭಾಷೆಯಲ್ಲಿ ಸುಮಾರು ಸಾವಿರ ಪುಸ್ತಕಗಳನ್ನಾದರೂ ಓದಿರಬೇಕು’ ಎಂಬುದು ಅವರಿಗೆ ಅವರೇ ಹಾಕಿಕೊಂಡ ನಿಯಮವಂತೆ! ಹೀಗೆ ನೋಡಿದರೆ ನಮಗೆ ಕನ್ನಡ ಬರುತ್ತದೆ ಎಂದು ಹೇಳುವುದಕ್ಕೇ ಆಲೋಚನೆ ಮಾಡಬೇಕಾಗುತ್ತದೆ!
ಅಧ್ಯಯನ ಅಧ್ಯಾಪನ
ಭಾಷೆ-ಕಲೆ-ಸಾಹಿತ್ಯ-ಸಂಗೀತ ಎಂದು ಈ ಕ್ಷೇತ್ರಗಳಲ್ಲಿ ಅಪಾರ ಸಾಧನೆಯನ್ನು ಮಾಡಿರುವ ಅವರು ಕಾಲೇಜಿನ ವ್ಯಾಸಂಗದಲ್ಲಿ ಕಲಿತದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಆ ಬಳಿಕ ಲೋಹಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಸಂಸ್ಕೃತದಲ್ಲಿ ಎಂ.ಎ. ಮಾಡಿದ ಅವರು ಅವಧಾನಕಲೆಯನ್ನು ಕುರಿತು ಸಂಶೋಧನೆಯನ್ನು ಮಾಡಿ ಮಂಡಿಸಿದ ‘ಕನ್ನಡದಲ್ಲಿ ಅವಧಾನಕಲೆ’ ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮೊದಲ ಡಿ.ಲಿಟ್ ಪದವಿ ದೊರೆತದ್ದು ಇತಿಹಾಸ. ತಮ್ಮ ಇಂಜಿನಿಯರಿಂಗ್ ವಿದ್ಯಾಭ್ಯಾಸದ ಬಳಿಕ ಹಲವು ವರ್ಷಗಳ ಕಾಲ ಅದೇ ವಿಷಯದಲ್ಲಿ ಅಧ್ಯಾಪನವನ್ನೂ ಮಾಡಿದ್ದಾರೆ.
ಕನ್ನಡನಾಡಿನಲ್ಲಿ ಅವಧಾನಕಲೆ ಎಂದರೆ ಏನು ಎಂದೇ ಪರಿಚಯವಿಲ್ಲದಂತಹ ಸಂದರ್ಭ ಸೃಷ್ಟಿಯಾಗಿದ್ದಾಗ ಆ ಅದ್ಭುತವಾದ ಕಲೆಯನ್ನು ಪರಿಚಯಿಸಿ ಅದಕ್ಕೆ ಹೊಸರೂಪವನ್ನು ತೋರಿಸಿ ಇಂದು ಕರ್ಣಾಟಕದಲ್ಲಿ ಶತಾವಧಾನಿಗಳು ಎಂದರೆ ಇವರೊಬ್ಬರೇ ಎಂಬಂತೆ ಮನೆಮಾತಾಗಿರುವವರು ಗಣೇಶ್! ಏಕಾಗ್ರತೆ, ನೆನಪಿನ ಶಕ್ತಿ, ಸದ್ಯಃಸ್ಫೂರ್ತಿ, ಆಶುಕವಿತಾರಚನೆ, ಬಹುಶಾಸ್ತ್ರಪಾಂಡಿತ್ಯ, ಭಾಷಾಪ್ರಭುತ್ವ ಹೀಗೆ ಹಲವಾರು ಬಗೆಯ ಅಪೂರ್ವವಾದ ಸಾಧನೆಯನ್ನು ಮಾಡಿಕೊಂಡವರು ಮಾತ್ರ ಕರಗತ ಮಾಡಿಕೊಳ್ಳಬಹುದಾದ ದುಷ್ಕರವಾದ ಕಲಾಪ್ರಕಾರವೇ ಅವಧಾನ. ವೇದಿಕೆಯಲ್ಲಿ ಹಲವಾರು ಪಂಡಿತರು ಬಗೆಬಗೆಯ ಪ್ರಶ್ನೆಗಳನ್ನು ಒಡ್ಡಿದರೆ ಅವಧಾನಿಗಳು ಅವುಗಳೆಲ್ಲವುಗಳಿಗೂ ತಮ್ಮ ಪಾಂಡಿತ್ಯಪ್ರತಿಭೆಗಳಿಂದ ಸೂಕ್ತವಾದ ಸಮಾಧಾನವನ್ನು ನೀಡಬೇಕು.
ಅವಧಾನಕ್ಷೇತ್ರದಲ್ಲಿ ಅವರು ಸಾಧಿಸಿದ ವಿಕ್ರಮ ಅನೂಹ್ಯ! ಈ ತನಕ ದೇಶ-ವಿದೇಶಗಳಲ್ಲಿ ಸಾವಿರದ ಮುನ್ನೂರಕ್ಕೂ ಹೆಚ್ಚು ಅಷ್ಟಾವಧಾನಗಳನ್ನು ನಡೆಸಿಕೊಟ್ಟಿದ್ದಾರೆ. ಅಲ್ಲದೆ ಐದು ಶತಾವಧಾನಗಳನ್ನೂ ನಿರ್ವಹಿಸಿದ್ದಾರೆ. ತೆಲುಗಿನವರು ಅಸಾಧ್ಯವೆಂದೇ ಹೇಳಿದ್ದ ಚಿತ್ರಕವಿತೆಯೆಂಬ ವಿಭಾಗವನ್ನು ಅವಧಾನದಲ್ಲಿ ನಿರ್ವಹಿಸಿ ಅಳವಡಿಸಿಕೊಂಡದ್ದು ಅವರ ಗರಿಮೆ. ಅದಲ್ಲದೆ ನಾಟಕವಾಚನ, ಮಾತು-ಧಾತು, ಅನಂತಕಥಾಕವಿತೆ ಹೀಗೆ ಹಲವು ಬಗೆಯ ಕಷ್ಟಕರವಾದ ವಿಭಾಗಗಳನ್ನೂ ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ.
ಒಂದೇ ಪದ್ಯಕ್ಕೆ ಐದಾರು ಭಾಷೆಗಳಲ್ಲಿ ಅರ್ಥವನ್ನು ಹೇಳಬಲ್ಲಂತಹ ಭಾಷಾಚಿತ್ರ, ಒಂದೇ ಪದ್ಯದಲ್ಲಿ ಹಲವು ಬಗೆಯ ಛಂದಸ್ಸುಗಳು ಒಳಗೊಂಡಿರುವಂತೆ ಗರ್ಭಚಿತ್ರ, ಅವಧಾನವೇದಿಕೆಯಲ್ಲಿ ಆಶುವಾಗಿ ಹೇಳಲು ಅಸಾಧ್ಯವೆಂದೇ ಹೇಳಬಹುದಾದ ದುಷ್ಕರ ಬಂಧಚಿತ್ರಗಳ ರಚನೆಗಳನ್ನೆಲ್ಲವನ್ನೂ ಅವರು ಸಾಧಿಸಿದ್ದಾರೆ. ಆಯಾ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದರೆ ಮಾತ್ರ ನಮಗೆ ಇದರ ಕಷ್ಟ ಎಷ್ಟೆಂದು ಅರಿವಾದೀತು! ಅಲ್ಲದೆ ಎಂಟು ಭಾಷೆಗಳಲ್ಲಿ ಅವಧಾನವನ್ನು ನಿರ್ವಹಿಸಬಲ್ಲ ಏಕೈಕ ಅಷ್ಟಭಾಷಾವಧಾನಿಗಳೂ ಆಗಿದ್ದಾರೆ. ಅತ್ಯಂತ ವೇಗವಾಗಿ ತಾಸಿಗೆ ನೂರು ಅಭಿಜಾತಶೈಲಿಯ ರಸಮಯವಾದ ಪದ್ಯಗಳನ್ನು ರಚಿಸಿ ಹೇಳುವಂತಹ ಶಕ್ತಿಯಿರುವ ಅವರು ಘಳಿಗೆಯೊಂದರಲ್ಲಿ ನೂರು ಸಂಸ್ಕೃತ ಶ್ಲೋಕಗಳನ್ನು ರಚಿಸುವ ಸಾಮರ್ಥ್ಯವನ್ನೂ ಹೊಂದಿದ್ದಾರೆ.
ಒಬ್ಬ ಒಳ್ಳೆಯ ಕಲಾವಿದನಾದವನು ತಾನು ರೂಢಿಸಿಕೊಂಡ ಕಲೆಗೆ ಹೊಸ ಹೊಳಹನ್ನು ಕೊಡಬಲ್ಲವನಾಗುತ್ತಾನೆ. ಆ ದೃಷ್ಟಿಯಿಂದ ಶತಾವಧಾನಿಗಳು ಅವಧಾನಕ್ಷೇತ್ರಕ್ಕೆ ಕೊಟ್ಟ ಕೊಡುಗೆಗಳ ಜೊತೆಯಲ್ಲಿ ಉಳಿದ ಕಲೆಗಳಲ್ಲಿ ತೊಡಗಿಸಿಕೊಂಡ ಬಗೆಯನ್ನೂ ಗಮನಿಸಿದರೆ ಅವರ ಎತ್ತರ ಬಿತ್ತರಗಳ ಅರಿವಾದೀತು.
ಸಂಗೀತ ನೃತ್ಯ ಮೊದಲಾಗಿ ಹಲವು ಕಲಾಪ್ರಕಾರಗಳಲ್ಲಿ ಆಳವಾದ ಜ್ಞಾನವನ್ನು ಹೊಂದಿರುವ ಅವರು ಸಾಕಷ್ಟು ಸಂಗೀತಕೃತಿಗಳನ್ನು ರಚಿಸಿದ್ದಾರೆ. ಶಾಸ್ತ್ರೀಯನೃತ್ಯಗಳಿಗೆ ಸಾಹಿತ್ಯವನ್ನು ರಚಿಸಿದ್ದಾರೆ. ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ. ಯಕ್ಷಗಾನದಲ್ಲಿ ಮಂಟಪ ಪ್ರಭಾಕರ ಉಪಾಧ್ಯಾಯರ ಮೂಲಕ ಏಕವ್ಯಕ್ತಿ ಯಕ್ಷಗಾನ, ದಿವಾಕರ ಹೆಗಡೆ ಅವರ ಮೂಲಕ ಏಕವ್ಯಕ್ತಿ ತಾಳಮದ್ದಲೆ ಎಂಬ ಹೊಸ ಆಯಾಮವನ್ನು ಕೂಡ ಕಲ್ಪಿಸಿಕೊಟ್ಟಿದ್ದಾರೆ. ಪರಿಪೂರ್ಣವಾಗಿ ರಸಮಾತ್ರದೃಷ್ಟಿಯಿಂದ ಕಲೆಯನ್ನು ಆಸ್ವಾದಿಸುವ ಸಹೃದಯರೆಲ್ಲರೂ ಇದನ್ನು ಮೆಚ್ಚಿ ಆಸ್ವಾದಿಸಿ ಜನಪ್ರಿಯವೂ ಆಗಿರುವುದೇ ಈ ಕಲಾಪ್ರಕಾರದ ಸಾಧ್ಯತೆಯನ್ನು ತೋರಿಸಿಕೊಟ್ಟ ಗಣೇಶರ ಶ್ರೇಯಸ್ಸಿಗೆ ಸಾಕ್ಷಿ. ಇವುಗಳಲ್ಲದೆ ‘ಕಾವ್ಯ-ಚಿತ್ರ-ಗೀತ-ನೃತ್ಯ’ದಂತಹ ವಿಶಿಷ್ಟ ಕಲಾಪ್ರಕಾರವನ್ನು ರಂಗಕ್ಕೆ ಪರಿಚಯಿಸಿ ಯಶಸ್ವಿಯಾಗಿ ಅನೇಕ ಪ್ರದರ್ಶನಗಳನ್ನು ನಡೆಸಿದ್ದಾರೆ. ಬಿ.ಕೆ.ಎಸ್ ವರ್ಮಾ ಅವರ ಜೊತೆಯಲ್ಲಿ ಸತತ ೨೪ ಗಂಟೆಗಳ ಕಾಲ ಕಾವ್ಯ-ಚಿತ್ರ ಕಾರ್ಯಕ್ರಮವನ್ನು ನಡೆಸಿ ವಿಶ್ವದಾಖಲೆಯನ್ನು ಮಾಡಿದ್ದಾರೆ.
ಶಾಸ್ತ್ರಕಾರ-ಉಪನ್ಯಾಸಕಾರ
ಅವಧಾನಿ-ಕವಿ ಆದವರಿಗೆ ಆವಶ್ಯಕವಾಗಿರುವ ಛಂದಶ್ಶಾಸ್ತ್ರ, ವ್ಯಾಕರಣ, ಅಲಂಕಾರಶಾಸ್ತ್ರ ಮೊದಲಾದವುಗಳಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಅವರು ಈ ತನಕ ಇದ್ದ ಶೃಂಗಾರ-ಹಾಸ್ಯ ಮೊದಲಾದ ನವರಸಗಳಷ್ಟೇ ಅಲ್ಲದೆ ‘ಧೀರರಸ’ ಎಂಬ ಇನ್ನೊಂದು ರಸ ಇರುವುದನ್ನೂ ಶೋಧಿಸಿ ವಿಸ್ತಾರವಾಗಿ ಲೇಖನವನ್ನು ಬರೆದು ಅದರ ಹರಹನ್ನು ತೋರಿಸಿಕೊಟ್ಟಿದ್ದಾರೆ. ಕಾವ್ಯಮೀಮಾಂಸೆಯ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಇದೊಂದು ಅಪೂರ್ವ ಶೋಧನೆಯೇ ಆಗಿದೆ. ಆಗಮ, ಧರ್ಮಶಾಸ್ತ್ರ, ವೇದವೇದಾಂತಾದಿ ಅನೇಕ ವಿಷಯಗಳಲ್ಲಿ ಸಾಕಷ್ಟು ಪಾಂಡಿತ್ಯವನ್ನು ಸಂಪಾದಿಸಿಕೊಂಡಿದ್ದಲ್ಲದೆ, ಜ್ಯೋತಿಷ್ಯದಂತಹ ಶಾಸ್ತ್ರದಲ್ಲೂ ಪ್ರವೇಶವನ್ನು ಹೊಂದಿದ್ದಾರೆ. ಕಾವ್ಯ, ನಾಟಕ, ತತ್ತ್ವಶಾಸ್ತ್ರ, ವೇದ, ವೇದಾಂತ, ಧರ್ಮಶಾಸ್ತ್ರ, ಅಲಂಕಾರಶಾಸ್ತ್ರ ಮೊದಲಾಗಿ ಭಾರತೀಯ ಜ್ಞಾನಪರಂಪರೆಯಲ್ಲಿ ಅವರಿಗೆ ಗೊತ್ತಿಲ್ಲದ ವಿಷಯವೇ ಇಲ್ಲವೆಂದರೆ ಅತಿಶಯೋಕ್ತಿಯಲ್ಲ. ಇವುಗಳೆಲ್ಲವುಗಳ ಹಿನ್ನೆಲೆಯಲ್ಲಿ ಹತ್ತಾರು ಸಾವಿರ ಗಂಟೆಗಳಷ್ಟು ಕಾಲದ ಉಪನ್ಯಾಸಗಳನ್ನು ನೀಡಿದ್ದಾರೆ.
ಅಧ್ಯಯನಪೂರ್ಣ ಗ್ರಂಥಕರ್ತ
ಉಪನ್ಯಾಸ, ಕಲಾಪ್ರಯಾಣ, ಅವಧಾನಪ್ರದರ್ಶನ ಮೊದಲಾದ ಲೋಕಾಂತಕಾರ್ಯಗಳ ನಡುವೆ ಏಕಾಂತಕಾರ್ಯವಾಗಿ ಶತಾವಧಾನಿಗಳು ರಚಿಸಿದ ಕೃತಿಗಳೂ ಅಸಂಖ್ಯ! ಅಭಿಜಾತ ಶೈಲಿಯ ಕಾವ್ಯಗಳು, ಕಾದಂಬರಿಗಳು, ಕಥೆಗಳು, ಅನುವಾದ, ನೃತ್ಯರೂಪಕಗಳು, ಗೀತೆಗಳು ಹೀಗೆ ಅವರು ಸಾಧಿಸದ ಪ್ರಕಾರವಿಲ್ಲ. ‘ಮಣ್ಣಿನ ಕನಸು’ ಅವರ ಇತ್ತೀಚಿನ ಮಹಾ-ಕಾದಂಬರಿ. ‘ಪುಟಗಳ ನಡುವಣ ನವಿಲುಗರಿ’ ಕಥಾಸಂಕಲನ. ಪರೋಕ್ಷ, ಹದನು-ಹವಣು, ಕಾವ್ಯಕಲ್ಪ, ಮಾರ್ಗಣ, ಮಂತಣ ಇತ್ಯಾದಿ ಅನೇಕ ಕೃತಿಗಳು ಶತಾವಧಾನಿಗಳ ಹಲವು ವರ್ಷಗಳ ವಿವಿಧ ಅಧ್ಯಯನಪೂರ್ಣ ಲೇಖನಗಳ ಸಂಗ್ರಹಗಳು.
ಮನ್ನಣೆ, ಪುರಸ್ಕಾರಗಳು
ಗಣೇಶ್ ಅವರನ್ನು ಅತೀ ಕಿರಿಯ ವಯಸ್ಸಿನಲ್ಲಿಯೇ ರಾಜ್ಯೋತ್ಸವ ಪ್ರಶಸ್ತಿ ಅರಸಿಕೊಂಡು ಬಂದದ್ದು ವಿಶೇಷವೇನಲ್ಲ. ಅವರಿಗೆ ದೇವುಡು ಅವರ ‘ಮಹಾಬ್ರಾಹ್ಮಣ’ ಕೃತಿಯ ಅನುವಾದಕ್ಕಾಗಿ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ರಾಷ್ಟ್ರಪತಿಗಳು ಕೊಡುವ ಬಾದರಾಯಣ ವ್ಯಾಸ ಪುರಸ್ಕಾರವೇ ಮೊದಲಾಗಿ ಅನೇಕ ಪ್ರಶಸ್ತಿ ಸಂಮಾನಗಳು ಸಂದಿವೆ. ಅವುಗಳಿಗೆ ಕಿರೀಟಪ್ರಾಯವಾಗಿ ಈ ವರ್ಷ ಪದ್ಮ ಭೂಷಣ ಪ್ರಶಸ್ತಿ ಘೋಷಿಸಲಾಗಿದೆ.
(ಲೇಖಕರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ, ಕವಿ, ಕಾದಂಬರಿಕಾರ, ಅನುವಾದಕ. ಕರ್ನಾಟಕದ ಪ್ರಮುಖ ಅಷ್ಟಾವಧಾನಿಗಳಲ್ಲಿ ಒಬ್ಬರು.)
Posted 10/2/2026
Sunday, February 8, 2026
Kengeri Mane, Kengeri Upanagara, Bengaluru
That was Family Grt-together with fun, Laughter and love.