Thursday, July 9, 2026

BHAJAN/SATSANG AT SUNANDI -65

 Thursday, July 9, 2026

Sunandi Oldage Care Centre, Kodige Halli, Bengaluru



Sri Adamaru Ramakrishna Bhat (Parabrahma Vittaladas) , just returned from USA, after spending more than three months at his daughter's residence at Dallas,  eager to see the residents of Sunandi, joined today's Satsang and Bhajan.


Active and healthy residents joined the devotional songs singing  and participated, Sumangali and Pramod.


SUMANGALI

PRAMOD

After few devotional songs, Ramakrishna Bhat gave Upanyasa on achieving success by perseverence, giving example of 116 year old woman climbed more than 3000 steps of Tirumala Betta and had Darshan of Sri Balaji Srinivasa.




The session ended with "SHANKARAYA" mangala song, "JAI JAGADEESHA HARE" aarthi song and distribution of Vihoothi and Prasada.


LOKAA SAMASTHA SUKHINO BHAVANTHU.....

OM SHANTHI....... SHANTHI..... SHANTHI.....

GOD BLESS ALL.


Posted 10/7/2026















Tuesday, July 7, 2026

ಕರ್ನಾಟಕ ಕಲಾ ಸಂಘ - ಗ್ರಂಥಾಲಯ :

 ಶನಿವಾರ, ಜುಲೈ 4, 2026 

ತರಳಬಾಳು ಕೇಂದ್ರ, ಗ್ರಂಥಾಲಯ, ಆರ್. ಟಿ. ನಗರ, ಬೆಂಗಳೂರು. 




ಆರ್. ಟಿ.ನಗರದಲ್ಲಿ ಸಾಹಿತ್ಯ,ಸಂಗೀತ, ಕಲೆ,ನಾಟಕ,ಯಕ್ಷಗಾನಗಳ ಅಭಿಮಾನಿಗಳು ಇದ್ದು ಅವರ ನಿರೀಕ್ಷೆಗೆ ತಕ್ಕಷ್ಟು ಕಾರ್ಯಕ್ರಮಗಳು ನಡೆಯುತ್ತಿಲ್ಲ. ಈ ವಿಷಯದ ಬಗ್ಗೆ ಯೋಚಿಸಿ ಒಂದು ಸಂಘವನ್ನು ರಚಿಸಿ ಕಲಾಭಿಮಾನಿಗಳ ಮನ ಸಂತೋಷಪಡಿಸಲು ಹಿರಿಯರು, ಸಾಹಿತ್ಯ ಪ್ರಿಯರು ಆದ  ಶ್ರೀ ಚಂದ್ರ ಶೇಖರ ಚಡಗರವರು ಉದ್ದೇಶಿಸಿದ್ದು, ಈ ಬಗ್ಗೆ ಕೆಲವರ ಜೊತೆಯಲ್ಲಿ ಈಗಾಗಲೇ ಈ ವಿಷಯವನ್ನು  ಪ್ರಸ್ತಾಪಿಸಿರುತ್ತಾರೆ.


ಶ್ರೀ ಪಾ ಚಂದ್ರಶೇಖರ ಚಡಗ ಮತ್ತು ವೀರಶೇಖರ ಸ್ವಾಮಿಯವರು ಆಯೋಜಿಸಿರುವ ಕಾರ್ಯಕ್ರಮ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ, ಸಂಗೀತ, ನೃತ್ಯ, ಡಾ. ನಾ ಸೋಮೇಶ್ವರ ಅವರಿಂದ " ಯೋಗ ಮತ್ತು ಆರೋಗ್ಯದ " ಬಗ್ಗೆ ಉಪನ್ಯಾಸ. 




ಡಾ ನಾ ಸೋಮೇಶ್ವರ ಅವರ "ಯೋಗ ಮತ್ತು ಆರೋಗ್ಯ" ಉಪನ್ಯಾಸ ಬಹಳ ಅರ್ಥಪೂರ್ಣವಾಗಿಯೂ , ಉಪಯುಕ್ತವಾಗಿಯೂ ಇತ್ತು. 


 ಮನರಂಜನೆಗೆ ಸುಂದರವಾದ ನೃತ್ಯ ಕಾರ್ಯಕ್ರಮವೂ ಆಯೋಜಿಸಲಾಗಿತ್ತು. 



ಆರ್. ಟಿ ನಗರದ "ನಗೆ ಕೂಟ" ದ  ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮಕ್ಕೆ ಮೆರುಗನ್ನು ತಂದಿತ್ತು. 
ಮಧ್ಯಾಹ್ನದ ನಂತರ ವೈ. ವಿ. ಗುಂಡೂ ರಾವ್ ಮತ್ತು ನರಸಿಂಹ ಮೂರ್ತಿ ಅವರಿಂದ ಹಾಸ್ಯ ಭಾಷಣಗಳು ಎಲ್ಲರನ್ನೂ ಮನರಂಜಿಸಿದವು.  

ಎಮ್. ಎಸ್. ನರಸಿಂಹ ಮೂರ್ತಿ 


ವೈ. ವಿ. ಗುಂಡೂ ರಾವ್ 


ವೀರಶೇಖರ ಸ್ವಾಮಿ ಹಾಗೂ ಚಡಗರಿಗೆ  ಅಭಿನಂದನೆಗಳು. 


Posted  8/7/2026 














     

Monday, July 6, 2026

ಹಿನ್ನೀರ ಓದುಗರ ಒಂದು ಬೈಠಕ್ - ಶೋಭಾ ಸೋಮಯಾಜಿ

 ಶನಿವಾರ. ಜುಲೈ 4, 2026 


ಇಂದು ಹಿನ್ನೀರ ಓದುಗರ ಒಂದು ಬೈಠಕ್ ಕಿಟ್ಟಣ್ಣನ ಮನೆಯ ಲೈಬ್ರೆರಿಯಲ್ಲಿ ನಡೆಯಿತು. ಬಹಳ ತಿಂಗಳುಗಳ ನಂತರ ನಡೆದ ಬೈಠಕ್ ಇದು. ನಾವೊಂದು ಏಳೆಂಟು ಜನ ಸೇರಿದ್ದೆವು. ವಿಭಾ ಒಂದು ಐಸ್ ಬ್ರೇಕ್ ಆಕ್ಟಿವಿಟಿ ಮಾಡಿಸಿದ ನಂತರ ನಾವು ನಮಗೆ ಬೇಕಾದ ಪುಸ್ತಕದ ಓದಿನಲ್ಲಿ ತೊಡಗಿಕೊಂಡೆವು. ನಾನು ಕಳೆದ ಹೊಂಗಿರಣೋತ್ಸವದಲ್ಲಿ ಖರೀದಿಸಿದ್ದ ಆದರೆ ಇತ್ತೀಚೆಗೆ ಓದಲು ಪ್ರಾರಂಭಿಸಿದ್ದ ಕರ್ಜಗಿಯವರ “ಈಶಾವಾಸ್ಯ ಉಪನಿಷತ್" ಪುಸ್ತಕವನ್ನು ಓದುವುದರಲ್ಲಿ ತೊಡಗಿಕೊಂಡೆ. ನಾನಿನ್ನೂ ಅದರ ಪೀಠಿಕಾ ಭಾಗವನ್ನು ಓದುತ್ತಿದ್ದೇನೆ ಅಷ್ಟೇ! ಪುಸ್ತಕದ ಪೂರ್ಣ ಒಳಗಿನ್ನೂ ಹೋಗಿಲ್ಲ. ಈ ವೇದ, ಅರಣ್ಯಕ, ಉಪನಿಷತ್ ಬಗ್ಗೆ ಓದಿ ಜೀರ್ಣಿಸಿಕೊಳ್ಳುವುದು ನನಗೆ ಸ್ವಲ್ಪ ಕಷ್ಟ. ಒಂದೊಂದು ಸಲ ಕೆಲವು ಭಾಗಗಳನ್ನು ಎರಡೆರಡು ಸಲ ಓದಬೇಕಾದ ಅಗತ್ಯ ನನಗೆ ಬರುತ್ತದೆ. ಆದರೆ ಅಂತಹ ಓದಿನಲ್ಲೂ ಏನೋ ಸುಖವಿದೆ! ಅದರಲ್ಲಿ ಬರೆದಿರುವ ಎಷ್ಟೋ ವಿಷಯಗಳು ಈ ವಯಸ್ಸಿನಲ್ಲಿ ತುಂಬಾ ಕನೆಕ್ಟ್ ಆಗುತ್ತವೆ. ನಮ್ಮೊಳಗಿರುವ ಗೊಂದಲಗಳಿಗೆ ಅಲ್ಲೆಲ್ಲೋ ಉತ್ತರ ಸಿಗುತ್ತದೆ.

ನಮ್ಮ ಸನಾತನ ಪರಂಪರೆಯ ತತ್ವಮಸಿ - ಅಂದರೆ know thyself - ಇದು ಹೇಳುವುದು ಎಷ್ಟು ಸುಲಭವೋ ಸಾಧಿಸುವುದು ಅಷ್ಟೇ ಕಷ್ಟ ಎನ್ನುವ ಅರಿವು ಈ ಪುಸ್ತಕ ಮೂಡಿಸುತ್ತದೆ. ಆ ಪುಸ್ತಕದಲ್ಲೊಂದು ಸಾಲಿದೆ " ಬಹಳಷ್ಟು ಜನ ತೊಳಲಾಟದಲ್ಲೇ ಆಯುಷ್ಯ ನೀಗುತ್ತಾರೆ”. ಎಷ್ಟು ಸತ್ಯದ ಮಾತಲ್ಲವೆ? ಅಲ್ಲಿ ಇನ್ನೂ ಒಂದು ವಿಷಯ ಬರುತ್ತದೆ “ಧರ್ಮದ ಹುಟ್ಟಿಗೆ ಭೀತಿ ಎಷ್ಟು ಕಾರಣವೋ, ಸೃಷ್ಟಿಯು ಮನುಷ್ಯನಲ್ಲಿ ಪ್ರಚೋದಿಸಿದ ಕುತೂಹಲವೂ ಅಷ್ಟೇ ಕಾರಣ”. ಒಪ್ಪುವ ಮಾತು ತಾನೆ? ನನ್ನನ್ನು ತಟ್ಟಿದ ಇನ್ನೊಂದು ಸಾಲೆಂದರೆ" ಸತ್ಯದ ಅನ್ವೇಷಣೆ ವಸ್ತುನಿಷ್ಠವಾದಾಗ ವಿಜ್ಞಾನವಾಯಿತು, ಭಾವನಿಷ್ಠವಾದಾಗ ಸಾಹಿತ್ಯ ಮತ್ತು ಕಲೆಯಾಯಿತು….” ಈ ಪುಸ್ತಕದ ಪೀಠಿಕೆಯಲ್ಲಿ ವೇದದ ಉಗಮ, ವೇದದ ಮೂಲ ಉದ್ದೇಶ, ಜೀವನದ ಅರ್ಥ, ನಾನು ಯಾರು, ನಾನೇಕೆ ಇಲ್ಲಿಗೆ ಬಂದಿದ್ದೇನೆ ಎನ್ನುವಂತಹ ತಾತ್ವಿಕ ವಿಷಯಗಳು, ಸಂಹಿತೆಗಳು, ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ತುಗಳ ಬಗ್ಗೆ ಸರಳವಾದ ವಿವರಣೆ ಇದೆ.

ವೇದೋಪನಿಷತ್ತುಗಳ ಬಗ್ಗೆ ಅಂತಹ ತಿಳುವಳಿಕೆ ಇಲ್ಲದ ನನ್ನಂತಹವರೂ ಸಹಾ ಅವುಗಳ ಕುರಿತು ಅರಿಯುವಂತೆ, ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಡಲು ಈ ಕೃತಿ ಸಹಾಯಕವಾಗಿದೆ. ಇದರಲ್ಲಿ ದೃಷ್ಟಾಂತ ಕಥೆಗಳಿವೆ, ಪ್ರಸಂಗ - ಪ್ರಹಸನಗಳಿವೆ. ಇದರಿಂದ ಓದು ಸರಳವಾಗುತ್ತದೆ. ವಿಷಯವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತದೆ. ಹುಮ್ಮಸ್ಸಿನಲ್ಲಿ ಈ ಪುಸ್ತಕವನ್ನು ಓದಲು ಪ್ರಾರಂಭಿಸಿ ‘ಪ್ರಾಜ್ಞ’ಳಾಗುವ ಪ್ರಯತ್ನ ಮಾಡುತ್ತಿದ್ದೇನೆ. ಇದೊಂದು ಯಶಸ್ವಿ ಓದಾಗಬಹುದಲ್ಲವೆ?          

Posted 6/7/2026 

Sunday, July 5, 2026

ಸಾಂದೀಪನಿ ಋಗ್ ಶಿಕ್ಷಣದ ವಾರ್ಷಿಕೋತ್ಸವ

 Sunday, June 21, 2026

Dubai Style Creation Hall


ಸಾಂದೀಪನಿ ಋಗ್ ಶಿಕ್ಷಣದ ವಾರ್ಷಿಕೋತ್ಸವ ಹಾಗೂ ವಾಯುಸ್ತುತಿ ವ್ರತ ಸಂಪನ್ನ ಕಾರ್ಯಕ್ರಮದ ಯಶಸ್ವಿ ಸಮಾರೋಪ
ದಿನಾಂಕ 21, ಜೂನ್ 2026 ರಂದು ದುಬೈಯ ಸ್ಮೈಲ್ ಕ್ರಿಯೇಷನ್ ಸಭಾಂಗಣದಲ್ಲಿ ಬೆಳ್ಳಿಗ್ಗೆ ಸಂಕಲ್ಪದೊಂದಿಂಗೆ ಆರಂಭಗೊಂಡ ಪೂಜಾ ವಿಧಿ  ವಿಧಾನ ಕಾರ್ಯಕ್ರಮದಲ್ಲಿ, ವಿಷ್ಣುಪೂಜೆ, ವಿಷ್ಣು ಸಹಸ್ರನಾಮ , ಋಗ್ವೇದ ಸೂಕ್ತ ಪಠಣ , ವಾಯುಸ್ತುತಿ ಪುರಶ್ಚರಣೆ ಹಾಗು ಮಹಾಮಂಗಳಾರತಿ ಒಳಗೊಂಡಿತ್ತು




ಲೋಕಾ ಸಮಸ್ಥಾ ಸುಖಿನೋ ಭವಂತು .. 
ಸಮಸ್ತ ಸನಮಂಗಲಾನಿ ಭವಂತು.. 
ಓಂ ಶಾಂತಿ.. ಶಾಂತಿ.. ಶಾಂತಿ.. 

Posted 6/7/2026









Friday, July 3, 2026

BHAJANE AT SUNANDI OLDAGE CARE - 64

 Thursdaym July 2, 2026

Sunandi OldageCare Centre, KodigeHalli, Bengaluru

Yoga Jayaram, who lives nearby, joined me in today's Bhajan and Satsang at Sunandi Oldage care.




That was a divine" HARI NAAMA SMARANE" session with residents joining with much enthusiasm in participation.




The session ended with Mangala Bhajan, Mangalarathi, Vibhoothi and little prasada.

Lokaa Samasthaa Sukhino Bhavanthu.....

God Bless All,


Posted 4/7/2026












Sunday, June 28, 2026

“ಭಾವನಾತ್ಮಕ ಕುಸಿತ" - SHOBHA SOMAYAJI

 June 28, 2026

“ಭಾವನಾತ್ಮಕ ಕುಸಿತ"


ನನಗೆ ಪ್ರತಿದಿನ ದಿನಪತ್ರಿಕೆಯ ಅಂಕಣ, ವಾರಪತ್ರಿಕೆಯ ಲೇಖನ ಹಾಗೂ ಫೇಸ್ಬುಕ್ ವಾಲ್ ನಲ್ಲಿ ಬರುವ ಲೇಖನಗಳನ್ನು ಓದುವ ಅಭ್ಯಾಸವಿದೆ. ಮೊನ್ನೆ ಯಾವುದೋ ಲೇಖನ ಓದುವಾಗ “ಭಾವನಾತ್ಮಕ ಕುಸಿತ" ಎನ್ನುವ ಪದ ಪ್ರಯೋಗವನ್ನು ನೋಡಿದೆ. ಆ ಪದ ನನ್ನ ಮನಸ್ಸನ್ನು ತಟ್ಟಿ ಬಿಟ್ಟಿತು. ಎಷ್ಟು ಸರಳ ಪದವದು! ಆದರೆ ಎಷ್ಟು ಭಾವನೆಗಳನ್ನು ವ್ಯಕ್ತಪಡಿಸುತ್ತದೆ.


ಎಷ್ಟೇ " ಗಟ್ಟಿ ಮನಸ್ಸಿನ” ವ್ಯಕ್ತಿಯಾದರೂ ಕೂಡಾ “ಭಾವನಾತ್ಮಕವಾಗಿ" ಒಳಗೊಳಗೆ " ಕಲುಕ” ಪಟ್ಟವರು ಇರದೇ ಇರಲು ಸಾಧ್ಯವಿಲ್ಲ. ಎಂತಹುದೇ ವೃತ್ತಿಪರ ಸವಾಲನ್ನು ಧೈರ್ಯದಿಂದ ಎದುರಿಸಬಹುದು; ಆದರೆ ವೈಯಕ್ತಿಕ ಸಂಬಂಧಗಳನ್ನು ನಿರ್ವಹಿಸುವಾಗ ಎದುರಿಸುವ ಸವಾಲುಗಳು ಎಂತಹವರನ್ನೂ ಅಲುಗಾಡಿಸುತ್ತದೆ. ಅಂತಹ ಸಮಯದಲ್ಲಿ ಸಹಜವಾಗಿ ಪ್ರತಿಯೊಬ್ಬರೂ ಭಾವನಾತ್ಮಕವಾಗಿ ದುರ್ಬಲರಾಗುತ್ತಾರೆ.

ಸಂಬಂಧಗಳ ನಿರ್ವಹಣೆಯ ವಿಷಯ ಬಂದಾಗ ಪ್ರತಿಯೊಬ್ಬರೂ ಭಾವನಾತ್ಮಕ ಒತ್ತಡಕ್ಕೆ ಒಳಗಾಗುತ್ತಾರೆ. ಅನ್ನಲೂ ಆಗದೆ, ಅನುಭವಿಸಲೂ ಆಗದೆ ‘ಬಿಸಿ ತುಪ್ಪವನ್ನು ಗಂಟಲಲ್ಲಿ ಇಟ್ಟುಕೊಂಡಂತೆ’ ಅನಿಸಿಕೆ/ಅಭಿಪ್ರಾಯವನ್ನು ವ್ಯಕ್ತಪಡಿಸಲಾಗದೆ ಹಾಗೆಯೇ ಇಟ್ಟುಕೊಳ್ಳುವ ಸಂಕಷ್ಟಕ್ಕೆ ಒಳಗಾಗುತ್ತಾರೆ. ಪ್ರೀತಿಗೆ ಸರಿಯಾದ ಸ್ಪಂದನೆ ಸಿಗದಿದ್ದಾಗಲೂ ಅದು ಒಳಗಿಂದೊಳಗೆ ಭಾವುಕ ವ್ಯಕ್ತಿಗಳ ಮನಸ್ಸಿನ ತಿಳಿಗೊಳವನ್ನು ಕಲುಕುತ್ತದೆ. ಅಂತಹ ಸಮಯದಲ್ಲಿ ಕಾಣುವುದು ಎಲ್ಲವೂ “ ಕಾಮಾಲೆ ಬಂದವನಿಗೆ ಪ್ರಪಂಚವೆಲ್ಲಾ ಹಳದಿಯಾಗಿ ಕಾಣುವಂತೆ" ನಕಾರಾತ್ಮಕವಾಗಿ ಕಾಣುತ್ತದೆ. ‘ಭಾವನಾತ್ಮಕ ಕುಸಿತ’ ಅಂತಹ ಸಂದರ್ಭದಲ್ಲಿ ಅನುಭವಕ್ಕೆ ಬರುತ್ತದೆ. ಅದು ಮಾನಸಿಕ ಬಳಲುವಿಕೆಯೊಂದಿಗೆ ದೈಹಿಕ ಬಳಲುವಿಕೆಯನ್ನು ಉಂಟು ಮಾಡುತ್ತದೆ. ಯಾವ ಕೆಲಸವನ್ನು ಮಾಡುವ ಉತ್ಸಾಹ ಮೂಡದೆ ನಿರುತ್ಸಾಹ ಕಾಡುತ್ತದೆ. ತಾನು ‘ನಿಷ್ಪ್ರಯೋಜಕ’ ಎನ್ನುವ ಭಾವನೆ ಬರುತ್ತದೆ. ಕೋಪ, ಕಿರಿಕಿರಿಯ ಭಾವಗಳು ಉದಿಸುತ್ತವೆ. ಜಗತ್ತನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ಸಂಬಂಧಗಳ ಸಹ್ಯತೆ ಕಡಿಮೆಯಾಗುತ್ತದೆ. ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ.

ನಾವು ಅದೇ ‘ವಲಯ’ದೊಳಗೆ ಮುಂದುವರಿಯಬಾರದು. ಅದರಿಂದ ಹೊರಬರಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು. ಪ್ರೀತಿಪಾತ್ರರೊಡನೆ ಹೆಚ್ಚಿನ ಕಾಲ ಕಳೆಯಬೇಕು. ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬರ ಒತ್ತಡ ನಿರ್ವಹಣೆಯ ಸಾಮರ್ಥ್ಯ ಬೇರೆ ಬೇರೆ ಇರುವ ಕಾರಣ ಸಮಸ್ಯೆ ತೀವ್ರವಾಗಿದೆ ಎಂದೆನಿಸಿದಾಗ ವೈದ್ಯಕೀಯ ನೆರವು ಪಡೆಯಬೇಕಾಗುತ್ತದೆ. “ಭಾವನಾತ್ಮಕ ಕುಸಿತದ” ಅನುಭವವಾದಾಗ ಧೃತಿಗೆಡದೆ ಅದನ್ನು ನಿರ್ವಹಿಸಬೇಕು. ಬದುಕು ಬಂದಂತೆ ಸ್ವೀಕರಿಸುವುದು ಬುದ್ಧಿವಂತರ ಲಕ್ಷಣವಲ್ಲವೆ?!


Posted 29/6/2026

BNNSS ANNUAL DAY - 2026

 Sunday, June 28, 2026

Sri Convention Hall, Bhuvaneshwarinagara, Bengaluru

General body meeting and the Annual Day program of Bhuvaneshwari Nagara Nagarikara Seva Samithi (BNNSS) took place at the above venue with large number of members present.




The program started at 11.45 am with lighting of deepa, and the committe members tgoing to the stage.

The Presidennt Renuka Hegde welcomed all the members and the well wishers.

The president read out the report of 25th Annual General Body meeting:


Smt. Meenakshi Krishna ByreGowda (wife of MLA, Minister Krishna ByreGowda) was the guest of honour, gave a big speech on how Layout can be improved, yougsters involved in development and being good neighbour.


Narendra Babu, Treasurer, presented the financial report for 2025-26 and budget for the new year 2026-27






New President Chandrashekhar

The program included felicitation to the achievers, high marks scored in 10th and 12th Examinations.

BNNSS ಹೊಸ ವ್ಯವಸ್ಥಾಪಕ ಸಮಿತಿಯು ಈ ಕೆಳಗಿನಂತಿರುತ್ತದೆ 

1. ಕಣೇಕಲ್ ಚಂದ್ರಶೇಖರ್ - ಅಧ್ಯಕ್ಷರು

2. ಡಾ.ರಮೇಶ್ - ಉಪಾಧ್ಯಕ್ಷ 

3. ರಾಘವರೆಡ್ಡಿ - ಕಾರ್ಯದರ್ಶಿ 

4. ಅಶ್ವಥ್ ಕುಮಾರ್ - ಜಂಟಿ ಕಾರ್ಯದರ್ಶಿ 

5. ಖಜಾಂಚಿ - ನರೇಂದ್ರ ಬಾಬು


The program concluded with vote of thanks and grand lunch to all.





Posted 28/6/2026











































Saturday, June 27, 2026

SATHOSH ASHWINI : HOME VISIT

 Friday, June 26, 2026

Mara Residences, C V Raman Nagara, Bengaluru

Mom's sister Vijayalakshmi and her husband Ramachandra Bhat were at home, it was time to visit their son Sathosh and daughter-in-law Asshwini in their home.


It was a short visit , went Wuber Taxi at 7 pm and returned by 10.30 pm.



SanthoshAshwini married for four months now and happily living in a nice apartment and both are working.




We had nice food prepared by the couple, chitranna, Tiki and paayasa.

STAY BLESSED.

We returned to Birthimane,  Bhuvaneshwarinagara by 10.30 pm.

Posted 28/6/2026













Thursday, June 25, 2026

BHAJANE AT SUNANDI OLDAGE CARE - 63

 Thursday, June 25, 2026

Sunandi Oldage Care, KodigeHalli, Bengaluru.

Another divine session of Devotional songs and Naamasmarane took place with residents of Sunandi Oldage Care for soothing their body and Mind.




Very happy to see that the residents eagerly waiting to actively participate, sing and join the chorus of singing.


Mr Jatthappa accompnied today for the session,



The session ended with Mangalarathi, Vibhoothi and Laddu prasada, prepared at home.

Lokaa Samastha Sukhino Bhavanthu.....

Om Shanthi..... Shanthi..... Shanthi.....

God Bless All....


Posted 26/6/2026