Friday, September 11, 2026

ಭಜನೆ - ನಾಮ ಸ್ಮರಣೆ

 ಶುಕ್ರವಾರ 11/9/2026 

ವಾಟ್ಸ್ ಅಪ್ ನಿಂದ 


 
1. ಭಜನೆಯಿಂದ ದೈವ ಸಾನಿಧ್ಯ ಹೆಚ್ಚುವುದು         2. ಭಜನೆಯಿಂದ ಜೀವನ ದೃಷ್ಟಿ ಬದಲಾಗುವುದು

3. ಭಜನೆಯಿಂದ ಹೃದಯ ಬಲಗೊಳ್ಳುವುದು          4. ಭಜನೆಯಿಂದ ಚೈತನ್ಯ ಜಾಗೃತವಾಗುವುದು 

5. ಭಜನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು 6. ಭಜನೆಯಿಂದ ದೈಹಿಕ ಬೇನೆಗಳು ದೂರವಾಗುವುದು 

7. ಭಜನೆಯಿಂದ ಮೆದುಳಿಗೆ ಉತ್ತೇಜನವಾಗುವುದು  8. ಭಜನೆಯಿಂದ ಮನಸ್ಸು ಶಾಂತವಾಗುವುದು 

9. ಭಜನೆಯಿಂದ ಕಷ್ಟ ಪರಿಸ್ಥಿತಿಗಳು ಬದಲಾಗುವುದು  10. ಭಜನೆಯಿಂದ ಒತ್ತಡ ಮಾಯವಾಗುವುದು 

11. ಭಜನೆಯಿಂದ ಕೋಪ ಕಡಿಮೆಗೊಳ್ಳುವುದು       12. ಭಜನೆಯಿಂದ ಆತ್ಮಸ್ಥೈರ್ಯ ಹೆಚ್ಚುವುದು 

13. ಭಜನೆಯಿಂದ ಸಮಸ್ಯೆಗಳು ಇಲ್ಲವಾಗುವುದು 14. ಭಜನೆಯಿಂದ ಸ್ವೀಕಾರ ಮನೋಭಾವ ಪ್ರಾಪ್ತಿಯಾಗುವುದು

15. ಭಜನೆಯಿಂದ ಮನಃ ಶಾಂತಿ ದೊರೆಯುವುದು       16. ಭಜನೆಯಿಂದ ತಾಳ್ಮೆ ಉಂಟಾಗುವುದು 

17. ಭಜನೆಯಿಂದ ಬಾಂಧವ್ಯ ವೃದ್ಧಿಸುವುದು          18. ಭಜನೆಯಿಂದ ನಾಯಕತ್ವ ಬೆಳೆಯುವುದು

19. ಭಜನೆಯಿಂದ ಉತ್ತಮ ನಿದ್ರೆ ಬರುವುದು 20. ಭಜನೆಯಿಂದ ಸಂಸ್ಕಾರ ಸಿಗುವುದು

21. ಭಜನೆಯಿಂದ ಸಂತೋಷ ಸಾಧ್ಯವಾಗುವುದು 22. ಭಜನೆಯಿಂದ ಕರ್ಮ ಕಳೆಯುವುದು 

23. ಭಜನೆಯಿಂದ ಪಾಪ ಮರೆಯಾಗುವುದು 24. ಭಜನೆಯಿಂದ ಸಾಮರ್ಥ್ಯ ಹೆಚ್ಚುವುದು 

25. ಭಜನೆಯಿಂದ ದುಷ್ಚಟಗಳು ದೂರವಾಗುವುದು 26. ಭಜನೆಯಿಂದ ಚಂಚಲ ಮನಸ್ಸು ದೂರವಾಗುವುದು 

27. ಭಜನೆಯಿಂದ ಬುದ್ಧಿ ತೀಕ್ಷ್ಣ ವಾಗುವುದು 28. ಭಜನೆಯಿಂದ ಅಹಂ ಕರಗುವುದು 

29. ಭಜನೆಯಿಂದ ಸೃಜನಶೀಲತೆ ವೃದ್ಧಿಸುವುದು 30. ಭಜನೆಯಿಂದ ಮೌಲ್ಯಗಳು ಹೆಚ್ಚುವುದು 

31. ಭಜನೆಯಿಂದ ಆಧ್ಯಾತ್ಮಿಕ ಶಕ್ತಿ ಜಾಗೃತವಾಗುವುದು 32. ಭಜನೆಯಿಂದ ಭಯ ದೂರವಾಗುವುದು 

33. ಭಜನೆಯಿಂದ ಬಂಧುತ್ವ ಬೆಳೆಯುವುದು 34. ಭಜನೆಯಿಂದ ಆರೋಗ್ಯ ವೃದ್ಧಿಸುವುದು 

35. ಭಜನೆಯಿಂದ ತೃಪ್ತಿ ಸಿಗುವುದು 36. ಭಜನೆಯಿಂದ ನಿರ್ಧಾರ ಸ್ಪಷ್ಟವಾಗುವುದು 

37. ಭಜನೆಯಿಂದ ಧನಾತ್ಮಕ ಶಕ್ತಿ ಉಂಟಾಗುವುದು 38. ಭಜನೆಯಿಂದ ವಾತಾವರಣ ಶುದ್ಧಿಯಾಗುವುದು 

39. ಭಜನೆಯಿಂದ ನಕಾರಾತ್ಮಕ ಗುಣಗಳು ದೂರವಾಗುವುದು 40. ಭಜನೆಯಿಂದ ದೈವಿಕ ತರಂಗ ಉಂಟಾಗುವುದು 

41. ಭಜನೆಯಿಂದ ಉಪಟಳಗಳು ದೂರವಾಗುವುದು 42. ಭಜನೆಯಿಂದ ಜಗಳ ಇಲ್ಲವಾಗುವುದು 

43. ಭಜನೆಯಿಂದ ವಿಭಜನೆ ಇಲ್ಲವಾಗುವುದು 44. ಭಜನೆಯಿಂದ ಪ್ರಶಾಂತತೆ ಪ್ರಾಪ್ತಿಯಾಗುವುದು 

45. ಭಜನೆಯಿಂದ ಖಿನ್ನತೆ ಶಮನವಾಗುವುದು 46. ಭಜನೆಯಿಂದ ಆಲೋಚನೆಗಳು ಪರಿವರ್ತನೆಯಾಗುವುದು 

47. ಭಜನೆಯಿಂದ ವಿಶ್ರಾಂತಿ ದೊರೆಯುವುದು 48. ಭಜನೆಯಿಂದ ಪರಮಾತ್ಮನ ಸ್ವಾಮೀಪ್ಯ ಸಾಧ್ಯವಾಗುವುದು 

49. ಭಜನೆಯಿಂದ ಸುಖ ಶಾಂತಿ ನೆಮ್ಮದಿ ಆನಂದ ದೊರೆಯುವುದು 50. ಭಜನೆಯಿಂದ ಪ್ರಾಣಶಕ್ತಿ ಹೆಚ್ಚುವುದು 

51. ಭಜನೆಯಿಂದ ದೇಹದ ಕೋಶ ಗಳು ಬಲಗೊಳ್ಳುವುದು 52. ಭಜನೆಯಿಂದ ಅರಿವು ಹೆಚ್ಚುವುದು 

53. ಭಜನೆಯಿಂದ ಮಾನವ ಸದ್ಗುಣಗಳು ಹೆಚ್ಚುವುದು 54. ಭಜನೆಯಿಂದ ಆಸೆಗಳು ದೂರ ಆಗುವುದು 

55. ಭಜನೆಯಿಂದ ಜ್ಞಾನ ವೃದ್ಧಿಸುವುದು 56. ಭಜನೆಯಿಂದ ಸೃಷ್ಟಿಯ ರಹಸ್ಯ ತಿಳಿಯುವುದು 

57. ಭಜನೆಯಿಂದ ಲೌಕಿಕ ಕಾಮನೆಗಳು ನಾಶವಾಗುವುದು 58. ಭಜನೆಯಿಂದ ಶರಣಾಗತಿ ಭಾವ ಉಂಟಾಗುವುದು

59. ಭಜನೆಯಿಂದ ಜೀವನ ಶೈಲಿ ಬದಲಾಗುವುದು 60. ಭಜನೆಯಿಂದ ದುರ್ಬಲತೆ ದೂರವಾಗುವುದು 

61. ಭಜನೆಯಿಂದ ನಡವಳಿಕೆ ಉತ್ತಮವಾಗುವುದು 62. ಭಜನೆಯಿಂದ ಸತ್ವ ವೃದ್ಧಿಯಾಗುವುದು 

63. ಭಜನೆಯಿಂದ ಧಾರ್ಮಿಕ ಪ್ರಜ್ಞೆ ಜಾಗೃತವಾಗುವುದು 64. ಭಜನೆಯಿಂದ ಸಂಪ್ರದಾಯ ಪ್ರಾಪ್ತಿಯಾಗುವುದು 

65. ಭಜನೆಯಿಂದ ಭಕ್ತಿ ಭಾವ ಮೂಡುವುದು 66. ಭಜನೆಯಿಂದ ಸನ್ಮಾರ್ಗ ದೊರೆಯುವುದು 

67. ಭಜನೆಯಿಂದ ಸಾಂಸ್ಕೃತಿಕ ಉನ್ನತಿ ಸಿಗುವುದು 68. ಭಜನೆಯಿಂದ ಭವ ಬಂಧನ ಕಳೆಯುವುದು 

69. ಭಜನೆಯಿಂದ ದೈವ ಸ್ವರೂಪ ಕಾಣುವುದು 70. ಭಜನೆಯಿಂದ ಜೀವನ ಸಾರ ಅರಿಯುವುದು 

71. ಭಜನೆಯಿಂದ ಗುರು ಕಾರುಣ್ಯ ಸಾಧ್ಯವಾಗುವುದು 72. ಭಜನೆಯಿಂದ ಭೂತ ಬಾಧೆ ಇಲ್ಲ ವಾಗುವುದು 

73. ಭಜನೆಯಿಂದ ಕಾಮ ಕ್ರೋಧಾದಿಗಳು ದೂರವಾಗುವುದು 74. ಭಜನೆಯಿಂದ ಕೃತಜ್ಞತೆ ಭಾವ ಮೂಡುವುದು 

75. ಭಜನೆಯಿಂದ ಭವರೋಗ ನಾಶವಾಗುವುದು 76. ಭಜನೆಯಿಂದ ಅಂತಃಕರಣ  ಶುದ್ಧಿಯಾಗುವುದು 

77. ಭಜನೆಯಿಂದ ವಿವೇಕ ಜಾಗೃತವಾಗುವುದು 78. ಭಜನೆಯಿಂದ ದುಃಸ್ವಪ್ನ ದೂರವಾಗುವುದು 

79. ಭಜನೆಯಿಂದ ಇಷ್ಟಾರ್ಥ ಸಿದ್ದಿ ಯಾಗುವುದು 80. ಭಜನೆಯಿಂದ ವೈರಾಗ್ಯ ಪ್ರಾಪ್ತಿಯಾಗುವುದು

81. ಭಜನೆಯಿಂದ ಅಪೇಕ್ಷೆಗಳು ಇಲ್ಲವಾಗುವುದು 82. ಭಜನೆಯಿಂದ ಬ್ರಹ್ಮ ಜ್ಞಾನ ಉಂಟಾಗುವುದು 

83. ಭಜನೆಯಿಂದ ಸಂಸಾರ ಮೋಹ ದೂರವಾಗುವುದು 84. ಭಜನೆಯಿಂದ ವಿರಕ್ತಿ ಭಾವ ಮೂಡುವುದು 

85. ಭಜನೆಯಿಂದ ಮನಸ್ಸಿನ ಪ್ರವಾಹ ಕಡಿಮೆಯಾಗುವುದು 86. ಭಜನೆಯಿಂದ ಸತ್ಕರ್ಮ ಉಂಟಾಗುವುದು 

87. ಭಜನೆಯಿಂದ ಭಗವತ್ ಪ್ರೇಮ ಹೆಚ್ಚುವುದು 88. ಭಜನೆಯಿಂದ ಏಕಾಂತ ಮೌನ ಸಿದ್ಧಿಸುವುದು 

89. ಭಜನೆಯಿಂದ ಅಸೂಯೆ ಇಲ್ಲ ವಾಗುವುದು 90. ಭಜನೆಯಿಂದ ನಿರ್ವಿಕಾರ ಸ್ಥಿತಿ ಸಿಗುವುದು 

91. ಭಜನೆಯಿಂದ ಜನನ ಮರಣ ಚಕ್ರದ ಬಿಡುಗಡೆ ಸಿಗುವುದು 92. ಭಜನೆಯಿಂದ ಆಯುಷ್ಯ ವೃದ್ಧಿಸುವುದು 

93. ಭಜನೆಯಿಂದ ಶ್ರೇಯಸ್ಸು ಉಂಟಾಗುವುದು 94. ಭಜನೆಯಿಂದ ಮನೋ ವಿಕಾಸ ವಾಗುವುದು 

95. ಭಜನೆಯಿಂದ ಸಮೃದ್ಧಿ ಉಂಟಾಗುವುದು 96. ಭಜನೆಯಿಂದ ಸಕಲ ಸುಕೃತ ಪ್ರಾಪ್ತಿಯಾಗುವುದು

97. ಭಜನೆಯಿಂದ ಕತ್ತಲೆ ಮಾಯವಾಗುವುದು 98. ಭಜನೆಯಿಂದ ಸಕಲ ದುಸ್ಕೃತ ದೂರವಾಗುವುದು

99. ಭಜನೆಯಿಂದ ಸೇವಾ ಮನೋಭಾವ ಬೆಳೆಯುವುದು  

100. ಭಜನೆಯಿಂದ ಸಾಕ್ಷಾತ್ ಭಗವದ್  ಸಾಕ್ಷಾತ್ಕಾರ ಉಂಟಾಗುವುದು.

ಸುನಂದಿ ಹಿರಿಯ ನಾಗರೀಕರ ಆಶ್ರಮ ದಿಂದ.. 


Posted  11/9/2026 



Thursday, September 10, 2026

BHAJANE/SATSANG AT SUNANDI - 74

 Thursday, 10th September 2026

Sunandi Oldage Home, KodigeHalli, Bengaluru.



Myself along with Ramakrishna Bhat continued our weekly Bhajane/Satsang for Elderly residents 0f Sunandi Vraddhashrama.






Mr Bhat in his Upanyasa, against emphasized about the "Naamasmarane",  to do it all the time. The session concluded with Aarathi and  distrbution of Vibhoothi and Prasada, prepared at home.

Lokaa Samasthaa Sukhino Bhavanthu.....

Om Shanthi, Shanthi, Shanthi.....


Posted  11/9/2026





AYURVEDIC THERAPY - KATI BASTI, PADA DHARA

Monday, 7th September 2026

Sunandi Holistic Health Centre, Kodigehalli, Bengaluru

KATI BASTI is a traditional Ayurvedic therapy where warm, medicated herbal oil is retained on the lower back inside a dough reservoir to relieve pain, stiffness, and inflammation.



You lie face down on a massage table, and the lower back is cleaned. A thick dough ring made from black gram flour is placed over your lumbar or sacral spine. 

The warm oil stays on the back for 30 to 45 minutes, soaking deep into the skin, muscles, ligaments, and nerve roots. 

PADA DHARA

Pada Dhara is an Ayurvedic treatment where a warm, continuous stream of medicated oil or herbal decoction is poured specifically over the feet


Practitioners warm the specialized herbal oil to a safe, comfortable temperature. They pour it in a steady, rhythmic stream over the feet and lower ankles for a set time. 

Hopefully my LOMBAR SPINE STENOSIS is improved.


Posted 10/9/2026


SHANTHA SEETHARAMA - SHRADDHANJALI

 Tuesday, September 8, 2026

Bengaluru

SHANTHA SEETHARAMA

From Lakshmi Surya....

Im deeply saddened to inform that Lakshmi’s mother Shantha(85yrs)has attained the lotus feet of lord Narayana today afternoon at Bangalore

Dear All,

Our beloved mother, Smt. Shantha Seetharama’s final rites will be performed tomorrow, 9th September, 2026 in Harishchandra Ghat, Srirampura between 9 AM ~ 9.30 AM

Surya-Lakshmi has been our close Family friends right from our Dubai years. Lakshmi is Bharathanatya Dancer  and Surya is classical singer.


We meet Surya and Lakshmi's several ocassion during  function here and there.



We wish to express our deep condolences, pray God to give strength to family to bear the loss, and may the departed soul REST IN PEACE.

OM SHANTHI.....


Posted 10/9/2026






Monday, September 7, 2026

SHOBHA (60) BIRTHDAY CELEBRATION

 Sunday, September 6, 2026

Shobha Residence, Hongirana School Campus, 

AmteKoppa, Sagara, Shivamogga

Shoobha, D/O Late brother B. Padmanaba Somayaji, celebrating her completing 60 years with family and friends with Music program and grand lunch at her residence.







Vijetha, s/o Shobha, describing the ocassion, said they do not believe in Homa and Havana (Religious ceremony), but rather celebrate the Happy ocassion with family and Friends and well wishers.


The house premises was beatifully decorated with shamiana and stage for Music program,  and singer and Ex-student of Hongirana and Vinay Nadig and co-singer, Apoorva, and Keyboard and Taabla for accompaniement.










Music program continued up to 1 pm and after, when the guests proceeded for grand Lunch at the School Mess Hall. The menu included Poori, Pulav, Holige, Paayasa, along with Saaru, Huli, Palya etc.







We were there in the morning with Shubha-Raghu, after staying overnight at Harsha,The Fern Hotel at Shimogga.

Returned to Bengaluru at 11.30 pm after leaving Hongirana at 4 pm

Tiffin on the way at DhruvaTare Restaurant.

Wishing SHOBHA, good health, happiness and long life.

Shobha's post in Facebook....

ಸೆಪ್ಟೆಂಬರ್ 3ರಿಂದ 6ರವರೆಗೆ ನಡೆದ ನನ್ನ ಅರವತ್ತರ ಹುಟ್ಟುಹಬ್ಬದ ಸಂಭ್ರಮ ನನಗೆ ನಿರೀಕ್ಷೆಗೂ ಮೀರಿದ ಅನುಭವವಾಯಿತು. ಶುಭಾಶಯಗಳ ಸುರಿಮಳೆ, ಉಡುಗೊರೆಗಳು, ಸನ್ಮಾನಗಳು—ಎಲ್ಲವು ನನಗೆ ಸಂತಸ ತಂದರೂ, ನಾನು ಅಷ್ಟಕ್ಕೆಲ್ಲ ಅರ್ಹಳೇ ಎಂಬ ಆತ್ಮಸಂಶಯವೂ ಮನಸ್ಸಿನಲ್ಲಿ ಮೂಡಿತು. ನಾನು ನನ್ನೊಳಗಿನ ಕರೆಗೆ ಓಗೊಟ್ಟು ಕೆಲಸ ಮಾಡಿದ ಶೋಭಾ ಅಷ್ಟೇ; ಮಹಾ ಸಾಧಕಿಯಲ್ಲ. ಆದರೂ ಎಲ್ಲರ ಪ್ರೀತಿ, ಗೌರವ, ಹೊಗಳಿಕೆಗಳು ನನ್ನನ್ನು ಭಾವಪರವಶಳನ್ನಾಗಿಸಿದವು.


ಸೆಪ್ಟೆಂಬರ್ 5ರಂದು ಶಿಕ್ಷಕರ ದಿನದಂದು ನನ್ನ ಬೃಹತ್ ಚಿತ್ರವನ್ನು ಸ್ಟೇಜಿನ ಮೇಲೆ ಕಂಡಾಗ ನಾನು ಕಂಗಾಲಾದೆ. ಇಂತಹ ಆಚರಣೆಗಳನ್ನು ವಿರೋಧಿಸುವವಳಾದರೂ, ಅದರ ಹಿಂದಿನ ಶ್ರಮ ಮತ್ತು ಪ್ರೀತಿಗೆ ಮೌನವಾಗಿ ತಲೆಬಾಗಬೇಕಾಯಿತು. ನನ್ನ ಸಿದ್ಧಾಂತಗಳಿಗೆ ವಿರುದ್ಧವಾಗಿದ್ದರೂ ಆ ಸಂದರ್ಭವನ್ನು ಸ್ವೀಕರಿಸಿ ಎಲ್ಲರ ಮಾತು, ಸನ್ಮಾನಗಳಿಂದ ಭಾವಪರವಶಳಾದೆ. ಎಲ್ಲರ ಸಹಕಾರ ಮತ್ತು ಸಹಯೋಗದಿಂದ ಸಂಸ್ಥೆಯನ್ನು ಕಟ್ಟಿದ್ದು ಸತ್ಯವೆ, ಆದರೆ ಅದು ನಮ್ಮೆಲ್ಲರ ಕನಸಾದ ಮಕ್ಕಳಿಗೆ ಸಂತಸದ ಕಲಿಕೆಯ ವಾತಾವರಣ ನೀಡುವ ಶಾಲೆ ರೂಪಿಸುವ ಪ್ರಯತ್ನ ಮಾತ್ರ. ಆದರೂ ಎಲ್ಲರೂ ನನ್ನನ್ನು ಎತ್ತರದ ಸ್ಥಾನದಲ್ಲಿ ಇಟ್ಟು ನೋಡಿದ ರೀತಿ ನನಗೆ ವಿಸ್ಮಯಕಾರಿಯಾಗಿ ಕಂಡಿತು.
ನನ್ನ ಮಕ್ಕಳಿಬ್ಬರೂ ಸೆಪ್ಟೆಂಬರ್ 6ರಂದು ಆಪ್ತ, ಸರಳ, ಸುಂದರ ಸಮಾರಂಭವನ್ನು ತಮ್ಮದೇ ಖರ್ಚಿನಲ್ಲಿ ಆಯೋಜಿಸಿದ ರೀತಿ ನನಗೆ ಹೆಮ್ಮೆ ತಂದಿತು. ನನ್ನದೇ ಹಳೆಯ ವಿದ್ಯಾರ್ಥಿಗಳಿಬ್ಬರ ಸಂಗೀತ ಸುಧೆ ಎಲ್ಲರ ಮನಸ್ಸನ್ನು ತಣಿಸಿತು. ಆಹ್ವಾನಿತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಅವರ ಪ್ರೀತಿ ಮತ್ತು ಕಾಳಜಿಯನ್ನು ತೋರಿದ ಕ್ಷಣಗಳು ನನಗೆ ಆಶೀರ್ವಾದದಂತೆ ಅನಿಸಿತು.
ನನ್ನ ಬದುಕಿನ ಈ ಹಂತದಲ್ಲಿ, ನನ್ನನ್ನು ಬೆಳೆಸಿದ ಹೊಂಗಿರಣ ಕುಟುಂಬ, ಸ್ನೇಹಿತರು, ಸಂಬಂಧಿಕರು, ವಿದ್ಯಾರ್ಥಿಗಳು—ಎಲ್ಲರಿಗೂ ಹೃದಯಾಂತರಾಳದ ಕೃತಜ್ಞತೆ. ಪಯಣ ಇಲ್ಲಿಗೇ ಮುಗಿದಿಲ್ಲ; ಮುಂದೆ ನಡೆಯುವ ದಾರಿ ಇನ್ನೂ ಇದೆ. ರಾಬರ್ಟ್ ಫ್ರಾಸ್ಟ್ ಹೇಳಿದಂತೆ:
*I have promises to keep,
And miles to go before I sleep.*


Posted 8/9/2026


















Friday, September 4, 2026

ಕೃಷ್ಣ ಮ್ ವಂದೇ ಜಗತ್ ಗುರು

 ಶನಿವಾರ, ಸೆಪ್ಟಂಬರ್ 5, 2026 

ವಾಟ್ಸ್  ಆಪ್  ಮೂಲಕ 













Posted 5/9/2026 












HAPPY BIRTHDAY SHOBHA - 60

 Thursday, September 3, 2026

ಶೋಭಾ 

ಇವತ್ತು ನನಗೆ ಅರವತ್ತು ತುಂಬಿತು. ನನ್ನ ಪ್ರಾಂಶುಪಾಲ ಪದವಿಯಿಂದ ನಿವೃತ್ತಿ ಕೂಡಾ ತಗೊಳ್ಳುತ್ತಿರುವ ಕಾರಣ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿಗಳಿಗೆಲ್ಲರಿಗೂ ನಾನೇ ಒಳ್ಳೆಯ ಊಟ ಹಾಕಿಸಬೇಕೆನ್ನುವ ಯೋಚನೆ ಬಂದಾಗ ನಮ್ಮ ಟ್ರಸ್ಟಿಗಳು ಸಂಸ್ಥೆಯ ವತಿಯಿಂದ ಊಟ ಹಾಕಿಸುವುದಾಗಿ ತೀರ್ಮಾನಿಸಿ ಇವತ್ತು ನೀಚಡಿ ಪ್ರಕಾಶ ಭಟ್ಟರ ಕೈಚಳಕದ ರುಚಿಕರ ಊಟದ ವ್ಯವಸ್ಥೆ ಮಾಡಲಾಯಿತು. ಹುಟ್ಟು ಹಬ್ಬದ ಆಚರಣೆಯ ಬಗ್ಗೆ ಅಷ್ಟೊಂದು ಆಸಕ್ತಿ ಇಲ್ಲದ ನಾನು ಅಸೆಂಬ್ಲಿಗೆ ಬರಬೇಕೆಂದು ಒತ್ತಾಯ ಬಂದರೂ  ನಿರಾಸಕ್ತಿ ತೋರಿಸಿ ಅಸೆಂಬ್ಲಿಗೆ ಹೋಗಲಿಲ್ಲ. ನಂತರದಲ್ಲಿ ನನ್ನ ಯೂಶುವಲ್ ಟೈಮ್ ನಲ್ಲಿ ಶಾಲೆಯ ಕಡೆಗೆ ಹೋದೆ. ಅಲ್ಲಿ ನನಗಾಗಿ ಅನೇಕ ಅಚ್ಚರಿಗಳು ಒಂದರ ಮೇಲೊಂದರಂತೆ ಕಾಯುತ್ತಿದ್ದವು. ಸೆಕ್ಷನ್ ವೈಸ್ ಟೀಚರ್ಸ್ ಬಂದು ನನಗೆ ವಿಶ್ ಮಾಡಿ, ಗಿಫ್ಟ್ ಕೊಟ್ಟರು. ಕ್ಲಾಸ್ ವೈಸ್ ಮಕ್ಕಳ ರೆಪ್ರೆಸೆಂಟೆಟಿವ್ ಗಳು ಬಂದು ಅವರೇ ಕೈಯ್ಯಾರೆ ಮಾಡಿದ, ಅವರ ಭಾವನಾತ್ಮಕ ಬರಹಗಳಿಂದ ತುಂಬಿದ ಬಣ್ಣ ಬಣ್ಣದ ಗ್ರೀಟಿಂಗ್ಸ್ ಗಳನ್ನು ಕೊಟ್ಟರು. ಆ ಪುಟ್ಟ ಪುಟ್ಟ ಬರಹಗಳನ್ನು ಹಾಗೂ ಸಾಲುಗಳನ್ನು ಓದಿದಾಗ “ಮಕ್ಕಳು ನಮ್ಮನ್ನು ಇಷ್ಟೆಲ್ಲಾ ಗಮನಿಸಿ  ಅಸೆಸ್ ಮಾಡ್ತಾರಾ” ಅಂತ ಆಶ್ಚರ್ಯ ಆಯಿತು. ಮನತಟ್ಟುವ ಪ್ರಾಮಾಣಿಕ ಸಾಲುಗಳು ಅವರದಾಗಿದ್ದವು. ಅವರ ಮುಗ್ಧ ಭಾವನೆಗಳು ನನ್ನ ಮನಸ್ಸನ್ನು ಬಹಳ ತಟ್ಟಿದವು. ನಾನು ಬಹಳ ಭಾವಪರವಶಳಾದೆ. ಇಂಗ್ಲಿಷ್ ನಲ್ಲಿ ಹೇಳ್ತಾರಲ್ವಾ overwhelming ಅಂತ ಹಾಗೆ! ನಾನು ಇವು ಯಾವನ್ನೂ ನಿರೀಕ್ಷಿಸಿರಲಿಲ್ಲ. ಹೀಗಾಗಿ ಎಲ್ಲರೂ ತೋರಿಸಿದ ನಿಷ್ಕಪಟ ಪ್ರೀತಿಯನ್ನು ಜೀರ್ಣಿಸಿಕೊಳ್ಳುವುದು ಕಷ್ಟವೆಂದೆನಿಸಿತು.

ಮಧ್ಯಾಹ್ನದ ಊಟದ ಸಮಯದಲ್ಲಿ ಮೆಸ್ ನ ಕಡೆಗೆ ಹೋದಾಗ ಎಲ್ಲರ “ಹ್ಯಾಪಿ ಬರ್ತಡೇ" ಯ ವಿಶ್ ಹಾಗೂ ಕೈಕುಲುಕುವಿಕೆಯಲ್ಲಿ ನಾನು ‘ಕಳೆದು’ ಹೋದೆ ಎನ್ನುವುದು ಸತ್ಯದ ಮಾತು! ನಮ್ಮ ಡ್ರೈವರ್ಸ್ ಆದಿಯಾಗಿ ಎಲ್ಲರಿಂದಲೂ ಉಡುಗೊರೆಗಳು ಹಾಗೂ ಹಾರೈಕೆಗಳು. ಭಾವನೆಗಳು ಉಕ್ಕಿ ಬಂದು ಸುಸ್ತಾದ ಅನುಭವ! ಸಂಜೆ ವಿಭಾ, ಮೇದಿನಿ, ಪುಟ್ಟು, ನಮ್ಮ ಮನೆಯ ಆದ್ಯ - ಆರ್ಯಳ ಜೊತೆ ಮನೆಯಲ್ಲಿ ಕುಣಿದು ಸಂಭ್ರಮಿಸಿದ್ದು ಇವತ್ತಿನ ನನ್ನ ಅರವತ್ತನೇ ಹುಟ್ಟುಹಬ್ಬಕ್ಕೆ ‘ಶುಭ’ ವಿರಾಮವನ್ನು ನೀಡಿತು.(ಮಕ್ಕಳೊಡನೆ ಮಕ್ಕಳಾಗಿರುವುದು ಬಹಳ ರಿಲ್ಯಾಕ್ಸಿಂಗ್ ಅಂತ ನಿಮಗೆ ಗೊತ್ತಾ?) ಇದರ ಮಧ್ಯೆ ಹುಟ್ಟು ಹಬ್ಬದ ಹಾರೈಕೆಯ ಮೆಸೇಜ್ ಗಳು ಹಾಗೂ ಫೋನ್ ಗಳು ಕೂಡಾ ಖುಷಿಯ ಡೋಸ್ ಅನ್ನು ಹೆಚ್ಚಿಸಿದವು ಎಂದು ಹೇಳುವುದರ ಜೊತೆಗೆ ನಾನು ಇಂದು   "ಹಿರಿಯ ನಾಗರಿಕ”ಳ ಪಟ್ಟಕ್ಕೆ ಭಡ್ತಿ ಪಡೆದೆ ಎಂದು ಘೋಷಿಸಲು ಬಯಸುತ್ತೇನೆ!







Posted 4/9/2026

BHAJANE / SATSANG AT SUNANDI - 73

 Thursday, September 3, 2026

Sunandi Oldage Centre, KodigeHalli, Bengaluru.




Our Thursday Bhajane / Satsang program at Sunandi Oldage Care Center took place earnestly with Ramakrishna Bhat (ParaBrahma VittalaDasa) 



Special mention was made about SRI KRISHNA JANMASTAMI, coming the following day, and the Bhajans were sung mostly on SRI KRISHNA.


Aarthi was performed after a short Upanyasa by Bhat about Krishna Janmasthami and abandon KAAMA, KRODHA, MOHA, LOBHA, MADA, MATSARA...to achieve Moksha.

KRISHAM VANDE JAGATH GURU

Vibhoothi and Prasada was distributed . 

Lokaa Samasthaa Sukhino Bhavanthu.....


Posted 4/9/2026













Tuesday, September 1, 2026

"ಮರಣ ಶ್ಲೋಕ"🫠

 Tuesday, September 1, 2026

WhatsApp forwarded

"ಮರಣ ಶ್ಲೋಕ"🫠

ಅನಾಯಾಸೇನ ಮರಣಂ|

ವಿನಾ ದೈನ್ಯೇನ ಜೀವನಮ್ |

ದೇಹಾಂತೇ ತವ ಸಾಯುಜ್ಯಂ 

ದೇಹಿ ಮೇ ಪರಮೇಶ್ವರ ||

🫠ಭಾವಾರ್ಥ:-

"ಹೇ ಪರಮೇಶ್ವರನೇ, ಯಾವುದೇ ಕಷ್ಟ-ನೋವಿಲ್ಲದ ಸುಲಭ ಸಾವು {ಮರಣ} ನನ್ನದಾಗಲಿ, ಯಾರ ಮುಂದೆಯೂ ಕೈಚಾಚದ ಸ್ವಾಭಿಮಾನದ ಬದುಕು {ಜೀವನ}ನನ್ನದಾಗಲಿ ಮತ್ತು ಈ ದೇಹವನ್ನು ಬಿಟ್ಟಮೇಲೆ ಸೀದಾ ನಿನ್ನ ಪಾದ ಸೇರುವ ಭಾಗ್ಯ ನನಗೆ ಸಿಗಲಿ."


🫠, ಯಾವುದಾದರೂ ಪುಣ್ಯಕ್ಷೇತ್ರಕ್ಕೆ ಹೋದಾಗ ದೇವರ ಬಳಿ ಈ ರೀತಿ ಪ್ರಾರ್ಥನೆ ಮಾಡಿ. ಏಕೆಂದರೆ ಮಿಕ್ಕಿದ್ದೆಲ್ಲವನ್ನು ನಮ್ಮ ಯೋಗ್ಯತೆಗೆ ಅನುಸಾರವಾಗಿ ದೇವರು ಕೊಟ್ಟಿದ್ದಾನೆ. ಹೆಚ್ಚಿಗೆ ಕೇಳುವ ಅವಶ್ಯಕತೆ ಇಲ್ಲ ಏಕೆಂದರೆ. ಭಗವಂತನಿಗೆ ಗೊತ್ತು ಯಾರಿಗೆ ಏನು ಕೊಡಬೇಕೆಂದು,✍️👏🚩

🚩 ಭಗವಂತ ಶ್ರೀ ಪರಶುರಾಮ🚩


Posted  1/9/2026