Tuesday, July 21, 2026

ಗ್ರಾಮ ದೇವತೆ - ಶ್ರೀ ಮುತ್ತು ಮಾರಿಯಮ್ಮ - ಹುಣಸೂರು

 ಭಾನುವಾರ, ಜುಲೈ 19, 2026 

ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ - ಹುಣಸೂರು. 



ನಾವು ಶನಿವಾರ ಸಂಜೆ ಹುಣಸೂರಿನಲ್ಲಿ ಮಡದಿ ನಳಿನಿಯ ಸಹೋದರ ಸತೀಶ್ ರಾವ್ ಅವರ ಮನೆಯಲ್ಲಿ  ಇದ್ದು ಮಾರನೇ ದಿನ ಬೆಳಿಗ್ಗೆ ಸ್ನಾನ ಫಲಾಹಾರವನ್ನು ಮುಗಿಸಿ ಹತ್ತಿರದ ಗ್ರಾಮ ದೇವತೆ ಶ್ರೀ ಮುತ್ತು ಮಾರಿಯಮ್ಮನ ಸನ್ನಿಧಾನಕ್ಕೆ ಬಂದೆವು. 



ಕಿರಿದಾದ ರಸ್ತೆ ಯಿಂದ ತೆರಳಬೇಕಾದ ಜಾಗ, ಸುಂದರವಾದ ವಾತಾವರಣ, ಶುಚಿಯಾಗಿ ಇರುವ ಪ್ರಾಂಗಣ ಹಾಗೂ ದೇವತೆ, ಮನಸ್ಸಿಗೆ ಆಹ್ಲಾದಕರ ದೇವಸ್ಥಾನ. 



ಸುತ್ತಲಿನ ಜಾಗ ಕಿರಿದಾಗಿದ್ದರೂ ಹಲವಾರು ದೇವ ದೇವತೆಯರ ವಿಗ್ರಹಗಳು, ಭಕ್ತರನ್ನು ಮುದ ಗೊಳಿಸುವ ಪ್ರಾಂಗಣ, ನಾವೂ ಸ್ವಲ್ಪ ಹೊತ್ತು ವಿರಮಿಸಿ, ಧ್ಯಾನಸ್ತರಾಗಿ ದೇವಿಯ ದರ್ಶನ, ಮಂಗಳಾರತಿ ವೀಕ್ಷಿಸಿ ಅಲ್ಲಿಂದ ನಿರ್ಗಮಿಸಿದೆವು. 



ಹುಣಸೂರು ಪಟ್ಟಣದ ಪ್ರಮುಖ ಗ್ರಾಮದೇವತೆಯು ಶ್ರೀ ಮುತ್ತು ಮಾರಿಯಮ್ಮ (ಶ್ರೀ ಶ್ರೀ ಮುತ್ತು ಮಾರಿಯಮ್ಮನವರು) ಆಗಿದ್ದಾರೆ. ಈ ದೇವಸ್ಥಾನವು ಹುಣಸೂರಿನ ಕಲ್ಕುಣಿಕೆ ಪ್ರದೇಶದಲ್ಲಿದೆ. 

ದೇವಾಲಯದ ವತಿಯಿಂದ ಪ್ರತಿ ವರ್ಷ ಅದ್ಧೂರಿಯಾಗಿ ಕರಗ ಮಹೋತ್ಸವ ಮತ್ತು ಜಾತ್ರಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದು ೫೦ನೇ ವರ್ಷದ ಕರಗ ಮಹೋತ್ಸವಗಳನ್ನು ಕಂಡಿದ್ದು, ಭಕ್ತರು ಅತ್ಯಂತ ಭಕ್ತಿಯಿಂದ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ. 


Posted 21/7/2026 






Monday, July 20, 2026

SEENA AT THE PET BOARDING.

 Sat, Sun, Mon 18, 19, 20th July 2026

As we were going to Hunsur for a visit and to attend a function, Pet Seena was left at the boarding on Saturday 18th July.



Monday, 20th July, midday, we collected him from the boarding and he was happy.



Posted 20/7/2026












ಪಾರಾಯಣ ಪೂಜೆ - ನಿತೀಶ್/ವೈಷ್ಣವಿ

 ಭಾನುವಾರ, ಜುಲೈ 19, 2026 

ಹುಣಸೂರು , ಕರ್ನಾಟಕ 


ಮಡದಿ ನಳಿನೀಯ ಸಹೋದರ ದಿನೇಶ್ ರಾವ್ ಅವರ ಮನೆಯಲ್ಲಿ ಅವರ ಮಗ ಸೊಸೆ , ನಿತೀಶ್, ವೈಷ್ಣವಿ ಅವರು ಆಶಾಡ ಮಾಸದ ವಿಶೇಷವಾದ ಪಾರಾಯಣ ಪೂಜೆಯನ್ನು ಸಂಪನ್ನ ಗೊಳಿಸಿದರು 







ನೆರೆದಿದ್ದ ಬಂಧು ಬಳಗದವರು ಪೂಜೆಯಲ್ಲಿ ಭಾಗವಹಿಸಿ ಶೋಭಾನೆ ಹಾಡು, ವಿಷ್ಣು ಸಹಸ್ರನಾಮ ಪಟಿಸಿ ಕಾರ್ಯಕ್ರಮವನ್ನು ಚಂದಗಾಣಿಸಿದರು . 



ಮಂಗಳಾರತಿಯ ನಂತರ ತೀರ್ಥ, ಪ್ರಸಾದವು ನೆರವೇರಿತು. 
ಭೋಜನದ ವ್ಯವಸ್ತೆಯನ್ನು ರಾಘವೇಂದ್ರ ಸ್ವಾಮಿ ಸಭಾಂಗಣ ದಲ್ಲಿ ಏರ್ಪಡಿಸಲಾಗಿತ್ತು. ವಿಶೇಷ ಊಟ, ಮೈಸೂರು  ಪಾಕ್, ಪಾಯಸ, ಇತ್ಯಾದಿಗಳೊಂದಿಗೆ ಪೂರ್ಣಗೊಂಡಿತು. 

ಸರ್ವೇ ಜನಾಹ ಸುಖಿನೋ ಭವಂತು.....

ಓಂ ಶಾಂತಿ.. ಶಾಂತಿ.. ಶಾಂತಿ.. 


Posted  20/7/2026 


















Sunday, July 19, 2026

HOME VISIT - SATHISH RAO HUNSUR

 Saturday/Sunday 18 -19 July 2026

Sathisha, Nalini's brother, living at Hunsur, recently had knee surgery and is recovering. 



Nalini's sisters Vijaya, Sujatha,and her daughter Dr Smitha (Mittu) came from Udupi to attend a function at another brother Dinesh's house.


Sunday after lunch at Raghavendra Swamy Mutt, we left for Bengaluru.



Ramanagara, returning to Bengaluru

Reached home by 7.30 pm

All well.

Posted 20/7/2026














MYSURU - HOME VISITS

 Saturday, July 18, 2026

Mysuru Home visits

1. Visit to Shama-Abhijith

Short visit to Shama Abhijith in their home at Vidyarayapuram, Mysuru.




on the Expressway near Ramanagara 

After casual talk, and tea & biscuits, we left from the place.

2. Ashwin Pandith/ Shwetha, daughter Jagruthi.


Ashwin /Shwetha were neighbours near our house Birthimane at Bengaluru and they have shifted to Mysuru, staying at Jayanagara, Ashwin is purohith and both they catering for special ocassion.

3. Usha Bopayya at Jayalakshmipurum, Mysuru



Usha Bopayya were longtime family friends, even when Bopayya was there, and now Usha, 85, lives in Aishwarya apartments for some years, her children Ashish, Nitya and Ramya visit them.

From there, we proceeded to Hunsur for night halt.


Posted 20/6/2026














Friday, July 17, 2026

ಕಾಲ ಬದಲಾಗಲಿಲ್ಲವಣ್ಣ -

 ಶನಿವಾರ, ಜುಲೈ 18, 2026 

ಕಾಲ ಬದಲಾಗಲಿಲ್ಲವಣ್ಣ -  ನಾವು ಬದಲಾದೆವಣ್ಣ 



ಕಾಲ ಬದಲಾಗಲಿಲ್ಲ .. ನಾವು ಬದಲಾದೆವಣ್ಣ  - ಅದ್ಬುತವಾದ , ಅರ್ಥಪೂರ್ಣವಾದ ಸಾಹಿತ್ಯ, ಸುಂದರವಾದ ಹಾಡು ಮತ್ತು ವಿಡಿಯೋ....







ಕಾಲ ಬದಲಾಗಲಿಲ್ಲ, ನಾವು ಬದಲಾಗಿದ್ದೆವು .. 



ಖಂಡಿತವಾಗಿಯೂ ನಾವು ಯೋಚಿಸಬೇಕಾದ ವಿಷಯ.. 

Posted  18/7/2026


Thursday, July 16, 2026

BHAJANE/SATSANG AT SUNANDI OLDAGE HOME - 66

 Thursday, July 16, 2026

Sunandi Holistic Oldage Home, Kodigehalli, Bengaluru.

Another divine session with Adamaru Ramakrishna Bhat (Parabrahma Vittaladasa) took place at the Oldage Centre. Number of devotional songs sung by the inmates also.





Those who attend the session find it very soothing and peaceful to their mind, where temporarily forget their pain and agony.




There was Upanyasa by Bhat about the need for "Naamasmarane...." to wash all the sins from the present birth and also from the previous births.


The session ended with "Subramanyam..... " Aarthi song, vibhoothi and Prasada (Kesari baath prepared from Bhat's house).

Lokaa Samasthaa Sukhino Bhavanthu.....

Om Shanthi..... Shanthi..... Shanthi.....


Posted 17/7/2026












Wednesday, July 15, 2026

MAIN VAAPAS AAUNGA - SHOBHA ARTICLE

 ಮಂಗಳವಾರ, ಜುಲೈ 14, 2026 

MAIN VAAPAS AAUNGA



ನಾನು ಹಾಗೂ ನನ್ನ ಮಗಳು ಕಳೆದ ವಾರ ಬೆಂಗಳೂರಿಗೆ ಹೋಗಿ ಮೂರ್ನಾಲ್ಕು ದಿವಸಗಳಿದ್ದು ಬಂದೆವು. ಮುಖ್ಯ ಉದ್ದೇಶ ನಮ್ಮ ಮನೆಯ ಮಗು “ಸರಯೂ" ಜೊತೆಗೆ ಕಾಲ ಕಳೆಯುವುದು; ಅವಳ ಕೇಕೆ, ಕುಸುಗುಟ್ಟುವಿಕೆ, ಹಾಂ ಹೂಂ ಮಾತುಗಳ ನಡುವೆ ಕಳೆದು ಹೋಗುವುದಾಗಿತ್ತು. ಬರೀ ಅಷ್ಟಕ್ಕೆ ನಮ್ಮ ಕೆಲಸ ನಿಲ್ಲದೆ ಅದರ ನಡುವೆ ಒಂದು ಸಿನೆಮಾವನ್ನು ನೋಡಿದ್ದೂ ಆಯಿತು. ಅದು ಇಮ್ತಿಯಾಜ್ ಅಲಿಯ ಹೊಸ ಸಿನೆಮಾ" ಮೇ ವಾಪಾಸ್ ಆವೂಂಗಾ”. ನನ್ನನ್ನು ಗಾಢವಾಗಿ ತಟ್ಟಿದ ಸಿನೆಮಾ ಅದಾಗಿತ್ತು. ಸಿನೆಮಾ ಹಾಲ್ ನಲ್ಲಿ ಇದ್ದವರು ನಲ್ವತ್ತು ಐವತ್ತು ಜನರಿರಬಹುದು. ಸಿನೆಮಾ ಮುಗಿದರೂ ಯಾರೂ ತಮ್ಮ ಸೀಟ್ ಬಿಟ್ಟು ಏಳಲಿಲ್ಲ. ಎಲ್ಲರ ಕಣ್ಣುಗಳಲ್ಲೂ ಕಣ್ಣೀರು ಇಳಿಯುತ್ತಿತ್ತು; ನನ್ನ ಹಾಗೂ ವಿಭಾಳ ಕಣ್ಣುಗಳಲ್ಲೂ ಕೂಡಾ!

ಸ್ವಾತಂತ್ರ್ಯಪೂರ್ವದ ದೇಶ ವಿಭಜನೆಯ ಸಮಯದ ಪ್ರೇಮ ಕಥೆಯದು. ಎಲ್ಲೂ ಯಾವುದರ ವೈಭವೀಕರಣವಿಲ್ಲ. ನಮ್ಮ ಸುತ್ತ ಮುತ್ತ ಸಹಜವಾಗಿ ಕಾಣುವ/ನಡೆಯುವ ರೀತಿಯಲ್ಲಿ ತೆಗೆದ ಚಿತ್ರವದು. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕನೆಕ್ಟ್ ಆಗುವ ಸಿನೆಮಾವದು. ನನಗೆ ಅದರಲ್ಲಿನ ‘ಶುದ್ಧ’ ಪ್ರೀತಿಯ ಭಾವ ಮನ ತಟ್ಟಿತು. ನಾನು ಮೂಲಭೂತವಾಗಿ ಭಾವನಾತ್ಮಕ ವ್ಯಕ್ತಿ. ನನ್ನಲ್ಲಿ ಪ್ರಧಾನವಾಗಿ ಇರುವುದು ಪ್ರೀತಿಯ ಭಾವ. ಹೀಗಾಗಿ ಆ ಸಿನೆಮಾದಲ್ಲಿ ಎಳೆಎಳೆಯಾಗಿ ತೋರಿಸಿದ ಪ್ರೀತಿಯ ಭಾವಬಂಧ ನನ್ನ ಸುಪ್ತ ಮನಸ್ಸನ್ನು ಕಲುಕಿತು ಎಂದರೂ ತಪ್ಪಿಲ್ಲ. ತನ್ನ ಪ್ರೀತಿಯನ್ನು ತನ್ನೊಳಗೇ ಇಟ್ಟುಕೊಂಡು, ಪ್ರಿಯತಮೆಯಿಂದ ದೂರಾದ ನೋವನ್ನು ನುಂಗಿಕೊಂಡು, ತನ್ನವರನ್ನೆಲ್ಲಾ ಕಳೆದುಕೊಂಡು, ತಾನು ಹುಟ್ಟಿ ಬೆಳೆದ ನೆಲದಿಂದ ದೂರಾಗಿ, ನಿರಾಶ್ರಿತನಾಗಿ ಹೊಸ ಜಾಗದಲ್ಲಿ ಹೊಸದಾಗಿ ಯಶಸ್ವಿ ಬದುಕನ್ನು ಕಟ್ಟಿಕೊಂಡು, ಸಾವಿಗೆ ಹತ್ತಿರವಾದರೂ ತನ್ನ ಪ್ರಿಯತಮೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲೋಸುಗ ಈ ಭೌತಿಕ ಜಗತ್ತಿಗೆ ಅಂಟಿಕೊಂಡು, ವಯಸ್ಸು ತೊಂಬತ್ತೈದು ಆಗಿ ಜೀವನ್ಮರಣದ ಅಂಚಿನಲ್ಲಿದ್ದರೂ ಸಾಯಲಾರದೆ ತೊಳಲಾಡುವ ಹಾಗೂ ಕೊನೆಗೂ ಪ್ರೇಮಿಕೆಯ ಭಾವಚಿತ್ರದೆದುರು ತನ್ನ ಮನದ ಮಾತನ್ನು ಅರುಹುತ್ತಾ ಆ ವ್ಯಕ್ತಿ ಪ್ರಾಣ ಬಿಡುವ ಗಳಿಗೆ ಇದೆಯಲ್ಲಾ ಅದು ಎಂತಹ ಕಲ್ಲು ಮನಸ್ಸಿನವರನ್ನೂ ಕರಗಿಸುವಂತಹುದು. ಇದೆಲ್ಲವನ್ನು ಸಹಜವಾಗಿ ತೋರಿಸಿದ ರೀತಿ ಹಾಗೂ ಕಥೆಯ ನಿರೂಪಣೆ ಅದ್ಭುತವಾದದ್ದು. ಪ್ರತಿಯೊಬ್ಬರ ನಟನೆ ಕೂಡಾ ಮನತಟ್ಟುವಂತಹುದು. ಸಂಗೀತ ಆಹ್ಲಾದಕರವಾಗಿ ಮನಸ್ಸಿನ ಒಳಗೆ ಇಳಿಯುವಂತಹುದು. ಸೀನ್ ಬ್ಲಾಕಿಂಗ್ ಹಾಗೂ ಫ್ಲ್ಯಾಶ್ ಬ್ಯಾಕ್ ಟೆಕ್ನಿಕ್ ಅನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲಾಗಿದೆ.

ಪ್ರೀತಿ ಮಾಡುವುದಲ್ಲ; ಅದು ನಮ್ಮೊಳಗೆ ಉದಿಸುವುದು. ಸಾವು ಆಯ್ಕೆಯಲ್ಲ; ಅದು ನಮ್ಮನ್ನು ಹುಡುಕಿಕೊಂಡು ಬಂದಾಗ ಅದನ್ನು ಒಪ್ಪಿಕೊಳ್ಳುವುದು. ಎಂತಹ ಸರಳ ಸತ್ಯಗಳು; ಆದರೆ ಅಷ್ಟೇ ಗಹನವಾದ ವಿಚಾರಗಳಿವು. ಇಂತಹುದನ್ನು ಒಂದು ಸಿನೆಮಾದ ಮೂಲಕ ಅರುಹುವ ಕೆಲಸ ಸುಲಭದ್ದಲ್ಲ. ಆ ಸಿನೆಮಾವನ್ನು ವಿಶ್ಲೇಷಿಸುವ ಸಾಮರ್ಥ್ಯ ನನಗಿಲ್ಲ. ಆದರೆ ನನಗನಿಸಿದ್ದನ್ನು ಬರೆಯುವ ಮನಸ್ಸು ನನಗಿದೆಯಷ್ಟೆ. ಎಲ್ಲರೂ ತಪ್ಪದೇ ಚಿತ್ರಮಂದಿರಕ್ಕೆ ಹೋಗಿ ನೋಡಬೇಕಾದ ಸಿನೆಮಾವದು!

Posted 16/7/2026


MANDAKINI MADHYASTHA - SHRADDHANJALI

 Sunday, July 5, 2026

Neealavara, Udupi Dist.


Sriram Madhyastha, close relative's mother, Mandakini passed away at the age of 90 years and and her UttaraKriya function took place in Gundmi, Saligrama.


Janardhan Hande, Brother Sridhar hande  and others were present for condoling the family, Janardhan Hande's befitting song.

" ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೆ.... " 


May God give Peace and Sadgathi to the departed soul and give strength to the family to bear the loss.

Om Shanthi....


Posted 16/7/2026




Saturday, July 11, 2026

SUGAMA BHAJANE - 51

 Saturday, July 11, 2026

GOOGLE MEET ONLINE

Another session of Sugama Bhajane for month of June/July 2026 took place with devotional singing by all.

HOST: PRASHANTH, SUPRIYA, ANIRUDH at Sharjah


Following members were present for the session and sang devotional songs.

1. Latha, Sudhaker Rao Pejavar from Bengaluru, leaving for USA tonight
2. Pushpa, Madhu from Bengaluru
3. Nalini, Jayarama Somayaji from Bengaluru
4. Ramachandra Udupa at Bengaluru
5. Sudhakar Kandiga at Chennai
6. Ashok, Kalpana, Akashtha at Sharjah
7. Pratima, Raviraj Tantry at Sharjah
8 Ananya, D/O Ashok at Bengaluru
9  Little Anisha at Bengaluru
10 Rajani Ramachandra at Udupi
11. Prashanth, Supriya, Anirudh at Sharjah (Host)

ರಾಮ ಮಂತ್ರವ  ಜಪಿಸೋ .. ಹೇ ಮನುಜಾ - ಜಯರಾಮ ಸೋಮಯಾಜಿ 

ರವಿರಾಜ್ ತಂತ್ರಿ 

ಅಚ್ಚುತಮ್ ಕೇಶವಂ, ರಾಮ ನಾರಾಯಣಂ .. ನಳಿನಿ ಸೋಮಯಾಜಿ 

ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯಾ.. ರವಿರಾಜ್ ತಂತ್ರಿ 




ಕಾಗದ ಬಂದಿದೆ ಕಾಗದ, ಪದುನಾಮನ ಕಾಗದ .. ರಾಮಚಂದ್ರ ಉಡುಪ 


The session ended with "Bhagyada Lakshmi Baramma", Shankaraya, Aarthi song (Jai Jagadisha hare) and Mangala Song.



Aarthi was performed by Prashanth.

Ashok Conveyed greetings to Birthday people and Wedding Anniversary couples.

It was  a divine session with devotional singing by all.

Lokaa Samasthaa Sukhino Bhavanthu....

Om Shanthi.... Shanthi..... Shanthi......


Posted 12/7/2026.