Tuesday, July 28, 2026

ವೀಣಾ ವಾದನ - ಕುಮಾರಿ ಲಹರಿ ಭಟ್

 ಭಾನುವಾರ, ಜುಲೈ 26, 2026 

ತರಳಬಾಳು ಕೇಂದ್ರ ಗ್ರಂಥಾಲಯ, ಆರ್. ಟಿ. ನಗರ, ಬೆಂಗಳೂರು. 

ಶಿವರಾಮ ಕಾರಂತ ವೇದಿಕೆ, ಆರ್. ಟಿ. ನಗರ, ಬೆಂಗಳೂರು ಹಮ್ಮಿ ಕೊಂಡಿದ್ದ ಜುಲೈ ತಿಂಗಳ ಕಾರ್ಯಕ್ರಮದಲ್ಲಿ ಕುಮಾರಿ ಲಹರಿ ಭಟ್ ಅವರ ತಂಡದೊಂದಿಗೆ ವೀಣಾ ವಾದನ ಏರ್ಪಡಿಸಲಾಗಿತ್ತು. 



ವೀಣಾ ವಾದನ ಕಛೇರಿಯಲ್ಲಿ ಮೃದಂಗದಲ್ಲಿ ಗೌತಮ್ ಗೋಪಾಲಕೃಷ್ಣ , ತಾಳ ದಲ್ಲಿ ಸುನಿಧಿ ಅರೇಕೆರಿ ಅವರು ಸಾಥ್ ನೀಡಿದ್ದರು. 


ಸುಮಾರು 50 ನಿಮಿಷಗಳ ಕಾರ್ಯಕ್ರಮವು ಅದ್ಭುತವಾಗಿ ಮೂಡಿ ಬಂದಿತ್ತು. 


ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರ ವರದಿಯಲ್ಲಿ .. 

ನಂತರ ಕುಮಾರಿ ಲಹರಿ ಭಟ್ ಮತ್ತು ತಂಡದವರಾದ ಗೌತಮ್ ಗೋಪಾಲ ಕೃಷ್ಣ, ಸುನಿಧಿ ರವರಿಂದ ವೀಣಾ ವಾದನ ಕಾರ್ಯಕ್ರಮ ಪ್ರಾರಂಭವಾಯಿತು. ದೇವಲೋಕದ ಗಂಗೆ ಭಗೀರಥನ ಮೂಲಕ ಭೂಮಿಗೆ ಇಳಿದು ಬಂದು ನಮ್ಮ ಪಾಪಗಳನ್ನೆಲ್ಲ ತೊಳೆದು ಹೋದಂತಹ ಅನುಭವ ಈ ವೀಣಾ ವಾದನದ ಮೂಲಕ ನಮಗೆ ದೊರಕಿತೇನೋ ಎನ್ನುವ ಅನುಭವ ನಿಜಕ್ಕೂ,ಮಾತಿನ ಎಣಿಕೆಗೆ ಸಿಗಲಾರದು.

ಗಜವದನ ಬೇಡುವೆ ಆದ ನಂತರ ಸಾಮಜವರಗಮನ, ಬಹಳ ಅದ್ಭುತವಾಗಿ ಬಂತು.ಪಿಳಂಗೊವಿಯ ಚೆಲ್ವಾ ಕೃಷ್ಣ ಇಂದು ಹಾಡಿನ  ವೀಣಾ ವಾದನದ ಮೂಲಕ, ಇಳಿದು ಬಂದನೇನೋ ಅನಿಸ್ತಾ ಇತ್ತು..ಬ್ರಹ್ಮಮೊಕ್ಕಟೆ ಪರ ಬ್ರಮ್ಮಮ್ಮೋಕ್ಕಟೆ..ಶಂಭೋ ಸ್ವಯಂಭೋ, ತಾರಕ್ಕ ಬಿಂದಿಗೆ ನಾನೀರಿಗೆ ಹೋಗುವೆ. ಭಾಗ್ಯದ ಲಕ್ಷ್ಮಿ ಬಾರಮ್ಮ. ತಂಬೂರಿ ಮಿಟಿದವ ಮತ್ತೇರಡು ಹಾಡುಗಳನ್ನು ತಮ್ಮ ವೀಣಾ ವಾದನದ ಮುಖಾಂತರ ಪ್ರಸ್ತುತ ಪಡಿಸಿ ನಮ್ಮನ್ನೆಲ್ಲ ಪರಕಾಯ ಪ್ರವೇಶಕ್ಕೆ ಕೊಂಡೋಯ್ದಿದ್ದಾರೆ.. .. ಅಬ್ಬಾ 
ನಿಜಕ್ಕೂ ಸಾರಸ್ವತ ಲೋಕ ಎಲ್ಲಾ ಲೋಕಗಳಿಗಿಂತ ಭಿನ್ನ ಅನ್ನೋದು ಪ್ರತಿಯೊಬ್ಬರ ಅನುಭವಕ್ಕೂ ಬರಬೇಕು.  ಈ ಮೂಲಕ ಇಂತ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಕನ್ನಡಮ್ಮನ ತೇರು ಹೀಗೇ ಸಾಗುತ್ತಿರಲಿ ಅನ್ನುವ ಆಶಯದೊಂದಿಗೆ ಮತ್ತೊಮ್ಮೆ ಕುಮಾರಿ ಲಹರಿ ಭಟ್ ರವರಿಗೆ ಮತ್ತು ಅವರ ತಂಡದವರಿಗೆ ಅತ್ಯಂತ ತುಂಬು ಹೃದಯದಯದಿಂದ ..ಧನ್ಯವಾದಗಳನ್ನ ಅರ್ಪಿಸುತ್ತಿದ್ದೇವೆ. ಕಾರ್ಯಕ್ರಮದ ಅಂತಿಮ ಘಟ್ಟ.. ವಂದನಾರ್ಪಣೆಯೊಂದಿಗೆ ಮುಕ್ತಾಯಗೊoಡಿತು.


ಕುಮಾರಿ ಲಹರಿ ಭಟ್ 

ಗೌತಮ್ ಗೋಪಾಲಕೃಷ್ಣ 

ಕಲಾವಿದರನ್ನು ಶಾಲು, ಹೂ, ಹಾರ ಮತ್ತು ಉಡುಗೊರೆ ಯೊಂದಿಗೆ ಸನ್ಮಾನ ಮಾಡಲಾಯಿತು.
ಕಲಾವಿದರ ಪರಿಚಯ: 
ಕುಮಾರಿ ಲಹರಿ ಭಟ್ 

ಗೌತಮ್ ಗೋಪಾಲಕೃಷ್ಣ 
ಲಹರಿ ಮತ್ತು ತಂಡದವರಿಗೆ ಶಿವರಾಮ ಕಾರಂತ ವೇದಿಕೆಯು ಶುಭವನ್ನು ಹಾರೈಸುತ್ತದೆ. 


Posted 28/7/2026 








 




Monday, July 27, 2026

ಜುಲೈ ತಿಂಗಳ ಕಾರ್ಯಕ್ರಮ - ವಿಶೇಷ ಉಪನ್ಯಾಸ

 ಭಾನುವಾರ, ಜುಲೈ 26, 2026 

ತರಳಬಾಳು ಕೇಂದ್ರ ಗ್ರಂಥಾಲಯ, ಆರ್. ಟಿ. ನಗರ, ಬೆಂಗಳೂರು. 


ಜುಲೈ ತಿಂಗಳ ಶಿವರಾಮ ಕಾರಂತ ವೇದಿಕೆಯ  ಕಾರ್ಯಕ್ರಮದಲ್ಲಿ ಡಾ ರಾಜಶೇಖರ ನಾಗುರ ಅವರು ಅತಿಥಿಗಳಾಗಿ " ಪ್ರಾಚೀನ ಕನ್ನಡ ಸಾಹಿತ್ಯ ಹಾಗೂ ಆಧುನಿಕ ಕನ್ನಡ ಸಾಹಿತ್ಯ ಬೆಳೆದು ಬಂದ ಹಾದಿ" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. 

ಹದಿನೈದು ನಿಮಿಷಗಳ ಕಾಲ ಉಪಹಾರ ಸೇವನೆ, ಮುಖ್ಯ ಅತಿಥಿಗಳ ಆಗಮನ, ಎಲ್ಲವೂ ಸಿದ್ಧವಾಯಿತು. 4.15 ಕ್ಕೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭವಾಯಿತು.
ಮೊದಲಿಗೆ ಮುಖ್ಯ ಅತಿಥಿಗಳಾದ ಡಾ.ಶ್ರೀ ರಾಜಶೇಖರ ನಾಗೂರರನ್ನು ವೇದಿಕೆಗೆ ಆಹ್ವಾನಿಸಲಾಯಿತು.ಜೊತೆಗೆ ನಮ್ಮ ಉಪಾಧ್ಯಕ್ಷರು ಕೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ಕುಮಾರಿ ಅದ್ವಿಕಾ. ಎನ್. ಕೆನ್ ಶ್ರೀ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿಯು ಚಂದದ "ಪಿಳ್ಳoಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ "ಎಂಬ ಪ್ರಾರ್ಥನೆಯನ್ನೂ ಮಾಡುತ್ತ ಕಾರ್ಯಕ್ರಮಕ್ಕೆ ಮೆರುಗು ತಂದು ಕೊಟ್ಟಳು. ನಂತರ ವೇದಿಕೆಯ ಉಪಾಧ್ಯಕ್ಷರಾದ ಶ್ರೀ ವೀರಶೇಖರ ಸ್ವಾಮಿಗಳು ಮುಖ್ಯ ಅತಿಥಿಗಳಿಗೆ ಹಾಗೂ ಸಭೆಗೆ ಸ್ವಾಗತ ಕೋರಿದರು.

ಇದಾದ ಬಳಿಕ, 
ಮುಖ್ಯ ಅತಿಥಿಗಳು ಸಭೆಯನ್ನು ಕುರಿತು ಅತ್ಯಂತ ಹೆಮ್ಮೆಯ ನುಡಿಗಳನ್ನು ಆಡುತ್ತಾ, ತಮಗೆ ಒದಗಿ ಬಂದ ಅವಕಾಶಕ್ಕಾಗಿ ಹಿರಿಯ ಕವಿಮಹಾಶಯರಿಗೆ ವಂದಿಸುತ್ತಾ, ಕಾರಂತರ ನಾಮಸ್ಮರಣೆ ಮಾಡುತ್ತಾ "ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ಆಧುನಿಕ ಕನ್ನಡ ಸಾಹಿತ್ಯ ಬೆಳೆದು ಬಂದ ಹಾದಿ "ಈ ಕುರಿತು ತಮ್ಮ ಅಮೂಲ್ಯವಾದ ನುಡಿಗಳನ್ನು ಹೇಳುತ್ತಾ, ಕಾರ್ಯಕ್ರಮವು ಮತ್ತಷ್ಟು ಕಳೆ ಕಟ್ಟುವಂತೆ ಮಾಡಿದರು..


ರನ್ನ, ಪೊನ್ನ, ಪಂಪನ ಬಗೆಗೆ ಮಾತನಾಡುತ್ತಾ, ಆದಿ ಪುರಾಣ, ಶಾಂತಿ ಪುರಾಣ, ರನ್ನನ ಗಧಾಯುದ್ಧ, ಈ ಕುರಿತು ಅನೇಕ ಹೆಮ್ಮೆಯ ನುಡಿಗಳನ್ನು ಆಡಿದರು. ನವ್ಯ ಸಾಹಿತ್ಯದ ಕುರಿತು ಹೇಳುವಾಗ, ಭಕ್ತಿಪoಥ, ಸಾಮಾಜಿಕ ಚಳುವಳಿಗಾರರಾದ ಬಸವಣ್ಣನವರನ್ನು ಮೊದಲುಗೊಂಡು,ಅನೇಕ ಆಧುನಿಕ ಕವಿಗಳನ್ನು ಕೂಡ ತಮ್ಮ ಮಾತುಗಳಲ್ಲಿ ಸ್ಮರಣಿಸಿ ಕೊಂಡರು.

ಕುವೆಂಪು, ಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಕಾರಂತರು ಹೀಗೆ ಎಲ್ಲರ ಸಾಹಿತ್ಯ ರಚನೆಯ ಪ್ರಾಕಾರಗಳನ್ನು ಕುರಿತು ಹೇಳುತ್ತಾ" ಸಾಹಿತ್ಯವೆನ್ನುವುದು ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಹೇಗೆ ಕಾರ್ಯಸಿದ್ಧಿಯಾಗಿದೆ, ಮತ್ತು ಸಾಹಿತ್ಯವಿಲ್ಲದ ಜೀವನ ಹೇಗೆ ಬರಡಾಗುತ್ತದೆ ಎಂಬುದರ ಕುರಿತು, ಅತ್ಯಂತ ಸ್ವಾರಸ್ಯಕರವಾಗಿ ಮಾತನಾಡಿದರು. ಸುಮಾರು 45 ನಿಮಿಷಗಳ ಕಾಲ ಹೇಗೆ ಹೋಯಿತು,ಎಂಬುದು ತಿಳಿಯಲೇ ಇಲ್ಲ.



ಉಪನ್ಯಾಸದ ನಂತರ ಶ್ರೀ ರಾಜಶೇಖರ ನಾಗುರ ಅವರನ್ನು ಶಾಲು, ಹಾರ, ಹೂಗುಚ್ಚ, ಉಡುಗೊರೆಯೊಂದಿಗೆ ಸನ್ಮಾನಿಸಲಾಯಿತು. 
ತದ ನಂತರ ಕುಮಾರಿ ಲಜಾರಿ ಭಟ್ ಅವರ  "ವೀಣಾ ವಾದನ "   ಮುಂದಿನ ಕಾರ್ಯಕ್ರಮಕ್ಕೆ ವೇದಿಕೆಯನ್ನು ಸಜ್ಜು ಗೊಳಿಸಲಾಯಿತು. 


Posted 28/6/2026





HAPPY BIRTHDAY LAHARI (20)

 Sunday, July 26, 2026

Birthimane, Bhuvaneshwarinagara, Bengaluru.


Grand Daughter Lahari turning 20, was time for celebration, and we were together at Birthimane and Mom prepared a nice jackfruit Cake.


Lahari, plays Veena melodiously after 10 years of learning & practice, and in the evening today, there will be Veena Concert at TaralaBalu Kendra, R T nagara.


HAPPY BIRTHDAY LAHARI, MAY GOD BLESS YOU WITH LOT OF  ACCOMPLISHMENTS AND ACCOLADES.

Posted 27/7/2026






GENERAL BODY MEETING- 2026

 Sunday, July 26, 2026

TaralaBalu Kendra Granthalaya, R,T. Nagara, Bengaluru.

The Annual Genaral Body Meeting of Shivarama Karantha Vedike held  at the  Granthalaya of TaralaBalu Kendra, Bengaluru.


MANJULA BHARGAVI


After the NAADAGEETHE singing, Dr Deepa Phadke, President, Shivarama Karantha Vedike, welcomed the memebrs present and gave an account the accomplishments of the Vedike in the year 2025 - 26.

NAADA GEETHE 

DEEPA PHADKE


Vedike Secretary, Mrs Manjula Bhargavi, informed the achiements in her reposrt, including the programs happened during the year 2025-26, and the YouTube channel containing more tha 35 novels of Shivarama Karntha.

ಎಲ್ಲರಿಗೂ ನಮಸ್ಕಾರ.
ಭಾನುವಾರದ ವಾರ್ಷಿಕ ಮಹಾಸಭೆಯ ಒಂದು ನೋಟ.

"ಯಾರಿಗೂ ಉಪದೇಶ ಮಾಡಬೇಡಿ. ನೀವೇನು ಹೇಳಬೇಕೆಂದಿದ್ದಿರೋ ಹಾಗೆ ಬದುಕಿ ತೋರಿಸಿರಿ "ಎಂಬ ಕಾರಂತರ  ಈ ನುಡಿಯನ್ನು ನೆನೆಯುತ್ತಾ

ಎಲ್ಲರಿಗೂ ನಮಸ್ಕಾರ 

ಶಿವರಾಮ ಕಾರಂತ ವೇದಿಕೆ (ರಿ)
ರವೀಂದ್ರನಾಥ ಟಾಗೋರ್ ನಗರ, 
ಬೆಂಗಳೂರು-560032
ಶಿವರಾಮ ಕಾರಂತ ವೇದಿಕೆಯ 2025-26 ರ ವಾರ್ಷಿಕ ವರದಿಯು ಸಂಜೆ ಮೂರು ಗಂಟೆ ಹದಿನೈದು ನಿಮಿಷಕ್ಕೆ ಸರಿಯಾಗಿ ನಡೆಯಿತು. ಅದಕ್ಕೂ ಮುಂಚೆ,ಪ್ರಪ್ರಥಮವಾಗಿ ನಾಡಗೀತೆಯನ್ನು ಎದ್ದು ನಿಂತು ಗೌರವದೊಂದಿಗೆ ಹಾಡಲಾಯಿತು..
ತದ ನಂತರ ವಾರ್ಷಿಕ ಮಹಾ ಸಭೆ 2025-26.ಈ ಕುರಿತು ಮೊದಲಿಗೆ ಅಧ್ಯಕ್ಷರಾದ ಡಾ. ದೀಪ ಫಡ್ಕೆ ಅವರು ತಮ್ಮ ಮೊದಲ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಆಡುತ್ತ, ನಮ್ಮ ವೇದಿಕೆ ಬೆಳೆದು ಬಂದ ಹಾದಿ, ಹಾಗೂ ಮುಂದಿನ ಪೀಳಿಗೆಯವರು ಕನ್ನಡಮ್ಮನ ಸಾಹಿತ್ಯದ ತೇರನ್ನು ಹೇಗೆ ನಡೆಸಿ ಕೊಂಡು ಹೋಗಬೇಕಿದೆ ಎಂಬುದನ್ನು ಕುರಿತು,ಬಹಳ ಸೊಗಸಾಗಿ ಹೇಳಿದರು. ನಂತರ 
ವೇದಿಕೆಯ ಕಾರ್ಯದರ್ಶಿಯಾಗಿ ನನ್ನ ವರದಿಯನ್ನು ಓದಿದೆನು. 
ಸನ್ಮಾನ್ಯ ಅಧ್ಯಕ್ಷರೇ,
ವೇದಿಕೆಯ ಗೌರವಾನ್ವಿತ ಪದಾಧಿಕಾರಿಗಳೆ ,ನೆರೆದಿರುವ ಸಕಲ ಸದಸ್ಯರೇ,  ಸನ್ಮಿತ್ರರೇ,
ಸುಮಾರು ಮೂವತ್ತು ವರ್ಷಗಳ ಇತಿಹಾಸವಿರುವ ನಮ್ಮ ಶಿವರಾಮ ಕಾರಂತ ವೇದಿಕೆ(ರಿ) ,ಕನ್ನಡ ಸಾಹಿತ್ಯಿಕ ಕಾರ್ಯಕ್ರಮಗಳ ಜೊತೆ ಜೊತೆಗೆ ಕಲೆ ,ಸಂಸ್ಕೃತಿಗಳ ವರ್ಧನೆಗೂ ಮೀಸಲಿಟ್ಟಿದೆ. ಸಂಸ್ಥೆಯು ಸತತವಾಗಿ ಉಪನ್ಯಾಸ, ನಾಟಕ, ಯಕ್ಷಗಾನ, ಮಕ್ಕಳಿಗೆ ಸಂಬಂಧಿಸಿದಂತೆ ರಸಪ್ರಶ್ನೆ,  ಹೀಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತದೆ. ಬೆಂಗಳೂರಿನ ಪ್ರತಿಷ್ಠಿತ  ಸಾಹಿತ್ಯಕ ಸಂಸ್ಥೆ ಎಂದು ಗುರುತಿಸಲ್ಪಟ್ಟಿದ್ದು,  ಬೆಂಗಳೂರು ಉತ್ತರ ಭಾಗದ ಏಕೈಕ ಸಾಹಿತ್ಯ ವೇದಿಕೆ ಎನ್ನಲು ನಮಗೆ ಬಹಳ ಸಂತೋಷವಾಗುತ್ತದೆ. ಈ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಚಂದ್ರ ಶೇಖರ ಚಡಗರವರು  ಈ ವೇದಿಕೆಯ ಏಳಿಗೆಗೆ ಹತ್ತು ಹಲವು ರೀತಿಯಲ್ಲಿ ಕಾರಣರಾದರೆ, ನಮ್ಮ ನಾಡಿನ ಪ್ರಸಿದ್ಧ ಕವಿಗಳು, ಸಾಹಿತಿಗಳು, ವಿಮರ್ಶಕರು, ನಾಟಕಕಾರರು, ಸಂಗೀತಗಾರರು, ವಿದ್ವಾಂಸರು ಬಂದು ವೇದಿಕೆಯ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿರುವುದು, ನಮಗೆ ನಿಜಕ್ಕೂ ಹೆಮ್ಮೆ. ಇನ್ನೂ ಈ ವೇದಿಕೆಯಲ್ಲಿ ಅಧ್ಯಕ್ಷರಾಗಿ,  ಪದಾಧಿಕಾರಿಗಳಾಗಿ, ಗುರುತಿಸಿ ಕೊಂಡು ತಮ್ಮ ತನು ಮನ ಧನಗಳಿಂದ, ನಮ್ಮ ಹೆಮ್ಮೆಯ ಶಿವರಾಮ ಕಾರಂತ ವೇದಿಕೆಯ ಪ್ರತಿ ಮುನ್ನಡೆಗೂ ಕಾರಣರಾದ, ಪ್ರತಿ ಸದಸ್ಯರಿಗೂ ಕೂಡ ಅತ್ಯಂತ ತುಂಬು ಹೃದಯದಿಂದ ಅಭಿನಂದನೆಗಳನ್ನು ಸಲ್ಲಿಸುತ್ತಾ,  
ನಮ್ಮ ಸಂಸ್ಥೆಯ ಕಳೆದ ವಾರ್ಷಿಕ 2025-26 ನೇ ಸಾಲಿನ ಮಹಾಸಭೆ ದಿನಾಂಕ  22. 6. 2025 ರ ಭಾನುವಾರ , ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ತರಳಬಾಳು ಕೇಂದ್ರದ ಗ್ರಂಥಾಲಯ ,2ನೇ ಮಹಡಿ, ಆರ್. ಟಿ. ನಗರ ,ಬೆಂಗಳೂರು-32 ಇಲ್ಲಿ ನಡೆಯಿತು.
2025-26 ರ ವಾರ್ಷಿಕ ವರದಿಯ ವರ್ಷದಲ್ಲಿ ಕೆಳಗೆ ಕಾಣಿಸಿದವರು ಸಂಸ್ಥೆಯ ಏಳಿಗೆಗಾಗಿ ದುಡಿದಿದ್ದಾರೆ.   
ಸಂಸ್ಥಾಪಕರು - ಶ್ರೀ ಪಾ.ಚಂದ್ರಶೇಖರ ಚಡಗ ರವರು
ಅಧ್ಯಕ್ಷರು          - ಡಾ. ದೀಪಾ ಫಡ್ಕೆ
ಗೌರವಾಧ್ಯಕ್ಷರು          - ಶ್ರೀ ಎಸ್.ಆರ್. ವಿಜಯಶಂಕರ
ಉಪಾಧ್ಯಕ್ಷರು - ಡಾ. ಆರ್ .ಆರ್. ಪಾಂಗಾಳ್ ಮತ್ತು ವೀರಶೇಖರ ಸ್ವಾಮಿ
ಕಾರ್ಯದರ್ಶಿ - ಶ್ರೀಮತಿ ಮಂಜುಳಾ ಭಾರ್ಗವಿ
ಕೋಶಾಧಿಕಾರಿಗಳು - ಶ್ರೀ. ಬಿ. ಜಯರಾಮ ಸೋಮಯಾಜಿ
ಕಾರ್ಯಕಾರಿ ಸಮಿತಿಯ ಸದಸ್ಯರು
ಶ್ರೀಮತಿ ಸತ್ಯಭಾಮ ರಂಗೇಗೌಡ
ಶ್ರೀಮತಿ ಅರುಣ ಮಯ್ಯ
ಶ್ರೀಮತಿ ಚೇತನ ಹೆಗಡೆ.
ಶ್ರೀಮತಿ ಸಂಧ್ಯಾ ಮಂಜುನಾಥ್.
ಶ್ರೀ ಸುದೀoದ್ರ 
ಯಕ್ಷಗಾನ ಮತ್ತು ನಾಟಕ ಸಮಿತಿ - ಶ್ರೀ ಕೆ. ಕೃಷ್ಣ ಪ್ರಸಾದ .ಸಂಪನ್ಮೂಲ ಸಮಿತಿ- ಶ್ರೀ ಬಿ.ಎಚ್. ಎಂ. ವೀರಶೇಖರ ಸ್ವಾಮಿ ಮತ್ತು ಶ್ರೀ. ಬಿ.ಜಯರಾಮ ಸೋಮಯಾಜಿ
ಕಾರ್ಯಕಾರಿ ಸಮಿತಿಯ ಸಮಯೋಜಿತ ಸಭೆಗಳ / ಸಂದರ್ಭಕ್ಕನುಗುಣವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತ ಮೇಲ್ಕಂಡ ಅವಧಿಯ ಕಾರ್ಯಕ್ರಮಗಳನ್ನು ರೂಪಿಸಿ , ನಡೆಸಿ ಯಶಸ್ವಿಯಾಗಿರುತ್ತದೆ. ಅದರನ್ವಯ  2024-2025 ರ ವಾರ್ಷಿಕ ಅವಧಿಯ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ ಸಭೆಯ ಮುಂದೆ ಇಡುತ್ತಿದ್ದೇನೆ.  
1. ದಿನಾಂಕ 13 .4. 2025 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ತರಳಬಾಳು ಮಿನಿ ಸಭಾಂಗಣ  ಆರ್.ಟಿ.ನಗರ. ಇಲ್ಲಿ
ಪುಸ್ತಕ ಬಿಡುಗಡೆ, ಪಾಂಗಾಳ ಡಾಕ್ಟ್ರು ಎಂಬ ಕೃತಿ ಬಿಡುಗಡೆಯಾಗಿರುತ್ತದೆ. ಮುಖ್ಯ ಅತಿಥಿಗಳಾಗಿ , ಡಾ. ಪುರುಷೋತ್ತಮ ಬಿಳಿಮಲೆ ಮತ್ತು ಎಸ್. ಆರ್ ವಿಜಯಶಂಕರರವರು  ವೇದಿಕೆಯಲ್ಲಿ  ಉಪಸ್ಥಿತರಾಗಿರುತ್ತಾರೆ. 
2. ದಿನಾಂಕ 18.ಏಪ್ರಿಲ್ 2025, ಶುಕ್ರವಾರ ಮತ್ತು 19 ಶನಿವಾರ ಲಕ್ಷ್ಮೀಶ ತೋಳ್ಪಾಡಿಯವರು ಭಕ್ತಿ ಮತ್ತು ಸಾಹಿತ್ಯ ಎಂಬುದರ ಕುರಿತು ಗಾಂಧೀಭವನ ಕುಮಾರ ಕೃಪಾ ರಸ್ತೆ ಬೆಂಗಳೂರು. ಇಲ್ಲಿಗೆ ಬಂದು ಉಪನ್ಯಾಸವನ್ನು ನೀಡಿರುತ್ತಾರೆ.
3. ದಿನಾಂಕ 8 ರ ಜೂನ್  .2025 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ಪಾಂಚಜನ್ಯ ಸಭಾಂಗಣ. ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ ಎಚ್.ಎಸ್.ವಿ. ನಮನ ಕಾರ್ಯಕ್ರಮದಲ್ಲಿ,ಭಾವಗೀತೆಗಳ ಹರಿಕಾರ ಎಚ್.ಎಸ್.ವೆಂಕಟೇಶ್ ಮೂರ್ತಿಯವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುವ ಕಾರ್ಯಕ್ರಮ ನಡೆದಿರುತ್ತದೆ.  
4. ದಿನಾಂಕ 22.ಜೂನ್ .2025 ಭಾನುವಾರ ಮಧ್ಯಾಹ್ನ 3.00 ಗಂಟೆಗೆ ಸರ್ವ ಸದಸ್ಯರ ಮಹಾ ಸಭೆಯಲ್ಲಿ ವಾರ್ಷಿಕವರದಿಯೊಂದಿಗೆ, ವೇದಿಕೆಯ ಪದಾಧಿಕಾರಿಗಳು, ಮತ್ತು  ಸಮಿತಿಯ ಸದಸ್ಯರು, ಸಾಮಾನ್ಯ ಸದಸ್ಯರು, ಭಾಗವಹಿಸಿರುತ್ತಾರೆ. ಮತ್ತು ಇದೇ ದಿನ ಸಂಜೆ 4 ಗಂಟೆಗೆ ಸರಿಯಾಗಿ ಪಂಜೆ ಮಂಗೇಶ ರಾಯರ ಸಾಹಿತ್ಯ  ಈ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಎಸ್. ಪಿ. ಮಹಾಲಿಂಗೇಶ್ವರ ಭಟ್ ರವರು ಬಂದಿರುತ್ತಾರೆ. ಇದು  ತರಳಬಾಳು ಮಿನಿ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಿರುತ್ತದೆ.
5. ದಿನಾಂಕ 20 ಜುಲೈ ಭಾನುವಾರ 2025. ಸಂಜೆ 4.00 ಗಂಟೆಗೆ ಸ್ಥಳ: ತರಳ ಬಾಳು ಮಿನಿ ಸಭಾಂಗಣ ಆರ್.ಟಿ.ನಗರ. ಇಲ್ಲಿ ಸುಧಿಪುಸ್ತಕ ಬಿಡುಗಡೆ. ಪರಿಚಯ ಡಾ. ಚೇತನ ಹೆಗಡೆ. ಡಾ. ಅನ್ನದಾನೇಶ್ ಹರೀಶ್ , ಜಿ. ವಿ.ರೇಣುಕಾರವರು ಭಾಗವಹಿಸಿರುತ್ತಾರೆ.
6. ದಿನಾಂಕ 21. ಸೆಪ್ಟಂಬರ್ 2025 ಭಾನುವಾರ . ದಾದಾಬಾಯಿ ನವರೋಜಿ ದ್ವಿಶತಮಾನೋತ್ಸವ . ವಿಶೇಷ ಉಪನ್ಯಾಸ ರಘುನಾಥ್ ಕೃಷ್ಣಮಾಚಾರ್. ಸುಧೀಂದ್ರ ಬುದ್ಧಿ . ಕೆ. ಸತ್ಯ ನಾರಾಯಣ ಸಂಜೆ 4.00 ಗಂಟೆಗೆ ಸ್ಥಳ: ತರಳಬಾಳು ಮಿನಿ ಸಭಾಂಗಣ. ಅರ್.ಟಿ.ನಗರ
 7. ದಿನಾಂಕ ನವಂಬರ್ 16 ಭಾನುವಾರ.2025 ಕನ್ನಡ ರಾಜ್ಯೋತ್ಸವ ಆಚರಣೆ  ಉಪನ್ಯಾಸ ಎಚ್. ದುಂಡಿರಾಜ್, ಡಾ. ಸಂಧ್ಯಾ ಹೆಗಡೆ ದೊಡ್ಡಹೊಂಡ. ತರಳ ಬಾಳು ಮಿನಿ ಸಭಾಂಗಣ  
8. ದಿನಾಂಕ 22 .ಮಾರ್ಚ್ 2026 ಭಾನುವಾರ ಕಾರ್ಯಕ್ರಮ ಸಂಜೆ 4.00 ಗಂಟೆಗೆ ಸ್ಥಳ:  ತರಳಬಾಳು ಮಿನಿ ಸಭಾಂಗಣ. ಅರ್.ಟಿ.ನಗರ . ಇಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಸ್ತ್ರೀ ಧ್ವನಿಯಾಗಿ ಮುದ್ದಣ ಮನೋರಮೆ.ಡಾ .ನಾ. ದಾಮೋದರ ಶೆಟ್ಟಿ ಪ್ರೊ. ಆರ್. ಸುನಂದಮ್ಮ ಇವರು ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ. 
9. ಶಿವರಾಮ ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆ ಸುಮಾರು 35 ಕ್ಕೂ ಹೆಚ್ಚು ಕಾದಂಬರಿಗಳು , ಗಣ್ಯರ ಪರಿಚಯ .ಯೂಟ್ಯೂಬ್ ಚಾನೆಲ್ ಈ ಯಶಸ್ವಿ ಕಾರ್ಯಮದಲ್ಲಿ ನಮ್ಮ ಅಧ್ಯಕ್ಷರ ಕಾರ್ಯಕ್ಷಮತೆಯನ್ನು ನಾವೆಲ್ಲರೂ ಮನಃಪೂರ್ತಿ ಸ್ಮರಿಸಲೇ ಬೇಕು.     
ಆತ್ಮೀಯರೇ .
  ಮೇಲ್ಕಂಡ ವಾರ್ಷಿಕ ಅವಧಿಯ ವೇದಿಕೆಯ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ತಮ್ಮೆಲ್ಲರ ಶ್ರಮ , ಶ್ರದ್ಧೆ, ತಮ್ಮ ಆಗಮನ , ಸಾಹಿತ್ಯಾಭಿರುಚಿ, ಜ್ಞಾನಾರ್ಜನೆಯ ಆಳ ಇವೆಲ್ಲವೂ ಇದ್ದೇ ಇದೆ. ಈ ಯಶಸ್ಸಿನ ಕಾರಣೀಕರ್ತರು  ಕೂಡ ತಾವುಗಳೆ ಆಗಿದ್ದಿರಿ. 
ಮೂರು ದಶಕಗಳ ಈ ಸಂಭ್ರಮಾಚರಣೆಯಲ್ಲಿ ಶಿವರಾಮ ಕಾರಂತ ವೇದಿಕೆಯ ಸಂಸ್ಥಾಪಕರಾದ ಪಾ. ಚಂದ್ರಶೇಖರ ಚಡಗ ಸರ್ ರವರ ಆಶಯ,ಅಪ್ಪಣೆ, ಆದರ್ಶ ಮತ್ತು ಸತತ ಮಾರ್ಗದರ್ಶನದಲ್ಲಿ ,ಹಾಗು ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿರುವ ಡಾ.ದೀಪಾಫಡ್ಕೆ ಅವರಿಗೂ, ಗೌರವಾಧ್ಯಕ್ಷರಾದ ಶ್ರೀ ಎಸ್. ಆರ್. ವಿಜಯಶಂಕರ್ ರವರಿಗೂ , ಉಪಾಧ್ಯಕ್ಷರಾದ ವೀರಶೇಖರ ಸ್ವಾಮಿಯವರಿಗೂ, ಎಂದಿನಂತೆ ವೇದಿಕೆಯ ಲೆಕ್ಕಪತ್ರಗಳನ್ನು ಪರಿಶೋಧಿಸಿದ ಯಾವುದೇ ರೀತಿಯ ಶುಲ್ಕ ಪಡೆಯದ  ಶರತ್ ಅಂಡ್.ಕಂಪನಿ ಚಾರ್ಟೆಡ್ ಅಕೌಂಟೆಂಟ್ಸ್ ಇವರಿಗೆ ವೇದಿಕೆ ಅಭಾರಿಯಾಗಿದೆ.
ವೇದಿಕೆಯ ಲೆಕ್ಕಪತ್ರಗಳ ಜವಾಬ್ದಾರಿ ನಿರ್ವಹಿಸುವ ಖಜಾಂಚಿ, ಕೋಶಾಧಿಕಾರಿಗಳು ಆದ  ಶ್ರೀ ಜಯರಾಮ ಸೋಮಯಾಜಿ ಸರ್ ರವರಿಗೂ, ಮತ್ತು ಯೂಟ್ಯೂಬ್ ,ಫೇಸ್ಬುಕ್ ಮಾಧ್ಯಮಗಳ ಮೂಲಕವೂ ವೇದಿಕೆಯ ಕಾರ್ಯಕ್ರಮ ವೀಕ್ಷಿಸಲು ತಾಂತ್ರಿಕ ಸಹಕಾರ ಜವಾಬ್ದಾರಿ ನಿರ್ವಹಿಸಿದ ಪತ್ರಿಕೋದ್ಯಮಿ ಶ್ರೀ ಶಿವ ಸುಬ್ರಮಣ್ಯರವರು, ಸಮಿತಿ ಸದಸ್ಯರು ಶ್ರೀ ಸುದೀoದ್ರ ರವರು,ಎಲ್ಲರಿಗೂ ತುಂಬು ಹೃದಯದಿಂದ ಧನ್ಯವಾದಗಳು.
ಅಷ್ಟೇ ಅಲ್ಲದೇ ತರಳಬಾಳು ಗ್ರಂಥಾಲಯದಿಂದ ಶ್ರೀ ವಿನಾಯಕ ದೇವಸ್ಥಾನ ಸಭಾಂಗಣದ ಆಡಳಿತ ಮಂಡಳಿಯ ಸದಸ್ಯರೂ ಹಾಗು ವೇದಿಕೆಯ ಉಪಾಧ್ಯಕ್ಷರಾದ ಶ್ರೀ ವೀರಶೇಖರ ಸ್ವಾಮಿರವರು.ತನು ಮನ ಧನಗಳಿಂದ ವೇದಿಕೆಯಲ್ಲಿ ಅದ್ಧೂರಿ ಯಕ್ಷಗಾನ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುವ ಡಾ. ಪಾಂಗಾಳ್ ಸರ್ ರವರಿಗೂ ನಮ್ಮ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
 ನಾವೆಲ್ಲರೂ ಒಂದೇ ಮನುಜ ಮತ ಒಂದೆ  ಒಗ್ಗಟ್ಟಿನಲ್ಲಿ ಬಲವಿದೆ. ಎನ್ನುವಂತೆ ನೀವಿಲ್ಲದೇ ಯಾವ ಕಾರ್ಯಕ್ರಮಗಳಿಗೂ ಕಳೆ ಇರುವುದಿಲ್ಲ .ಪ್ರತಿ ಕಾರ್ಯಕ್ರಮದ ಹಿಂದೆ  ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರತಿಯೊಬ್ಬರ ಪಾತ್ರಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಇದ್ದುದ್ದನ್ನು ನಾವು ಕಾಣಬಹುದು.ಸಮಿತಿಯ ಪ್ರತಿ ಸದಸ್ಯರಿಗೂ ಕೂಡ ನಾನು ವಂದನೆಗಳನ್ನು ಸಲ್ಲಿಸುತ್ತೇನೆ. 
ಒಂದು ವಿದಾಯವು ಮರು ಹುಟ್ಟಿಗೆ ಕಾರಣ .ಒಂದು ಅಸ್ತಂಗತ ಒಂದು ಉದಯಕ್ಕೆ ಕಾರಣ ಎಂದು ಹೇಳುತ್ತಾ,  ಈ ವರ್ಷವೂ ಕೆಲವು ಅಮೂಲ್ಯರನ್ನು ವೇದಿಕೆ ಕಳೆದು ಕೊಂಡಿತು .ಅಂಥವರಲ್ಲಿ ನಮ್ಮ ವೇದಿಕೆಯ ಸದಸ್ಯರಲ್ಲಿ ಒಬ್ಬರಾದ  ಶ್ರೀ ಕೆ. ರಮೇಶ್ ಗೋಟರವರು 15.9.2025.ರಂದು ದೈವಾಧೀನರಾಗಿರುತ್ತಾರೆ. ಅವರಿಗೆ ನಮ್ಮ ಶ್ರದ್ಧಾಂಜಲಿಗಳು.  
ಒಂದು ನಿಮಿಷದ ಮೌನ ಆಚರಣೆಯ  ನಂತರ ಶ್ರೀ ಪಾ ಚಂದ್ರಶೇಖರ ಚಡಗರು ಅಗಲಿದ ರಮೇಶ್ ಗೋಟ ಅವರಿಗೆ ನುಡಿ ನಮನವನ್ನು ಸಲ್ಲಿಸಿದರು.  
ಬೇಂದ್ರೆ ಅಜ್ಜಾರ  ನುಡಿಯಂತೆ ಹುಸಿ ನಗುತ ಬಂದೇವ, ನಸು ನಗುತಾ ಬಾಳೋಣ, ತುಸು ನಗುತ ತೆರಳೋಣ, ಬಡ ನೂರು ವರುಷಾನ, ಹರುಷಾದಿ ಕಳೆಯೋಣ ಯಾಕಾರೆ ಕೆರಳೋಣ ಎಂಬ ಸಾಲುಗಳನ್ನು ನೆನೆಯುತ್ತಾ.
ಎಲ್ಲರಿಗೂ ತುಂಬೊಲವಿನ ಧನ್ಯವಾದಗಳು.
ಮಂಜುಳಾ ಭಾರ್ಗವಿ 
ಕಾರ್ಯದರ್ಶಿ 




Treasurer of the Vedike, Jayarama Somayaji presented the report of financial transaction of Shivarama Karantha Vedike, for the year 2025 - 26. audited by Sri Sharatchandra of Sharat & Company, which was approved by the Committe and in the General Body Meeting.

JAYARAMA SOMAYAJI

ಇದಾದ ನಂತರ ಕೋಶಾಧಿಕಾರಿಗಳಾದ ಜಯರಾಮ ಸೋಮಯಾಜಿ ಯವರು ತಮ್ಮ ಲೆಕ್ಕ ಪತ್ರದ ವರದಿಯ ವಿವರವನ್ನು ಸಭೆಯ ಮುಂದೆ ಇಟ್ಟರು. ಇದನ್ನು ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀಮತಿ ಸತ್ಯಭಾಮ ರoಗೇಗೌಡರು ಅನುಮೋದಿಸಿದರು. ನಂತರ, ಸಂಸ್ಥಾಪಕರಾದ ಚಡಗರು, ವೇದಿಕೆಯ ಬಗ್ಗೆ ಮುಂದಿನ ದಿನಗಳಲ್ಲಿ ನಡೆಯ ಬೇಕಿರುವ ಕಾರ್ಯಕ್ರಮಗಳ ಬಗ್ಗೆ ಮುನ್ನೆಚ್ಚರಿಕೆಯ ನುಡಿಗಳನ್ನು ಹೇಳುತ್ತಾ, ಉಪಾಧ್ಯಕ್ಷರಾದ ಶ್ರೀ ವೀರಶೇಖರ ಸ್ವಾಮಿಯವರ ವಂದನಾರ್ಪಣೆಯೊಂದಿಗೆ ಸಭೆಯು ಮುಂದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿತು.




After some discussion on the report, it was approved.

VEERASHEKHARA SWAMY

Sri Veerashekhara Swamy, Vice President, delivered Vote of thanks.

The meeting concluded for the next program special Upanyasa.


Posted 27/7/2026






















Friday, July 24, 2026

‘ಸ್ನೇಹಿತರ ಕೊರತೆ’ -

 Saturday, July 25, 2026

From WhatsApp


`‘ಸ್ನೇಹಿತರ ಕೊರತೆ’ - ಯೋಚಿಸಬೇಕಾದ ಸಮಯ ಬಂದಿದೆ!

ಈಗ ಜಗತ್ತನ್ನು ಕಾಡುತ್ತಿರುವ ಅತಿದೊಡ್ಡ ಸಮಸ್ಯೆಗಳಲ್ಲಿ ಒಂದು ‘ಸ್ನೇಹಿತರ ಕೊರತೆ’. ನಂಬಲು ಕಷ್ಟವಾದರೂ ಇದು ನಿಜ

ಅಂಕಿಅಂಶಗಳು ಏನು ಹೇಳುತ್ತವೆ?  

1960 ರಲ್ಲಿ ಒಬ್ಬ ವ್ಯಕ್ತಿಗೆ ಸರಾಸರಿ 100 ಆಪ್ತ ಸ್ನೇಹಿತರಿದ್ದರು. 1990 ರ ಹೊತ್ತಿಗೆ ಆ ಸಂಖ್ಯೆ 50 ಕ್ಕೆ ಇಳಿಯಿತು. 2020 ರ ಹೊತ್ತಿಗೆ ಅದು ಕೇವಲ 10 ಕ್ಕೆ ತಲುಪಿತು

ಇನ್ನು ಈಗ? ಒಬ್ಬ ನಿಜವಾದ ಸ್ನೇಹಿತ ಸಿಗುವುದೇ ಕಷ್ಟವಾಗಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ 12% ಜನರಿಗೆ ಹೇಳಿಕೊಳ್ಳುವಂತಹ ಸ್ನೇಹಿತರೇ ಇಲ್ಲವಂತೆ

ಒಂದು ಕಾಲದಲ್ಲಿ ದಿನಕ್ಕೆ ಕನಿಷ್ಠ ಒಂದು ಗಂಟೆ ಸ್ನೇಹಿತರೊಂದಿಗೆ ಮುಖಾಮುಖಿಯಾಗಿ ಕಳೆಯುತ್ತಿದ್ದೆವು. ಈಗ ಅದು 35 ನಿಮಿಷಗಳಿಗೆ ಸೀಮಿತವಾಗಿದೆ. ಸ್ಕ್ರೀನ್ ಮುಂದೆ ಕಳೆಯುವ ಸಮಯ ಹೆಚ್ಚಾಯಿತು, ಮನಸು ಬಿಚ್ಚಿ ಮಾತನಾಡುವ ಜನರ ಸಂಖ್ಯೆ ಕಡಿಮೆಯಾಯಿತು

ಸ್ನೇಹ = ಜೀವನಕ್ಕೆ ಇನ್ಸೂರೆನ್ಸ್.  

ಒಳ್ಳೆಯ ಸ್ನೇಹಿತರು ನಿಜವಾಗಿಯೂ ‘ಲೈಫ್ ಇನ್ಸೂರೆನ್ಸ್’ ಇದ್ದಂತೆ. ಏಕೆಂದರೆ

1. ಆರೋಗ್ಯಕ್ಕೆ ಒಳ್ಳೆಯದು: ಸ್ನೇಹಿತರಿಲ್ಲದ ಏಕಾಂಗಿತನ ದಿನಕ್ಕೆ 20 ಸಿಗರೇಟ್ ಸೇದಿದಷ್ಟೇ ಅಪಾಯಕಾರಿ ಎಂದು ಸಂಶೋಧನೆಗಳು ಹೇಳುತ್ತವೆ. ಒತ್ತಡ, ಡಿಪ್ರೆಶನ್ ಅವರನ್ನು ಆವರಿಸುತ್ತದೆ

2. ಹೃದಯಕ್ಕೆ ಭರವಸೆ: ಒಳ್ಳೆಯ ಸ್ನೇಹಿತರಿರುವವರಲ್ಲಿ ರಕ್ತದೊತ್ತಡ, ಹೃದ್ರೋಗಗಳು ತುಂಬಾ ಕಡಿಮೆ ಬರುತ್ತವೆ  

3. ಚಟುವಟಿಕೆಯ ಜೀವನ: ಸ್ನೇಹಿತರ ಜೊತೆಯಿದ್ದರೆ ಖುಷಿಯಾಗಿರುತ್ತದೆ. ಒಟ್ಟಿಗೆ ವ್ಯಾಯಾಮ ಮಾಡುವುದು, ಆಟವಾಡುವುದು, ಹೊಸ ಕೆಲಸಗಳನ್ನು ಶುರುಮಾಡುವುದು ಸುಲಭವಾಗುತ್ತದೆ. ಅವರ ಒಡನಾಟ ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಸ್ನೇಹ ಎಂದರೆ ಇನ್‌ಸ್ಟಂಟ್ ನೂಡಲ್ಸ್ ಅಲ್ಲ.  

ಸ್ನೇಹ ಸುಮ್ಮನೆ ಹುಟ್ಟುವುದಿಲ್ಲ. ಅದಕ್ಕೆ ‘ಸಮಯ’ ಎಂಬ ಅತಿದೊಡ್ಡ ಹೂಡಿಕೆ ಬೇಕು

ಮನಶಾಸ್ತ್ರಜ್ಞರ ಲೆಕ್ಕದ ಪ್ರಕಾರ

ಒಬ್ಬ ವ್ಯಕ್ತಿಯೊಂದಿಗೆ ಕನಿಷ್ಠ ಪರಿಚಯವಾಗಲು 40 ಗಂಟೆಗಳು ಒಟ್ಟಿಗೆ ಕಳೆಯಬೇಕು

ಅದು ಒಂದು ರೀತಿಯ ಸ್ನೇಹವಾಗಲು ಇನ್ನೂ 90 ಗಂಟೆಗಳು ಬೇಕು 

‘ ಪ್ರಾಣ ಸ್ನೇಹಿತ’ * ಎಂಬ ಹಂತಕ್ಕೆ ತಲುಪಲು ಇನ್ನೂ 40 ಗಂಟೆಗಳು ಬೇಕು  

ಒಟ್ಟು ಸುಮಾರು 170 ಗಂಟೆಗಳು! ಈ ಓಟದ ಜೀವನದಲ್ಲಿ ನಮ್ಮ ಬಳಿ ಅಷ್ಟು ಸಮಯ ಇದೆಯಾ

ಒಮ್ಮೆ ಒಳ್ಳೆಯ ಸ್ನೇಹ ಬೆಳೆದ ನಂತರ ಅದನ್ನು ಉಳಿಸಿಕೊಳ್ಳಲು ಕೂಡ ಪ್ರತಿದಿನ ಸ್ವಲ್ಪ ಸಮಯ ಮೀಸಲಿಡಬೇಕು. ಗಿಡಕ್ಕೆ ನೀರು ಹಾಕಿದಂತೆ, ಸ್ನೇಹಕ್ಕೂ ‘ಮಾತುಗಳು’ ಎಂಬ ನೀರು ಬೇಕು



ಇದು ಸ್ನೇಹವೇ? ಒಮ್ಮೆ ಯೋಚಿಸಿ:

1. ಆಫೀಸ್ ಸ್ನೇಹಗಳು: ನಾವು ‘ಸ್ನೇಹ’ ಎಂದು ಭಾವಿಸುವುದು ಬಹಳಷ್ಟು ಅವಶ್ಯಕತೆಗಳವರೆಗೆ, ಬಾಹ್ಯ ಶುಭಾಶಯಗಳೇ  

2. ಸೋಶಿಯಲ್ ಮೀಡಿಯಾ ಸ್ನೇಹಗಳು: ಫೇಸ್‌ಬುಕ್‌ನಲ್ಲಿ 5000 ಫ್ರೆಂಡ್ಸ್, ವಾಟ್ಸಾಪ್‌ನಲ್ಲಿ 100 ಗ್ರೂಪ್‌ಗಳಿದ್ದರೂ, ಆಪತ್ತಿನಲ್ಲಿ ಸಹಾಯ ಮಾಡುವವರು ಒಬ್ಬರೂ ಇರುವುದಿಲ್ಲ. ಇವು ಬಹಳಷ್ಟು ‘ಕಾಲಕ್ಷೇಪ’ ಮಾತುಗಳೇ

3. ಬಾರ್ & ರೆಸ್ಟೋರೆಂಟ್ ಸ್ನೇಹಗಳು: ಗ್ಲಾಸ್ ಖಾಲಿಯಾಗುವವರೆಗಿನ ಮಾತುಗಳು, ನಗುಗಳು. ಮಾದಕತೆ ಇಳಿದರೆ ಮನುಷ್ಯ ಮಾಯ

ಅಸಲಿ ಸಮಸ್ಯೆ ಎಲ್ಲಿದೆ?  

ಸ್ನೇಹದ ಬಂಧಗಳು ಏಕೆ ಕಡಿದುಕೊಳ್ಳುತ್ತಿವೆ ಎಂದರೆ ಕಾರಣಗಳು ಬಹಳಷ್ಟಿವೆ. ಟೆಕ್ನಾಲಜಿ, ನ್ಯೂಕ್ಲಿಯರ್ ಫ್ಯಾಮಿಲಿಗಳು, ಸ್ಪರ್ಧೆಯ ಜಗತ್ತು... ಆದರೆ ಎಲ್ಲಕ್ಕಿಂತ ದೊಡ್ಡ ಕಾರಣ ಒಂದೇ

“ಸಮಯವಿಲ್ಲ ಮಿತ್ರಮಾ!”

ಹಣ ಸಂಪಾದಿಸುವ ಯಂತ್ರಗಳಂತೆ ಆಗಿಬಿಟ್ಟಿದ್ದೇವೆ. ಬಂಧಗಳನ್ನು ಉಳಿಸಿಕೊಳ್ಳುವುದನ್ನು ಮರೆತಿದ್ದೇವೆ

ಈಗಲಾದರೂ ಎಚ್ಚರಗೊಳ್ಳಿ:

1. ಸಮಯ ಮೀಸಲಿಡಿ: ದಿನದಲ್ಲಿ 15 ನಿಮಿಷವಾದರೂ ಸ್ನೇಹಿತರಿಗೆ ಫೋನ್ ಮಾಡಿ ಮಾತನಾಡಿ. ವಾರದಲ್ಲಿ ಒಮ್ಮೆಯಾದರೂ ಭೇಟಿಯಾಗಿ 

2. ಕ್ವಾಲಿಟಿ ಟೈಮ್ ಕೊಡಿ: ಭೇಟಿಯಾದಾಗ ಫೋನ್ ಪಕ್ಕದಲ್ಲಿಟ್ಟು ಮನಸಿಟ್ಟು ಮಾತನಾಡಿ 

3. ಹೊಸ ಸ್ನೇಹಗಳನ್ನು ಸ್ವಾಗತಿಸಿ: ವಾಕಿಂಗ್‌ಗೆ ಹೋದಾಗ, ಹೊಸ ಕ್ಲಾಸ್‌ಗೆ ಸೇರಿದಾಗ ಜನರೊಂದಿಗೆ ಮಾತು ಬೆಳೆಸಿ

4. ಇರುವ ಸ್ನೇಹಗಳನ್ನು ಕಾಪಾಡಿಕೊಳ್ಳಿ: ಸಣ್ಣಪುಟ್ಟ ಮನಸ್ತಾಪಗಳಿಗೆ ಬೆಲೆಬಾಳುವ ಸ್ನೇಹವನ್ನು ಬಿಟ್ಟುಕೊಡಬೇಡಿ. ‘ಸಾರಿ’, ‘ಥ್ಯಾಂಕ್ಸ್’ ಹೇಳಲು ಹಿಂಜರಿಯಬೇಡಿ

ನೆನಪಿರಲಿ, ಕೊನೆಯ ಉಸಿರಿನವರೆಗೂ ನಮ್ಮೊಂದಿಗೆ ನಡೆಯುವುದು ಬ್ಯಾಂಕ್ ಬ್ಯಾಲೆನ್ಸ್ ಅಲ್ಲ, ಒಳ್ಳೆಯ ಸ್ನೇಹಿತರು ಮಾತ್ರ

ಆದ್ದರಿಂದ ಇಂದಿನಿಂದಲೇ ಶುರುಮಾಡಿ. ನಿಮ್ಮ ಫೋನ್ ಕಾಂಟಾಕ್ಟ್ ಲಿಸ್ಟ್ ತಿರುಗಿಸಿ. ಬಹಳ ಕಾಲದಿಂದ ಮಾತನಾಡದ ಆ ‘ಬೆಸ್ಟ್ ಫ್ರೆಂಡ್’ಗೆ ಒಂದು ಮೆಸೇಜ್ ಮಾಡಿ

ಸ್ನೇಹವನ್ನು ಉಳಿಸಿಕೊಳ್ಳೋಣ. ನಮ್ಮನ್ನು ನಾವು ಕಾಪಾಡಿಕೊಳ್ಳೋಣ.



ಸಂಗ್ರಹ : ಕೃತಂ

Posted 25/7/2026

Thursday, July 23, 2026

BHAJANE/SATSANG AT SUNANDI OLDAGE HOME - 67

 Thursday, July 23, 2026

Sunandi Oldage Home, KodigeHalli, Bengaluru.

Another divine session of Bhajane and Satsang took place to the benefit of residents of Sunandi Oldage Care.




The inmates, at least for sometime forget their vows and pain, and involved in devotional singing.



Sri Ramakrishna Bhat (Parabrahma Vittaladasa) conveyed the importance of reading BHAGAVADDEETHA in young age and Bhagavantana Namasmarane.




The session ended with Mangalarathi, Vibhoothi and Prasada from Bhat's house.

Sarve Janah Sukhino Bhavanthu,

Om Shanthi.... Shanthi..... Shanthi....


Posted 24/7/2026

















 

Tuesday, July 21, 2026

ಮರೆಯಾಗುತ್ತಿರುವ ಹಿರಿಯರ ತಲೆಮಾರು

 ಬುಧವಾರ, ಜುಲೈ 22, 2026 

ಮರೆಯಾಗುತ್ತಿರುವ ಹಿರಿಯರ ತಲೆಮಾರು

ಒಬ್ಬೊಬ್ಬರಾಗಿ ನಮಗೆ ಶಾಶ್ವತ ವಿದಾಯ ಹೇಳುತ್ತಾ ಒಂದು ಅದ್ಭುತ ತಲೆಮಾರು ನಿಧಾನವಾಗಿ ನಮ್ಮಿಂದ ದೂರವಾಗುತ್ತಿದೆ.

1. ಊಟ ಮಾಡುವ ಮೊದಲು ಇತರರ ಹಸಿವನ್ನು ಅರಿತ ತಲೆಮಾರು.

2. ಇಕ್ಕಟ್ಟಿನ ಮನೆಗಳಲ್ಲೂ ಅಪಾರ ಪ್ರೀತಿ ಮತ್ತು ಸಂತೋಷದಿಂದ ಬದುಕಿದ ತಲೆಮಾರು.

3. ಜವಾಬ್ದಾರಿಯನ್ನು ಅರಿತ ತಲೆಮಾರು. "ನಾನು" ಎನ್ನುವುದಕ್ಕಿಂತ "ನಾವು" ಎಂದು ಬದುಕಿದ ತಲೆಮಾರು.

4. ಪದವಿಗಳಿಲ್ಲದಿದ್ದರೂ ಜೀವನವನ್ನೇ ಓದಿದ ತಲೆಮಾರು.

5. ಗಡಿಯಾರವಿಲ್ಲದಿದ್ದರೂ ಸಮಯವನ್ನು ಸರಿಯಾಗಿ ಬಳಸಿದ ತಲೆಮಾರು.

6. ಇಂಟರ್ನೆಟ್ ಇಲ್ಲದಿದ್ದರೂ ಜ್ಞಾನವನ್ನು ಸಂಪಾದಿಸಿದ ತಲೆಮಾರು.

7. ಕ್ಯಾಲ್ಕುಲೇಟರ್ ಇಲ್ಲದಿದ್ದರೂ ಲೆಕ್ಕ ಹಾಕಬಲ್ಲ ತಲೆಮಾರು.

8. ಮೊಬೈಲ್ ಫೋನ್‌ಗಳಿಲ್ಲದಿದ್ದರೂ ಸ್ನೇಹ ಮತ್ತು ಮಾತುಕತೆಯಲ್ಲಿ ಕೊರತೆಯಿಲ್ಲದ ತಲೆಮಾರು.

9. ಟಿವಿ ಇಲ್ಲದಿದ್ದರೂ ಸಂತೋಷದಿಂದ ಸಮಯ ಕಳೆಯುತ್ತಿದ್ದ ತಲೆಮಾರು.

10. GPS ಇಲ್ಲದಿದ್ದರೂ ಗುರಿಯನ್ನು ನಿಖರವಾಗಿ ತಲುಪಿದ ತಲೆಮಾರು.

11. ತಂತ್ರಜ್ಞಾನವಿಲ್ಲದಿದ್ದರೂ ಸುಖ-ಸಂತೋಷದಿಂದ ಬದುಕಿದ ತಲೆಮಾರು.

12. ಎಸಿ ಅಥವಾ ಕೂಲರ್ ಇಲ್ಲದಿದ್ದರೂ ತೆರೆದ ಗಾಳಿಯಲ್ಲಿ ಸುಖವಾಗಿ ನಿದ್ರಿಸಿದ ತಲೆಮಾರು.

13. ಮಿನರಲ್ ವಾಟರ್ ಬದಲು ಬಾವಿ ಅಥವಾ ಕೆರೆಯ ನೀರು ಕುಡಿದು ಆರೋಗ್ಯವಾಗಿ ಬದುಕಿದ ತಲೆಮಾರು.

14. ಪಿಜ್ಜಾ, ಬರ್ಗರ್ ಇಲ್ಲದೇ ಅತ್ತಿ ಹಣ್ಣು,ಮಿಠಾಯಿ, ಮಂಡಕ್ಕಿ ಮುಂತಾದ ಸರಳ ಆಹಾರಗಳಲ್ಲಿ ಸಂತೋಷ ಕಂಡ ತಲೆಮಾರು.

15. ರಾತ್ರಿ ಮನೆಯ ಮುಂಭಾಗದಲ್ಲಿ ಕುಳಿತು ಕಥೆ ಹೇಳುತ್ತಾ ಕಾಲ ಕಳೆಯುತ್ತಿದ್ದ ತಲೆಮಾರು.

16. ಆರು ವರ್ಷದವರೆಗೆ ಮಕ್ಕಳ ಬಾಲ್ಯವನ್ನು ಆಟ-ಪಾಟಗಳಿಂದ ತುಂಬಿಸಿದ ತಲೆಮಾರು.

17. ನಂತರ ಉಚಿತ ಸರ್ಕಾರಿ ಶಾಲೆಗಳಲ್ಲಿ ತಾಯಿನುಡಿಯಲ್ಲಿ ಶಿಕ್ಷಣ ನೀಡಿ, ಮಕ್ಕಳು ಹಿಂದೀ ಮತ್ತು ಆಂಗ್ಲದಲ್ಲೂ ಪಾಂಡಿತ್ಯ ಗಳಿಸುವಂತೆ ಮಾಡಿದ ತಲೆಮಾರು.

18. ಹಲವು ಕಿಲೋಮೀಟರ್ ದೂರವನ್ನೂ ಸುಲಭವಾಗಿ ನಡೆದು ಹೋಗುತ್ತಿದ್ದ ತಲೆಮಾರು.

19. ಶಾಲೆಯಲ್ಲಿ ಶಿಕ್ಷಕರು ತಪ್ಪು ಮಾಡಿದ ಮಗುವಿಗೆ ಹೊಡೆದರೆ, ಮನೆಯಲ್ಲಿ ಮತ್ತಷ್ಟು ಶಿಸ್ತು ಕಲಿಸಿದ ತಲೆಮಾರು.

20. ಬೀದಿ ನಾಟಕ, ತೊಗಲು ಗೊಂಬೆಯಾಟ ಮತ್ತು ಪುರಾಣ ಕಥೆಗಳನ್ನು ಆಸ್ವಾದಿಸಿದ ತಲೆಮಾರು.

21. ಸೆನ್ಸಾರ್ ಅಗತ್ಯವಿಲ್ಲದ ಅರ್ಥಪೂರ್ಣ ಕಪ್ಪು-ಬಿಳಿ ಸಿನಿಮಾಗಳನ್ನು ನೋಡಿದ ತಲೆಮಾರು.

22. ಮನೆಯ ಬಾಗಿಲನ್ನು ರಂಗೋಲಿಯಿಂದ ಅಲಂಕರಿಸಿದ ತಲೆಮಾರು.

23. ಯೋಗ, ಜಿಮ್ ಅಥವಾ ವ್ಯಾಯಾಮ ಕೇಂದ್ರಗಳಿಲ್ಲದೆ ಕಷ್ಟಪಟ್ಟು ದುಡಿದು, ಬೆವರು ಸುರಿಸಿ ದೀರ್ಘಾಯುಷ್ಯ ಪಡೆದ ತಲೆಮಾರು.

24. ಬಂಧು-ಬಳಗ ಮತ್ತು ಸಂಬಂಧಗಳಿಗೆ ಮೌಲ್ಯ ನೀಡಿದ ತಲೆಮಾರು.

25. ಆಸ್ತಿಗಿಂತ ಪ್ರೀತಿ ಮತ್ತು ಬಾಂಧವ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ ತಲೆಮಾರು.

26. ಕೂಡು ಕುಟುಂಬಗಳಲ್ಲಿ ಸಂತೋಷದಿಂದ ಬದುಕಿದ ತಲೆಮಾರು.

27. ಭಿನ್ನಾಭಿಪ್ರಾಯಗಳಿದ್ದರೂ ಎಲ್ಲರನ್ನು ಪ್ರೀತಿಯಿಂದ ಒಗ್ಗೂಡಿಸಿಕೊಂಡ ತಲೆಮಾರು.

28. ವ್ಯಾಪಾರದಲ್ಲಿ ಕಲಬೆರಕೆಗೆ ಅವಕಾಶ ಕೊಡದ ತಲೆಮಾರು.

29. ಇತರರ ಒಳಿತನ್ನೇ ಬಯಸಿದ ತಲೆಮಾರು.

30. ನ್ಯಾಯ, ಪ್ರಾಮಾಣಿಕತೆಯಿಂದ ಯಾರನ್ನೂ ಮೋಸ ಮಾಡದೆ ಬದುಕಿದ ತಲೆಮಾರು.

31. ಎಂತಹ ಕಠಿಣ ಆಹಾರವನ್ನೂ ಜೀರ್ಣಿಸಬಲ್ಲ ದೇಹ ಹೊಂದಿದ್ದ ತಲೆಮಾರು.

32. ಕಾರ್ಪೊರೇಟ್ ಆಸ್ಪತ್ರೆಗಳಿಲ್ಲದಿದ್ದರೂ ಆರೋಗ್ಯದಿಂದ ಬದುಕಿದ ತಲೆಮಾರು.

33. ಹೃದಯಾಘಾತ, ಕ್ಯಾನ್ಸರ್‌ಗಳ ಬಗ್ಗೆ ಅಷ್ಟಾಗಿ ತಿಳಿಯದ ತಲೆಮಾರು.

34. ರಕ್ತದೊತ್ತಡ ಮತ್ತು ಮಧುಮೇಹವನ್ನು ದೂರವಿಟ್ಟ ತಲೆಮಾರು.

35. ಲಾಂಟರ್ನ್ ದೀಪದ ಬೆಳಕಿನಲ್ಲಿ ಜೀವನವನ್ನು ಬೆಳಗಿಸಿದ ತಲೆಮಾರು.

36. ಕಷ್ಟಗಳನ್ನು ಧೈರ್ಯದಿಂದ ಎದುರಿಸಿದ ತಲೆಮಾರು.

37. ಎಷ್ಟೇ ಇದ್ದರೂ ಇನ್ನೂ ಬೇಕೆಂಬ ಅತಿಯಾದ ಆಸೆ ಇಲ್ಲದೆ ಸಂತೋಷದಿಂದ ಬದುಕಿದ ತಲೆಮಾರು.

38. ಆಡಂಬರದಿಂದ ದೂರವಿದ್ದು, ಪೋಸ್ಟ್‌ಕಾರ್ಡ್‌ಗಳ ಮೂಲಕ ಭಾವನೆಗಳನ್ನು ಹಂಚಿಕೊಂಡ ತಲೆಮಾರು.

39. ತಮ್ಮ ತ್ಯಾಗಗಳಿಂದ ಮಕ್ಕಳ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿದ, ಜಾತಿ-ಧರ್ಮಗಳಾಚೆ ಸಹೋದರತ್ವದಿಂದ ಬದುಕಿದ ತಲೆಮಾರು.

40. ಕಾಫಿ, ಟಿಫಿನ್ ಇಲ್ಲದೇ ತಂಗಳ ಅನ್ನ ತಿಂದು ಶಾಲೆಗೆ ಓಡಿದ ತಲೆಮಾರು.

ಇಂತಹ ಅಮೂಲ್ಯ ತಲೆಮಾರಿನವರು ಇಂದು ಒಬ್ಬೊಬ್ಬರಾಗಿ ನಮ್ಮನ್ನು ಅಗಲುತ್ತಿದ್ದಾರೆ.

ಅವರನ್ನು ಕಳೆದುಕೊಳ್ಳುವಾಗ, ನಮ್ಮ ಜೀವನದ ಅಮೂಲ್ಯವಾದ ಒಂದು ಯುಗವೇ ಕಳೆದುಹೋದಂತೆ ಅನಿಸುತ್ತದೆ.


WhatsAp forwarded 

Posted 22/6/2026 

ಗ್ರಾಮ ದೇವತೆ - ಶ್ರೀ ಮುತ್ತು ಮಾರಿಯಮ್ಮ - ಹುಣಸೂರು

 ಭಾನುವಾರ, ಜುಲೈ 19, 2026 

ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ - ಹುಣಸೂರು. 



ನಾವು ಶನಿವಾರ ಸಂಜೆ ಹುಣಸೂರಿನಲ್ಲಿ ಮಡದಿ ನಳಿನಿಯ ಸಹೋದರ ಸತೀಶ್ ರಾವ್ ಅವರ ಮನೆಯಲ್ಲಿ  ಇದ್ದು ಮಾರನೇ ದಿನ ಬೆಳಿಗ್ಗೆ ಸ್ನಾನ ಫಲಾಹಾರವನ್ನು ಮುಗಿಸಿ ಹತ್ತಿರದ ಗ್ರಾಮ ದೇವತೆ ಶ್ರೀ ಮುತ್ತು ಮಾರಿಯಮ್ಮನ ಸನ್ನಿಧಾನಕ್ಕೆ ಬಂದೆವು. 



ಕಿರಿದಾದ ರಸ್ತೆ ಯಿಂದ ತೆರಳಬೇಕಾದ ಜಾಗ, ಸುಂದರವಾದ ವಾತಾವರಣ, ಶುಚಿಯಾಗಿ ಇರುವ ಪ್ರಾಂಗಣ ಹಾಗೂ ದೇವತೆ, ಮನಸ್ಸಿಗೆ ಆಹ್ಲಾದಕರ ದೇವಸ್ಥಾನ. 



ಸುತ್ತಲಿನ ಜಾಗ ಕಿರಿದಾಗಿದ್ದರೂ ಹಲವಾರು ದೇವ ದೇವತೆಯರ ವಿಗ್ರಹಗಳು, ಭಕ್ತರನ್ನು ಮುದ ಗೊಳಿಸುವ ಪ್ರಾಂಗಣ, ನಾವೂ ಸ್ವಲ್ಪ ಹೊತ್ತು ವಿರಮಿಸಿ, ಧ್ಯಾನಸ್ತರಾಗಿ ದೇವಿಯ ದರ್ಶನ, ಮಂಗಳಾರತಿ ವೀಕ್ಷಿಸಿ ಅಲ್ಲಿಂದ ನಿರ್ಗಮಿಸಿದೆವು. 



ಹುಣಸೂರು ಪಟ್ಟಣದ ಪ್ರಮುಖ ಗ್ರಾಮದೇವತೆಯು ಶ್ರೀ ಮುತ್ತು ಮಾರಿಯಮ್ಮ (ಶ್ರೀ ಶ್ರೀ ಮುತ್ತು ಮಾರಿಯಮ್ಮನವರು) ಆಗಿದ್ದಾರೆ. ಈ ದೇವಸ್ಥಾನವು ಹುಣಸೂರಿನ ಕಲ್ಕುಣಿಕೆ ಪ್ರದೇಶದಲ್ಲಿದೆ. 

ದೇವಾಲಯದ ವತಿಯಿಂದ ಪ್ರತಿ ವರ್ಷ ಅದ್ಧೂರಿಯಾಗಿ ಕರಗ ಮಹೋತ್ಸವ ಮತ್ತು ಜಾತ್ರಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದು ೫೦ನೇ ವರ್ಷದ ಕರಗ ಮಹೋತ್ಸವಗಳನ್ನು ಕಂಡಿದ್ದು, ಭಕ್ತರು ಅತ್ಯಂತ ಭಕ್ತಿಯಿಂದ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ. 


Posted 21/7/2026 






Monday, July 20, 2026

SEENA AT THE PET BOARDING.

 Sat, Sun, Mon 18, 19, 20th July 2026

As we were going to Hunsur for a visit and to attend a function, Pet Seena was left at the boarding on Saturday 18th July.



Monday, 20th July, midday, we collected him from the boarding and he was happy.



Posted 20/7/2026












ದೇವಿ ಪಾರಾಯಣ ಪೂಜೆ - ನಿತೀಶ್/ವೈಷ್ಣವಿ

 ಭಾನುವಾರ, ಜುಲೈ 19, 2026 

ಹುಣಸೂರು , ಕರ್ನಾಟಕ 


ಮಡದಿ ನಳಿನೀಯ ಸಹೋದರ ದಿನೇಶ್ ರಾವ್ ಅವರ ಮನೆಯಲ್ಲಿ ಅವರ ಮಗ ಸೊಸೆ , ನಿತೀಶ್, ವೈಷ್ಣವಿ ಅವರು ಆಶಾಡ ಮಾಸದ ವಿಶೇಷವಾದ ಪಾರಾಯಣ ಪೂಜೆಯನ್ನು ಸಂಪನ್ನ ಗೊಳಿಸಿದರು 







ನೆರೆದಿದ್ದ ಬಂಧು ಬಳಗದವರು ಪೂಜೆಯಲ್ಲಿ ಭಾಗವಹಿಸಿ ಶೋಭಾನೆ ಹಾಡು, ವಿಷ್ಣು ಸಹಸ್ರನಾಮ ಪಟಿಸಿ ಕಾರ್ಯಕ್ರಮವನ್ನು ಚಂದಗಾಣಿಸಿದರು . 



ಮಂಗಳಾರತಿಯ ನಂತರ ತೀರ್ಥ, ಪ್ರಸಾದವು ನೆರವೇರಿತು. 
ಭೋಜನದ ವ್ಯವಸ್ತೆಯನ್ನು ರಾಘವೇಂದ್ರ ಸ್ವಾಮಿ ಸಭಾಂಗಣ ದಲ್ಲಿ ಏರ್ಪಡಿಸಲಾಗಿತ್ತು. ವಿಶೇಷ ಊಟ, ಮೈಸೂರು  ಪಾಕ್, ಪಾಯಸ, ಇತ್ಯಾದಿಗಳೊಂದಿಗೆ ಪೂರ್ಣಗೊಂಡಿತು. 

ಸರ್ವೇ ಜನಾಹ ಸುಖಿನೋ ಭವಂತು.....

ಓಂ ಶಾಂತಿ.. ಶಾಂತಿ.. ಶಾಂತಿ.. 


Posted  20/7/2026