Showing posts with label ABOUT GOD. Show all posts
Showing posts with label ABOUT GOD. Show all posts

Sunday, June 15, 2025

RAAM NAAM MANTRA (ರಾಮ ನಾಮ ಮಂತ್ರ)

 Sunday, June 15, 2025

WhatsApp Forwarded.

A nice story about Guru Vashista coming to Ram's Durbar and Hanuman didn't recognoze and honour him.



Vashista gets angry and ordered Raam to give Hanuman "Mrutya Dand" (death sentence)


Ram accepts Gurudev's orders and decides to give death sentence with his Amogh Baana next day on the banks of Sarayu river,  to Hanuman.



Hanuman's mother Anjali, tells him to say 'RAAM NAAM", which is more powerful than Ram, heance Ram could not kill Hanuman with his Baan.

Moral of the story- "RAAM NAAM IS MORE PRECIOUS THAN RAAM"

ರಾಮ ಮಂತ್ರವ ಜಾಪಿಸೋ ಹೇ ಮನುಜಾ...... ಪುರಂದರದಾಸರ ಹಾಡು....


Posted 15/6/2025



Thursday, January 9, 2025

SRIKRISHNA GOVINDA LEELA

Friday, 10th January 2025

WhatsApp Forwarded. 

Birth of Krishna

RADHE - KRISHNA



WATCH VIDEO

ಕೃಷ್ಣನ ಜನನದಿಂದ ದ್ವಾರಕಾ ಜಲ ಸಮಾಧಿಯವರೆಗೆ, ಕಾಳಿಯ ಮರ್ಧನದಿಂದ ಮಹಾಭಾರತ ಯುದ್ಧದವರೆಗೆ, 200 ಕೋಟಿ ಬಜೆಟ್‌ನಲ್ಲಿ ಆರು ನಿಮಿಷಗಳಲ್ಲಿ "ಕೃತಕ ಬುದ್ಧಿಮತ್ತೆ" (Artificial Intelligence) ಯಿಂದ ಚಿತ್ರ ಮಾಡಿದರೂ, ಯಾರೂ ಈ ರೀತಿ ಬೆರಗುಗೊಳಿಸಲಾರರು.



DWARAKA CITY

GOVARDHANA GIRI

VISHWA ROOPA DARSHANA

Watch this beautidul video about "KRISHNA LEELA", prepared by Artificial Intelligence.

Posted 10/1/2025

Wednesday, November 6, 2024

ಕನ್ನಡದಲ್ಲಿ ಗಾಯತ್ರಿ ಮಂತ್ರ

7/11/2024, 

WahtsApp forwarded. 

ಕನ್ನಡದಲ್ಲಿ ಗಾಯತ್ರಿ ಮಂತ್ರದ ಸಂಪೂರ್ಣ ಅರ್ಥ ನಿಮಗಾಗ


ಗಾಯತ್ರೀ ಮಂತ್ರ ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಬ್ರಹ್ಮ ಪವಿತ್ರವಾದ ಸೂರ್ಯ ನಾರಾಯಣನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ ಅತ್ಯಂತ ಪ್ರಭಾವಶಾಲಿಯಾದುದು. ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ನಮ್ಮ ಋಷಿಮುನಿಗಳು ನಮಗೆ ಬಿಟ್ಟು ಹೋಗಿರುವ ನಮ್ಮ ಜನ್ಮವನ್ನು ನಾವೇ ಉದ್ಧಾರ ಮಾಡಿಕೊಳ್ಳಬಹುದಾದ ದಿವ್ಯಮಂತ್ರವಾಗಿದೆ ಎಂದರೆ ತಪ್ಪಾಗಲಾರದು.

ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್|| 

ಬೆಳಕಿನ ಪ್ರತೀಕವಾದ ಸೂರ್ಯದೇವನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ “ನಮ್ಮ ಬುದ್ಧಿ ಮತ್ತು ಕರ್ಮಗಳು ಸದಾ ಉತ್ತಮ ಮಾರ್ಗದಲ್ಲಿ ನೆಲೆಗೊಳ್ಳುವಂತೆ ಪ್ರಚೋದಿಸು’ ಎಂದು ಪ್ರಾರ್ಥಿಸುವ ಮಹಾಮಂತ್ರವೇ ಗಾಯತ್ರಿಮಂತ್ರ.

ಒಟ್ಟು 24 ಅಕ್ಷರಗಳನ್ನು ಒಳಗೊಂಡಿರುವ ಗಾಯತ್ರೀ ಮಂತ್ರವನ್ನು ನಿತ್ಯ ಜಪಿಸುವುದರಿಂದ ದೇಹದ ಆರಿಸಿದ 24 ಗ್ರಂಥಿಗಳನ್ನು ಬಲಗೊಳಿಸುತ್ತದೆ. 

ಪವಿತ್ರ ಗಾಯತ್ರಿ ಉಚ್ಚಾರದ ಮೊದಲಿಗೆ ಭೂಃ ಭುವಃ ಸ್ವಃ ಎಂಬ ವ್ಯಾಹೃತಿಗಳು ಚೈತನ್ಯರೂಪಿ ಆನಂದದ ಪ್ರತೀಕಗಳು. ಭೂಃ ಎಂದರೆ ಅಗ್ನಿ, ಭುವಃ ಎಂದರೆ ವಾಯು, ಸ್ವಃ ಎಂದರೆ ಆದಿತ್ಯ. ಈ ಮೂವರೂ ಕೂಡಿಕೊಂಡ ರೂಪ ಭಗವಾನ್ ಸೂರ್ಯನದು. ಸರ್ವಶಕ್ತಿರೂಪನ ಭಕ್ತಿಯುತ ಪೂಜೆಗೆ ಇದು ನಾಂದಿ. 

ಯುಗಯುಗಗಳಿಂದಲೂ ಈ ಮಂತ್ರವನ್ನು ಅಗ್ನಿಸಮ್ಮುಖದಲ್ಲೇ ಸ್ವೀಕರಿಸುತ್ತ ಬಂದ ವಾಡಿಕೆ ನಮ್ಮದು. ಅಗ್ನಿಸಮ್ಮುಖದಲ್ಲೇ ಸ್ವೀಕರಿಸಲಾಗುವ ಏಕ ಮಾತ್ರ ಮಂತ್ರ ಇದು. ಇದರಲ್ಲಿ ಗಾಯತ್ರಿ ಪ್ರತಿಪಾದ್ಯವಾದ 24 ಭಗವಂತನ ರೂಪಗಳಿವೆ.ಕೇಶವ, ನಾರಾಯಣ, ಮಾಧವ, ಗೋವಿಂದ, ವಿಷ್ಣು , ಮಧುಸೂದನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷೀಕೇಶ, ಪದ್ಮನಾಭ, ದಾಮೋದರ, ಸಂಕರ್ಷಣ, ವಾಸುದೇವ, ಪ್ರದ್ಯುಮ್ನ , ಅನಿರುದ್ಧ , ಪುರುಷೋತ್ತಮ, ಅಧೋಕ್ಷಜ, ನರಸಿಂಹ, ಅಚ್ಯುತ, ಜನಾರ್ದನ, ಉಪೇಂದ್ರ, ಹರಿ , ಕೃಷ್ಣ….

ಅಷ್ಟೇ ಅಲ್ಲ ಗಾಯತ್ರಿಯಲ್ಲಿ ಹತ್ತು ಶಬ್ದಗಳಿವೆ ಅವು ವಿಷ್ಣುವಿನ 10 ಸ್ವರೂಪಗಳು…ವಿಷ್ಣುವಿನ ಹತ್ತು ಅವತಾರಗಳನ್ನು ಸೂಚಿಸುತ್ತದೆ. 

ತತ್ – ಅಂದರೆ ಮತ್ಸ್ಯಾವತಾರ“ತತ್” ಭಗವಂತನ ಮತ್ಸ್ಯಾವತಾರವನ್ನು ಹೇಳುವ ಶಬ್ದ. ತತ ಅಂದರೆ ವಿಸ್ತಾರಗೊಳ್ಳುವುದು. ಹೀಗೆ ಮಾನವನಾದ ವೈವಸ್ವತ ಮನುವನ್ನು ಒಂದು ಭಾರಿ ಪ್ರಳಯದಿಂದ ಕಾಪಾಡಿದ ರೂಪವೇ ಮತ್ಸ್ಯಾವತಾರ. 

ಸವಿತುಃ – ಅಂದರೆ ಕೂರ್ಮಾವತಾರ ಆಮೆಯ ರೂಪದಲ್ಲಿ ಅವತರಿಸಿ ದೇವತೆಗಳು ತಾವು ಕಳೆದುಕೊಂಡ ಅಮರತ್ವ ಹಾಗೂ ದೈವಿಕ ಶಕ್ತಿ, ಪ್ರಭಾವಗಳನ್ನು ಮರು ಸಿಗುವಂತೆ ಮಾಡಿಕೊಟ್ಟ ರೂಪ “ಕೂರ್ಮಾವತಾರ”….

ವರೇಣ್ಯಂ – ಅಂದರೆ ವರಾಹಾವತಾರ ವರೇಣ್ಯ, ವರಾಹ ಎರಡೂ ಪರ್ಯಾಯ ಶಬ್ದಗಳು.. “ಕಪಿರ್ವರಾಹ ಶ್ರೇಷ್ಠಶ್ಚ” ವರಾಹ ಅಂದರೆ ಶ್ರೇಷ್ಠವಾದದ್ದು. ದೈತ್ಯ ಹಿರಣ್ಯಾಕ್ಷನು ಭೂಮಿಯನ್ನು ಕದ್ದು ಆಕೆಯನ್ನು ಆದಿಸ್ವರೂಪದ ನೀರಿನಲ್ಲಿ ಬಚ್ಚಿಟ್ಟಾಗ, ವಿಷ್ಣು ಆಕೆಯನ್ನು ಕಾಪಾಡಲು ವರಾಹನಾಗಿ ಕಾಣಿಸಿಕೊಂಡು ರಾಕ್ಷಸ ಹಿರಣ್ಯಾಕ್ಷನನ್ನ ಸಂಹಾರ ಮಾಡುತ್ತಾನೆ… 

ಭರ್ಗಃ – ಅಂದರೆ ನರಸಿಂಹಾವತಾರ, ಶತ್ರುಗಳನ್ನು ನಾಶಮಾಡಿದ ಉಗ್ರರೂಪ… ಭಕ್ತ ಪ್ರಹ್ಲಾದನ ರಕ್ಷಣೆ ಮತ್ತು ಹಿರಣ್ಯಕಶ್ಯಪೂವಿನ ನಾಶಕ್ಕಾಗಿ ಶ್ರೀ ವಿಷ್ಣು ನರಸಿಂಹ ಅವತಾರ ತಾಳುತ್ತಾನೆ. ದುಷ್ಟರನ್ನು, ದೋಷಗಳನ್ನು, ಅಜ್ಞಾನವನ್ನು ನಾಶಮಾಡಿ ಅದರ ಮೂಲಕ “ಭ” ರತಿ ಜ್ಞಾನರೂಪ ಇದಾಗಿದೆ… 

ದೇವಸ್ಯ – ಅಂದರೆ ವಾಮನಾವತಾರಬಲಿಯ ಸಂಹಾರಕ್ಕಾಗಿ ವಿಷ್ಣು ಎತ್ತಿದ ಅವತಾರ ವಾಮನಾವತಾರ. ಬಲಿಯ ಜೊತೆಗೆ ಮೂರು ಹೆಜ್ಜೆಗಳ ವ್ಯವಹಾರ ಮಾಡಿದ ರೂಪ ಇದಾಗಿದೆ….

ಧೀಮಹಿ – ಅಂದರೆ ಪರಷುರಾಮಾವತಾರ ‘ಮಹಿ’ ಅಂದರೆ ಭೂಮಿ. ದಿನು ಅಂದರೆ ಪುಷ್ಟೌ. ಭೂಮಿಯ ಮೇಲೆ ಇಪ್ಪತ್ತೊಂದು ಬಾರಿ ದುಷ್ಟ ಕ್ಷತ್ರಿಯರ ಸಂಹಾರ ಮಾಡಿ ಭೂಮಿಗೆ ಸಂತೋಷವನ್ನು ಕೊಟ್ಟ ರೂಪವೇ “ಪರುಷರಾಮಾವತಾರ”…

ಧಿಯಃ – ಅಂದರೆ ರಾಮಾವತಾರ

“ಯಂ” ಅಂದರೆ ಜ್ಞಾನ ಸ್ವರೂಪರಾದಂತ ವಾಯುದೇವ ಅವನಿಗೆ “ದಿನೋತಿ” ಆನಂದವನ್ನು ಕೊಟ್ಟ ರೂಪ “ಧಿಯಃ” ಅಂದರೆ ರಾಮರೂಪ. ದುಷ್ಟ ಶಿಕ್ಷಕ ಶಿಷ್ಟ ರಕ್ಷಕನಾಗಿ ಅಯೋಧ್ಯೆಯ ಸೂರ್ಯವಂಶದ ದಶರಥ ನಂದನ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಮಾಡುತ್ತಾನೆ…

ಯಃ – ಅಂದರೆ ಕೃಷ್ಣಾವತಾರ “ಯ”ಕಾರ ವಾಚ್ಯನಾಗಿ , ಯಃ-ಜ್ಞಾನಾವತಾರ. ಒಟ್ಟು ನಾಲ್ಕು ಯೋಗಮಾರ್ಗಗಳಾದ ಭಕ್ತಿ, ಕರ್ಮ, ಧ್ಯಾನ ಮತ್ತು ಜ್ಞಾನ ಮಾರ್ಗಗಳನ್ನು ನೀಡಿ ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳನ್ನು ಸಮಾಗಮವಾದ ಭಗವದ್ಗೀತೆಯ ಮೂಲಕ ಸಮಸ್ತ ವೇದಸಾರವನ್ನು ಆವಿಷ್ಕಾರ ಮಾಡಿದವ ಕೃಷ್ಣ. ಅದುವೇ “ಕೃಷ್ಣಾವತಾರ”. 

ನಃ – ಅಂದರೆ ಬುದ್ಧಾವತಾರ, ನಃ ಅಂದರೆ ಬುದ್ಧ. ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದವ. ಕಲಿಯುಗದಲ್ಲಿ ಬುದ್ಧ ಅವತಾರದಲಿ ಶ್ರೀಮಾನ್ ಮಹಾವಿಷ್ಣುವು ಮನುಷ್ಯನಾಗಿ ಅವತರಿಸುತ್ತಾನೆ…

ಪ್ರಚೋದಯಾತ್ – ಅಂದರೆ ಕಲ್ಕ್ಯಾವತಾರ


ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಧರ್ಮಸಂಸ್ಥಾಪನೆಗೆ ಪರಮಾತ್ಮ ಕಾಲಕಾಲಕ್ಕೆ ಯಾವುದೋ ಒಂದು ರೂಪದಲ್ಲಿ ಭೂಮಿಗೆ ಇಳಿದು ಬಂದು ಹೇಗೆ ಕಾಪಾಡುತ್ತಾನೆ ಅನ್ನುವುದರ ಬಗ್ಗೆ ಸ್ಪಷ್ಟವಾಗಿ ಗಾಯತ್ರಿಯ ಮಂತ್ರದಲ್ಲಿ ಧರ್ಮ ಸಂಸ್ಥಾಪನಾದ ವಿಷ್ಣುವಿನ ಹತ್ತು ಅವತಾರಗಳ ಬಗ್ಗೆ ಮಂತ್ರದಲ್ಲಿ ಉಲ್ಲೇಖವಿದೆ.

ಶಿವಾರ್ಪಣಮಸ್ತು 

(ಸದ್ವಿಚಾರ ಸಂಗ್ರಹ)

✍️ ನಿತಿನ್ ಶಾಮನೂರು

Tuesday, November 5, 2024

ದುರ್ಗಾ ದೇವಿಯ ಶಕ್ತಿ

 Wednesday, 6/11/2024

WahtsApp forwarded.

ದುರ್ಗಾದೇವಿಯ 10 ಕೈಗಳಲ್ಲಿರುವ 10 ಆಯುಧ


ದುರ್ಗಾದೇವಿಯ 10 ಕೈಗಳಲ್ಲಿರುವ 10 ಆಯುಧಗಳ ಅರ್ಥವೇನು ಗೊತ್ತಾ..?

 ದುರ್ಗಾ ದೇವಿಯು ಶಕ್ತಿಯ ಪ್ರತೀಕವಾಗಿದ್ದಾಳೆ ಹಾಗೂ ಎಲ್ಲಾ ದೇವರು, ದೇವತೆಗಳಿಗಿಂತಲೂ ಅತ್ಯಂತ ಶಕ್ತಿಶಾಲಿಯಾಗಿದ್ದಾಳೆ. ತಾಯಿ ದುರ್ಗೆಯು ಬರೋಬ್ಬರಿ 9 ದಿನಗಳ ಕಾಲ 9 ವಿವಿಧ ರೂಪದಲ್ಲಿ ದೈತ್ಯ ರಾಕ್ಷಸ ಮಹಿಷಾಸುರನೊಂದಿಗೆ ಹೋರಾಡಿ ಆತನನ್ನು ಹತ್ಯೆಗೈಯುತ್ತಾಳೆ ಆದ್ದರಿಂದ ಈಕೆಯನ್ನು ನವದುರ್ಗ ಎಂದು ಕರೆಯುತ್ತಾರೆ. ತಾಯಿ ದುರ್ಗೆಯು ತನ್ನ 10 ಕೈಗಳಲ್ಲಿ 10 ವಿಧದ ಆಯುಧಗಳನ್ನು ಹಿಡಿದುಕೊಂಡಿದ್ದಾಳೆ. ಈ ಆಯುಧಗಳಲ್ಲಿ ಕೆಲವೊಂದನ್ನು ಉಡುಗೊರೆಯಾಗಿ ಪಡೆದುಕೊಂಡರೆ, ಇನ್ನು ಕೆಲವೊಂದನ್ನು ವರವಾಗಿ ಪಡೆದುಕೊಂಡಿರುವುದಾಗಿದೆ. ಈಕೆಯ ಕೈಯಲ್ಲಿನ ಪ್ರತಿಯೊಂದು ಆಯುಧವು ಮಾನವರ ಚಟುವಟಿಕೆಗಳನ್ನು ಸೂಚಿಸುತ್ತದೆ. ದುರ್ಗಾ ದೇವಿಯು ದುಷ್ಟರನ್ನು ಸಂಹರಿಸಲು ಯಾವೆಲ್ಲಾ ಅಸ್ತ್ರಗಳನ್ನು ಉಪಯೋಗಿಸಿದ್ದಾಳೆ ಗೊತ್ತಾ..?

 ಖಡ್ಗ ಅಥವಾ ಕತ್ತಿ

 ಖಡ್ಗ ಅಥವಾ ಕತ್ತಿಯು ಬುದ್ಧಿವಂತಿಕೆಯನ್ನು ಸೂಚಿಸುತ್ತದೆ. ಈ ಆಯುಧವನ್ನು ಸಾಮಾನ್ಯವಾಗಿ ಜವಾಬ್ದಾರಿಯುತ ಜನರು, ಸರಿ ಮತ್ತು ತಪ್ಪುಗಳ ಬಗ್ಗೆ ಜ್ಞಾನ ಹೊಂದಿರುವವರು ಹಿಡಿದಿರುತ್ತಾರೆ. ಖಡ್ಗವನ್ನು ನಾವು ರಾಜರುಗಳ ಬಳಿ ಹೆಚ್ಚಾಗಿ ನೋಡಬಹುದು. ತಾಯಿ ದುರ್ಗೆ ಕೈಯಲ್ಲಿ ಹಿಡಿದಿರುವ ಖಡ್ಗವು ಮನುಷ್ಯನ ಭ್ರಮೆಯನ್ನು, ಅತಿ ಆಸೆಯನ್ನು ಹಾಗೂ ಆತನ ಆತ್ಮವನ್ನು ಬಂಧಿಸುತ್ತದೆ. ಇದು ಮನುಷ್ಯನಿಗೆ ತಾನನು ಮಾಡಬೇಕಾದ ನೈಜ ಕರ್ತವ್ಯದ ಅರಿವನ್ನು ಮೂಡಿಸುತ್ತದೆ. ಖಡ್ಗಕ್ಕೆ ನಕಾರಾತ್ಮಕತೆಯನ್ನು ತೊಡೆದು ಹಾಕುವ ಸಾಮರ್ಥ್ಯವಿದೆ.

 ತ್ರಿಶೂಲ

ಮೂರು ತೀಕ್ಷ್ಣವಾದ ಆಕಾರವನ್ನು ಹೊಂದಿರುವ ಈ ಆಯುಧವು ಮಾನವಕುಲದ ಮೂರು ಗುಣಗಳನ್ನು ಸಂಕೇತಿಸುತ್ತದೆ. ಮೂರು ಗುಣಗಳೆಂದರೆ ತಮೋಗುಣ, ರಜೋಗುಣ ಮತ್ತು ಸತ್ವಗುಣಗಳಾಗಿವೆ. ಆದ್ದರಿಂದ ದುರ್ಗೆಯನ್ನು ಸಮಯವನ್ನೇ ಮೀರಿದವಳು ಎನ್ನಲಾಗುತ್ತದೆ. ಆಕೆ ಸಮಯಕ್ಕೆ ಮಹತ್ವವನ್ನು ನೀಡಿದವಳಲ್ಲ. ಯಾವ ಸಮಯದಲ್ಲಿ ವ್ಯಕ್ತಿ ಕೆಡುಕನ್ನು ಮಾಡುತ್ತಾನೋ ಅದೇ ಸಮಯದಲ್ಲಿ ಆಕೆ ಶಿಕ್ಷಿಸುತ್ತಾಳೆ. ಪರಶಿವನು ಈ ಆಯುಧವನ್ನು ದುರ್ಗಾದೇವಿಗೆ ನೀಡಿದ್ದಾನೆ. ತ್ರಿಶೂಲದ ಮೂರು ಅಂಶಗಳು ಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯತ್‌ಕಾಲವನ್ನು ಪ್ರತಿನಿಧಿಸುತ್ತದೆ.

ಸುದರ್ಶನ ಚಕ್ರ

ಚಕ್ರವು ಜೀವಿತಾವಧಿಯನ್ನು ಪ್ರತಿನಿಧಿಸುತ್ತದೆ. ಅದು ನಾವು ಎಷ್ಟು ಸಮಯ ಬದುಕಿರುತ್ತೇವೋ ಅಷ್ಟು ಸಮಯ ನಮ್ಮ ದೇಹದಲ್ಲಿ ಸುತ್ತುತ್ತದೆ. ಚಕ್ರವು ನಮಗೆ ಸಮಯ ಎಲ್ಲವನ್ನು ನಾಶ ಮಾಡುತ್ತದೆ ಎನ್ನುವುದನ್ನು ತಿಳಿಸುತ್ತದೆ. ಆಂತರಿಕ ಜಾಗೃತಿಯನ್ನು ಮುಡಿಸುವಲ್ಲಿ ಚಕ್ರ ಪ್ರಮುಖ ಪಾತ್ರವನ್ನು ವಹಿಸಿದೆ. ಭಗವಾನ್‌ ವಿಷ್ಣು ತಾಯಿ ದುರ್ಗೆಗೆ ಉಡುಗೊರೆಯಾಗಿ ನೀಡಿದ ಸುದರ್ಶನ ಚಕ್ರವು ಸೃಷ್ಟಿಯ ಕೇಂದ್ರವನ್ನು ಸಂಕೇತಿಸುತ್ತದೆ. ದುರ್ಗಾದೇವಿಗೆ ನಿಷ್ಟ, ಭಕ್ತಿ ಮತ್ತು ಪ್ರೀತಿಯನ್ನು ಪ್ರದರ್ಶಿಸಲು ಚಕ್ರವು ಮನುಷ್ಯರನ್ನು ಪ್ರೇರೇಪಿಸುತ್ತದೆ.

ವಜ್ರಾಯುಧ

ವಜ್ರವು ಅಚಲತೆಯನ್ನು, ನಿರ್ಣಯವನ್ನು ಮತ್ತು ಸರ್ವೋಚ್ಛ ಶಕ್ತಿಯ ದೃಢತೆಯನ್ನು ಸಂಕೇತಿಸುತ್ತದೆ. ವಜ್ರಾಯುಧವು ಭಗವಾನ್‌ ಇಂದ್ರನ ಆಯುಧವಾಗಿದ್ದು, ತನ್ನ ಆಯುಧವನ್ನು ತಾಯಿ ದುರ್ಗೆಗೆ ಉಡುಗೊರೆಯಾಗಿ ನೀಡುತ್ತಾನೆ. ತಾಯಿ ದುರ್ಗೆಯನ್ನು ಪೂಜಿಸುವುದರಿಂದ ಜೀವನದಲ್ಲಿ ಆತ್ಮವಿಶ್ವಾಸವು ಹೆಚ್ಚಾಗುತ್ತದೆ ಹಾಗೂ ಕಠಿಣ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಲು ಸಹಕರಿಸುತ್ತದೆ.

ಬಿಲ್ಲು ಮತ್ತು ಬಾಣ

ದುರ್ಗೆಯು ತನ್ನ ಹತ್ತು ಕೈಗಳಲ್ಲಿ ಒಂದು ಕೈಯಲ್ಲಿ ಬಿಲ್ಲು ಮತ್ತು ಬಾಣವನ್ನು ಹಿಡಿದಿದ್ದಾಳೆ. ಇದು ವಾಯುವಿನ ಅಸ್ತ್ರವಾಗಿದ್ದು, ವಾಯು ತನ್ನ ಅಸ್ತ್ರವನ್ನು ದುರ್ಗೆಗೆ ನೀಡುತ್ತಾನೆ. ಅನಾದಿಕಾಲದಿಂದಲೂ ಬಿಲ್ಲ ಮತ್ತು ಬಾಣವನ್ನು ಪ್ರಮುಖ ಶಸ್ತ್ರಾಸ್ತ್ರವನ್ನಾಗಿ ಬಳಸಲಾಗುತ್ತದೆ. ದೇವರುಗಳು, ರಾಜರುಗಳು ಯುದ್ಧದ ಸಮಯದಲ್ಲಿ ಬಿಲ್ಲು, ಬಾಣಗಳನ್ನು ಬಳಸುತ್ತಿದ್ದರು. ದುರ್ಗೆಯ ಕೈಯಲ್ಲಿನ ಬಿಲ್ಲು ಮತ್ತು ಬಾಣವು ಪ್ರತಿಯೊಬ್ಬ ವ್ಯಕ್ತಿಯು ತನ್ನ ಗುರಿಯತ್ತ ಸ್ಥಿರವಾಗಿರಬೇಕು ಮತ್ತು ಅವನು ತನ್ನ ಗುರಿಯತ್ತ ಗಮನಹರಿಸಬೇಕು ಎಂಬೂದನ್ನು ಹೇಳುತ್ತದೆ. ಒಬ್ಬ ವ್ಯಕ್ತಿಯು ತನ್ನ ಗುರಿಗಳನ್ನು ಸ್ವತಂತ್ರವಾಗಿ ಸಾಧಿಸುವ ಸಾಮರ್ಥ್ಯವನ್ನು ಹೊಂದಿರಬೇಕೆಂದು ಸೂಚಿಸುತ್ತದೆ.

ಈಟಿ

ಈಟಿಯು ಅಗ್ನಿ ದೇವರ ಆಯುಧವಾಗಿದ್ದು, ಅಗ್ನಿ ದೇವನು ತನ್ನ ಆಯುಧವನ್ನು ದುರ್ಗಾದೇವಿಗೆ ಉಡುಗೊರೆಯಾಗಿ ನೀಡುತ್ತಾನೆ. ಈಟಿಯು ಶುಭ ಸಂಕೇತವಾಗಿದ್ದರೂ ಅಗ್ನಿಯ ಈ ಉಡುಗೊರೆ ಉರಿಯುವ ಶಕ್ತಿಯನ್ನು ಕೂಡ ಸೂಚಿಸುತ್ತದೆ. ಯಾವುದು ತಪ್ಪು ಮತ್ತು ಯಾವುದು ಅರಿ ಎಂದು ಯೋಚಿಸುವ ಶಕ್ತಿಯನ್ನು ನಾವು ಹೊಂದಿರಬೇಕು ಹಾಗೂ ಅದಕ್ಕೆ ತಕ್ಕಂತೆ ವರ್ತಿಸಬೇಕೆಂದು ಈಟಿ ಹೇಳುತ್ತದೆ. ಇದು ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಮಾನವರ ಗುಪ್ತ ಶಕ್ತಿಯ ಸಂಕೇತವಾಗಿದೆ. ಯಾವಾಗಲು ನಾವು ತಪ್ಪುಗಳಿಂದ ದೂರಿರಬೇಕೆಂದು ಈಟಿ ಹೇಳುತ್ತದೆ.

ಶಂಖ

ಶಂಖವು ಸೃಷ್ಟಿಯ ಆದಿಸ್ವರೂಪ ಧ್ವನಿಯಾದ ಓಂ ನ ಸಂಕೇತವಾಗಿದೆ. ಶಂಖವನ್ನು ವರುಣ ದೇವನು ತಾಯಿ ದುರ್ಗೆಗೆ ನೀಡಿದ್ದಾನೆ. ಬ್ರಹ್ಮಾಂಡವು ಸೃಷ್ಟಿಯಾದಾಗ ಶಂಖವು ಮೊದಲು ಹುಟ್ಟಿಕೊಂಡಿತು. ಆ ಸಂದರ್ಭದಲ್ಲಿ ಶಂಖದಿಂದ ಮೊದಲು ಹೊರಹೊಮ್ಮಿದ ಶಬ್ಧವೇ ಓಂ. ಶಂಖವನ್ನು ಹಿಂದೂ ಧರ್ಮದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಹಿಂದೂ ಧರ್ಮೀಯರ ಪ್ರಕಾರ, ಶಂಖವು ನಕಾರಾತ್ಮಕ ಶಕ್ತಿಯನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಕಮಲ

ಕಮಲದ ಹೂ ಬ್ರಹ್ಮನ ಸಂಕೇತವಾಗಿದೆ. ಕಮಲವು ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ ಹಾಗೂ ಜ್ಞಾನದ ಮೂಲಕ ಮುಕ್ತಿಯನ್ನು ನೀಡುತ್ತದೆ. ಬ್ರಹ್ಮನು ತನ್ನ ಕಮಂಡಲದೊಂದಿಗೆ ಕಮಲವನ್ನು ಹಾಗೂ ಬುದ್ಧಿವಂತಿಕೆಯನ್ನು ತಾಯಿ ದುರ್ಗೆಗೆ ನೀಡಿದನು. ಕಮಲವು ಭಕ್ತಿಯನ್ನು ಮತ್ತು ಭಗವಾನ್‌ ಆಂಜನೇಯನನ್ನು ಸೂಚಿಸುತ್ತದೆ. ನಾವು ಯಾವುದೇ ಕೆಲಸವನ್ನು ಮಾಡಬೇಕಾದರೆ ಅದರ ಫಲವನ್ನು ನಿರೀಕ್ಷಿಸಿಬಾರದು. ಬದಲಾಗಿ, ನಮ್ಮ ಕೈಲಾದಷ್ಟು ಶ್ರಮಿಸಬೇಕು ಅದರ ಫಲವನ್ನು ದೇವರ ಇಚ್ಛೆಗೆ ಬಿಡಬೇಕೆಂದು ದುರ್ಗೆಯ ಕಮಲವನ್ನು ಹಿಡಿದ ಕೈ ಹೇಳುತ್ತದೆ.

ಕೊಡಲಿ

ಕೊಡಲಿ ಕೆಟ್ಟದ್ದನ್ನು ಅಥವಾ ನಕಾರತ್ಮಕತೆಯನ್ನು ಹೊಡೆದೋಡಿಸುವ ಸಾಮರ್ಥ್ಯವನ್ನು ಹೊಂದಿದೆ. ಅಂತೆಯೇ ನಮ್ಮೊಳಗಿನ ಕೆಟ್ಟ ಭಾವನೆಗಳನ್ನು ನಾಶಗೊಳಿಸಿಕೊಳ್ಳಬೇಕೆಂಬೂದನ್ನು ಸೂಚಿಸುತ್ತದೆ. ವಿಶ್ವಕರ್ಮನು ತಾಯಿ ದುರ್ಗೆಗೆ ಕೊಡಲಿಯನ್ನು ನೀಡುತ್ತಾನೆ. ದುಷ್ಟರ ವಿರುದ್ಧದ ಹೋರಾಟದಿಂದ ಮುಂದಾಗುವ ಪರಿಣಾಮಗಳ ಬಗ್ಗೆ ಭಯವಿಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ.

ಹಾವು

ದುರ್ಗಾ ಮಾತೆಯ ಹತ್ತು ಕೈಗಳಲ್ಲಿ ಒಂದು ಕೈ ಖಾಲಿ ಇರುತ್ತದೆ. ಆ ಕೈಯಲ್ಲಿ ಆಕೆ ಭಕ್ತರನ್ನು ಆಶೀರ್ವದಿಸುತ್ತಾಳೆ. ಆದರೆ ಆ ಕೈಯಲ್ಲಿ ದುರ್ಗೆ ಹಾವನ್ನು ಹಿಡಿದಿದ್ದಾಳೆ. ಅಥವಾ ಮಹಿಷಾಸುರನನ್ನು ಸಂಹರಿಸಲು ಆಕೆ ಅದೇ ಕೈಯಲ್ಲಿ ತ್ರಿಶೂಲವನ್ನೂ ಕೂಡ ಹಿಡಿದಿದ್ದಾಳೆ. ಹತ್ತನೇ ಕೈಯಲ್ಲಿ ದುರ್ಗೆ ಹಾವನ್ನು ಹಿಡಿದಿದ್ದಾಳೆ. ಹಾವು ಯಾವಾಗಲೂ ಶಿವನ ಕೊರಳಲ್ಲಿ ಇರುತ್ತದೆ. ಅದೇ ಹಾವನ್ನು ಶಿವನು ಮಾತೆ ದುರ್ಗೆಗೆ ನೀಡಿದ್ದಾನೆ. ದುರ್ಗೆಯ ಹತ್ತನೇ ಕೈಯಲ್ಲಿರುವ ಹಾವು ಪ್ರಜ್ಞೆಯನ್ನು ಮತ್ತು ಶಿವನ ಪುರುಷ ಶಕ್ತಿಯನ್ನು ಸಂಕೇತಿಸುತ್ತದೆ.

ಸಿಂಹ

ಸಿಂಹವನ್ನು ಕಾಡಿನ ರಾಜ, ಎಲ್ಲಾ ಪ್ರಾಣಿಗಳ ರಾಜನೆಂದು ಹೇಳಲಾಗುತ್ತದೆ. ಹಾಗೂ ಅತ್ಯಂತ ಶಕ್ತಿಶಾಲಿ ಪ್ರಾಣಿ. ದುರ್ಗಾದೇವಿಯು ಸಿಂಹವನ್ನು ತನ್ನ ವಾಹನವನ್ನಾಗಿಸಿಕೊಂಡಿದ್ದಾಳೆ. ಯಾವುದೇ ಓರ್ವ ವ್ಯಕ್ತಿಯು ತನ್ನ ಶಕ್ತಿ ಮತ್ತು ಸಾಮರ್ಥ್ಯವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಹಾಗು ಅವಶ್ಯಕತೆಯಿದ್ದಾಗ ಮಾತ್ರ ಅದನ್ನು ಪ್ರಯೋಗಿಸಬೇಕೆಂಬುದನ್ನು ದುರ್ಗೆಯು ಸೂಚಿಸುತ್ತಾಳೆ.

ಸನಾತನವೇ ಸತ್ಯ, ಸನಾತನವೇ ಶ್ರೇಷ್ಠ

ಸನಾತನವೊಂದೇ ವಿಶ್ವ ಧರ್ಮ

ಸನಾತನ ರಾಷ್ಟ್ರಕ್ಕಾಗಿ, ಸನಾತನ ಧರ್ಮಕ್ಕಾಗಿ..

ಸನಾತನ ರಾಷ್ಟ್ರಭಕ್ತರು

Posted 7/11/2024

Sunday, August 11, 2024

ದೇವರು ನಮಗೆ ಜೀವನವನ್ನಲ್ಲ , ಜೀವವನ್ನಷ್ಟೆ ಕೊಟ್ಟ

 12 August 2024

ದೇವರು ನಮಗೆ ಜೀವನವನ್ನಲ್ಲ , ಜೀವವನ್ನಷ್ಟೆ ಕೊಟ್ಟ. 


ಆದರೆ, 
ಹೇಗೆ ಜೀವಿಸಬೇಕೆಂಬುದನ್ನು ಅವ ನಮಗೇ ಬಿಟ್ಟುಕೊಟ್ಟ !_

ಮಣ್ಣಲ್ಲಿ ಮಣ್ಣಾಗುವ ವ್ಯಕ್ತಿಯ ದೇಹಕ್ಕೆ ಸಾವು ಖಚಿತ ... ಆದರೆ 

ಮನದಲ್ಲಿ ಉಳಿಯುವ ವ್ಯಕ್ತಿಯ ವ್ಯಕ್ತಿತ್ವವು ಸದಾ ಶಾಶ್ವತ ...

* ಸಾವು ಖಚಿತ, ಆದರೆ ಸಾವು ಬಂದಾಗ ಯಾರಿಗೂ  ಸಾಯಬೇಕಂತ ಅನ್ನಿಸೋದಿಲ್ಲ .

* ಊಟ ಎಲ್ಲರಿಗೂ ಬೇಕು, ಆದರೆ ಯಾರೂ ವ್ಯವಸಾಯ ಮಾಡಬೇಕನ್ನುವುದಿಲ್ಲ.‌‌‌‌‌‌‌‌

* ನೀರು ಎಲ್ಲರಿಗೂ ಬೇಕು, ಆದರೆ ಅರಣ್ಯವನ್ನು ರಕ್ಷಿಸಬೇಕು ಅಂತ ಯಾರೂ ಪ್ರಯತ್ನಿಸುವುದಿಲ್ಲ .

* ಪಾಲು ಎಲ್ಲರಿಗೂ ಬೇಕು, ಆದರೆ ಅದನ್ನು ಪಾಲಿಸಬೇಕೆನ್ನುವ ಛಲ ಯಾರಿಗೂ ಇಲ್ಲ.

* ನೆರಳು ಎಲ್ಲರಿಗೂ ಬೇಕು, ಆದರೆ ಮರಗಳನ್ನು ರಕ್ಷಿಸಬೇಕೆನ್ನುವ ಹಂಬಲ ಯಾರಿಗೂ ಇಲ್ಲ.

* ಹೆಂಡತಿ ಎಲ್ಲರಿಗೂ ಬೇಕು, ಆದರೆ ಹೆಣ್ಣು ಮಕ್ಕಳು ಕೆಲವರಿಗೆ ಬೇಡ.

* ಹುಟ್ಟಿದಾಗ ನೀ ಅಳುತ್ತಿದ್ದೆ, ಆದರೆ  ಮಡಿದಾಗ ನಿನ್ನವರು ಅಳುತ್ತಿದ್ದರು.

*  ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು, ಆದರೆ  ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.

*  ಹುಟ್ಟಿದಾಗ  ಹುಡುಕುವರು ನಿನಗೆ ನೂರೆಂಟು ನಾಮ, ಆದರೆ ಮಡಿದ ಮೇಲೆ ಶವ ಎಂದೇ ನಿನ್ನ ನಾಮ.

*  ನೀನೇನನ್ನೂ ಗಳಿಸದೇ ಬಂದೆ, ಆದರೆ ಮಡಿದಾಗ ನೀನು ಗಳಿಸಿದ್ದನ್ನು ಕಳೆದುಕೊಂಡೆ.

ಮಡಿದಾಗ ಮಣ್ಣಲ್ಲಿ ಮಣ್ಣಾಗಿ ಹೋಗುವ ನೀನು, ನಿನ್ನದು ಎನ್ನಲು ನಿನಗೇನಿದೆ ?

ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು, ನಿನಗೆ ಹೆಸರು ಕೊಟ್ಟವರು ಮತ್ತೊಬ್ಬರು, ನಿನಗೆ ಜ್ಙಾನ ಕೊಟ್ಟವರು ಮತ್ತೊಬ್ಬರು, ಕಡೆಗೆ ನಿನ್ನ ಅಂತ್ಯ ಸಂಸ್ಕಾರ ನಿರ್ವಹಿಸುವುದು ಕೂಡಾ ಮತ್ತೊಬ್ಬರೇ...   ಹೀಗಿರುವಾಗ,  

ನಾನು ಎಂದು ಅಹಂಕರಿಸಲು ನೀನು ಯಾರು ?? ಏನಿದೇ ನಿನ್ನಲ್ಲಿ ???

ದೇವರು ನಮಗೆ ಜೀವನವನ್ನಲ್ಲ , ಜೀವವನ್ನಷ್ಟೆ ಕೊಟ್ಟ .             ಆದರೆ

ಹೇಗೆ ಜೀವಿಸಬೇಕು ಎಂಬುದನ್ನು ಅವ ನಮಗೇ ಬಿಟ್ಟುಕೊಟ್ಟ.



ಸರ್ವೇ ಜನಾಃ ಸುಖಿನೋ ಭವಂತು 

Posted 12/8/2024


Friday, July 5, 2024

Gotras and Kula/Istha God.

 Gotras and Kula/Istha God.


1. For the
Bhargava gotras, the clan deity is Inna Mahalingeshwar and the favorite deity is Mundkur Durgaparameshwari.

2. For Vishvamitra Gotras, Kula Deva is Ulluru Subrahmanya and Ishta Deva is Mahishamardini of Neelavara.

3. Alevoor Vishnumurthy Kuladev and Indrali Durga are favorite deities for Angirasa/Harita Gotras.

4. Seemanthur Janardhana is the family deity for the Kasyapa gotras and Katilu Durgaparameshwari is the Goddess of love.

5. Udupi Ananteshwar Kuladev and Bannanje Durge Ishtadev for Baradwaja Gotras.

6. Kongur Math has just started. Henceforth, it is the order of the Math that Harita Gotra should celebrate this as their family deity Gopalakrishna (Butter Krishna) and Ishta Deva Bannadka Narasimha.

Although Kadambalittaya, Kannaraya, Manjittaya and Saralaya are Angirasa gotras, Kodamgala Vishnumurthy is their clan deity. The reason for this is the wise men. This temple is also known as Puli temple because of these sages

In Shivalli there are people with the surname Aytinala (now Aitala). His family deity is called Perduru Gopalakrishna. Similarly, for Kanginnai, this is Kelamath Gopalakrishna. Many of the Puranikas, who were originally Kekunnayars of Kekuda, worship Chokkada Gopalakrishna as Kuladev.

When I inquired among many scholars about this, none of them specifically said that this is the case. Since we are immigrants from Talagunda (there is a Shivalli village there. According to Sri Srinivasa Tantris we got the name Shivalli sect from this village. There is no evidence that hundreds of Brahmin families came and settled in Shivalli on the Udupi side) after coming here we built a temple here as our clan god and as worshipers of the original mother. It is like starting to worship form as a god. Later, they migrated from here to different places and lost their connection with the original place in Kainkarya and started worshiping the god of Tamur as Kuladev. The reason for this may be that their clansmen stopped worshiping in the original temple. 


From WhatsApp

Posted 6/7/2024

Friday, February 9, 2024

2024ನೇ ವರ್ಷದ ದೇವತಾ ಕಾರ್ಯಕ್ರಮಗಳು

 2024ನೇ ವರ್ಷದ ದೇವತಾ ಕಾರ್ಯಕ್ರಮಗಳು

16-2-2024. ಶುಕ್ರವಾರ. ರಥ ಸಪ್ತಮಿ. 16-2-2024. Friday. Ratha Saptami. 

8-3-2024. ಶುಕ್ರವಾರ. ಮಹಾಶಿವರಾತ್ರಿ. 8-3-2024. Friday. Maha Shivaratri. 

9-4-2024. ಮಂಗಳವಾರ. ಚಾಂದ್ರಮಾನ ಯುಗಾದಿ. 9-4-2024. Tuesday. Chandramana Ugadi. 

17-4-2024. ಬುಧವಾರ. ಶ್ರೀ ರಾಮನವಮಿ. 17-4-2024. Wednesday. Shri Ramanavami. 

22-4-2024. ಮಂಗಳವಾರ. ಹನುಮಜ್ಜಯಂತಿ. 22-4-2024. Tuesday. Hanuma Jayanti

10-5-2024. ಶುಕ್ರವಾರ. ಅಕ್ಷಯತ್ರತಿಯ. 10-5-2024. Friday. Akshaya tritiya. 

12-5-2024. ಆದಿತ್ಯವಾರ ಶಂಕರ ಜಯಂತಿ. 12-5-2024. Sunday. Shankara Jayanti. 

17-7-2024. ಬುಧವಾರ. ಆಷಾಢ್ ಏಕಾದಶಿ. 17-7-2024. Wednesday. Aashadhi Ekadashi. 

21-7-2024. ಆದಿತ್ಯವಾರ. ಗುರು ಪೂರ್ಣಿಮಾ. 21-7-2024. Sunday. Guru Poornima. 

9-8-2024. ಶುಕ್ರವಾರ.ನಾಗರ ಪಂಚಮಿ. 9-8-2024. Friday. Nagara Panchami. 

16-8-2024. ಶುಕ್ರವಾರ. ವರಮಹಾಲಕ್ಷ್ಮಿ ವ್ರತ. 16-8-2024. Friday. Varamahalakshmi Vratha. 

19-8-2024. ಸೋಮವಾರ. ಋಗುಪಾಕರ್ಮ. 19-8-2024. Monday. Rugupakarma. 

26-8-2024. ಸೋಮವಾರ. ಶ್ರೀ ಕೃಷ್ಣಾ ಜನ್ಮಾಷ್ಟಮಿ. 26-8-2024. Monday. Krishna Janmashtami. 

6-9-2024. ಶುಕ್ರವಾರ. ಗೌರೀತದಿಗೆ. 6-9-2024. Friday. Gauri Tadige. 

7-9-2024. ಶನಿವಾರ. ಗಣೇಶ್ ಚತುರ್ಥಿ. 7-9-2024. Saturday. Ganesh Chaturthi. 

17-9-2024. ಮಂಗಳವಾರ. ಆನಂತ ಚತುರ್ದಶಿ. 17-9-2024. Tuesday.Ananta Chaturdashi. 

3-10-2024. ಗುರುವಾರ. ನವರಾತ್ರಾರಂಭ. 3-10-2024. Thursday. Navaratraramba. 

31-10-2024. ಗುರುವಾರ. ನರಕ ಚತುರ್ದಶಿ. ಲಕ್ಷ್ಮೀ ಪೂಜೆ. 

31-10-2024. Thursday. Naraka Chaturdashi. Lakshmi Pooja. 

1-11-2024. ಶುಕ್ರವಾರ. ದೀಪಾವಳಿ. 1-11-2024. Friday. Deepavali. 

13-11-2024. ಬುಧವಾರ. ತುಳಸಿ ಪೂಜೆ. 13-11-2024. Wednesday. Tulasi Pooja. 

14-11-2024. ಗುರುವಾರ. ವೈಕುಂಠ ಚತುರ್ದಶಿ. 14-11-2024. Thursday. Vaikunta Chaturdashi. 

7-12-2024. ಶನಿವಾರ. ಶ್ರೀ ಸುಬ್ರಹ್ಮಣ್ಯ ಷಷ್ಟಿ. 7-12-2024. Saturday. Sri Subramany Shashthi. 

12-12-2024. ಗುರುವಾರ. ಮುಕ್ಕೋಟಿ ದ್ವಾದಶಿ. 12-12-2024. Thursday. Mukkothi Dwadashi. 

14-12-2024. ಶನಿವಾರ. ದತ್ತ ಜಯಂತಿ. 14-12-2024. Saturday. Datta Jayanti.


Posted 9/2/2024

Friday, October 20, 2023

- ನವರಾತ್ರಿಯ 7 ನೇ ದಿನ - ಕಾಳರಾತ್ರಿ

 ಶನಿವಾರ. 21 ಅಕ್ಟೋಬರ್ 2023 

ನವರಾತ್ರಿಯ 7 ನೇ ದಿನ - ಕಾಳರಾತ್ರಿ 


ನವರಾತ್ರಿಯ ಸಪ್ತಮಿಯ ದಿನ ಪೂಜಿಸುವ ದುರ್ಗಾ ಮಾತೆಯ ಅವತಾರವೇ ಕಾಲರಾತ್ರಿ.

ನೋಡಲು ಭಯಂಕರಿಯಾದರೂ ಭಕ್ತರ ಪಾಲಿಗೆ ಈಕೆ ಶುಭಂಕರಿ. ಜಗದಲ್ಲಿನ ಅಂಧಕಾರವನ್ನು ಕಳೆದು ಬೆಳಕನ್ನು ನೀಡುವವಳು.

ನವರಾತ್ರಿಯ ಏಳನೇ ದಿನ ದುರ್ಗಾಮಾತೆಯ ಭಯಂಕರ ರೂಪವೇ ಕಾಲರಾತ್ರಿ. ಗಾಡಾಂಧಕಾರದಂತೆ ಶರೀರವೆಲ್ಲಾ ಕಪ್ಪಾಗಿ ಕತ್ತೆಯ ಮೇಲೆ ವಿರಾಜಮಾನಳಾಗಿ ಭಕ್ತರ ಅಭೀಷ್ಟವನ್ನು ನೆರವೇರಿಸುವವಳೇ ಕಾಲರಾತ್ರಿ. ಈಕೆಯನ್ನು ಶುಭಂಕರಿಯೆಂದೂ ಕರೆಯುತ್ತಾರೆ. ದೇವಿಯ ಹಲವು ರೂಪಗಳಲ್ಲಿ ಬಹಳ ಭೀಭತ್ಸ್ಯವಾದ ರೂಪವೆಂದರೆ ಕಾಲರಾತ್ರಿ. ಅಸುರರ ಪಾಲಿಗೆ ದುಃಸ್ವಪ್ನ ಈ ಕಾಲರಾತ್ರಿ. ಧರ್ಮದ ರಕ್ಷಣೆಗಾಗಿ, ಅಧರ್ಮರ ಪಾಲಿಗೆ ಭಯ ಹುಟ್ಟಿಸುವವಳು ಈಕೆ. ಆದರೆ ತನ್ನನ್ನು ಪೂಜಿಸುವ ಭಕ್ತರ ಪಾಲಿಗೆ ಮಾತ್ರ ಮಾತೃಸ್ವರೂಪಿಣಿಯಾದ ಪಾರ್ವತಿಯಾಗಿರುವವಳು.


ಕಾಲರಾತ್ರಿಯ ಮಂತ್ರ

ಓಂ ದೇವೀ ಕಾಲರಾತ್ರೈ ನಮಃ

ಓಂ ದೇವಿ ಕಾಲರಾತ್ರೈ ನಮಃ ಎಕ್ವೇಣಿ ಜಪಕಾರ್ಣಪೂರ ನಗ್ನಾ ಖರಾಸ್ಥಿತಾ

ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ ಶರೀರಿಣೀ ವಂ

ಪಾದೋಲ್ಲಸಲ್ಲೋಹ್ಲತಾ ಕಂಟಕ್ಬುಷಾನಾ

ಭರ್ಧನ್‌ ಮೂರ್ಧಂ ಧ್ವಜಾ ಕೃಷ್ಣ ಕಾಲರಾತ್ರಿ ಭಯಂಕರಿ

ಕಾಲರಾತ್ರಿ ಪ್ರಾರ್ಥನೆ

ಏಕ್ವೇವೇಣಿ ಜಪಕಾರ್ಣಪೂರ ನಗ್ನಾ ಖರಾಸ್ಥಿತಾ

ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ ಶರೀರಿಣೀ ವಂ

ಪಾದೋಲ್ಲಸಲ್ಲೋಹ್ಲತಾ ಕಂಟಕ್ಬುಷಾನಾ

ಭರ್ಧನ್‌ ಮೂರ್ಧಂ ಧ್ವಜಾ ಕೃಷ್ಣ ಕಾಲರಾತ್ರಿ ಭಯಂಕರಿ

ಸ್ತುತಿ

ಯಾ ದೇವಿ ಸರ್ವಭೂತೇಷು ಮಾ ಕಾಲರಾತ್ರಿ ರೂಪೇಣ ಸಂಸ್ಥಿತಾ

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ಕಾಲರಾತ್ರಿ ಧ್ಯಾನ

ಕರಾಲಾವಂದನ ಘೋರಂ ಮುಕ್ತಾಕ್ಷಿ ಚತುರ್ಭುಜಂ

ಕಾಲರಾತ್ರಿಂ ಕರಾಲಿಮ್ಕಾ ದಿವ್ಯಾಂ ವಿದ್ಯುತ್ಮಾಲ ವಿಭೂಷಿತಂ

ದಿವ್ಯಾಂ ಲಾಹುವಾಜ್ರಾ ಖಡ್ಗ ವಮೋಘೋರ್ಧ್ವಾ ಕರಂಭುಜಂ

ಅಭಯಂ ವರದಂ ಚೈವ ದಕ್ಷಿಣೋಧವಘಃ ಪರ್ಣಿಕಾಂ ಮಾಂ

ಮಹಾಮೇಘ ಪ್ರಭಂ ಶ್ಯಾಮಂ ತಕ್ಷ ಚೈವಾ ಗಾದರ್ಭಾರುಧ

ಘೋರದಂಶ ಕರಾಲ್ಯಾಸಂ ಪಿನ್ನೋನಾತಾ ಪಯೋಧರಂ

ಸುಖ ಪ್ರಸನ್ನವಧನ ಸ್ಮರೇಣ ಸರೋರುಹಂ

ಇವಾಂ ಸಚಿಯಂತಾಯೆತ್‌ ಕಾಲರಾತ್ರಿಂ ಸರ್ವಕಂ ಸಮೃದ್ಧಿಂ

ಕಾಲರಾತ್ರಿ ಸ್ತೋತ್ರ

ಹಿಂ ಕಾಲರಾತ್ರಿ ಶ್ರಿಂ ಕರಾಲಿ ಚ ಕ್ಲಿಂ ಕಲ್ಯಾಣಿ ಕಲಾವತಿ

ಕಲಾಮಾತಾ ಕಾಳಿದರ್ಪದ್ನಿ ಕಾಮದಿಶಾ ಕುಪನ್ವಿತಾ

ಕಾಮಬಿಜಪಂದ ಕಮಬಿಜಸ್ವರೂಪಿಣಿ

ಕುಮತಿಘ್ನಿ ಕುಲಿನಾರ್ತಿನಾಶಿನಿ ಕುಲಾ ಕಾಮಿನಿ

ಕ್ಲಿಂ ಹ್ರಿಂ ಶ್ರೀಂ ಮಾಂತ್ರ್ವರ್ನೆನಾ ಕಾಲಾಕಂತಕಘಾತಿನಿ

ಕೃಪಾಮಯಿ ಕೃಪಾಧಾರ ಕೃಪಾಪರ ಕೃಪಾಗಮಾ


ಕಾಲರಾತ್ರಿ ಕವಚ

ಓಂ ಕ್ಲಿಂ ಮೇ ಹೃದಯಂ ಪಾತು ಪದೌ ಶ್ರೀಕಾಲರಾತ್ರಿ

ಲಲಾಟೇ ಸತತಂ ಪಾತು ತುಶಾಗ್ರ ನಿವಾರಿಣಿ

ರಾಸನಂ ಪಾತು ಕೌಮಾರಿ, ಭೈರವಿ ಚಕ್ಷುಶೋರ್ಭಾಮಾ

ಕತೌ ಪ್ರಿಶ್ತೇ ಮಹೇಶನಿ, ಕರ್ಣೌಶಂಕರಾಭಾಮಿನಿ

ವರ್ಜಿತಾನಿ ತು ಸ್ತಾನಾಭಿ ಯಾನಿ ಚ ಕವಚೇನಾ ಹೇ

ತನಿ ಸರ್ವಾಣಿ ಮೀ ದೇವಿಸತತಾಪಂತು ಸ್ಥಾಂಭಿನಿ

NEIGHBOURS, 13 A CROSS

20/10/2023




Thursday, October 19, 2023

ನವರಾತ್ರಿಯ ಆರನೇ ದಿನ (2023 ) - ಕಾತ್ಯಾಯನಿ

 ಶುಕ್ರವಾರ, 20 ಅಕ್ಟೋಬರ್ 2023 

ನವರಾತ್ರಿಯ ಆರನೇ ದಿನ  - ಕಾತ್ಯಾಯನಿ ದೇವಿ 


ಕಾತ್ಯಾಯಿನಿಯ ಮಹತ್ವ

ಕಾತ್ಯಾಯಿನಿಯು ಗುರು ಗ್ರಹವನ್ನು ಆಳುತ್ತಾಳೆ. ಗುರುಗ್ರಹದ ದೃಷ್ಟಿ ಹಾಗೂ ಪ್ರಭಾವ ಉತ್ತಮವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಪ್ರಯೋಜನ, ಸಮೃದ್ಧಿ ಹಾಗೂ ಯಶಸ್ಸನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಜನ್ಮಕುಂಡಲಿಯಲ್ಲಿ ಗುರು ದೋಷವಿದ್ದರೂ ಪರಿಹಾರವಾಗುವುದು.

​ಕಾತ್ಯಾಯಿನಿ ದೇವಿ ಮಂತ್ರ

- ''ಯಾ ದೇವಿ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ|

ನಮಸ್ತ್ಯೈ ನಮಸ್ತ್ಯೈ ನಮಸ್ತ್ಯೈ ನಮೋ ನಮಃ||''

- ''ಓಂ ಕಾತ್ಯಾಯಿನಿ ದೇವ್ಯೇ ನಮಃ''

​ಪ್ರಾರ್ಥನೆ

''ಚಂದ್ರಹಾಸೋಜ್ವಲಕರಾ ಶಾರ್ದೂಲ್ವರ್ವಾಹನಾ ಕಾತ್ಯಾಯಿನಿ

ಶುಭಂ ದದ್ಯಾದ್ ದೇವೀ ದಾನವಗತಿನೀ''

ಕಾತ್ಯಾಯಿನಿ ಸ್ತುತಿ

"ಯಾ ದೇವಿ ಸರ್ವಭೂತೇಷು ಮಾ ಕಾತ್ಯಾಯಿನಿ ರೂಪೇಣ ಸಂಸ್ಥಿತಾ

ನಮಸ್ತಸ್ತೈ ನಮಸ್ತಸ್ತೈ ನಮಸ್ತಸ್ತೈ ನಮೋ ನಮಃ''

​ಧ್ಯಾನ ಮಂತ್ರ

" ವಂದೇ ವಂಚಿತ ಮನೋರಥಾರ್ಥ ಚಂದ್ರದ್ರಕೃತಾಶೇಖರಂ

ಸಿಂಹಾರುಧ ಚತುರ್ಭುಜ ಕಾತ್ಯಾಯಿನಿ ಯಶಸ್ವಿನೀಂ

ಸ್ವರ್ಣವರ್ಣ ಆಜ್ಞಾಚಕ್ರಂ ಸ್ಥಿತಂ ಶಾಶ್ತಮಾ ದುರ್ಗಾ ತ್ರಿನೇತ್ರಂ

ವರಭಿತ ಕರಂ ಶಗಪದಾಧರಂ ಕಾತ್ಯಾಯನಸುತಂ ಭಜಾಮಿ

ಪತಂಬರಾ ಪರಿಧನಂ ಸ್ಮೇರಮುಖಿ ನಾನಾಲಂಕಾರ ಭೂಷಿತಂ

ಮಂಜೀರಾ, ಹರಾ, ಕೇಯುರಾ, ಕಿಂಕಿಣಿ, ರತ್ನಕುಂಡಲ ಮಂಡಿತಂ

ಪ್ರಸನ್ನವದನಾ ಪಲ್ಲವಧಾರಂ ಕಾಂತ ಕಪೋಲಂ ತುಗಂ ಕುಚಂ

ಕಾಮನೀಯಂ ಲಾವಣ್ಯಂ ತ್ರಿವಲ್ಲಿವಿಭೂಷಿತ ನಿಮ್ನ ನಾಭೀಂ''


ಕಾತ್ಯಾಯಿನಿ ಸ್ತೋತ್ರ

ಕಂಚನಾಭ ವರಾಭಯಂ ಪದ್ಮಧಾರಾ ಮುಖತೋಜ್ಜವಲಂ

ಸ್ಮೇರಮುಖಿ ಶಿವಪತ್ನೀ ಕಾತ್ಯಾಯನೇಸುತೇ ನಮೋಸ್ತುತೇ

ಪತಂಬರಾ ಪರಿಧನಂ ನಾನಾಲಂಕಾರ ಭೂಷಿತಂ

ಸಿಂಹಸ್ಥಿತಂ ಪದ್ಮಹಸ್ತಂ ಕಾತ್ಯಾಯನಸ್ತುತೇ ನಮೋಸ್ತುತೇ

ಪರಮಾನಂದಮಯೀ ದೇವೀ ಪರಬ್ರಹ್ಮಾ ಪರಮಾತ್ಮ

ಪರಮಶಕ್ತಿ, ಪರಮಭುಕ್ತಿ ಕಾತ್ಯಾಯನಸ್ತುತೇ ನಮೋಸ್ತುತೇ

ವಿಶ್ವಕಾರ್ತಿ, ವಿಶ್ವಭಾರತೀ, ವಿಶ್ವಹಾರ್ತಿ, ವಿಶ್ವಪ್ರತಿಮ

ವಿಶ್ವಾಚಿಂತ, ವಿಶ್ವಾತೀತ ಕಾತ್ಯಾಯನಸ್ತುತೇ ನಮೋಸ್ತುತೇ

ಕಾಂ ಬಿಜಂ ಕಾಂ ಜಪನಂದಕಂ ಬಿಜಾ ತೋಶಿತೇಕಂ

ಕಾಂ ಬೀಜಂ ಜಪದಾಶಕ್ತಕಾಂ ಕಾಂ ಸಂತುತಾ

ಕಾಮ್ಕರಹಾರ್ಶಿ ನಿಕಂ ಧನದಾಧಾನಮಸಾನಕಂ

ಬೀಜ ಜಪಕಾರಿನಿಕಾಂ ಬಿಜಾ ತಪ ಮಾನಸಕಂ

ಕಾರಿಣಿ ಕಾಂ ಮಂತ್ರಪೂಜಿತಕಂ ಬೀಜ ಧಾರಿಣಿಕಂ

ಕಿಂ ಕುಂಕೈ ಕಾಹ್‌ ಥಾಹ್‌ ಚಾಹ್‌ ಸ್ವಾಹರೂಪಿಣಿ

​ಕಾತ್ಯಾಯಿನಿ ಕವಚ

ಕಾತ್ಯಾಯನೌಮುಕ್ತ ಪಾತು ಕಂ ಸ್ವಾಹಸ್ವರೂಪಿಣಿ

ಲಲಾಟೇ ವಿಜಯ ಪಾತು ಮಾಲಿನಿ ನಿತ್ಯ

ಸುಂದರಿಕಲ್ಯಾಣಿ ಹೃದಯಂ ಪಾತು ಜಯ ಭಾಗಮಾಲಿನಿ


ಕಾತ್ಯಾಯಿನಿ ಕಥೆ

ಮಹರ್ಷಿ ಕಾತ್ಯಾಯನನು ದೇವಿಯು ಆದಿಶಕ್ತಿಗಾಗಿ ತೀವ್ರ ತಪಸ್ಸು ಮಾಡಿದನು. ಪರಿಣಾಮವಾಗಿ ಅವನು ದೇವಿಯನ್ನು ತನ್ನ ಮಗಳಾಗಿ ಸ್ವೀಕರಿಸಿದನು. ದೇವಿ ಮಹರ್ಷಿ ಕಾತ್ಯಾಯನ ಅವರ ಆಶ್ರಮದಲ್ಲಿ ಜನಿಸಿದಳು. ಅವರ ಮಗಳ ಕಾರಣದಿಂದ ಅವಳನ್ನು ಕಾತ್ಯಾಯನಿ ಎಂದು ಕರೆಯಲಾಗುತ್ತದೆ. ದೇವಿಯು ಜನಿಸಿದಾಗ, ಮಹಿಷಾಸುರನೆಂಬ ರಾಕ್ಷಸನ ದೌರ್ಜನ್ಯವು ಬಹಳಷ್ಟು ಹೆಚ್ಚಾಯಿತು. ರಾಕ್ಷಸರು ಸ್ವರ್ಗ ಹಾಗೂ ಭೂಮಿಯಲ್ಲಿ ಗದ್ದಲ ಸೃಷ್ಟಿಸಿದರು. ಆಶ್ವೀಜ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಕಾತ್ಯಾಯನ ಮುನಿ ಮನೆಯಲ್ಲಿ ತ್ರಿದೇವರ ಪ್ರಕಾಶಮಾನವಾದ ದೇವತೆ ಜನಿಸಿದಳು.


Posted 20/10/2023 



Wednesday, October 18, 2023

ನವರಾತ್ರಿಯ ಐದನೇ ದಿನ (2023 ) - ಸ್ಕಂದಮಾತೆ

Thursday , 19 /10/2023  

ನವರಾತ್ರಿ ಮಹೋತ್ಸವ ಐದನೆಯ ದಿನ ಸ್ಕಂದಮಾತಾ ದೇವಿ ಆರಾಧನೆ 


ನವರಾತ್ರಿಯ ಐದನೇ ದಿನದಂದು ದುರ್ಗಾ ದೇವಿಯ ಸ್ಕಂದಮಾತಾ ರೂಪವನ್ನು ಪೂಜಿಸಲಾಗುತ್ತದೆ.  ಧರ್ಮಗ್ರಂಥಗಳ ಪ್ರಕಾರ, ಮೂರ್ಖನಾದರೂ ಕೂಡ ಈಕೆಯ ಕೃಪೆಯಿಂದ ಬುದ್ಧಿವಂತನಾಗುತ್ತಾನೆ. ಸ್ಕಂದಮಾತಾ ಪರ್ವತಗಳಲ್ಲಿ ವಾಸಿಸುವ ಮೂಲಕ ಲೌಕಿಕ ಜೀವಿಗಳಲ್ಲಿ ಹೊಸ ಪ್ರಜ್ಞೆಯನ್ನು ಸೃಷ್ಟಿಸಿದಂತಹ ದೇವತೆ. ಸ್ಕಂದ ಕುಮಾರ ಕಾರ್ತಿಕೇಯನ ತಾಯಿಯಾಗಿರುವುದರಿಂದ ಆಕೆಯನ್ನು ಸ್ಕಂದಮಾತೆ ಎಂದೂ ಕರೆಯುತ್ತಾರೆ. ಅವಳನ್ನು ಪೂಜಿಸುವ ಮೂಲಕ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಭಕ್ತನಿಗೆ ಮೋಕ್ಷ ಸಿಗುತ್ತದೆ. ಅದೇ ಸಮಯದಲ್ಲಿ, ಅವರನ್ನು ಪೂಜಿಸುವುದರಿಂದ ಸಂತಾನ ಭಾಗ್ಯವೂ ದೊರೆಯುತ್ತದೆ ಎನ್ನುವ ನಂಬಿಕೆಯಿದೆ. 

ಸ್ಕಂದಮಾತೆಯ ಮಂತ್ರ

ಓಂ ದೇವಿ ಸ್ಕಂದಮಾತಾಯೈ ನಮಃ

​ಪ್ರಾರ್ಥನೆ


''ಸಿಂಹಸಂಗತ ನಿತ್ಯಂ ಪದ್ಮಾಂಚಿತ ಕರದ್ವಾಯೇ

ಶುಭದಾಸ್ತು ಸದಾದೇವಿ ಸ್ಕಂದಮಾತಾ ಯಶಸ್ವಿನೀ''

​ಸ್ತುತಿ

''ಯಾ ದೇವಿ ಸರ್ವಭೂತೇಷು ಮಾ ಸ್ಕಂದಮಾತಾ ರೂಪೇಣ ಸಂಸ್ಥಿತಾ

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ''

​ಧ್ಯಾನ ಮಂತ್ರ

ವಂದೇ ವಂಚಿತ ಕಾಮರ್ಥೇ ಚಂದ್ರಾರ್ಧಕೃತಶೇಖರಂ

ಸಿಂಹಾರೂಢ ಚತುರ್ಭುಜಾ ಸ್ಕಂದಮಾತಾ ಯಶಸ್ವಿನಿಂ

ಧವಲವರ್ಣ ವಿಶುದ್ಧ ಚಕ್ರಸ್ಥಿತೋಂ ಪಂಚಮ ದುರ್ಗಾ ತ್ರಿನೇತ್ರಂ

ಅಭಯ ಪದ್ಮ ಯುಗ್ಮ ಕರಂ ದಕ್ಷಿಣ ಉರು ಪುತ್ರಧರಂ ಭಜೆಂ

ಪೀತಾಂಬರಾ ಪರಿಧನಂ ಮೃದುಹಾಸ್ಯ ನಾನಾಲಂಕಾರ ಭೂಷಿತಂ

ಮಂಜಿರಾ, ಹರಾ, ಕೀಯೂರ, ಕಿಂಕಿಣಿ, ರತ್ನಕುಂಡಲ ಧಾರಿಣೀಂ

ಪ್ರಫುಲ್ಲ ವಂದನಾ ಪಲ್ಲವಧರಂ ಕಾಂತಾ ಕಪೋಲಂ ಪಿನಾ ಪಯೋಧರಂ

ಕಾಮನಿಯಂ ಲಾವಣ್ಯಂ ಚಾರು ತ್ರೈವಲ್ಲಿ ನಿತಂಬನೀಂ

​ಸ್ತೋತ್ರ


ನಮಾಮಿ ಸ್ಕಂದಮಾತಾ ಸ್ಕಂದಧಾರಿಣೀಂ

ಸಮಗ್ರತಾತ್ವಸಾಗರಂ ಪರಪರಗಹರಂ

ಶಿವಪ್ರಭಾ ಸಮುಜ್ವಲಾಂ ಸ್ಫುಚ್ಛಾಶಾಶಶೇಖರಂ

ಲಲಾಟರತ್ನಭಾಸ್ಕರಂ ಜಗತ್ಪ್ರದೀಪ್ತಿ ಭಾಸ್ಕರಂ

ಮಹೇಂದ್ರಕಶ್ಯಪಾರ್ಚಿತ ಸನಂತಕುಮಾರ ಸಮಸ್ತುತಂ

ಸುರಸುರೇಂದ್ರವಂದಿತಂ ಯಥಾರ್ಥನಿರ್ಮಲಾಧ್ಬುತಂ

ಅತರ್ಕ್ಯರೋಚಿರುವಿಜಂ ವಿಕಾರ ದೋಷವರ್ಜಿತಂ

ಮುಮುಕ್ಷುಭಿರ್ವಿಚಿಂತಿತಂ ವಿಶೇಷತತ್ವಮುಚ್ಚಿತಂ

ನಾನಾಲಂಕಾರ ಭೂಷಿತಾಂ ಮೃಗೇಂದ್ರವಾಹನಾಗೃಜಂ

ಸುಶುದ್ಧತಾತ್ವತೋಶನಂ ತ್ರಿವೇಂದಮರ ಭೂಷಣಂ

ಸುಧಾರ್ಮಿಕಾಪುಕಾರಿಣಿ ಸುರೇಂದ್ರ ವೈರಿಗ್ರತಿನಿಂ

ತಮೋಂದಕರಾಯಮಿನಿ ಶಿವಾಶುಭಾವಕಾಮಿನಿಂ

ಸಹಸ್ರಸೂರ್ಯರಂಜಿಕಂ ಧನಜ್ಜೋಗಕಾರಿಕಂ

ಸುಶುದ್ಧಾ ಕಾಲ ಕಂಡಾಲ ಶುಭ್ರಿದವೃಂದಮಾಜ್ಜುಲಂ

ಪ್ರಜಾಯಿಣೀ ಪ್ರಜಾವತೀ ನಮಾಮಿ ಮಾತರಂ ಸತೀಂ

ಸ್ವಕರ್ಮಕಾರಣೇ ಗತೀಂ ಹರಿಪ್ರಯಾಚ ಪಾರ್ವತಿಂ

ಅನಂತಶಕ್ತಿ ಕಾಂತಿದಾಂ ಯಶೋರ್ಥಭಕ್ತಿಮುಕ್ತಿದಾಂ

ಪುನಃ ಪುನಾರ್ಜಗದ್ಧಿತಂ ನಮಾಮ್ಯಂ ಸುರಾರ್ಚಿತಂ

ಜಯೇಶ್ವರಿ ತ್ರಿಲೋಚನೆ ಪ್ರಸಿದಾ ದೇವಿ ಪಾಹಿಮಾಂ


Posted 19/10/2023


ಶಕ್ತಿ ಪೀಠಗಳು - 51

 18/10.2023 

51 ಶಕ್ತಿ ಪೀಠಗಳು 

According to the legends, there are 51 Shakti Peeth of Goddess Sati (Wife of Lord Shiva), and it is considered to gratify Shakti before Shiv. Considering the Devi Purana as the most authentic, the number of Shakti Peethas is said to be 51.





\
Among these, the Shakti Pithas at Kamakhya, Gaya and Ujjain are regarded as the most sacred as they symbolize the three most important aspects of the Mother Goddess viz. Creation (Kamarupa Devi), Nourishment (Sarvamangala Devi/Mangalagauri), and Annihilation (Mahakali Devi).

Posted 18/10/2023

Tuesday, October 17, 2023

ನವರಾತ್ರಿಯ (2023) ನಾಲ್ಕನೆಯ ದಿನ :- "ಕುಷ್ಮಾಂಡ ದೇವಿ"

 ಬುಧವಾರ, 17 ಅಕ್ಟೋಬರ 2023 

ನವರಾತ್ರಿಯ ನಾಲ್ಕನೆಯ ದಿನ :- 

 


"ಕುಷ್ಮಾಂಡ ದೇವಿಯ ಹಿನ್ನಲೆ, ವಿಶೇಷ, ಕಥೆ ಮತ್ತು ಮಹತ್ವ :-" 

 "ಕುತ್ಸಿತಃ ಉಷ್ಮಾಃ ಕೂಷ್ಮಾಃ|" 

 "ಕುತ್ಸಿತಃ" ಅಂದರೆ "ಸಹಿಸಲು ಕಠಿಣವೆನಿಸಿದ್ದು". "ಉಷ್ಮಾ" ಎಂದರೆ "ಸೂಕ್ಷ ಲಹರಿಗಳ ಧ್ವನಿ". 

 "ತ್ರಿವಿಧತಾಪಯುಕ್ತಃ ಸಂಸಾರಃ ಸ ಅಂಡೇ ಮಾಂಸಪೇಶ್ಯಾಮ್ ಉದರರೂಪಾಯಾಂ ಯಸಾಃ ಸಾ ಕೂಷ್ಮಾಂಡಾ|". ಇಲ್ಲಿ ಈ ಶ್ಲೋಕದ ಅರ್ಥವು ಹೀಗಿದೆ. 

ತ್ರಿವಿಧದ ತಾಪಗಳೆಂದರೆ, ಉತ್ಪತ್ತಿ [ ಜನ್ಮ ], ಸ್ಥಿತಿ [ ಬೆಳವಣಿಗೆ ] ಮತ್ತು ಲಯ [ ಮೃತ್ಯು ]. ಇಲ್ಲಿ "ಮೃತ್ಯು" ಎಂದರೆ "ಮೋಕ್ಷದ ಸಂಕೇತ". ಅಂದರೆ, ಅನಿಶ್ಚಿತ ಕಾಲಾವಧಿಯವರೆಗೆ ವಿಶಿಷ್ಟ ಪದ್ಧತಿಯಿಂದ ನಾಶಹೊಂದುವುದು. 

"ಸಂಸಾರ"ವೆಂದರೆ, "ಪುನಃಪುನಃ". ಮತ್ತು "ಅಂಡ" ಎಂದರೆ, "ವಿಶಿಷ್ಟ ನಿಯಂತ್ರಣದಿಂದ ಯುಕ್ತವಾಗಿರುವ ಕೋಶ". "ಮಾಂಸ, ಜೀವಕೋಶಗಳು, ಉದರ ಮತ್ತು ರೂಪ ಇವುಗಳಿಂದ ಯುಕ್ತಸಂಪನ್ನವಾದ ಜೀವಗಳು ಈ ಕೋಶದಲ್ಲಿ ತ್ರಿವಿಧ ತಾಪಗಳ ಪುನಾರಾವೃತ್ತಿಯ ಅವಸ್ಥೆಯಿಂದ ಪುನಃಪುನಃ ಹೋಗುತ್ತಾರೆ. 

ಈ ಪ್ರಕ್ರಿಯೆಗಳಿಂದ ಬಿಡುಗಡೆ ಹೊಂದಲು ಯಾರ ಕೃಪೆಯ ಅವಶ್ಯಕತೆಯಿದೆಯೋ ಅವಳನ್ನೇ ಕೂಷ್ಮಾಂಡ ಎಂದು ಕರೆಯಲಾಗುತ್ತದೆ.

ಕೂಷ್ಮಾಂಡ ದೇವಿಯು ಸಿಂಹರೂಪಿಣಿಯಾಗಿದ್ದು ಇವಳಿಗೆ ಎಂಟು ಹಸ್ತಗಳಿದ್ದು ಅದರಲ್ಲಿ ತನ್ನ ಸಪ್ತ ಕೈಗಳಲ್ಲಿ ಕಮಂಡಲ, ಧನಸ್ಸು, ಬಾಣ, ಕಮಲ, ಚಕ್ರ, ಗಧೆ ಮತ್ತು ಅಮೃತ ಕಳಶ ಮತ್ತೊಂದು ಕೈಯಲ್ಲಿ ಜಪಮಾಲೆಯನ್ನು ಹಿಡಿದಿರುವಳು. ಇವಳ ತಲೆಯ ಮೇಲೆ ರತ್ನಗಳಿಂದ ಅಲಂಕರಿಸಿದ ಕಿರೀಟವಿದ್ದು, ಇವಳ ತಾಯಿಯ ರೂಪವನ್ನು ತೇಜಪುಂಜವೆಂದು ವರ್ಣಿಸಲಾಗುತ್ತದೆ. 

ಇವಳಿಗೆ ಅಷ್ಟ ಭುಜಗಳಿರುವುದರಿಂದ "ಅಷ್ಟಭುಜಾದೇವಿ" ಎಂದು ಬಣ್ಣಿಸಲಾಗುತ್ತದೆ. ಇವಳ ಮತ್ತೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು ಸದಾ ತನ್ನ ಭಕ್ತರಿಗೆ ರಕ್ಷಣೆ ನೀಡುವಳೆಂಬ ನಂಬಿಕೆ ಇದೆ. 


 ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಆರಾಧಿಸುವುದರಿಂದ ರವಿ ಗ್ರಹದಿಂದುಂಟಾಗುವ ಎಲ್ಲಾ ಬಗೆಯ ಕೆಡುಕುಗಳನ್ನು ನಿವಾರಿಸಬಹುದೆಂದು ವೈದಿಕ ಜ್ಯೋತಿಷ್ಯವು ಹೇಳುತ್ತದೆ. ದೇವಿ ಕೂಷ್ಮಾಂಡ ದೇವಿಯ ಆರಾಧನೆಯಿಂದ ನಾವು ನಮ್ಮ ಬದುಕಿನಲ್ಲಿ ಸರಿಯಾದ ದಾರಿಯಲ್ಲಿ ನಡೆಯಲು ಅನುಕೂಲವಾಗುತ್ತದೆ. ಇವಳ ಆರಾಧನೆಯು ನಮ್ಮ ಮನಸ್ಸಿನೊಳಗಿನ ದುಃಖ ಅಥವಾ ನೋವುಗಳನ್ನು ಕಡಿಮೆ ಮಾಡಿ ಸಂತಸವನ್ನು ನಮ್ಮ ಜೀವನದಲ್ಲಿ ತುಂಬುವಂತೆ ಮಾಡುವಳು.

ಕೂಷ್ಮಾಂಡ ದೇವಿಯ ವಿಶೇಷ :-" 


 ಕೂಷ್ಮಾಂಡ ದೇವಿಯು ಸಿಂಹರೂಪಿಣಿಯಾಗಿದ್ದು ಇವಳಿಗೆ ಎಂಟು ಹಸ್ತಗಳಿದ್ದು ಅದರಲ್ಲಿ ತನ್ನ ಸಪ್ತ ಕೈಗಳಲ್ಲಿ ಕಮಂಡಲ, ಧನಸ್ಸು, ಬಾಣ, ಕಮಲ, ಚಕ್ರ, ಗಧೆ ಮತ್ತು ಅಮೃತ ಕಳಶ ಮತ್ತೊಂದು ಕೈಯಲ್ಲಿ ಜಪಮಾಲೆಯನ್ನು ಹಿಡಿದಿರುವಳು. 

 


ಇವಳ ತಲೆಯ ಮೇಲೆ ರತ್ನಗಳಿಂದ ಅಲಂಕರಿಸಿದ ಕಿರೀಟವಿದ್ದು, ಇವಳ ತಾಯಿಯ ರೂಪವನ್ನು ತೇಜಪುಂಜವೆಂದು ವರ್ಣಿಸಲಾಗುತ್ತದೆ. 

 


ಇವಳಿಗೆ ಅಷ್ಟ ಭುಜಗಳಿರುವುದರಿಂದ "ಅಷ್ಟಭುಜಾದೇವಿ" ಎಂದು ಬಣ್ಣಿಸಲಾಗುತ್ತದೆ. ಇವಳ ಮತ್ತೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು ಸದಾ ತನ್ನ ಭಕ್ತರಿಗೆ ರಕ್ಷಣೆ ನೀಡುವಳೆಂಬ ನಂಬಿಕೆ ಇದೆ. 

 



ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಆರಾಧಿಸುವುದರಿಂದ ರವಿ ಗ್ರಹದಿಂದುಂಟಾಗುವ ಎಲ್ಲಾ ಬಗೆಯ ಕೆಡುಕುಗಳನ್ನು ನಿವಾರಿಸಬಹುದೆಂದು ವೈದಿಕ ಜ್ಯೋತಿಷ್ಯವು ಹೇಳುತ್ತದೆ. ದೇವಿ ಕೂಷ್ಮಾಂಡ ದೇವಿಯ ಆರಾಧನೆಯಿಂದ ನಾವು ನಮ್ಮ ಬದುಕಿನಲ್ಲಿ ಸರಿಯಾದ ದಾರಿಯಲ್ಲಿ ನಡೆಯಲು ಅನುಕೂಲವಾಗುತ್ತದೆ. ಇವಳ ಆರಾಧನೆಯು ನಮ್ಮ ಮನಸ್ಸಿನೊಳಗಿನ ದುಃಖ ಅಥವಾ ನೋವುಗಳನ್ನು ಕಡಿಮೆ ಮಾಡಿ ಸಂತಸವನ್ನು ನಮ್ಮ ಜೀವನದಲ್ಲಿ ತುಂಬುವಂತೆ ಮಾಡುವಳು.


Posted 18/10/2023



Monday, October 16, 2023

ನವರಾತ್ರಿಯ ಮೂರನೇ ದಿನ - 2023: ಚಂದ್ರ ಗಂಟಾ ದೇವಿ

 ಮಂಗಳವಾರ, 17/10/2023 



ನವರಾತ್ರಿ ಮಹೋತ್ಸವ ಮೂರನೆಯ ದಿನ - ಚಂದ್ರಘಂಟಾದೇವಿಯ ಆರಾಧನೆ - ಪೂಜಾ ವಿಧಾನ, ಮಂತ್ರ ಮತ್ತು ಮಹತ್ವ

ನವರಾತ್ರಿಯ ಮೂರನೇ ದಿನ ದುರ್ಗೆಯ ಮೂರನೇ ಅವತಾರವಾದ ಚಂದ್ರಘಂಟಾ ದೇವಿಗೆ ಅರ್ಪಿತವಾದ ದಿನ. ತನ್ನ ಭಕ್ತರ ಕಷ್ಟಗಳನ್ನು ಕ್ಷಣಮಾತ್ರದಲ್ಲೇ ನಿವಾರಿಸಿ, ಸಂತೋಷ, ಸಮೃದ್ಧಿಯನ್ನು ನೀಡುವ ತಾಯಿಯೇ ಈಕೆ. ಈಕೆಯನ್ನು ಹಲವಾರು ಮಂತ್ರ, ಸ್ತೋತ್ರ, ಪ್ರಾರ್ಥನೆಗಳಿಂದ ಒಲಿಸಿಕೊಳ್ಳಬಹುದು. ಮೂರನೇ ದಿನದ ಪೂಜಾ ವಿಧಾನ, ತಾಯಿಯನ್ನು ಒಲಿಸಿಕೊಳ್ಳುವ ಮಂತ್ರಗಳ ಕುರಿತು ಹೆಚ್ಚಿನ ಮಾಹಿತಿ... 

ಚಂದ್ರ ಘಂಟಾ ದೇವಿಯ ರೂಪ:

ದೇವಿ ಚಂದ್ರಘಂಟೆಯು ಚಿನ್ನದ ಮೈಬಣ್ಣ, ಹತ್ತು ತೋಳು ಹಾಗೂ ಮೂರು ಕಣ್ಣನ್ನು ಹೊಂದಿರುತ್ತಾಳೆ. ಘಂಟೆಯಾಕಾರದ ಚಂದ್ರನನ್ನು ಶಿರದಲ್ಲಿ ಧರಿಸಿದವಳಾದ್ದರಿಂದ ಈಕೆಯನ್ನು ಚಂದ್ರಘಂಟೆಯೆಂಬ ಹೆಸರು ಬಂದಿದೆ. ಈ ತಾಯಿಯನ್ನು ಚಂದ್ರಿಕಾ, ರಣಚಂಡಿಯೆಂದೂ ಕರೆಯುತ್ತಾರೆ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಪಡೆಯಬಹುದು. ಈಕೆಯ ಆಶೀರ್ವಾದದಿಂದ ಮನೆಯಲ್ಲಿ ಎಂದಿಗೂ ಆಹಾರದ ಕೊರತೆ ಎದುರಾಗದು ಎಂಬ ನಂಬಿಕೆ ಭಕ್ತರದ್ದು.


ಚಂದ್ರಘಂಟೆಯ ಮಂತ್ರ:

ಓಂ ದೇವಿ ಚಂದ್ರಘಂಟಾಯೈ ನಮಃ

ಓಂ ದೇವೀ ಚಂದ್ರಘಂಟಾಯೈ ನಮಃ ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ

ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ

ಚಂದ್ರಘಂಟೆಯ ಪ್ರಾರ್ಥನೆ:

ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ

ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ

ಚಂದ್ರಘಂಟೆಯ ಧ್ಯಾನ:

ವಂದೇ ವಂಚಿತಾಲಭಯ ಚಂದ್ರಧಾಕೃತ್ರಶೇಖರಂ

ಸಿಂಹರೂಢ ಚಂದ್ರಘಂಟ ಯಶಸ್ವಿನೀಂ

ಮಣಿಪುರಾ ಸ್ಥಿತಂ ತೃತಿಯಾ ದುರ್ಗಾ ತ್ರಿನೇತ್ರಂ

ಶಂಖ, ಗಧಾ, ತ್ರಿಶೂಲ, ಚಪಶರ, ಪದ್ಮಕಮಂಡಲು ಮಾಲಾ ವರಭಿತಕರಂ

ಪತಂಬರಾ ಪರಿಧಿಂ ಮೃದುಹಾಸ ನಾನಾಲಂಕಾರ ಭೂಷಿತಂ

ಮಂಜೀರಾ, ಹರಾ, ಕೆಯುರಾ, ಕಿಕಿಂಣಿ, ರತ್ನಾಕುಂಡಲ ಮಂಡಿಯಂ

ಪ್ರಫುಲ್ಲ ವಂದನಾ ಬಿಬಾಧಾರ ಕಾಂತಾ ಕಪೋಲಂ ತುಗಂ ಕುಚಂ

ಕಾಮನಿಯಂ ಲಾವಣ್ಯಂ ಕ್ಷಿನಾಕತಿ ನಿತಂಬನಿಂ

ಚಂದ್ರಘಂಟಾ ದೇವಿಯ ಸ್ತೋತ್ರ

ಅಪಾದುದ್ಧಾರಿಣಿ ತ್ವಂಹೀ ಆದ್ಯ ಶಕ್ತಿಃ ಶುಭ್‌ಪರಂ

ಅನಿಮಾದಿ ಸಿದ್ಧಿಧಾತ್ರಿ ಚಂದ್ರಘಂಟೇ ಪ್ರಣಮಾಮ್ಯಹಂ

ಚಂದ್ರಮಿಖಿ ಇಷ್ಟ ಧಾತ್ರಿ ಇಷ್ಟಂ ಮಂತ್ರ ಸ್ವರೂಪಿಣಿಂ

ಧನಧಾತ್ರಿ, ಆನಂದಧಾತ್ರಿ ಚಂದ್ರಘಂಟೇ ಪ್ರಣಮಾಮ್ಯಹಂ

ನಾನಾರೂಪಧಾರಿಣಿ ಇಚ್ಛಾಮಯಿ ಐಶ್ವರ್ಯದಾಯಿನೀಂ

ಸೌಭಾಗ್ಯಾರೋಗ್ಯದಾಯಿನಿ ಚಂದ್ರಘಂಟೇ ಪ್ರಣಮಾಮ್ಯಹಂ



Posted 17/10/2023 




ನವರಾತ್ರಿಯ ಎರಡನೇ ದಿನ ( 2023 )- ಬ್ರಹ್ಮಚಾರಿಣಿ ದೇವಿ

 ಸೋಮವಾರ , 16/10/2023




ಬ್ರಹ್ಮಚಾರಿಣಿ- ಹ್ರೀಂ ಶ್ರೀ ಅಂಬಿಕಾಯೈ ನಮಃ

 ಬ್ರಹ್ಮಚಾರಿಣಿ

ದಧಾನಾ ಕರ ಪದ್ಮಾಭ್ಯಾಂ ಅಕ್ಷಮಾಲಾ ಕಮಾಂಡಲು

ದೇವೀ ಪ್ರಸೀದತು ಮಯೀ ಬ್ರಹ್ಮಚಾರಿಣ್ಯನುತ್ತಮಾ||

 ಬ್ರಹ್ಮಚಾರಿಣಿ: ಬ್ರಹ್ಮ ಎಂದರೆ ತಪಸ್ಸು. ಬ್ರಹ್ಮಚಾರಿಣಿ ಎಂದರೆ ತಪಸ್ಸನ್ನು ಆಚರಿಸುವವಳು ಎಂದರ್ಥ. ಇವಳ ಬಲಕೈಯಲ್ಲಿ ಜಪಮಾಲೆ ಮತ್ತು ಎಡಕೈಯಲ್ಲಿ ಕಮಂಡಲ ಇರುತ್ತದೆ.
ದೇವಿ ಪಾರ್ವತಿಯು ಶಿವನನ್ನು ಪತಿಯಾಗಿ ಪಡೆದುಕೊಳ್ಳಲು ಬಹಳ ಕಠಿಣವಾದ ತಪಸ್ಸನ್ನು ಮಾಡಿದಳು. ಇಂತಹ ಕಠಿಣ ತಪಸ್ಸಿನ ಕಾರಣ ಇವಳನ್ನು ಬ್ರಹ್ಮಚಾರಿಣಿ ಎಂದು ಕರೆಯಲಾಯಿತು. ಬ್ರಹ್ಮಚಾರಿಣಿಯ ಉಪಾಸನೆಯಿಂದ ಮನುಷ್ಯರಲ್ಲಿ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ಇವುಗಳ ವೃದ್ಧಿ ಆಗುತ್ತದೆ. ಜೀವನದ ಕಠಿಣ ಸಂದರ್ಭದಲ್ಲಿಯೂ ಅವನ ಮನಸ್ಸು ಕರ್ತವ್ಯ ಪಥದಿಂದ ವಿಚಲಿತವಾಗುವುದಿಲ್ಲ. ನವರಾತ್ರಿಯ ಎರಡನೆಯ ದಿನ ಇವಳ ಪೂಜೆಯಿಂದ ಸಾಧಕನ ಮನಸ್ಸು ಸ್ವಾಧಿಷ್ಠಾನ ಚಕ್ರದಲ್ಲಿ ಸ್ಥಿತವಾಗುತ್ತದೆ. ಅಂದಿನ ಗ್ರಹ - ಕುಜ, ನೈವೇದ್ಯ - ಮೊಸರನ್ನ.
ದಕ್ಷ ಮಹಾರಾಜನ ಮಗಳು ಸತಿದೇವಿಯು ಯಜ್ಞಕುಂಡದ ಅಗ್ನಿಗೆ ಆಹುತಿಯಾದ ನಂತರ, ರಾಜನಾದ ಹಿಮಪರ್ವತನ ಮಗಳಾಗಿ ಪಾರ್ವತಿಯಾಗಿ ಜನಿಸುವಳು. ಇವಳನ್ನು "ಹೇಮವತಿ" ಎಂದೂ ಕೂಡಾ ಕರೆಯಲಾಗುತ್ತದೆ. ಪಾರ್ವತಿ ದೇವಿಯು ಮಹಾಶಿವನನ್ನು ವಿವಾಹವಾಗಲು ನಿರ್ಧರಿಸುವಳು. ಇವಳ ಈ ನಿರ್ಧಾರವನ್ನು ಇವಳ ಹೆತ್ತವರು ನಿರಾಕರಿಸಿ ಅವಳ ಬಯಕೆಯನ್ನು ನಿರುತ್ಸಾಹಗೊಳಿಸುವರು. ಇದರಿಂದ ಕಂಗಲಾದ ಇವಳು ನಾರದರ ಸೂಚನೆಯಂತೆ ಮಹಾರುದ್ರನನ್ನು ಒಲಿಸುವ ಸಲುವಾಗಿ ಸುಮಾರು 5000 ವರ್ಷಗಳ ಕಾಲ ಘೋರವಾದ ತಪಸ್ಸನ್ನು ಆಚರಿಸುವಳು. ಈ ಕಠಿಣವೆನಿಸಿದ ತಪ್ಪಸ್ಸಿನಿಂದ ಇವಳಿಗೆ "ತಪಶ್ಚಾರಿಣೀ" ಎಂಬ ಹೆಸರು ಬಂದಿತು. ತಪಶ್ಚಾರಿಣೀ ಎಂಬ ಪದಕ್ಕೆ ಅರ್ಥಾತ್ "ಬ್ರಹ್ಮಚಾರಿಣಿ" ಎಂಬ ಹೆಸರು ಇದೆ. ಇವಳು ಘೋರವಾದ ತಪಸ್ಸನ್ನು ಆಚರಿಸುವ ಸಮಯದಿ ಕೇವಲ ಹೂವು, ಹಣ್ಣು ಮತ್ತು ಎಲೆಗಳನ್ನು ಆಹಾರವಾಗಿ ಸೇವಿಸುತ್ತಿದ್ದಳು. ಎಲೆಯನ್ನು ಸಂಸ್ಕೃತ ಭಾಷೆಯಲ್ಲಿ "ಪರ್ಣ"ವೆಂದು ಕರೆಯಲಾಗುತ್ತದೆ. ಆದ್ದರಿಂದ ಬ್ರಹ್ಮಚಾರಿಣಿ ದೇವಿಯನ್ನು "ಅರ್ಪಣಾ" ಎಂದು ಕರೆಯುತ್ತೇವೆ. 


16/10/2023