ಭಾನುವಾರ, ಆಗೋಸ್ಟ್ 3, 2025
ಕರ್ನಾಟಕ ಚಿತ್ರಕಲಾ ಪರಿಷತ್, ಬೆಂಗಳೂರು.
ಶಾಲಿನಿ ಮೂರ್ತಿ ಅವರ 10, 11, 12 ನೇ ಭಾಗದ "ಕತೆಗಳ ತೋರಣ" ಪುಸ್ತಕದ ಬಿಡುಗಡೆ ಸಮಾರಂಭ.
ಮಕ್ಕಳಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭ, ದೀಪ ಬೆಳಗುವಿನೊಂದಿಗೆ ಮುಂದುವರಿಯಿತು.ಶ್ರೀಮತಿ ತೇಜಸ್ವಿನಿ ಅನಂತಕುಮಾರ್ , ಶ್ರೀ ಜಿ. ಬಾಲಕೃಷ್ಣ, ಹಾಗೂ ಶ್ರೀ ಯು. ಪ್ರೇಮಚಂದ್ರ ಅವರಿಂದ ಮಕ್ಕಳ ಸಮುಖದಲ್ಲಿ ಭಾಗ 10, 11, 12 ರ "ಕತೆಗಳ ತೋರಣ" ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
 |
| ಜಿ. ಬಾಲಕೃಷ್ಣ |
 |
| ಯು. ಪ್ರೇಮಚಂದ್ರ |
 |
| ವಿದ್ಯಾ ಬಿ ರಾವ್ |
 |
| ತೇಜಸ್ವಿನಿ ಅನಂತಕುಮಾರ್ |
ಅತಿಥಿಗಳು ತಮ್ಮ ಭಾಷಣದಲ್ಲಿ, ಮಕ್ಕಳ ಕಥಾ ಪುಸ್ತಕಗಳು ಅವರ ಸರ್ವಾಂಗೀಣ ಬೆಳವಣಿಗೆಗೆ ಬಹಳ ಅವಶ್ಯಕ ಎಂದು ಪ್ರತಿಪಾದಿಸಿದರು.
ಶ್ರೀಮತಿ ವಿದ್ಯಾ ಬಿ ರಾವ್ ಅವರು ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.ಭರ್ಜರಿಯಾದ ಉಪಹಾರದೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.
Posted 4/8/2025