Sunday, December 30, 2018

SHIVARAMA KARANTHA VEDIKE - ಕುವೆಂಪು ಜನ್ಮ ದಿನಾಚರಣೆ

Sunday, 30th December 2018
TaralaBalu Library, R T. Nagara, Bengaluru

Shivarama Karantha Vedike celebrated RashtraKavi Kuvempu 115th Birthday with a tribute to great poet, writer, nature lover and a great scholar.

Mangala PriyaDarshini, Nirmala Prabhu, Geetha Bhat

PRARTHANE

Geetha Padke


Mrs Indira JambalaDinne, with her usual style was the compere and Sri Pa Chandrashekhara Chadaga welcomed the guests and the audience. Mrs Geetha Padke briefly spoke about KUVEMPU.

Geetha Bhat honoured



B V Kedilaya speaking
Smt Mangala Priyadarshine spoke at length about 'YUGADA KAVI", Rashtra Kavi, Kuppalli Venkatappa Puttappa at length about his personality, achievements and works. It was an excellent presentation and Ms. Shashikala wrote nicely in her write up, copied below.

ಶಿವರಾಮ ಕಾರಂತ ವೇದಿಕೆಯು 30.12.2018 ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಂಡಿದ್ದ ' ರಾಷ್ಟ್ರಕವಿ ಕುವೆಂಪು ರವರ 115ನೇ ಹುಟ್ಟುಹಬ್ಬ' ಕಾಯ೯ಕ್ರಮ' ಅಥ೯ಪೂಣ೯ವಾಗಿ ನಡೆಯಿತು
ಎಂದಿನಂತೆ ಇಂದಿರಾ ಜಮಲದಿನ್ನಿಯವರ ನಿರೂಪಣೆ, ನೆಲೆ ಅಶ್ರಯ ಮಕ್ಕಳಿಂದ ನಾಡಗೀತೆ, ವೇದಿಕೆ ಸ್ಥಾಪಕರು, ಕಾಯ೯ದಶಿ೯ಗಳು ಆದ ಚಡಗ ಸರ್ ರವರಿಂದ ವೇದಿಕೆಯ ಇತಿಹಾಸ ಅತಿಥಿಗಳ ಪರಿಚಯ, ದೀಪಾ ಪಡ್ಕೆ ಯವರಿಂದ ಪ್ರಾಸ್ತಾವಿಕ ನುಡಿ.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಮಂಗಳಾ ಪ್ರಿಯದಶಿ೯ನಿಯವರು ಯುಗದ ಕವಿ ಕುವೆಂಪು ಶೀಷಿ೯ಕೆಯಲ್ಲಿ ಮಾತನಾಡಿದರು, ಮೊದಲಿಗೆ ವೇದಿಕೆಯಲ್ಲಿ ಸನ್ಮಾನಿತ ಖ್ಯಾತ ಲೇಖಕಿ ಪ್ರೇಮಾ ಭಟ್ ಧೀಘ೯ಕಾಲದ ಬರವಣಿಗೆಯ ಬಗ್ಗೆ ಪ್ರೀತಿಯ ನುಡಿಗಳನ್ನಾಡುತ್ತ. ಕುವೆಂಪು
ಕನ್ನಡದ ಪ್ರಬಂಧ ಕವಿ, ಕಾದಂಬರಿಕಾರ, ಲೇಖಕ, ವಿಮಶ೯ಕ, ಹೀಗೆ ಅನೇಕ ನೆಲೆಗಳಲ್ಲಿ ಸಾಹಿತ್ಯ ಕೃಷಿ ನೋಡಬಹುದು. ನವೋದಯ ಸಾಹಿತ್ಯದ ಮುಂಚೂಣಿಕಾರರು, ಹೊಸ ಚಿಂತನೆಗಳಿಗೆ ರೂಪ ದೊರೆತ ಇವರ   ಸಾಹಿತ್ಯ ಎರಡು ನೆಲೆಗಳಲ್ಲಿ ಗುರುತಿಸಿಕೊಂಡಿದೆ ಒಂದು ಭಾವುಕತೆ ಮತ್ತೊಂದು ಬೌದ್ಧಿಕ. ಇವರ ಕಾವ್ಯವಿಮಾಂಸೆ ಬುದ್ಧಿ ಭಾವಗಳ ದಶಿ೯ಸುವ ಕೆಲಸವಾಗಿದ್ದು 12ನೇ ಶತಮಾನದ ಬಸವಣ್ಣನವರಂತೆ ಅನೇಕ ವಾಗ್ವಾದಗಳಿಗೆ ದಾರಿ ಮಾಡಿಕೊಡುತ್ತದೆ.
ನವೋದಯ ಸಾಹಿತ್ಯ ಆದಶ೯, ವಿಚಾರವಾದದಿಂದ ಕೂಡಿದ್ದು ಮೂರು ಹಸಿವುಗಳಾದ ಸಮಾನತೆ, ಆಧ್ಯಾತ್ಮಕತೆ, ಆಧುನಿಕತೆ ಒಳಗೊಂಡಿದೆ. ಕುವೆಂಪು ರವರಿಗೆ, ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದು 50 ವಷ೯ಗಳ ಸಂಭ್ರಮದಲ್ಲೂ ಇದ್ದೇವೆ. ಕನ್ನಡ ಭಾಷೆ, ಸಂಸ್ಕೃತಿಗೆ ದೊಡ್ಡ ಕೊಡುಗೆ ನೀಡಿದ್ದಾರೆ, ಮನುಜಪಥ ವಿಶ್ವಪಥವಾಗಬೇಕೆಂದು ಸಾರಿದವರು. ಸಮಾಜಕ್ಕೆ ಅಂಟಿಕೊಂಡ ಜಾತಿ ಮತಗಳ ಪುನರ್ ವ್ಯಾಖ್ಯಾನ ಮಾಡಿದವರು. ಇಂಗ್ಲೀಷ್ ಭಾಷೆಯಿಂದಾಗುತ್ತಿದ್ದ ತಲ್ಲಣಗಳು, ನಮ್ಮ ಭಾಷೆ ಸಂಸ್ಕೃತಿಯ ರಕ್ಷಣೆಯ ಬಗ್ಗೆ ಅವರಿಗಿದ್ದ ತುಡಿತಗಳನ್ನು ನಾವು ಕಾಣಬಹುದು.
ತಾಯಿ ಮಗುವಿಗೆ ಜೋಗುಳ ಹಾಡುವಾಗ ಮಾತೃಭಾಷೆಯ ಉಪಯೋಗ ' ತಾಯಿ ತಾನೆ ಮೊದಲ.... ಕವನಗಳನ್ನು ಉದಾಹರಿಸುತ್ತ, ಬೇರೆ ಭಾಷೆಗಳ ಅಧ್ಯಯನಕ್ಕೆ ಅಂಗ್ಲ ಭಾಷೆ ಬೇಕು, ವೈಚಾರಿಕ ಲೇಖನಗಳನ್ನು ಕನ್ನಡದಲ್ಲಿಯೇ ತಿಳಿಸಬಹುದು ಇವರ ಅಭಿಪ್ರಾಯ, ಆಶಯ.  ಭಾಷೆ ಪ್ರೀತಿ. ಮಾತೃಭೂಮಿ  ಮಗಳಾದರೆ ಭಾರತಾಂಭೆ ಜನನಿ ' ಭಾರತ ಜನನಿಷ ತನುಜಾತೆ... ' ಕಾಣಬಹುದು. ವಡ್ಸ್ ವಥ್೯ ಪ್ರಭಾವಕ್ಕೆ ಒಳಗಾಗಿದ್ದವರು, ಪ್ರಕೃತಿಯ ಆರಾಧಕರು ' ದೇವರು ರುಜು ಮಾಡಿದನು...' , ಸೂಯೋ೯ದಯ, ಚಂದ್ರೋದಯಗಳನ್ನು ಪ್ರಕೃತಿ ಮಡಿಲಲ್ಲಿ ಆನಂದಿಸಿ ಕೃತಿಯಲ್ಲಿ ವಣಿ೯ಸಿದವರು.ನಾಟಕಗಳು- ಶೂದ್ರ ತಪಸ್ವಿ, ಬೆರಳ್ ಗೆ ಕೊರಳ್ ಮುಖಾಂತರ ಜಾತಿ, ನಾಗರೀಕ, ಅನಾಗರೀಕ ತುಲನೆ ಮಾಡಿಸಿದವರು.
ರಾಮಕೃಷ್ಣ ಪರಮಹಂಸ, ವಿವೇಕಾನಂದರ ಪ್ರಭಾವಕ್ಕೆ ಒಳಗಾಗಿ ಬದುಕು ಸ್ಪಶಿ೯ಸಿದವರು. ಅನೇಕ ಚಳುವಳಿಗಳನ್ನು ಬೆಳೆಸಿದವರು. ಬೇಂದ್ರೆಯವರು ವಿಮಶೆ೯ ಮಾಡುತ್ತ ಕುವೆಂಪುರವರು ಯುಗದ ಕವಿ ಜಗದ ಕವಿ ಎಂದಿದ್ದಾರೆ.ಪಂಪನ ಹಾಗೆ ಹೊಸ ಛಂದಸ್ಸು,ಕಂಠಕಾವ್ಯ ಭವ್ಯತೆಯ ಪರಿಕಲ್ಪನೆ ತಂದವರು. ಉಪಮೆ, ಮಹಾಉಪಮೆ ಪರಿಕಲ್ಪನೆ ಕೊಟ್ಚವರು, ಕನ್ನಡ ಸಾಹಿತ್ಯದಲ್ಲಿ ಅನನ್ಯತೆ ಇಟ್ಟುಕೊಂಡವರು
ಮನಸ್ಸಿಗೆ ತುಂಬಾ ನೋವಾದಾಗ ' ಹೋಗುವೆನು ನಾ ಮಲೆನಾಡಿಗೆ ನನ್ನೊಲುಮೆಯ ಗೂಡಿಗೆ' ಎಂದವರು ...ಹೀಗೆ ಯುಗದ ಕವಿಯ ಹಾದಿಯನ್ನು ಎಲ್ಲರ ಮುಂದೆ ಬಿಚ್ಚಿಟ್ಟರು, ಭಾಷಣ ಮತ್ತಷ್ಟು ಬೇಕು ಎನ್ನುವಷ್ಟು ಮನ ಮುಟ್ಚಿತು.
ಹಿರಿಯ ಖ್ಯಾತ ಲೇಖಕಿಗೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು ಬರವಣಿಗೆಯ ಅವರ ಪ್ರೀತಿಯ ಬದುಕು , ತೆರೆದಿಟ್ಟರು.
ವೇದಿಕೆಯ ಅದ್ಯಕ್ಷರಾದ ಕಿದಿಲಾಯಿರವರು. ಕುವೆಂಪುರವರ ಮತ್ತಷ್ಟು ಮಜಲುಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು
ವಂದನಾಪ೯ಣೆಯಿಂದ ಕಾಯ೯ಕ್ರಮ ಮುಗಿದು ಭೋಜನದ ಕಡೆ ಎಲ್ಲರೂ ಮುಖಮಾಡಿದರು - ಶಶಿಕಲಾ

78 year old writer, Smt. Prema Bhat was honoured and she spoke with good voice and conviction about her difficult days and her hunger for writing. Number of books were published.



Indira Jambaladinne
Sri. B V Kedilaya, President of Vedike also spoke about Kuvempu and the program concluded with vote of thanks and lunch.

posted Monday, 31st December 2018

No comments:

Post a Comment