Saturday, March 30, 2024

ಸುಭಾಷಿತ ನುಡಿ ಮುತ್ತುಗಳು - 6

 ಸುಭಾಷಿತ ನುಡಿ ಮುತ್ತುಗಳು - 6


ಶೃೀ ಹರಿ ಗುರುಭ್ಯೋ ನಮಃ 

1. ಅವಮಾನಗಳನ್ನು ಎದುರಿಸುವ ಸಾಮರ್ಥ್ಯವಿದ್ದರೆ.. ಸನ್ಮಾನ ಗಳನ್ನು ಸ್ವೀಕರಿಸುವ ಯೋಗ್ಯತೆ ಬಂದೇ ಬರುತ್ತದೆ... 

**************************************

2. ಬಾಯಿಂದ ಜಾರಿದ ಮಾತು, ಕೈಯಿಂದ ಜಾರಿದ ಅವಕಾಶ, ಹಾರಿ ಹೋದ ಪಕ್ಷಿ,  ಕಳೆದುಹೋದ ಕಾಲ ಎಂದೆಂದಿಗೂ ಹಿಂದಿರುಗಿ ಬರುವುದಿಲ್ಲ. 

************************************

3. ಸ್ವಾರ್ಥದ ಇನ್ನೊಂದು ರೂಪವೇ ಅಹಂಕಾರ. ಅಹಂಕಾರ ತುಂಬಿದ ವ್ಯಕ್ತಿ ಎಂದಿಗೂ ಕೆಡುಕನ್ನೇ ಮಾಡುತ್ತಾನೆ. ಆದರೆ ಕೊನೆಗೆ ಅವನ ಅಹಂಕಾರವೇ ಅವನ ಅಸ್ತಿತ್ವವನ್ನು ಕೂಡಾ ನಾಶ ಮಾಡಿ ಬಿಡುತ್ತದೆ. ಅಹಂಕಾರವನ್ನು ಬೆಳೆಸಿಕೊಳ್ಳುವ ವ್ಯಕ್ತಿ ಎಂದಿಗೂ ಸಂತಸ ಹೊಂದುವುದಿಲ್ಲ. ಜೀವನವನ್ನು ಹಾಳುಮಾಡಿ ಕೊಳ್ಳುತ್ತಾನೆ..!

*************************************

4. ತಿಳುವಳಿಕೆ ಇಲ್ಲದವನನ್ನು ಒಪ್ಪಿಸುವುದು ಸುಲಭ ಹೆಚ್ಚು ತಿಳಿದವನನ್ನು ಒಪ್ಪಿಸುವುದು ಇನ್ನೂ ಸುಲಭ. ಆದರೆ ಸ್ವಲ್ಪ ತಿಳಿದುಕೊಂಡು ಅಹಂಕಾರ ಪಡುವ ಮನುಷ್ಯನನ್ನು ದೇವರಿಂದ ಕೂಡ ಒಪ್ಪಿಸಲು ಸಾಧ್ಯವಿಲ್ಲ. 

*****************************************

5. ಬದುಕಿನಲ್ಲಿ ಸಂತುಷ್ಟರಾಗಿರಿ, ಆದರೆ ಸಂತೃಪ್ತರಾಗಬೇಡಿ,* ಏಕೆಂದರೆ ಸಂತೃಪ್ತರಾದರೆ ಬೆಳವಣಿಗೆ ನಿಂತುಬಿಡುತ್ತದೆ.

*****************************************

6. ಆಗಿ ಹೋಗಿರುವುದನ್ನು ಸರಿಪಡಿಸಲು ಪ್ರಯತ್ನಿಸಬೇಡಿ. ಅದು ಅಸಾಧ್ಯ... ಮುಂದೆ ಮಾಡ ಬೇಕಾದುದನ್ನು ಸರಿಯಾದ ರೀತಿಯಲ್ಲಿ ಯೋಚಿಸಿ ಮಾಡಿ.

***************************************

7. ಸಾಗುವ ದಾರಿ ಹೇಗೇ ಇರಲಿ.. ಇಡುವ ಹೆಜ್ಜೆ ಸರಿಯಾಗಿರಲಿ... ಕೋಪ ಅನ್ನೋದು ಒಬ್ಬರನ್ನು ಸೇವಿಸಿದರೆ ನಗು ಅನ್ನೋದು ನೂರು ಜನರ ಮನಸ್ಸನ್ನು ಗೆಲ್ಲುತ್ತದೆ..

**************************************

8. ಬದುಕಿನಲ್ಲಿ ಭಯ ಬಲ ವಾದಾಗ ಬದುಕು ಭಾರವಾಗುತ್ತದೆ. ಬದುಕಿಗೆ ಭರವಸೆ ಬಲವಾದಾಗ ಬದುಕು ಬಂಗಾರ ವಾಗುತ್ತದೆ. 

**************************************

9. ವಾದ ಮಾಡುವ ಬದಲು ಸಂವಾದ ಮಾಡುವುದನ್ನು ರೂಢಿಸಿಕೊಳ್ಳಬೇಕು. ವಾದದಲ್ಲಿ ನಮ್ಮ ಅಹಂಕಾರವನ್ನು ಪ್ರದರ್ಶಿಸುತ್ತೇವೆ, ಸಂವಾದದಲ್ಲಿ ಬೇರೆಯವರಿಂದ ಮಾಹಿತಿ ಸ್ವೀಕರಿಸುತ್ತೇವೆ...!! 

**************************************

10. ಕನಸುಗಳು ನನಸಾಗಿಲ್ಲ ಎಂದು ಯಾವತ್ತೂ ಪ್ರಯತ್ನ ಪಡುವುದನ್ನ ನಿಲ್ಲಿಸ ಬಾರದು.. ಏಕೆಂದರೆ ಕೆಲವೊಮ್ಮೆ ಬಾಡಿದ ಗಿಡಗಳಿಗೆ ನೀರುಣಿಸುವುದರಿಂದ ಮತ್ತು ಚಿಗುರೊಡೆದು ಬದುಕುತ್ತದೆ.

****************************************

11. ಮನುಷ್ಯರಿಗೆ ಮನುಷ್ಯರ ಮೇಲೆ ವಿಶ್ವಾಸ ಹೋದಾಗ 'ಬಾಗಿಲು' ಹುಟ್ಟಿದ್ದು. ಆ ವಿಶ್ವಾಸಕ್ಕೆ ಆಘಾತ ಆದಾಗ 'ಬೀಗ' ಹುಟ್ಟಿಕೊಂಡಿತು. ಆ ವಿಶ್ವಾಸ ಪೂರ್ತಿಯಾಗಿ ಸತ್ತಾಗ 'ಸಿಸಿಟಿವಿ' ಕಾಣಿಸಿ ಕೊಂಡಿತ್ತು.

***********************************

12. ಸುಂದರವಾದ ದೇಹ ಒಂದು ನಿರ್ದಿಷ್ಟ ವಯಸ್ಸಿನ ವರೆಗೆ ಮಾತ್ರ ಇರುತ್ತದೆ. ಆದರೆ ಸುಂದರವಾದ ಮನಸ್ಸು  ಸಾಯುವ ವರೆಗೆ ಜೊತೆಗಿರುತ್ತೆ... 

***********************************

13. "ಸಂತೋಷ ಎನ್ನುವುದು ಹತ್ತು ಸಾವಿರ ಖರ್ಚು ಮಾಡಿ ಹತ್ತು ಊರು ತಿರುಗಿದರೆ ಬರುವುದಿಲ್ಲ. 

ನಮ್ಮವರು ಎಂದು ಕೊಳ್ಳುವವರ ಜೊತೆ ಹತ್ತು ನಿಮಿಷವಾದರೂ ಮನಸ್ಸು ಬಿಚ್ಚಿ ಮಾತನಾಡಿದರೆ ನಿಜವಾದ ಸಂತೋಷ ಸಿಗುತ್ತದೆ... "

**********************************

14. ಕೆಟ್ಟವರಾದ್ರೂ ಪರವಾಗಿಲ್ಲ, ನೇರ ಮಾತನಾಡಿ. ಯಾಕಂದ್ರೆ ನಟಿಸುವ ಸಂಬಂಧಗಳು ಯಾವತ್ತೂ ಶಾಶ್ವತವಲ್ಲ

*********************************

15. ಸಮಯ ಹಾಗೂ ತಿಳುವಳಿಕೆ, ಈ ಎರಡೂ ಒಂದೇ ಬಾರಿಗೆ ಸಿಗುವುದು ಅಪರೂಪ. ಯಾರಿಗೆ ಸಿಗುವುವೋ ಅವರೆ ಭಾಗ್ಯ ವಂತರು. ಯಾಕೆಂದರೆ... ಸಮಯ ಇರುವಾಗ ತಿಳುವಳಿಕೆ ಇರುವುದಿಲ್ಲ, ತಿಳುವಳಿಕೆ ಬಂದ ನಂತರ ಸಮಯವೇ ಇರುವುದಿಲ್ಲ. 

***************************************

16. ಜೀವನ ಸಂತೋಷವಾಗಿರಬೇಕೆಂದರೆ ಹಣ ಆಸ್ತಿ, ಅಂತಸ್ತು, ಅಧಿಕಾರ ಅಂದ-ಚಂದ ಮುಖ್ಯವಲ್ಲ. ಹೊಂದಿಕೊಳ್ಳುವ ಮನಸ್ಸು ಒಳ್ಳೆಯ ಮಾನವೀಯತೆ, ಉತ್ತಮ ಗುಣ ನಡತೆ ಇದ್ದರೆ... ಎಂತಹ ಸಂದರ್ಭ ಬಂದರೂಸಂತೋಷವಾಗಿರಬಹುದು

**************************************

17. ನಮ್ಮನ್ನು ಎಷ್ಟು ಹೃದಯಗಳು ಪ್ರೀತಿಸುತ್ತೇವೆ ಅನ್ನೋದು

ಮುಖ್ಯವಲ್ಲ. ಯಾವ ಹೃದಯಕ್ಕೆ ನಮ್ಮ ಪ್ರೀತಿ ಅರ್ಥಮಾಡಿಕೊಳ್ಳುವ ಗುಣ ಇದೆ ಅನ್ನೋದು ಮುಖ್ಯ.

*****************************************

18. ಪ್ರತಿ ದಿನ ಆರಂಭ ಆಗೋದು ಕೆಲವು ನಿರೀಕ್ಷೆಗಳೊಂದಿಗೆ, ಪ್ರತಿ ದಿನ ಮುಗಿಯೋದು ಕೆಲವು ಅನುಭವಗಳೊಂದಿಗೆ. 

***************************************

19. ಮೌನವು ಒಂದು ಸುಂದರವಾದ ಭಾಷೆ. ನಮ್ಮಲ್ಲಿ ಎಷ್ಟು ಬುದ್ದಿವಂತಿಕೆ ಯ ಮಾತುಗಳು ಇದ್ದರೂ ಕೂಡ.... 

ಕೆಲವೊಂದು ಸಮಸ್ಯೆಗಳಿಗೆ ಪರಿಹಾರ "ಮೌನ" ಮಾತ್ರ... 

*****************************************

20. ಮಾತು ಮುಗಿದಿರಬಹುದು, ಪ್ರೀತಿ ಸಿಗದಿರಬಹುದು, ಸ್ನೇಹ ಕೈ ಕೊಟ್ಟಿರುವುದು, ಸಂಬಂಧಗಳು ಕಡೆಗಣಿಸಿರಬಹುದು. ಆದರೆ ನೆನಪಿಡಿ; ಯಾರಿಲ್ಲದಿದ್ದರೂ ಜೀವನ ಸಾಗೇ ಸಾಗುತ್ತದೆ. 

******************************************

21. ಸಮಯ ಹಾಗೂ ಸಂದರ್ಭ ಎರಡಕ್ಕೂ ವ್ಯತ್ಯಾಸ ಇದೆ. ಸಮಯ ತುಂಬಾ ಜನರನ್ನು ಪರಿಚಯಿಸುತ್ತದೆ. ಆದರೆ..... ಸಂದರ್ಭ ಅವರ ನಿಜವಾದ ಮುಖವನ್ನು ಪರಿಚಯಿಸುತ್ತದೆ....

******************************************

No comments:

Post a Comment