Friday, February 20, 2026
Sambrama Swan by Lines, Kanakpura Road, Bengaluru.
Left the venue after lunch, wish the newly wedding couple "SOUMYA-SURAJ", happy and long married life. God Bless.
MEMORIES OF BIRTHIMANE,BIRTHDAYS, POOJA, CELEBRATIONS, FESTIVALS, VISITS, DRAMA, MUSIC, YAKSHAGANA, GET-TOGETHERS, WEDDING ENGAGEMENTS, WEDDINGS, WEDDING ANNIVERSARY, BRAHMOPADESHA, NAMAKARANA, SEEMANTHA, BOOK RELEASE, BOOK REVIEW, AND SHRADDHANJALI....
Friday, February 20, 2026
Sambrama Swan by Lines, Kanakpura Road, Bengaluru.
Thursday, Feb.20, 2026
ನಾನು ವಾರದಲ್ಲಿ ಮೂರ್ನಾಲ್ಕು ದಿನ ವಿಧವಿಧದ ದೋಸೆ ಮಾಡುವವಳು. ಯಾರೋ ಕೊಟ್ಟ ಗಳಿತ ಪಚ್ಚಬಾಳೆ ಇದ್ದ ಕಾರಣ ನಿನ್ನೆ ಬಾಳೆಹಣ್ಣು ದೋಸೆ ಮಾಡಿದ್ದೆ. ಹಿಟ್ಟಿನಲ್ಲಿ ಅದ್ದಿ ಅದ್ದಿ ಬಾಳೆಹಣ್ಣಿನ ತೆಳುವಾದ ವರ್ತುಲಾಕಾರದ ತುಂಡನ್ನು ಕಾವಲಿಯ ಮೇಲೆ ಇಟ್ಟು, ಮೇಲೊಂದಿಷ್ಟು ತುಪ್ಪ ಹಾಕಿ, ಮುಚ್ಚಳ ಮುಚ್ಚಿ, ಅದು ಬೆಂದ ಮೇಲೆ ಮಗುಚಿ ಹಾಕಲು ಕಾವಲಿಯಿಂದ ತೆಗೆಯಲು ಹೋದರೆ ‘ಕಾವಲಿಯನ್ನು ಬಿಡುವುದೇ ಇಲ್ಲ’ ಎನ್ನುವ ಅಚಲ ನಿರ್ಧಾರದಿಂದ ಅದು ಕಾವಲಿಗೆ ಅಂಟಿಕೊಂಡೇ ಇತ್ತು. ನನ್ನಲ್ಲಿ ಇರುವ ಅಲ್ಪಸ್ವಲ್ಪ ಬುದ್ಧಿಯನ್ನು, ಶಕ್ತಿಯನ್ನು ಉಪಯೋಗಿಸಿ ದೋಸೆಯನ್ನು ‘ಬಲಾತ್ಕಾರ’ ಪೂರ್ವಕವಾಗಿ ಕಾವಲಿಯಿಂದ ಎಬ್ಬಿಸಿ, ಮಗುಚಿ ಹಾಕಿ ಕಾಯಿಸಿ, ಪುನಃ ಎತ್ತಲು ಹೋದಾಗ ‘ದುಂಡನೆಯ’ ದೋಸೆ ತನ್ನ ರೂಪವನ್ನು ಕಳೆದುಕೊಂಡು ತಿನ್ನುವವರಿಗೆ ಅನುಕೂಲವಾಗಲೆಂದು ಸಣ್ಣ ಸಣ್ಣ ತುಂಡುಗಳಾಗಿ ಕಾವಲಿಯನ್ನು ಬಿಟ್ಟೆದ್ದಿತು. ನಾನೂ ಕೂಡಾ ಅಷ್ಟೇ ‘ಹಠಮಾರಿ’! ಪ್ರತೀ ದೋಸೆಯೊಂದಿಗೆ ಅಂತಹ ‘ಉಗ್ರ’ ಹೋರಾಟ ಮಾಡುತ್ತಲೇ ಎಲ್ಲರಿಗೂ ದೋಸೆ ಮಾಡಿ ಹಾಕಿದೆ. ಪ್ರಾಯಶಃ ಹಿಟ್ಟಿನ ಹದದ ಸಮಸ್ಯೆ ಅಥವಾ ಬಾಳೆಹಣ್ಣು ಗಳಿತದ್ದು ಜಾಸ್ತಿಯಾಗಿ ಈ ಸಮಸ್ಯೆ ಆಗಿರಬಹುದೆಂದು ಭಾವಿಸಿ ಸಮಾಧಾನ ಮಾಡಿಕೊಂಡೆ
ಆದರೆ ಸಾಯಂಕಾಲ ಉದ್ದಿನ ದೋಸೆ ಮಾಡಿದಾಗಲೂ ದೋಸೆ ಕಾವಲಿ ಯಾವುದೇ ಭೇದಭಾವ ಇಲ್ಲದೆ ಬೆಳಗಿನ ಸವಾಲನ್ನೇ ನನ್ನ ಮುಂದೊಡ್ಡಿತು?! ನಾನೂ ಕೂಡಾ ಅದರೊಡನೆ ಹೋರಾಡುತ್ತಲೇ ದೋಸೆ ಮಾಡುತ್ತಾ ಎಬ್ಬಿಸುವಾಗ ತುಂಡು ತುಂಡಾದ ದೋಸೆಯನ್ನೇ ಮಾಡಿ ಎಲ್ಲರಿಗೂ ತಿನ್ನಲು ಕೊಟ್ಟೆ. ನಾವೆಲ್ಲರೂ ಕಾವಲಿಗೆ ಸಡ್ಡು ಹೊಡೆದು ಹೊಟ್ಟೆ ತುಂಬಾ ‘ವಿರೂಪ’ವಾದ ದೋಸೆಯನ್ನು ತಿಂದು ಸಂತೃಪ್ತರಾದೆವು. ದೋಸೆ ಕಾವಲಿಯ ಮೇಲೆ ಗೆಲುವು ಸಾಧಿಸಿದ ವಿಚಿತ್ರ ಖುಷಿ ಇದ್ದರೂ ಈ ‘ಉಗ್ರ’ ಹೋರಾಟದಲ್ಲಿ ನನ್ನ ‘ಕೈ’ಗೆ ನೋವಾಯಿತು ಎನ್ನುವುದು ವಾಸ್ತವದ ವಿಷಯವಾಗಿತ್ತು! ಅಂತೂ ಹೀಗೊಂದು ಉಗ್ರ ಹೋರಾಟದ ವಿಷಯವನ್ನು ಬರೆಯಲು ನಮ್ಮ ಮನೆಯ ದೋಸೆ ಕಾವಲಿ ಪ್ರೇರೇಪಿಸಿತು ಎಂಬಲ್ಲಿ ಈ ಬರಹದ ಮುಕ್ತಾಯ ಮಾಡುತ್ತಿದ್ದೇನೆ
Posted 20/2/2026
Thursday, February 19, 2026
Sunandi Holistic Eldercare, Kodigehalli, Bengaluru.
Another divine session of Bhajan, Satsang, Aarthi took place at the above centre, for the benefit of residents.
Sunday, February 15, 2026
Bhuvaneshwarinagara, Kempapura, Bengaluru.
Today being Maha Shivaratri Day, and we wanted to visit nearby temple and the we found one in our Bhuvaneshwarinagara, in the 7th Cross.
Saturday, February 14, 2026
Majunatha Holla, a relation and a well wisher, went through agonising days with his daughter Archana, who was suffering with ALS dicease for last three years.
Manjunath's message last month when Archana was on her death bed:
Archana's conversation with me. Search screen of TV is being used as an alphabet chart.
To get one sentence , she has to blink her eyes for each character and line.
She knows that her days are numbered, but not ready to go.
After bravely battling scleroderma for three years, she left us on January 31st. Her strength, grace, and gentle spirit will always be remembered. Heartfelt condolences to her family and loved ones.
May her soul rest in peace. 🌹
May her Soul Rest in Peace....
Om Shanthi....
Posted 14/2/2026
Thursday, February 12, 2026
Sunandi Holistic Eldercare, KodigeHalli, Bengaluru.
Another divine session of Bahjane to residents of ElderCare centtre was conducted .
Wednesday, February 11, 2026
Madduru, Karnataka
Wednesday, February 11, 2026
Prakruthi Prem Apartment, Vijayanagara, Mysuru..
They were actively participating in Dubai Brahmana Samaja in all programs, and Sugama Bhajane group.
Sudhaker Rao Pejavar, Latha from Bengaluru
Krishnaraja Tantry, Sulatha from Udupi,
Jayarama Somayaji, Nalini from Bengaluru
Udaykumar, Savithri at Mysuru (Host)
It was nice meeting old friends from Dubai and now settled back in India.
God Bless All.
Posted 12/2/2026
Tuesday. February 10, 2026
ಅಲರ್ಜಿಗೆ ಸಡನ್ ಆಗಿ ನನ್ನ ನೆನಪಾಯಿತೋ ಏನೋ? ಬಂದು ನನ್ನನ್ನು ಆವರಿಸಿಯೇ ಬಿಟ್ಟಿತು ನೋಡಿ! ಕಳೆದ ಮಂಗಳವಾರ ಬೆಳಿಗ್ಗೆ ಏಳುವಾಗ ನನ್ನ ಮೂಗು, ತುಟಿಗಳು ಸ್ವಲ್ಪ ಬಿರುಸಾಗಿದ್ದವು ಹಾಗೂ ಅವುಗಳ ಸುತ್ತಲಿನ ಪ್ರದೇಶ ಕೆಂಪಗಾಗಿತ್ತು. ಮೇಲ್ತುಟಿಯ ಒಂದು ಭಾಗ ಸ್ವಲ್ಪ ಊದಿತ್ತು. ಇದೇನಪ್ಪಾ ಎಂದು ನನ್ನ ‘ಅಂದದ’ ಫೋಟೊ ತೆಗೆದು ನನ್ನ ಡಾಕ್ಟರ್ ಸೊಸೆಗೆ ಕಳಿಸಿದೆ. “ಅಲರ್ಜಿಯ ತರಹ ಕಾಣಿಸುತ್ತದೆ; ಒಂದು ಒಕಾಸೆಟ್ ಮಾತ್ರೆ ತಗೊಳ್ಳಿ” ಎಂದು ಅವಳಿಂದ ಸಲಹೆ ಬಂದ ಮೇಲೆ ಮಧ್ಯಾಹ್ನ ಒಂದು ಮಾತ್ರೆ ತೆಗೆದುಕೊಂಡು ರೆಸ್ಟ್ ಮಾಡಿದೆ. ಸಾಯಂಕಾಲ ಸೂರ್ಯಾಸ್ತ ನೋಡಲು ಕಾರಿನಲ್ಲಿ ಒಂದು ಪುಟ್ಟ ತಿರುಗಾಟ ಮಾಡಿಕೊಂಡು ಬಂದ ನಂತರ ಅಲರ್ಜಿ ಹೆಚ್ಚಿದ ಹಾಗೆ ಕಂಡಿತು. ನಾನೇ ಡಾಕ್ಟರ್ ಆಗಿ ಮತ್ತೊಂದು ಮಾತ್ರೆ ತಗೊಂಡು ಮಲಗಿದೆ. ರಾತ್ರಿ ನಿದ್ರೆ ಅಷ್ಟೇನೂ ಹಿತಕರವಾಗಿರಲಿಲ್ಲ. ಮುಖ ತುಂಬಾ ಬಾಧಿಸುತ್ತಿತ್ತು. ಭಾರವೆನಿಸುತ್ತಿದ್ದ ಮುಖವನ್ನು ಹೊತ್ತು ಬೆಳಿಗ್ಗೆ ಎದ್ದ ನಾನು ಮುಖ ಮಾರ್ಜನ ಮಾಡುತ್ತಾ ಕನ್ನಡಿಯಲ್ಲಿ ನೋಡಿಕೊಂಡರೆ ಯಾವುದೋ ‘ಏಲಿಯೆನ್’ ಅನ್ನು ನೋಡಿದ ಹಾಗಾಯಿತು. ನನ್ನ ಗುರುತು ನನಗೇ ಸಿಗದೆ ಕಂಗಾಲಾದೆ. ಕೋಣೆಯಿಂದ ಹೊರ ಬಂದ ನನ್ನ ಗುರುತು ನಮ್ಮ ಶಂಕರಿಗೂ ಸಿಗದಷ್ಟು ಮುಖ-ಮೂತಿ ಊದಿಕೊಂಡಿತ್ತು. ತುಟಿಯಂತೂ ಊದಿ ನೇತಾಡುತ್ತಿತ್ತು. ಮುಖದಲ್ಲಿ ಊದದೇ ಇದ್ದ ಯಾವ ಭಾಗವೂ ಇರಲಿಲ್ಲ. ಯಾರದ್ದೋ ಎಕ್ಸ್ಟ್ರಾ ಮುಖವನ್ನು ನನ್ನ ಮುಖಕ್ಕೆ ಫಿಕ್ಸ್ ಮಾಡಿದ ಹಾಗಾಗಿತ್ತು. ಪುನಃ ಸೊಸೆಗೆ ಫೋಟೊ ಕಳಿಸಿದಾಗ 'ಕೂಡಲೇ ಲೋಕಲ್ ಡಾಕ್ಟರ್ ಹತ್ತಿರ ಹೋಗಿ' ಎಂದು ಹೇಳಿದಳು. ಬೆಳಗಿನ ಹತ್ತೂವರೆಯ ಸುಮಾರಿಗೆ ಸಾಗರದ ಡಾ. ದೀಪಕ್ ಹತ್ತಿರ ಹೋದಾಗ ಅಲರ್ಜಿ ಇಂಜೆಕ್ಷನ್ ಚುಚ್ಚಿ, ಒಂದು ಕೋರ್ಸ್ ಮಾತ್ರೆ ಕೊಟ್ಟರು. ನಂತರದಲ್ಲಿ ಊತ ಸಾಕಷ್ಟು ಇಳಿದರೂ ಅಲರ್ಜಿಯ ‘ಆಫ್ಟರ್ ಇಫೆಕ್ಟ್’ ಜೋರಾಗಿಯೇ ಇತ್ತು. ಮುಖವಂತೂ ಕೆಂಪು ಮೂತಿಯ ಮಂಗನ ತರಹ ಆಗಿತ್ತು. ತದನಂತರದಲ್ಲಿ ಮುಖದಿಂದ ಅಲರ್ಜಿ ಮೈಕೈಗೆಲ್ಲಾ ರವಾನೆ ಆಯ್ತು. ಹಾಗೆ ಮಾಡದಿದ್ದರೆ ಒಂದೇ ದೇಹದ ಉಳಿದ ಭಾಗಗಳಿಗೆ ಬೇಜಾರಾಗಬಹುದೆಂಬ ಯೋಚನೆ ಅಲರ್ಜಿಯದ್ದೋ ಏನೋ? ಅಲ್ಲೆಲ್ಲಾ ಆದದ್ದು ಊತಕ್ಕಿಂತ ಹೆಚ್ಚು ಕೆಂಪು ದದ್ದುಗಳು, ರ್ಯಾಶಸ್ ಹಾಗೂ ಅದರೊಡನೆಯ ಅದ್ಭುತವಾದ ತುರಿಕೆ! ಎಲ್ಲಾದರೂ ಒಂದು ಕಡೆ ಮುಟ್ಟಿದರೆ ತುರಿಸುತ್ತಾ ಇರುವ ಎನ್ನುವ ಭಾವ. ತುರಿಸುವ ಪ್ರಕ್ರಿಯೆ ಎಷ್ಟು ರಗಳೆ ಕೊಡುತ್ತದೋ ಅಷ್ಟೇ ಹಿತವನ್ನೂ ಕೊಡುತ್ತದೆ. ಅಲ್ಲವೆ?!
ಈ ಅಲರ್ಜಿಯ ಕಾಲದಲ್ಲಿ ನಾನೊಂದಿಷ್ಟು ದಣಿದೆ! ನನ್ನ ಸಹಜವಾದ ಮಲಗುವ ಭಂಗಿಯಲ್ಲಿ ಮಲಗಲು ಆಗದಂತಹ ತೊಂದರೆ ಕೊಡುವ ಅಲರ್ಜಿಯು ನನ್ನ ನಿದ್ರಾ ಸುಖವನ್ನೇ ಕೊಂದು ಹಾಕಿ ಬಿಟ್ಟಿದೆ. ಈಗ ಕಡಿಮೆಯಾಗುತ್ತಿರುವಂತೆ ಅನಿಸುತ್ತಿರುವ ಅಲರ್ಜಿ ನನ್ನನ್ನು ಬಿಟ್ಟು ತೊಲಗಿದರೆ ಸಾಕೆಂಬ ಹಂಬಲ ನನ್ನದು. ಅಲರ್ಜಿಯನ್ನು ಅನುಭವಿಸಿದವರಿಗೆ ಇದೆಲ್ಲ ಸುಲಭವಾಗಿ ಅರ್ಥವಾಗುವ ವಿಷಯವಲ್ಲವೆ?
ಹೀಗೊಂದು ಅಲರ್ಜಿಯ ವೃತ್ತಾಂತ!
Posted 11/2/2026
Sunday, February 8, 2026
Nagarabavi, Bengaluru.
Sujay Udupa is college mate of Ravi, at MIT Manipal, during their Engineering studies.