Monday, April 1, 2024

ಮೋದಿ ಮತ್ತೊಮ್ಮೆ - 1

 2 ಏಪ್ರಿಲ್ 2024 


ರಾಮಾಯಣವನ್ನು ಗಮನಿಸಿ........
ಅಂಗದ, ಸಂಧಾನಕ್ಕೆ ಬಂದಾಗ ರಾವಣ ಗಹಗ್ಗಹಿಸಿ ನಕ್ಕಿದ್ದ....."ಅಂಗದಾ...ನಿನ್ನಪ್ಪಲಿ ಮತ್ತು ನಾನು ಇಬ್ಬರೂ ಪ್ರಾಣ ಸ್ನೇಹಿತರು....!ನಿನ್ನ ಅಪ್ಪನನ್ನು ಮರೆಯಲ್ಲಿ ನಿಂತು ಬಾಣ ಬಿಟ್ಟು ಕೊಂದವ ರಾಮ....!
ನೀನು ಈಗ ರಾಮನ ಪರವಾಗಿ ..ಸಂಧಾನಕ್ಕೆಂದು ಬಂದಿದ್ದೀಯಾ....!!ನೀನು....ನನ್ನ ಪರವಾಗಿ ನಿಲ್ಲು...
ನಿನ್ನ ಸಕಲ ರಾಜ್ಯವನ್ನು ಸುಗ್ರೀವನಿಂದ ನಿನಗೆ ನೀಡುತ್ತೇನೆ..."...ಅಂಗದ ನಕ್ಕ....
"ರಾವಣಾ....ನಾವು ಏನೇ ಮಾಡಿದರೂ ....ಯಾವುದೇ ನಿರ್ಣಯ ತೆಗೆದು ಕೊಂಡರೂ...ಅದಕ್ಕೊಂದು
ಘನತೆ ಇರಬೇಕು...ಗೌರವ ಇರಬೇಕು....ನಮ್ಮನಿರ್ಧಾರದಲ್ಲಿ..ಸತ್ಯನ್ಯಾಯ.. ಧರ್ಮಗಳಿರಬೇಕು...
ಶ್ರೀರಾಮ ಯಾರು ಗೊತ್ತಾ ?...ಅಪ್ಪ ದಶರಥ ಮಹಾರಾಜ ಕೈಕೆಯಿಗೆ ಕೊಟ್ಟ ಮಾತಿನಂತೆ..
ಪಟ್ಟಾಭಿಷೇಕವನ್ನು ಬಿಟ್ಟು...ರಾಜ್ಯವನ್ನೂ..ಅರಮನೆಯ ಸಕಲ ವೈಭೋಗವನ್ನುತ್ಯಜಿಸಿ....ತಾನು ಹದಿನಾಲ್ಕು ವರ್ಷ ವನವಾಸಕ್ಕೆ ಬಂದವ.....!ಸತ್ಯಕ್ಕಾಗಿ..ನ್ಯಾಯಕ್ಕಾಗಿ.. ಧರ್ಮಕ್ಕಾಗಿ ..ಬದುಕುತ್ತಿರುವವ ನನ್ನ
ಶ್ರೀರಾಮ...ನನ್ನ ತಂದೆ ವಾಲಿಯು ದೊಡ್ಡ ತಪ್ಪು ಮಾಡಿದ್ದ...ಹಾಗಾಗಿ ಅವನಿಗೆ ಶಿಕ್ಷೆ ಕೊಟ್ಟ... ಅದರಲ್ಲಿ ತಪ್ಪಿಲ್ಲ....
ಮರ್ಯಾದ ಪುರುಷೋತ್ತಮ ನನ್ನ ಶ್ರೀರಾಮ......ರಾಮನ ಮಡದಿ ಸೀತಾಮಾತೆಯನ್ನು ನೀನು ಬಲಾತ್ಕಾರವಾಗಿ
ಕದ್ದು ತಂದದ್ದು ತಪ್ಪು..ಅದು ಅಪರಾಧ....ಈಗಲೂ ಕಾಲ ಮಿಂಚಿಲ್ಲ....ಸೀತಾ ಮಾತೆಯನ್ನು ರಾಮನಿಗೆ ಒಪ್ಪಿಸಿ
ಧರ್ಮ ದೇವತೆ ರಾಮನಿಗೆ ಶರಣಾಗು...."..
ಅಂಗದನ ನಿಲುವು ಸ್ಪಷ್ಟವಾಗಿತ್ತು...ರಾವಣ ಗಹಗ್ಗಸಿ ನಕ್ಕ....ಅಂಗದನ ಮಾತಿಗೆ ರಾವಣ ಒಪ್ಪಲಿಲ್ಲ....
ಘನ ಘೋರ ಯುದ್ಧವಾಯಿತು....!ರಾಮ ರಾವಣನನ್ನು ಯುದ್ಧದಲ್ಲಿ ಕೊಂದು ಹಾಕಿದ....
ರಾಮ ವಿಜಯವನ್ನು ಸಾಧಿಸಿದ....ಸ್ವಲ್ಪತಡ ಆಗಬಹುದು...ಆದರೆ....ಯಾವತ್ತಿಗೂ ಸತ್ಯ..ನ್ಯಾಯ..
ಧರ್ಮದ ವಿಜಯವೇ ಶತ ಸಿದ್ಧ.....
*************************************************
ಮಹಾಭಾರತವನ್ನೂ ಗಮನಿಸಿ....
ವಿದುರ...ದಾಸಿ ಪುತ್ರ...ಕೌರವ ಎಷ್ಟೇ ಅನಾಚಾರ ಮಾಡಿದರೂ...
ಅದನ್ನು ಖಂಡಿಸುತ್ತ ತನ್ನ ನೀತಿಯನ್ನು ಬಿಡದವ ಈ ವಿದುರ...ತನ್ನಸತ್ಯಧರ್ಮ ಪಾಲನೆಯನ್ನು ಯಾವತ್ತಿಗೂ ಪಾಲಿಸಿಕೊಂಡು ಬಂದವ...ಸಂಧಾನಕ್ಕೆಂದು ಹಸ್ತಿನಾವತಿಪುರಕ್ಕೆಶ್ರೀಕೃಷ್ಣಬಂದಾಗ...ವಿದುರನ ಮನೆಗೇ
ಮೊದಲು ಬರುತ್ತಾನೆ....!!!ತನ್ನಬದುಕಿನ ಮಹೋನ್ನತ ಕನಸು...ಶ್ರೀಕೃಷ್ಣ ಪರಮಾತ್ಮ...!ತನ್ನಮನೆಗೆ ಬಂದಿದ್ದು
ನೋಡಿ ವಿದುರ ಹಿರಿ ಹಿರಿ ಹಿಗ್ಗುತ್ತಾನೆ....ತನ್ನ ಆರಾಧ್ಯ ದೈವಶ್ರೀಕೃಷ್ಣನನ್ನು ಕಣ್ ತುಂಬಾ ನೋಡುತ್ತಾನೆ..!
ಅನುಭವಿಸುತ್ತಾನೆ..! ಆರಾಧಿಸುತ್ತಾನೆ...!ಅವನಿಗೆ ಕೊಡಲು ..ಒಂದು ತೊಟ್ಟು ಹಾಲು ಮಾತ್ರ ಇದ್ದಿರುತ್ತದೆ...
ಶ್ರೀಕೃಷ್ಣ ಅದೇ ಒಂದು ತೊಟ್ಟು ಹಾಲು ಕುಡಿದು..ಹಸ್ತಿನಾವತಿ ಪುರದಲ್ಲಿ ಭಕ್ತಿಯ ಹಾಲಿನ ಹೊಳೆಯನ್ನೇ ಹರಿಸುತ್ತಾನೆ...ವಿದುರ ಭಕ್ತಿಯಿಂದ ಮೂಕನಾಗುತ್ತಾನೆ..ಶ್ರೀಕೃಷ್ಣ ನಗುತ್ತಾನೆ..ಹಸ್ತಿನಾವತಿಪುರದಲ್ಲಿ ಶಿಕೃಷ್ಣನ ಸ್ವಾಗತಕ್ಕೆ ಭರ್ಜರಿ ತಯಾರಿ ನಡೆದಿತ್ತು...ಮೃಷ್ಟಾನ್ನ ಭೋಜನ ತಯಾರಿಸಿದ್ದರು...ಎಲ್ಲೆಲ್ಲೂ ರತ್ನಗಂಬಳಿ ಹಾಕಿದ್ದರು..ಭೀಷ್ಮ.. ಕೃಪ... ಅನೇಕ ಕೃಷ್ಣನ ಭಕ್ತರು ಅಲ್ಲಿದ್ದರೂ...ಕೃಷ್ಣ ಮಾತ್ರ ವಿದುರನ ಮನೆಗೆ ಬಂದಿದ್ದ...!
ನ್ಯಾಯ.. ಧರ್ಮ ನಂಬಿಕೆಗಳು ಯಾವತ್ತಿಗೂ ಸತ್ಯವನ್ನು ಹುಡುಕಿ ಬರುತ್ತವೆ....ಮುದ್ದು ಕೃಷ್ಣನ ಹಾಗೆ...
ಸತ್ಯ ಧರ್ಮಗಳು...ಮುದ್ದಾಗಿ ನಗುತ್ತ ವಿದುರನ ಮನೆಯನ್ನೇ ಹುಡುಕಿ ಬಂದು ಮುಗ್ಧ ಭಕ್ತಿಯನ್ನು ಸ್ವೀಕರಿಸುತ್ತವೆ...
ಹಾಲಿನ ಹೊಳೆಯನ್ನು ಹರಿಸುತ್ತವೆ...ಇಲ್ಲಿಯೂ ಗೆದ್ದಿದ್ದು ವಿದುರನ ಘನತೆಯ ಬದುಕು...!!ಸತ್ಯ ನ್ಯಾಯ
ಧರ್ಮದ ಆಚರಣೆಯ ಸ್ವಾಭಿಮಾನದ ಬದುಕು....
***************************************
ತಾತ್ಪರ್ಯವಿಷ್ಟೆ...ಬದುಕಿಗೊಂದು ಘನತೆ ಇರಬೇಕು....ಸ್ವಾಭಿಮಾನವಿರಬೇಕು....ಯಾವುದೇ ಆಮಿಶಕ್ಕೊಳಗಾದ
ಸಂಕುಚಿತ ಭಾವನೆಗಳಿಗೆ ಅವಲಂಬಿತವಾದ ಬದುಕು ನಮ್ಮದಾಗಿರಬಾರದು...
****************************************
ಇದೀಗ ಮತ್ತೊಮ್ಮೆಚುನಾವಣೆ ಬಂದಿದೆ...ಮೋದಿ ನಮ್ಮ ಜಾತಿಯವ ಅಲ್ಲವೇ ಅಲ್ಲ....ಅವನ ಕುಲ ಭಾಷೆ ರಾಜ್ಯ..
ಯಾವುದೂ ನಮ್ಮದಲ್ಲ....ಆದರೂ ಮೋದಿ ನಮ್ಮವ ಅಂತ ಅನ್ನಿಸುತ್ತಾನೆ...!ನಮ್ಮ ಮನೆಯವ ಎನ್ನುವ
ಭಾವನೆ ಬಂದಿರುತ್ತದೆ..ಕಾರಣ ಆತನ ನಿಷ್ಕಳಂಕ ಬದುಕು...!ತನಗಾಗಿ..ತನ್ನ ಕುಟುಂಬಕ್ಕಾಗಿ..ತನ್ನ
ಮಕ್ಕಳು...ಸೊಸೆಯಿಂದಿರಿಗಾಗಿ..ಮೊಮ್ಮಕ್ಕಳಿಗಾಗಿ ...ಆಸ್ತಿ..ಹಣ..ಸಂಪತ್ತು ಮಾಡಿದ ಬದುಕು ಅವನದಲ್ಲ....
ದೇಶಕ್ಕಾಗಿ ...ತನ್ನಸ್ವಂತ ಬದುಕನ್ನೇ ತ್ಯಾಗ ಮಾಡಿದ ಮಹಾನ್ ದೇಶ ಭಕ್ತ ಮೋದಿ....
ಅವನಿಗೆ ನಾಲ್ಕಾರು ಜನ ಅಣ್ಣ ತಮ್ಮಂದಿರು..ಅವರೆಲ್ಲ ಯಾರೋ...ನಮ್ಮ ಮ್ಮ ನಿಮ್ಮಂತೆ ಸಾಮಾನ್ಯರ
ಬದುಕನ್ನು ಬದುಕುತ್ತಿದ್ದಾರೆ...ಅವನಿಗೊಬ್ಬಳು ಅಮ್ಮ ಇದ್ದಳು ಹತ್ತು ಫೂಟಿನ ರೂಮಿನಲ್ಲಿ ನಮ್ಮ ನಿಮ್ಮ
ಅಮ್ಮನಂತೆ ಸರಳ ಬದುಕು ನಡೆಸುತ್ತಿದ್ದಳು...!ಅಮ್ಮನಿಗಾದರೂ ...ಹಣ ಮಾಡುವ ಹಂಬಲ
ಮೋದಿಗೆ ಆಗಲಿಲ್ಲವೆ ?,,,,,
ಅಮ್ಮ ಕೂಡ ಅಕ್ರಮ ಆಸ್ತಿಗೆ ಒಪ್ಪುಲಿಲ್ಲವಂತೆ..,!ಶಿವಾಜಿಯ ಅಮ್ಮ ಜೀಜಾಬಾಯಿ ನೆನಪಾಗುತ್ತಾಳೆ...
ಎಂಥಹ ದೇಶ ಭಕ್ತಿಯ..ಪ್ರಾಮಾಣಿಕ... ರಕ್ತ ಅವರದ್ದು ?...ಪ್ರಧಾನಿಯಾಗಿ ಕಳೆದ ಹತ್ತು ವರ್ಷದಲ್ಲಿ...ಒಂದೇ
ಒಂದು ರಜೆಯನ್ನು ಹಾಕದೆ...ದಿನಕ್ಕೆ ಹದಿನೆಂಟು ತಾಸು ತನ್ನನ್ನು ತಾನು ದೇಶಕ್ಕೆ ಸಮರ್ಪಿಸಿಕೊಂಡವ
ಮೋದಿ....!ಅಷ್ಟು ನಿಸ್ವಾರ್ಥದ ಬದುಕು ನಮ್ಮಿಂದ ಸಾಧ್ಯವಿಲ್ಲ ಬಿಡಿ.....
::::::::::::::::::::::
ಆದರೆ ನಾವು ಒಂದು ಕೆಲಸವನ್ನು ಖಂಡಿತವಾಗಿ ಮಾಡಬಹುದು...ಒಂದು ದಿನ ರಜೆ ಸಿಗುತ್ತದೆ ಅನ್ನೋದನ್ನು ಮರೆತು...ನಮ್ಮಸ್ವಾರ್ಥವನ್ನು ಸ್ವಲ್ಪ ಬದಿಗಿಟ್ಟು ಚುನಾವಣೆಯಲ್ಲಿ ಮತ ಹಾಕೋಣ.....ದೇಶದ ಹೆಮ್ಮೆ...
ಪ್ರಾಮಾಣಿಕ ಮೋದಿಯನ್ನು ಗೆಲ್ಲಿಸೋಣ....
ದೇಶ ಭಕ್ತನಿಗಾಗಿ ನಮ್ಮಒಂದು ಮತವನ್ನು ಚಲಾಯಿಸಿ ನಮ್ಮ ದೇಶ ಧರ್ಮ..ಭಕ್ತಿಯನ್ನು ಮೆರೆಯೋಣ.....
ದಿನದ ಮತ ಹಾಕುವ ಒಂದು ಕ್ಷಣವಾದರೂ...ದೇಶಭಕ್ತಿಯ ಭಾವವನ್ನು ಅನುಭವಿಸೋಣ.....! ...
ಜೈ ಜೈ ಮೋದಿ... ಜೈ ಜೈ ಮೋದಿ..ನಮ್ಮ ಹೆಮ್ಮೆಯ ಮೋದಿ ಮತ್ತೊಮ್ಮೆ... ಮತ್ತೊಮ್ಮೆ...
ಜೈ ಶ್ರೀ ರಾಮ್...!
ಶಿವ ಶಿವ ಶಂಭೋ...
ಹರ ಹರ ಮಹಾದೇವ..!!!
(ಎಂದಿನಂತೆ....
ಇದು ಮೋದಿ ಬಗೆಗೆ ಬರೆದ ಲೇಖನ...ನಿಮಗೆಇಷ್ಟ ಆದಲ್ಲಿ..ಕಾಫಿ ಪೇಸ್ಟ್ ಮಾಡಿ...ಎಲ್ಲಕಡೆ ಹಂಚಿ...ವಾಟ್ಸಪ್...
ಇತರೆ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿ, ಶೇರ್ ಮಾಡಿ...
ನನ್ನ ಹೆಸರು ಬೇಕು ಅಂತೇನೂ ಇಲ್ಲ...ಒಟ್ಟಿನಲ್ಲಿ ಮೋದಿ ಗೆಲ್ಲಲಿ....ಗೆಲ್ಲಬೇಕು ...
***************************************

.....ಪ್ರಕಾಶ್ ಹೆಗ್ಡೆ

No comments:

Post a Comment