Monday, November 6, 2023

RISHI'S NEW CAR - MAHINDRA XUV 700

 Sunday, 5th November 2023

Rishi with Kavitha, Atharva and Seenu received Brand New Car Mahindra XUV 700 today from the showroom, We were there.

CONGRATULATIONS.....








It's a beautiful, heavy XUV car which can run beatifully on road.



We were there to celebrate and share the joy of arrival of new car at the showroom at Marthahalli.





That was a nice and happy feeling of Rishikanth getting a brand new XUV car.




Once again SAFE DRIVING and HAPPY MOTORING.

POOJA PERFORMED




GOD BLESS.


Posted 6/11/2023



Sunday, November 5, 2023

ಯಕ್ಷಗಾನ - ಯಕ್ಷ ಲೋಕ ವಿಜಯ

 ಭಾನುವಾರ,  ನವಂಬರ್ 5, 2023 

ಶ್ರೀ ವಿನಾಯಕ ದೇವಸ್ಥಾನ ಅರ್. ಟಿ. ನಗರ, ಬೆಂಗಳೂರು.

ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಕೃಪಾ ಪೋಷಿತ , ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಕಮಲಶಿಲೆ, ಅವರು ಒಂದು ಸುಂದರವಾದ ಯಕ್ಷಗಾನ "ಯಕ್ಷ ಲೋಕ ವಿಜಯ" ಎಂಬ ಪ್ರಸಂಗವನ್ನು ಆಡಿ ತೋರಿಸಿರುವರು.




ಯಕ್ಷಗಾನ ಒಂದು ಕರಾವಳಿಯ ಪ್ರಸಿದ್ಧ ಬ್ಯಾಲೆ (Dance Drama), ವೇಷ, ಭೂಷಣ, ನೃತ್ಯ, ಸಂಭಾಷಣೆ, ನಟನೆ, ಹಾಸ್ಯ, ಭಾಗವತರಿಂದ ಶಾಸ್ತ್ರಿಯ ಹಾಡುಗಳು, ಚಂಡೆ, ಮದ್ದಲೆ, ಪ್ರಸಂಗದ ಕಥೆಯ ನಿರೂಪಣೆ,  ಇತ್ಯಾದಿಗಳಿಂದ ಕೂಡಿದ ಮನರಂಜನೆ ಹಾಗೂ ಪುರಾಣಕ್ಕೆ ಸಂಭಂದ ಪಟ್ಟಂತೆ ಪ್ರಸಂಗ.


ಸುಮಾರು ನಾಲ್ಕು ಗಂಟೆಗಳ ಕಾಲದ ಯಕ್ಷಗಾನ, ನೆರೆದ ಸಭಿಕರನ್ನು ಮನ ಮೆಚ್ಚಿಸಿತು.






ಯಕ್ಷ ಪ್ರದೀಪ ತನ್ನ ಹುಟ್ಟು, ತಂದೆ, ತಾಯಿಯನ್ನು ಹುಡುಕುತ್ತ ಹಲವರು ಸ್ಥಳಗಳಿಗೆ ಪಯಣಿಸಿ, ತನ್ನ ಮೂಲವನ್ನು ಯಕ್ಷ ಲೋಕದಲ್ಲಿ ಕಂಡಿರುವುದನ್ನು ಅದ್ಭುತವಾದ ಕುಣಿತ, ಮಾತುಗಳಿಂದ ಬಹಳ ಆಕರ್ಷಣೀಯವಾಗಿತ್ತು.




ಶ್ರೀ ಕ್ಷೇತ್ರ ಕಮಲಶಿಲೆ ಯಕ್ಷಗಾನ ತಂಡದವರಿಗೆ ಹಾರ್ದಿಕ ಅಭಿನಂದನೆಗಳು.

Posted 6/11/2023 

ವಿಸ್ತಾರ ನ್ಯೂಸ್ - ಕನ್ನಡ ಸಂಭ್ರಮ / ವರ್ಷ ವೈಭವ

 ಶನಿವಾರ, ನವಂಬರ್ 4, 2023 

ರವೀಂದ್ರ ಕಲಾಕ್ಷೇತ್ರ, ಬೇಗಳುರು.



ಅದು ವಿಸ್ತಾರ ನ್ಯೂಸ್ ಚಾನಲ್ ನವರ "ಕನ್ನಡ ಸಂಭ್ರಮ" ಮತ್ತು "ವರ್ಷ ವೈಭವ" ದ ದಿನವೀಡಿಯ ಕಾರ್ಯಕ್ರಮ.





ಅಲ್ಲಿ ತುಂಬಾ ಪುಸ್ತಕ ಮಳಿಗೆಗಳು, ವಿವಿಧ ನೃತ್ಯ ತಂಡಗಳು, ಪುಸ್ತಕ ಬಿಡುಗಡೆ, ಸಾಧಕರಿಗೆ ಸನ್ಮಾನ, ಸೆಲೆಬ್ರಿಟಿ ರಮೇಶ್ ಅರವಿಂದ್ ಅವರಿಂದ ಕನ್ನಡ, ಕರ್ನಾಟಕದ ವೈಭವದ ಬಗ್ಗೆ ಸ್ಫೂರ್ತಿ ದಾಯಕವಾದ ಭಾಷಣ.

ಬ್ರಂದ ಆಚಾರ್ಯ 

ರಮೇಶ್ ಅರವಿಂದ್ 




ನಂತರ ಹಲವಾರು ವಿವಿಧ ಕಾರ್ಯಕಮಗಳು, ಹಬ್ಬದ ವಾತಾವರಣ.




ಪುಸ್ತಕ ಮಳಿಗೆಗಳು 


ಪ್ರಸಿದ್ಧ ರಮೇಶ್ ಅರವಿಂದ ಅವರಿಂದ ರಾವಣನ ಹತ್ತು ತಲೆಗಳಿಗೆ ಹೋಲಿಸಿ, ಸೋತು ತುಂಡರಿಸಿದ  ಕರ್ನಾಟಕದ ವೈಭವ, ಭಾಷೆ, ಕಲೆ, ಸಂಸ್ಕೃತಿ, ಆಹಾರ, ಸಾಹಿತಿಗಳು, ಜ್ಞಾನ ಪೀಠ ಪ್ರಶಸ್ತಿಗಳು, ಬಗ್ಗೆ ಕೊಂಡಾಡಿದರು.


ನಾವುಗಳು ಸುಮಾರು ಒಂದು ಗಂಟೆಯ ವರೆಗೆ ಇದ್ದು ಅಲ್ಲಿಂದ ಹೊರಟೆವು.

Posted 6/11/2023 


Friday, November 3, 2023

ಸಂಸ್ಕಾರ.... ನೆಮ್ಮದಿ....

 ನವಂಬರ 4, 2023 

 ಸಂಸ್ಕಾರ


ನಾವು ಪ್ರತಿದಿನ ಬೆಳಗ್ಗೆ ಕಣ್ಣು ತೆರೆಯುತ್ತಲೇ, ನಮ್ಮ ಜೀವನಕ್ಕೆ ಅತ್ಯಂತ ಶಕ್ತಿಶಾಲಿಯಾದ ಈ 9,ಸಂಕಲ್ಪವನ್ನು ಮನಸಿನಲ್ಲಿ ತಂದುಕೊಳ್ಳಬೇಕು

1, ನಾನು ಅತ್ಯಂತ ಶಕ್ತಿಶಾಲಿ ಆತ್ಮವಾಗಿದ್ದೇನೆ,

2. ನಾನು ಯಾವಾಗಲೂ ಸಂತೋಷದಿಂದ,ಮತ್ತುಶಾಂತ ವಾಗಿದ್ದೇನೆ, 

3.  ಪರಮಾತ್ಮ ಸದಾ ನನ್ನೊಂದಿಗೆ ಇದ್ದಾನೆ,

4. ನನ್ನ ದೇಹ ಮತ್ತು ಮನಸ್ಸು ಸದೃಢವಾಗಿದೆ,

5.  ನನ್ನ ಎಲ್ಲಾಸಂಬಂಧಗಳು ಬಹಳ ಪ್ರಿಯವಾಗಿದೆ ಮತ್ತು ಹೊಂದಾಣಿಕೆಯಿಂದ ಕೂಡಿದೆ,

6.  ನಾನು ಇರುವ ಮನೆ ಸ್ವರ್ಗಕ್ಕಿಂತ ಸುಂದರವಾಗಿದೆ,

7.  ನನ್ನಕುಟುಂಬನೆಮ್ಮದಿಯಿಂದ ಹಾಗೂ ಸಂತೋಷದಿಂದ ಕೂಡಿದೆ,

8.  ನನ್ನಹಿರಿಯರಆಶೀರ್ವಾದ ಯಾವಾಗಲೂ ನನ್ನ ಮೇಲಿದೆ,

9.  ನಾನಿರುವ ಸಮಾಜದಲ್ಲಿ ನನಗೆ ಗೌರವವಿದೆ,

ಇಷ್ಟನ್ನುನಾವುಪ್ರತಿದಿನಸ್ಮರಿಸಿಕೊಂಡರೆ, ನಮ್ಮಜೀವನ ಸುಂದರ

Tips For ನೆಮ್ಮದಿ!


★ ಮುಖದಲ್ಲೊಂದು ನಗು ಇರ್ಲಿ.

★ ಸಣ್ಣ ಖುಷಿಯನ್ನು ಆನಂದಿಸಿ.

★ ಇನ್ನೊಬ್ಬರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.

★ ನಿಮ್ಮನ್ನ Ignore ಮಾಡಿದವರನ್ನ ನೀವು ignore ಮಾಡಿ.

★ ವಾದ ಮಾಡುವವರ ಮುಂದೆ ಸುಮ್ಮನಿರಿ.

★ ರಿಪ್ಲೆ ಮಾಡದೆ ಇರುವವರ Last seenನನ್ನು ಅವಾಗವಾಗ Check ಮಾಡೋದನ್ನ ಬಿಟ್ಬಿಡಿ.

★ ಮುಂದೆ ಆಗುವುದರ ಬಗ್ಗೆ ಈಗಲೇ ಯೋಚನೆ ಮಾಡಬೇಡಿ.

★ ಯಾರಿಂದನೂ ಏನು ಬಯಸಬೇಡಿ.

★ ಹೋಗೋರು ಹೋಗ್ತಾರೆ, ಇರೋರು ಇರ್ತಾರೆ. Don't Care.

★ ಇತರರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ.

★ ಹೋಪ್ ಇಳ್ಕೊಳ್ಳಿ, ಆದರೆ ಆತುರ ಬೇಡ.

★ ತೋರಿಕೆಗಾಗಿ ಆಡಂಬರ ಮಾಡಬೇಡಿ.

★ ಎಲ್ಲರ ಜೊತೆ ನಗ್ತಾ ಮಾತಾಡಿ.

★ ಪ್ರತಿ ಕ್ಷಣವೂ ಕುತೂಹಲದಿಂದಿರಿ.


Posted 4/11/2023 

Thursday, November 2, 2023

PAAKASHALA KUMBHASHI - RESTAURANT

 ಮಂಗಳವಾರ, 24 ಅಕ್ಟೋಬರ 2023 

ಹೋಟೆಲ್ ಪಾಕಶಾಲ, ಕುಂಭಾಶಿ


ಕುಂದಾಪುರ ತಾಲೂಕು ಕುಂಭಾಶಿ ಯಲ್ಲಿ, ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನೂತನವಾಗಿ "ಪಾಕಶಾಲ" ಅವರ ಹವಾ ನಿಯಂತ್ರಿತ ವಾತಾವರಣದಲ್ಲಿ ಹೊಸದಾದ ಶಾಖೆಯನ್ನು ಶುರು ಮಾಡಲಾಗಿದೆ.


ಅಂದು ನಾವು ಆತ್ಮೀಯರಾದ, ಕಾಲೇಜು ಸ್ನೇಹಿತ ಪದ್ಮನಾಭ ಸಹಸ್ರ ಮತ್ತು ಅವನ ಮಡದಿ ಶಾಲಿನಿ ಅವರನ್ನು ಕರೆದುಕೊಂಡು, ಆನೆಗುದ್ದೆ ವಿನಾಯಕ ದೇವಸ್ಥಾನದ ದರ್ಶನವಾದ ನಂತರ ಪಾಕಶಾಲ ಹೋಟೆಲಿಗೆ ಭೇಟಿ ನೀಡಿದೆವು.

ಪಾನಿಪೂರಿ, ದೋಸೆ, ಕಾಫಿಯ ಇತ್ಯಾದಿ ಗಳನ್ನು ಆಸ್ವಾದಿಸಿದೆವು.

(ಮಧ್ಯಾಹ್ನ ಗರಡಿ ಮನೆಯಲ್ಲಿ ಚಂಡಿಕಾ ಹೋಮ, ವಿಶೇಷ ಭೋಜನ ಆಗಿ) 


ತಂಪು ವಾತಾವರಣ, ವಿಶಾಲವಾದ ಸ್ಥಳ, ತಿಂಡಿಗಳೂ ರುಚಿಕರವಾಗಿದ್ದವು.

 



ನಂತರ ಸಹಸ್ರ ದಂಪತಿಗಳನ್ನು ಬೀಳ್ಕೊಟ್ಟು ಮನೆಗೆ ಬಂದೆವು.

Posted 3/11 /2023 

ಕನ್ನಡ ರಾಜ್ಯೋತ್ಸವ 2023 - ಕಾಫಿ ಬೋರ್ಡ್ ಬಡಾವಣೆ

 ಬುಧವಾರ, ನವಂಬರ್ 1, 2023 

ಕಾಫಿ ಬೋರ್ಡ್ ಬಡಾವಣೆ, ಕೆಂಪಾಪುರ, ಬೆಂಗಳೂರು.




ಈ ಬಾರಿಯ ರಾಜ್ಯೋತ್ಸವದ ಧ್ವಜಾರೋಹಣದ ಕಾರ್ಯಕ್ರಮ, ಕನ್ನಡ ಭವನದ ಸಾರ್ವಜನಿಕ ಗ್ರಂಥಾಲಯದ ಎದುರು ಸಂಪನ್ನ ಗೊಂಡಿತು.



ಬೆಳಿಗ್ಗೆ 8 ಗಂಟೆಗೇ, ಹಲವಾರು ಕನ್ನಡಾಭಿಮಾನಿಗಳು ಗ್ರಂಥಾಲಯದ ಎದುರು ನೆರೆದಿದ್ದು, ಸಂಭ್ರಮದ ವಾತಾರವಣ ನೆಲೆಸಿತ್ತು.




ಕನ್ನಡ ಸಾಹಿತ್ಯ ಪರಿಷತ್ , ಬ್ಯಾಟರಾಯನಪುರ ಘಟಕದ ಅದ್ಯಕ್ಷ ಶ್ರೀ ರೇಣುಕಾ ಹೆಗಡೆಯವರು ಧ್ವಜಾರೋಹಣ ಮಾಡಿ, ಕನ್ನಡ ಧ್ವಜಕ್ಕೆ ಗೌರವ ಸಮರ್ಪಣೆ  ಮಾಡಲಾಯಿತು.


ನಂತರ ನಾಡಗೀತೆ, ಜನಗಣ ಮನ ಹಾಡುಗಳನ್ನು ಸಾಮೂಹಿಕವಾಗಿ ಹಾಡಲಾಯಿತು.

ಕನ್ನಡ ದೇಶ ಭಕ್ತಿ ಗೀತೆಗಳನ್ನು ನುಡಿಸಲಾಯಿತು.


ಇನ್ನೊಮ್ಮೆ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

Posted 2/11/2023