Sunday, January 8, 2023

AHSTAVADHANA - SHATAVADHANI DR. R. GANESH

Sunday, 8th January 2023
ಗೋಖಲೆ ಸಾರ್ವಜನಿಕ ಸಂಸ್ಥೆ, ಬಸವನ ಗುಡಿ, ಬೆಂಗಳೂರು.

ಶತಾವಧಾನಿ ಡಾ ರಾ. ಗಣೇಶ್ ಅವರಿಂದ ಇಂದು ಅದ್ಭುತವಾದ ಅಷ್ಟಾವಧಾನ ಕಾರ್ಯಕ್ರಮ. ತುಂಬಿದ ಡಿ.ವಿ.ಜಿ. ಸಭಾಂಗಣದಲ್ಲಿ ಸಂಪನ್ನಗೊಂಡಿತು.



ಡಾ. ಗಣೇಶ್ ಅವರ ವಿದ್ವತ್, ಪಾಂಡಿತ್ಯ,  ವಾಗ್ ಜ್ಹರಿ ಅಮೋಘವಾದದ್ದು. ಅವರ ಮಾತು, ಹಾಡು ಪ್ರತಿಭೆ ಎಂಥವರನ್ನೂ ಮಂತ್ರ ಮುಗ್ಧರನ್ನಾಗಿಸುವುದು..

ಸುಮಾರು ಮೂರುವರೆ ಗಂಟೆಗಳ ಕಾಲ ನಡೆದ ಅಷ್ಟಾವಧಾನ, ಎಲ್ಲಾ ಪ್ರಸ್ಚಕರಿಂದ ಕೇಳಿದ ಪ್ರಶ್ನೆಗಳಿಗೆ ರಸವತ್ತಾಗಿ ಉತ್ತರಿಸಿದರು.

ಅಷ್ಟಾವಧಾನ, ಒಂದು ದೈವಿಕ ಕಲೆ. ಎಲ್ಲಾ ವಿಚಾರಗಳಲ್ಲಿ ಪಾಂಡಿತ್ಯವನ್ನು ಹೊಂದಿರಬೇಕು. 
ಒಂದೇ ಬಾರಿಗೆ ಹಲವು ವಿಚಾರಗಳನ್ನು ಯೋಚಿಸಿ (Multitasking) ಉತ್ತರ ಕೊಡುವಂಥಾಗಿರಬೇಕು.




ಶತಾವಧಾನಿ ಡಾ। ಆರ್. ಗಣೇಶ್ ಅವರ ಅಷ್ಟಾವಧಾನ*
8.1.2023, ಭಾನುವಾರ, ಸಂಜೆ 4.30 । ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ*
ನಿಷೇಧಾಕ್ಷರಿ – ಅಷ್ಟಾವಧಾನಿ ಗಣೇಶ ಭಟ್ಟ ಕೊಪ್ಪಲತೋಟ
ಸಮಸ್ಯಾಪೂರಣ – ನೀಲಕಂಠ ಕುಲಕರ್ಣಿ
ದತ್ತಪದಿ – ಶ್ರೀಧರ ಸಾಲಿಗ್ರಾಮ
ಪ್ರತಿಮಾಲೆ – ಬಿ. ಎನ್. ಶಶಿಕಿರಣ್
ಆಶುಕವಿತೆ – ಶ್ರೀಶ ಕಾರಂತ
ಕಾವ್ಯವಾಚನ – ಕುಮಾರಿ ಚಿತ್ಕಲಾ ಶರ್ಮಾ
ಉದ್ದಿಷ್ಟಾಕ್ಷರಿ – ಅಷ್ಟಾವಧಾನಿ ಸೂರ್ಯ ಹೆಬ್ಬಾರ್
ಅಪ್ರಸ್ತುತಪ್ರಸಂಗ – ಶ್ರೀಪಾದ ಗದ್ದೆ
ಎಲ್ಲರಿಗೂ ಆದರದ ಸ್ವಾಗತ🙏

Posted 9/1/2023




 

No comments:

Post a Comment