Sunday, December 21, 2025

DEVILS CIRCUIT - 2025

 Sunday, December 21, 2025

Bengaluru

Scaling enormous obstacles, sliding into freezing water, and emerging victoriously is no small feat. Maruti Suzuki Arena Devils Circuit is for everyone who wants to push their limits!

RISHI, KAVITHA & ATHARV

RUN 5 Km and FACE 15 OBSTACLES

Scaling enormous obstacles, sliding into freezing water, and emerging victoriously is no small feat. Maruti Suzuki Arena Devils Circuit is for everyone who wants to push their limits!

15 obstacles are
1. Rope ridge
2. Portal Path
3. High Rise
4. Under Pressure
5. The Summit
6. Heights of Hell
7. Back Stalk
8. Revolver
9. Monkey Crawl
10. Water Vault
11. The Underpass
12. The Sst Up
13. Skyfall Ladder
14. Crawl of Duty
15. Brain Freeze


Congratulations and well done.


Posted 22/12/2025











ಶ್ರೀ ನಂದಿಕೇಶ್ವರ ದೇವಸ್ಥಾನ - ಹಳ್ಳಾಡಿ

 ಶುಕ್ರವಾರ, ದಶಂಬರ 12, 2025 

ಶ್ರೀ ನಂದಿಕೇಶ್ವರ ದೇವಸ್ಥಾನ, ಹೆಗ್ಡೆ ಕೆರೆ, ಹಳ್ಳಾಡಿ.

ನನ್ನ ಅಕ್ಕನ ಮಗ ಕೃಷ್ಣ ಮೂರ್ತಿಯೊಡಣೆ  ಹಾಲಾಡಿ ಗೆ ಹೋಗಿ ವಾಪಸ್ಸು ಬರುತ್ತಾ ಹಳ್ಳಾಡಿಯಲಿರುವ ಶ್ರೀ ನಂದಿಕೇಶ್ವರ ದೇವಸ್ಥಾನ ದಲ್ಲಿ ದೇವರ ದರ್ಶನ ಪಡೆದೆವು. 




ಕರಾವಳಿ ಜಿಲ್ಲೆಯಲ್ಲಿ ಚಾರಿತ್ರಿಕ ಮಹತ್ವ ಹೊಂದಿರುವ ದೇವಸ್ಥಾನಗಳಲ್ಲಿ ಒಂದಾದ ಉಡುಪಿ ಜಿಲೆಯ ಕುಂದಾಪುರ ತಾಲೂಕಿನ ಶ್ರೀ ನಂದಿಕೇಶ್ವರ ದೇವಸ್ಥಾನ. ಇಲ್ಲಿನ ದೇವರು  ಲಿಂಗರೂಪಿಯಾಗಿದ್ದು ಪಾಣಿಪೀಠ ಆಷ್ಟಬಂದ ಒಳಗೊಂಡಿರುವುದು ಇಲ್ಲಿನ ವಿಶೇಷ. 





ಇತ್ತೀಚೆಗೆ ಆಡಳಿತ ಸಮಿತಿ ರಚನೆಯಾಗಿದ್ದು ತನ್ಮೂಲಕ ನಾಗನ ಸನ್ನಿಧಾನ, ಅರ್ಭಕ ಧಾರಕೇಶ್ವರಿ ಸಹಿತ ವೀರಭದ್ರ ದೇವರ ಗುಡಿ, ಧೂಮಾವತಿ ಗುಡಿ ಹಾಗೂ ಹೆಬ್ಬಾಗಿಲು ಜೀರ್ಣೋದ್ಧಾರ ಗೊಂಡಿರುತ್ತದೆ. 
ಸುಮಾರು 1300 ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನ, ಹತ್ತಿರ ಇರುವ ಗುಡ್ಡೆಟಿನ ಗಣಪತಿ ದೇವಸ್ಥಾನಕ್ಕೂ ಹತ್ತಿರವಾದ ಸಂಬಂಧವಿದೆ.  



ಸುಮಾರು ಅರ್ಧ ಗಂಟೆ ದೇವಸ್ತಾನದ ಆವರಣದಲ್ಲಿ ಕಳೆದಿದ್ದು ಅಲ್ಲಿಂದ ವಾಪಸ್ಸು ಉಡುಪಿಗೆ ಹೊರಟೆವು. 

Posted  21/12/2025 












Friday, December 19, 2025

TRIP TO OORU 10 - 14 Dec 2025

 Wednesday, 10 Dec. 2025

The trip to ooru was to attend wedding of Nitish (s/o Dinesh Rao, Mom's brother)

Started of from Yeshvanthpur Railway Station at 7 pm. travelling in Panchaganga Express, reaching next morning 5 am to Udupi.



We took an auto from Udupi station, reached Udyavara, freshened up and had Idli, chutney from Sujatha. Four Kittens were playful and happy.


Took Babu's car and proceeded to Birthi, Salekeri and bath and pooja at home performed.


For Lunch, we went to Arithodu Janardhana Subramanya Devasthana, where Nitish's wedding Pre-pooja like naandi, Samavarthane taking place.


Evening was Pre-Wedding get-together (Party) at Bhagavathi Sabhagraha, Puttur Bhagavathi Durgaparameshwati Temple.



After Dinner, went back to Birthi, next day early morning finised bath, pooja and came back to wedding venue.

After lunch, went to Kittu's house at Mayagundi, rested for a while and proceeded to Haalaadi in his car, had Benne Masala Dose at Guru Canteen.




Also visited Sri Nandikeshwara Deavasthana at Halladi.



Spent sometime at Jayalakshmi's house and went back to Birthimane at Salekeri.



Next morning , 13th Dec. left from Birthi, to Udyavara and then proceeded Hunsur to Attend next Day's Nitish-Vaishnavi wedding wedding reception.



Birthimane, Salekeri

Sunday's wedding reception at at Hunsur, see the blog with following link

https://jsomayaji.blogspot.com/2025/12/nitish-vaishnavi-wedding-reception-4.html

Retued to Bengaluru with Rishi's car, after visiting Ranganathittu Bird Sanctuary.

see the link: 
https://jsomayaji.blogspot.com/2025/12/ranganathittu-bird-sanctuary-visit.html


Posted 20/12/2025



 





















SAROJINI TANTRY - NUDI NAMANA

 Friday, December 19, 2025


Nalini Somayaji with Sarojini Tantry

Om Shanti To Departed Soul.
"ಅಗಲಿದ ಜೀವಕ್ಕೆ ಹೀಗೋಂದು ನಮನ".
ನೆನ್ನೆ ಮಧ್ಯಾಹ್ನ ನಮ್ಮನ್ನಗಲಿದ
"ಸರೋಜಿನಿ ಅಕ್ಕ" ನಿಗೆ ಕಡೆಯ ಅಶ್ರುತರ್ಪಣ.

ಈ ಸರೋಜಿನಿ ಅಕ್ಕ ನನ್ನ ವಾರಗಿತ್ತಿ (Co Sister) ಲೀಲಕ್ಕನ ತಂಗಿ.
ಪತಿ ಶ್ರೀಯುತ ಶ್ರೀನಿವಾಸ ತಂತ್ರಿ - ಪತ್ನಿ ಸರೋಜಿನಿ ದಂಪತಿಗಳ ಜೋಡಿ ನೋಡಿ ನಾವೆಲ್ಲ ಕಲಿತದ್ದು ಬಹಳಷ್ಟು.
ದಂಪತಿಗಳು ಮೈಸೂರು ವಾಸದಲ್ಲಿ ಕಷ್ಟಪಟ್ಟು ಮೇಲೆ ಬಂದದ್ದೂ ಒಂದು ಸಾಹಸ.
ಅದೂ ಸಹ ಎಲ್ಲರಿಗೂ ಮಾದರಿಯ ಜೀವನ ಎಂದರೆ ಹೆಚ್ಚಾಗದು.

ಮೈಸೂರಿನ ಸರಸ್ವತಿ ಪುರಂನಲ್ಲಿ ಇವರ ವಾಸ.
ಅಲ್ಲಿಯೇ ಪ್ರಾರಂಭಿಸಿದ ವಿಶ್ವನಾಥ ಕ್ಯಾಂಟಿನ್ ಸುತ್ತಮುತ್ತಲಿನ ಪ್ರಸಿದ್ಧ ತಿಂಡಿಯ ತಾಣ.
ಅಕ್ಕ ಮನೆಯಲ್ಲಿ ರುಚಿಯಾಗಿ ತಿಂಡಿ ಪದಾರ್ಥಗಳ ಮಾಡಿದರೆ ಪತಿ ಅದನ್ನು ಕ್ಯಾಂಟಿನ್ ಗೆ ಕೊಂಡುಹೋಗಿ ಅಲ್ಲಿ ವ್ಯಾಪಾರ. ಹೀಗೆ ದುಡಿದು, ಮೂವರು ಮಕ್ಕಳಾದ ವಿದ್ಯಾ,ಪ್ರಶಾಂತ್, ಪ್ರವೀಣ್ ರನ್ನು ಬೆಳೆಸಿದವರಿವರಿಬ್ಬರು.

ಅಕ್ಕ ತುಂಬು ಉತ್ಸಾಹಿ, ಎಲ್ಲರನ್ನೂ ಪ್ರೀತಿಸುವ ಹೃದಯ.
ತುಂಬಾ ಅಚ್ಚುಕಟ್ಟಾಗಿ, ಅಳತೆ ಪ್ರಮಾಣಗಳ ಆಚೀಚೆ ಮಾಡದೆ, ರುಚಿ ರುಚಿಯಾಗಿ ಅಡಿಗೆ ಮಾಡುವುದರಲ್ಲಿ ಎತ್ತಿದ ಕೈ. ಕುಟುಂಬದ ಮಂದಿಗೆ ಈಕೆ ಅನ್ನಪೂರ್ಣೆ.
ಇವರ ಬರೆದ ಒಂದು ಅಡಿಗೆ ಪುಸ್ತಕವೂ ಅವರ ಮಗಳು ವಿದ್ಯಾಳ ಪತಿ ಪ್ರಕಾಶ್ ವೈಲಾಯರ ಪ್ರೋತ್ಸಾಹದಿಂದ ಪ್ರಕಟವಾಗಿದೆ.

ಮಗಳು ವಿದ್ಯಾ

ಇತ್ತೀಚೆಗಷ್ಟೇ ಮೈಸೂರು ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ವಾಸವಾಗಿರುವ ಮಗ ಪ್ರಶಾಂತನ ಮನೆಯಲ್ಲಿ ದೂರ ದರ್ಶನದ "ಚಂದನ ವಾಹಿನಿಯ ಆಹಾ ಎಂಥಾ ರುಚಿ" ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರಿಗೂ ನಮ್ಮೂರಿನ ಕೆಸು ಪತ್ರೊಡೆ" ಮಾಡಿ, ಬೆಣ್ಣೆ ಹಾಕಿ ಅಲ್ಲಿದ್ದ ಎಲ್ಲರಿಗೂ ಪ್ರೀತಿಯಿಂದ ತಿನ್ನಿಸಿದ್ದರು.
ಈ ದಂಪತಿಗಳ ಜೋಡಿಗೆ. ಕಣ್ಣಾಯಿತೇನೋ ಎನ್ನುವ ಹಾಗೆ "ಸರೋಜಿನಿ" ಅಕ್ಕ ನಮ್ಮನ್ನೆಲ್ಲಾ ಅಗಲಿದ್ದಾರೆ ನೆನ್ನೆಯ ದಿನ.


ಪ್ರತಿಯೋರ್ವರನ್ನೂ ಕರೆದು ಮಾತನಾಡಿಸಿ ತನ್ನಿರುವನ್ನು ಸ್ಥಾಪಿಸಿ, ನಗಿಸಿ, ತಾನೂ ಸಂತೋಷಪಟ್ಟು ಎಲ್ಲರೊಂದಾಗುವ ಈ ಜೀವ ಇನ್ನಿಲ್ಲ ಎಂಬುದನ್ನು ನಮಗಿನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ.
ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದೇ ಪ್ರಾರ್ಥನೆ.
ಮನೆಯವರಿಗೆಲ್ಲರಿಗೂ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥನೆ.

ಅಕ್ಕ ಸರೋಜಿನಿ ನಿಮ್ಮ ನೆನಪು ಸದಾ ನಮ್ಮೊಂದಿಗೆ.
ಓಂ ಶಾಂತಿ

ಪ್ರತಿಕ್ರಿಯೆಗಳು:

Krishnachar Joshi
ಅಯ್ಯೋ ಎಷ್ಟು ಲಕ್ಷಣವಾಗಿ ಇದ್ದ್ರಲ್ಲ ಅವರು😔😔 ಇವರನ್ನು ಎಲ್ಲೋ ನೋಡಿದ ನೆನಪು 🙏🙏…ಅವರ ಆತ್ಮಕ್ಕೇ ದೇವರು ಸದ್ಗತಿ ನೀಡಲಿ ಓಂ ಶಾಂತಿ

mangala Lakshmi
ಓಂ ಶಾಂತಿ☝️🙏ಯಾರೂ ಶಾಶ್ವತ ಅಲ್ಲ ಎನ್ನುವ ಅರಿವಿದ್ದರೂ ಹೇಗೋ ತುಂಬಾ ಹತ್ತಿರವಾಗಿ,ಮನಸ್ಸಿಗೆ, ಹೃದಯಕ್ಕೆ,ಆತ್ಮಕ್ಕೆ ಹತ್ತಿರವಾಗಿಬಿಡ್ತೇವೆ👍😌ಅಂಥವರು ಅಗಲಿದಾಗ ಸಮಯವೇ ಮುಲಾಮು,,ಸಮಾಧಾನಕ್ಕೆ ಪದಗಳು ಇರೋದಿಲ್ಲ

Praveena Thantry
Thanks a lot for this wonderful note chikki. You have described her very accurately. Even we couldn't have written it any better..

Prakash Vailaya
Atte Namaste, for your note given new strength to all of us for that' BIG SALUTE

Prashanth Kumar
ಪ್ರಿಯ ಚಿಕ್ಕಿ, ಅಮ್ಮ ಮತ್ತು ಅವಳ ಸಾಧನೆಗಳನ್ನು ವಿವರಿಸುವ ಈ ಟಿಪ್ಪಣಿ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ. ಅಂತಹ ಸಿಹಿ ಮಾತುಗಳಿಗೆ ಧನ್ಯವಾದಗಳು

Vathirajan Ramarao
Om shanti . Om shanti 


Posted 19/12/2025

SAROJINI TANTRY - SHRADDHANJALI

 Thursday, Decembr 18, 2025

SAROJINI TANTRY


Beautiful write-up from Shobha Somayaji

ನನ್ನ ಅಮ್ಮನ ದೊಡ್ಡ ತಂಗಿ ಸರೋಜಿನಿ ಚಿಕ್ಕಿ ಸುಮಾರು ಒಂದೂವರೆ ತಿಂಗಳ ಕಾಲ ಆರೋಗ್ಯದ ತೀವ್ರ ಸಮಸ್ಯೆಯಿಂದ ಬಳಲಿ ನಿನ್ನೆ ಮಧ್ಯಾಹ್ನ ತೀರಿಕೊಂಡರು. ಎಂಬತ್ತರ ಹೊಸ್ತಿಲಲ್ಲಿ ಇದ್ದ ಅವರು ಅಷ್ಟು ವಯಸ್ಸಾದಂತೆ ಕಾಣದ ಅವರು ಸದಾ ಉತ್ಸಾಹದ ಚಿಲುಮೆಯಾಗಿದ್ದರು. ಯಾವ ಕಾರ್ಯಕ್ರಮಕ್ಕೆ ಹೋದರೂ ತಮ್ಮ ಗಟ್ಟಿ ಧ್ವನಿ ಹಾಗೂ ನಗುವಿನಿಂದ ಎಲ್ಲರನ್ನೂ ತಟ್ಟಿ ಮಾತನಾಡಿಸಿ ತನ್ನ ಇರುವಿಕೆಯನ್ನು ಸ್ಥಾಪಿಸುತ್ತಿದ್ದರು. ಸದಾ ಶಿಸ್ತಿನ ಉಡುಪು ತೊಟ್ಟು, ಸಿಂಗರಿಸಿಕೊಂಡು ಲವಲವಿಕೆಯಿಂದಿರುತ್ತಿದ್ದ ಅವರು ಅವರ ಮನೆಯ ಜೀವಾಳ. 

ನನ್ನ ಅಮ್ಮನಿಗಿಂತ ಹತ್ತು ವರ್ಷ ಚಿಕ್ಕವರಾಗಿದ್ದ ನನ್ನ ಚಿಕ್ಕಿಗೆ ನನ್ನ ತಂದೆ - ತಾಯಿಯ ಜೊತೆಗೆ ಬಹಳ ಒಡನಾಟ. ಅವರ ಮದುವೆ ಆದ ಮೇಲೂ ನನ್ನ ತಂದೆಯವರು ಅವರಿಗೆ ಕಾಲಕಾಲಕ್ಕೆ ಸಲಹೆ ಸಹಕಾರ ಕೊಟ್ಟು ಅವರ ಕುಟುಂಬದೊಡನೆ ಒಳ್ಳೆಯ ಸಂಬಂಧ ಹೊಂದಿದ್ದರು.

ಶ್ರೀನಿವಾಸ ತಂತ್ರಿಯವರನ್ನು ವಿವಾಹವಾಗಿ ಸುಮಾರು ಅರವತ್ತೆರಡು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ನನ್ನ ಚಿಕ್ಕಿಯದ್ದು ಹೋರಾಟದ ಬದುಕು. ಮೂರು ಮಕ್ಕಳನ್ನು ಬೆಳೆಸುತ್ತಾ ಮೈಸೂರಿನ ಸರಸ್ವತಿಪುರಂ ನಲ್ಲಿ ಒಂದು ಪುಟ್ಟ ಕ್ಯಾಂಟೀನ್ ಅನ್ನು ಸುಮಾರು ಮೂವತ್ತು ವರ್ಷಗಳ ಕಾಲ ನಡೆಸಿ ಉತ್ತಮ ಬದುಕು ಕಟ್ಟಿಕೊಂಡ ಆ ದಂಪತಿಗಳ ಶ್ರಮಕ್ಕೆ ಎಲ್ಲರೂ ತಲೆದೂಗಲೇಬೇಕು. ಅವರು ತಯಾರಿಸಿದ ತಿನಿಸಿಗೆ ಬಹಳ ಬೇಡಿಕೆ ಇತ್ತು. ನನ್ನ ಚಿಕ್ಕಿ ಪ್ರತಿದಿನ ಬೆಳಿಗ್ಗೆ ನಾಲ್ಕಕ್ಕೆ ಎದ್ದು ಕ್ಯಾಂಟೀನಿಗೆ ಬೇಕಾದ ಇಡ್ಲಿ, ಪಲಾವ್ ಇತ್ಯಾದಿ ತಿಂಡಿಗಳನ್ನು ತಯಾರಿಸಿಕೊಟ್ಟರೆ ಚಿಕ್ಕಪ್ಪ ತಮ್ಮ ಸ್ಕೂಟರ್ ನಲ್ಲಿ ಅದನ್ನು ಕ್ಯಾಂಟೀನ್ ಗೆ ಕೊಂಡೊಯ್ದು ಬೆಳಗಿನ ಮಾರಾಟ ಮುಗಿಸಿ ಹನ್ನೊಂದು ಗಂಟೆಯ ಸುಮಾರಿಗೆ ಮನೆಗೆ ಮರಳುತ್ತಿದ್ದರು. ಚಿಕ್ಕಿ ಮನೆಗೆಲಸ ಮುಗಿಸಿ ಸಂಜೆಯ ತಿಂಡಿಗೆ ತಯಾರಿ ಶುರುಮಾಡಿದರೆ ಚಿಕ್ಕಪ್ಪ ಪೇಟೆಗೆ ಹೋಗಿ ಸಾಮಾನು ಸರಂಜಾಮು ತರುತ್ತಿದ್ದರು. ಸಂಜೆಗೂ ಹಲವಾರು ರೀತಿಯ ಸ್ನ್ಯಾಕ್ಸ್ ತಯಾರಿಸಿ ನನ್ನ ಚಿಕ್ಕಿ ಕೊಟ್ಟಾಗ ಚಿಕ್ಕಪ್ಪ ಅದನ್ನು ಕ್ಯಾಂಟೀನ್ ನಲ್ಲಿ ಮಾರಾಟ ಮಾಡಿ ಸಂಜೆ ಏಳರ ಸುಮಾರಿಗೆ ಮನೆಗೆ ಮರಳುತ್ತಿದ್ದರು. ಆ ಸಮಯದಲ್ಲಿ ನನ್ನ ಚಿಕ್ಕಮ್ಮ ಅಲಂಕರಿಸಿಕೊಂಡು ಕೂತಿದ್ದು ಗಂಡ ಬಂದ ಕೂಡಲೇ ಇಬ್ಬರೂ ಹೊರ ತಿರುಗಾಟ ಮಾಡುತ್ತಿದ್ದರು. ಅವರಿಬ್ಬರನ್ನು ನೋಡಿದರೆ ಬೆಳಗ್ಗಿನಿಂದ ಸಂಜೆಯವರೆಗೆ ಬಿಗಿಯಾಗಿ ದುಡಿದು ದಣಿದವರು ಎಂದು ಅನಿಸುತ್ತಲೇ ಇರಲಿಲ್ಲ. 

ನಾವೆಲ್ಲ ಮೈಸೂರಿಗೆ ಹೋಗಿ ಅವರ ಮನೆಯಲ್ಲಿ ವಾರಗಟ್ಟಲೆ ಝಾಂಡಾ ಊರುತ್ತಿದ್ದೆವು. ಚಿಕ್ಕಮ್ಮನ ಕೈಯ್ಯಡುಗೆ ಉಣುವುದೆಂದರೆ ನಮಗೆಲ್ಲ ಇಷ್ಟ. ಬರೀ ನಮಗಲ್ಲ, ಮೈಸೂರಿನಲ್ಲಿ ಸ್ನಾತಕೋತ್ತರ ಪದವಿ ಮಾಡಿದ ನನ್ನೆಲ್ಲಾ ಕಸಿನ್ಸ್ ಅವರ ಮನೆಯ ಖಾಯಂ ಅತಿಥಿಗಳು!



ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆ ನಿಂತ ನನ್ನ ಚಿಕ್ಕಮ್ಮ - ಚಿಕ್ಕಪ್ಪ ನಿಜವಾದ ಅರ್ಥದಲ್ಲಿ ಅವರ ನಿವೃತ್ತ ಬದುಕನ್ನು ಬದುಕತೊಡಗಿದ್ದರು. ಅವರಿಬ್ಬರ ಒಡನಾಟ, ಬದುಕಿನ ಪ್ರೀತಿ ಎಲ್ಲರಿಗೂ ಮಾದರಿಯಾಗಿತ್ತು. ಅವರ ಮೂರೂ ಮಕ್ಕಳು ಸುಂದರವಾಗಿ ಬದುಕು ಕಟ್ಟಿಕೊಂಡಿರುವ ತೃಪ್ತಿ ಚಿಕ್ಕಿಗಿತ್ತು. ಬಹಳ ಸ್ವತಂತ್ರ ಮನೋಭಾವದ ನನ್ನ ಚಿಕ್ಕಿಗೆ ಸ್ವಚ್ಛತೆಯ ಗ್ರಸ್ತತೆ ಇತ್ತು. ಅವರಿಲ್ಲದಿದ್ದರೂ ಅವರ ನೆನಪುಗಳು ನಮ್ಮಲ್ಲಿ ಸದಾ ಹಸಿರಾಗಿರುತ್ತವೆ ಎಂಬುದಂತೂ ನಿಜ. 

Posted 19/12/2025




Thursday, December 18, 2025

BHAJANE AT SUNANDI ELDERCARE - 41

Thursday, 18th December 2025

Sunandi Oldage Home, KodigeHalli, Bengaluru 



Our weekly Bhajan/Session with Ramakrishna Bhat, took place at the above centre for wellness and peace of the inmates.





The session concluded with Upanyasa, Aarathi, and Prasada.

Lokaa Samasthaa Sukhino Bhavanthu....


Om Shanthi.... Shanthi....Shanthi.....


Posted 19/12/2025 





S M SURENDRA (HEBBAR) - SHRADDHANJALI

 Sunday, December 14, 2025


Surendra is brother of Sunanda Attige, w/o Late Seetharama Somayaji (My elder Brother) He had been unwell for sometime, (86 yrs) , passed away on 14th Dec.2025

VISITED IN FEB 2023

I had visited him in the ELDER CARE CENTRE in Feb, 2023 and enquired about his health and wished him speedy recovery.



I pray for the departed soul to rest in peace.

Om Shanthi, Om Sadghathi.....


Posted 19/12/2025