ಭಾನುವಾರ, ಜುಲೈ 26, 2026
ತರಳಬಾಳು ಕೇಂದ್ರ ಗ್ರಂಥಾಲಯ, ಆರ್. ಟಿ. ನಗರ, ಬೆಂಗಳೂರು.
ಶಿವರಾಮ ಕಾರಂತ ವೇದಿಕೆ, ಆರ್. ಟಿ. ನಗರ, ಬೆಂಗಳೂರು ಹಮ್ಮಿ ಕೊಂಡಿದ್ದ ಜುಲೈ ತಿಂಗಳ ಕಾರ್ಯಕ್ರಮದಲ್ಲಿ ಕುಮಾರಿ ಲಹರಿ ಭಟ್ ಅವರ ತಂಡದೊಂದಿಗೆ ವೀಣಾ ವಾದನ ಏರ್ಪಡಿಸಲಾಗಿತ್ತು.
ವೀಣಾ ವಾದನ ಕಛೇರಿಯಲ್ಲಿ ಮೃದಂಗದಲ್ಲಿ ಗೌತಮ್ ಗೋಪಾಲಕೃಷ್ಣ , ತಾಳ ದಲ್ಲಿ ಸುನಿಧಿ ಅರೇಕೆರಿ ಅವರು ಸಾಥ್ ನೀಡಿದ್ದರು.
ಸುಮಾರು 50 ನಿಮಿಷಗಳ ಕಾರ್ಯಕ್ರಮವು ಅದ್ಭುತವಾಗಿ ಮೂಡಿ ಬಂದಿತ್ತು.
ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರ ವರದಿಯಲ್ಲಿ ..
ನಂತರ ಕುಮಾರಿ ಲಹರಿ ಭಟ್ ಮತ್ತು ತಂಡದವರಾದ ಗೌತಮ್ ಗೋಪಾಲ ಕೃಷ್ಣ, ಸುನಿಧಿ ರವರಿಂದ ವೀಣಾ ವಾದನ ಕಾರ್ಯಕ್ರಮ ಪ್ರಾರಂಭವಾಯಿತು. ದೇವಲೋಕದ ಗಂಗೆ ಭಗೀರಥನ ಮೂಲಕ ಭೂಮಿಗೆ ಇಳಿದು ಬಂದು ನಮ್ಮ ಪಾಪಗಳನ್ನೆಲ್ಲ ತೊಳೆದು ಹೋದಂತಹ ಅನುಭವ ಈ ವೀಣಾ ವಾದನದ ಮೂಲಕ ನಮಗೆ ದೊರಕಿತೇನೋ ಎನ್ನುವ ಅನುಭವ ನಿಜಕ್ಕೂ,ಮಾತಿನ ಎಣಿಕೆಗೆ ಸಿಗಲಾರದು.
ಗಜವದನ ಬೇಡುವೆ ಆದ ನಂತರ ಸಾಮಜವರಗಮನ, ಬಹಳ ಅದ್ಭುತವಾಗಿ ಬಂತು.ಪಿಳಂಗೊವಿಯ ಚೆಲ್ವಾ ಕೃಷ್ಣ ಇಂದು ಹಾಡಿನ ವೀಣಾ ವಾದನದ ಮೂಲಕ, ಇಳಿದು ಬಂದನೇನೋ ಅನಿಸ್ತಾ ಇತ್ತು..ಬ್ರಹ್ಮಮೊಕ್ಕಟೆ ಪರ ಬ್ರಮ್ಮಮ್ಮೋಕ್ಕಟೆ..ಶಂಭೋ ಸ್ವಯಂಭೋ, ತಾರಕ್ಕ ಬಿಂದಿಗೆ ನಾನೀರಿಗೆ ಹೋಗುವೆ. ಭಾಗ್ಯದ ಲಕ್ಷ್ಮಿ ಬಾರಮ್ಮ. ತಂಬೂರಿ ಮಿಟಿದವ ಮತ್ತೇರಡು ಹಾಡುಗಳನ್ನು ತಮ್ಮ ವೀಣಾ ವಾದನದ ಮುಖಾಂತರ ಪ್ರಸ್ತುತ ಪಡಿಸಿ ನಮ್ಮನ್ನೆಲ್ಲ ಪರಕಾಯ ಪ್ರವೇಶಕ್ಕೆ ಕೊಂಡೋಯ್ದಿದ್ದಾರೆ.. .. ಅಬ್ಬಾ
ನಿಜಕ್ಕೂ ಸಾರಸ್ವತ ಲೋಕ ಎಲ್ಲಾ ಲೋಕಗಳಿಗಿಂತ ಭಿನ್ನ ಅನ್ನೋದು ಪ್ರತಿಯೊಬ್ಬರ ಅನುಭವಕ್ಕೂ ಬರಬೇಕು. ಈ ಮೂಲಕ ಇಂತ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಕನ್ನಡಮ್ಮನ ತೇರು ಹೀಗೇ ಸಾಗುತ್ತಿರಲಿ ಅನ್ನುವ ಆಶಯದೊಂದಿಗೆ ಮತ್ತೊಮ್ಮೆ ಕುಮಾರಿ ಲಹರಿ ಭಟ್ ರವರಿಗೆ ಮತ್ತು ಅವರ ತಂಡದವರಿಗೆ ಅತ್ಯಂತ ತುಂಬು ಹೃದಯದಯದಿಂದ ..ಧನ್ಯವಾದಗಳನ್ನ ಅರ್ಪಿಸುತ್ತಿದ್ದೇವೆ. ಕಾರ್ಯಕ್ರಮದ ಅಂತಿಮ ಘಟ್ಟ.. ವಂದನಾರ್ಪಣೆಯೊಂದಿಗೆ ಮುಕ್ತಾಯಗೊoಡಿತು.
ಕುಮಾರಿ ಲಹರಿ ಭಟ್
ಗೌತಮ್ ಗೋಪಾಲಕೃಷ್ಣ
ಕಲಾವಿದರನ್ನು ಶಾಲು, ಹೂ, ಹಾರ ಮತ್ತು ಉಡುಗೊರೆ ಯೊಂದಿಗೆ ಸನ್ಮಾನ ಮಾಡಲಾಯಿತು.
ಕಲಾವಿದರ ಪರಿಚಯ:
ಗೌತಮ್ ಗೋಪಾಲಕೃಷ್ಣ
ಲಹರಿ ಮತ್ತು ತಂಡದವರಿಗೆ ಶಿವರಾಮ ಕಾರಂತ ವೇದಿಕೆಯು ಶುಭವನ್ನು ಹಾರೈಸುತ್ತದೆ.
Posted 28/7/2026








No comments:
Post a Comment