Monday, July 27, 2026

GENERAL BODY MEETING- 2026

 Sunday, July 26, 2026

TaralaBalu Kendra Granthalaya, R,T. Nagara, Bengaluru.

The Annual Genaral Body Meeting of Shivarama Karantha Vedike held  at the  Granthalaya of TaralaBalu Kendra, Bengaluru.


MANJULA BHARGAVI


After the NAADAGEETHE singing, Dr Deepa Phadke, President, Shivarama Karantha Vedike, welcomed the memebrs present and gave an account the accomplishments of the Vedike in the year 2025 - 26.

NAADA GEETHE 

DEEPA PHADKE


Vedike Secretary, Mrs Manjula Bhargavi, informed the achiements in her reposrt, including the programs happened during the year 2025-26, and the YouTube channel containing more tha 35 novels of Shivarama Karntha.

ಎಲ್ಲರಿಗೂ ನಮಸ್ಕಾರ.
ಭಾನುವಾರದ ವಾರ್ಷಿಕ ಮಹಾಸಭೆಯ ಒಂದು ನೋಟ.

"ಯಾರಿಗೂ ಉಪದೇಶ ಮಾಡಬೇಡಿ. ನೀವೇನು ಹೇಳಬೇಕೆಂದಿದ್ದಿರೋ ಹಾಗೆ ಬದುಕಿ ತೋರಿಸಿರಿ "ಎಂಬ ಕಾರಂತರ  ಈ ನುಡಿಯನ್ನು ನೆನೆಯುತ್ತಾ

ಎಲ್ಲರಿಗೂ ನಮಸ್ಕಾರ 

ಶಿವರಾಮ ಕಾರಂತ ವೇದಿಕೆ (ರಿ)
ರವೀಂದ್ರನಾಥ ಟಾಗೋರ್ ನಗರ, 
ಬೆಂಗಳೂರು-560032
ಶಿವರಾಮ ಕಾರಂತ ವೇದಿಕೆಯ 2025-26 ರ ವಾರ್ಷಿಕ ವರದಿಯು ಸಂಜೆ ಮೂರು ಗಂಟೆ ಹದಿನೈದು ನಿಮಿಷಕ್ಕೆ ಸರಿಯಾಗಿ ನಡೆಯಿತು. ಅದಕ್ಕೂ ಮುಂಚೆ,ಪ್ರಪ್ರಥಮವಾಗಿ ನಾಡಗೀತೆಯನ್ನು ಎದ್ದು ನಿಂತು ಗೌರವದೊಂದಿಗೆ ಹಾಡಲಾಯಿತು..
ತದ ನಂತರ ವಾರ್ಷಿಕ ಮಹಾ ಸಭೆ 2025-26.ಈ ಕುರಿತು ಮೊದಲಿಗೆ ಅಧ್ಯಕ್ಷರಾದ ಡಾ. ದೀಪ ಫಡ್ಕೆ ಅವರು ತಮ್ಮ ಮೊದಲ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಆಡುತ್ತ, ನಮ್ಮ ವೇದಿಕೆ ಬೆಳೆದು ಬಂದ ಹಾದಿ, ಹಾಗೂ ಮುಂದಿನ ಪೀಳಿಗೆಯವರು ಕನ್ನಡಮ್ಮನ ಸಾಹಿತ್ಯದ ತೇರನ್ನು ಹೇಗೆ ನಡೆಸಿ ಕೊಂಡು ಹೋಗಬೇಕಿದೆ ಎಂಬುದನ್ನು ಕುರಿತು,ಬಹಳ ಸೊಗಸಾಗಿ ಹೇಳಿದರು. ನಂತರ 
ವೇದಿಕೆಯ ಕಾರ್ಯದರ್ಶಿಯಾಗಿ ನನ್ನ ವರದಿಯನ್ನು ಓದಿದೆನು. 
ಸನ್ಮಾನ್ಯ ಅಧ್ಯಕ್ಷರೇ,
ವೇದಿಕೆಯ ಗೌರವಾನ್ವಿತ ಪದಾಧಿಕಾರಿಗಳೆ ,ನೆರೆದಿರುವ ಸಕಲ ಸದಸ್ಯರೇ,  ಸನ್ಮಿತ್ರರೇ,
ಸುಮಾರು ಮೂವತ್ತು ವರ್ಷಗಳ ಇತಿಹಾಸವಿರುವ ನಮ್ಮ ಶಿವರಾಮ ಕಾರಂತ ವೇದಿಕೆ(ರಿ) ,ಕನ್ನಡ ಸಾಹಿತ್ಯಿಕ ಕಾರ್ಯಕ್ರಮಗಳ ಜೊತೆ ಜೊತೆಗೆ ಕಲೆ ,ಸಂಸ್ಕೃತಿಗಳ ವರ್ಧನೆಗೂ ಮೀಸಲಿಟ್ಟಿದೆ. ಸಂಸ್ಥೆಯು ಸತತವಾಗಿ ಉಪನ್ಯಾಸ, ನಾಟಕ, ಯಕ್ಷಗಾನ, ಮಕ್ಕಳಿಗೆ ಸಂಬಂಧಿಸಿದಂತೆ ರಸಪ್ರಶ್ನೆ,  ಹೀಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತದೆ. ಬೆಂಗಳೂರಿನ ಪ್ರತಿಷ್ಠಿತ  ಸಾಹಿತ್ಯಕ ಸಂಸ್ಥೆ ಎಂದು ಗುರುತಿಸಲ್ಪಟ್ಟಿದ್ದು,  ಬೆಂಗಳೂರು ಉತ್ತರ ಭಾಗದ ಏಕೈಕ ಸಾಹಿತ್ಯ ವೇದಿಕೆ ಎನ್ನಲು ನಮಗೆ ಬಹಳ ಸಂತೋಷವಾಗುತ್ತದೆ. ಈ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಚಂದ್ರ ಶೇಖರ ಚಡಗರವರು  ಈ ವೇದಿಕೆಯ ಏಳಿಗೆಗೆ ಹತ್ತು ಹಲವು ರೀತಿಯಲ್ಲಿ ಕಾರಣರಾದರೆ, ನಮ್ಮ ನಾಡಿನ ಪ್ರಸಿದ್ಧ ಕವಿಗಳು, ಸಾಹಿತಿಗಳು, ವಿಮರ್ಶಕರು, ನಾಟಕಕಾರರು, ಸಂಗೀತಗಾರರು, ವಿದ್ವಾಂಸರು ಬಂದು ವೇದಿಕೆಯ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿರುವುದು, ನಮಗೆ ನಿಜಕ್ಕೂ ಹೆಮ್ಮೆ. ಇನ್ನೂ ಈ ವೇದಿಕೆಯಲ್ಲಿ ಅಧ್ಯಕ್ಷರಾಗಿ,  ಪದಾಧಿಕಾರಿಗಳಾಗಿ, ಗುರುತಿಸಿ ಕೊಂಡು ತಮ್ಮ ತನು ಮನ ಧನಗಳಿಂದ, ನಮ್ಮ ಹೆಮ್ಮೆಯ ಶಿವರಾಮ ಕಾರಂತ ವೇದಿಕೆಯ ಪ್ರತಿ ಮುನ್ನಡೆಗೂ ಕಾರಣರಾದ, ಪ್ರತಿ ಸದಸ್ಯರಿಗೂ ಕೂಡ ಅತ್ಯಂತ ತುಂಬು ಹೃದಯದಿಂದ ಅಭಿನಂದನೆಗಳನ್ನು ಸಲ್ಲಿಸುತ್ತಾ,  
ನಮ್ಮ ಸಂಸ್ಥೆಯ ಕಳೆದ ವಾರ್ಷಿಕ 2025-26 ನೇ ಸಾಲಿನ ಮಹಾಸಭೆ ದಿನಾಂಕ  22. 6. 2025 ರ ಭಾನುವಾರ , ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ತರಳಬಾಳು ಕೇಂದ್ರದ ಗ್ರಂಥಾಲಯ ,2ನೇ ಮಹಡಿ, ಆರ್. ಟಿ. ನಗರ ,ಬೆಂಗಳೂರು-32 ಇಲ್ಲಿ ನಡೆಯಿತು.
2025-26 ರ ವಾರ್ಷಿಕ ವರದಿಯ ವರ್ಷದಲ್ಲಿ ಕೆಳಗೆ ಕಾಣಿಸಿದವರು ಸಂಸ್ಥೆಯ ಏಳಿಗೆಗಾಗಿ ದುಡಿದಿದ್ದಾರೆ.   
ಸಂಸ್ಥಾಪಕರು - ಶ್ರೀ ಪಾ.ಚಂದ್ರಶೇಖರ ಚಡಗ ರವರು
ಅಧ್ಯಕ್ಷರು          - ಡಾ. ದೀಪಾ ಫಡ್ಕೆ
ಗೌರವಾಧ್ಯಕ್ಷರು          - ಶ್ರೀ ಎಸ್.ಆರ್. ವಿಜಯಶಂಕರ
ಉಪಾಧ್ಯಕ್ಷರು - ಡಾ. ಆರ್ .ಆರ್. ಪಾಂಗಾಳ್ ಮತ್ತು ವೀರಶೇಖರ ಸ್ವಾಮಿ
ಕಾರ್ಯದರ್ಶಿ - ಶ್ರೀಮತಿ ಮಂಜುಳಾ ಭಾರ್ಗವಿ
ಕೋಶಾಧಿಕಾರಿಗಳು - ಶ್ರೀ. ಬಿ. ಜಯರಾಮ ಸೋಮಯಾಜಿ
ಕಾರ್ಯಕಾರಿ ಸಮಿತಿಯ ಸದಸ್ಯರು
ಶ್ರೀಮತಿ ಸತ್ಯಭಾಮ ರಂಗೇಗೌಡ
ಶ್ರೀಮತಿ ಅರುಣ ಮಯ್ಯ
ಶ್ರೀಮತಿ ಚೇತನ ಹೆಗಡೆ.
ಶ್ರೀಮತಿ ಸಂಧ್ಯಾ ಮಂಜುನಾಥ್.
ಶ್ರೀ ಸುದೀoದ್ರ 
ಯಕ್ಷಗಾನ ಮತ್ತು ನಾಟಕ ಸಮಿತಿ - ಶ್ರೀ ಕೆ. ಕೃಷ್ಣ ಪ್ರಸಾದ .ಸಂಪನ್ಮೂಲ ಸಮಿತಿ- ಶ್ರೀ ಬಿ.ಎಚ್. ಎಂ. ವೀರಶೇಖರ ಸ್ವಾಮಿ ಮತ್ತು ಶ್ರೀ. ಬಿ.ಜಯರಾಮ ಸೋಮಯಾಜಿ
ಕಾರ್ಯಕಾರಿ ಸಮಿತಿಯ ಸಮಯೋಜಿತ ಸಭೆಗಳ / ಸಂದರ್ಭಕ್ಕನುಗುಣವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತ ಮೇಲ್ಕಂಡ ಅವಧಿಯ ಕಾರ್ಯಕ್ರಮಗಳನ್ನು ರೂಪಿಸಿ , ನಡೆಸಿ ಯಶಸ್ವಿಯಾಗಿರುತ್ತದೆ. ಅದರನ್ವಯ  2024-2025 ರ ವಾರ್ಷಿಕ ಅವಧಿಯ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ ಸಭೆಯ ಮುಂದೆ ಇಡುತ್ತಿದ್ದೇನೆ.  
1. ದಿನಾಂಕ 13 .4. 2025 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ತರಳಬಾಳು ಮಿನಿ ಸಭಾಂಗಣ  ಆರ್.ಟಿ.ನಗರ. ಇಲ್ಲಿ
ಪುಸ್ತಕ ಬಿಡುಗಡೆ, ಪಾಂಗಾಳ ಡಾಕ್ಟ್ರು ಎಂಬ ಕೃತಿ ಬಿಡುಗಡೆಯಾಗಿರುತ್ತದೆ. ಮುಖ್ಯ ಅತಿಥಿಗಳಾಗಿ , ಡಾ. ಪುರುಷೋತ್ತಮ ಬಿಳಿಮಲೆ ಮತ್ತು ಎಸ್. ಆರ್ ವಿಜಯಶಂಕರರವರು  ವೇದಿಕೆಯಲ್ಲಿ  ಉಪಸ್ಥಿತರಾಗಿರುತ್ತಾರೆ. 
2. ದಿನಾಂಕ 18.ಏಪ್ರಿಲ್ 2025, ಶುಕ್ರವಾರ ಮತ್ತು 19 ಶನಿವಾರ ಲಕ್ಷ್ಮೀಶ ತೋಳ್ಪಾಡಿಯವರು ಭಕ್ತಿ ಮತ್ತು ಸಾಹಿತ್ಯ ಎಂಬುದರ ಕುರಿತು ಗಾಂಧೀಭವನ ಕುಮಾರ ಕೃಪಾ ರಸ್ತೆ ಬೆಂಗಳೂರು. ಇಲ್ಲಿಗೆ ಬಂದು ಉಪನ್ಯಾಸವನ್ನು ನೀಡಿರುತ್ತಾರೆ.
3. ದಿನಾಂಕ 8 ರ ಜೂನ್  .2025 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ಪಾಂಚಜನ್ಯ ಸಭಾಂಗಣ. ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ ಎಚ್.ಎಸ್.ವಿ. ನಮನ ಕಾರ್ಯಕ್ರಮದಲ್ಲಿ,ಭಾವಗೀತೆಗಳ ಹರಿಕಾರ ಎಚ್.ಎಸ್.ವೆಂಕಟೇಶ್ ಮೂರ್ತಿಯವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುವ ಕಾರ್ಯಕ್ರಮ ನಡೆದಿರುತ್ತದೆ.  
4. ದಿನಾಂಕ 22.ಜೂನ್ .2025 ಭಾನುವಾರ ಮಧ್ಯಾಹ್ನ 3.00 ಗಂಟೆಗೆ ಸರ್ವ ಸದಸ್ಯರ ಮಹಾ ಸಭೆಯಲ್ಲಿ ವಾರ್ಷಿಕವರದಿಯೊಂದಿಗೆ, ವೇದಿಕೆಯ ಪದಾಧಿಕಾರಿಗಳು, ಮತ್ತು  ಸಮಿತಿಯ ಸದಸ್ಯರು, ಸಾಮಾನ್ಯ ಸದಸ್ಯರು, ಭಾಗವಹಿಸಿರುತ್ತಾರೆ. ಮತ್ತು ಇದೇ ದಿನ ಸಂಜೆ 4 ಗಂಟೆಗೆ ಸರಿಯಾಗಿ ಪಂಜೆ ಮಂಗೇಶ ರಾಯರ ಸಾಹಿತ್ಯ  ಈ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಎಸ್. ಪಿ. ಮಹಾಲಿಂಗೇಶ್ವರ ಭಟ್ ರವರು ಬಂದಿರುತ್ತಾರೆ. ಇದು  ತರಳಬಾಳು ಮಿನಿ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಿರುತ್ತದೆ.
5. ದಿನಾಂಕ 20 ಜುಲೈ ಭಾನುವಾರ 2025. ಸಂಜೆ 4.00 ಗಂಟೆಗೆ ಸ್ಥಳ: ತರಳ ಬಾಳು ಮಿನಿ ಸಭಾಂಗಣ ಆರ್.ಟಿ.ನಗರ. ಇಲ್ಲಿ ಸುಧಿಪುಸ್ತಕ ಬಿಡುಗಡೆ. ಪರಿಚಯ ಡಾ. ಚೇತನ ಹೆಗಡೆ. ಡಾ. ಅನ್ನದಾನೇಶ್ ಹರೀಶ್ , ಜಿ. ವಿ.ರೇಣುಕಾರವರು ಭಾಗವಹಿಸಿರುತ್ತಾರೆ.
6. ದಿನಾಂಕ 21. ಸೆಪ್ಟಂಬರ್ 2025 ಭಾನುವಾರ . ದಾದಾಬಾಯಿ ನವರೋಜಿ ದ್ವಿಶತಮಾನೋತ್ಸವ . ವಿಶೇಷ ಉಪನ್ಯಾಸ ರಘುನಾಥ್ ಕೃಷ್ಣಮಾಚಾರ್. ಸುಧೀಂದ್ರ ಬುದ್ಧಿ . ಕೆ. ಸತ್ಯ ನಾರಾಯಣ ಸಂಜೆ 4.00 ಗಂಟೆಗೆ ಸ್ಥಳ: ತರಳಬಾಳು ಮಿನಿ ಸಭಾಂಗಣ. ಅರ್.ಟಿ.ನಗರ
 7. ದಿನಾಂಕ ನವಂಬರ್ 16 ಭಾನುವಾರ.2025 ಕನ್ನಡ ರಾಜ್ಯೋತ್ಸವ ಆಚರಣೆ  ಉಪನ್ಯಾಸ ಎಚ್. ದುಂಡಿರಾಜ್, ಡಾ. ಸಂಧ್ಯಾ ಹೆಗಡೆ ದೊಡ್ಡಹೊಂಡ. ತರಳ ಬಾಳು ಮಿನಿ ಸಭಾಂಗಣ  
8. ದಿನಾಂಕ 22 .ಮಾರ್ಚ್ 2026 ಭಾನುವಾರ ಕಾರ್ಯಕ್ರಮ ಸಂಜೆ 4.00 ಗಂಟೆಗೆ ಸ್ಥಳ:  ತರಳಬಾಳು ಮಿನಿ ಸಭಾಂಗಣ. ಅರ್.ಟಿ.ನಗರ . ಇಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಸ್ತ್ರೀ ಧ್ವನಿಯಾಗಿ ಮುದ್ದಣ ಮನೋರಮೆ.ಡಾ .ನಾ. ದಾಮೋದರ ಶೆಟ್ಟಿ ಪ್ರೊ. ಆರ್. ಸುನಂದಮ್ಮ ಇವರು ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ. 
9. ಶಿವರಾಮ ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆ ಸುಮಾರು 35 ಕ್ಕೂ ಹೆಚ್ಚು ಕಾದಂಬರಿಗಳು , ಗಣ್ಯರ ಪರಿಚಯ .ಯೂಟ್ಯೂಬ್ ಚಾನೆಲ್ ಈ ಯಶಸ್ವಿ ಕಾರ್ಯಮದಲ್ಲಿ ನಮ್ಮ ಅಧ್ಯಕ್ಷರ ಕಾರ್ಯಕ್ಷಮತೆಯನ್ನು ನಾವೆಲ್ಲರೂ ಮನಃಪೂರ್ತಿ ಸ್ಮರಿಸಲೇ ಬೇಕು.     
ಆತ್ಮೀಯರೇ .
  ಮೇಲ್ಕಂಡ ವಾರ್ಷಿಕ ಅವಧಿಯ ವೇದಿಕೆಯ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ತಮ್ಮೆಲ್ಲರ ಶ್ರಮ , ಶ್ರದ್ಧೆ, ತಮ್ಮ ಆಗಮನ , ಸಾಹಿತ್ಯಾಭಿರುಚಿ, ಜ್ಞಾನಾರ್ಜನೆಯ ಆಳ ಇವೆಲ್ಲವೂ ಇದ್ದೇ ಇದೆ. ಈ ಯಶಸ್ಸಿನ ಕಾರಣೀಕರ್ತರು  ಕೂಡ ತಾವುಗಳೆ ಆಗಿದ್ದಿರಿ. 
ಮೂರು ದಶಕಗಳ ಈ ಸಂಭ್ರಮಾಚರಣೆಯಲ್ಲಿ ಶಿವರಾಮ ಕಾರಂತ ವೇದಿಕೆಯ ಸಂಸ್ಥಾಪಕರಾದ ಪಾ. ಚಂದ್ರಶೇಖರ ಚಡಗ ಸರ್ ರವರ ಆಶಯ,ಅಪ್ಪಣೆ, ಆದರ್ಶ ಮತ್ತು ಸತತ ಮಾರ್ಗದರ್ಶನದಲ್ಲಿ ,ಹಾಗು ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿರುವ ಡಾ.ದೀಪಾಫಡ್ಕೆ ಅವರಿಗೂ, ಗೌರವಾಧ್ಯಕ್ಷರಾದ ಶ್ರೀ ಎಸ್. ಆರ್. ವಿಜಯಶಂಕರ್ ರವರಿಗೂ , ಉಪಾಧ್ಯಕ್ಷರಾದ ವೀರಶೇಖರ ಸ್ವಾಮಿಯವರಿಗೂ, ಎಂದಿನಂತೆ ವೇದಿಕೆಯ ಲೆಕ್ಕಪತ್ರಗಳನ್ನು ಪರಿಶೋಧಿಸಿದ ಯಾವುದೇ ರೀತಿಯ ಶುಲ್ಕ ಪಡೆಯದ  ಶರತ್ ಅಂಡ್.ಕಂಪನಿ ಚಾರ್ಟೆಡ್ ಅಕೌಂಟೆಂಟ್ಸ್ ಇವರಿಗೆ ವೇದಿಕೆ ಅಭಾರಿಯಾಗಿದೆ.
ವೇದಿಕೆಯ ಲೆಕ್ಕಪತ್ರಗಳ ಜವಾಬ್ದಾರಿ ನಿರ್ವಹಿಸುವ ಖಜಾಂಚಿ, ಕೋಶಾಧಿಕಾರಿಗಳು ಆದ  ಶ್ರೀ ಜಯರಾಮ ಸೋಮಯಾಜಿ ಸರ್ ರವರಿಗೂ, ಮತ್ತು ಯೂಟ್ಯೂಬ್ ,ಫೇಸ್ಬುಕ್ ಮಾಧ್ಯಮಗಳ ಮೂಲಕವೂ ವೇದಿಕೆಯ ಕಾರ್ಯಕ್ರಮ ವೀಕ್ಷಿಸಲು ತಾಂತ್ರಿಕ ಸಹಕಾರ ಜವಾಬ್ದಾರಿ ನಿರ್ವಹಿಸಿದ ಪತ್ರಿಕೋದ್ಯಮಿ ಶ್ರೀ ಶಿವ ಸುಬ್ರಮಣ್ಯರವರು, ಸಮಿತಿ ಸದಸ್ಯರು ಶ್ರೀ ಸುದೀoದ್ರ ರವರು,ಎಲ್ಲರಿಗೂ ತುಂಬು ಹೃದಯದಿಂದ ಧನ್ಯವಾದಗಳು.
ಅಷ್ಟೇ ಅಲ್ಲದೇ ತರಳಬಾಳು ಗ್ರಂಥಾಲಯದಿಂದ ಶ್ರೀ ವಿನಾಯಕ ದೇವಸ್ಥಾನ ಸಭಾಂಗಣದ ಆಡಳಿತ ಮಂಡಳಿಯ ಸದಸ್ಯರೂ ಹಾಗು ವೇದಿಕೆಯ ಉಪಾಧ್ಯಕ್ಷರಾದ ಶ್ರೀ ವೀರಶೇಖರ ಸ್ವಾಮಿರವರು.ತನು ಮನ ಧನಗಳಿಂದ ವೇದಿಕೆಯಲ್ಲಿ ಅದ್ಧೂರಿ ಯಕ್ಷಗಾನ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುವ ಡಾ. ಪಾಂಗಾಳ್ ಸರ್ ರವರಿಗೂ ನಮ್ಮ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
 ನಾವೆಲ್ಲರೂ ಒಂದೇ ಮನುಜ ಮತ ಒಂದೆ  ಒಗ್ಗಟ್ಟಿನಲ್ಲಿ ಬಲವಿದೆ. ಎನ್ನುವಂತೆ ನೀವಿಲ್ಲದೇ ಯಾವ ಕಾರ್ಯಕ್ರಮಗಳಿಗೂ ಕಳೆ ಇರುವುದಿಲ್ಲ .ಪ್ರತಿ ಕಾರ್ಯಕ್ರಮದ ಹಿಂದೆ  ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರತಿಯೊಬ್ಬರ ಪಾತ್ರಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಇದ್ದುದ್ದನ್ನು ನಾವು ಕಾಣಬಹುದು.ಸಮಿತಿಯ ಪ್ರತಿ ಸದಸ್ಯರಿಗೂ ಕೂಡ ನಾನು ವಂದನೆಗಳನ್ನು ಸಲ್ಲಿಸುತ್ತೇನೆ. 
ಒಂದು ವಿದಾಯವು ಮರು ಹುಟ್ಟಿಗೆ ಕಾರಣ .ಒಂದು ಅಸ್ತಂಗತ ಒಂದು ಉದಯಕ್ಕೆ ಕಾರಣ ಎಂದು ಹೇಳುತ್ತಾ,  ಈ ವರ್ಷವೂ ಕೆಲವು ಅಮೂಲ್ಯರನ್ನು ವೇದಿಕೆ ಕಳೆದು ಕೊಂಡಿತು .ಅಂಥವರಲ್ಲಿ ನಮ್ಮ ವೇದಿಕೆಯ ಸದಸ್ಯರಲ್ಲಿ ಒಬ್ಬರಾದ  ಶ್ರೀ ಕೆ. ರಮೇಶ್ ಗೋಟರವರು 15.9.2025.ರಂದು ದೈವಾಧೀನರಾಗಿರುತ್ತಾರೆ. ಅವರಿಗೆ ನಮ್ಮ ಶ್ರದ್ಧಾಂಜಲಿಗಳು.  
ಒಂದು ನಿಮಿಷದ ಮೌನ ಆಚರಣೆಯ  ನಂತರ ಶ್ರೀ ಪಾ ಚಂದ್ರಶೇಖರ ಚಡಗರು ಅಗಲಿದ ರಮೇಶ್ ಗೋಟ ಅವರಿಗೆ ನುಡಿ ನಮನವನ್ನು ಸಲ್ಲಿಸಿದರು.  
ಬೇಂದ್ರೆ ಅಜ್ಜಾರ  ನುಡಿಯಂತೆ ಹುಸಿ ನಗುತ ಬಂದೇವ, ನಸು ನಗುತಾ ಬಾಳೋಣ, ತುಸು ನಗುತ ತೆರಳೋಣ, ಬಡ ನೂರು ವರುಷಾನ, ಹರುಷಾದಿ ಕಳೆಯೋಣ ಯಾಕಾರೆ ಕೆರಳೋಣ ಎಂಬ ಸಾಲುಗಳನ್ನು ನೆನೆಯುತ್ತಾ.
ಎಲ್ಲರಿಗೂ ತುಂಬೊಲವಿನ ಧನ್ಯವಾದಗಳು.
ಮಂಜುಳಾ ಭಾರ್ಗವಿ 
ಕಾರ್ಯದರ್ಶಿ 




Treasurer of the Vedike, Jayarama Somayaji presented the report of financial transaction of Shivarama Karantha Vedike, for the year 2025 - 26. audited by Sri Sharatchandra of Sharat & Company, which was approved by the Committe and in the General Body Meeting.

JAYARAMA SOMAYAJI

ಇದಾದ ನಂತರ ಕೋಶಾಧಿಕಾರಿಗಳಾದ ಜಯರಾಮ ಸೋಮಯಾಜಿ ಯವರು ತಮ್ಮ ಲೆಕ್ಕ ಪತ್ರದ ವರದಿಯ ವಿವರವನ್ನು ಸಭೆಯ ಮುಂದೆ ಇಟ್ಟರು. ಇದನ್ನು ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀಮತಿ ಸತ್ಯಭಾಮ ರoಗೇಗೌಡರು ಅನುಮೋದಿಸಿದರು. ನಂತರ, ಸಂಸ್ಥಾಪಕರಾದ ಚಡಗರು, ವೇದಿಕೆಯ ಬಗ್ಗೆ ಮುಂದಿನ ದಿನಗಳಲ್ಲಿ ನಡೆಯ ಬೇಕಿರುವ ಕಾರ್ಯಕ್ರಮಗಳ ಬಗ್ಗೆ ಮುನ್ನೆಚ್ಚರಿಕೆಯ ನುಡಿಗಳನ್ನು ಹೇಳುತ್ತಾ, ಉಪಾಧ್ಯಕ್ಷರಾದ ಶ್ರೀ ವೀರಶೇಖರ ಸ್ವಾಮಿಯವರ ವಂದನಾರ್ಪಣೆಯೊಂದಿಗೆ ಸಭೆಯು ಮುಂದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿತು.




After some discussion on the report, it was approved.

VEERASHEKHARA SWAMY

Sri Veerashekhara Swamy, Vice President, delivered Vote of thanks.

The meeting concluded for the next program special Upanyasa.


Posted 27/7/2026






















No comments:

Post a Comment