Wednesday, June 28, 2023

ಜೀವನದ ಕಹಿ ಸತ್ಯ

 29 ಜೂನ್ 2023 

ವಾಟ್ಸ್ ಅಪ್ ನಿಂದ 

ಜೀವನದ ಕಹಿ ಸತ್ಯಗಳು 



ಉದುಪಾಯಿತು ತುಂಡು ಬಟ್ಟೆ, ಎಲ್ಲಿಂದ ಬರಬೇಕು ಮಾನ ಮರ್ಯಾದೆ??

ರೊಟ್ತಿಯಾಯಿತು ಬ್ರೆಡ್.... ಎಲ್ಲಿಂದ ಬರಬೇಕು ತಾಕತ್ತು??

ಹೂವಾಯಿತು ಪ್ಲಾಸ್ಟಿಕ್.... ಎಲ್ಲಿಂದ  ಬರಬೇಕು ಸುಗಂಧ...??

ಮುಖದ ಮೇಲಾಯಿತು ಮೇಕಪ್ ......ಎಲ್ಲಿಂದ ಬರಬೇಕು ಸೌಂದರ್ಯ..??

ಶಿಕ್ಷಣವಾಯಿತು ಟ್ಯೂಶನ್..... ಎಲ್ಲಿಂದ ಬರಬೇಕು ವಿದ್ಯೆ...??

ಭೋಜನವಾಯಿತು ಹೋಟೆಲ್..... ಎಲ್ಲಿಂದ ಬರಬೇಕು ಆರೋಗ್ಯ...??

ಮನರಂಜನೆಯಾಯಿತು ಟಿವಿ, ಮೊಬೈಲ್..... ಎಲ್ಲಿಂದ ಬರಬೇಕು ಸಂಸ್ಕಾರ...??

ಮನುಷ್ಯನಾಗಿದ್ದಾನೆ ಕಾಸಿನ ಆಸೆ ಬುರುಕ..... ಎಲ್ಲಿಂದ ಬರಬೇಕು ಅನುಕಂಪ??

ವವಹಾರಗಲಾಗಿದೆ ಹೈ ಫೈ... ಇನ್ನೆಲ್ಲಿಂದ ಬರಬೇಕು ನ್ಯಾಯ ನೀತಿ ಧರ್ಮ??

ಭಕ್ತಿಯಾದುವವನು ಆಗಿದ್ದಾನೆ ಸ್ವಾರ್ಥಿ.... ಇನ್ನೆಲ್ಲಿಂದ ಬರಬೇಕು ಭಗವಂತ??

ಸಂಭಾದಿಗಳು ಇದ್ದರೆ ವಾಟ್ಸ್ ನಲ್ಲಿ .... ಇನ್ನೆಲ್ಲಿಂದ ಬರಬೇಕು ಪರಸ್ಪರ ಭೇಟಿ, ಪ್ರೀತಿ, ವಿಶ್ವಾಸ ??

ಪರಿಸ್ತಿತಿಗಳು, ಕಾಲಗಳು ಬದಲಾಗುತ್ತಿರುತ್ತವೆ....ಯಾರನ್ನು ಅಪಮಾನ ಮಾಡಬೇಡ....

ಹಕ್ಕಿಯು ಇರುವೆಯನ್ನು ತಿನ್ನುತ್ತದೆ.... ಆದರೆ ಸತ್ತ ಮೇಲೆ ಹಕ್ಕಿಯನ್ನು ಇರುವೆ ತಿನ್ನುತ್ತದೆ....

ಒಂದು ಮರದಿಂದ ಸಾವಿರಾರು ಬೆಂಕಿ ಕಡ್ಡಿಗಳನ್ನು ತಯಾರಿಸಬಹುದು....ಆದರೆ ಒಂದು ಬೆಂಕಿ ಕಡ್ಡಿ ಸಾವಿರಾರು ಮರಗಳನ್ನು ಸುತ್ತು ಭಸ್ಮ ಮಾಡಬಹುದು....

ಒಂದೇ ಒಂದು ಬಾರಿ  ಮಂದಿರಕ್ಕೆ ಹೋದ ಕಲ್ಲು ದೇವರಾಗಿ ಬಿಡುತ್ತದೆ.... ಆದರೆ ಅನೇಕ ಬಾರಿ ಹೋದರು ಮನುಷ್ಯ ಮಾತ್ರ ದೇವರ ಹತ್ತಿರ ಹೋಗಲು ಸಾಧ್ಯವಿಲ್ಲ....

ಉಪವಾಸದಿಂದ ನಮ್ಮ ಆಚಾರ ವಿಚಾರಗಳು ಬದಲಾಗಬೇಕು....ಲೋಕ ಕಲ್ಯಾಣಕ್ಕಾಗಿ ನಾವು ಬದುಜಬೇಕು,,

ಸಾವು ಖಚಿತ... ಆದರೆ ಸಾವು ಬಂದಾಗ ಯಾರಿಗೂ ಸಾಯ ಬೇಕಂತ ಅನಿಸುವುದಿಲ್ಲ.....

ಊಟ ಎಲ್ಲರಿಗೂ ಬೇಕು....  ಆದರೆ ಯಾರೂ ವ್ಯವಸಾಯ ಮಾಡ ಬೇಕೆನ್ನುವುದಿಲ್ಲ ....

ನೀರು ಎಲ್ಲರಿಗೂ ಬೇಕು .... ಆದರೆ ಅರಣ್ಯಗಳನ್ನು ರಕ್ಷಿಸ ಬೇಕೆಂದು ಯಾರೂ ಪ್ರಯತ್ನಿಸುವುದಿಲ್ಲ...

ನೆರಳು ಎಲ್ಲರಿಗೂ ಬೇಕು..... ಆದರೆ ಮರಗಳನ್ನು ರಕ್ಷಿಸ ಬೇಕೆಂಬ ಹಂಬಲ ಯಾರಿಗೂ ಇಲ್ಲ....

ಆಸ್ತಿಯಲ್ಲಿ ಪಾಲು ಎಲ್ಲರಿಗೂ ಬೇಕು.... ಆದರೆ ಅ ಅಸ್ತಿಯನ್ನು ಸಂಭಾಳಿಸ ಬೇಕೆಂಬ ಛಲ ಯಾರಿಗೂ ಇಲ್ಲ...

ಅಪ್ಪ ಅಮ್ಮ ಕೂಡಿಟ್ಟ ಹಣ ಮಕ್ಕಳಿಗೆ ಬೇಕು... ಆದರೆ ವ್ರದ್ಯಾಪದಲ್ಲಿ ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ಮಾತ್ರ ಬೇಡ....

ನಮಗೆ ಕಸ್ತ ಬಂದಾಗ ಸಹಾಯ ಮಾಡುವವರು ಬೇಕು.... ಆದರೆ ಬೇರೆಯವರ ಕಷ್ಟಕ್ಕೆ ಹೆಗಲು ಕೊಡುವ ಒಳ್ಳೆಯ ಮನಸ್ಸು ಮಾತ್ರ ಬೇಡ....

ಹೆಂಡತಿ ಎಲ್ಲರಿಗೂ ಬೇಕು.. ಆದರೆ ಹೆಣ್ಣು ಮಕ್ಕಳು ಯಾರಿಗೂ ಬೇಡ....

ಈ ಸಂದೇಶವನ್ನು ಓದಿ ಕೇಳಿ, ವಾವ್, ವಾವ್, ಅನ್ನುವವರು ಇರುತ್ತಾರೆಯೇ ಹೊರಟು ಓದಿ ಬೇರೆಯವರಿಗೆ ಕಳಿಸಿ  ಅರಿವು ಮೂಡಿಸುವ ಪ್ರಯತ್ನ ಯಾರೂ ಮಾಡುವುದಿಲ್ಲ....


Posted 29/6/2023 




No comments:

Post a Comment