Sunday, June 18, 2023

JUNE PROGRAM - BENDRE SMARANE

 Sunday, 18th June 2023

Vinayaka Temple, Panchajanya Hall, R. T. Nagara, Bengaluru.




ಶಿವರಾಮ ಕಾರಂತ ವೇದಿಕೆಯ ಜೂನ್ ತಿಂಗಳ ಕಾರ್ಯಕ್ರಮವು, "ಸ್ವಾತಂತ್ರ ಉದ್ದೀಪಕ - ಬೇಂದ್ರೆ ಕಾವ್ಯ " ಬಗ್ಗೆ ಡಾ ಜಿ.ಕ್ರಷ್ಣಪ್ಪ ಅವರಿಂದ ಅರ್ಥಪೂರ್ಣವಾದ ಉಪನ್ಯಾಸದೊಂದಿಗೆ ಸಂಪನ್ನ ಗೊಂಡಿತು.



ದೀಪಾ ಫಡ್ಕೆ 

ಪ್ರಾರಂಭದಲ್ಲಿ ಪ್ರಾರ್ಥನೆಯಾದ ನಂತರ  ವೇದಿಕೆಯ ಅಧ್ಯಕ್ಷೆ ದೀಪಾ ಫಡ್ಕೆ ಅವರಿಂದ ಪ್ರಸ್ತಾವನೆ ಹಾಗೂ ಸ್ವಾಗತ ಭಾಷಣ ನಡೆಯಿತು.

ಡಾ. ಜಿ ಕ್ರಷ್ಣಪ್ಪ 



ಡಾ ಕ್ರಷ್ಣಪ್ಪ ಅವರು ತಮ್ಮ ಉಪನ್ಯಾಸದಲ್ಲಿ ಬೇಂದ್ರೆ ಅವರ ಬಾಲ್ಯ, ಸ್ವಾತಂತ್ರ ಚಳುವಳಿಯಲ್ಲಿ ಅವರ ಪಾತ್ರ, ಅವರ ಕವಿ ಹ್ರದಯ, ಜೀವನದಲ್ಲಿ ಸರಳತೆ, ಬ್ರಿಟಿಷ್ ಸರಕಾರದಿಂದ ತಹಸಿಲ್ದಾರಾಗಿ ನೇಮಕ ಗೊಂಡರೂ ಕೆಲಸದ ನಿರಾಕರಣೆ, ಪತ್ರಿಕೆಯೊಂದರಲ್ಲಿ ಕೆಲಸ.... ಇತ್ಯಾದಿ ವಿಚಾರಗಳ ಬಗ್ಗೆ ಒಂದು ಗಂಟೆಯ ಕಾಲ ಮಾತನಾಡಿದರು.


ಕಾರ್ಯಕ್ರಮದ ನಿರೂಪಣೆ, ಅತಿಥಿಗಳ ಪರಿಚಯವನ್ನು ವೇದಿಕೆಯ ಕಾರ್ಯದರ್ಶಿ ಶಶಿಕಲಾ ಅವರು ಅಚ್ಚುಕಟ್ಟಾಗಿ ನೆರವೇರಿಸಿದರು.
ಶಶಿಕಲಾ 



ಶ್ರೀಮತಿ ಉಮಾ ದೇವಿಯವರು ಧನ್ಯವಾದ ಸಮರ್ಪಣೆ ಮಾಡುತ್ತಾ, ಬೇಂದ್ರೆಯವರ ಬಗ್ಗೆ ಇನ್ನೂ ಕೆಲವು ವಿಚಾರಗಳನ್ನು ತಿಳಿಸಿದರು.
ಉಮಾ ದೇವಿ 

ಬರೆದಿರುವುದು 19 ಜೂನ್ 2023 

No comments:

Post a Comment