Saturday, June 29, 2024

VENU KELAMANE - SHRADDHANJALI

 VENU KELAMANE - SHRADDHANJALI 


ವೇಣು ಕೆಳಮನೆಯ ಹಿರಿಯ ಮೊಮ್ಮಗ. ನಾನು ಮದುವೆಯಾಗಿ ಕೆಳಮನೆಗೆ ಬಂದಾಗ ಅವನಿಗೆ ಹತ್ತು ವರ್ಷದ ಪ್ರಾಯ. ಬಹಳ ಮುದ್ದಾಗಿದ್ದ ಹುಡುಗ. ಮಗುವಾಗಿದ್ದಾಗಂತೂ ಅವನು ಅತ್ಯಂತ ಸುಂದರವಾಗಿದ್ದ; ನಂತರವೂ ಕೂಡಾ. ಚೆಂದದ ಮುಖ ಲಕ್ಷಣ ಹೊಂದಿದವನಾಗಿದ್ದ.

ಮಲೆನಾಡಿನ ಮನೆಗಳ ಅತೀ ಮುದ್ದಿನ ವಾತಾವರಣದ ಅರಿವಿರದಿದ್ದ ನನಗೆ, ಅದರಲ್ಲೂ ಶಿಕ್ಷಕ ವೃತ್ತಿಯಲ್ಲಿದ್ದು ಮಕ್ಕಳನ್ನು ನೋಡುವ ದೃಷ್ಟಿಕೋನವೇ ಬೇರೆ ಇದ್ದ ನನಗೆ, ಮನೆಯವರ ಅತಿ ಮುದ್ದಿನಲ್ಲಿ ಮುಳುಗೇಳುತ್ತಿದ್ದ ನಮ್ಮ ಮನೆಯ ಮಕ್ಕಳನ್ನು ನೋಡಿದಾಗ ಆಶ್ಚರ್ಯವಾಗುತ್ತಿತ್ತು. ಅದೂ ಶಾಲೆಗೆ ಹೋಗಲು ಹಿಂದುಮುಂದು ನೋಡುವ ಮಕ್ಕಳನ್ನು ಕಂಡಾಗ ನನ್ನೊಳಗಿನ ‘ಶಿಕ್ಷಕಿ’ ಜಾಗೃತಳಾಗುತ್ತಿದ್ದಳು. ಇಷ್ಟೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ ಆಗ ಹತ್ತು ವರ್ಷದವನಾಗಿದ್ದ ವೇಣು ಶಾಲೆಗೆ ಹೋಗಲು ಕೇಳುತ್ತಲೇ ಇರಲಿಲ್ಲ. ನಾನು ರಜೆಯಲ್ಲಿ ಮನೆಯಲ್ಲಿ ಇದ್ದಾಗಲೆಲ್ಲಾ ಅವನಿಗೆ ಹೆದರಿಸಿ ಅವನು ಶಾಲೆಗೆ ಹೋಗುವಂತೆ ಮಾಡುತ್ತಿದ್ದೆ. ಅವನಿಗೆ ನಾನು ‘ಚಿಕ್ಕಮ್ಮ’ನಾಗಿ ಇದ್ದದ್ದಕ್ಕಿಂತ ಶಾಲೆಗೆ ಹೋಗುವಂತೆ ಹೆದರಿಸುವ ಶಿಕ್ಷಕಿಯಾಗಿಯೇ ಇದ್ದೆನೇನೊ ಎಂದು ಈಗ ಅನಿಸುತ್ತದೆ!

ಚಿಕ್ಕಂದಿನಲ್ಲಿಯೇ ಯಕ್ಷಗಾನದ ಗುಂಗು ಹಿಡಿಸಿಕೊಂಡಿದ್ದ ವೇಣು ಅದ್ಭುತ ಕಂಠವನ್ನು ಹೊಂದಿದ ಭಾಗವತನಾಗಿ ಬೆಳೆದಿದ್ದು ನಂತರದ ಕಥೆ. ಈಗ್ಗೆ ಎರಡು ವರ್ಷಗಳ ಹಿಂದೆ ಅಪರೂಪಕ್ಕೆ ನಮ್ಮ ಮನೆಗೆ ಬಂದಿದ್ದ ವೇಣು ಸುಮಾರು ಒಂದು ಗಂಟೆಯ ಕಾಲ ಕಾಳಿಂಗ ನಾವಡರ ಬಗ್ಗೆ, ನನ್ನ ಅಣ್ಣನಾದ ಶ್ರೀಕಾಂತನ ಸಂಗೀತ ಜ್ಞಾನದ ಬಗ್ಗೆ ಹಾಗೂ ಪ್ರಚಲಿತದಲ್ಲಿದ್ದ ಕೆಲವರ ಭಾಗವತಿಕೆಯ ಬಗ್ಗೆ ಮಾತನಾಡಿದ್ದ; ಹಾಡಿದ್ದ. ಹಲವು ರಾಗಗಳಲ್ಲಿ ಕೆಲವು ಪದಗಳನ್ನು ಹಾಡಿ ಅವುಗಳ ಭಾವ ವ್ಯತ್ಯಾಸವನ್ನು ತಿಳಿಸಿದ್ದ. ಯಕ್ಷಗಾನ ತನ್ನ ಪರಿಶುದ್ಧತೆಯನ್ನು ಕಳೆದುಕೊಂಡು ಕಲಬೆರಕೆಯ ವಸ್ತುವಾಗುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ. ಪ್ರಾಯಶಃ ನನ್ನ ಮೂವತ್ತಮೂರು ವರುಷಗಳ ಒಡನಾಟದಲ್ಲಿ ಅವನು ನನ್ನೊಡನೆ ಅಷ್ಟೊಂದು ಮಾತನಾಡಿದ್ದು ಅದೇ ಮೊದಲನೆಯ ಸಲವಾಗಿತ್ತು ಹಾಗೂ ಕೊನೆಯ ಸಲವಾಗಿತ್ತು ಕೂಡಾ. ಅವನ ಮುಕ್ತ ಕಂಠದ ಕೆಲವು ಹಾಡುಗಳನ್ನು ಅಂದು ಹತ್ತಿರದಿಂದ ಕೇಳಿದಾಗ ಅವನ ಪ್ರತಿಭೆಯ ಬಗ್ಗೆ ಹೆಮ್ಮೆ ಎನಿಸಿ ಅವನ ಹಾಡುಗಳನ್ನು ಆಸ್ವಾದಿಸಿದ್ದೆ.

ಮೊನ್ನೆ ಜೂನ್ 25ರಂದು ರಸ್ತೆ ಅಪಘಾತದಲ್ಲಿ ಅವನು ಮರಣವನ್ನಪ್ಪಿದಾಗ ನಮಗೆಲ್ಲಾ ಆಘಾತವಾದದ್ದು ನಿಜ! ಯಕ್ಷಗಾನ ರಂಗ ಹೇಗೆ ಒಬ್ಬ ಉತ್ತಮ ಕಲಾವಿದನನ್ನು ಕಳೆದುಕೊಂಡಿತೋ ಹಾಗೆಯೇ ನಾವೆಲ್ಲಾ ಹಿರಿಯರ ಸಮ್ಮುಖದಲ್ಲಿ ನಮ್ಮ ಮನೆ ತನ್ನ ಹಿರಿಯ ಮೊಮ್ಮಗನನ್ನು ಕಳೆದುಕೊಂಡಿತು. ಇನ್ನೂ ನಲವತ್ಮೂರು ವರ್ಷ ಸಾಯುವ ವಯಸ್ಸಲ್ಲ. ಆದರೆ ವಿಧಿ ಬರಹ! ವೇಣುವಿನ ಆತ್ಮಕ್ಕೆ ಸದ್ಗತಿ ಕೋರುತ್ತಾ ಈ ಬರಹವನ್ನು ಅವನಿಗೆ ಅರ್ಪಿಸುತ್ತಿದ್ದೇನೆ......... Shobha Somayaji

Shraddhanjali From Vinayaka Kelamane......

ನನ್ನಣ್ಣ-

ನಾನು ಒಂದನೇ ತರಗತಿಯಲ್ಲಿದ್ದಾಗ ನಾಲ್ಕನೇ ತರಗತಿಯ ಹುಡುಗ ನನ್ನನ್ನ ದೂಡಿ ಕೆಡಗಿದಾಗ ಆಕಾಶ ಭೂಮಿ ಒಂದು ಮಾಡಿ ಆತನ ಗ್ರಹಚಾರ ಬಿಡಿಸಿದ ನನ್ನಣ್ಣ
ಮಲೆನಾಡಿನ ಮಳೆ,ಆಲೆಮನೆ, ಹಬ್ಬಹಾಡುವುದು ಎಲ್ಲವನ್ನೂ ಅನುಭವಿಸಲು ಕಲಿಸಿದ ನನ್ನಣ್ಣ
ಮೇಲು-ಕೀಳು, ಬ್ರಾಹ್ಮಣ-ಶೂದ್ರ, ಜಾಣ- ದಡ್ಡ ಎಲ್ಲರನ್ನೂ ಸಮಾನವಾಗಿ ನೋಡಲು ಕಲಿಸಿದ ನನ್ನಣ್ಣ
*ಯಕ್ಷಗಾನ ಭಾಗವತಿಕೆಯಲ್ಲಿ ಯಾವ ವಿಭಾಗದಲ್ಲೂ ರಾಜಿಯಾಗದ ನನ್ನಣ್ಣ*
*ಹೊಸ ಪ್ರಸಂಗ, ಯಕ್ಷಗಾನಕ್ಕೆ ಒಪ್ಪದ ರಾಗಗಳನ್ನು ಯಾವತ್ತೂ ಒಪ್ಪದ ನನ್ನಣ್ಣ*
ಯಕ್ಷರಂಗಕ್ಕೆ ಬಂದು ಇಪ್ಪತ್ತೆರಡು ವರ್ಷಗಳಾದರೂ ಪ್ರಚಾರ, ಪ್ರಚಾರಕ್ಕಾಗಿ ಯಾವುದೇ ಗಿಮಿಕ್ ಬಳಸದ ನನ್ನಣ್ಣ
ಮಕ್ಕಳಲ್ಲಿ ಮಕ್ಕಳಂತೆ ಬದುಕಿದ ನನ್ನಣ್ಣ,
ಭಾಗವತಿಕೆಯ ಸಂಗೀತಗಾರನಿಂದ ಮುಖ್ಯ ಭಾಗವತನಾಗುವ ಹಂತದವರೆಗೂ ಕ್ರಮವಾಗಿ ಹಂತ ಹಂತವಾಗಿ ಬೆಳದ ನನ್ನಣ್ಣ,
ನನ್ನ ಮಕ್ಕಳಲ್ಲೂ ನನ್ನನ್ನೇ ಕಾಣುತ್ತಿದ್ದ ನನ್ನಣ್ಣ
ನಿನಗಿದೋ ನನ್ನ ಅಶ್ರು ತರ್ಪಣ

Medini Kelamane wrote.......


ನನಗೆ ಯಕ್ಷಗಾನ ಅಂದರೆ ಮೊದಲಿನಿಂದಲೂ ಅಷ್ಟು ಇಷ್ಟ ಅಲ್ಲ. ಯಕ್ಷಗಾನದ ಕುಟುಂಬವಾದರೂ ಸರಿಯಾಗಿ ಒಂದೂ ಪ್ರಸಂಗ ಪೂರ್ತಿ ನೋಡಿಲ್ಲ. ಪದ್ಯ, ಮದ್ದಳೆ ಶುರು ಆಯಿತೆಂದರೆ ಅದನ್ನು ಆಸ್ವಾದಿಸೋಕೆ ಆಗಲ್ಲ. ಅದಕ್ಕೇ ವೇಣು ಅಣ್ಣ ನ ಜೊತೆ ಒಡನಾಟ ಕಡಿಮೆ. ಯಾಕೆಂದರೆ ಅವನು ಯಾವಾಗಲೂ ಮಾತಾಡುತ್ತಿದ್ದುದೇ ಯಕ್ಷಗಾನದ ಬಗ್ಗೆ.

ಆದರೆ ಒಂದು ದಿನ ಯಾವತ್ತೋ ಮನೆಯಲ್ಲಿ ಹಾಡುತ್ತಿದ್ದ. ಹತ್ತಿರದಿಂದ ನೋಡಿದ್ದೆ. ಬಿಳಿ ಪಂಚೆ ಉಟ್ಟಿದ್ದ. ನೇರವಾಗಿ ಸೆಟೆದು ಕೂತಿದ್ದ. ಒಂದು ಚೂರೂ ಬೊಜ್ಜು ಇಲ್ಲದ ದೇಹ ಬಾಣದಂತೆ ಕಾಣುತಿತ್ತು. ಹುಬ್ಬು ಗಂಟಿಕ್ಕಿ ಎದುರಿಗೆ ದೃಷ್ಟಿ ನೆಟ್ಟಿದ್ದ. ಗಂಟಲಿನ ನರಗಳು ಎದ್ದಿದ್ದವು. ಅವತ್ತು ಅವನ ಮೇಲೆ ಏನೋ ವಿಚಿತ್ರವಾದ ಅಭಿಮಾನ ಉಕ್ಕಿ ಬಂದಿತ್ತು. ಆಮೇಲೆ ಅವನು ಪದ್ಯ ಹೇಳುವಾಗೆಲ್ಲಾ ಅದು ನನ್ನನ್ನು ಸೆಳೆಯುತ್ತಿತ್ತು. ಕಂಚಿನ ಕಂಠ ಹೇಗಿರುತ್ತದೆ ಎಂದು ಅವನಿಂದಲೇ ತಿಳಿದದ್ದು.
ನಮ್ಮ ಕುಟುಂಬದಲ್ಲಿ ಯಾರ ಜೊತೆಯಲ್ಲೂ ಅವನು ಅಷ್ಟು ಸಲಿಗೆಯಿಂದ ಮಾತನಾಡದಿದ್ದರೂ ನಮ್ಮೆಲ್ಲರಿಗಿಂತ ಜಾಸ್ತಿ ಅವನಿಗೆ ಎಲ್ಲರ ಜೊತೆ connection ಗಟ್ಟಿ ಇದೆ ಅನಿಸುತಿತ್ತು. ಇನ್ನೊಬ್ಬರಿಂದ expect ಮಾಡುವ ಮೆಚ್ಚುಗೆಯ validation ಮೀರಿ ನಿಂತಿದ್ದ. ಸ್ವಾಭಿಮಾನಿ. ಜಗಳಗಂಟ. ಇನ್ನೂ ಏನೇನೋ. ಅವನ character ಇಟ್ಟುಕೊಂಡು ಒಂದು ಸಿನಿಮಾ ಮಾಡಬೇಕು ಅಂದುಕೊಳ್ಳುತ್ತಿದ್ದೆ. ನಾವು 9 ಜನ ಅಣ್ಣ ತಮ್ಮ ತಂಗಿಯರಲ್ಲಿ ಮೊದಲನೆಯವ. ಪ್ರೀತಿ, ಬೈಗುಳ ಎರಡನ್ನೂ ಸಮನಾಗಿ ಪಡೆದವ. ಅವ ಇನ್ನಿಲ್ಲ.
ನಾನು ದೆಹಲಿಯಲ್ಲಿದ್ದಾಗ, ಯಕ್ಷಗಾನ ನಿಮಿತ್ತ ಬಂದವ ಅಲ್ಲಿ ನನ್ನ ಮನೆಗೆ ಬಂದಿದ್ದ. ಬೀಟ್ರೂಟ್ ಸಾಂಬಾರ್ ಮಾಡಿದ್ದೆ. ಚೆನ್ನಾಗಿ ಮಾಡಿದ್ದೆ ಅಂತ ಮನೆಗೆ ಬಂದು ಹೇಳಿದ್ದನಂತೆ.

Posted 30/6/2024

Tuesday, June 25, 2024

ANOTHER VISIT TO GHATI SUBRAMANYA

 Tuesday, 25th June 2024

Ghati Subramanya, Near DoddaBallapura.

Subramanya Kordale, close family friend from Mangaluru was on a visit to Bengaluru.



We planned for a visit to Ghati Subramanya, a distance of about 60 km from Bengaluru.



Sri Subamanya Ghati, also written Ghati Subramanya, is a village in Doddaballapura Taluk in Bangalore Rural District of Karnataka State, India. It belongs to Bangalore Division. It is located 17 kilometres from Doddaballapura and 60 kilometres from the State capital Bangalore.

Lord Subramanya's form is that of a seven-hooded sn




ake and it is believed that this is the region where he vanquished Ghatikasura, the demon. The Ghati Subramanya temple is one of the most major spots for snake worship in Southern India.



We started at 9 am in the morning and reached before 11am, huge crowd of cars for parking, somehow managed to find some space near the temple.

Lots of people lined up for darshan, joined the queue, someone at the temple showed sympathy for me let me go to visit strainght and I had quick darshan and came out.


Mom Feeding Goats

Mom and subramanya took about 2 hours for Darshan, and came out.



Had lunch on the way at Udupi Athitya on the way and reached home by 3.30 pm.


Posted 26/6/2024

Monday, June 24, 2024

ಎಲ್.ಎಸ್. ಶೇಷಗಿರಿ ರಾವ್ - ಜನ್ಮ ಶತಮಾನೋತ್ಸವ

 ಭಾನುವಾರ, 23 ಜೂನ್ 2024 

ವಿನಾಯಕ ದೇವಸ್ಥಾನ ಸಭಾಂಗಣ, ಅರ. ಟಿ. ನಗರ, ಬೆಂಗಳೂರು.

ಎಲ್.ಎಸ್. ಶೇಷಗಿರಿ ರಾವ್ - ಜನ್ಮ ಶತಮಾನೋತ್ಸವ 

ಶಿವರಾಮ ಕಾರಂತ ವೇದಿಕೆಯ ಜೂನ್ ತಿಂಗಳ ಕಾರ್ಯಕ್ರಮದಲ್ಲಿ ಹಮ್ಮಿಕೊಂಡ "ಎಲ್.ಎಸ್. ಶೇಷಗಿರಿ ರಾವ್ ಅವರ ಜನ್ಮ ಶತಮಾನೋತ್ಸವ " ಸಂಪನ್ನ ಗೊಂಡಿತು,




ಕುಮಾರಿ ಪ್ರಣತಿ ಯಿಂದ ಪ್ರಾರ್ಥನೆಯಾದ  ಬಳಿಕೆ  ವೇದಿಕೆಯ ಅಧ್ಯಕ್ಷೆ ಡಾ. ದೀಪಾ ಫದ್ಕೆಯವರು ಸ್ವಾಗತ ಭಾಷಣ ಮಾಡಿ ಅತಿಥಿ ಗಳನ್ನೂ ಹಾಗೂ ಸಭಿಕರನ್ನು ಸ್ವಾಗತಿಸಿದರು.




ವೇದಿಕೆಯ ಗೌರವಾಧ್ಯಕ್ಷ ಎಸ್.ಅರ್. ವಿಜಯಶಂಕರ್ ಪ್ರಾಸ್ತಾವಿಕ ನುಡಿಗಳನ್ನು ಆದಿ ಎಲ್.ಎಸ್ ಶೇಷಗಿರಿ ರಾವ್ ಅವರ ಬದುಕು ಮತ್ತು ಬರಹ ವನ್ನು ವಿಸ್ತಾರವಾಗಿ ಪರಿಚಯಿಸಿದರು.



ಕನ್ನಡ ಪ್ರಾಧಿಕಾರದ ನೂತನ ಅಧ್ಯಕ್ಷರಾದ ಡಾ ಪುರುಷೋತ್ತಮ ಬಿಳಿಮಲೆ ಅವರನ್ನು ಶಾಲು ಹಾರದೊಂದಿಗೆ ಸನ್ಮಾನಿಸಲಾಯಿತು.



ಇನ್ನೋರ್ವ ಅತಿಥಿ ಡಾ ಟಿ. ಎನ್. ವಾಸುದೇವ ಮೂರ್ತಿ , ಸಹ ಪ್ರಾಧ್ಯಾಪಕರು, ಆದಿ ಚುಂಚನಗಿರಿ ವಿಶ್ವ ವಿದ್ಯಾಲಯ ತಮ್ಮ ಉಪನ್ಯಾಸದಲ್ಲಿ ಎಲ್.ಎಸ್. ಶೇಷಗಿರಿ ರಾಯರ ಕನ್ನಡಕ್ಕೆ ಕೊಡುಗೆಯನ್ನು ಪ್ರಶಂಸಿದರು.


ಡಾ. ಪುರುಷೋತ್ತಮ ಬಿಳಿಮಲೆ ಅವರು ತಮ್ಮ ಭಾಷಣದಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ದಿಂದ ಮುಂದೆ ಆಗಬೇಕಾದ ಕೆಲಸಗಳನ್ನು ತಿಳಿಸಿದರು.

ಬಿಳಿಮಲೆ ಅವರಿಗೆ ಒಂದು ಕಿವಿ ಮಾತು.



ಎರಡು ದಿನಗಳ ಹಿಂದೆ ನಿಧನರಾದ ಹಿರಿಯ ಸಾಹಿತಿ, ಲೇಕಖಿ ಡಾ ಕಮಲಾ ಹಂಪನಾ ಅವರಿಗೆ ಒಂದು ನಿಮಿಷದ ಮೌನದೊಂದಿಗೆ ಶ್ರದ್ಧಾಂಜಲಿಯನ್ನು ಸಮರ್ಪಿಸಲಾಯಿತು.

ಕಮಲಾ ಹಂಪನಾ 

ಶ್ರೀಮತಿ ಛಾಯ ಉಪಾಧ್ಯ ಕಾರ್ಯಕ್ರಮ ನಿರೂಪಣೆ, ಧನ್ಯವಾದ ಸಮರ್ಪಣೆ ಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಪ್ರಜಾವಾಣಿ 24/6/2024

ಕನ್ನಡ ಪ್ರಭ 24/6/2024

ಶ್ರೀ ಸುಧೀಂದ್ರ ಅವರು ಇಂದಿನ ಕಾರ್ಯಕ್ರಮಕ್ಕೆ ಲಘು ಉಪಹಾರ, ಚಾ ವನ್ನು ಪ್ರಾಯೋಜಿಸಿದ್ದರು.

ಬರೆದಿರುವುದು (Posted)  25/6/2024


Sunday, June 23, 2024

BIRTHDAY SAMBHRAMA APPA@7.6

 Saturday, 22nd June 2024

Birthimane, Bengaluru.

That was a not a big celebrations.




Appa was completing 76 years and 

Rishi, Kavitha and Atharv were there,


Ravi, Urvi were there amd of course amma.

We all went to a beautiful place nearby Hilton Hotel, spent some time in cool breeze.





Grand children Atharv and Urvi running and playing happily around.


Had some nice food at Bombay Curry Home (Restaurant).



Returned home after 9 pm, cut Birthday Cake with HAPPY BIRTHDAY TO APPA.


Always cherish the sweet memory.

Shubha, Lahari, Raghu and Vidya were missing.


Posted 24/6/2024





Saturday, June 22, 2024

ಶಿವಳ್ಳಿ ಸ್ಮಾರ್ತ ಭವನ. ಬೆಂಗಳೂರು.

 Friday, 21.6.2024

ಶಿವಳ್ಳಿ ಸ್ಮಾರ್ತ ಭವನ. ಬೆಂಗಳೂರು.

ಪ್ರೀತಿಯ ಶಿವಳ್ಳಿ ಸ್ಮಾರ್ತ ಬಂಧುಗಳೇ ,


ನಾಳೆ ಶುಕ್ರವಾರ ( ದಿನಾಂಕ 21-06-24 ) ನಮ್ಮ ಭವನದಲ್ಲಿರುವ ಶ್ರೀ ಸಿದ್ದಿವಿನಾಯಕ ದೇವಾಲಯದ ವರ್ದoತಿ ಕಾರ್ಯಕ್ರಮ ನಡೆಯಲಿದೆ .

 


ಬೆಳಿಗ್ಗೆ 08-30  ರಿಂದ. ಶ್ರೀಯುತ ವೇ || ಮೂ || ಕೇಶವ ಅಡಿಗಳು ಮತ್ತು ಶ್ರೀಯುತ ವೇ || ಮೂ || ಕೃಷ್ಣಮೂರ್ತಿ ಬಾಯರಿ ಯವರ ನೇತ್ರತ್ವದಲ್ಲಿ  ಗಣಹೋಮ, ಕಲಾ ಹೋಮ ಹಾಗೂ ಕುಂಬಾಭಿಷೇಕ ವಿರುತ್ತದೆ .



ಈ ದೇವತಾ ಕಾರ್ಯಕ್ರಮಕ್ಕೆ ತಾವೆಲ್ಲರೂ ತಮ್ಮ ಬಂಧುಮಿತ್ರರೊಡನೆ ಆಗಮಿಸಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀ ಸಿದ್ದಿವಿನಾಯಕ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ .


ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು .

ಶಿವಳ್ಳಿ ಸ್ಮಾರ್ತ ಬ್ರಾಹ್ಮಣ ಮಹಾ ಪರಿಷತ್ (ರಿ )

ಇಂದು ನನ್ನ ಹುಟ್ಟಿದ ಹಬ್ಬ. 

ಶ್ರೀ ಸಿದ್ದಿ ವಿನಾಯಕ ದೇವಸ್ಥಾನದ ವರ್ಧಂತಿ ಉತ್ಸವದ ಪೂಜೆ, ಹೋಮ, ಮಂಗಳಾರತಿ ಹಾಗೂ ಊಟ ದಲ್ಲಿ ಪಾಲ್ಗೊಂಡದ್ದು ಸಂತಸವಾಯಿತು.


ಶಿವಳ್ಳಿ ಸ್ಮಾರ್ತ ಭವನ ಸುಮಾರು 25 ಕಿ.ಮೀ. ದೂರದ ಚಿಕ್ಕಬಸ್ತಿ ಎಂಬ ಜಾಗದಲ್ಲಿದೆ. ಸುಮಾರು ಒಂದು ಗಂಟೆಯ ಕಾರಿನಲ್ಲಿ ಪಯಣ.

ಊಟ ಮುಗಿಸಿ ನಾಲ್ಕು ಗಂಟೆಗೆ ವಾಪಸ್ಸು ಮನೆಗೆ.

Posted 23/6/2024

BIRTHDAY 2024 POSTS @ FACEBOOK

 21 June 2024

ಜಯರಾಮ ಸೋಮಯಾಜಿ


ಇನ್ನೊಮ್ಮೆ ಶ್ರೀ ತಿರು ಶ್ರೀಧರ್ ಅವರಿಂದ ಫೇಸ್ ಬುಕ್ ನಲ್ಲಿ  ಹಬ್ಬದ ಶುಭಾಶಯಗಳು ಮತ್ತು ಸ್ನೇಹಿತರುಗಳ ಪ್ರತಿಕ್ರಿಯೆಗಳು 

Happy birthday Jayarama Somayaji Sir 🌷🙏🌷

ಜಯರಾಮ ಸೋಮಯಾಜಿ - ನಳಿನಿ ಸೋಮಯಾಜಿ ದಂಪತಿಗಳು ನಮ್ಮ ನಡುವೆ ಇರುವ ವಿಶಾಲವ್ಯಾಪ್ತಿಯ ಸಾಹಿತ್ಯ, ಕಲೆ, ಶಿಕ್ಷಣ, ಪರಿಸರ ಮತ್ತು ಸಾಂಸ್ಕೃತಿಕ ಪ್ರೀತಿಗಳ ನೆಲೆಯಂತಿರುವವರು. ಈ ದಂಪತಿಗಳು ಭಾರತದಲ್ಲಷ್ಟೇ ಅಲ್ಲದೆ ಆಫ್ರಿಕಾದ ಹಲವು ದೇಶಗಳು ಮತ್ತು ಮಧ್ಯಪ್ರಾಚ್ಯದ ದುಬೈ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವುದರ ಜೊತೆಗೆ ಕನ್ನಡ ಸಾಂಸ್ಕೃತಿಕ ಪರಿಸರದ ವಿಸ್ತಾರಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಇಂದು ಪೂಜ್ಯ ಜಯರಾಮ ಸೋಮಯಾಜಿ ಅವರ ಜನ್ಮದಿನ.

ಜಯರಾಮ ಸೋಮಯಾಜಿ ಅವರು ಸಾಲಿಕೇರಿ ಬ್ರಹ್ಮಾವರದ ಹತ್ತಿರದ ಬಿರ್ತಿ ಎಂಬಲ್ಲಿ 1948ರ ಜೂನ್ 21ರಂದು ಜನಿಸಿದರು. ತಂದೆ ಅಲ್ಲಿಯ ಶ್ರೀ ದುರ್ಗಾಪರಮೇಶ್ವರಿ ವೀರಭದ್ರ ದೇವಸ್ಥಾನದ ಅರ್ಚಕರಾದ ವೆಂಕಟ್ರಮಣ ಸೋಮಯಾಜಿ. ತಾಯಿ ಕಾವೇರಿ. ಹಾರಾಡಿ ವಿದ್ಯಾಮಂದಿರ ಶಾಲೆಯಲ್ಲಿ ಜಯರಾಮ ಸೋಮಯಾಜಿ ಅವರ ವಿಧ್ಯಾಭ್ಯಾಸ ಆರನೇ ಕ್ಲಾಸಿನವರೆಗೆ ನಡೆದು ಏಳನೇ ಕ್ಲಾಸಿಗೆ ಬ್ರಹ್ಮಾವರದ ಎಸ್.ಎಮ್.ಎಸ್. ಹೈಸ್ಕೂಲಿಗೆ ಸೇರಿದರು. 1964ರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ, ಡಿಸ್ಟಿಂಕ್ಷನ್ನಿನಲ್ಲಿ ಉತ್ತೀರ್ಣರಾಗಿ ಉಡುಪಿಯಲ್ಲಿಯ ಎಮ್.ಜಿ.ಎಮ್. ಕಾಲೇಜಿಗೆ ಪಿಯುಸಿ. ವಿಜ್ಞಾನ ವಿಭಾಗಕ್ಕೆ ಸೇರಿದರು. ಆಗ ಕು.ಶಿ.ಹರಿದಾಸ ಭಟ್ಟರು ಕಾಲೇಜಿನ ಪ್ರಾಂಶುಪಾಲರಾಗಿದ್ದರು. 12ಕಿಲೋಮೀಟರ್ ಏರುತಗ್ಗುಗಳ ಸೈಕಲ್ ಪಯಣದಲ್ಲಿ ಓದು ಸಾಗಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. 1965ರಲ್ಲಿ ಗಣಿತ, ಭೌತಶಾಸ್ತ್ರ, ರಸಾಯನ ಶಾಸ್ತ್ರಗಳನ್ನಾಯ್ದು ಬಿ.ಎಸ್ಸಿ ಸೇರಿದರು. 1968 ಮಾರ್ಚ್ ತಿಂಗಳಲ್ಲಿ ಆರನೇ ರ್ಯಾಂಕ್ ಪಡೆದು ಬಿ.ಎಸ್ಸಿ ಪದವಿ ಗಳಿಸಿದರು. 1968-70 ಅವಧಿಯಲ್ಲಿ ಮೈಸೂರು ಮಾನಸ ಗಂಗೋತ್ರಿಯಲ್ಲಿ ಎಂ. ಎಸ್ಸಿ ಓದಿ ಮೂರನೇ ರ್ಯಾಂಕ್ ಸಾಧನೆ ಮಾಡಿದರು.

ಜಯರಾಮ ಸೋಮಯಾಜಿ ಅವರು ಸುರತ್ಕಲ್ ಇಂಜಿನಿಯರಿಂಗ್ ಕಾಲೇಜಿಗೆ ಎಮ್.ಟೆಕ್. ಓದಿಗೆ ಸೇರಿದರಾದರೂ ರುಚಿಸದೆ ಮೂರು ತಿಂಗಳಿಗೆ ಬಿಟ್ಟು, 1970 ರ ಅಕ್ಟೋಬರ ತಿಂಗಳಲ್ಲಿ ಮಣಿಪಾಲ ಇಂಜಿನಿಯರಿಂಗ್ ಕಾಲೇಜಿಗೆ ಭೌತಶಾಸ್ತ್ರದ ಉಪನ್ಯಾಸಕರಾಗಿ ಸೇರಿದರು. ಇದೇ ಸಮಯದಲ್ಲಿ ವಿದೇಶಕ್ಕೆ ಹೋಗಿ ಕೆಲಸ ಮಾಡುವ ಹಂಬಲ ಮೂಡಿತು. ಆಫ್ರಿಕಾದ ಸಿಯಾರ ಲಿಯೋನ್ ದೇಶದ ಫ್ರಿಟೌನ್ ಎಂಬಲ್ಲಿ ಅಧ್ಯಾಪನಕ್ಕೆ ಸೇರಿದರು. 1974ರಲ್ಲಿ ನೈಜಿರಿಯಾ ದೇಶದ ಗೊಂಬೆ ಎಂಬ ಊರಿನಿಂದ ಪ್ರಾರಂಭಗೊಂಡು, ಆಫ್ರಿಕ ಖಂಡದ ಸಣ್ಣ ದೇಶ ದಿ ಗ್ಯಾಂಬಿಯಾ, ನೈಜಿರಿಯಾದ ಗೊಂಗೊಲ ರಾಜ್ಯದ ರಾಜಧಾನಿ ಯೋಲ, ಗುಯುಕ್ ಎಂಬ ಗ್ರಾಮ ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿದರು. ಹೋದೆಡೆಯಲ್ಲೆಲ್ಲ ತಮ್ಮ ಜ್ಞಾನ ಸಂಪತ್ತನ್ನು ವಿದ್ಯಾರ್ಥಿಗಳೊಡನೆ ಹಂಚಿದ್ದಲ್ಲದೆ ಅಲ್ಲಿನ ಸ್ಥಳೀಯರು ಮತ್ತು ಭಾರತೀಯ ಸಮುದಾಯದೊಡನೆ ಆತ್ಮೀಯ ಬಾಂಧವ್ಯ ಹೊಂದಿದ್ದರು.

ಜಯರಾಮ ಸೋಮಯಾಜಿ ಅವರು 1986ರಲ್ಲಿ ದುಬೈಗೆ ಬಂದರು. ಅಲ್ಲಿನ ಜೆಮ್ಸ್ ಸಮೂಹದ ಪ್ರತಿಷ್ಟಿತ ಅವರ್ ಓನ್ ಇಂಗ್ಲಿಷ್ ಸಂಸ್ಥೆಯಲ್ಲಿ ಅಧ್ಯಾಪನ ಆರಂಭಿಸಿದರು. ಎರಡು ದಶಕಗಳಿಗೂ ಮೀರಿದ ಕಾಲ ದುಬೈನಲ್ಲಿದ್ದ ಸಂದರ್ಭದಲ್ಲಿ ಜಯರಾಮ ಸೋಮಯಾಜಿ - ನಳಿನಿ ಸೋಮಯಾಜಿ ದಂಪತಿಗಳು ದುಬೈ ಕರ್ನಾಟಕ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ದುಬೈ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದರು. ದುಬೈ ಕನ್ನಡ ಸಂಘವೆಂದರೆ ಅತ್ಯಂತ ಕ್ರಿಯಾಶೀಲ ಎಂಬ ಪ್ರಸಿದ್ಧಿ ಮೂಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕನ್ನಡದ ಸಂಘದ ಚಟುವಟಿಕೆಗಳೇ ಅಲ್ಲದೆ ಈ ದಂಪತಿಗಳು ಅನೇಕ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಯುನೈಟೆಡ್ ಅರಾಬ್ ಎಮಿರೇಟ್ಸ್ ದೇಶದಲ್ಲಿನ ಭಾರತೀಯ ಮನಗಳನ್ನು ಒಂದೆಡೆ ಕೂಡಿಸಿದ ಕೆಲಸ ಮಾಡುತ್ತಾ ಬಂದಿದ್ದರು.

ಎರಡು ದಶಕಗಳಿಗೂ ಹೆಚ್ಚು ಕಾಲದ ದುಬೈ ವಾಸದ ನಂತರ ಕನ್ನಡದ ಮಣ್ಣಿನಲ್ಲಿ ವಿಶ್ರಾಂತ ಜೀವನಕ್ಕೆ ಬಂದ ಜಯರಾಮ ಸೋಮಯಾಜಿ ಅವರು ತಮ್ಮ ಕುಟುಂಬದೊಡನೆ ವಿಜ್ಞಾನ ಶಿಕ್ಷಣ ಮತ್ತು ಸಾಂಸ್ಕೃತಿಕ ಆಸಕ್ತಿಗಳಲ್ಲಿ ನಿರಂತರ ಸಕ್ರಿಯರಾಗಿದ್ದಾರೆ. ಸೋಮಯಾಜೀಸ್ ಲರ್ನಿಂಗ್ ಸೆಂಟರ್ ನಡೆಸುತ್ತಿದ್ದಾರೆ. ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ಸೋಮಯಾಜಿ ದಂಪತಿಗಳು ಬ್ಲಾಗ್ ಬರವಣಿಗೆ, ಯೂ ಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಅಂತಹ ಮಾಧ್ಯಮಗಳಲ್ಲಿ ತಮ್ಮ ಅನೇಕ ಉತ್ತಮ ಅಭಿರುಚಿಗಳನ್ನು ತೆರೆದಿಡುತ್ತಾ ಎಲ್ಲರೊಂದಿಗೆ ಅನುಪಮ ಬಾಂಧವ್ಯ ಹೊಂದಿದ್ದು ನಮಗೆಲ್ಲ ಪ್ರೇರಣೆ ಆಗಿದ್ದಾರೆ.

ಪೂಜ್ಯ ಹಿರಿಯರಾದ ಜಯರಾಮ ಸೋಮಯಾಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಸಾರ್, ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. ನಮಸ್ಕಾರ.

(ನಮ್ಮ ಕನ್ನಡ ಸಂಪದ Kannada Sampada
ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ) 
See less
— with Nalini Somayaji and Jayarama Somayaji.
ಜಯರಾಮ ಸೋಮಯಾಜಿ 
ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ,
Nalini Somayaji ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 

ಅನಂತಾನಂತ ಧನ್ಯವಾದಗಳು ತಿರು ಶ್ರೀಧರ್ ಅವರೇ... ನಿಮ್ಮ ಶುಭ ಹಾರೈಕೆಗಳು ನಮಗೆ ಶ್ರೀ ರಕ್ಷೆ..    
Many many happy returns of the day Mr Somayaji
May God bless you abundantly
Nice to know about your great achievements and contribution .. Josephine Gome

Wish you a very happy birth day dear Sir... May you have a very healthy and happy long life. - Sreejaya Ravi

Sreejaya Ravi again.....
I was lucky enough to work under Mr. Somayaji, a thorough disciplinarian and a wonderful academician. I learnt a lot from Sir..He was very systematic and very well organised in all his work so he used to appreciate and value people with same qualities.He trusted my abilities and hence given a lot of academic responsibities to me for which
(I believe )I never disappointed him. Sir was more than a supervisor to me.. My mentor, My Guide...
A fatherly figure...not by age but by the love, care and guidance he has given to me all through my working under him. I will never forget him for the opportunities he gave me to grow professionally which helped me in achieving so much in my 22 years of service @OurOwn.. Many of my colleagues too have the same experience with Sir. We are still in touch with Sir though he left the school around 14 years back.
May God bless him with lot of happiness..Stay healthy always Sir


.ಶ್ರೀ Jayarama Somayaji ಅವರಿಗೆ ಅವರ ಹುಟ್ಟುಹಬ್ಬದ ಶುಭಾಶಯಗಳು. ಅವರ. ಮುಂದಿನ ದಿನಗಳು ಸಂತೋಷದಾಯಕವಾಗಿರಲಿ ಎಂದು ಹಾರೈಸುತ್ತೇನೆ.- ShashiDharan

ಶ್ರೀ ತಿರು ಶ್ರೀಧರ್ಸ ಸರ್ ಮನಃಪೂರ್ಣ ಧನ್ಯವಾದಗಳು.ನಿಮ್ಮಂತ ಸಜ್ಜನರ ಸಂಗವಿರಲು ನಾವು ಧನ್ನರು. 
.......ನಳಿನಿ ಸೋಮಯಾಜಿ 

ಜನ್ಮದಿನದ ಶುಭಾಶಯಗಳು,ಬಾವಾಜಿ.
ಶ್ರೀಕೃಷ್ಣ ಮುಖ್ಯ ಪ್ರಾಣ ದೇವರ, ಆಶೀರ್ವಾದ,ಸದಾ ಇರಲಿ..........  ವಿಜಯಲಕ್ಷ್ಮಿ.......

and Many more.....





















Many many happy returns of the day Mr Somayaji
May God bless you abundantly
Nice to know about your great achievements and contribution ....Josephine Gomez